Monday, September 28, 2009

ಅಂದು ಸೈಕಲನ್ನೂ ಹೀಗೆ ಭದ್ರಪಡಿಸುತ್ತಿದ್ದೆ.





ಜಾಲದಲ್ಲಿ ಈ ಚಿತ್ರ ನೋಡಿದಾಗ ನನ್ನ ಸೈಕಲು ಪ್ರವಾಸದ ದಿನಗಳು ನೆನಪಾದವು. ಸೈಕಲನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಬೇಕಾದ ಸಂದರ್ಬಗಳಲ್ಲಿ ನಾನು ಹೆಚ್ಚಾಗಿ ಈ ರೀತಿಯ ಕಂಬಗಳನ್ನೇ ಅವಲಂಬಿಸಿ ಭದ್ರಪಡಿಸುತ್ತಿದ್ದೆ . ಅಂಗಡಿಗೆ ಬಾಂಕಿಗೆ ಇತ್ಯಾದಿ ಆಗಾಗ ಹೋಗಬೇಕಾಗುತಿತ್ತು. ಬೀಗದಿಂದ ಎದುರಿನ ಚಕ್ರವನ್ನು ಕಂಬಕ್ಕೆ ಬಿಗಿದ ನಂತರ ಆರಾಮವಾಗಿ ಬಿಟ್ಟು ಹೋಗಿ ಕೆಲಸ ಮುಗಿಸಿ ಬರಲು ಸಾದ್ಯವಾಗುತಿತ್ತು. ಸೈಕಲು ಮಾತ್ರವಲ್ಲ ಅದರಲ್ಲಿದ್ದ ಚೀಲಗಳನ್ನೂ ಯಾರೂ ಮುಟ್ಟಿರಲಿಲ್ಲ.

ಈ ಚಿತ್ರ ಗಮನ ಸೆಳೆಯಲು ಇನ್ನೊಂದು ಕಾರಣ ಅಪಘಾತದ ಅನಂತರ ನಾಲ್ಕು ತಿಂಗಳು ಮಲಗಿ ಎದ್ದು ಈ ರೀತಿಯ walker ಉಪಯೋಗಿಸಿ ಪುನಹ ನಡೆಯಲು ಕಲಿತೆ. ಇದೊಂದು ಅಮೂಲ್ಯ ಪಾಠವನ್ನು ಕಲಿಸಿತು. ಮೂವತ್ತು ವರ್ಷ ನಡೆದವನಿಗೆ ನಾಲ್ಕು ತಿಂಗಳು ಮಲಗಿದರೂ ಪುನಹ ನಡೆಯಲು ದೇಹದ ಸಮತೋಲನ ಕಾಪಾಡಲು ಮರೆತುಹೋಗಿರಬಹುದು ಎಂದು ಮೊದಲು ಅನ್ನಿಸಿರಲಿಲ್ಲ. ಆದರೆ ನಡೆಯಲು ಇದು ಬಹಳ ಉಪಯುಕ್ತವೆನಿಸಿತು.

ನಡೆಯುವುದು ಮರೆತಂತೆ ಮಾತೃ ಬಾಷೆ ಬಗೆಗೊಂದು ಅನುಭವ. ಜರ್ಮನಿಯ ಹಾಂಬರ್ಗ್ ಪಟ್ಟಣ ದಾಟುವಾಗ ದಾರಿಯಲ್ಲಿ ಕಂಡ ಬಾರತದ ರಾಯಭಾರಿ ಕಛೇರಿಗೆ ಹೋಗಿದ್ದೆ - ಒಂದು ಬಾರತದ ಭೂಪಟ ಪಡಕೊಳ್ಳುವ ಉದ್ದೇಶವಿತ್ತು. ಹೊರಡುವಾಗ ನನ್ನಲ್ಲಿ ಭೂಪಟ ಇದ್ದರೂ ಎಲ್ಲಿಯೋ ಕಳಕೊಂಡಿದ್ದೆ. ನಿಮ್ಮೂರು ಎಲ್ಲಾಯಿತು ಎಂದವರಿಗೆ ಬೆರಳುಗಳ V ಆಕಾರದಲ್ಲಿ ತೋರಿಸಿ ಇದು ದಕ್ಷಿಣ ಬಾರತ. ಇದು ಪೂರ್ವ ಕರಾವಳಿಯಲ್ಲಿರುವ ಮದ್ರಾಸ್. ಇದು ಪಶ್ಚಿಮ ಕರಾವಳಿಯ ಮಂಗಳೂರು . ಅಲ್ಲಿಗೆ ಸಮೀಪ ನಮ್ಮೂರು ಎಂದು ಉತ್ತರಿಸುತ್ತಿದೆ.

ಆಗ ಹಾಂಬರ್ಗ್ ಪಟ್ಟಣದಲ್ಲಿ ನಮ್ಮೂರ ಪ್ರವಾಸಿಗಳು ವಿರಳ ಅಂತ ಕಾಣುತ್ತದೆ. ತುಂಬಾ ಅತ್ಮೀಯವಾಗಿ ಚಾ ಕೊಟ್ಟು ಉಪಚರಿಸಿದರು. ಅಲ್ಲಿ ನಮ್ಮ ಜಿಲ್ಲೆಯವರೇ ಆದ ಮೂಡಬಿದರೆಯವರು ಇಬ್ಬರು ಕೆಲಸಮಾಡುತ್ತಿದ್ದರು. ಅವರು ಸಂತೋಷ ಪಟ್ಟು ಕನ್ನಡ ಹಾಗೂ ತುಳುವಿನಲ್ಲಿ ಮಾತನಾಡಿದರು. ನಾನು ತಡವರಿಸಿದೆ. ತಿಂಗಳುಗಟ್ಟಲೆ ಇಂಗ್ಲೀಷ್ ಮಾತ್ರ ಉಪಯೋಗಿಸಿದ ಕಾರಣ ನನಗೆ ಪಕ್ಕನೆ ಕನ್ನಡದಲ್ಲಿ ತುಳುವಿನಲ್ಲಿ ಉತ್ತರಿಸಲು ಸಾದ್ಯವಾಗಲಿಲ್ಲ.

ತಿಂಗಳ ಅನಂತರ ನಾನು ಸಲೀಸಾಗಿ ನಡೆಯಲು ಪ್ರಾರಂಬಿಸಿದಾಗ ವಾಕರ್ ಅಟ್ಟ ಸೇರಿತು. ದಾರಾಳ ಸಂಪತ್ತು ಉಳ್ಳ ಸಂಬಂದಿಯೊಬ್ಬರು ಇದನ್ನು ಕೇಳಿ ಕೊಂಡು ಹೋದರು. ಅನಂತರ ಹಿಂತಿರುಗಿಸಲೇ ಇಲ್ಲ. ಹೆಚ್ಚಿನವರಿಗೆ ಇದರ ಉಪಯೋಗ ನನ್ನಂತೆ ತಾತ್ಕಾಲಿಕ. ಬೇರೆ ಪರಿಚಿತ ಬಡವರು ತಾತ್ಕಾಲಿಕವಾಗಿ ಉಪಯೋಗಿಸಲು ಕೇಳಿದಾಗ ನಾನು ಇಲ್ಲವೆನ್ನಬೇಕಾಯಿತು. ಎರವಲು ಪಡೆದವರು ಉಪಯೋಗಿಸಿದ ಅನಂತರ ಹಿಂತಿರುಗಿಸುವ ಸೌಜನ್ಯ ತೋರಿಸದೆ ಹೋದದ್ದು ಬಹಳ ಮನಸ್ಸಿಗೆ ನೋವಾಯಿತು.

Wednesday, September 23, 2009

ಪೋಕ್ರಾನ್ 2 ಟುಸ್ ಆದರೂ



ಈಗೊಂದು ವಾರದಿಂದ ದಿನವೂ ಪೋಕ್ರಾನ್ ಬಗೆಗೆ ಪತ್ರಿಕೆಗಳಲ್ಲಿ ಎರಡು ಸಾಲು ಮೀಸಲು. ಹತ್ತು ವರ್ಷ ಹಿಂದೆ ವಾಜಪೆಯಿ ಸಿಡಿಸಿದ ಅಣು ಪಟಾಕಿ ಯಶಸ್ವಿಯಾಗಿತ್ತೋ ಟುಸ್ ಎಂದಿತ್ತೋ ಎನ್ನುವುದು ನಮಗೆ ಎಂದೂ ತಿಳಿಯಲು ಸಾದ್ಯವಿಲ್ಲ. ರಾಷ್ಟ್ರೀಯ ಭದ್ರತೆ ನೆಪದಲ್ಲಿ ಎಲ್ಲವೂ ಗುಪ್ತ ಹಾಗೂ ತೆರೆಮರೆಯ ಆಟ. ಪೋಕ್ರಾನ್ ೨ ರಲ್ಲಿ ಸ್ಫೋಟಗೊಂಡ ಬಾಂಬು ಬರೇ ೨೫ ಕಿಲೋ ಟನ್ ಶಕ್ತಿ ಹೊರಹಾಕಿದೆ ಎನ್ನುತ್ತಾರೆ ಆಗ ಪಾಲ್ಗೊಂಡಿದ್ದ ವಿಜ್ನಾನಿ ಆರ್ ಸಂತಾನಂ. ಛೀ. ಛೀ ಅಲ್ಲವೇ ಅಲ್ಲ, ಅಲ್ಲಿ ೪೫ ಕಿಲೊ ಟನ್ ಶಕ್ತಿ ಉತ್ಪನ್ನವಾಗಿದೆ ಎಂದು ಸರಕಾರದ ಅಧಿಕೃತ ವಕ್ತಾರರ ಅಭಿಮತ. ನಮ್ಮ ಮಾಜಿ ರಾಷ್ಟ್ರಪತಿ ರಾಕೇಟು ವಿಜ್ನಾನಿ ಕಲಾಂ ಸಾಹೇಬರೂ ಪರೀಕ್ಷೆ ಯಶಸ್ವಿ ಎನ್ನುತ್ತಾರೆ. ಈಗ ಚರ್ಚೆಯಾಗುತ್ತಿರುವ ಕಾರಣ ಏನೆಂದರೆ ಇಪ್ಪತ್ತೈದು ಆದರೆ ಚೀನಾ ಪಾಕಿಸ್ತಾನವನ್ನು ಬೆದರಿಸಲು ಸಾಲದು. ನಲುವತ್ತೈದು ನಮ್ಮ ಘನಸ್ತಿಗೆಗೆ ಅಗತ್ಯ ಎನ್ನುತ್ತದೆ ಅಂದಿನ ಹಾಗೂ ಇಂದಿನ ಬಾರತ ಸರಕಾರ.

 ಅಮೇರಿಕ ಹಿರೋಶಿಮದ ಮೇಲೆ ಹಾಕಿದ ಒಂದು ಲಕ್ಷ ಜನರನ್ನು ಕೊಂದ ಬಾಂಬು ಬರೇ ಹದಿನೈದು ಕಿಲೋಟನ್ ಸ್ಪೋಟ ಉಂಟುಮಾಡಿದ್ದು. ನಾಗಸಾಕಿ ಮೇಲೆ ಹಾಕಿದ ಬಾಂಬು ಚೂರು ದೊಡ್ಡದು – ಇಪ್ಪತ್ತೊಂದು ಕಿಲೋ ಟನ್ ಸ್ಫೋಟ. ಆದರೆ ಏನು ಮಾಡುವುದು, ಅದು ಜನವಿರಳ ಊರಾದುದರಿಂದ ಬರೇ ಎಂಬತ್ತು ಸಾವಿರ ಜನ ಸತ್ತರು. ಹಾಕಿದಲ್ಲಿ ಜನ ಇರುತ್ತಿದ್ದರೆ ಹತ್ತು ಲಕ್ಷ ಜನರನ್ನೂ ಕೊಲ್ಲುವ ಸಾಮರ್ಥ್ಯ ಅದು ಹೊಂದಿತ್ತು. ನಮಗೀಗ ಐದು ಲಕ್ಷ ಜನವನ್ನಾದರೂ ಕೊಲ್ಲುವ ಬಾಂಬಿನ ಬಯಕೆ.

ಮೊನ್ನೆ  ನಮ್ಮ  ವಾಯು ದಳದ  ವಿಮಾನದಿಂದ  ಎಲ್ಲೋ ಉದುರಬೇಕಾಗಿದ್ದ ಬಾಂಬು ಎಲ್ಲೋ ಉದುರಿ ರಾಜಸ್ಥಾನದ ಲಕ್ಷಾಂತರ ಜನರಿಗೆ ನೀರುಣಿಸುವ ಇಂದಿರಾ ಗಾಂಧಿ ನಾಲೆ ಹಾನಿಯಾಗದೆ ಇರುವುದು ರಾಷ್ಟ್ರೀಯ ಪುಣ್ಯ ಎನ್ನಬಹುದು. ಸುಮಾರು ಇಪ್ಪತ್ತೈದು ಕಿಮಿ ದೂರದಲ್ಲಿ ಈ ಬಾಂಬಿನ ಗುರಿಯಾಗಿತ್ತು  ಅದುದರಿಂದ ಈ ಅಣು ಬಾಂಬು ಐದು ಲಕ್ಷ ಜನರನ್ನು ಕೊಲ್ಲುವ ಗುರಿ ಪೂರ್ತಿ ಗಡಿಯಾಚೆಯೋ ಅನ್ನುವುದು ಅನುಮಾನ. ಈ ವರ್ಷ ಗುರಿ ತಪ್ಪಿ ಬಾಂಬು ಉದುರುವುದು ಇದು ಮೂರನೇಯ ಬಾರಿ. ಅರು ತಿಂಗಳು ಹಿಂದೆ ಬಾಂಬು ಉದುರಿ ಬೆಳೆ ಕಳಕೊಂಡ ಮನೆಗೆ ಹಾನಿಯಾದ ರೈತರಿಗೆ ಇನ್ನೂ ಪರಿಹಾರ ವಿತರಣೆಯಾಗಿಲ್ಲ.
ಮೇರಾ ಭಾರತ್ ಮಹಾನ್



 ಶುಕ್ರವಾರ ೨೫ ಸೆಪ್ಟಂಬರ್ -ಬಾಲಂಗೋಚಿ

ಪೋಖ್ರಾನ್ ಸ್ಫೋಟದ ಬಗೆಗೆ ಇಂದಿನ ಪತ್ರಿಕೆಯಲ್ಲಿ ಅನಿಲ್ ಕಾಕೋಡ್ಕರ್ ನಾಗಸಾಕಿ ಅಣು ಬಾಂಬಿನ ಒಂಬತ್ತು ಪಾಲು ಶಕ್ತಿಯುತವಾದ ಬಾಂಬು ತಯಾರಿಸಲು ನಮಗೆ ತಾಕತ್ ಇದೆಯೆಂದು ಸ್ಪಷ್ಟ ಪಡಿಸಿದ್ದಾರೆ. ಈ ಬಗೆಗೆ ಯಾರಿಗೂ ಅನುಮಾನ ಬೇಡ.  

ನಾನು ಅಪಘಾತವಾಗಿ ಆಸ್ಪತ್ರೆಯಲ್ಲಿ ಮಲಗಿದ್ದ ದಿನಗಳಲ್ಲಿ ಅಮೇರಿಕದಲ್ಲಿ ವಾಸ್ತವ್ಯ ಇರುವ ಸಂಬಂದಿಕರು ಬಂದಿದ್ದರು. ಅಂದಿನ ಅದ್ಯಕ್ಷ ಬುಷ್ ಬಾರತದ ಬಗೆಗೆ ಕೆಣಕುವ ಮಾತುಗಳಾಡುತ್ತಿದ್ದ ಕಾಲ. ನನ್ನ ಅರೈಕೆ ನೋಡಿಕೊಳ್ಳುತ್ತಿದ್ದ ಸದಾ ತಮಾಷೆ ಮಾತುಗಳನ್ನು ಆಡುತ್ತಿದ್ದ ಡಾ| ತುಳಸಿದಾಸಣ್ಣ ಅಗ ಹೇಳಿದ್ದರು – ನಾವು ಜತೆಯಾಗಿ ಬಾಂಬು ಹಾಕಿದರೆ ನಿಮ್ಮ ಬುಷ್ ಸಹಾ ಓಡಿಹೋದಾನು. ಈ ಬಗೆಗೆ ಅನುಮಾನ ಬೇಡ.

Thursday, September 17, 2009

ತಮಿಳುನಾಡಿನಲ್ಲಿ ಕೃಷಿ ಸಲಹೆ ಕೊಟ್ಟರೆ “ದಂಡ”

ತಮಿಳುನಾಡು ಶಾಸಕರ ಆಲೋಚನೆ ಪ್ರಕಾರ ರೈತರಿಗೆ ಕೃಷಿ ಬಗೆಗೆ ತಿಳುವಳಿಕೆ ಸೊನ್ನೆ. ಅದುದರಿಂದ ಒಂದು ರೈತ ವಿರೋಧಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈ ಗಂಬೀರ ಪರಿಣಾಮದ ಮಸೂದೆಗೆ ಶಾಸಕರೆನ್ನುವ ಕುರಿಗಳು ಯಾವುದೇ ಚರ್ಚೆ ಇಲ್ಲದೆ ಕೈ ಎತ್ತಿಯೇ ಬಿಟ್ಟಿದ್ದಾರೆ. ಸುಳಿವು ಕೊಟ್ಟ ಸೆಲ್ವಂ ಎಂಬ ಮಾಜಿ ಸರಕಾರಿ ಅದಿಕಾರಿ ಹಾಲಿ ಸಾವಯುವ ಕೃಷಿಕ ಇದರ ಬಗೆಗೆ ಚೆನ್ನಾಗಿ ವಿವರಿಸಿದ್ದಾರೆ. Thanks Selvam.  

ಈ ಕಾನೂನು ಪ್ರಕಾರ ಕೃಷಿ ಸಲಹೆ ಕೊಡಲು ಹಕ್ಕು ಇರುವುದು ತಮಿಳುನಾಡಿನಲ್ಲಿ ಕೃಷಿ ಅಬ್ಯಾಸ ಮಾಡಿದವರಿಗೆ ಸಿಮಿತ. ಮೊನ್ನೆ ತೀರಿಹೋದ ಹಸಿರು ಕ್ರಾಂತಿ ಪಿತಾಮಹ ನೋರ್ಮನ್ ಬರ್ಲಾಗ್ ಅವರಿಗೆ ಸಹಾ ತಮಿಳು ರೈತರಿಗೆ ಸಲಹೆ ಕೊಡುವ ಯೋಗ್ಯತೆ ಇಲ್ಲ. ಉಳಿದವರು ಕೃಷಿ ಬಗೆಗೆ ಸಲಹೆ ಕೊಟ್ಟರೆ ಮೊದಲ ಬಾರಿ ಐದು ಸಾವಿರ ರೂಪಾಯಿ ಹಾಗೂ ಎರಡನೆಯ ಬಾರಿ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲ್ಪಡುತ್ತದೆ. ಮೂರನೆಯ ಬಾರಿ ಸಲಹೆ ಕೊಟ್ಟರೆ ಆರು ತಿಂಗಳು ಗೂಡು ವಾಸ ವಿಧಿಸುವರಂತೆ.

ನಮ್ಮ ಪರಂಪರೆಯ ಕೃಷಿ ಜ್ನಾನ ಹೆಚ್ಚೆಚ್ಚು ನಿರ್ಲಕ್ಷಿತವಾಗುವುದು ಸಮಾಜಕ್ಕೆ ಗಂಬೀರ ಅಪಾಯ. ತಮಿಳುನಾಡಿನ ಶಾಸನ ಕೃಷಿ ಪಾರಂಪರಿಕ ಜ್ನಾನ ಸಂಪೂರ್ಣ ನಿರ್ಲಕ್ಷಿಸುತ್ತದೆ. ತರಗತಿಯಲ್ಲಿಯೇ ಪ್ರಥಮ ಬಾರಿ ಬತ್ತದ ತೆನೆ ಕಂಡವ ಕೂಡ ರೈತ ಮಕ್ಕಳಿಂದ ಮೇಲು.

ಬಳಕೆದಾರರ ವೇದಿಕೆಯ ಡಾ ರವೀಂದ್ರನಾಥ ಐತಾಳರು ತಮ್ಮ ಉದಯವಾಣಿ ಅಂಕಣದಲ್ಲಿ ಅದುನಿಕ ವಿಜ್ನಾನ ಅಥವಾ ವೈದ್ಯ ವಿಜ್ನಾನ ಎಲ್ಲಿ ತಪ್ಪಿ ಬೀಳುವುದೆಂದು ಒಂದು ಕೂತೂಹಲಕರ ಉದಾಹರಣೆ ಕೊಟ್ಟಿದ್ದಾರೆ. ಇದು ಕೃಷಿಗೂ ಅನ್ವಯ. ಮಣ್ಣು ಇರುವುದು ಗಿಡ ಹಿಡಿದುಕೊಳ್ಳಲು ಮಾತ್ರ. ಒಳಸುರಿಗಳನ್ನೆಲ್ಲ ನಾವು ಹಾಕಿ ಬೆಳೆಸುತ್ತೇವೆ ಎಂದು ಬಹುಕಾಲ ರಸಾಯನಿಕ ಕೃಷಿಯ ದೋರಣೆಯಾಗಿತ್ತು.


ಶಿರಸಿಯ ಡಾ| ವೆಂಕಟ್ರಮಣ ಹೆಗಡೆಯವರು ತಾವು ಐದು ವರ್ಷ ಕೃಷಿ ವಿಚಾರ ಕಲಿತು ಪದವಿ ಪಡೆದದ್ದು. ನಮಗೆ ಡಾಕ್ಟರ್ ಕರೆದುಕೊಳ್ಳುವ ಹಕ್ಕುಂಟು ಹಾಗೂ ಮನುಷ್ಯರಿಗೆ ಚಿಕಿತ್ಸೆ ಕೊಡುವವರು ಕೆಂಪು ಚಿಹ್ನೆ ಮತ್ತು ಪಶು ವೈದ್ಯರು ನೀಲಿ ಚಿಹ್ನೆ ಬಳಸುವಂತೆ ನಾವು ಹಸುರು ಚಿಹ್ನೆ ಬಳಸುತ್ತೇವೆ ಎಂದು ಬಹಳ ಹಿಂದೆಯೇ ಹೇಳಿದ್ದಾರೆ. ಹಾಗೆ ತಮಿಳುನಾಡಿನ ಕಾನೂನು ಇವರನ್ನು ವೃತ್ತಿ ನಿರತ ಕೃಷಿ ತಜ್ನನೆಂದು ಗುರುತಿಸುತ್ತದೆ.

ಹೊಸತಾಗಿ ಮನೆಗೆ ಬಂದ ಸೊಸೆ ಎಲ್ಲರೂ ನನಗೆ ಹೊಂದಿಕೊಂಡರೆ ಗೃಹಶಾಂತಿ ಖಚಿತ ಎಂದಂತೆ ನಾವು ನಮ್ಮ ಕೃಷಿಯನ್ನು ಬಾಹ್ಯ ಒಳಸುರಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಿದ್ದೇವೆ. ಎಲ್ಲ ಆರೋಗ್ಯ ಸಮಸ್ಯೆಗಳಿಗೂ antibiotics ಮದ್ದು ಎಂಬಂತೆ ಸ್ಥಳೀಯ ಪರೀಸ್ಥಿತಿಯನ್ನು ಪಾರಂಪಾರಿಕ ಪದ್ದತಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ.

ಪ್ರತಿಬಾರಿಯೂ ಬಿತ್ತನೆ ಬೀಜ ಮಾರುಕಟ್ಟೆಯಿಂದ ಖರೀದಿಸಬೇಕು. ಮುಂದಿನ ಬೆಳೆಗೆ ಕಾಪಾಡಬಾರದು ಎನ್ನುವ ಬೀಜ ಮಾರಾಟ ಕಂಪೆನಿ ರಕ್ಷಕ ಕಾನೂನಿನಂತೆಯೇ ಈ ಕಾನೂನು ಸಹಾ ರೈತರ ಹಿತಾಸಕ್ತಿಗೆ ಮಾರಕ. ಏಕೆಂದರೆ ಇಂದು ಸರಕಾರಿ ಅಧಿಕಾರಿಗಳ ವಿಜ್ನಾನಿಗಳ ನಿಷ್ಟೆ ಇರುವುದು ಒಳಸುರಿ ತಯಾರಿಸುವ ಬಹುರಾಷ್ಟ್ರೀಯ ಕಂಪೇನಿಗಳಿಗೆ. ಈ ಬೆಳವಣಿಕೆಯನ್ನು ಊಹಿಸುವಾಗ ರೈತರ ಭವಿಷ್ಯದ ಬಗೆಗೆ ಭಯ ಉಂಟಾಗುತ್ತದೆ.

Monday, September 14, 2009

ವಂಚಕರು ವಂಚಕರೇ ತ್ಯಾಗಿಗಳಲ್ಲ.

ಸಮಾಜಕ್ಕೆ ಮೋಸ ಮಾಡಿದ ವಂಚಕರು ವಂಚಕರೇ. ಪತ್ರಿಕೆ ಓದುವಾಗ ಅಂದದ ಮುಖದ ಹಿಂದಿರುವ ವಂಚನೆ ಕಥೆ ನೆನಪಾಯಿತು. ಯಾವುದಾದರು ದುಷ್ಟ ವ್ಯಕ್ತಿಯನ್ನು ಹೊಗಳಿದರೆ ತಪ್ಪಾಗಿ ಚಿತ್ರಿಸಿದರೆ ಬೇಸರವಾಗುತ್ತದೆ. ಪ್ರಜಾವಾಣಿಯಲ್ಲಿ ಮುಂದಿರುವ ವಾಕ್ಯಗಳನ್ನು ಕಂಡು ಹಾಗೆಯೇ ಆಯಿತು.


 ಪಾಕಿಸ್ತಾನದಲ್ಲಿ ಸಕ್ಕರೆ ಕೊರತೆ ಹೆಚ್ಚುತ್ತಿರುವಂತೆ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ತಮ್ಮ ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿಸದಂತೆ ಸ್ವಯಂ ನಿಷೇಧ ಹೇರಿಕೊಂಡಿದ್ದಾರೆ. ಪತ್ನಿ ಫೌಜಿಯಾ ಗಿಲಾನಿ ಅವರ ಮನವಿ ಮೇರೆಗೆ ಪ್ರಧಾನಿ ತಮ್ಮ ಮನೆಯ ಅಡುಗೆಭಟ್ಟರಿಗೆ ಸಿಹಿ ತಿನಿಸು ತಯಾರಿಸದಂತೆ ಆದೇಶಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಪ್ರಧಾನಿ ಸಿಬ್ಬಂದಿಯಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸಕ್ಕರೆ ಬಿಕ್ಕಟ್ಟು ಪರಿಹಾರವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಎನ್ನುವ ವರದಿ ಪ್ರಜಾವಾಣಿ ಪ್ರಕಟಿಸಿತು.  

ಪ್ರದಾನಿಯ ಪತ್ನಿ ಫೌಜಿಯಾ ಗಿಲಾನಿ ಹಿಂದೆ ತಮ್ಮ ಕಂಪೇನಿಗಳಿಗೆ ಬಹು ದೊಡ್ಡ ಸಾಲವನ್ನು ಪಡೆದು ಚಿಕ್ಕಾಸು ಹಿಂತಿರುಗಿಸದೆ ಕಳೆದ ವಾರವಷ್ಟೇ ಸಾಲ ಮುನ್ನಾ ಮಾಡಿಸಿಕೊಂಡವರು. ನ್ಯಾಯಾಲಯಕ್ಕೆ ಹಾಜರಾಗದ ಅವರಿಗೆ ಇದಕ್ಕಾಗಿ ಅವರ ಅನುಪಸ್ಥಿತಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲ್ಪಟ್ಟಿತ್ತು. ಆದರೆ ಮಾದ್ಯಮಗಳಿಗೆ ಇವರು ದೇಶಕ್ಕೆ ಮಾದರಿಯಾಗಲು ಸಿಹಿತಿಂಡಿ ವರ್ಜಿಸಿದವರು ಎನ್ನುವುದೇ ಸುದ್ದಿಯಾಗುತ್ತದೆ.  



ಶ್ರೀಸಾಮಾನ್ಯನ ಮಟ್ಟಿಗೆ ಪಾಕಿಸ್ಥಾನದಲ್ಲಿ ಇಂದು ಸಕ್ಕರೆ ಕನ್ನಡಿಯೊಳಗಿನ ಗಂಟಾಗಿದೆ ಎನ್ನುವುದಕ್ಕೆ ಅಲ್ಲಿನ ಪತ್ರಿಕೆಯ ಇಲ್ಲಿರುವ ಎರಡು ಚಿತ್ರಗಳು ಸಾಕ್ಷಿ. ಸಕ್ಕರೆ ಉದ್ಯಮ ಸರಕಾರವನ್ನು ತನ್ನ ಹಿಡಿತದಲ್ಲಿರಿಸಿಕೊಂಡು ಪರೀಸ್ಥಿತಿಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದೆಯಂತೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕ್ರಯ ಏರಿದರೂ ಇಳಿದರು ಅದನ್ನು ಚೆನ್ನಾಗಿ ಬಳಸಿಕೊಳ್ಳುವ ಈ ವರ್ಗ ಜನರನ್ನು ಚೆನ್ನಾಗಿ ಹಿಂಡುತ್ತವೆ.

ಉಚ್ಚ ನ್ಯಾಯಾಲಯ ಸಕ್ಕರೆ ಬಿಡುಗಡೆ ಮಾಡಲು ಆದೇಶಿಸಿದರೂ ಕ್ಯಾರೆ ಮಾಡದ ಗೋದಾಮುಗಳ ಮೇಲೆ ದಾಳಿ ಅನಿವಾರ್ಯವಾಗಿದೆ. ಹಬ್ಬದ ಕಾಲದಲ್ಲಿ ಸಕ್ಕರೆ ದುಬಾರಿ ಎಂದು ಜನರೆಲ್ಲ ಪರಿತಪಿಸುತ್ತಿದ್ದರೆ ಸರಕಾರದ ವಿಚಾರಣೆ ಮುಗಿಯಲು ಹತ್ತು ದಿನ ಬೇಕಂತೆ. ಅಷ್ಟರಲ್ಲಿ ಹಬ್ಬ ಮುಗಿದುಹೋಗಿರುತ್ತದೆ.  

ಪಾಕಿಸ್ಥಾನದಲ್ಲಿ ರಾಜಕೀಯ ತೂಕ ಉಳ್ಳವರು ಬಾಂಕ್ ಸಾಲ ಹಿಂದಿರುಗಿಸುವುದು ಅಪರೂಪ. ಠೇವಣಿಗಳಿಗೆ ಸೇಕಡಾ ಐದು ಬಡ್ಡಿ ಕೊಡುವ ಪಾಕಿಸ್ತಾನಿ ಬಾಂಕುಗಳು ಸಾಲಗಳಿಗೆ ಹತ್ತೊಂಬತ್ತರ ಬಡ್ಡಿ ವಿಧಿಸುತ್ತದೆ. ನಮ್ಮಲ್ಲಿ ಬಾಂಕುಗಳು ನಿರ್ವಹಿಸಲು ಸಾಲಗಳ ಮತ್ತು ಠೇವಣಿಗಳ ಮದ್ಯೆ ಬಡ್ಡಿಯಲ್ಲಿ ಶೇಕಡ ನಾಲ್ಕು ಐದು ವ್ಯತ್ಯಾಸ ಇರುವುದು ಸಾಮಾನ್ಯ. ಇಸ್ಲಾಂ ಬಡ್ಡಿ ವ್ಯವಹಾರ ನಿಷೇಧಿಸುತ್ತದೆ ಎನ್ನುತ್ತಾ ನಮ್ಮಲಿನ ಮೂರು ಪಾಲು ಬಡ್ಡಿ ವ್ಯತ್ಯಾಸದಲ್ಲಿ ಪಾಕಿಸ್ತಾನಿ ಬಾಂಕುಗಳು ನಿರ್ವಹಿಸುತ್ತವೆಯಂತೆ. ಅಪಾರ ಲಾಭವು ಈ ರಾಜಕೀಯ ಪುಡಾರಿಗಳ ಸಾಲ ಸರಿದೂಗಿಸಲು ಸಹಾಯ ಮಾಡುತ್ತದೆ.  

ಇಂದೀಗ ಪಾಕಿಸ್ತಾನದಲ್ಲಿ ಆ ತಾಲಿಬಾನರಿಗಿಂತ ಈ ರಾಜಕಾರಣಿ, ವರ್ತಕ, ಉದ್ಯಮಿಗಳಂತಹ ಆಂತರಿಕ ದಗಾಕೋರರೇ ಹೆಚ್ಚು ಅಪಾಯವೋ ಅನ್ನುವ ಸಂಶಯ ಬರುತ್ತಿದೆಯಂತೆ. ನಮ್ಮಲ್ಲೂ ದೇಶದ, ಸಮಾಜದ ಮಟ್ಟಿಗೆ ಇದು ನಿಜ ಅನಿಸುತ್ತದೆ. ಕೆಲವು ಹೆಸರುಗಳ ಬದಲಾಯಿಸಿದರೆ ಗಡಿಯಾಚೆಗಿನ ಈ ಕಥೆಗಳು ಕರ್ನಾಟಕಕ್ಕೆ ಬಾರತಕ್ಕೆ ಚೆನ್ನಾಗಿ ಅನ್ವಯಿಸುತ್ತದೆ. ಅದುದರಿಂದ ಇದನ್ನು ಬರೆಯುವ ಆಸಕ್ತಿ ಉಂಟಾಯಿತು.

Thursday, September 10, 2009

ಹಲಾಲ್ ಹುಡುಕು ತಾಣದ ಸೇವೆ ಆರಂಬ

ತಿಂಗಳ ಹಿಂದೆ ಯಹೂದಿಯರ ಹುಡುಕು ತಾಣ ಕೋಗಲ್ ಬಗೆಗೆ ಬರೆಯುವಾಗ ಮುಸ್ಲೀಮರ ಹುಡುಕು ತಾಣ ಸದ್ಯದಲ್ಲಿಯೆ ಕಾಣಿಸಿಕೊಳ್ಳಬಹುದೆನ್ನುವ ಸೂಚನೆ ಕೊಟ್ಟಿದ್ದೆ.ಅದು ಈಗ ನಿಜವಾಗಿದೆ. http://www.imhalal.com/ ಎನ್ನುವ ತಾಣ ಸೇವೆ ಪ್ರಾರಂಬಿಸಿದೆ.


ಬಂಟ್ವಾಳ ಕಾಲೇಜಿನಲ್ಲಿ ಬುರ್ಕಾ ಹಾಕಿ ಅನಾವಶ್ಯಕ ಗೊಂದಲ ಎಬ್ಬಿಸಿ ಕೊನೆಗೆ ಉಳ್ಳಾಲ ಕಾಲೇಜು ಸೇರಿದ ವಿದ್ಯಾರ್ಥಿನಿ ಅಯೇಶಾಳಂತವರಿಗೆ ಇದು ತುಂಬಾ ಅನುಕೂಲ. ದರ್ಮಸೂಕ್ಷ್ಮ ವಿಚಾರಗಳ ವಿಮರ್ಶೆಗೆ ಸಹಾಯಮಾಡಬಹುದು. ಹುಡುಕಾಟವನ್ನು ಸುಲಭಗೊಳಿಸುವುದು ಮಾತ್ರವಲ್ಲ ಇದರಲ್ಲಿ ಹಲಾಲ್ / ಹರಾಮ್ ಮೀಟರ್ ಅಳವಡಿಸಿದ್ದಾರೆ. ಅದುದರಿಂದ ಸಂಶಯ ಇದ್ದರೆ ಹುಡುಕಾಟದ ವಿಚಾರ ಎಷ್ಟರ ಮಟ್ಟಿಗೆ ಹರಾಮ್ ಎನ್ನುವುದು ಸೂಚನೆ ಸಿಗುತ್ತದೆ.

ಹರಾಮ್ ಪಟ್ಟಿಯಲ್ಲಿ ಮೂರು ವರ್ಗಗಳು.

ಹಲಾಲ್ : fascism, nigger, molester, murder and torture, kiss - ಸಂಪೂರ್ಣ ದರ್ಮಸಮ್ಮತವಾದದ್ದು .

ಹರಾಮ್ ವರ್ಗ ಒಂದು : Suicide bombings love, kissing and Nazi
ಅತ್ಮಹತ್ಯಾ ಬಾಂಬು ದಾಳಿ ಹರಾಮ್ ಪಟ್ಟಿಯಲ್ಲಿ ಸೇರುವುದು ಚರ್ಚಾಸ್ಪದ. ಇದು ನಿಜಕ್ಕೂ ಹಲಾಲ್ ಅಂದುಕೊಂಡಿದ್ದೆ.

ಹರಾಮ್ ವರ್ಗ ಎರಡು : Sex

ಹರಾಮ್ ವರ್ಗ ಮೂರು : Fornication , gay, lesbian and sexy - ಕೆಂಪು ಅಕ್ಷರ ಎಚ್ಚರಿಕೆಯೊಂದಿಗೆ ಬೇರೆ ಶಬ್ದಗಳ ಉಪಯೋಗಿಸಲು ಸೂಚನೆ. ಈ ವಿಭಾಗದಲ್ಲಿ ಹೆಚ್ಚು ಕಾರುಬಾರು ನಡೆಸಿದರೆ ನಮ್ಮ ಐಪಿ ವಿಳಾಸ ಪೋಲಿಸರಿಗೆ ರವಾನೆಯಾಗುವುದೋ ಗೊತ್ತಿಲ್ಲ

ತಮಾಷೆ ಇರೋದೆಂದರೆ Kiss ನಿಂದ kissing ಮತ್ತು sex ನಿಂದ sexy ಹೆಚ್ಚು ಹರಾಮ್ ಆಗುವುದು. ಪ್ರಾರ್ಥನೆ ಸಮಯದಲ್ಲಿ ಪ್ರಾಯುಷ: ಇದರಲ್ಲಿ ಸೇವೆ ನಿರಾಕರಣೆ ಇದ್ದರೂ ಇರಬಹುದು.





ಎಲ್ಲದರಲ್ಲೂ ಕೋಮು ವಾಸನೆ ಮೂಗಿಗೆ ಹೊಡೆಯುವ ಕಾಂಗ್ರೀಸು ಜಾಂಡೀಸು ಪಕ್ಷಗಳಿಗೂ ಇದು ಅನುಕೂಲ. ಚಿಕ್ಕ ಪುಟ್ಟ ವಿಚಾರಗಳಿಗೆ ಮಂಗನ ಬಾಲಕ್ಕೆ ಬೆಂಕಿ ಇಟ್ಟಂತೆ ವರ್ತಿಸುವ ಅವರಿಗೆ ಇಸ್ಲಾಂ ದರ್ಮ ಅರ್ಥೈಸಲು ಸಹಾಯವಾಗಬಹುದು.

ಇನ್ನು ನಮ್ಮ ಬಜರಂಗಿಗಳು ಸುಮ್ಮನಿರುವುದಾದರು ಹೇಗೆ ? ಹಿಂದೂ ರಾಷ್ಟ್ರಕ್ಕೆ ಅನುಗುಣವಾಗಿ ಒಂದು ಜಾಲ ಸ್ಥಾಪಿಸುತ್ತಿದ್ದರು. ಎಂದು ನಾನು ಬರೆದ ವಿಚಾರ ಸತ್ಯವಾಗುವ ದಿನ ಸದ್ಯದಲ್ಲಿಯೇ ಬರಬಹುದು. ಹಿಂದೂ ಹುಡುಕು ತಾಣ ಹಿಂಗಲ್ ದೇಶಕ್ಕೆ ಅರ್ಪಣೆಯಾಗುವ ಮತ್ತು . ಅದರಲ್ಲಿ ಇಂತಹ ನಿರ್ಬಂದಗಳು ಕಾಣಿಸಿಕೊಳ್ಳುವ ಸಾದ್ಯತೆಗಳಿವೆ.

Tuesday, September 08, 2009

ಇಫ್ತರ್ ರಾಜಕೀಯ ಹಿಂದೆ ಇಂದಿರಾ ಗಾಂಧಿ

ಈಗ ಇಪ್ತರ್ ಕೂಟಗಳ season ಪ್ರಾರಂಬವಾಗಿದೆ. ರಾಜಕೀಯದಲ್ಲಿ ತೂಕ ಇರುವವರೆಲ್ಲ ಇಪ್ತರ್ ಕೂಟ ಏರ್ಪಡಿಸುವವರೇ. ಯಾರ ಇಫ್ತರ್ ಪಾರ್ಟಿಯಲ್ಲಿ ಯಾರು ಯಾರು ಪಾಲ್ಗೊಂಡರು ಎನ್ನುವುದು ರಾಜಕೀಯ ಸಮತೋಲನ ದಿಕ್ಸೂಚಿ. ಅದುದರಿಂದ ಮಾದ್ಯಮ ಪ್ರಚಾರದ ಬೆಂಬಲವೂ ಇರುತ್ತದೆ. ಈ ಇಫ್ತರ್ ಕೂಟಗಳ ವಿಶೇಷ ಏನೆಂದರೆ ನಿಜಕ್ಕೂ ಹಸಿದವನಿಗೆ ಅಲ್ಲಿ ಪ್ರವೇಶವಿಲ್ಲ.  ಈ ರಾಜಕೀಯ ದೊಂಬರಾಟದ ಪ್ರಯೋಜನ ಅರಿತು ಇದರ ಲೋಕಪ್ರಿಯವಾಗಿ ಅಮೇರಿಕದಲ್ಲಿ ಪುಟ್ಟ ಜಾರ್ಜ್ ಬುಶ್ ಸಹಾ ಇಫ್ತರ್ ಪಾರ್ಟಿ ಏರ್ಪಡಿಸಿದ್ದರು. ಈ ವರ್ಷ ಬರಾಕ್ ಒಬಾಮ ಬುಶ್ ಮೇಲ್ಪಂಕ್ತಿ ಅನುಸರಿಸಿದ್ದಾರೆ.

ದಾರ್ಮಿಕ ನಾಯಕರ ಪ್ರಕಾರ ಉಪವಾಸ ಕೊನೆಗೊಳ್ಳುವುದು ವೈಯುಕ್ತಿಕವಾಗಿ ಸರಳವಾಗಿರಬೇಕು. ಇಲ್ಲಿ ನೂರಾರು ಜನ ಪಾಲ್ಗೊಂಡು ಅಡಂಬರದ ಪ್ರದರ್ಶನ ಜನಜಾತ್ರೆ ನಡೆಯುತ್ತದೆ. ಇದನ್ನು ಹಲವು ಮುಸ್ಲಿಂ ಪಂಡಿತರು ವಿರೋದಿಸುತ್ತಾರೆ. ದೆಹಲಿಯ ಶಾಹಿ ಇಮಾಂ ಹಲವು ವರ್ಷಗಳಿಂದ ಇದನ್ನು ಪ್ರತಿಭಟಿಸುತ್ತಲೇ ಇದ್ದಾರೆ. ಇವರ ಮಾತಿಗೆ ಯೋಗ್ಯ ಬೆಲೆ ದೊರಕುತ್ತಿದ್ದರೆ ಇಂದು ಇತರ ದರ್ಮದ ಜನರು ಮಾತ್ರ ಇಫ್ತರ್ ಪಾರ್ಟಿಯಲ್ಲಿ ಸೇರಲು ಸಾದ್ಯ.

ಇದರ ಮೂಲದ ಬಗೆಗೆ ಎರಡು ವದಂತಿಗಳಿವೆ. ಅವರ  ಪಾಲ್ಗೊಳ್ಳುವಿಕೆ ಮೊದಲ ಕೂಟದಲ್ಲೋ ಎರಡನೆಯದರಲ್ಲಿಯೋ ಅಸ್ಪಷ್ಟ. ಅಂತೂ ಸಂಪ್ರದಾಯ ಬೆಳವಣಿಕೆಯಲ್ಲಿ ಇಂದಿರಾ ಗಾಂಧಿ ಪ್ರದಾನ ಪಾತ್ರ ವಹಿಸುತ್ತಾರೆ.

ಇಂದಿರಾ ಗಾಂಧಿ ಒಬ್ಬ ಕೇಂದ್ರ ಸರಕಾರದ ಹಿರಿಯ ಮುಸ್ಲೀಮ್ ಅಧಿಕಾರಿಯನ್ನು ಬೇಟಿ ಮಾಡಲು ಇಚ್ಚಿಸಿದರು. ಸಂದೇಶ ಕಳುಹಿಸಲು ಸಹಾಯಕರಿಗೆ ಹೇಳಿದರು. ಆಗ ಆ ಸಹಾಯಕ ಅದು ಉಪವಾಸ ಕೊನೆಗೊಳ್ಳುವ ಸಮಯವಾದುದರಿಂದ ಅವರು ಬರಲಿಕ್ಕಿಲ್ಲ ಎಂದಾಗ ಅವರಿಗೆ ಇಲ್ಲಿಯೇ ಉಪವಾಸ ಕೊನೆಗೊಳಿಸಲು ವ್ಯವಸ್ಥೆ ಮಾಡಿ ಎಂದು ಹೇಳಿದರು.

ಎರಡನೆಯದು ಅಂದಿನ ಸಚಿವ ಗುಜ್ರಾಲ್ ಶಫಿ ಕುರೇಶಿ ಎನ್ನುವ ರೈಲು ಮಂತ್ರಿಯನ್ನು ಮಾತುಕತೆಗೆ ಅಹ್ವಾನಿಸಿದರು. ಕುರೇಶಿ ಬರೋದಿಲ್ಲ ಎನ್ನುವಾಗ ನಮ್ಮಲ್ಲಿಯೇ ಇಫ್ತರಿಗೆ ವ್ಯವಸ್ತೆ ಮಾಡುತ್ತೇನೆ ಮಾರಾಯ, ಬಾ ಎಂದ ಗುಜ್ರಾಲ್ ಮರುದಿನ ಇದನ್ನು ಇಂದಿರಾ ಕಿವಿಗೆ ಹಾಕಿದರು.


ಎರಡು ವರ್ಷ ಹಿಂದೆ ಡಾಕ್ಟರ್ ಯೆಡಿಯೂರಪ್ಪನ ಸರಕಾರಕ್ಕೆ ಬೆಂಬಲ ಹಿಂತೆಗೆದು ಕೊಂಡ ನಿದ್ದೇವೆ ಗೌಡ ಬೆಂಗಳೂರಿನಲ್ಲಿ ಇಫ್ತರ್ ಕೂಟ ಏರ್ಪಡಿಸಿದ್ದರು. ಗುಟ್ಟಾಗಿ ಎರಡೂ ಪಕ್ಷಗಳ ಸಂಪರ್ಕದಲ್ಲಿದ್ದು ಮುಂದಿನ ಹೆಜ್ಜೆ ಚಿಂತನೆಯಲ್ಲಿದ್ದರು. ಕೇಂದ್ರ ಸರಕಾರ ವಿಧಾನ ಸಭೆಯನ್ನು ವಿಸರ್ಜಿಸಿದ ಸುದ್ದಿ ಸಂಚಾರವಾಣಿಯಲ್ಲಿ ಕೇಳಿ ಕಳಾಹೀನರಾಗಿ ನೇರವಾಗಿ ಕಾರಿನಲ್ಲಿ ಬಂದು ಕುಳಿತು ನಡೆಯಪ್ಪ ಎಂದು ಸಾರಥಿಗೆ ಆದೇಶಿಸಿದರು.


ಬಾಗಿನ: ದುರ್ಬಳಕೆ ನಿಲ್ಲಲಿ ಎಂದು ಪ್ರಜಾವಾಣಿ ಓದುಗರೊಬ್ಬರು ನಿನ್ನೆ ಹೇಳಿದಂತೆ ಇಫ್ತರ್ ಸಂಪ್ರದಾಯ ಮುಸ್ಲೀಮರಿಗೆ ಸಿಮಿತವಾಗಲಿ ಎಂದು ಸಂಪ್ರದಾಯವಾದಿ ಮುಸ್ಲೀಮರು ಹೇಳುತ್ತಾರೆ. ಆದರೆ ಸದಾ ಸ್ವಾರ್ಥ ಸಾದನೆ ಚಿಂತಿಸುವ ರಾಜಕಾರಣಿಗಳು ಸುಮ್ಮನಿರುವುದು ಹೇಗೆ ?

Saturday, September 05, 2009

ಹಣಕಾಸಿನ ತುಲನಾತ್ಮಕ ಹೋಲಿಕೆ

ನಾವು ಬೇರೆ ಊರಿನ ಬಗೆಗೆ ಮಾತನಾಡುವಾಗ ಅಲ್ಲಿನ ಜನರ ಜೀವನ, ಹವಾಮಾನ ಇತ್ಯಾದಿ ವಿಚಾರಿಸುತ್ತೇವೆ. ತುಲನಾತ್ಮಕ ಹೋಲಿಕೆ ವಾಪಾಸ್ ಬಂದಾಗ ನನ್ನಲ್ಲಿ ಹಲವರು ಕೇಳಿದ ಸಾಮಾನ್ಯ ವಿಚಾರ. ಎಲ್ಲವೂ ಬಿನ್ನವಾಗಿರುವ ಕಾರಣ ಹೋಲಿಕೆ ಕಷ್ಟಸಾದ್ಯ. ಇದಕ್ಕೊಂದು ಪರಿಹಾರವಾಗಿ ಹಣಕಾಸು ಪತ್ರಿಕೆಯೊಂದು ಪ್ರತಿವರ್ಷ ಬರ್ಗರ್ ಸೂಚ್ಯಾಂಕ ಪ್ರಕಟಿಸುತ್ತದೆ.

ಮಕ್ಡೊನಾಲ್ಡ್ ಹೋಟೆಲ್ ಹೆಚ್ಚಿನ ದೇಶಗಳಲ್ಲಿ ಮಾರುವುದು ಒಂದೇ ಪ್ರಮುಖ ಮಾಲು. ಹಾಮ್ ಬರ್ಗರ್ ಹೆಸರಿನ ಚಪ್ಪಟೆಯಾದ ದನದಮಾಂಸದ ತುಂಡು ಇಟ್ಟಿರುವ ಕತ್ತರಿಸಿದ ಬನ್. ಜತೆಯಲ್ಲಿ ಚೂರು ಸೊಪ್ಪು ತರಕಾರಿ, ಈರುಳ್ಳಿ ತುಂಡು ಇತ್ಯಾದಿ ಹಾಕಿದ ೫೪೦ ಕಾಲರಿಯ ಪಾಕ. ಆದರೆ ಬೇರೆ ಬೇರೆ ದೇಶಗಳಲ್ಲಿ ದರಪಟ್ಟಿಯಲ್ಲಿ ಮಾತ್ರ ಬಹಳಷ್ಟು ವ್ಯತ್ಯಾಸ. ದನದ ಮಾಂಸಕ್ಕೆ ನಮ್ಮಲ್ಲಿ ನಿರ್ಬಂದ ಇರುವ ಕಾರಣ ಬಾರತ ಈ ಪಟ್ಟಿಯಲ್ಲಿ ಗೋಚರಿಸುವುದಿಲ್ಲ.

ಕೆಲವು ದೇಶದಲ್ಲಿ ದುಬಾರಿ, ಕೆಲವರಲ್ಲಿ ಅಗ್ಗವಾಗಿ ಆ ದೇಶದ ಹಣದ ಮೌಲ್ಯವನ್ನು ಈ ಸೂಚ್ಯಾಂಕ ಬೊಟ್ಟು ಮಾಡಿ ತೋರಿಸುತ್ತದೆ. ಅಲ್ಲಿನವರ ಜೀವನಮಟ್ಟ, ಅಲ್ಲಿಗೆ ಹೋದರೆ ಪ್ರವಾಸಿಗಾಗುವ ಖರ್ಚು ಇತ್ಯಾದಿಗಳ ಸೂಚನೆ ಕೂಡುತ್ತದೆ. ಅಮೇರಿಕದಲ್ಲಿ 3.57 ಡಾಲರಿಗೆ ಸಿಗುವ ಬರ್ಗರ್ ಚೀನಾದಲ್ಲಿ ಬರೇ 1.82 ಡಾಲರಿಗೆ ಲಬಿಸುತ್ತದೆ. ಅದೇ ಬರ್ಗರಿಗೆ ನಾರ್ವೆ ದೇಶದಲ್ಲಾದರೆ 6.1 ಡಾಲರ್ ಸ್ವೇಡನಿನಲ್ಲಿ 4.93 ಡಾಲರ್ ಕೊಡ ಬೇಕು. ನಾರ್ವೆ ಸ್ವೇಡನ್ ದುಬಾರಿ ಎನ್ನುವುದು ಸ್ಪಷ್ಟ ವಿಚಾರ.

ನಮ್ಮ  ಸಂಬಂದಿಕರು   ಹೋಗಿದ್ದರು ಅಮೇರಿಕಕ್ಕೆ, ಮಗಳ ಹೆರಿಗೆಗೆ. ವಾಪಾಸು ಬರುವಾಗ ಅಜ್ಜನ ತಲೆತುಂಬಾ ಕೂದಲು. ವಾಪಾಸ್ ಹೋದ ನಂತರ ಬಾರತದಲ್ಲಿಯೇ ಕಟಾವ್ ಮಾಡಿಸಿ ಎಂದು ಮಗಳು ಅಳಿಯ ಹೇಳಿದರೂಂತ ಕಾಣುತ್ತದೆ. ಇದು ನೆನಪಾಗಲು ಕಾರಣ ಮೊನ್ನೆ ಹೋಲಿಕೆಯ ಬಗೆಗೆ ಹುಡುಕಾಟದಲ್ಲಿ ಒಂದು ಉತ್ತಮ ಉದಾಹರಣೆ ಸಿಕ್ಕಿತು. ಅದನ್ನೇ ಇಲ್ಲಿ ಅಂಟಿಸುತ್ತಿದ್ದೇನೆ. ಅಮೇರಿಕದಲ್ಲಿ ಕ್ಷೌರಿಕನ ಶುಲ್ಕ ದುಬಾರಿ ಎಂದು ಅಲ್ಲಿನವರೇ   ಹೇಳಿಕೊಳ್ಳುತ್ತಿದ್ದಾರೆ. 

After all, haircuts can't be exported, and this is almost a direct measure of purely labor costs. In the USA, I pay ~$18 for a haircut, inclusive of tips and taxes. In India, on a vacation, I paid Rs.33.75 for a haircut, which is $0.68. Using this exchange, labor is 26.6666 times cheaper in India. 

ಸೈಕಲ್ ಪ್ರವಾಸದಲ್ಲಿರುವಾಗ ನಾನೊಮ್ಮೆ ಅಮೇರಿಕದಲ್ಲಿ ಕತ್ತರಿಗೆ ತಲೆಯೊಡ್ಡಿದ್ದೆ. ಅಲ್ಲಿನ ಹಳ್ಳಿಗಳಲ್ಲಿರುವ ಹೆಂಗಸರು ಮನೆಯಲ್ಲಿರುವ ಗಂಡ ಹಾಗೂ ಮಕ್ಕಳ ತಲೆಗೂದಲು ಕತ್ತರಿಸುವುದು ಸಾಮಾನ್ಯ. ಗಂಡ ಎರಿಕ್ ನ ತಲೆಗೂದಲು ನಾನು ಕತ್ತರಿಸೋದು, ಬೇಕಾದರೆ ನಿನ್ನ ತಲೆಗೂದಲು ಕತ್ತರಿಸುತ್ತೇನೆ ಎಂದು ಅತಿಥ್ಯ ಕೊಟ್ಟ ಎರಿಕ್- ಆನ್ ಅವರಲ್ಲಿ ಆತ್ಮೀಯರಾದ ಮನೆಯೊಡತಿ ಆನ್ ಹೇಳಿದಾಗ ನಾನು ಮರುಮಾತಿಲ್ಲದೆ ಒಪ್ಪಿದೆ. ಅಂದು ನನಗೆ ಹತ್ತು ಡಾಲರ್ ಉಳಿಯಿತು. ಮೂರು ತಿಂಗಳ ಬೆಳೆದಿದ್ದ ತಲೆಗೂದಲು ಕಟಾವ್ ಅಯ್ತು.

Thursday, September 03, 2009

ನೂರು ದಿನದಲ್ಲಿ ಹವಾಮಾನ ಸಮಾವೇಶ

ಹಿಮಾಲಯ ಪರ್ವತಗಳ ಮೇಲೆ ಅಪಾರ ಪ್ರಮಾಣದಲ್ಲಿ ಹಿಮಬೀಳುತ್ತದೆ. ಬೇಸಿಗೆಯಲ್ಲಿ ಆ ಹಿಮ ಕರಗಿ ನೀರಾಗಿ ಈ ಪರಿಸರದಲ್ಲಿ ಜನ್ಮ ತಾಳುವ ಏಳು ಬೃಹತ್ ನದಿಗಳಲ್ಲಿ ಹರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೂಮಿ ಉಷ್ಣಾಂಶದಿಂದಾಗಿ ಬೀಳುವ ಹಿಮ ರೂಪಿಸುವ ನೀರ್ಗಲ್ಲು ಗಣನೀಯವಾಗಿ ಕಡಿಮೆಯಾಗುತ್ತಿದ್ದು ಈ ನದಿಗಳ ದಡದಲ್ಲಿರುವ ೧.೩ ಬಿಲಿಯ ಜನರು ಸದ್ಯದಲ್ಲಿಯೇ ನೀರಿನ ಕೊರತೆ ಅನುಭವಿಸುವಂತಾಗಿದೆ.


ನೂರು ದಿನಗಳಲ್ಲಿ ಸ್ವೇಡನ್ ದೇಶದ ಕಾಪೆನ್ ಹಾಗನ್ ಪಟ್ಟಣದಲ್ಲಿ ಜಗತ್ತಿನ ರಾಜಕೀಯ ಮುಖಂಡರು ಸಭೆ ಸೇರಲಿದ್ದಾರೆ. ಇದರನ್ನು ಗಮನಸೇಳೆಯುವ ಅಂಗವಾಗಿ ಚೀನಾದ ಬೀಜಿಂಗಿನಲ್ಲಿರುವ ಭೂಮಿ ದೇವಾಲಯದಲ್ಲಿ ನೂರು ಮಂಜುಗಡ್ಡೆಯ ಮಕ್ಕಳ ವಿಗ್ರಹಗಳನ್ನು ನಿರ್ಮಿಸಲಾಗಿತ್ತು. ಭವಿಷ್ಯದ ಗಂಬೀರತೆಯನ್ನು ಸೂಚಿಸಲು ಕರಗುವ ಕರಗುತ್ತಿರುವ ವಿಗ್ರಹಗಳೇ ಸಾಕ್ಷಿ ಎನ್ನುವಂತಿತ್ತು.

ಈ ಸಭೆಯಲ್ಲಿ ಪ್ರಪಂಚದ ಮುಖ್ಯ ದೇಶಗಳು ಈ ಸನ್ನಿವೇಶವನ್ನು ಎದುರಿಸುವ ಬಗೆಗೆ ಗಂಬೀರ ಚರ್ಚೆ ನಡೆಸಲಿವೆ. ಭಾರತ ಮತ್ತು ಚೀನ ಈ ಸಮಾವೇಶದಲ್ಲಿ ಮುಖ್ಯ ಪಾತ್ರ ವಹಿಸಲಿದ್ದು ಅಮೇರಿಕ ಹಾಗೂ ಯುರೋಪಿಯನ್ ದೇಶಗಳೊಂದಿಗೆ ತಮ್ಮ ಪಾಲಿನ ನಿರ್ವಹಣೆ ಚರ್ಚಿಸಲಿವೆ. ಇದು ಪರೋಕ್ಷವಾಗಿ ಪ್ರಪಂಚದ ಆರು ಬಿಲಿಯ ಜನರ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ.



ಪುಟ್ಟ ಮಗು ಕೊಡೆ ಹಿಡಿಯುವ ಮೂಲಕ ತನ್ನ ಪ್ರಯತ್ನ ಮಾಡುವುದೋ ? ಈ ಜಾಗತಿಕ ಆಂದೋಲನದಲ್ಲಿ ನೀವು ಸಹಾ ಕೈ ಜೋಡಿಸಬಹುದು. Greenpeace ತಾಣದಲ್ಲಿ ಸಹಿ ಹಾಕಬಹುದು. ರಾಜಕೀಯ ಮುಖಂಡರಿಗೆ ಒತ್ತಡ ಹಾಕಲು ಸಮಯ ಸಿಮಿತವಾಗಿದೆ. ತ್ವರೆ ಮಾಡಿ.

ಮೊನ್ನೆ ಯಾರೋ ಒಬ್ಬರು ಭೂಮಿಯ ಉಷ್ಣಾಂಶ ಹೆಚ್ಚುವುದಕ್ಕೆ ಪುರಾವೆಗಳಿಲ್ಲ. ಎಲ್ಲವೂ ಪರಿಸರವಾದಿಗಳ ವಿಜ್ನಾನಿಗಳು ಮಾಡುತ್ತಿರುವ ಅಂಕಿ ಸಂಖ್ಯೆಗಳ ದೊಂಬರಾಟ ಎಂದರು.  ಅವರಿಗೆ ಅರ್ಥಮಾಡಿಸಲು  ಈ ಚಿತ್ರ ತೋರಿಸಬೇಕಾಯಿತು.