Wednesday, June 25, 2008

ಅಮೇರಿಕದಲ್ಲಿಂದು ಅಡಿಕೆ ಹಾಳೆ ತಟ್ಟೆ

ಅಮೇರಿಕದ ಒಂದು MBA ವಿದ್ಯಾರ್ಥಿ ತನ್ನ project work ಗೆಂದು ಕೊಳೆತು ಗೊಬ್ಬರವಾಗಬಲ್ಲ ಪರಿಸರಕ್ಕೆ ಕನಿಷ್ಟ ಹಾನಿ ಉಂಟುಮಾಡುವ ಪರಿಸರ ಸ್ನೇಹಿ ತಟ್ಟೆಯ ಹುಡುಕಾಟದಲ್ಲಿ ಕೊನೆಗೆ ತಲಪಿದ್ದು ದಕ್ಷಿಣ ಬಾರತಕ್ಕೆ. ವಿದ್ಯಾರ್ಥಿಗಳು ಕಾಟಾಚಾರಕ್ಕೆ ಎನ್ನುವ ಬದಲು ಕಷ್ಟ ಪಟ್ಟು project work ಮಾಡಿದರೆ ಮುಂದಿನ ಜೀವನಕ್ಕೆ ಪೂರಕ ಎನ್ನುವುದಕ್ಕೆ ಇನ್ನೊಂದು ಉದಾಹರಣೆ. ಅಡಿಕೆ ಹಾಳೆ ತಟ್ಟೆ ಬಗೆಗೆ ಮಂಡಿಸಿರುವ ಅವನ ಪ್ರಬಂದಕ್ಕೆ ಲಕ್ಷಾಂತರ ಡಾಲರ್ ಹರಿದು ಬಂತು. ಎಂಬತ್ತು ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಹಾಗೂ ಸಹಾಯದನ ಲಬಿಸಿದ ಈ ವಿದ್ಯಾರ್ಥಿ ಹಾಳೆ ತಟ್ಟೆಯನ್ನು ಬಾರತದಿಂದ ತರಿಸಿ ಮಾರಾಟ ಮಾಡಲೂ ಪ್ರಾರಂಬಿಸಿದ.



ಇಂದು ಅಮೇರಿಕದಲ್ಲಿ ಒಂಬತ್ತಿಂಚು ಚೌಕದ ಹಾಳೆ ತಟ್ಟೆಯ ಚಿಲ್ಲರೆ ಮಾರಾಟ ಬೆಲೆ ಕೇವಲ ನಲುವತ್ತು ರೂಪಾಯಿ. ನಮ್ಮಲ್ಲಿ ಒಂದೂವರೆ ರೂಪಾಯಿಗೆ ಚಿಕ್ಕ ಪುಟ್ಟ ಹಾಳೆ ತಟ್ಟೆ ತಯಾರಕರು ಮಾರಾಟ ಮಾಡುವ ಈ ತಟ್ಟೆ ಅಮೇರಿಕ ತಲಪುವಾಗ ಡಾಲರ್ ಲೆಕ್ಕದ ಬೆಲೆಗೆ ಮಾರಾಟವಾಗುತ್ತದೆಯಂತೆ. ಪ್ರಕಟಣೆಯಲ್ಲಿ ಮಾಲು ಬಾರತದ್ದು ಎನ್ನುವ ವಿಚಾರ ಸಾದ್ಯವಾದಷ್ಟು ಅಡಗಿಸಿದ್ದಾರೆ. ಬದಲಾಗಿ South East Asia ಎನ್ನುತ್ತಾರೆ. ಇದೊಂದು ಉತ್ತಮ ವ್ಯವಹಾರ ಸಾದ್ಯತೆಯೆಂದು ಅನಿಸುತ್ತದೆ.


ಅಮೇರಿಕದ ಪೂರ್ವ ಕರಾವಳಿಯಲ್ಲಿ ಸಾವಯುವ ಕೃಷಿ ಸಾಮುಗ್ರಿ ಹಂಚುವುದರಲ್ಲಿ Paul Keene ಎಂಬವರು ಸ್ಥಾಪಿಸಿದ walnut acres ಬಹಳ ಪ್ರಸಿದ್ದವಾಗಿತ್ತು. ಬಾರತದಲ್ಲಿ ಕೆಲವು ಕಾಲ ಕಳೆದ ಇವರನ್ನು ಆಮೇರಿಕದಲ್ಲಿ ಸೈಕಲಿಸುವಾಗ ಗೆಳೆಯರೊಂದಿಗೆ ಇವರಲ್ಲಿಗೆ ಹೋಗುವ ಅವಕಾಶ ಸಿಕ್ಕಿ ಮಾತನಾಡಿಸಿದ್ದೆ. 1998 ರಲ್ಲಿ ನಾನು ಅಮೇರಿಕಕ್ಕೆ ಹೋಗುವಾಗ ಇವರಿಗೆ ತೋರಿಸಲು ಒಂದಷ್ಟು ಹಾಳೆ ತಟ್ಟೆಗಳ ತಗೊಂಡು ಹೋಗಿದ್ದೆ. ಆದರೆ Paul ಅವರು ವ್ಯವಹಾರದಿಂದ ಆಗ ನಿವೃತ್ತರಾದ ಕಾರಣ ತೋರಿಸಲು ಸಾದ್ಯವಾಗಿರಲಿಲ್ಲ. ಜಾಗತೀಕರಣದ ಪ್ರಬಾವವೋ ಎಂಬಂತೆ Walnut Acres ಇಂದು ಇತಿಹಾಸಕ್ಕೆ ಸೇರಿದೆ. ಇತರ ಸಾವಯುವ ಗೆಳೆಯರಿಗೆ ತೋರಿಸಲು ನನ್ನ ಆರೋಗ್ಯ ಸಮಸ್ಯೆಗಳು ಅಡ್ಡವಾದವು.ಇಪ್ಪತೈದು ವರ್ಷಗಳಿಂದ ನಮ್ಮಲ್ಲಿ ತಯಾರಾಗುತ್ತಿರುವ ಅಡಿಕೆ ಹಾಳೆ ತಟ್ಟೆ ಅಮೇರಿಕದಲ್ಲಿನ್ನೂ ಅಪರಿಚಿತ ಎನ್ನುವಾಗ ಆಶ್ಚರ್ಯವಾಗುತ್ತದೆ.
ಹೆಚ್ಚಿನ ಮಾಹಿತಿ:




Sunday, June 22, 2008

ಸವೆಯದ ಹಾದಿ ಪಯಣಕ್ಕೆ ಹತ್ತೆಂಟು ಸವಾಲುಗಳು

ನಾನು ಸೈಕಲ್ ಸಮೇತ ಪರದೇಶ ಯಾತ್ರೆ ಮಾಡುವುದೆಂದು ತೀರ್ಮಾನ ಮಾಡುವಾಗ ಎಲ್ಲವೂ ಅಸ್ಪಷ್ಟ. ಸುಮಾರು ಒಂದು ವರ್ಷ ಸಮಯದಲ್ಲಿ ವಾಪಾಸು ಮತ್ತು ಆಫ್ರಿಕ ಯುರೋಪಿನ ಕೆಲವು ಬಾಗಗಳ ಸಂದರ್ಶಿಲಿಕ್ಕುಂಟು ಎನ್ನುವುದರ ಹೊರತು ವಿವರಗಳು ಖಾತ್ರಿಯಾಗಿರಲಿಲ್ಲ. ನನಗೆ ದೈರ್ಯವಾಗಿ ಹಿಂಬಾಲಿಸಲು ಯಾವುದೇ ಪೂರ್ವ ನಿದರ್ಶನಗಳಿರಲಿಲ್ಲ. ಸಲಹೆ ಸೂಚನೆ ಟೀಕೆಗಳು ಮಾತ್ರ ದಾರಾಳವಾಗಿಯೇ ಲಬಿಸುತ್ತಿದ್ದವು.



ಪರದೇಶ ಸಂದರ್ಶಿಸಲು ನಮ್ಮ ಗುರುತು ಪತ್ರ ಪಾಸ್ ಪೋರ್ಟಿನಲ್ಲಿ ಅವರ ಪರವಾನಿಗೆ ವೀಸಾ ಮುದ್ರೆ ಅಗತ್ಯ. ಕೆಂದ್ರ ಸರಕಾರದ ಯುವಜನ ಇಲಾಖೆಯು ಈ ವಿಚಾರದಲ್ಲಿ ಸಹಾಯ ಮಾಡುತ್ತದೆ ಎನ್ನುವ ವಿಚಾರ ತಿಳಿದು ಅವರ ಸಂಪರ್ಕಿಸಿದೆ. ಹಲವಾರು ವಿರೋದಾಬಾಸಗಳುಳ್ಳ ಅವರ ಮಾಹಿತಿ ಪತ್ರ ಅಂಚೆಯಲ್ಲಿ ಬಂತು. ನಂತರ ದೆಹಲಿಯ ಹಾದಿಯಲ್ಲಿ ಪರಿಚಯವಾದ ಬಂಕರ್ ರಾಯ್ ನನ್ನ ಪರವಾಗಿ ಆ ಇಲಾಖೆಯ ಮುಖ್ಯಸ್ತರಿಗೆ ಫೊನಾಯಿಸಿ ನನಗೆ ಸಹಾಯ ಮಾಡುವಂತೆ ಕೇಳಿಕೊಂಡರು. ರಾಜೀವ ಗಾಂದಿಯವರ ಸಹಪಾಠಿಯಾಗಿದ್ದ ಬಂಕರ್ ರಾಯ್ ಆಗ ಯೋಜನಾ ಅಯೋಗಕ್ಕೆ ಗ್ರಾಮೀಣ ವಿಚಾರಗಳ ಸಲಹೆಗಾರರಾಗಿದ್ದರು. ಬಾರತದ ಮಟ್ಟಿಗೆ ಹೆಚ್ಚಿನ ಇಲಾಖೆಯ ಪ್ರಮುಖ ಅದಿಕಾರಿಗಳ ಮನೋಬಾವ ಹೇಗೆ ಇರಲಿ, ನಿರ್ಣಾಯಕ ವ್ಯಕ್ತಿಗಳು ಅಲ್ಲಿನ ಕಾರಕೂನರು.



ದೆಹಲಿಯಲ್ಲಿ ದಕ್ಷಿಣ ಬಾರತದ ನಾಲ್ಕು ರಾಜ್ಯದಿಂದ ಬಂದವರನ್ನೂ ಮದ್ರಾಸಿಗಳೆಂದು ಪರಿಗಣನೆ. ಮೊದಲೇ ನನಗೆ ಯುವಜನ ಸೇವಾ ಇಲಾಖೆಯಲ್ಲಿ ನನಗೆ ಸಂಬಂದಿಸಿದ ಕುರ್ಚಿಯಲ್ಲಿದ್ದ ಮದ್ರಾಸಿಗಳ ದ್ವೇಶಿಸುವ ವ್ಯಕ್ತಿಗಳಾದ ಪ್ರಬು ದಯಾಳ್ ಮತ್ತು ಸಾಹ್ನಿ ಎಂಬ ಕರಟಕ ದಮನಕರ ಬಗೆಗೆ ಹೇಳೀದ್ದರು. ಅಲ್ಲಿಗೆ ತಲಪಿ ಐದು ನಿಮಿಷಗಳಲ್ಲಿ ಅವರ ನಡುವಳಿಕೆ ನೋಡುವಾಗ ನನಗೆ ಅವರಿಂದ ಸಹಾಯ ಸಿಗದು ಎಂದು ಸಂಪೂರ್ಣ ಸ್ಪಷ್ಟವಾಗಿತ್ತು. ಸಂದರ್ಶನದ ಅಂಗವಾಗಿ ಅವರು ಅವರ ಮಾರ್ಗದರ್ಶನ ಚೀಟಿಗೆ ಅನುಸಾರವಾಗಿ ಪ್ರಶ್ನಿಸಿದರು Mr Bhat, ನಿನಗೆ ಎಷ್ಟು ಬಾಷೆಗಳು ಬರುತ್ತದೆ ? ಅವರ ಮಾನದಂಡಗಳ ಪ್ರಕಾರ ಇಂಗ್ಲೀಷ್ ಹಿಂದಿಯಲ್ಲದೆ ಕನಿಷ್ಟ ಒಂದು ಪರದೇಶಿಯ ಬಾಷೆ ತಿಳಿದಿರುವುದು ಅಗತ್ಯವಾಗಿತ್ತು. ಸ್ವರ ಏರಿಸಿ ಸಾರ್ ಎಂದೆ. ಅಫಿಸಿನಲ್ಲಿದ್ದವರೆಲ್ಲ ನಮ್ಮನ್ನೇ ನೋಡುತ್ತಿದ್ದಾರೆ ಎಂದಾದ ಮೇಲೆ ಈ ಜಗತ್ತಿನಲ್ಲಿ 13000 ಬಾಷೆಗಳಿವೆ. ಆದರೆ ಪರವಾಗಿಲ್ಲ ನನಗೆ ಅದರಲ್ಲಿ ಅತೀ ಹಳೆಯ ಬಾಷೆ ಬರುತ್ತದೆ ಎಂದೆ. ನನ್ನ ಅನಿರೀಕ್ಷಿತ ವರ್ತನೆಯಿಂದ ಗಲಿಬಿಲಿಯಾದ ಪ್ರಭು ದಯಾಳ್ ಅದು ಯಾವುದು ಎಂದ. ಕೈ ಸನ್ನೆಯ ಜತೆಯಲ್ಲಿ the language that deaf and dumb speaks ಎಂದು ಸೀದಾ ಹೊರನಡೆದೆ.



ನಾನು ಪೂರ್ವಬಾವಿಯಾಗಿ ನಮ್ಮ ದೇಶದಲ್ಲಿರುವ ಐವತ್ತಕ್ಕೂ ಹೆಚ್ಚಿನ ರಾಯಬಾರಿ ಕಛೇರಿಗಳಿಗೆ ಚುಟುಕಾಗಿ ನನ್ನ ಪ್ರವಾಸದ ವಿವರಗಳೊಂದಿಗೆ ಮಾಹಿತಿ ಹಾಗೂ ಸಹಾಯ ಕೋರಿ ಪತ್ರ ರವಾನಿಸಿದ್ದೆ. ಅದಕ್ಕೆ ಪಾಕಿಸ್ತಾನದ ರಾಯಬಾರಿ ಕಛೇರಿಯಿಂದ ಉತ್ತರವೇನೊ ಬಂದಿತ್ತು. ಬಾರತ ಮತ್ತು ಪಾಕಿಸ್ತಾನದ ಮದ್ಯೆ ಇರುವ ಒಪ್ಪಂದದ ಪ್ರಕಾರ ಉಭಯ ದೇಶದ ಪ್ರಜೆಗಳು ಪರಸ್ಪರ ಇನ್ನೊಂದು ದೇಶದಲ್ಲಿ ಸ್ವಂತ ವಾಹನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ. ನಾನು ಸೈಕಲು ಆರಿಸಿಕೊಳ್ಳಲು ಒಂದು ಮುಖ್ಯ ಕಾರಣವೇ ಸೈಕಲಿಗೆ ಪ್ರತ್ಯೇಕ ದಾಖಲೆ ಬೇಡ ಅನ್ನುವಾಗ ಇವರು ಸೈಕಲಿನಲ್ಲಾದರೆ ನಿರ್ಬಂದ ಎನ್ನುತ್ತಿದ್ದಾರೆ. ಹೀಗಾಗಿ ನಾನು ಬಾರತದಿಂದ ಹೊರಡುವುದು ವಿಮಾನದಲ್ಲಿಯೇ ಎಂದು ತೀರ್ಮಾನಿಸಬೇಕಾಯಿತು.



ಈ ಮದ್ಯೆ ಯಾರೋ ಗೆಳೆಯರು ಒಂದು ಸುಳಿವು (?) ಕೊಟ್ಟರು. ಎಲ್ಲ ಸುಳಿವುಗಳನ್ನೂ ಮುಖಬೆಲೆಯಲ್ಲಿ ಪಡಕೊಂಡು ಬೆನ್ನಟ್ಟುವ ಕಾಲ. ನಿರ್ದಿಷ್ಟ ಕಾರಣಕ್ಕೆಂದು ಪರದೇಶದಿಂದ ಹಣ ತರಿಸಿದರೆ ಅದನ್ನು ಪುನ: ದೇಶದಿಂದ ಹೊರ ಕೊಂಡೊಯ್ಯಲು ರಿಜರ್ವ ಬಾಂಕ್ ಅನುಮತಿ ಕೊಡುತ್ತದೆ. ವಿಶಯ ನಿಜವಿರಬಹುದೆಂದು ನಂಬಿ ನಾನು ಬೆಂಗಳೂರಿಗೆ ಓಡಿದೆ. ಬೆಂಗಳೂರಿನ ರಿಜರ್ವ್ ಬಾಂಕಿನಲ್ಲಿ ಪಿಳ್ಳೈ ಎಂಬವರು ಸಂಬಂದ ಪಟ್ಟ ವಿಬಾಗದಲ್ಲಿದ್ದರು. ಎರಡನೆಯ ಸಲ ನಮ್ಮ ಬೇಟಿಯಾದಾಗ ನಾನು ಶಬರಿಮಲೈಗೆ ಹೊರಟಿದ್ದೇನೆ, ವಾಪಾಸು ಬಂದಾಕ್ಷಣ ನಿನ್ನ ಕೆಲಸ ಮಾಡಿಕೊಡುತ್ತೇನೆ ಎಂದರು. ಸರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದೆ. ಈ ಮದ್ಯೆ ದುಬೈಯಲ್ಲಿ ಕೆಲಸಕ್ಕಿದ್ದ ಊರಿಗೆ ಆಗಾಗ ಹಣ ಕಳಿಸುವ ನಮ್ಮವರಿಗೆ ಗಾಳ ಹಾಕಿದ್ದೂ ಆಯಿತು. ನಾನು ನನ್ನ ಸಹೋದರನಿಂದ ಹಣ ತರಿಸಿ ಕೊಡುತ್ತೇನೆ ಎಂಬ ಆಶ್ವಾಸನೆ ಗೆಳೆಯರಿಂದ ಸಿಕ್ಕಿದ್ದೂ ಆಯಿತು. ನಂತರದ ಬೇಟಿಯಲ್ಲಿ ಮಾತ್ರ ಪಿಳ್ಳೈಯವರು ಈ ರೀತಿ ಪರವಾನಿಗೆಗೆ ಕಾನೂನು ಅವಕಾಶವಿಲ್ಲ ಎಂದು ಕೈ ಚೆಲ್ಲಿದರು. ನಾನು ನಮ್ಮನೆಯಿಂದ 325 ಕಿಲೋಮೀಟರ್ ದೂರದ ಬೆಂಗಳೂರಿಗೆ ಈ ಪಿಳ್ಳೈಯವರ ಕಾಣಲು ಮೂರು ಬಾರಿ ಓಡಾಡಿದ್ದು ಪೂರ ದಂಡ ಎನ್ನುವಂತಾಯಿತು.

Sunday, June 15, 2008

ಸೌರ ವಿದ್ಯುತ್ ಅವಕಾಶಗಳು



ಹಿಮ್ಮೊಗ ಹರಿದೀತೆ ವಿದ್ಯುತ್ ? ಎನ್ನುವ ಆಲೋಚನೆ ತುಂಬಾ ಕುತೊಹಲದಾಯಕ. ಶ್ರಿ ನಾಗೇಶ ಹೆಗಡೆಯವರ ಅಡಿಕೆ ಫತ್ರಿಕೆ ಮೆ 2008 ಅಂಕಣ ಒದುತ್ತಾ ಕುಳಿತಿದ್ದೆ. ಮೇಲ್ನೋಟಕ್ಕೆ ಅಸಾದ್ಯ ಎನ್ನುವ ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.


ಹಿಂದೊಮ್ಮೆ ಸೈಕಲಿನೊಂದಿಗೆ ಪ್ರಪಂಚಕ್ಕೊಂದು ಸುತ್ತು ಬಂದಿರುವ ನನಗೆ ಈ ವಿಚಾರಗಳಲ್ಲಿ ಬಹಳ ಆಸಕ್ತಿ. ಸೌದೆಯಿಂದ ಅನಿಲ (wood gasifier ) ಪಡೆದು ಅದರಿಂದ ಪಂಪ್ ಚಾಲೂ ಮಾಡಿದ್ದೆ. ಕಳೆದ ಆರು ವರುಷಗಳಿಂದ ಅಸಂಪ್ರದಾಯಕ ಶಕ್ತಿ ಮೂಲಗಳಲ್ಲಿ ಒಂದಾದ ಸೌರ ವಿದ್ಯುತ್ ಬಗೆಗೆ ನನ್ನ ಪ್ರಯತ್ನಗಳು ಸಾಗುತ್ತಾ ಬಂದಿದೆ. ಇದೊಂದು ಪೂರ್ವ ಉದಾಹರಣೆಗಳು ದೊರಕದ ಸವೆಯದ ಹಾದಿಯಲ್ಲಿ ಒಬ್ಬಂಟಿ ಪಯಣ. ಅದುದರಿಂದ ನನ್ನ ಅನುಭವ ಅನಿಸಿಕೆ ಎರಡನ್ನೂ ಹಂಚಿಕೊಳ್ಳುತ್ತೇನೆ.



ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.



ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.



ಸೌರ ಫಲಕಗಳು ಸಿಕ್ಕ ಕೂಡಲೇ ಪಂಪಿನ ಜತೆ ರಾತ್ರಿ ಉರಿಸಲು ಕೆಲವು ಸೌರ ದೀಪಗಳನ್ನೂ ವಿಧ್ಯುತ್ ಕಡಿತದ ಸಮಯದಲ್ಲಿ ಮನೆಯಾಕೆಗೆ ಅಕ್ಕಿ ಅರೆಯಲು, ಮಕ್ಕಳಿಗೆ ಸಚಿನ್ ಚೆಂಡು ಬಾರಿಸುವುದರ ನೋಡಲು ಮತ್ತು ನನ್ನ ಗಣಕಯಂತ್ರ ಉಪಯೋಗಿಸುವಂತೆ ವ್ಯವಸ್ಥೆ ಮಾಡಿಕೊಂಡೆ. ಹಗಲು ಶಕ್ತಿಯ ಒಳಹರಿವಿಂದಾಗಿ inverter ಸಹಾ ಹೆಚ್ಚು ಕಾಲ ಉಪಯೋಗಿಸಲು ಸಾದ್ಯವಾಯಿತು. ಇಷ್ಟಾದ ನಂತರ ವ್ಯರ್ಥವಾಗುತ್ತಿರುವ ಉಳಿಕೆ ವಿದ್ಯುತ್ ಬಗೆಗೆ ನನ್ನ ಗಮನ ಹರಿಯಿತು. ನನ್ನ ಫಲಕದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ತಿನ ಸಂಪೂರ್ಣ ಬಳಕೆ ಕನ್ನಡಿಯೊಳಗಿನ ಗಂಟು ಎಂಬ ವಿಚಾರ ಕ್ರಮೇಣ ಅರಿವಾಯಿತು.





ಯುರೋಪ್ ಅಮೇರಿಕದಲ್ಲಿರುವಂತೆ ಇಲ್ಲೂ ಬಿಸಿಲು ಇರುವಾಗ ಹೆಚ್ಚಿನ ವಿದ್ಯುತ್ ಜಾಲಕ್ಕೆ ಹಾಯಿಸಿ ರಾತ್ರಿ ಪಡಕೊಳ್ಳುವಂತಿದ್ದರೆ ಚೆನ್ನ. ಹಾಗೆ ಸಾದ್ಯವಾದರೆ ಮನೆಯಲ್ಲಿ ಉಳಿದ ಹೆಚ್ಚುವರಿ ಹಾಲು ನಾವು ಹಾಲಿನ ಸೊಸೈಟಿಗೆ ಹಾಕುವಂತೆ ಸರಳ ವ್ಯವಹಾರ. ನಮಗೆ ಬಾಟರಿಗಳಲ್ಲಿ ಶೇಖರಿಸುವ ಹಾಗೂ ಪರಿವರ್ತಿಸುವ ಉಪಕರಣಗಳು ಮುಂತಾದ ಅನಗತ್ಯ ದುಬಾರಿ ಖರ್ಚುಗಳು ತಪ್ಪುತ್ತದೆ ಹಾಗೂ ಲಬ್ಯವಿದ್ದರೂ ಅವುಗಳ ಗುಣಮಟ್ಟ ತೃಪ್ತಿದಾಯಕ ಎನ್ನುವಂತಿಲ್ಲ. ಆದರೆ ಜಾಲಕ್ಕೆ ವಿದ್ಯುತ್ ಹಾಯಿಸಲು ಎರಡು ಅಡಚಣೆಗಳು ನಮ್ಮ ಮುಂದಿವೆ.



ಅಪಾಯಕಾರಿ ಸನ್ನಿವೇಶಗಳ ತಪ್ಪಿಸಲು ಎನ್ನುವ ಕಾರಣಕ್ಕೆ ಜಾಲಕ್ಕೆ ವಿದ್ಯುತ್ ಹಾಯಿಸಬೇಕಾದರೆ ಯಾವಾಗಲು ವಿದ್ಯುತ್ ಇರಲೇಬೇಕು ಎಂಬುದು ಸ್ಪಷ್ಟ. ರಿಪೇರಿಗೆಂದು ನಿಲುಗಡೆ ಮಾಡಿದಾಗ ನಾವು ವಿದ್ಯುತ್ ಹಾಯಿಸಿದರೆ ಕೆಲಸಗಾರರ ಜೀವಕ್ಕೆ ಅಪಾಯ. ಆದರೆ ನಮ್ಮಲ್ಲಿ ಸೆಕೆಗಾಲದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಸೌರಫಲಕದಲ್ಲಿ ಉತ್ಪನ್ನ ಎರಡೂ ಅದಿಕವಾಗಿರುವಾಗ ಹಳ್ಳಿ ಕಡೆ ವಿದ್ಯುತ್ ಕಡಿತ ಇರುತ್ತದೆ ಎನ್ನುವ ವಿಚಾರ ಜಾಲಕ್ಕೆ ನಮ್ಮಿಂದ ವಿದ್ಯುತ್ ಹಾಯಿಸುವುದು ಅಸಾದ್ಯವಾಗಿಸುತ್ತದೆ. . ನಾವು ಜಾಲಕ್ಕೆ ಹುಯ್ಯುವ ವಿದ್ಯುತ್ತಿನ ಪ್ರಮಾಣ ಜಾಲದ ಮಟ್ಟಿಗೆ ಅತ್ಯಲ್ಪ. ಅದುದರಿಂದ ಅದಕ್ಕಾಗಿ ಜಾಲದಲ್ಲಿ ವಿದ್ಯುತ್ ಹಾಯಿಸಿ ಎಂದು ಕೇಳಲು ಸಾದ್ಯವಿಲ್ಲ.



ಎರಡನೆಯ ಸಿಮಿತಗೊಳಿಸುವ ವಿಚಾರ ಎಂದರೆ ನಾವು ಕಳುಹಿಸುವ ವಿದ್ಯುತ್ ಶಕ್ತಿಯ ತರಂಗಗಳು ಜಾಲದ ತರಂಗಗಳಿಗೆ ಹೊಂದಾಣಿಕೆಯಾಗ ಬೇಕು. ಅಲ್ಲಿ phase difference ಇರಲೇಬಾರದು. ಇದರ ತಾಂತ್ರಿಕತೆಯ ಬಗೆಗೆ ಇನ್ನೂ ನನಗೆ ಖಚಿತ ಮಾಹಿತಿ ಲಬ್ಯವಿಲ್ಲ. ಪಶ್ಚಿಮದ ದೇಶಗಳಲ್ಲಿ ಇವು ಮಿತ ದರದಲ್ಲಿ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.



ಜರ್ಮನಿಯಲ್ಲಿ 1999ರಲ್ಲಿ ತಂದ ಕಾನೂನು ತಿದ್ದುಪಡಿ ಜಾಲಕ್ಕೆ ವಿದ್ಯುತ್ ಹಾಯಿಸುವುದಕ್ಕೆ ಸುಗಮವಾಗಿಸಿ ಇಂದು ಅಲ್ಲಿ ಎಲ್ಲೆಡೆ ವಿದ್ಯುತ್ ಮಟ್ಟಿಗೆ ಸ್ವಾವಲಂಬಿಗಳನ್ನು ಕಾಣಬಹುದು. ಇಂದು ಈ ಕೈಗಾರಿಕೆ ದೇಶದಲ್ಲಿ 2 ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸಿರುವುದು ಮಾತ್ರವಲ್ಲ ಒಟ್ಟು ದೇಶದ ವಿದ್ಯುತ್ ಉತ್ಪಾದನೆಯ ಶೇಕಡಾ ಹನ್ನೆರಡರಷ್ಟು ಹೀಗೆ ಜನಸಾಮಾನ್ಯರ ಸೌರ ಫಲಕಗಳು ಹಾಗೂ ಗಾಳಿ ಯಂತ್ರಗಳಿಂದಲೇ ತಯಾರಾಗುತ್ತಿದೆ. ಜಗತ್ತಿನ ಸೌರ ಹಾಗೂ ಪವನ ಶಕ್ತಿ ಉಪಕರಣಗಳ ತಯಾರಿಕೆಯಲ್ಲಿ ಶೇಕಡ 30 ರಷ್ಟು ಪಾಲು ಇಂದು ಜರ್ಮನಿ ಹೊಂದಿರುತ್ತದೆ. ಅಲ್ಲಿ ಇತರ ಮೂಲಗಳ ವಿದ್ಯುತ್ ಯುನಿಟ್ ಒಂದಕ್ಕೆ ರೂಪಾಯಿ 3 ಕ್ಕೆ ಜಾಲ ಪಡಕೊಂಡರೆ ಸೌರ ಹಾಗೂ ಪವನ ಶಕ್ತಿ ಮೂಲದ ವಿದ್ಯುತ್ತಿಗೆ ಈಗ ರೂಪಾಯಿ 6 ರಷ್ಟು ಬೆಂಬಲ ಬೆಲೆ ಇರುತ್ತದೆ. ಈ ಪ್ರೋತ್ಸಾಹಕ ಬೆಂಬಲ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು ಕೊನೆಗೊಮ್ಮೆ ಇತರ ವಿದ್ಯುತ್ ಮೂಲಗಳ ಜತೆ ಸ್ಪರ್ದಿಸಲು ಒತ್ತಡ ಇರುತ್ತದೆ.
ಡೆನ್ಮಾರ್ಕ್ ಶೇಕಡ 20 ರಷ್ಟು ವಿಧ್ಯುತ್ ಪವನಯಂತ್ರಗಳಿಂದ ಪಡಕೊಳ್ಳುತ್ತಿದ್ದು ಉಳಿದ ಕೊರತೆ ಬೀಳುವ ಬೇಡಿಕೆಯ ನಿರ್ವಹಣೆಗೆ ಅಕ್ಕ ಪಕ್ಕದ ದೇಶಗಳಿಂದ ಖರೀದಿಸುತ್ತದೆ. 1986 ಜೂನ್ ತಿಂಗಳಲ್ಲಿ ಒಂದು ರಾತ್ರಿಯ ಮಟ್ಟಿಗೆ ಸಮುದ್ರ ತೀರದಲ್ಲಿರುವ ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುವ ಒಬ್ಬರು ರೈತರ ಅತಿಥಿಯಾಗಿದ್ದೆ. ಇಲ್ಲಿ ಪವನ ಶಕ್ತಿ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಸಹಕಾರ ಸಂಸ್ಥೆಗಳು ಸಕ್ರಿಯವಾಗಿದ್ದು ಇಲ್ಲಿನ ಶೇಕಡ 85 ಜನಸಂಖ್ಯೆ ಅಂದರೆ ಒಂದೂವರೆ ಲಕ್ಷ ಕುಟುಂಬಗಳು ಸ್ವಂತ ಅಥವಾ ಪರೋಕ್ಷವಾಗಿ ಸಹಕಾರಿ ಸಂಸ್ಥೆಗಳ ಮೂಲಕ ಪವನಯಂತ್ರಗಳ ಹೊಂದಿದವರಾಗಿರುತ್ತಾರೆ. ಇಂದು ನಮ್ಮಲ್ಲೂ ಪ್ರಯತ್ನ ಪಟ್ಟರೆ ಈ ಮಾದರಿಗಳು ಸಾದ್ಯವೆಂದು ಹೇಳಬಹುದು.



ಅಮೇರಿಕದ ಕಾಲಿಪೋರ್ನಿಯದಲ್ಲಿ ಒಂದು ಸೌರಫಲಕಗಳ ಅಳವಡಿಸುವ ಸಂಸ್ಥೆ ನೀವು ದೂರವಾಣಿಯಲ್ಲಿ ಸೂಚನೆ ಕೊಟ್ಟ ಕ್ಷಣದಲ್ಲಿ ಕಾರ್ಯಮುಖವಾಗುತ್ತದೆ. ನಿಮ್ಮ ಮನೆಯ ಛಾವಣಿಯ ಗೂಗಲ್ ಉಪಗ್ರಹ ಚಿತ್ರವನ್ನು ನೋಡಿ ಅಲ್ಲಿ ಯಾವ ರೀತಿ ಮತ್ತು ಎಷ್ಟು ಫಲಕಗಳ ಅಳವಡಿಸಬಹುದೆಂಬ ಸ್ಪಷ್ಟ ಯೋಜನೆ ಅವರ ಕಛೇರಿಯಲ್ಲೇ ತಯಾರಾಗುತ್ತದೆ. ಅವರು ಸಂಪೂರ್ಣ ಮಾಹಿತಿಯೊಂದಿಗೆ ಬಂದು ನಿಮ್ಮೊಂದಿಗೆ ಸಂವಾದಕ್ಕೆ ಕೂರುತ್ತಾರೆ. ನಿಮ್ಮ ಸಂಶಯಗಳನ್ನೆಲ್ಲ ಪರಿಹರಿಸುತ್ತಾರೆ. ದೊಡ್ಡ ವ್ಯವಸ್ಥೆಯಾದರೆ ದೈನಿಂದಿನ ನಿರ್ವಹಣೆಯಲ್ಲೂ ಸಹಾಯ ಮಾಡುತ್ತಾರೆ. ಹೀಗೆ ಅಲ್ಲಿ ಇದೊಂದು ಬೆಳೆಯುತ್ತಿರುವ ಉದ್ಯಮ.



ನಮ್ಮ ಸರಕಾರ ನಮ್ಮಲ್ಲಿ ತಯಾರಾಗುವ ಆದರೆ ಹಿಡಿದಿರಿಸಿಕೊಳ್ಳಲು ಸಾದ್ಯವಾಗದೆ ನಷ್ಟವಾಗುವ ವಿದ್ಯುತ್ ಪಡಕೊಳ್ಳುವ ಕಾಲ ಇನ್ನೂ ಬಂದಿಲ್ಲ. ಹಾಗಾಗಿ ನಮ್ಮ ಮುಂದಿರುವ ಇತರ ಅವಕಾಶಗಳ ಪರಿಶೀಲನೆ ಮಾಡೋಣ.



ಪಂಪು 48 V ಅಪೇಕ್ಷಿಸಿದರೆ ನಮ್ಮ ಮಾಮೂಲಿ ಉಪಕರಣಗಳೆಲ್ಲವೂ 12 V ನವು. ನಮ್ಮಲ್ಲಿ 48V ಹಾಗೆಯೇ ಬಳಸಿದರೆ ಉಪಕರಣ ದುಬಾರಿ ಮತ್ತು ಎಲ್ಲ ಫಲಕವನ್ನು 12V ಕ್ಕೆ ಪರಿವರ್ತಿಸಿದರೆ ಬೆರಳ ಗಾತ್ರದ ದುಬಾರಿ ಸರಿಗೆಯಲ್ಲಿ ಹಾಯಿಸುವುದು ಅನಿವಾರ್ಯ ಎನ್ನುವ ದ್ವಂದ್ವಕ್ಕೆ ಒಳಗಾದೆ. ಹೀಗೆ ಒಮ್ಮೆ ಹೆಚ್ಚಿನ ಬಳಕೆಗೆ ಸಹಾಯವಾಗಲು ಒಂದು 48V invertor ಸಹಾ ಪಡಕೊಂಡೆ. ಅದು ಆನೆ ಗಾತ್ರದ ಕಾರಿನಲ್ಲಿ ಕೊತ್ತಂಬರಿ ಸೊಪ್ಪು ತರಲು ಹೋದದ್ದು ಎನ್ನುವಂತಾಯಿತು. ಕಡಿಮೆ ವಿದ್ಯುತ್ ಬಳಸುವ ಸಮಯದಲ್ಲಿ ಶಕ್ತಿಯ ಬಹು ಅಂಶ ಅದುವೇ ಕಬಳಿಸುತ್ತದೆ ಹಾಗೂ ನನ್ನ ಉಪಯೋಗಕ್ಕೆ ಸಿಗುವುದು ಕಡಿಮೆ ಎನ್ನುವ ವಿಚಾರ ಕ್ರಮೇಣ ಅನುಭವಕ್ಕೆ ಬಂತು. ಹಗಲ ಉಪಯೋಗಕ್ಕಿಂತ ರಾತ್ರಿ ನಾನು ಬಾಟರಿಯಲ್ಲಿ ತುಂಬಿಸಿಟ್ಟ ವಿದ್ಯುತ್ ಉಪಯೋಗದಲ್ಲಿ ಜಾಗ್ರತೆ ವಹಿಸಲೇ ಬೇಕು.



ನಮಗೆ ಬೇಕಾದಷ್ಟು ಶಕ್ತಿಯನ್ನು ಬಳಸಲು ಅನುಕೂಲವಾಗಲೆಂದು 12 ಯಾ 48 volt ಲಬ್ಯವಾಗುವಂತೆ dipole relay ಗಳನ್ನು ಸೌರ ಫಲಕದಲ್ಲಿ ಗೆಳೆಯ ಅಶೋಕ ಅಳವಡಿಸಿದ. ಸುಮಾರು ಒಂದು ವರುಷ ಅವುಗಳು ಶಕ್ತಿ ಪೊರೈಕೆ ವಿಚಾರ ಚೆನ್ನಾಗಿ ಕೆಲಸ ಮಾಡಿದವು ಅನಂತರ ಅವುಗಳ contacts ಸುಟ್ಟು ಹೋದಂತಾಗಿ ಕ್ಷಮತೆ ಕಳಕೊಂಡವು. ಅದುದರಿಂದ ನಾನು ಅವುಗಳನ್ನು ಕಳಚುವುದು ಅನಿವಾರ್ಯವಾಯಿತು.



ಸೌರ ಫಲಕಗಳಿಂದ ಬರುವ ವಿದ್ಯುತ್ ಶಕ್ತಿಯ ನಿಯಂತ್ರಣ ಬಹಳ ಅಗತ್ಯ. ತಯಾರಿ, ದಾಸ್ತಾನು ಮತ್ತು ಬೇಡಿಕೆಗಳ ಹೊಂದಾಣಿಕೆ ನಿರ್ವಹಿಸುವ ಈ charge controllers ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲವಾದರೆ ನಮ್ಮ ಬಾಟರಿ ಅತಿ ಹೆಚ್ಚು ಚಾರ್ಜ್ ಆಗಿ ಹಾಳಾಗಬಹುದು. ನಮ್ಮಲ್ಲಿ ಪುಟ್ಟ ಫಲಕಗಳಿಂದ ಬರುವ 12V ನಿಯಂತ್ರಣಕ್ಕೆ ಬೇಕಾದ ಉಪಕರಣ ಊರಲ್ಲಿಯೇ ದೊರಕುತ್ತದೆ. ಆದರೆ ಹೆಚ್ಚು ವಿಧ್ಯುತ್ (30 A) ಅಥವಾ ಹೆಚ್ಚು ವೊಲ್ಟೇಜ್ (48 V) ಎರಡಕ್ಕೂ ಮಾರಾಟಗಾರರಲ್ಲಿ ಸ್ಪಷ್ಟ ಉತ್ತರವಿಲ್ಲ. ಬೇಕಾದ ಬಿಡಿ ಬಾಗ ಲಬ್ಯವಿಲ್ಲ ಮತ್ತು ಯಾರಿಗೂ ಬಿನ್ನ ಹಾದಿಯಲ್ಲಿ ಸಾಗುವ ಆಸಕ್ತಿಯೂ ಇಲ್ಲ. ನನ್ನ ಬೇಡಿಕೆ ಮೇಲೆ ಬೆಂಗಳೂರಿನಲ್ಲಿ ತಯಾರಾದ ಒಂದು 48 V charge controller ಗುಣಮಟ್ಟ ಸಮದಾನಕರವಲ್ಲ.



ನಮ್ಮ ಉಳಿದ ಎಲ್ಲ ಉಪಕರಣಗಳ ಮಟ್ಟಿಗೆ ನಾನು ಸ್ವಾವಲಂಬಿ ಎನಿಸಿದರೂ ನಮ್ಮ ಬಾಟರಿ ಅವಲಂಬಿತ ಸೌರ ವ್ಯವಸ್ಥೆಯಲ್ಲಿ ರೆಫ್ರಿಜರೇಟರ್ ಬಳಸುವಂತಿಲ್ಲ. ಅದು ಇನ್ನೂ ಸರಕಾರಿ ವಿದ್ಯುತ್ ಉಪಯೋಗಿಸುತ್ತದೆ. ಹಗಲಿನಲ್ಲಿ ಅದೆರೆಡೆಗೆ ನಿಗಾ ವಹಿಸಿದರೆ ಸಾದ್ಯವಾದರೂ ಅದು ಪ್ರಾಯೋಗಿಕವಲ್ಲ. ಅಗಾಗಿ ನಿಂತು ನಡೆಯುವ ಈ ಯಂತ್ರ ಪ್ರಾರಂಬವಾಗುವಾಗ ಒಮ್ಮೆಗೆ ಹೆಚ್ಚು ಶಕ್ತಿಯನ್ನು ಬೇಡುವ ಕಾರಣ ಬಾಟರಿಯನ್ನು ಹಿಂಡಿದಂತಾಗಿ ಬಾಳ್ವಿಕೆ ಕಡಿಮೆಯಾಗುತ್ತದೆ.


ನಮ್ಮಲ್ಲಿ ವಿದ್ಯುತ್ ಉಳಿತಾಯದ CFL ಮತ್ತು LED ದೀಪಗಳು. ಎರಡೂ ದುಬಾರಿ ಮಾಲುಗಳು. ಒಂದು ವರ್ಷ ಖಾತರಿ ಎನ್ನುವ ಈ CFL ದೀಪಗಳ ಸರಾಸರಿ ಬಾಳ್ವಿಕೆ ಒಂದೂವರೆಯಿಂದ ಎರಡು ವರ್ಷಗಳು. ಅದುದರಿಂದ ಇವು ವಿದ್ಯುತ್ ಉಳಿಸಿದರೂ ಉಳಿಕೆ ಹಣದ ಒಂದಂಶ ಹೊಸ ದೀಪಗಳ ಖರೀದಿಗೆ ವಿನಿಯೋಗ. LED ದೀಪಗಳು ಬಹಳ ಹೆಚ್ಚು ಬಾಳ್ವಿಕೆ ಎಂದು ಹೇಳಲ್ಪಟ್ಟಿದೆ. ಇದನ್ನು ಇನ್ನೂ ಏನೂ ಹೇಳಲು ಸಾದ್ಯವಿಲ್ಲ. ಆದರೆ ಶಕ್ತಿಯ ಉಪಯೋಗ ಕನಿಷ್ಟ ಎನ್ನುವುದು ನಿರ್ವಿವಾದ. ಒಟ್ಟಿನಲ್ಲಿ ಉಳಿತಾಯದ ವಿಚಾರ ನಿರ್ಣಾಯಕವಾಗಿ ಹೇಳಲು ಕಷ್ಟ.


ನಾನು ಒಂಟಿಯಾಗಿ ಅನುಬವಿಸಿದ ವೈಫಲ್ಯಗಳ ಬಗೆಗೆ ಹಂಚಿಕೊಳ್ಳಲು ಈ ವಿಚಾರಗಳ ಬರೆದೆ. ಈ ವಿದ್ಯುತ್ ಹಿಮ್ಮೊಗ ಹರಿವು ಸಾದ್ಯತೆಗಳು ನನಗೆ ನಿಕಟ ಬವಿಷ್ಯದಲ್ಲಿ ಗೋಚರಿಸುವುದಿಲ್ಲ. ಕಾರ್ಯಗತವಾದರೆ ಸಮಾಜಕ್ಕೆ ಬಹಳ ಉಪಕಾರಿ. ಆದರೆ ನಮ್ಮ ಸರಕಾರಗಳ ಅಸ್ಪಷ್ಟ ದೋರಣೆಗಳಿಂದಾಗಿ ಯಾರೂ ಸಮಾಜಕ್ಕಾಗಿ ಹಣ ಮತ್ತು ಸಮಯ ವಿನಿಯೋಗಿಸುವುದು ಕಷ್ಟಸಾದ್ಯ.

Thursday, June 12, 2008

Bush Radio ದಿಕ್ಕು ತಪ್ಪಿಸಿದ್ದು

ಇತ್ತೀಚೆಗೆ ನಮ್ಮ ಬುಷ್ ರೆಡಿಯೊದಲ್ಲಿ ಬಾರತದ ಮದ್ಯಮ ವರ್ಗದ ಬಗೆಗೆ ಒಂದು ಉದ್ದಟತನದ ಮಾತು ಕೇಳಿ ಬಂತು. ಅದ್ಯಕ್ಷರಲ್ಲಿ ಆಹಾರದ ಬೆಲೆಯ ಬಗೆಗೆ ಪ್ರಶ್ನಿಸಿದಾಗ ಉಳಿದ ದೇಶಗಳಲ್ಲಿ ಜನ ಹೆಚ್ಚುತ್ತಿದ್ದಾರೆ. ಅವರು ಮದ್ಯಮ ವರ್ಗಕ್ಕೆ ಲಗ್ಗೆಯಿಡುತ್ತಿದ್ದಾರೆ. ಸ್ವಾಬಾವಿಕವಾಗಿ ಹೆಚ್ಚು ಆರೋಗ್ಯಪೂರ್ಣ ಅಹಾರ ಬಯಸುತ್ತಾರೆ ಎಂದು ಸಮಸ್ಯೆಯನ್ನು ಬಾರತೀಯರ ಮೇಲೆ ಹೇರಲು ಯತ್ನಿಸಿದರು. ಈ ರೀತಿ ದಿಕ್ಕು ತಪ್ಪಿಸುವ ಕೆಲಸದಲ್ಲಿ ಅಮೇರಿಕನರು ಬಾರಿ ಚುರುಕು ಚಲಾಕಿ.







ಆದರೆ ಬಾರತಿಯರು ಸುಮಾರು 2440 ಕಾಲರಿ ಆಹಾರ ಬಳಸಿದರೆ ಅಮೇರಿಕನರು ಸರಾಸರಿ 3770 ಕಾಲರಿ ಆಹಾರ ಬಳಸುತ್ತಾರೆ. ಇವರ ಆಹಾರದಲ್ಲಿ ಮಾಂಸಹಾರ ಹೆಚ್ಚಿರುವ ಕಾರಣ ಆಹಾರದ ಹೆಜ್ಜೆಯು ಬಹಳ ದೊಡ್ಡದು. ಒಳ್ಳೆ ತೋಳ ಕುರಿಮರಿ ಕಥೆ ಆಯಿತಲ್ಲ. ಇರಲಿ.



ಈ ವಾರ ಅಮೇರಿಕದ ಒಂದು ಜಾಲತಾಣವನ್ನು ಹುಡುಕಾಡುವಾಗ ಕೆಲವು ಕುತೂಹಲಕರಿ ವಿಚಾರ ಗಮನಕ್ಕೆ ಬಂತು. ಅಮೇರಿಕನರು ತಿನ್ನುವುದು ಮಾತ್ರ ಜಾಸ್ತಿಯಲ್ಲ, ಅದು ಅವರ ದೇಹದಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಇದರ ಪರಿಣಾಮವಾಗಿ ಹಲವು ಅವ್ಯವಸ್ತೆಗಳು. ದೇಶದ ಪ್ರತಿಯೊಂದು ವ್ಯವಸ್ತೆಯೂ ಅತಿ ಬಾರದಿಂದಾಗಿ ಕುಸಿಯುತ್ತಿದೆ. ಕಂಬಿಯಲ್ಲಿ ಓಡಾಡುವ ಗಾಡಿ ನಿತ್ರಾಣಿಯಾದರೆ ದೋಣಿ ಮುಳುಗುತ್ತದೆ. ಎಲ್ಲವನ್ನೂ ಪುನ: ಕಟ್ಟುವ ಅನಿವಾರ್ಯತೆ.



America is literally collapsing under the strain of overweight citizens. Disneyland’s Small World ride, designed in the 1960s (when the average male park visitor weighed 175 pounds) is now being re-built to haul passengers weighing more than 200 pounds. In 2004, a Baltimore water taxi built to carry 25 adults weighing an average of 140 pounds sank because the combined weight of the boat’s 25 passengers was 700 pounds more than the vessel could handle.



ಅಷ್ಟು ಮಾತ್ರವಲ್ಲ ಈ ದೈತ್ಯ ದೇಹಿಗಳ ಶರೀರದಿಂದ ಹಿಂಡಲ್ಪಟ್ಟ ಕೊಬ್ಬು ಕಾರು ಓಡಿಸಲು ಇಂದನವನ್ನಾಗಿ ಉಪಯೋಗಿಸುತ್ತಾರಂತೆ. ನಮ್ಮಲ್ಲಿ ಇತ್ತೀಚಿನ ವರೆಗೆ ದಡೂತಿ ಶರೀರವೂ ಚಂದ ಮತ್ತು ಈ ಕೊಬ್ಬು ಆಹಾರ ಸಿಕ್ಕದಿರುವಾಗಕ್ಕೆ ಕಾದಿರಿಸಲ್ಪಟ್ಟ ಶಕ್ತಿಯೆಂದು ಪರಿಗಣಿಸಲ್ಪಟ್ಟಿತ್ತು.



If the concept of “flab gas” leaves you flabbergasted, prepare for a shock: researchers are already mining human fat for fuel. Miami’s Jackson Memorial Hospital reportedly has signed a deal to supply Norwegian entrepreneur Lauri Venoy with 3,000 gallons-per-week of liposuction leftovers harvested by its clinics. This biofat could produce 2,600 gallons of biodiesel, sufficient to fuel a Hummer for a year.

ತಿನ್ನುವುದರಲ್ಲೇ ಮಿತಿ ಪಡಿಸಿದರೆ ಹಲವು ಸಮಸ್ಯೆಗಳು ಪರಿಹಾರ. ಆದರೆ ..............



ಆಧಾರ:

http://www.commondreams.org/archive/2008/06/10/9518/