Wednesday, September 24, 2008

ಹೀಗೊಂದು ಸೌರ ಶಕ್ತಿ ಚಾಲಿತ ಶೀತಕ



 ಸೌರಶಾಖವನ್ನೇಕೆ   ನಮ್ಮ   ಶೀತಕ   ಅನುಸರಿಸ ಬಾರದೆನ್ನುವ ಯೋಚನೆ ನನಗೆ ಮೊದಲು ಬಂದಿತ್ತು.  ಸೀಮೆ ಎಣ್ಣೆ ದೀಪ ಉರಿಸಿ ತಂಪಾಗಿಸುವ ಪುರಾತನ ಕಾಲದ ಫ್ರಿಡ್ಜ್ ಗಳು ಬಹಳ ಹಿಂದೆ ನೋಡಿದ್ದೆ. ಸುಮಾರು ನಲುವತ್ತು ವರ್ಷ ಹಿಂದೆ ಯಂತ್ರ ಚಾಲಿತ ಫ್ರಿಡ್ಜ್ ಗಳು ಬರುವ ವರೆಗೆ ಅವುಗಳು ಜನಪ್ರಿಯವಾಗಿದ್ದವು. ಕ್ರಮೇಣ ಅವುಗಳ ತಯಾರಿ ನಿಂತು ಅವುಗಳೆಲ್ಲ ಮೂಲೆ ಪಾಲಾದವು.

ಇದರ  ತಂತ್ರಜ್ನಾನ   ಹೊಸತಲ್ಲ.  ಇಂದಿನ    ಫ್ರಿಡ್ಜುಗಳು  ತುಂಬಾ  ವಿದ್ಯುತ್  ಅಪೇಕ್ಷಿಸುವ  ಯಂತ್ರಾವಲಂಬಿಯಾಗಿದೆ.  ಯಂತ್ರದ  ಮೂಲಕ  ಒತ್ತಡ  ಹೆಚ್ಚಿಸುವ  ಬದಲಿಗೆ  ಶಾಖ ಮೂಲಕ  ಹೆಚ್ಚಿಸುವ  ಕ್ರಿಯೆ  ಸರಳ.   ನೂರು  ವರ್ಷ ಹಿಂದೆ  ಅಗ್ಗದ  ಪೆಟ್ರೋಲ್   ವಿದ್ಯುತ್  ವಾಹನ  ಅವಿಶ್ಕಾರ  ತಡೆಗಟ್ಟಿದಂತೆ  ನಲುವತ್ತು  ವರ್ಷ    ಹಿಂದೆ  ಅಗ್ಗದ  ವಿದ್ಯುತ್  ಈ  ಸರಳ  ಶೀತಕಗಳನ್ನು  ಮಾರುಕಟ್ಟೆಯಿಂದ  ಓಡಿಸಿತು  ಅನ್ನಬಹುದು. 

ಇತ್ತೀಚೆಗೆ    ಅಮೇರಿಕದ ಸಾನ್ ಜೋಸ್ ವಿಶ್ವವಿದ್ಯಾಲಯದ ಚುರುಕು ಮೆದುಳುಗಳೆಲ್ಲ ಸೇರಿ ಇಂತಹ ಸೂರ್ಯನ ಶಾಖ ಬಳಸಿ ಮಂಜುಗಡ್ಡೆ ತಯಾರಿಸುವ ಯಂತ್ರ ರೂಪಿಸುವುದರಲ್ಲಿ ಸಫಲರಾಗಿದ್ದಾರೆ. ಯಾವುದೇ ಚಲಿಸುವ ಬಾಗಗಳಿಲ್ಲದ ಅದು ಬರೇ ಒಂದು ರಸಾಯನಿಕ ಕ್ರಿಯೆಯಲ್ಲಿ ಮಂಜುಗಡ್ಡೆ ಉತ್ಪಾದನೆ ಮಾಡುತ್ತದೆ.

ಉಬ್ಬಿನ ಪ್ರತಿಫಲಿಸುವ ಹಲಗೆಯನ್ನು ಉಪಯೋಗಿಸಿ ಬೆಳಕು ಮತ್ತು ಶಾಖವನ್ನು ಕೊಳವೆ ಮೇಲೆ ಕೇಂದ್ರೀಕರಿಸುವುದರಿಂದ ಇದರಲ್ಲಿ ತುಂಬಿಸಿರುವ ದ್ರಾವಣ ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ. ಸೂರ್ಯ ಮುಳುಗಿದ ನಂತರ ಒತ್ತಡದ ವ್ಯತ್ಯಾಸದಿಂದಾಗಿ ಈ ಅನಿಲ ರೂಪ ವಿಪರೀತ ಶಾಖವನ್ನು ಕಳಕೊಳ್ಳುವ ಮೂಲಕ ತಣ್ಣಗಾಗಿಸಿ ಇದರಲ್ಲಿ ಸುಮಾರು ಆರು  ಕಿಲೊ ಐಸ್ ತಯಾರಾಗುತ್ತದೆ. ಈ ದ್ರವ  ತಣ್ಣಗಾಗುವಾಗ   ೧೦೪  ಡಿಗ್ರಿ ಫಾರಿನ್ ಹೀಟ್ ಅಂದರೆ ಸುಮಾರು ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿದ ನಂತರ  ವೇಗವಾಗಿ ಶಾಖವನ್ನು ಕಳಕೊಳ್ಳುವ ಕಾರಣ ಇದು ಉಷ್ಣವಲಯದಲ್ಲೂ ಕೆಲಸ ಮಾಡಲು ಸಾದ್ಯ. ಯಾವುದೇ ಚಲಿಸುವ ಬಾಗಗಳಿಲ್ಲದ ಕಾರಣ ಹಾಳಾಗುವ ಸಾದ್ಯತೆಗಳು ಅತ್ಯಲ್ಪ.   ಪೈಪು ತೂತಾಗದಂತೆ ನೋಡಿಕೊಂಡರೆ ಸೈ.


ಮನೆಯಲ್ಲಿ ಆಹಾರ ಪದಾರ್ಥಗಳ ಮತ್ತು ವೈದ್ಯಕೀಯ ಲಸಿಕೆಗಳ ಮದ್ದುಗಳ ಬಹುಕಾಲ ಇಟ್ಟುಕೊಳ್ಳಲು ಇದು ಸಹಾಯ ಆಗಬಹುದು. ವಿದ್ಯುತ್ ಶಕ್ತಿ ಲಬ್ಯವಾಗದ ಸ್ಥಳಗಳಲ್ಲೂ ಇದು ಚೆನ್ನಾಗಿ ಕೆಲಸ ಮಾಡಬಲ್ಲದು. ನಮ್ಮಲ್ಲಿರುವಂತೆ ದಿನಕ್ಕೆ ಎಂಟು ಘಂಟೆ ವಿದ್ಯುತ್ ಕಡಿತ ಇರುವಲ್ಲಿಗೂ   ಬಹಳ   ಉಪಯುಕ್ತ.    ವಿಪರ್ಯಾಸ ಎಂದರೆ ನಮ್ಮಂತೆ ಹಳ್ಳಿಗರ ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವುದು ಶೀತಕವೇ.   ಇದಿಲ್ಲವಾದರೆ  ನಾವು  ಮನೆ ಬಳಕೆ    ವಿದ್ಯುತ್  ಮಟ್ಟಿಗೆ   ಸ್ವಾವಲಂಬಿಗಳು.

Saturday, September 20, 2008

ಸಾಗಾಣಿಕೆ ಅನುಕೂಲ ಸೈಕಲುಗಳು


ನಮ್ಮಲ್ಲಿ  ಯಾಕಿಲ್ಲ  ಎನ್ನುವ   ಪಟ್ಟಿಗೆ  ಸೇರಿಸುವಂತಹ   ವಸ್ತು   ಸಾಗಾಣಿಕೆ  ಸೈಕಲುಗಳು.      ಬಾರತದಲ್ಲಿ    ಇಂದು ಕೆಲವು ಕೋಟಿ ರೂಪಾಯಿ ಕ್ರಯದ  ವಿಲಾಸಿ   ಕಾರುಗಳು  ಮತ್ತು   ನೂರಾರು ಬಗೆಯ    ದ್ವಿಚಕ್ರ ವಾಹನಗಳು ನಮ್ಮ ಮಾರುಕಟ್ಟೆಯಲ್ಲಿಸಿಗುತ್ತದೆ.      ಆದರೆ ಹಲವಾರು ಉಪಯುಕ್ತ    ಸರಳ   ಮಾದರಿಗಳು ನಮ್ಮಲ್ಲಿ ಮುಖತೋರಿಸಲೇ ಇಲ್ಲ.    ಗ್ರಾಮೀಣ ಪ್ರದೇಶದಲ್ಲಿ ಉಪಯುಕ್ತ ಎನಿಸಬಹುದಾದ ಸಕಲ ದಾರಿ ಸಂಚಾರಿ ಸದಾಸಂ ಮತ್ತು   ಈ  ಹಿಂಬಾಗ  ಉದ್ದವಾದ  ಸೈಕಲುಗಳು   ಉತ್ತಮ  ಉದಾಹರಣೆ. 

ಸೈಕಲು    ತಯಾರಿ    ಬಗೆಗಿನ ವಿಚಾರಗಳೆಲ್ಲ ನಮ್ಮ ದೇಶದಲ್ಲಿ ನಿಂತ ನೀರಾಗಿದೆ. ಲುದಿಯಾನದಲ್ಲೂ ಮದ್ರಾಸಿನಲ್ಲೂ ಇರುವ ನಮ್ಮ ಸೈಕಲ್ ತಯಾರಕರು ಬ್ರಿಟೀಷರು ಬಿಟ್ಟು ಹೋದ ಅಚ್ಚಿನಲ್ಲೇ ಇಂದಿಗೂ   ಸೈಕಲುಗಳ ತಯಾರಿಸಿ ಮಾರುತ್ತಿದ್ದಾರೆ.    ಗಾತ್ರದಲ್ಲಿ ವಿವಿದತೆ ಕಂಡುಬಂದರೂ    ವಿನ್ಯಾಸದಲ್ಲಿ ಇಲ್ಲವೇ ಇಲ್ಲ.  ಇಷ್ಟೊಂದು  ಸರಳ ಬದಲಾವಣೆ  ನಮ್ಮ  ತಯಾರಕರು  ಅಳವಡಿಸಿಲ್ಲ  ಎನ್ನುವಾಗ   ಅಸಹಾಯಕ     ಹತಾಶೆ  ಬಾವನೆ  ಮೂಡುತ್ತದೆ. 

ಒಂದಷ್ಟು ತಂತ್ರಾಂಶದಲ್ಲಿ ಕೆಲಸ ಮಾಡುವ ಆಸಕ್ತ ಹುಡುಗರು ಪರದೇಶಗಳಿಂದ ಹಗುರವಾದ ಅತ್ಯಾದುನಿಕ ಸೈಕಲ್ ತರಿಸಿ ಮಾರಾಟ ಮಾಡಿ ಹೊಸ ನೀರ ಹರಿವಿಗೆ ಪ್ರಯತ್ನಿಸುತ್ತಿದ್ದಾರೆ ಆಂದರೂ ಸಹಾ ಅವರ ಪ್ರಬಾವ ಪಟ್ಟಣಗಳಿಗೆ ಸಿಮಿತ. ಆ ದುಬಾರಿ ಸೈಕಲುಗಳು ಹಳ್ಳಿಗರ ಜನಸಾಮಾನ್ಯರ ಕೈಗೆಟಕುವಂತೆಯೂ ಇಲ್ಲ.


ನಮಗೆ    ಉಪಯೋಗವಾಗಬಹುದಾದ   ಸೈಕಲುಗಳು  ಎಲ್ಲೋ  ತಯಾರಾಗುತ್ತದೆ  ಎನ್ನುವುದು  ಸಂತಸದ  ಸುದ್ದಿ.    ಪರದೇಶಗಳಲ್ಲಿ ಅಮೇರಿಕದಿಂದ ಹಿಡಿದು   ಅಫ್ರಿಕದ  ವರೆಗೆ ಹೊಸ ತರದ ಸಾಗಾಣಿಕೆ ಸೈಕಲುಗಳ ಅವಿಷ್ಕರಣೆ ಹಾಗೂ ಉಪಯೋಗ ಸಾಗಿದೆ.   ಈ ಸೈಕಲುಗಳು  ಆಸನದ  ಹಿಂದಿನ  ಬಾಗ    ಸ್ವಲ್ಪ   ಉದ್ದವಾಗಿದ್ದು ಹೆಚ್ಚು ಸಾಮಾನು ಹಾಕಲು ಉಪಯುಕ್ತ.     ಕಬ್ಬಿಣದ ಕೊಳವೆಗಳ ಬದಲಿಗೆ ಬಿದುರಿನ ಕೋಲುಗಳ ಉಪಯೋಗಿಸುವುದರಲ್ಲೂ    ಆಫ್ರಿಕದಲ್ಲಿ     ಸಫಲರಾಗಿದ್ದಾರೆ.  


ಈ  ಮಾದರಿ  ಹೊಸ    ಸೈಕಲುಗಳು ತಯಾರಿಗೆ  ಹೆಚ್ಚು  ಕಬ್ಬಿಣದ  ಕೊಳವೆಗಳ  ಉಪಯೋಗದಿಂದ   ಇನ್ನೂರು ರೂಪಾಯಿ ದುಬಾರಿ    ಆಗಬಹುದು.    ನಮ್ಮಲ್ಲಿ     ಸಂಪ್ರದಾಯಿಕ  ಸೈಕಲು  ಮಾರುಕಟ್ಟೆ   ದೊಡ್ಡ  ತಯಾರಕರ  ಹಿಡಿತದಲ್ಲಿದೆ.  ಇದು  ಅಂತರ್ಜಾಲದಲ್ಲಿ  ಮಾರಾಟ  ಆಗುವ  ಸಾಮಾನು  ಅಲ್ಲ.    ಇವುಗಳಲ್ಲಿ ಹೆಚ್ಚು ಸಾಮಾನು ಕೊಂಡೊಯ್ಯಬಹುದು.   ಇನ್ನೂರು  ಕಿಲೊ  ಸಾಮಾನು  ಅಥವಾ  ಮೊರು  ಜನ  ಹೊರುವ  ಮಾದರಿಗಳಿವೆಯಂತೆ.     ಸೈಕಲುಗಳ ಉಪಯೋಗಿಸುವ ಸಣ್ಣ ವ್ಯಾಪಾರಿಗಳು ವಿತರಕರು ನಿತ್ಯವೂ ಉಪಯೋಗಿಸುವವರು  ಹಲವರು   ಪುಟ್ಟ ದ್ವಿಚಕ್ರಕ್ಕೆ ಬಡತಿ ಹೊಂದಿದ್ದರಾದರೂ ಇನ್ನೂ ಸಾಕಷ್ಟು ಜನ ಸೈಕಲಿಗೆ ಅಂಟಿಕೊಂಡಿದ್ದಾರೆ.     ಅವರಿಗೆಲ್ಲ ಈ ಸೈಕಲುಗಳು ನಮ್ಮಲ್ಲೂ     ಜೋಡಣೆಯಾದರೆ ಬಹಳ ಉಪಯೋಗವಾಗಬಹುದು.

Sunday, September 14, 2008

ಕೋಲ ಎಂಬ ಬಣ್ಣದ ನೀರು ನಮ್ಮಲ್ಲಿ ಹಾಲಿಗಿಂತಲೂ ಬಲು ದುಬಾರಿ

ಅಂತೂ ಇಂತೂ ಹಾಲಿಗೆ ಖರೀದಿ ದರ ಎರಡು ರೂಪಾಯಿ ಏರಿಕೆ. ನೂರು ದಿನ ಯಶಸ್ವಿ ಆಡಳಿತ ನಡೆಸಿದವರ ಕೊಡುಗೆ.  ಸರಕಾರದ  ಪರವಾಗಿ  ಮಾತನಾಡಲು  ಹಕ್ಕಿರುವ     ಶೋಭಕ್ಕನಿಂದಾದ   ಘೋಷಣೆ ಮೇಲ್ನೋಟಕ್ಕೆ ಅವರು ವೈಯುಕ್ತಿಕವಾಗಿ ಕೊಡುತ್ತಾರೊ ಎನ್ನುವ ಅನುಮಾನ. ಮನೆಯ ಹೆಂಗಸರ ಹೆಸರಿಗೆ ಬಾಂಕ್ ಖಾತೆ ಎನ್ನುವ ವಿನೂತನ ಬಳಸು ದಾರಿಯ ಪರಿಣಾಮ ಹೊಸತಾದ ಮರಕೋತಿ ಅಟದ ಪ್ರಾರಂಬ.  ರೇವಣ್ಣನವರ    ಹಾಲು ಮಹಾಮಂಡಲಿಗೆ ಬೆಲೆ ಏರಿಸುವ ಹಕ್ಕಿಲ್ಲವೆಂದು ಯೆಡ್ಯುರಪ್ಪನ ಗುಟುರು.    ಹೀಗೆಲ್ಲ    ಒಟ್ಟಿನಲ್ಲಿ ಗೊಂದಲಾಮಯವಾಗಿತ್ತು.   
                                                      
ನನ್ನ ಬ್ಲೋಗ್ ಬರಹ   ಅಮೇರಿಕದಲ್ಲಿ ಹಾಲು ಕುಡಿದ್ರಾ ಯೆಡ್ಯುರಪ್ಪ      ಸ್ವಲ್ಪ ಬದಲಾವಣೆ ಮಾಡಿ ಕನ್ನಡ ಪ್ರಭಕ್ಕೆ ಕಳುಹಿಸಿದ್ದೆ.    ಅದು ಗುರುವಾರ ೧೧ ಸೆಪ್ಟೆಂಬರ್ ಸಂಚಿಕೆಯಲ್ಲಿ ಚಿತ್ರ ಸಮೇತ ಪ್ರಕಟವಾಗಿದೆ.  ಅರ್ಥಪೂರ್ಣ  ವ್ಯಂಗ್ಯ ಚಿತ್ರ  ಬರೆದವರಿಗೂ  ಬರಹದ  ತಿರುಳು ಹೆಕ್ಕಿ  ಪ್ರಕಟಿಸಿದ  ಸಂಪಾದಕ ವರ್ಗಕ್ಕೂ  ನಾನು  ಕೃತಜ್ನ.    ಇಲ್ಲಿ  ಅಸ್ಪಷ್ಟವಾದರೆ  ಅದನ್ನು     http://www.kannadaprabha.com/pdf/1192008/6.pdf    ಪುಟದಲ್ಲಿ  ಓದಬಹುದು.   ಹಾಲಿನ  ಕ್ರಯದ  ಬಗೆಗೆ ಸರಿಯಾದ  ಮಾಹಿತಿ  ಸಿಕ್ಕ  ನಂತರ  ಈ   ಎರಡನೇಯ  ಬಾಗ  ಹಾಕುವುದೆಂದು  ವಿಳಂಬಿಸಿದೆ. 

  ಸ್ಥಳೀಯ  ಸಹಕಾರಿ  ಸಂಘದ  ಮೂಲಕವೇ  ಈ  ಎರಡು  ರೂಪಾಯಿ  ತಲಪಿಸುವುದೆಂದು  ಸರಕಾರದ   ತೀರ್ಮಾನವೆಂದು  ಇತ್ತೀಚಿನ  ಪತ್ರಿಕಾ  ವರದಿ.  ಬಾಂಕ್  ಖಾತೆಯ  ಕನಸಿಲ್ಲಿದ್ದ   ಮಹೀಳೆಯರಿಗೆಲ್ಲ   ಅಶಾಭಂಗ.    ಈ  ಕೊಡುಗೆಯ ಹಿಂದೆ  ತಾನಿರುವೆಂದು  ರೇವಣ್ಣ  ಬಿಂಬಿಸಿದರೆ  ಎಂದು  ಯೆಡ್ಯು  ಗುಮಾನಿ.  ಈಗ  ನಮ್ಮ   ಸಮಾಜದಲ್ಲಿ   ಎಲ್ಲವೂ  ರಾಜಕೀಯಮಯ.    ಸಹೋದರಿಯ  ಸಮಸ್ಯೆ  ಪರಿಹಾರದ  ಹೆಗ್ಗಳಿಕೆ  ಸದಾಶಿವನಿಗೆ  ಸಿಕ್ಕರೆ  ಎಂದು  ಹಿರಿಯಣ್ಣ   ಹುಳಿ ಹಿಂಡಿದ  ಉದಾಹರಣೆ ನಮ್ಮೂರಲ್ಲಿದೆ.    


ಪ್ರಜಾವಾಣಿಯ  ಚಿತ್ರಕಾರ  ಮಹಮದ್  ಅವರು  ಈ  ಸಮಸ್ಯೆಯ  ಅರ್ಥಪೂರ್ಣವಾಗಿ  ಚಿತ್ರಿಸಿದ್ದಾರೆ.     ಶಿಕಾರಿಪುರ  ಅಕ್ಕಿ  ಮಿಲ್ಲಿನ  ಅಳಿಯನಾದ  ಯೆಡ್ಯುಗೆ   ಪಶು ಆಹಾರದ  ಒಂದು ಪ್ರಮುಖ ಅಂಶವಾದ    ಅಕ್ಕಿ  ತೌಡಿನ  ಬೆಲೆ ಈಗ ಗೊತ್ತಿಲ್ಲವೋ  ಏನೊ.  ಒಟ್ಟಿನಲ್ಲಿ    ಇವರ ರಾಜಕೀಯ ಆಟದಲ್ಲಿ  ರೈತರು  ಪುಡಿಯಾಗಲಿದ್ದಾರೆ.

Saturday, September 13, 2008

ಕರೆಯುತ್ತಿದ್ದಾರೆ ಶೌಚಾಲಯಕ್ಕೆ


ಜಪಾನಿನಲ್ಲಿ ಕಳೆದ ಶತಮಾನದ ವರೆಗೂ ರೈತರು ರಸ್ತೆ ಪಕ್ಕದಲ್ಲಿ ಶೌಚಾಲಯ ನಿರ್ಮಿಸುತ್ತಿದ್ದರಂತೆ. ನಮ್ಮಲ್ಲಿ ಖಾಸಗಿ ಬಸ್ಸುಗಳಿಗೆ ಜನರನ್ನು ಕರೆಯುವಂತೆ ಕರೆಯುತ್ತಿದ್ದರೋ ಎನ್ನುವುದು ಖಚಿತವಲ್ಲವಾದರೂ ಉಪಯೋಗಿಸಿದರೆ ಖಂಡಿತ ಸಂತೋಷ ಪಡುತ್ತಿದ್ದರಂತೆ.

ನನ್ನ ಸೈಕಲ್ ಪ್ರವಾಸದ ಮೊದಲು ಹಲವಾರು ದೇಶಗಳ ಬಗೆಗೆ ಪ್ರವಾಸಿ ಮಾಹಿತಿ   ಸಂಗ್ರಹಿಸಿದ್ದೆ. ಅಲ್ಲಿರುವಾಗ ಕೃಷಿ  ಸಂಬಂದಿತ  ವಿಚಾರಗಳ    ಬಗೆಗೂ ಕಣ್ಣಿಡುತ್ತಿದ್ದೆ. ಜಪಾನು ಸಾವಿರಾರು ವರ್ಷಗಳಿಂದ ಒಂದೇ ಜಾಗದಲ್ಲಿ ನಿರಂತರವಾಗಿ ಕೃಷಿ ಕೈಕೊಳ್ಳುತ್ತಿರುವ ದೇಶವಾದುದರಿಂದ ಅವರದು ಫಲವತ್ತತೆ ಉಳಿಕೊಳ್ಳುವ ಮಾದರಿ ಎನ್ನುವುದು ಸ್ಪಷ್ಟ. ಈ ದಾರಿ ಬದಿಯ ಶೌಚಾಲಯಗಳು ದಾರಿಹೋಕರಿಗೆ ಉಪಯೋಗ ಎನ್ನುವುದಕ್ಕಿಂತ ಹೆಚ್ಚು ತಮಗೆ ಗೊಬ್ಬರ ಸಿಗಲಿ ಎನ್ನುವ ಸ್ವಾರ್ಥ ಚಿಂತನೆ. ಹಾಗೆಯೇ ಮನೆಗೆ ಬಂದ ಅತಿಥಿಗಳು ತಮ್ಮ ಶೌಚಾಲಯ ಉಪಯೋಗಿಸದೆ ಇದ್ದರೆ ಸಿಟ್ಟೆ ಬರುತ್ತಿತ್ತಂತೆ.   ನಮ್ಮಲ್ಲಿ ಈಗ ಸೆಗಣಿ ಕುರಿ ಕೋಳಿ ಗೊಬ್ಬರ ಲಾರಿಯಲ್ಲಿ ಸಾಗಿಸುವಂತೆ ಮಲವನ್ನು ಪಟ್ಟಣಗಳಿಂದ ಗಾಡಿಯಲ್ಲಿ ತುಂಬಿ ಸಾಗಿಸುತ್ತಿದ್ದರು.  ಸಿರಿವಂತರ ಆಹಾರದಲ್ಲಿ ಹೆಚ್ಚು ಪೊಷಕಾಂಶ ಎನ್ನುವ ನೆಲೆಯಲ್ಲಿ ಹೆಚ್ಚಿನ ಮೌಲ್ಯ.

ಪ್ರಯಾಣ ಮಾಡುತ್ತೀರಾ ? ಸಂತೋಷ, ಒಮ್ಮೆ ಶೌಚಾಲಯಕ್ಕೆ ಹೋಗಿ ಬನ್ನಿ ಎನ್ನುವ ಮಾತು ಈಗ ಸ್ವೇಡನಿನಲ್ಲಿ  ವ್ಯಾಪಕವಾಗಿ   ಕೇಳಿ ಬರುತ್ತಿದೆ. ಈಗ ಸ್ವೇಡನ್ ದೇಶದ ಹಲವು ಮುನಿಸಿಪಾಲಿಟಿಗಳು ಕೊಳಚೆಯಿಂದ ಅನಿಲ ಉತ್ಪಾದನೆ ಕೈಗೊಳ್ಳುತ್ತಿದೆಯೆಂದು ಇತ್ತೀಚಿನ ಸುದ್ದಿ. ಅಲ್ಲಿನ ಕಾರು ಬಸ್ಸುಗಳ ಮಾತ್ರವಲ್ಲ ರೈಲುಗಾಡಿಯನ್ನು ಸಹಾ ಈ ಅನಿಲ ಚಲಿಸುವಂತೆ ಮಾಡುತ್ತವೆ. ನೈಸರ್ಗಿಕ ಅನಿಲದಿಂದ ಚಲಿಸುವ ವಾಹನಗಳು ಯಾವುದೇ ಬದಲಾವಣೆ ಇಲ್ಲದೆ ಈ ಕೊಳಚೆ ಗಾಸ್ ಬಳಸಬಹುದು.
                                                                              
ಕೆಲವೆಡೆ ನೈಸರ್ಗಿಕ ಅನಿಲವನ್ನು ಗ್ರಾಹಕರಿಗೆ ಕೊಂಡೊಯ್ಯುವ ಕೊಳವೆಯನ್ನೇ ಬಳಕೆ. ಗಾಸ್ ಪಂಪಿನಲ್ಲಿ ಒತ್ತಡೀಕರಿಸಿ ಕಾರಿನಲ್ಲಿರುವ ಜಾಡಿಗೆ ತುಂಬುತ್ತಾರೆ. ಒಂದು ಕಾರು ಪಂಪಿನಲ್ಲಿ ಗಾಸ್ ತುಂಬಿಸಿತು ಎಂದಾಕ್ಷಣ ಅಷ್ಟೇ ಗಾಸ್ ಕೊಳವೆ ಜಾಲಕ್ಕೆ ಸೇರಿಸುತ್ತಾರೆ. ವಾಹನ ಬಳಸುವ ಇಂದನವನ್ನು ಪೂರ್ತಿ ಕೊಳಚೆಯಿಂದ ತಯಾರಾದ ಗಾಸ್ ತುಂಬಿಕೊಡಲೆಂಬ ಚಿಂತನೆ.

ಪ್ರತಿಯೊಬ್ಬರು ಇಡೀ ವರ್ಷದಲ್ಲಿ ಫ್ಲುಷ್ ಮಾಡೋದರಲ್ಲಿ ಉತ್ಪತ್ತಿಯಾದ ಗಾಸ್ ಸುಮಾರು ೧೨೦ ಕಿಲೋಮೀಟರ್ ನಮ್ಮ ಹಡಗಿನಂತಹ ಕಾರುಗಳು ಓಡಿಸಲು ಸಾಕು ಎಂದು ಅಲ್ಲಿನ ಅಬಿಯಂತರರು ಹೇಳುತ್ತಾರೆ. ಮೇಲ್ನೋಟಕ್ಕೆ ನಮ್ಮ ಪುಟ್ಟ ಕಾರುಗಳು ಇನ್ನೂರು ಕಿಲೋಮೀಟರ್ ಚಲಿಸಬಹುದು ಅನ್ನಿಸುತ್ತದೆ. ಕಾರಿನ ಹೊಗೆ ನಳಿಗೆ ಉಗುಳುವುದು ವಾಸನೆರಹಿತ ಕಡಿಮೆ ಮಲೀನತೆಯ ಹೊಗೆ. ಸ್ಥಳೀಯ ಇಂದನ, ಕಡಿಮೆ ಮಲೀನತೆ, ಹೀಗೆ ಹಲವು ಉಪಯೋಗ. ಉಳಿಕೆ ವಸ್ತುವನ್ನು ಗೊಬ್ಬರವಾಗಿ ಬಳಕೆ.

ನಾಲ್ಕು ಜನರಿರುವ ನಮ್ಮ ಮನೆಯಲ್ಲಿ ವರ್ಷಕ್ಕೆ ಎಂಟು ನೂರರಿಂದ ಸಾವಿರ ಕಿಲೋಮೀಟರ್ ಕಾರು ಓಡಿಸುವಷ್ಟು ಗಾಸ್ ನಿರೀಕ್ಷಿಸಬಹುದು. ಒತ್ತಡೀಕರಿಸುವುದು ಇಂದಿನ ದಿನಗಳಲ್ಲಿ ದುಬಾರಿ. ನಮ್ಮಲ್ಲಿ ಕಣ್ಣೆದುರು ಪೋಲಾಗುವ ಇನ್ನೊಂದು ಇಂದನ ಮೂಲವಾದ ಸೌರ ವಿದ್ಯುತ್ ಸೇರಿಸಿದರೆ ಓಡಾಟದ ಮಟ್ಟಿಗೆ ಖಂಡಿತ ಸಂಪೂರ್ಣ ಸ್ವಾವಲಂಬನೆಗೆ ಸಾದ್ಯ.  ಸದ್ಯಕ್ಕೆ ವಿಚಾರ ಲೆಕ್ಕಾಚಾರಕ್ಕೆ ಸಿಮಿತ. ಇದರ   ವಿವರಗಳು  ಇನ್ನೊಮ್ಮೆ.

Saturday, September 06, 2008

ಪರದೇಶದಲ್ಲಿ ರೂಪಾಯಿ ಲೆಕ್ಕಾಚಾರ

ವಾರಗಳ   ಹಿಂದೆ  ಓದಿದ   ಆಗಸ್ತು  ೧೪ರ    ವಿಜಯ ಕರ್ನಾಟಕದ ಅಂಕಣದಲ್ಲಿ  ಪ್ರಕಟವಾದ   ವಿಶ್ವೇಶ್ವರ ಭಟ್ಟರ ಲೇಖನದಲ್ಲೊಂದು ವಾಕ್ಯ ಮನಸಿಗೆ ಕಿರಿಕಿರಿ ಉಂಟು ಮಾಡುತ್ತಲೇ  ಇದೆ.  ಈ    ವಾಕ್ಯ ಬಾರತೀಯರ ಮನೋಬಾವವನ್ನು ಮೂದಲಿಸುವಂತಿದೆ.   ಅಲ್ಲಿನ  ವಾತಾವರಣ   ಖರ್ಚಿಗೆ   ಪ್ರರೇಪಿಸುತ್ತದೆ.   ರೂಪಾಯಿ  ಲೆಕ್ಕ  ಬೇಡ  ಎನ್ನುವ  ಈ ಮಾತು ನನಗೆ   ಹೊಸತಲ್ಲ. ಪರದೇಶಗಳಲ್ಲಿ ಹಲವು ಬಾರಿ    ಹೇಳಿಸಿಕೊಂಡಿದ್ದೇನೆ.   ಅದುದರಿಂದ ಇನ್ನೊಂದು ಮುಖ ಪರಿಚಯಿಸಲು ಪ್ರಯತ್ನಿಸುವೆ.


ಇದೊಂದು ಪರಂಪರೆಯ ಮಾತು. ಮೂಲ ಹೀಗಿದ್ದಿರಬಹುದು. ವಿದ್ಯೆಗೋ ಕೆಲಸಕ್ಕೊ ನಂತರ ಹೋದವರಿಗೆ ಮೊದಲಿಗರ ಹಿತವಚನ. ಖರ್ಚಿನ ಮೇಲೆ ಬಹಳ ಯೋಚನೆ ಬೇಡ , ಉಪವಾಸ ಇರಬೇಡ ಎನ್ನುವ ತಾತ್ಪರ್ಯ. ಕ್ರಮೇಣ ಹಿರಿ ಗುರುಗಳ ಕಾಲದಲ್ಲಿ ಪ್ರವಚನ ಸಮಯದಲ್ಲಿ ಬೆಕ್ಕನ್ನು ಪಾತ್ರೆಯಡಿ ಮುಚ್ಚಿಡಲಾಗುತಿತ್ತು ಎನ್ನುವ ಆಚರಣೆಯ ಅನುಕರಣೆ ಎಂಬಂತಾಗಿದೆ. ಈಗಂತೂ ಹೋದ ಪ್ರತಿಯೊಬ್ಬನೂ ಕೇಳುವುದು ಕಡ್ಡಾಯ.

ಗೆಳೆಯರು ಸಂಬಂದಿಕರು  ಅಲ್ಲಿನ  ಅತಿಥೇಯರು    ದೊಡ್ದ ಮನಸ್ಸು ಮಾಡುವುದು ಬೇರೆ ನಮ್ಮ ವೈಯುಕ್ತಿಕ ಖರ್ಚಿಗೆ ನಾವಾಗಿ ಅವರಿವರಲ್ಲಿ ಕೈಯೊಡ್ಡುವುದು ಬೇರೆ. ಬಾರತದ ಹೊರಗೆ ಮುಕ್ಕಾಲು ಆದಾಯ ಇಲ್ಲವಾದಲ್ಲಿ ಪ್ರತಿ ಪೈಸವನ್ನೂ ನಾವು ಲೆಕ್ಕ ಮಾಡುವುದೇ ಸರಿ. ಇದರರ್ಥ ಲೇಖನದಲ್ಲಿ ಕಾಣುವ ನಮ್ಮವರು ಮಾಡಬಹುದಾದ ಚೌಕಾಶಿಯನ್ನು ಒಪ್ಪುತ್ತೇನೆ ಎಂದಲ್ಲ. ವಿದ್ಯೆಗೋ ಕೆಲಸದ ಪ್ರಯುಕ್ತವೋ ಮೊದಲು ಹೋದ ಶ್ರೀಯುತ ಭಟ್ರಿಗೆ ಅಲ್ಲಿ ಹಣ ದಾರಾಳ ಖರ್ಚು ಮಾಡುವ ಅಗತ್ಯ ಅವಕಾಶ ಇದ್ದಿರಬಹುದು. ಅದುದರಿಂದ ಆ ದೋರಣೆ ಸಮಂಜಸ ಎನಿಸುತ್ತದೆ.

ನಾನು ಇಪ್ಪತ್ತೆರಡು ವರ್ಷ ಹಿಂದೆ ಸೈಕಲು ಪ್ರವಾಸದ ಬಾಗವಾಗಿ ರೋಮ್ ಪಟ್ಟಣದಲ್ಲಿ ಯುವ ಹಾಸ್ಟೇಲಿಗೆ ಹೋದೆ. ದಿನಕ್ಕೆ ಹತ್ತು ಸಾವಿರ ಲಿರಾ ಎಂದರು. ನಾನು ಅಂದಿನ ವರೆಗೆ ಸಾವಿರ ಮಿಕ್ಕಿದ ಹಣ ಅಪ್ಪನ ಅನುಮೋದನೆ ಇಲ್ಲದೆ ಖರ್ಚು ಮಾಡಿದ್ದಿರಲಿಲ್ಲ. ಅಲೋಚನೆ ಮಾಡಿದರೆ ಅದು ನೂರು ರೂಪಾಯಿ ಚಿಲ್ಲರೆ. ಆದರೆ ಮೊದಲು ಕೇಳುವಾಗ ನಿಜಕ್ಕೂ ಗಲಿಬಿಲಿ. ಅಂದು ನಮಗೆ  ಕಾನೂನು  ಪ್ರಕಾರ   ಕೊಂಡೊಯ್ಯಲು ಅವಕಾಶ ಇದ್ದುದು ಐದು ನೂರು ಡಾಲರ್ ಗುಣಿಸು ಹನ್ನೆರಡು ಅಂದರೆ ಕೇವಲ ಆರು ಸಾವಿರ ರೂಪಾಯಿ ಮಾತ್ರ. ಇಂದಿನಂತೆ ನಾಲ್ಕು ಲಕ್ಷ ರೂಪಾಯಿ ಮೌಲ್ಯ ಪರದೇಶಕ್ಕೆ ಸಲೀಸಾಗಿ ಕೊಂಡೊಯ್ಯುವಂತಿರಲಿಲ್ಲ. ಸ್ವಾಬಾವಿಕವಾಗಿ ಪೈಸ ಪೈಸವನ್ನೂ ಲೆಕ್ಕಿಸುವ ಅಗತ್ಯ.  ನಾನು  ವಾಪಾಸು  ಬರುವಾಗ  ನನ್ನಲ್ಲಿ  ಉಳಿದುದು  ಚಿಲ್ಲರೆ  ಹಣ.    ದುಂದು ವೆಚ್ಚ  ಮಾಡಿದರೆ  ಊರು  ತಲಪುತ್ತಿರಲಿಲ್ಲ. 

ಈ  ಹಣ   ಪರಿವರ್ತನಾ ವಿಚಾರಕ್ಕೆ   ಇನ್ನೊಂದು  ಮುಖವಿದೆ.     ಇತ್ತೀಚೆಗೆ ಎರಡು ಲಕ್ಷ ಚಿಲ್ಲರೆ ವಿಮಾನಕ್ಕೆ ಸುರಿದು ನಮ್ಮವರು ಬಂದಿದ್ದರು ಅಮೇರಿಕದಿಂದ.   ಸಹೋದರಿಯ ಬೇಟಿಗೆ ಬೆಂಗಳೂರಿಗೆ  ಹೋಗಲು ಕೆಲವು  ಸಾವಿರ ಖರ್ಚು  ಆಗಬಹುದು   ಎಂದು ಮನಬಿಚ್ಚಿ ಗೊಂದಲದಿಂದ ಮಾತಾಡಿದರು ವರ್ಷಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಮಿಕ್ಕಿ ಸಂಪಾದಿಸುವ ಈ ಅಮೇರಿಕದ ಕುಳ.  ಕೊನೆಗೂ ಅಷ್ಟು ಖರ್ಚಿಗೆ ಮನಸೊಪ್ಪಲಿಲ್ಲ.  ಅವರ ಇಲ್ಲಿನ ವರ್ತನೆಯನ್ನು ಶ್ರಿ ಭಟ್ಟರು ಪ್ರಶ್ನಿಸುವುದು  ಹೆಚ್ಚು   ಉಚಿತ   ಹೊರತು ಅಲ್ಲಿ ನಮ್ಮ ವರ್ತನೆಯನ್ನಲ್ಲವೆಂದು ಅನಿಸುತ್ತದೆ.  ಬಾರತದಲ್ಲಿ  ಹೆಚ್ಚೆಂದರೆ  ವರ್ಷಕ್ಕೆ ಒಂದೆರಡು ಲಕ್ಷ ರೂಪಾಯಿ ಸಂಪಾದಿಸುವ ಬೂಪ ಸ್ವಾಬಿಮಾನ ಉಳಿಸಿಕೊಂಡು ಅಮೇರಿಕದಲ್ಲೊ ಯುರೋಪಿನಲ್ಲೊ ದಾರಾಳ ಖರ್ಚು ಮಾಡುವಂತಿಲ್ಲ.

ಅವರು ಲೇಖನದಲ್ಲಿ ಬರೆದಂತಹ ಇಲ್ಲಿಗೆ ಬರುವ ಪ್ರತಿ ಪ್ರವಾಸಿಯೂ ಆ ದೇಶದ ರಾಯಬಾರಿ ಎಂಬ ಪರದೇಶಿಯರ ಮಾತಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ ಎಂದು ನಾನು ದೈರ್ಯವಾಗಿ ಹೇಳಬಲ್ಲೆ. ನನ್ನಂತೆ ನೂರಾರು ಜನ  ಬಾರತೀಯರು  ಎಲ್ಲೂ ಅನುಚಿತವಾಗಿ ನಡೆದುಕೊಂಡಿರಲಿಕಿಲ್ಲ. ಲೇಖನದಲ್ಲೊಂದು ದುಂದು ಖರ್ಚಿಗೆ ಪ್ರೆರಣೆಯೊ ಎನಿಸುವ ಮಾತು ಮಾತ್ರ ನನಗೆ ಸರಿ ಕಾಣಲಿಲ್ಲ.   ಮೊದಲ  ಬಾರಿಗೆ  ಸಮುದ್ರದಾಟುವವರು  ಈ  ಲೇಖನದಲ್ಲಿರುವ     ವಾಕ್ಯಗಳ  ಅಕ್ಷರವನ್ನೂ   ಬಿಡದೆ   ಓದಿ  ಚಿಂತಿತರಾಗುವ    ಸಾದ್ಯತೆ  ಕಂಡು  ಬರೆಯೋಣ  ಅನಿಸಿತು.

Monday, September 01, 2008

ಅಮೇರಿಕದಲ್ಲಿ ಹಾಲು ಕುಡಿದ್ರಾ ಯಡ್ಯುರಪ್ಪ

ಇತ್ತೀಚೆಗೆ ಬೆಲೆ ಏರಿಕೆ ಪ್ರಬಾವ ಎಲ್ಲ ವಲಯದಲ್ಲೂ ಕಂಡುಬರುತ್ತಿದೆ. ಆಡಳಿತ ಪಕ್ಷದ ಪ್ರಣಾಳಿಕೆ ಪ್ರಕಾರ ಹಾಲಿನ ಬೆಲೆ ಎರಡು ರೂಪಾಯಿ ಏರಿಕೆಯ ಆಶ್ವಾಸನೆ ನೀಡಲಾಗಿತ್ತು. ಬಳಕೆದಾರರಿಗೆ ಈ ಹೊರೆ ವರ್ಗಾಯಿಸಲು ಚಿಂತನೆ ನಡೆಸಿ ಅವರು ಬೇಸರ ಪಟ್ಟುಕೊಂಡಾರು ಎಂದು ತಡೆ ಹಿಡಿಯಲಾಗಿದೆ. ಈ ಏರಿಕೆ ಆಡಳಿತ ಪಕ್ಷದ ಕೊಡುಗೆಯಲ್ಲ ಏರುತ್ತಿರುವ ಸಾಕಣೆ ಖರ್ಚನ್ನು ಸರಿದೂಗಿಸುವ ರೈತನ ಹಕ್ಕಿನ ಹಣ. ಈಗ ಹಾಲು ಉತ್ಪಾದನೆಯ ಖರ್ಚು ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ರೈತನ ಕೊಬ್ಬು ಕರಗುತ್ತಲೇ ಇದೆ.  

ಪ್ರಪಂಚದ ಉಳಿದೆಡೆ ಹಾಲು ಎಷ್ಟಕ್ಕೆ ಮಾರಲ್ಪಡುತ್ತದೆ ಎಂದು ಗಮನಿಸಲು  ಈಗ   ಯಡ್ಯುರಪ್ಪನಿರುವ    ಅಮೇರಿಕದಲ್ಲಿ ಗ್ರಾಹಕರಿಗೆ ಹಾಲಿನ ಬೆಲೆ ಸುಮಾರು ಲೀಟರೊಂದಕ್ಕೆ ನಲುವತ್ತು ರೂಪಾಯಿ ದಾಟಿದೆ ಎಂಬ ವಿಚಾರ ಕಂಡು ಬಂತು .

ನಾನೂ     ಗೊಬ್ಬರದ ಆಸೆಯಲ್ಲಿ ದನ ಸಾಕುವ ಮತ್ತು   ನಮ್ಮೂರ ಹಾಲಿನ ಸೊಸೈಟಿಗೆ   ಹಾಲು  ಹಾಕುವ   ಮೊರ್ಖ.   ಅವರು ಮಾರುವ ಹಿಂಡಿಗಳನ್ನು ಮಾತ್ರ  ಬಳಸುವುದಿಲ್ಲ. ಪಟ್ಟಣದಲ್ಲಿ ಸಿಗುವ ಸಿದ್ದ ಪಶು ಆಹಾರವನ್ನು ನಾನು ತಿರಸ್ಕರಿಸುವುದಕ್ಕೆ ಕಾರಣ ವಿಷಪೊರಿತ ಹತ್ತಿ ಬೀಜದ ಹಿಂಡಿ ಹಾಗೂ  ಅಗ್ಗದ   ಪ್ರೊಟೀನ್  ಎಂದು  ಬಳಸುವ   ಯುರಿಯಾ.  ಇವೆರಡನ್ನೂ ನಮ್ಮಲ್ಲಿ ಪಶು ಆಹಾರದಲ್ಲಿ ದಾರಾಳ ಬಳಸುತ್ತಾರೆ. ಹನ್ನೆರಡು ವರ್ಷಗಳಿಂದ ನಾನು ರಾಗಿ ಹುಡಿ, ಜೋಳದ ಹುಡಿ, ಗೋದಿ ಬೂಸ, ಎಳ್ಳಿಂಡಿ ಇತ್ಯಾದಿಗಳನ್ನು ತಂದು ಮಿಶ್ರಣ ಮಾಡಿ ಬಳಸುತ್ತೇವೆ. ಎಂಟಾಣೆಯಿಂದ ಒಂದು ರೊಪಾಯಿ ಕಿಲೋವೊಂದಕ್ಕೆ ಹೆಚ್ಚುವರಿ ಖರ್ಚು. ಸಾಕಣೆ ದುಬಾರಿಯಾದರೂ ಹಸುಗಳ ಆರೋಗ್ಯದ ಮಟ್ಟಿಗೆ ಉತ್ತಮ ಫಲಿತಾಂಶ.

ಎರಡು ವರ್ಷ ಹಿಂದಿನ  ವರೆಗೆ  ಹಲವು  ವರ್ಷಗಳ  ಕಾಲ    ನನ್ನಲ್ಲಿ ಹಿಂಡಿ ಮಿಶ್ರಣಕ್ಕೆ ಅಂದಾಜು ಎಂಟು ರೂಪಾಯಿ ತಗಲುತಿದ್ದು ಈಗ ಇದು ಹದಿಮೂರರನ್ನು ದಾಟಿದೆ. ಒಂದು ಲೀಟರ್ ಹಾಲಿಗೆ ಸರಿಸುಮಾರು ಅರ್ಧ ಕಿಲೊ ಹಿಂಡಿ ಅಗತ್ಯವೆಂದು ಪರಿಗಣಿಸಬಹುದು. ಹಾಗಾಗಿ ಈಗಿನ ಲೀಟರೊಂದಕ್ಕೆ ಎರಡು ರೂಪಾಯಿ ಹೆಚ್ಚಳ ಹಿಂಡಿಯ ಕ್ರಯ ಹೆಚ್ಚಳವನ್ನೂ ತುಂಬಿಕೊಡದು. ಆದರೆ ಹಸು ಸಾಕಣೆಗೆ ಇತರ ಖರ್ಚುಗಳೂ ಇರುತ್ತವೆ. ಕೆಲಸಗಾರರನ್ನು ಹಳ್ಳಿಗಳಲ್ಲಿ ಹುಡುಕುವುದೇ ಸಾಹಸ.

ಒಂದು ವರ್ಷ ಹಿಂದೆ ಬಾರತದಲ್ಲಿ ಬಹಳ ಬದಲಾವಣೆಗಳಾಗುತ್ತಿವೆ ಎನ್ನುವ ಲೇಖನ ಹಿಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದನ್ನು ಬರೆದ ಅಮೇರಿಕದಲ್ಲಿ ರಾಯಬಾರಿ ಕಛೇರಿಯ ಅಧಿಕಾರಿಗೆ ನಾನು ಪ್ರಯೋಜನವಾಗುತ್ತಿರುವುದು ಪಟ್ಟಣಗಳಿಗೆ ಎಂದು ಅವರ ಬರಹದ ತಿರುಳನ್ನು ಪ್ರಶ್ನಿಸಿ ಪತ್ರಿಸಿದ್ದೆ. ಅದಕ್ಕವರು ಬದಲಾವಣೆಯನ್ನು ಅಮುಲ್ ಮಾದರಿ ಹಾಲಿನ ಕ್ರಾಂತಿ ಹಳ್ಳಿಗಳ ತಲಪಿದೆ ಎಂದು ಉದಾಹರಿಸಿ ಉತ್ತರಿಸಿದರು. ಪ್ರತ್ಯುತ್ತರವಾಗಿ ಹಾಲಿನ ಸೊಸೈಟಿಯಿಂದ ಪ್ರಯೋಜನ ಪಟ್ಟಣಿಗರಿಗೆ ಬೆಳಗಿನ ಲೋಟದ ಚಾ-ಕ್ಕೆ ಬೆರೆಸಲು ಕಡಿಮೆ ದರದ ಹಾಲು ಸಿಗಲು ಹೊರತು ಹಳ್ಳಿಗರ ಉದ್ದಾರಕ್ಕೆ ಖಂಡಿತ ಅಲ್ಲವೆಂದಿದ್ದೆ.

ಆಹಾರವನ್ನಾಗಿ ಇದೇ ಹಿಂಡಿ ಉಪಯೋಗಿಸಿ ಸಾಕುವ ಕೋಳಿಗಳ ಉತ್ಪನ್ನಗಳಿಗೆ ಜಾಗತಿಕ ವಿದ್ಯಮಾನಗಳ ಅನುಸರಿಸಿ ಶೇಕಡಾ ಐವತ್ತರಷ್ಟು ಕ್ರಯ ಏರಿದೆ. ಆದರೆ ಹಾಲಿಗೆ  ಶೇಕಡಾ  ಹದಿನೈದರ  ಇನ್ನೂ  ಕಾರ್ಯಗತವಾಗದ    ಆಶ್ವಾಸನೆ  ಮಾತ್ರ. ಮುಖ್ಯವಾದ ಕಾರಣ ಹಾಲು ಪೊರೈಕೆ ನಿಲ್ಲಿಸಿ ಪ್ರತಿಭಟಿಸುವ ಚೈತನ್ಯ ಮತ್ತು ಒಗ್ಗಟ್ಟು ಹೈನುಗಾರರಲ್ಲಿ ಇಲ್ಲ. ನಮ್ಮಲ್ಲಿ ರೈತರ ಸೇವೆ ಹೆಸರಿನಲ್ಲಿ ಹಾಲಿನ ಸೊಸೈಟಿ ಎಂಬ ಸರಕಾರಿ ಕೃಪಾಪೋಷಿತ ಸಂಸ್ಥೆ ಹಾಲಿನ ಮಾರುಕಟ್ಟೆಯಲ್ಲಿ ಸ್ಪರ್ದೆಯನ್ನು ಅವಕಾಶವನ್ನೀಯದೆ ರೈತರ ಶೋಷಣೆ ಮಾಡುತ್ತದೆ.

ಜರ್ಮನಿಯಲ್ಲಿ   ಇಂದು   ಹಾಲಿಗಿಂತ ಬೀರು ಅಗ್ಗ.  ನಮ್ಮಲ್ಲಿ ಕೋಲ ಎಂಬ ಬಣ್ಣದ ನೀರು ಸಹಾ ಹಾಲಿಗಿಂತಲೂ ದುಬಾರಿ.   ಇತರ ದೇಶಗಳ  ಸ್ಪರ್ದಾತ್ಮಕ ಮಾರುಕಟ್ಟೆಯಲ್ಲಿ ಹಾಲಿನ ಬೆಲೆ ಹಾಲೂಡುವ ದನಗಳ ಸಂಖ್ಯೆಯನ್ನು ನಿರ್ದರಿಸುತ್ತದೆ. ಮಾಂಸದ ಬೆಲೆ ಏರಿದರೆ ತತ್ಕಾಲಿಕವಾಗಿ ಹಾಲಿನ ಪೊರೈಕೆ ಕಡಿಮೆಯಾಗುವುದುಂಟು. ನಮ್ಮಲ್ಲಿರುವಂತೆ ಹನ್ನೆರಡು    ರೂಪಾಯಿಗೆ ಮಾರಲು ರಾಜಕೀಯ ಕಾರಣಗಳಿಂದಾಗಿ ರೈತನ ಮೇಲೆ ಒತ್ತಡ ಇದ್ದರೆ ಹಾಲು ಅಲ್ಲಿನ ಮಾರುಕಟ್ಟೆಯಿಂದಲೇ ಮಾಯವಾಗುವುದು ಖಚಿತ.