Tuesday, October 27, 2009

ನ್ಯೂ ಯೋರ್ಕಿನಲ್ಲಿ ಜೇನು ಪೆಟ್ಟಿಗೆ ಇಟ್ಟ ಯಶವಂತ ಡಾಕ್ಟ್ರು



ಗಗನಚುಂಬಿ ಕಟ್ಟಡಗಲೇ ತುಂಬಿರುವ ನ್ಯೂ ಯೋರ್ಕ್ ಪಟ್ಟಣ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರದಲ್ಲಿ ಜೇನು ಗೂಡಿಗೆ ಅವಕಾಶವೇ ಇಲ್ಲ. ಹೀಗಿರುವಾಗ ಡಾ ಯಶವಂತ್ ಚಿತಾಲ್ಕರ್ ಎಂಬ ಮನಶಾಸ್ತ್ರಿಗಳ ಟೆರೇಸಿನ ಚಿತ್ರ ನನಗೆ ಕಂಡಾಗ ಆಶ್ಚರ್ಯವಾಯಿತು. ಚಿತ್ರದಲ್ಲಿ ಕಾಣುವಂತೆ ಅವರಲ್ಲಿ ಹಲವು ಬಗೆಯ ಗಿಡಗಳು ಮಾತ್ರವಲ್ಲ ಎರಡು ಜೇನು ಗೂಡುಗಳೂ ಇವೆ.

ಇದೀಗ ಜೇನು ನೊಣಗಳು ಮೊಬೈಲ್ ಟವರಿನಿಂದಾಗಿ ಗೂಡಿಗೆ ವಾಪಾಸಾಗದೆ ನಾಶವಾಗುತ್ತಿರುವ ಸುದ್ದಿ ಮದ್ಯೆ ಅಮೇರಿಕದ ಪಟ್ಟಣಗಳಲ್ಲಿ ಜೇನು ಸಾಕುವ ವಿಚಾರ ಕೇಳಿ ಕುಶಿಯಾಯಿತು. ಸಾಲು ಮನೆಯಲ್ಲಿ ವಾಸಿಸುವ ಇವರ ವಸತಿಯ ಮೇಲೆ ತರಕಾರಿ ಹಾಗೂ ಜೇನು ಸಾಕಣೆ ಸ್ಪೂರ್ತಿದಾಯಕ ವಿಚಾರ.

ಪಟ್ಟಣ ಕೃಷಿ ಮುಖ್ಯವಾಗಿ ತರಕಾರಿ ಬೆಳೆಯುವುದು ಕನ್ನಡ ಓದುಗರಿಗೆ ಹೊಸ ವಿಚಾರವಲ್ಲ. ಹಾಸನದಲ್ಲಿ ಡಾ| ವಿಜಯ ಅಂಗಡಿ ಮತ್ತು ಬೆಂಗಳೂರಿನಲ್ಲಿ ಶ್ರೀಮತಿ ಅನುಸೂಯ ಶರ್ಮ ಇದರ ಮಾಡಿ ಪ್ರಚರಿಸುತ್ತಿದ್ದಾರೆ. ಅದರೆ ಜೇನು ಗೂಡು ???

ಸ್ವಲ್ಪ ಸಮಯ ಹಿಂದೆ ಅಲ್ಲೊಂದು ಗೂಡಿನಲ್ಲಿ ಜೇನು ನೊಣಗಳು ಸಾಲಾಗಿ ಗೂಡಿಗೆ ಬರುವುದು ಹೋಗುವುದು ಕಂಡ ಯಶವಂತ್ ಡಾಕ್ಟ್ರು ಅದರ ಸಮ್ಮೋಹನಕ್ಕೆ ಒಳಗಾದರು. ಅವರು ಗೂಡು ಇಟ್ಟುಕೊಳ್ಳುವುದೆಂದರೆ ಹಾರುವ ಕೀಟಗಳು ನನಗೆ ದರ್ಮಾರ್ಥವಾಗಿ ಆಹಾರೋತ್ಪನ್ನ ತರುತ್ತವೆ. ಪಟ್ಟಣದಲ್ಲಿದ್ದುಕೊಂಡೇ ಕೃಷಿಕನಾಗಿರಲು ಸಾದ್ಯ ಎನ್ನುತ್ತಾರೆ. ಕಳೆದ ಚಳಿಗಾಲದಲ್ಲೊಂದು ತರಗತಿಯಲ್ಲಿ ಬಾಗವಹಿಸಿದ ಡಾ ಚಿತಾಲ್ಕರ್ ಈಗ ಎರಡು ಜೇನು ಕುಟುಂಬಗಳ ಒಡೆಯರು.

ಅಲ್ಲಿ ವಾಸವಾಗಿರುವ ಜಿಮ್ ಫಿಸ್ಚರ್ ಕಳೆದ ವರ್ಷ ಜೇನು ಸಾಕಣೆ ತರಗತಿ ಏರ್ಪಡಿಸಿದ್ದರು. ಅನಂತರ ಸುಮಾರು ಮೂವತ್ತು ಗೂಡುಗಳು ಹೆಚ್ಚಲು ಅದು ಪ್ರೇರಕ. ಮೇಷ್ಟ್ರು ಶಿಷ್ಯರೂ ಜತೆಗೂಡಿ ಸಹಕಾರಿ ಸಂಘಕ್ಕೆ ಅಡಿಗಲ್ಲು ಹಾಕಿದ್ದಾರೆ. ಉಪಕರಣಗಳ ಜತೆಯಾಗಿ ಖರೀದಿ ಮತ್ತು ಜೇನು ಮಾರಾಟ ಅವರ ಚಿಂತನೆಯಲ್ಲಿದೆ. ಪಟ್ಟಣಗಳಲ್ಲಿ ಜೇನು ಸಾಕಲು ನೆರೆಹೊರೆಯವರದೇ ಕಿರಿಕಿರಿ. ಯಾರೂ ಜೇನು ಗೂಡುಗಳ ಸಮೀಪ ವಾಸಿಸಲು ಇಷ್ಟಪಡುವುದಿಲ್ಲ. ಜೇನು ನೊಣಗಳ ಬಗೆಗೆ ಮನದಾಳದಲ್ಲಿರುವ ಮೂಢ ನಂಬಿಕೆಗಳೇ ಕಾರಣ ಎನ್ನುತಾರೆ ಫಿಸ್ಚರ್ ಮಾಷ್ಟ್ರು.

ಪಟ್ಟಣದಲ್ಲಿ ಪಾರ್ಕುಗಳ ಗಿಡ ಮರಗಳ ಸನೀಹ ಇದ್ದರೆ ಮಾತ್ರ ಜೇನು ಗೂಡುಗಳು ಪ್ರಯೋಜನಕಾರಿಯಾಗಬಹುದು ಎಂದು ನಿಕ್ ಕಾಲ್ಡರೋನ್ ಎನ್ನುವ ಕೀಟಶಾಸ್ತ್ರಿ ಮೇಷ್ಟ್ರು ಹೇಳುತ್ತಾರೆ. ನಮ್ಮ ಸುತ್ತಲೂ ಪರಿಸರ ಜೀವಂತವಾಗಿರಬೇಕಾದರೆ ಗಿಡಮರಗಳು ಇರಬೇಕು. ಅವುಗಳಿಗೆ ಪರಾಗಸ್ಪರ್ಷ ಮಾದುವ ಜೀವಿಗಳ ಅಗತ್ಯ ಇರುತ್ತದೆ. ಗೂಡುಗಳಿಗೆ ಅಪಾಯವಿದ್ದರೆ ಮಾತ್ರ ಜೇನು ಕೊಣಗಳು ಕಚ್ಚುತ್ತವೆ. ಗೂಡಿನಿಂದ ದೂರವಿರುವಾಗ ಹೆಚ್ಚಾಗಿ ಕಚ್ಚುವುದಿಲ್ಲ ಎನ್ನುತ್ತಾರೆ ಕಾಲ್ಡೆರೋನ್.

ಅಂದ ಹಾಗೆ ಡಾಕ್ಟ್ರು ಜೇನು ಸಾಕುವ ಸುದ್ದಿ ಯಾರಿಗೂ ಹೇಳಬೇಡಿ. ಯಾಕೆಂದರೆ ನ್ಯೂಯೋರ್ಕ್ ಪಟ್ಟಣದಲ್ಲಿ ಜೇನು ಸಾಕಣೆ ಕಾನೂನು ಬಾಹಿರ. ನಿಗದಿತ ದಂಡ ಎರಡು ಸಾವಿರ ಡಾಲರ್ ಅಂದರೆ ಒಂದು ಲಕ್ಷ ರೂಪಾಯಿ. ಇದನ್ನು ನ್ಯಾಯಬದ್ದ ಗೊಳಿಸಲು ಪ್ರಯತ್ನಗಳಾಗುತ್ತಿವೆಯಂತೆ.

ಇತ್ತೀಚಿನ ದಿನಗಳಲ್ಲಿ ಕೀಟ ಬಾದೆ ಹಾಗೂ ನೊಣಗಳು ದಿಕ್ಕು ತಪ್ಪಿ ಗೂಡಿಗೆ ವಾಪಾಸಾಗದ ನಿಗೂಡ ಸಮಸ್ಯೆಯಿಂದಾಗಿ ಇತರ ಕಡೆಗಳಂತೆ ಅಮೇರಿಕದಲ್ಲೂ ಜೇನು ಸಂತತಿ ನಾಶವಾಗುತ್ತಿದೆ. ಜತೆಯಲ್ಲಿ ಬಿನ್ನವಾದ ಕಾರಣಗಳಿಗೆ ಈಗ ಅಲ್ಲಿ ಪಟ್ಟಣದಲ್ಲಿ ಜೇನು ಸಾಕಣೆ ಜನಪ್ರಿಯವಾಗುತ್ತಿದೆಯಂತೆ. ಜೇನು ನೊಣ ವಿರಳವಾದರೆ ಅಹಾರ ಬೆಳೆಗಳಿಗೆ ಪರಾಗ ಸ್ಪರ್ಷ ಹೇಗೆ ಎಂದು ಚಿಂತಿತರಾದವರೂ ಇದ್ದಾರೆ. ಅವರ ಕೈತೋಟದ ಬೆಳೆಗಳು ಅಬಿವೃದ್ದಿ ಹೊಂದಲು ಜೇನು ಸಾಕುವವರಿದ್ದಾರೆ.

ಹತ್ತು ವರ್ಷಗಳಿಂದ ಜೇನು ಸಾಕುವ ನ್ಯೂ ಯೋರ್ಕಿನ ನಾಗರಿಕರೊಬ್ಬರ ಗಿಡಗಳಲ್ಲಿ ಹೂಗಳು ದಾರಾಳವಾಗಿದ್ದರೂ ಕಾಯಿ ಕಚ್ಚುತ್ತಿರಲಿಲ್ಲ. ತೋಟಗಾರಿಕೆ ಇಲಾಖೆಯವರಲ್ಲಿ ವಿಚಾರಿಸಲು ಇಲ್ಲಿ ಪರಾಗಸ್ಪರ್ಶಕ್ಕೆ ಕೀಟಗಳು ಇಲ್ಲ ಎನ್ನುವ ಉತ್ತರ ಬಂತು. ಅದನ್ನು ಕೇಳಿ ಅವರು ಜೇನು ಸಾಕಣೆ ಪ್ರಾರಂಬಿಸಿದರು. ಈಗ ಕುಶಿಯಾಗಿದ್ದಾರೆ.

ಸೈಕಲ್ ಪ್ರವಾಸದ ಸಮಯದಲ್ಲಿ ಅಮೇರಿಕದಲ್ಲಿ ಹೊವಾರ್ಡ್ ಪಾರ್ಕ್ಸ್ ಎನ್ನುವ ಮಿತ್ರರೊಬ್ಬರು ಸುಮಾರು ಇಪ್ಪತ್ತು ಅಡಿ ಉದ್ದ ಇಪ್ಪತ್ತು ಅಡಿ ಅಗಲದಲ್ಲಿ ಸುಮಾರು ಮೂವತ್ತು ಜೇನು ಕುಟುಂಬಗಳ ಸಾಕುತ್ತಿದ್ದರು. ಎಲ್ಲವೂ ಎರಡು ಕುಟುಂಬಗಳಿರುವ ಉಪ್ಪರಿಗೆ ಪೆಟ್ಟಿಗೆಗಳು. ಗೂಡಿನ ಪ್ರವೇಶ ದ್ವಾರದಲ್ಲಿ ಬೇರೆ ಬೇರ್ ಬಣ್ಣದಲ್ಲಿ ವಿವಿಧ + / - ಚಿಹ್ನೆಗಳು. ಜೇನು ನೊಣಗಳು ಅದನ್ನು ಗುರುತಿಸಿ ತಮ್ಮ ವಸತಿಗೆ ಹಿಂತಿರುಗುತ್ತವೆ ಎಂದಾಗ ನನಗೆ ಸೋಜಿಗ ಊಂಟುಮಾಡಿತ್ತು.





ಈಗ ಅಮೇರಿಕದ ಅದ್ಯಕ್ಷ ಒಬಾಮ ಅವರ ಬಿಳಿ ಮನೆ ಹುಲ್ಲು ಹಾಸಿನಲ್ಲೂ ಪ್ರಥಮ ಬಾರಿಗೆ ಜೇನು ಗೂಡಿದೆ. ಈ ಸಲ ಸುಮಾರು ನೂರು ಪೌಂಡ್ ಜೇನು ಸಿಗಬಹುದು. ಅದುದರಿಂದ ಬಿಳಿ ಮನೆ ಉಪಯೋಗಕ್ಕೆ ಮಾತ್ರವಲ್ಲ ಬಂದ ಗಣ್ಯ ಅತಿಥಿಗಳಿಗೆ ಉಡುಗರೆಯಾಗಿ ಕೊಡಲೂ ಸಾಕು ಎನ್ನುತಾರೆ ಅಲ್ಲಿನ ನಿರ್ವಾಹಕರು.  

Saturday, October 24, 2009

ಹಿಮಾಲಯದಲ್ಲೊಂದು ಯಶಸ್ವಿ ಮಳೆ ನೀರು ಕೊಯಿಲು.



ಚೆವಾಂಗ್ ನೋರ್ಫೆಲ್ ಅವರು ಕೃತಕ ನೀರ್ಗಲ್ಲನ್ನು ರೂಪಿಸುತ್ತಾರೆ. ಹಲವು ತಿಂಗಳು ಹರಿದು ಹೋಗುವ ನೀರು ಕಾಪಿಡುವ ಇದು ನಮ್ಮ ಮಳೆನೀರಿನ ಕೊಯಿಲಿನ ಇನ್ನೊಂದು ಸ್ವರೂಪ. ಇತ್ತೀಚೆಗೆ ನೈಜ ನಿರ್ಗಲ್ಲುಗಳು ಪರ್ವತದ ಮೇಲ್ಬಾಗಕ್ಕೆ ಹೆಚ್ಚು ಸಿಮಿತವಾಗುತ್ತಿವೆ ಮತ್ತು ತಡವಾಗಿ ನೀರಾಗುತ್ತವೆ. ಕೆಳಬಾಗದಲ್ಲಿದ್ದು ಆರಂಬದಲ್ಲಿ ನೀರಾಗುತ್ತಿದ್ದ ನೀರ್ಗಲ್ಲುಗಳು ಈಗ ರೂಪುಗೊಳ್ಳುವುದೇ ಇಲ್ಲ 

ಸರಳವಾದ ಅವರ ಪ್ರಯೋಗ ಸದ್ಯಕ್ಕೆ ಪರ್ಯಾಯಗಳಿಲ್ಲ. ಆದರೆ ಇದಕ್ಕೆ ಸಹಾ ನೀರು ಬೇಕು. ಹಿಮಗಾಲದಲ್ಲಿ ದೊರಕುವ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಲ್ಲಿನಿಂದ ನಿರ್ಮಿಸಲಾದ ದೊಡ್ಡ ಕೆರೆಗಳಲ್ಲಿ ಉಳಿಸಿಕೊಳ್ಳುವುದು. ಇದರ ಆಕಾರ ನಮ್ಮ ಕರಾವಳಿಯಲ್ಲಿ ತೋಡುಗಳಿಗೆ ಅಡ್ಡವಾಗಿ ಕಟ್ಟುವ ಕಟ್ಟದಂತಿರುತ್ತದೆ ಅನಿಸುತ್ತದೆ. ಚಳಿ ಹೆಚ್ಚಾದಂತೆ ಈ ಕೆರೆಗಳಲ್ಲಿರುವ ನೀರು ಹಿಮಗಡ್ಡೆಗಳಾಗುತ್ತವೆ.

ನೋರ್ಫಲ್ ಅವರ ಕೃತಕ ನೀರ್ಗಲ್ಲುಗಳು ಎಪ್ರಿಲ್ ಅಥವಾ ಮೆ ತಿಂಗಳಲ್ಲಿ ನೀರಾಗುತ್ತವೆ ಎನ್ನುತ್ತಾರೆ.
ನಾವು ಜೂನ್ ಇಪ್ಪತ್ತೊಂದರ ನಂತರ ಬಿತ್ತನೆ ಮಾಡಿದರೆ ಬೆಳೆ ಬೆಳೆಯಲು ಸಾದ್ಯವೇ ಇಲ್ಲ ಎನ್ನುವ ಗಾದೆ ಮಾತಿದೆ. ಈ ವರ್ಷ ನೀರಿನ ಆಗಮನ ವಿಳಂಬವಾಗಿ ಜೂನ್ ಇಪ್ಪತ್ತೆಂಟಕ್ಕೆ ಬಿತ್ತನೆ ಮಾಡಿದೆವು ಎನ್ನುತ್ತಾರೆ ಅಲ್ಲಿನ ರೈತರೊಬ್ಬರು.

ಮೊದಲು ಹೊಲದಲ್ಲಿ ತುಂಬಾ ಹಿಮ ಇರುತಿತ್ತು. ಈಗ ಇಲ್ಲವೇ ಇಲ್ಲ ಎನ್ನುತ್ತಾರೆ ಹಳ್ಳಿಯ ಜನ. ಶೇಕಡ ಎಂಬತ್ತರಷ್ಟು ರೈತರು ನೀರ್ಗಲ್ಲು ನೀರಾಗುವುದರನ್ನೇ ಅವಲಂಬಿಸುತ್ತಾರೆ. ಈ ಕೃತಕ ನೀರ್ಗಲ್ಲು ಬೇಗ ನೀರಾಗುವ ಕಾರಣ ರೈತರು ಬೇಗ ಬಿತ್ತನೆ ಮಾಡಬಹುದು. ಈಗ ಎತ್ತರದಲ್ಲಿ ಮಾತ್ರ ಉಳಿದಿರುವ ನೀರ್ಗಲ್ಲುಗಳು ತಡವಾಗಿ ನೀರಾಗುವ ಕಾರಣ ಬಿತ್ತನೆಯನ್ನು ವಿಳಂಬಿಸಬೇಕಾಗುತ್ತದೆ.

ನೋರ್ಫಲ್ ಹತ್ತು ನೀರ್ಗಲ್ಲು ನಿರ್ಮಿಸಿದ್ದಾರೆ. ಅತಿ ದೊಡ್ಡದು ಒಂದು ಮೈಲು ಉದ್ದವಾಗಿತ್ತು. ೨೦೦೬ರಲ್ಲಿ ಬಂದ ಅಪರೂಪದ ಮಳೆ ಈ ಕೃತಕ ತಡೆಯನ್ನು ಕೊಚ್ಚಿಕೊಂಡು ಹೋಯಿತು. ಉತ್ತಮ ಕೃತಕ ನೀರ್ಗಲ್ಲು ನೀರ್ಮಾಣಕ್ಕೆ ಸುಮಾರು ಇಪ್ಪತೈದು ಲಕ್ಷ ರೂಪಾಯಿ ಅಗತ್ಯ. ಆದರೆ ಅವರಿಗೆ ಸರಕಾರದಿಂದ ಐದು ವರ್ಷದಲ್ಲಿ ಹತ್ತು ಲಕ್ಷ ದೊರಕುತ್ತದೆ. ಪತ್ರಕರ್ತರು ಬಂದು ನೋಡಿದ್ದಾರೆ ಹಾಗೂ ಬರೆದಿದ್ದಾರೆ. ಈ ವರೆಗೆ ಯಾವ ವಿಜ್ನಾನಿಯೂ ಈ ಕಡೆ ತಲೆ ಹಾಕಲಿಲ್ಲ. ಅದರ ಬಗೆಗೆ ಅವರಿಗೆ ಗೊಡವೆ ಇಲ್ಲ. ಪಂಡಿತ ಸಭೆಗೆ ಈ ಜ್ನಾನ ತಿಳಿಸುವ ಬದಲು ತಾನು ಹಳ್ಳಿಗರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆಸಕ್ತ ಎನ್ನುತ್ತಾರೆ ನೋರ್ಫೆಲ್.

ರಾಜದಾನಿ ಲೇಹ್ ನಲ್ಲಿ ಹೆಚ್ಚು ಪ್ರವಾಸಿಗಳು ಬರುವುದೂ ಸಮಸ್ಯೆ ಬಿಗಡಾಯಿಸಲು ಕಾರಣ. ಕಳೆದ ಎಂಟು ವರ್ಷಗಳಲ್ಲಿ ವಾರ್ಷಿಕ ಪ್ರವಾಸಿಗಳ ಸಂಖ್ಯೆ ಹದಿನೆಂಟು ಸಾವಿರದಿಂದ ಎಪ್ಪತ್ತನಾಲ್ಕು ಸಾವಿರಕ್ಕೆ ಏರಿದೆ. ದಿನಾ ಸ್ನಾನ ಶೌಚಾಲಯದಲ್ಲಿ ಫ್ಲಶ್ ಇತ್ಯಾದಿ ನೀರಿನ ಖರ್ಚು ಹೆಚ್ಚಿಸುವ ಅಬ್ಯಾಸಗಳು ಹೆಚ್ಚು ವ್ಯಾಪಕವಾಗುತ್ತಿವೆ. ಈಗ ದಿನಂಪ್ರತಿ ಏಳು ಲಕ್ಷ ಗಾಲನ್ ಪೊರೈಸುವ ಇಂಡಸ್ ನದಿಯಿಂದ ಹದಿನಾರು ಲಕ್ಷ ಗಾಲನ್ ನೀರು ಎತ್ತುವ ಯೋಜನೆ ಕಾರ್ಯಗತವಾಗುವ ಹಂತದಲ್ಲಿದೆ. ಇಂಡಸ್ ನದಿಯಿಂದ ಪಡಕೊಳ್ಳುವ ಪ್ರತಿ ಹನಿ ನೀರು ಪಾಕಿಸ್ತಾನದ ಕೃಷಿಗೆ ಅಷ್ಟರ ಮಟ್ಟಿಗೆ ಕೊರತೆ ಉಂಟು ಮಾಡುತ್ತದೆ. ಅವರಿಗೆ ಕಡಿಮೆಯಾದರೆ ನಮಗೇನು ಎನ್ನುವ ಮಾತು ಕೇಳಿಬರುತ್ತದೆ

 ಕಳೆದ ತಿಂಗಳು ಲಡಾಕಿನಲ್ಲಿ ನಡೆದ ಹವಾಮಾನ ಸಮಾವೇಶದಲ್ಲಿ ನೋರ್ಫೆಲ್ ದೃಶ್ಯ ವಿವರಣೆ ಕಾರ್ಯಕ್ರಮ ಕೊಟ್ಟಿದ್ದರು. ಹಮಾಮಾನ ಬದಲಾವಣೆಯಲ್ಲಿ ಲಡಾಖ್ ಮೊದಲು ಸಮಸ್ಯೆ ಅನುಭವಿಸುತ್ತದೆ. ಅದುದರಿಂದ ನಾವು ನ್ಯಾಯ ಬಯಸುತ್ತೇವೆ ಎಂದು ಸರಕಾರೇತರ ಸಂಸ್ಥೆ ನಡೆಸುವ ಪದ್ಮ ತಾಶಿ ಹೇಳುತ್ತಾರೆ. ಹವಾಮಾನ ನ್ಯಾಯ ಎಂದರೆ ಈ ಸಮಸ್ಯೆಗೆ ಮುಖ್ಯ ಕಾರಣವಾದ ಮುಂದುವರಿದ ದೇಶಗಳು ಪರಿಹಾರ ಹಣ ಕೊಟ್ಟರೆ ನೋರ್ಫೆಲ್ ಅವರ ಕಟ್ಟಗಳನ್ನು ಮತ್ತು ೨೦೦೬ ರ ನೆರೆಯಲ್ಲಿ ನಷ್ಟ ಅನುಭವಿಸಿದ ಹಳ್ಳಿಗಳನ್ನು ಪುನರ್ ನೀರ್ಮಾಣ ಮಾಡ ಬಹುದು.

ಪರೀಸ್ಥಿತಿ ಮುಂದುವರಿದರೆ ನಾವು ಮುಂದಿನ ತಲೆಮಾರಿಗೆ ಈ ಭೂಮಿಯನ್ನು ವರ್ಗಾಯಿಸುವುದಿಲ್ಲ. ನೀರು ಇಲ್ಲವೆನ್ನುವ ಸನ್ನಿವೇಶದಲ್ಲಿ ಲಡಾಖಿನ ಜನ ಗಂಟು ಮೂಟೆ ಕಟ್ಟಿ ಹೊರಡಬೇಕಾಗುತ್ತದೆ ಎನ್ನುವ ಚಿಂತನೆ ಅಲ್ಲಿನ ಹಿರಿಯರಲ್ಲಿದೆ.

ಕಾಶ್ಮೀರದಲ್ಲಿರುವ ಸಾವಿರಾರು ಜನರಿಗೆ ನೀರು ಪೊರೈಸುವ ಹಾಗೂ ಬಾರತದ ಅತಿ ದೊಡ್ಡ ನೀರ್ಗಲ್ಲು ಇತರ ಹಿಮಾಲಯದ ನೀರ್ಗಲ್ಲುಗಳಿಂದ ವೇಗವಾಗಿ ಚಿಕ್ಕದಾಗುತ್ತಿರುವುದು ಕಳವಳಕಾರಿ ವಿಚಾರ. ಕಳೆದ ನೂರು ವರ್ಷದಲ್ಲಿ ೧.೧ ಡಿಗ್ರಿ ತಾಪಾಮಾನ ಹೆಚ್ಚಿದೆ. ಕಾಶ್ಮೀರದ ಅತಿ ದೊಡ್ಡದಾದ ಜೇಲಂ ನದಿಗೆ ನೀರು ಪೊರೈಸುವ ಕಲಹೊಯಿ ನೀರ್ಗಲ್ಲು ಕಳೆದ ಮೂವತ್ತು ವರ್ಷಗಳಲ್ಲಿ ೧೧ ಚದರ ಕಿಮಿಗಳಲ್ಲಿ ೨.೬ ಚದರ ಕಿಮಿ ಕುಗ್ಗಿದೆ. ಕಾಶ್ಮೀರದ ಜನ ಈ ನೀರ್ಗಲ್ಲುಗಳನ್ನೇ ನೀರಿಗೆ ಅವಲಂಬಿಸುವ ಕಾರಣ ತಜ್ನರ ಪ್ರಕಾರ ಇದು ಬಹಳ ಗಂಬೀರ ವಿಚಾರ

ಈ ಬಗ್ಗೆ ನಮ್ಮ ಪರಿಸರ ಸಚಿವ ಜೈರಾಮ ರಮೇಶರು ಏನು ಮಾಡುತ್ತಿದ್ದಾರೆ ?? ಅವರು ಹವಾಮಾನ ಬದಲಾವಣೆ ಮತ್ತು ನಿರ್ಗಲ್ಲುಗಳ ಕುಗ್ಗುವುದಕ್ಕೆ ಇರುವ ಸಂಬಂದ ಇನ್ನೂ ಖಚಿತವಾಗಿಲ್ಲ. ಇನ್ನೂ ಹೆಚ್ಚು ಆ ಬಗ್ಗೆ ಸಂಶೋದನೆಗಳು ನಡೆಯಬೇಕು ಎಂದು ಆಗಸ್ತ್ ತಿಂಗಳಲ್ಲಿ ಅಪ್ಪಣೆ ಕೊಡಿಸಿದ್ದಾರೆ.

Tuesday, October 20, 2009

ಕಡಲತೀರದಲ್ಲಿ ಸದಾಸಂ



ಕಡಲ ತೀರದಲ್ಲಿ ಸದಾಸಂ (ಸಕಲ ದಾರಿ ಸಂಚಾರಿ) ಚಲಾಯಿಸುವುದು ಒಂದು ಅದ್ಬುತ ಅನುಭವ. ಅಂಗಳದಲ್ಲಿ ತೊಟದಲ್ಲಿ ಇನ್ನೂರು ಅಡಿ ನೇರ ದಾರಿ ಸಿಗದ ನಮಗೆ ಉದ್ದವಾದ ಸಮುದ್ರ ತೀರ ಬಹಳ ಕುಶಿಕೊಡುತ್ತದೆ. ಇದರಿಂದ ಮಕ್ಕಳು ಅನಿಲ ಸುನಿಲರು ತುಂಬಾ ಸಂತಸ ಪಟ್ಟರು. ಸವಾರಿ ಮಾತ್ರವಲ್ಲ ಹಲವು ಕಸರತ್ತುಗಳ ಅಬ್ಯಾಸ ಮಾಡಲು ಅವಕಾಶ ಮಾಡಿಕೊಡುತ್ತದೆ.

ಸೊಮೇಶ್ವರ ಕಡಲ ತೀರಕ್ಕೆ ನಮ್ಮ ಮನೆಯಿಂದ ಐವತ್ತು ಕಿಲೋಮೀಟರ್. ಹಿಂದಿನ ದಿನವೇ ಸದಾಸಂ ಮಾರುತಿ ವಾನಿನೊಳಗೆ ಹಾಕಿದ ಕಾರಣ ಬೆಳಗ್ಗೆ ಬೇಗನೆ ಹೊರಡಲು ಸಾದ್ಯವಾಯಿತು. ದಾರಿಯಲ್ಲೊಂದು ತಿಂಡಿ ನಿಲುಗಡೆ. ೦೯೩೦ಕ್ಕೆ ಸಮುದ್ರ ತೀರ ತಲಪಿದೆವು. ತಲಪಿದ ಕೂಡಲೇ ವಾಹನದಿಂದ ಇಳಿಸಿ ಸವಾರಿ ಪ್ರಾರಂಬಿಸಿದೆವು.

ಸದಾಸಂ ಚಕ್ರಗಳು ಮರಳಲ್ಲಿ ಸ್ವಲ್ಪ ಮಟ್ಟಿಗೆ ಹೂತು ಹೋಗುತ್ತವೆ. ಅದರಿಂದಾಗಿ ಇಂಜಿನ ವೇಗ ಸದಾ ಹೆಚ್ಚಿರುವ ಕಾರಣ ಅದಕ್ಕೆ ಘಾಟಿ ರಸ್ತೆಯ ಅನುಭವವಾಗುತ್ತದೆ. ಅಂದರೆ ಹೆಚ್ಚು ಒತ್ತಡ ಇರುತ್ತದೆ. ಪೆಟ್ರೋಲ್ ತುಂಬುವಾಗ ಮಾತ್ರ ಅದಕ್ಕೆ ಬಿಡುವು ಕೊಡಲು ನಮಗೆ ಸಾದ್ಯವಾದದ್ದು. ತಣಿಯಲು ಸ್ವಲ್ಪ ಅವಕಾಶ ಕೊಡೋಣ ಎಂದರೆ ಒಬ್ಬ ಸವಾರ ವಾಪಾಸಾಗುವಾಗ ಮತ್ತೊಬ್ಬ ತಯಾರಾಗುತ್ತಿದ್ದ.

ಮರಳರಾಶಿ ಏರುವಾಗ ವೇಗ ಇದ್ದರೆ ಉತ್ತಮ. ದಿಬ್ಬಗಳ ಏರಲಾಗದೆ ಸೋತಾಗ ಅಥವಾ ಸಮತಟ್ಟಾದರೂ ತಡೆ ಉಂಟಾದಾಗ ಚಕ್ರಗಳು ಮರಳು ಒಕ್ಕುವುದರಲ್ಲಿ ತೊಡಗುತ್ತದೆ. ಆಗಲೇ ಆದರೆ ವಿರುದ್ದ ದಿಕ್ಕಿನಲ್ಲಿ ಗೇರು ಬದಲಾಯಿಸಿ ಚಲಿಸಿದರೆ ಹೂತಲ್ಲಿಂದ ಎದ್ದುಬರುತ್ತದೆ. ಬದಲಾಗಿ ಮತ್ತೂ ಒತ್ತಡ ಹಾಕಿದರೆ ಐದು ಸೆಕುಂಡಿನಲ್ಲಿ ಅರ್ಧ ಚಕ್ರ ಮರಳಲ್ಲಿ ಹೂತು ಹೋಗುತ್ತದೆ. ಹೆಚ್ಚು ಹೂತು ಹೋದಲ್ಲಿ ಎತ್ತಿ ಮೇಲಿಡ ಬೇಕಾಗುತ್ತದೆ.

ಇದಕ್ಕಿಂತ ಮೊದಲು ಒಂದೇ ದಿನದಲ್ಲಿ ಇಷ್ಟು ಎಡೆಬಿಡದೆ ಸದಾಸಂ ಉಪಯೋಗಿಸಿರಲಿಲ್ಲ. ಬಿಟ್ಟು ಬಿಟ್ಟು ಉಪಯೋಗ ದಿನದಲ್ಲಿ ಅತಿ ಹೆಚ್ಚೆಂದರೆ ಒಂದೂವರೆ ಘಂಟೆ ಇರಬಹುದು. ನಮ್ಮ ದೈನಂದಿನ ಉಪಯೋಗ ಅಷ್ಟೇ. ಈ ಪ್ರಯೋಗಕ್ಕೆ ಆತ್ಮೀಯರಾದ ಕಾಂತಿಲದ ಮೋಹನ ಅವರ ಟ್ಯೂನಿಂಗ್ ಬಹಳ ಸಹಕಾರಿಯಾಗಿತ್ತು.

ಸದಾಸಂ ವೇಗವಾಗಿ ಸಮುದ್ರ ತೀರದಲ್ಲಿ ಸಾಗುವಾಗ ವಾಹನದ ಮೇಲೂ ಸ್ವಲ್ಪ ಮಟ್ಟಿಗೆ ನಮ್ಮ ಮೇಲೂ ಮರಳ ಸಿಂಚನವಾಗುತ್ತದೆ. ಉಳಿದ ವಿಚಾರ ಪರವಾಗಿಲ್ಲ, ಚೈನ್ ಮೇಲೆ ಕೂರುವ ಮರಳು ಅದರನ್ನು ಕೊರೆಯಲು ಪ್ರಾರಂಬಿಸುತ್ತದೆ. ಅದುದರಿಂದ ನಮ್ಮ ಮೂರುವರೆ ಘಂಟೆ ಸವಾರಿಯಲ್ಲಿ ಸ್ವಲ್ಪ ಚೈನ್ ಉದ್ದ ಬಂದಿದೆ ಅನಿಸುತ್ತದೆ.

ಮರಳಲ್ಲಿ ಅಡ್ಡ ಬಿದ್ದರೂ ಮೂಳೆ ಪುಡಿಯಾಗುವ ಸಾದ್ಯತೆ ಕಡಿಮೆ. ಅದುದರಿಂದ ನಮಗೆ ವೇಗವಾಗಿ ದೇಹದ ಬಾರವನ್ನು ಮುಂದಕ್ಕೆ ಹಾಕಿ ಅಂದರೆ ನಿಂತುಕೊಂಡು ಚಡಾವು ಏರುವುದು ಮುಂತಾದವುಗಳ ಅಬ್ಯಾಸ ಮಾಡಲು ನಮಗೆ ಸಲೀಸಾಯಿತು. ಚಡ್ಡಿ ದರಿಸಿದ ಹುಡುಗರು ಬಹುಪಾಲು ಸಮಯ ಹೆಲ್ಮೆಟ್ ಧರಿಸಿರಲಿಲ್ಲ. ಸುರಕ್ಷಿತತೆ ಮಟ್ಟಿಗೆ ಉದ್ದ ಪಾಂಟು ಹಾಕುವುದು ಹೆಲ್ಮೇಟ್ ಧರಿಸುವುದು ಉತ್ತಮ.

ಮದ್ಯಾಹ್ನ ಒಂದೂವರೆ ಸಮೀಪಿಸುವಾಗ ಹೊರಡುವ ಆಲೋಚನೆ ಬಂದಾಗ - ಸುನಿಲ ತಂದು ವೇಗವಾಗಿ ತಿರುಗಿಸಿ ನಿಲ್ಲಿಸಿದಾಗ ಚೈನ್ ಕಳಚಿಕೊಂಡಿತು.  ಅದನ್ನು ಸರಿಪಡಿಸಿದೆ. ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೆ ಪ್ರತಿಕ್ರಿಯೆ ಇಲ್ಲ. ಸಮಸ್ಯೆ ಪರಿಹರಿಸುವ ಉತ್ಸಾಹದಿಂದ ಹೆಚ್ಚು ಹಸಿವೆ ಆಯಾಸ ಎರಡೂ ಬಾದಿಸುತಿತ್ತು. ವಾಪಾಸು ಬರುವಾಗ ದಾರಿಯಲ್ಲಿ ಸ್ಥಳೀಯ ತಂತ್ರಜ್ನ ಇಸುಬು ಹತ್ತಿರ ಸಮಸ್ಯೆ ಹುಡುಕು ಮಾರಾಯ ಎಂದರೆ ಫ್ಯೂಸ್ ಹೋಗಿದೆ ಎಂದರು.











Thursday, October 15, 2009

ಕುಲಾಂತರಿ ಬದನೆಗೆ ನಾವು ಪ್ರಯೋಗ ಪಶುಗಳು.



ಕುಲಾಂತರ ಬದನೆ ತಳಿಯನ್ನು ಭಾರತದಲ್ಲಿ ಬೆಳೆಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಬಂದ ಪಟ್ಟ ಸಮಿತಿ ಒಪ್ಪಿದೆ ಎಂದು ಇಂದಿನ ಪತ್ರಿಕೆಯಲ್ಲಿ ಕಂಡು ಆಘಾತವಾಯಿತು. ಹಲವಾರು ವರ್ಷಗಳಿಂದ ನಡೆಯುತ್ತಿರುವ ಆಂದೋಲನಕ್ಕೆ ಇದೊಂದು ಹಿನ್ನೆಡೆ. ಆದರೆ ಈ ಸಮಿತಿಯಿಂದ ನಾವು ನ್ಯಾಯಬದ್ದ ವರದಿ ನಿರೀಕ್ಷಿಸುವಂತಿರಲಿಲ್ಲ.

ಕುಲಾಂತರಿ ತಂತ್ರಜ್ನಾನ ಒಪ್ಪಿಗೆ ಸಮಿತಿಯ ಮೂರು ಜನ ಸದಸ್ಯರ ಹಿನ್ನೆಲೆ ಸಂಶಯಾಸ್ಪದ.
ಇದು ಪೋಲಿಸು ಇಲಾಖೆಯ ಸಲಹಾ ಸಮಿತಿಗೆ ದಾವೂದ್ ಇಬ್ರಾಯಿಯನ್ನು ನೇಮಿಸಿದಂತಾಗಿದೆ. ಇಬ್ಬರು ಮೊದಲು ಮಹಿಕೊ ಬೀಜ ಕಂಪೇನಿ ಕೃಪಾಪೋಷಿತ ಸಂಶೋದನೆಯಲ್ಲಿ ನಿರತರಾಗಿದ್ದರು. ಮೂರನೆಯವರು ಸ್ವತಹ ಕುಲಾಂತರಿ ತಂತ್ರಜ್ನಾನದಲ್ಲಿ ನಿರತರಾಗಿರುವವರು.

ನಮ್ಮ ದೇಶದಲ್ಲಿ ಕಡಿಮೆ ಉತ್ಪತ್ತಿಗೆ ಕಾರಣ ಕಳಪೆ ಗುಣಮಟ್ಟದ ಕೀಟನಾಶಕವೆಂದು ಕೆಲವು ನಮ್ಮ ಹಿತಚಿಂತಕ ಕಂಪೇನಿಗಳು ಬೆಳೆಗೆ ಕೀಟಗಳ ನಿರೋದಿಸುವ ಶಕ್ತಿ ಇದ್ದರೆ ಉತ್ತಮವೆಂದು ಡಂಗುರ ಸಾರುತ್ತಿವೆ. ಕೀಟಗಳು ತಿನ್ನೋದೆ ಇಲ್ಲವಾದ ಕಾರಣ ಬೆಳೆ ಕೊಯಿಲಾಗುವಾಗ ಹೆಚ್ಚು ಸಿಗುತ್ತದೆ. ಬಿತ್ತನೆ ಬೀಜ ಮಾತ್ರ ಪ್ರತಿ ಸಲ ಖರೀದಿಸಬೇಕು ಹಾಗೂ ಸ್ವಲ್ಪ ದುಬಾರಿ. ಇದು ದೊಡ್ಡ ವಿಷಯವೇ ಅಲ್ಲ ಎನ್ನುತ್ತಾರೆ ಬೀಜ ಕಂಪೇನಿಯ ಪಾಠ ಉರುಹೊಡೆದ ನಮ್ಮ ಅಧಿಕಾರಿಗಳು ರಾಜಕಾರಣಿಗಳು. .

ಸರಿ ಮಾರಾಯರೇ, ಅವರು ಏನು ಬೇಕಾದರು ಮಾಡಿಕೊಳ್ಳಲಿ ಎಂದು ನಾವು ಸುಮ್ಮನಿರುವಂತಿಲ್ಲ. ಇದರಲ್ಲಿ ಸಾಮಾನ್ಯ ಬದನೆಗಿಂತ ಶೇ. ೧೫ ರಷ್ಟು ಕಡಿಮೆ ಕಾಲೊರಿ ಅಂತೆ. ಹಾಗಾದರೆ ಹೆಚ್ಚು ತಿಂದರಾಯಿತು ಬಿಡಿ. ಈ ಕುಲಾಂತರಿ ಆಹಾರ ಪದಾರ್ಥಗಳಿಗೆ ಗುರುತು ಚೀಟಿ ಅಂಟಿಸುವ ಯೋಜನೆ ಇಲ್ಲ. ನಮ್ಮ ಊಟದ ಬಟ್ಟಲಿನಲ್ಲಿ ಕುಲಾಂತರಿ ಆಹಾರ ಸಾಮುಗ್ರಿ ತಲಪುವಾಗಲೂ ನಮಗೆ ತಿಳಿಯಲು ಅಸಾದ್ಯ. ಅದುದರಿಂದ ಇದನ್ನು ಎಲ್ಲರೂ ವಿರೋದಿಸುವ ಅಗತ್ಯ ಇರುತ್ತದೆ. ಪ್ರಪಂಚದಲ್ಲಿ ಇಂದು ಕುಲಾಂತರಿ ಅಹಾರ ಪದಾರ್ಥ ಚಲಾವಣೆ ಇರುವುದು ಅಮೇರಿಕದ ಬಾಗವಾದ ಹವಾಯಿ ದ್ವೀಪದಲ್ಲಿ ಪಪ್ಪಾಯಿ ಹಣ್ಣು ಮಾತ್ರ.

 ಬದನೆಗೆ ಬಾರತವೇ ತವರು. ಬದನೆಯ ಮಟ್ಟಿಗೆ ಪ್ರಪಂಚದಲ್ಲಿ ಎಲ್ಲೂ ಇಷ್ಟು ವಿವಿದತೆ ಇರುವುದಿಲ್ಲ. ಈಗ ಇದನ್ನು ಸರಕಾರ ಅನುಮೋದಿಸಿದರೆ ಪ್ರಪಂಚದಲ್ಲಿಯೇ ಪ್ರಥಮವಾಗಿ ತವರಿನಲ್ಲಿಯೇ ಒಪ್ಪಿದ ಕುಲಾಂತರಿ ಆಹಾರ ಪದಾರ್ಥವಾಗುತ್ತದೆ ಮತ್ತು ಈ ವಿವಿದತೆಯನ್ನು ಅಪಾಯಕ್ಕೆ ಒಡ್ಡಿದಂತಾಗುತ್ತದೆ. . ಚೀನದವರು ಸೊಯಾ ಅವರೆ ಮತ್ತು ಪೆರು ದೇಶದವರು ಬಟಾಟೆಯಲ್ಲಿ ಈ ದೊಂಬರಾಟ ಒಪ್ಪಿಲ್ಲ ಎನ್ನುವುದನ್ನು ನಾವು ಈಗ ನೆನಪಿಸಿಕೊಳ್ಳಬೇಕು.

ಹತ್ತಿಯಂತಹ ಮನುಷ್ಯ ತಿನ್ನದ ಬೆಳೆಯು ಕುಲಾಂತರಿ ಆದಾಗ ಅಲ್ಲರ್ಜಿ ಮತ್ತು ಪ್ರಾಣಿಗಳ ಸಾವಿಗೆ ಕಾರಣವಾಗಬಹುದಾದರೆ ಬದನೆಯಂತಹ ನಿತ್ಯ ಬಳಕೆ ಆಹಾರ ಪದಾರ್ಥಕ್ಕೆ ಇದನ್ನು ಬೆರೆಸಿದರೆ ಆಗುವ ಅನಾಹುತ ಊಹಿಸಲು ಅಸಾದ್ಯ.

ನಾನು ಪ್ರಯೋಗಾಲಯದ ಇಲಿ ಅಲ್ಲ ಎಂದು ಸಾವಿರಾರು ಜನ ಈ ಇ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಇ ಪತ್ರಗಳನ್ನು ದೊಡ್ಡ ಸಿಂಗರಿಗೆ ಕಳುಹಿಸಲಾಗಿತ್ತು. ಅನಂತರ ನಿಮ್ಮ ಕಾಳಜಿ ಅರ್ಥವಾಗಿದೆ ಎಂದು ಕೇಂದ್ರ ಸರಕಾರದ ಪತ್ರವೂ ನನಗೆ ಬಂದಿತ್ತು.

ಈಗ ತಜ್ನರ ವರದಿ ಕೇಂದ್ರ ಸರಕಾರದ ಕೈ ಸೇರಿದೆ. ಇನ್ನು ಬಾಕಿ ಇರುವುದು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಮುದ್ರೆ ಮಾತ್ರ ಬಾಕಿ. ಗಾಬರಿ ಏನೂ ಬೇಡ. ನಾನು ಸರಿಯಾಗಿ ವ್ಯವಸ್ಥೆ ಮಾಡುತ್ತೇನೆ. ಇನ್ನೂ ನನ್ನ ಕೈಯಲ್ಲೇ ಇದೆ ಎನ್ನುತ್ತಾರೆ ಕೈ ಪಕ್ಷದ ಮಂತ್ರಿ ಜೈರಾಮ ರಮೇಶ. ನಾಲ್ಕು ತಿಂಗಳು ಹಿಂದೆ ತಾನು ಕುಲಾಂತರಿ ಅಹಾರದ ವಿರೋದ ಎಂದು ಹೇಳಿದ ಮಹಾನ್ ಸಾಹಸಿ ಜೈರಾಮರ ಕೈಯಲ್ಲಿರುವುದೇ ನನಗೆ ಗಾಬರಿಗೆ ಕಾರಣ.


ಮಾಜಿ ರಕ್ಷಣಾ ಮಂತ್ರಿ ಜಾರ್ಜ್ ಸಿಯಾಚನ್ ಗಡಿ ಪ್ರದೇಶಕ್ಕೆ ಹೋದದ್ದೂ ಇವರ ಸಾಹಸದ ಎದುರು ಬರೇ ಸಪ್ಪೆ. ನಮ್ಮ ವೀರ ಧೀರ ಪರಿಸರ ಮಂತ್ರಿ ಜೈರಾಮ್ ರಮೇಶರು ಬೋಪಾಲಕ್ಕೆ ಹೋದದ್ದು ಮಾತ್ರವಲ್ಲ ಪಾಳು ಬಿದ್ದಿರುವ ಕೀಟನಾಶಕ ಕಾರ್ಖಾನೆಯಲ್ಲಿ ರಾಶಿಬಿದ್ದ ಕಲ್ಮಶವನ್ನೂ ಮುಟ್ಟಿದರು. ಸುತ್ತುಮುತ್ತೆಲ್ಲ ಇಷ್ಟು ಹಸಿರಾಗಿರುವಾಗ ಬೂಮಿ ವಿಷಮಯವಾಗಿರಲು ಸಾದ್ಯವೇ ? ಎಂದು ಪ್ರಶ್ನಿಸಿದರು. ನಾನು ಹೋಗಿ ಮುಟ್ಟಿ ನೋಡಿದೆ, ಆದರೂ ಕೆಮ್ಮುತ್ತಿಲ್ಲ ಆರೋಗ್ಯವಾಗಿ ಹಾಗೂ ಜೀವಂತವಾಗಿದ್ದೇನೆ. ಅದುದರಿಂದ ಈ ಇಪ್ಪತ್ತೈದು ವರ್ಷ ಹಿಂದಿನ ದುರಂತ ಮರೆತು ನಾವು ಮುಂದಕ್ಕೆ ಸಾಗಬೇಕು ಎಂದು ಅಪ್ಪಣೆ ಕೊಡಿಸಿದರು. ಹಾಗೆಯೇ ಕುಲಾಂತರಿ ಬದನೆಯಲ್ಲಿ ಮಾಡಿದ ಪಲ್ಯ ತಿಂದರೂ ನಾನು ಬದುಕಿದ್ದೇನೆ ಎನ್ನಬಹುದು ಈ ಮಹಾನುಭಾವರು …….. ರಾಮ್, ರಾಮ್

ಆದರೂ ನಮ್ಮ ಪ್ರಯತ್ನ ನಾವು ಮಾಡೋಣ. ಪರಿಸರ ಮಂತ್ರಿ ಜೈರಾಮರಿಗೆ ಒಂದು ಪತ್ರ ಬರೆಯಿರಿ. ವಿಳಾಸ ಹಾಗೂ ಸಲಹೆಗೆ ಈ ಕೊಂಡಿಯನ್ನು ಕ್ಲಿಕ್ಕಿಸ.

ಬಾರತಕ್ಕೆ ಈ ಕುಲಾಂತರಿ ಬೆಳೆಗಳು ಬೇಕೊ ಅನ್ನುವ ವಿಚಾರದಲ್ಲಿ ಹೆಚ್ಚಿನ ಮಾಹಿತಿಗೆ  

Saturday, October 10, 2009

ಪ್ರವಾಸಿ ಸುರಕ್ಷತೆ ಮಟ್ಟಿಗೆ ಜಪಾನಿನಲ್ಲಿ ತಲೆ ನೋವಿಲ್ಲ.

ನಾ ಕಂಡ ದೇಶಗಳಲ್ಲಿ ಪ್ರವಾಸಿಗೆ ಹೆಚ್ಚು ನಿರ್ಭಯವಾಗಿ ಓಡಾಡಲು ಸಾದ್ಯವಿರುವುದು ಕನಿಷ್ಟ ಅಪಾಯಕಾರಿ ಜಪಾನ್ ಅನ್ನಬಹುದು. ಕಳ್ಳರ ಹಾವಳಿ ಇಲ್ಲ. ಅದಕ್ಕೊಂದು ರುಜುವಾತು ಎಂದರೆ ನಾನು ಜಪಾನು ತಲಪಿದ ಮೊದಲ ರಾತ್ರಿ ನಿದ್ರಿಸಿದ್ದು ರಸ್ತೆ ಪಕ್ಕದಲ್ಲಿರುವ ಜನ ಸಾಗುವ ಮೇಲು ಸೇತುವೆಯಲ್ಲಿ.

ಟೋಕಿಯೊ ಪಟ್ಟಣದ ಒಳಗಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಸಂಜೆಯಾಗಿತ್ತು. ಹೊರಬಂದು ಸೈಕಲ್ ಏರಿದೆ. ೫೫೦ ಕಿಮಿ ದೂರದ ಒಸಕಾ ನನ್ನ ಗುರಿಯಾಗಿತ್ತು. ಕವಸಾಕಿ ಯೊಕೊಹೊಮ ಊರುಗಳು ಕಳೆಯಿತು. ಕತ್ತಲಾಯಿತು. ಜನದಟ್ಟಣೆ ಕಡಿಮೆಯಾಗಲಿಲ್ಲ. ಸಾಮಾನ್ಯವಾಗಿ ರಾತ್ರಿ ನಿದ್ರಿಸಲು ದಾರಿಹೋಕರಿಗೆ ಪಕ್ಕನೆ ಕಣ್ಣಿಗೆ ಬೀಳದಂತಹ ಜಾಗ ಆರಿಸಿಕೊಳ್ಳುತ್ತಿದ್ದೆ. ಅಂದು ಅಂತಹ ಜಾಗ ಕಾಣಲಿಲ್ಲ. ನನಗೆ ಅಪರಿಚಿತ ಹೊಸ ಪರಿಸರ. ವಿಪರೀತ ಸುಸ್ತಾಗಿತ್ತು. ಹಾಗೆ ಒಂದು ಮೇಲು ಸೇತುವೆ ಮೇಲೆ ನನ್ನ ಮಲಗುವ ಚೀಲ ಬಿಡಿಸಿದೆ.

ನಿದ್ರೆ ಬರುವ ವರೆಗೂ ದಾರಿಯಲ್ಲಿ ಸಾಗುವ ಜನರ ವರ್ತನೆ ಗಮನಿಸುತ್ತಿದ್ದೆ. ಯಾರೂ ನನ್ನ ಬಗೆಗೆ ಕುತೂಹಲ ತೋರಿಸಿದಂತೆ ಕಾಣಲಿಲ್ಲ. ದೀರ್ಘ ವಿಮಾನ ಪ್ರಯಾಣದಿಂದ ಸುಸ್ತಾದ ಕಾರಣ ಚೆನ್ನಾಗಿ ನಿದ್ದೆ ಬಂತು. ಬೆಳಕು ಹರಿಯುವಾಗ ಎದ್ದೆ. ಸೈಕಲು ಏರಿ ಪ್ರಯಾಣ ಮುಂದುವರಿಸಿದೆ. ಆ ರಾತ್ರಿ ನನ್ನ ಇಡೀ ಪ್ರವಾಸದಲ್ಲಿ ಹೆಚ್ಚು ಜನ ಕಾಣುವ ಪ್ರದೇಶದಲ್ಲಿ ನಾನು ನಿದ್ದೆಮಾಡಿದ್ದು.

ಮುಂದೆಯೂ ಜಪಾನಿನಲ್ಲಿ ರಸ್ತೆ ಪಕ್ಕದಲ್ಲಿ, ಗದ್ದೆಗಳ ನಡುವಿನ ಹಾದಿಯಲ್ಲಿ ನನ್ನ ಪುಟ್ಟ ಡೇರೆ ಬಿಡಿಸಿ ಮಲಗುವ ಚೀಲದಲ್ಲಿ ನಿದ್ರಿಸಿದ್ದೇನೆ. ಪೆಟ್ರೋಲ್ ಪಂಪ್ ಶೌಚಾಲಯವನ್ನೂ ಉಪಯೋಸಿದ್ದೇನೆ ಎಂದು ಅಸ್ಪಷ್ಟ ನೆನಪು

ಜಪಾನು ಎಂದರೆ ನಾಲ್ಕು ಮುಖ್ಯ ದ್ವೀಪಗಳು. ಹೊಕೈಡೊ ಹೊಂಶು ಶಿಕೋಕು ಕ್ಯುಶು. ನಾನು ಹೊಂಶುನಲ್ಲಿರುವ ಟೋಕಿಯೊದಲ್ಲಿಳಿದು ಸೈಕಲಿನಲ್ಲಿ ೫೫೦ ಕಿಮಿ ದೂರದ ಒಸಕಾ ವರೆಗೆ ಸೈಕಲು ತುಳಿದೆ. ಪುಜಿ ಪರ್ವತದ ಸಮೀಪ ಸಾಗುವ ಪರ್ವತ ರಸ್ತೆ. ಅಲ್ಲಿಂದ ಶಿಕೋಕು ದ್ವೀಪದಲ್ಲಿರುವ ಟಕಮಟ್ಸು ಎಂಬಲ್ಲಿಗೆ ಫೆರಿ ಪ್ರಯಾಣ. ಅಲ್ಲಿ ಈಗ ಸೇತುವೆ ಆಗಿದೆಯಂತೆ. ಅಲ್ಲಿಂದ ಮಟ್ಸುಯಾಮ ವರೆಗೆ ಸೈಕಲು. ಕೊನೆಗೆ ಮಟ್ಸುಯಾಮದಿಂದ ಪುಕೋಕ ವಿಮಾನ ನಿಲ್ದಾಣದ ಹತ್ತಿರವಿರುವ ಕ್ಯುಶು ದ್ವೀಪದಲ್ಲಿರುವ ಕಿಟಕಾಯಿಶು ಎಂಬಲ್ಲಿಗೆ ಫೆರಿ. ಹೀಗೆ ಜಪಾನಿನಲ್ಲಿ ಎರಡು ಬಾರಿ ಫೆರಿ ಉಪಯೋಗಿಸಿ ಸಮುದ್ರ ದಾಟಿದೆ. ಎರಡೂ ನಾಲ್ಕಾರು ಘಂಟೆ ಪ್ರಯಾಣ.

ನನಗೆ ಬಂದಿಳಿಯುವಾಗ ಮಸನೋಬು ಫುಕೋಕ ಎಂಬ ರೈತರ ಹೆಸರು ಮತ್ತು ಸಮೀಪದ ಮಟ್ಸುಯಾಮ ಪಟ್ಟಣದ ಹೆಸರು ಮಾತ್ರ ಗೊತ್ತಿದ್ದರೂ ಹುಡುಕುವುದರಲ್ಲಿ ಸಫಲನಾದೆ. ಅಷ್ಟು ಕನಿಷ್ಟ ಮಾಹಿತಿಯೊಂದಿಗೆ ನಾನು ಹೊರಟಿದ್ದೆ ಎನ್ನುವುದರ ಯೋಚಿಸುವಾಗ ಇಂದು ಅಶ್ಚರ್ಯವಾಗುತ್ತದೆ. ನಾನು ಹುಡುಕ ಹೊರಟ ಫುಕೋಕರು ಮಟ್ಸುಯಾಮ ಪಟ್ಟಣದ ಸಮೀಪದ ಇಯೊ ಎಂಬ ಹಳ್ಳಿಯಲ್ಲಿ ವಾಸ.



ಫುಕೋಕರ ಮನೆಯ ಆವರಣ ಹೊಕ್ಕಾಗ ನನಗೊಂದು ಪರಿಚಿತ ಪರಿಸರದ ಅನುಭವ. ನಮ್ಮಲ್ಲಿ ಹಳೆ ಮನೆಗಳಲ್ಲಿರುವಂತೆ ಆವರಣ ಗೋಡೆಗೆ ಒಂದು ನಡೆದು ಒಳಹೋಗುವ ಬಾಗಿಲು. ಅದಕ್ಕೊಂದು ಪುಟ್ಟ ಮಾಡು. ಮನೆಯ ಎದುರೊಂದು ಎರಡು ಮಾಡಿನ ಮುಖಮಂಟಪವಿರುವುದು ಚಿತ್ರದ ನಡು ಬಾಗದಲ್ಲಿ ಕಾಣುತ್ತದೆ. ಕಟ್ಟಿದ ಶೈಲಿ ಬಿನ್ನವಾಗಿದ್ದರೂ ಹೋಲಿಕೆ ಕಂಡಂತಾಯಿತು.

ಅಲ್ಲಿನ ಜನ ಬಹಳ ವಿನಯವಂತರು ಆದರೂ ನಾನು ಎನ್ನಲು ಎದೆ ಬದಲು ಮೂಗು ತೋರಿಸುವ ಕೈ ಸನ್ನೆ ಗೊಂದಲ ಉಂಟುಮಾಡುತ್ತದೆ. ವಂದನೆ ಎಂದರೆ ಬಾಗುವುದು ಎರಡು ಸಲಕ್ಕೆ ಸಿಮಿತಗೊಳಿಸದೆ ನಾವು ಪುನಃ ಬಗ್ಗಿದರೆ ಅವರೂ ಬಗ್ಗುತ್ತಾರೆ. ಇಂಗ್ಲೀಷ್ ಅರಿವು ಕಡಿಮೆ. ನೀವು ಅವರಲ್ಲಿಗೆ ಹೋದರೆ ಪದ ಹುಡುಕಲು ಅವರ ಡಿಕ್ಷನರಿ ಹೊರಬರುತ್ತದೆ.

ಒಮ್ಮೆ ಒಂದು ಮನೆಯಲ್ಲಿ ಕುಡಿಯುವ ನೀರು ಬಾಟಲಿಗೆ ತುಂಬಿ ಕೊಡಬಹುದೋ ? ಕೇಳಿದೆ. ಹಸುರು ಚಾ ಹಾಕಿ ಕೊಡಲೇ ಎಂದರು. ನನಗೆ ಹಾಗೆಂದರೆ ಏನೆಂದು ಕಲ್ಪನೆ ಇಲ್ಲವಾದರೂ ಒಪ್ಪಿದೆ. ನಾನು ಹಾಲು ಸಕ್ಕರೆ ಹಾಕಿದ ಚಾ ಕೊಡುತ್ತಾರೆ ಅಂದುಕೊಂಡಿದ್ದೆ. ನಮ್ಮಲ್ಲಿ ಕುದಿಸುವಾಗ ಮುಡಿವಾಳದ ಬೇರು ಬೆರೆಸಿದಂತಹ ನೀರಿಗೆ ಹೋಲುವಂತದ್ದು ಜಪಾನಿನವರ ಹಸುರು ಚಾ.

ಜಪಾನಿನಲ್ಲಿ ಬ್ರೆಡ್ ಬದಿಯ ತುಂಡುಗಳನ್ನು ಅಂಗಡಿಯಲ್ಲಿ ಮಾರುವ ಪಾಕೇಟುಗಳಿಗೆ ಹಾಕುವುದಿಲ್ಲ. ಬೇಕರಿಗಳ ಬಳಿ ಹೋದರೆ ನಮಗೆ ಈ ಬದಿಯ ತುಂಡುಗಳ ಬಹಳ ಅಗ್ಗವಾಗಿ ಪಡಕೊಳ್ಳಲು ಸಾದ್ಯ. ಇದೂ ನನ್ನ ಹಣ ಉಳಿಸಲು ಸಹಾಯ ಮಾಡಿತು. ತುಂಬಾ ದುಬಾರಿ ದೇಶವಾದ ಜಪಾನಿನಲ್ಲಿ ಕನಿಷ್ಟ ಖರ್ಚಿನಲ್ಲಿ ಸುದಾರಿಸಿದೆ.

Friday, October 09, 2009

ಬಾರತದಲ್ಲೊಂದು ಹಸಿರು ಪಕ್ಷ




ಬಾರತದ ಪ್ರಮುಖ ಪರಿಸರವಾದಿಯೊಬ್ಬರು ಹಸಿರು ಪಕ್ಷ ಸ್ಥಾಪನೆಯ ಪ್ರಯತ್ನದಲ್ಲಿದ್ದಾರೆ. ಕಲಕತ್ತಾ ರಸ್ತೆಗಳಿಂದ ಲಕ್ಷಾಂತರ ಹಳೆಯ ಗುಜರಿ ವಾಹನಗಳ ಹೊರ ಹಾಕಲು ಸಫಲರಾದ ಸುಬಾಷ ದತ್ತ ದೇಶದ ಪರಿಸರ ಹೋರಾಟಕ್ಕೆ ನ್ಯಾಯ ದೊರಕಿಸಲು ರಾಜಕೀಯ ಪಕ್ಷ ಪ್ರಾರಂಬಿಸಲು ಹೊರಟಿದ್ದಾರೆ.

ಕಲಕತ್ತ ನಗರದಲ್ಲಿ ಹಳೆಯ ವಾಹನ ನಿಷೇದಕ್ಕೊಸ್ಕರ ಉಚ್ಚ ನ್ಯಾಯಲಯದ ವರೆಗೂ ಹೋಗಿದ್ದಾರೆ. ಪರಿಣಾಮ ಹದಿನೈದು ವರುಷಗಿಂತ ಹಳೆಯವಾಹನಕ್ಕೆ ನಿರ್ಬಂದ ವಿದಿಸಲಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟು ಕೊನೆಗೂ ಈ ವರ್ಷದ  ಆಗಸ್ತ್ ಒಂದರಿಂದ ಕಾರ್ಯಗತವಾದ ನಂತರ ಅಲ್ಲಿನ ವಾಯು ಮಲೀನತೆ ಗಣನೀಯವಾಗಿ ಕುಗ್ಗಿದೆಯಂತೆ.

ವೃತ್ತಿಯಲ್ಲಿ ಇವರೊಬ್ಬ ಲೆಕ್ಕ ಪರಿಶೋಧಕರು. ಕಳೆದ ಮೂವತ್ತು ವರ್ಷಗಳಿಂದ ಬಾರತದಲ್ಲಿ ಪರಿಸರ ಮತ್ತು ಪರಂಪರೆ ತಾಣ ಉಳಿಸಿಕೊಳ್ಳಲು ಅತ್ಯಂತ ಹೆಚ್ಚು ಸಲ ನ್ಯಾಯಾಲಯ ಮೊರೆ ಹೊಕ್ಕವರು.

೧೯೭೮ರಲ್ಲಿ ಒಂದು ಮರ ಕಡಿಯುವುದರ ಉಳಿಸಲು ಪ್ರತಿಭಟನೆ ಕೈಗೊಂಡ ದತ್ತರು ತನ್ಮೂಲಕ ಪರಿಸರ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು. ಪ್ರಥಮ ಚುಂಬನದಲ್ಲಿ .. ಅನ್ನುವಂತೆ ಅಂದು ಆ ಮರಕ್ಕಾಗಿ ಜೈಲು ವಾಸವೂ ಅನುಭವವಾಯಿತು. ಅನಂತರ ಎಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಕೇಸುಗಳ ದಾಖಲಿಸಿದ್ದಾರೆ ಮತ್ತು ಅವುಗಳಲ್ಲಿ ಶೇಕಡ ಎಪ್ಪತ್ತರಲ್ಲಿ ಗೆದ್ದಿದ್ದಾರೆ. ವಾಯುನೆಲೆ ಸುತ್ತಲು ವಾಸಿಸುವವರು ಕಿವುಡರಾಗುವುದರಿಂದ ಹಿಡಿದು ಗಂಗಾ ನದಿಗೆ ಹೊಲಸು ಬಿಸಾಕುವ ವಿಚಾರದ ವರೆಗೆ ವಿಬಿನ್ನ ವಿಚಾರಗಳ ಬಗ್ಗೆ ಹೋರಾಟ ನಡೆಸಿದ್ದಾರೆ. ಇವರ ಪ್ರಯತ್ನದಿಂದಾಗಿ ೧೯೯೬ರಲ್ಲಿ   ದೇಶಕ್ಕೆ ಪ್ರಥಮವಾಗಿ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯ ಮಟ್ಟದ ಪರಿಸರ ಬೆಂಚ್ ಪ್ರಾರಂಬಿಸಲ್ಪಟ್ಟಿತು

ಹಸಿರು ಪಕ್ಷದ ಅನಿವಾರ್ಯತೆಯನ್ನು ಬೊಟ್ಟುಮಾಡುವ ದತ್ತರು ಪರಿಸರ ಉಳಿಸುವ ಮಟ್ಟಿಗೆ ರಾಜಕೀಯ ಪಕ್ಷಗಳೆಲ್ಲ ಪಕ್ಕ ಕಳ್ಳರು ಎನ್ನುತ್ತಾರೆ. ಕಡಲತಡಿಯಲ್ಲಿ ರಸಾಯನಿಕ ಕಾರ್ಖಾನೆ ವಿರೋದಿಸುವ ದೀದಿಯವರ ತ್ರಿನಮೂಲ್ ಪಕ್ಷ ಹಳೆಯ ಗುಜರಿ ವಾಹನಗಳ ಬೆಂಬಲಿಸುತ್ತದೆ.

ಅಲ್ಲಿನ ಹಸುರು ಪಕ್ಷದೊಂದಿಗೆ ಸಂವಾದಕ್ಕೆ ಸಮಾನಾಸಕ್ತರೊಂದಿಗೆ ಇತ್ತೀಚೆಗೆ ಇಂಗ್ಲೇಂಡ್, ಜರ್ಮನಿಯ ಪ್ರವಾಸ ಕೈಗೊಂಡ ಶ್ರೀ ದತ್ತರು ಪರಿಸರ ಹೋರಾಟ ಇಂದು ಸ್ಥಳೀಯ ವಿಚಾರವಾಗಿಯೇ ಉಳಿದಿದ್ದು ಸಮುಗ್ರ ಹೋರಾಟಕ್ಕೆ ರಾಷ್ಟ್ರೀಯ ಪಕ್ಷದ ಅಗತ್ಯ ಒತ್ತಿ ಹೇಳುತ್ತಾರೆ. ನಮಗೆ ಅಲ್ಲವಾದರೂ ಕಲಕತ್ತದ ಮತದಾರರಿಗೆ ಮುಂದಿನ ಚುನಾವಣೆಯಲ್ಲಿ ಇವರನ್ನು ಬೆಂಬಲಿಸುವ ಅವಕಾಶ ದೊರಕುವುದು ಖಚಿತ ಎನಿಸುತ್ತದೆ.

Sunday, October 04, 2009

ಸೈಕಲು ಡೈನೆಮೊ ಹಾಗೂ ವಿದ್ಯುತ್ ತಯಾರಿ


ಇಂದು ಜಾಲದಲ್ಲಿ ಒಂದು ಆಫ್ರಿಕದ ಹುಡುಗ ಸೈಕಲ್ ಡೈನೆಮೊ ಕೇಂದ್ರಿತ ವಿದ್ಯುತ್ ಗಾಳಿ ಯಂತ್ರ ಮಾಡಿದ ವಿವರಗಳು ಕಣ್ಣಿಗೆ ಬಿತ್ತು. ನನ್ನ ಸೈಕಲು ಪ್ರವಾಸದ ಸಮಯ ಇಂತಹ ಡೈನೆಮೊ ನನಗೆ ರಸ್ತೆ ಕಾಣಲು ಮಾತ್ರವಲ್ಲ ಡೇರೆಯೊಳಗೆ ಕೂಡ ಅಗತ್ಯವಾದ ಬೆಳಕನ್ನು ಪೊರೈಸುತ್ತಿತ್ತು. ಆದರೆ ದೀರ್ಘವಾದ ಹಗಲಿನಿಂದಾಗಿ ನಾನು ರಾತ್ರಿ ಸೈಕಲು ಸವಾರಿ ಮಾಡಿದ್ದು ಕಡಿಮೆ.

ಪ್ರವಾಸದ ಸಮಯ ನನ್ನ ಹತ್ತಿರ ಟಾರ್ಚ್ ಇರಲಿಲ್ಲ. ಇಂತಹ ಸರಳ ಸಾಮುಗ್ರಿಗಳ ಅನಾವಶ್ಯಕ ಹೊರುವುದರ ಬದಲು ಅಗತ್ಯ ಬಿದ್ದಾಗ ಕೊಂಡುಕೊಳ್ಳುವುದು ನನ್ನ ದೋರಣೆಯಾಗಿತ್ತು. ಮೊದಲು ನಾಲ್ಕು ತಿಂಗಳು ನಾನು ಒಂಟಿಯಾಗಿ ಹೊರಗೆ ಮಲಗಿರಲಿಲ್ಲ. ಯುರೋಪಿನಲ್ಲಿ ಮೊದಲು ಚಳಿ ಜೋರಾಗಿತ್ತು. ಮೆ ತಿಂಗಳಲ್ಲಿ ಒಂಟಿಯಾಗಿ ಆಕಾಶದಡಿ ಡೇರೆ ಬಿಡಿಸಿ ಮಲಗಲು ಪ್ರಾರಂಬಿಸಿದೆ. ಅನಂತರ ದೊಡ್ಡ ಪಟ್ಟಣಗಳ ಹೊರತು ಪಡಿಸಿದರೆ ಎಲ್ಲೂ ತಂಗುವುದಕ್ಕೆ ಹಣ ಖರ್ಚು ಮಾಡಲಿಲ್ಲ.

ರೋಮಿನಲ್ಲಿ ಕೊಡುಗೆಯಾಗಿ ಸಿಕ್ಕ ಸೈಕಲಿನಲ್ಲಿ ಮುಂದಿನ ಚಕ್ರಕ್ಕೆ ಡೈನೆಮೊ ಅಳವಡಿಸಲಾಗಿತ್ತು. ಡೇರೆಯ ಬಾಗಿಲಿನ ಬಳಿಯಲ್ಲಿ ಸೈಕಲನ್ನು ಅಡಿಮೇಲಾಗಿ ಇಟ್ಟು ಚಕ್ರ ನನ್ನ ಕೈಗೆ ಸುಲಭವಾಗಿ ಸಿಗುವಂತೆ ಮಾಡುತ್ತಿದ್ದೆ. ಏಳು ಅಡಿ ಉದ್ದ ಮತ್ತು ನಾಲ್ಕು ಅಡಿ ಅಗಲದ ಡೇರೆಯಲ್ಲಿ ಎಲ್ಲ ಸಾಮಾನುಗಳೂ ವ್ಯವಸ್ಥಿತವಾಗಿ ಇಡುತ್ತಿದ್ದು ಕಣ್ಣು ಮುಚ್ಚಿದರೂ ಸಿಗುವಂತಿತ್ತು. ಅಕಸ್ಮಾತ್ ಬೆಳಕು ಬೇಕಾದರೆ ಹೊರಗೆ ಕೈ ಹಾಕಿ ಚಕ್ರ ತಿರುಗಿಸುತ್ತಿದ್ದೆ. ನಾಲ್ಕು ಕ್ಷಣ ಸಿಗುವ ಬೆಳಕು ನನಗೆ ಸಾಕಾಗುತ್ತಿತ್ತು.

ಐದು ವರ್ಷ ಹಿಂದೆ ಮಲಾವಿ ದೇಶದ ಬಡ ಹುಡುಗನೊಬ್ಬ ಕೈಗೆ ಸಿಕ್ಕ ಗುಜರಿವಸ್ತುಗಳ ಉಪಯೋಗಿಸಿ ಒಂದು ಡೈನೆಮೊ ಮಾಡಿದ್ದು ಮತ್ತು ಅನಂತರ ಅವನಿಗೆ ವಿದ್ಯಾಬ್ಯಾಸ ಸಹಾಯ ದೊರಕಿದ್ದೂ ಮೊದಲು ಓದಿದ್ದೆ. ಈಗ ಸೂಕ್ಷ್ಮವಾಗಿ ಚಿತ್ರ ನೋಡುವಾಗ ಅವನ ಡೈನೆಮೊ ಮಾದರಿಯಲ್ಲಿಯೇ ನಾನು ಬಳಸಿದ್ದು ಗಮನಕ್ಕೆ ಬಂದು ಈ ಬಗೆಗೆ ಬರೆಯಲು ಕೂತೆ.   ಗಾಳಿ ಯಂತ್ರ ಎಂದರೆ ಬೆಳಕು ಮಾತ್ರವಲ್ಲ ಸ್ವಾತಂತ್ರ ಎನ್ನುವ ಅವನ ಕಥೆ ಚೆನ್ನಾಗಿದೆ.

Saturday, October 03, 2009

ವಿದೇಶದಲ್ಲಿ ಹಣ ಬದಲಾವಣೆ.

ಅರೋಹಣ ತಂಡ    ಜತೆ ಪಶ್ಚಿಮ ಘಟ್ಟದ ಗುಡ್ಡವೊಂದರಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅಂದು ಪರಿಚಯವಾದ ಹೊಸ ಗೆಳೆಯರು ನನ್ನ ಮುಂಚಿನ ವರ್ಷದ ಸೈಕಲು ಪ್ರವಾಸದ ಬಗೆಗೆ ಕುತೂಹಲದಿಂದ ವಿಚಾರಿಸುತ್ತಿದ್ದರು. ಪ್ರಶ್ನೋತ್ತರ ಸಂಬಾಷಣೆ ನಮ್ಮದೇ ಸಾಗುತ್ತಿದ್ದು ಉಳಿದವರು ನಡೆಯುತ್ತಾ ಕಿವಿಗೊಡುತ್ತಿದ್ದರು.

ಪರದೇಶದ ಹೆಚ್ಚಿನ ಹಣ ಎಲ್ಲ ಕಡೆಗಳಲ್ಲಿ ಚಲಾವಣೆ ಆಗುತ್ತದೆ. ಆದುದರಿಂದ ಆಯಾ ಊರಿನ ಹಣಕ್ಕೆ ಬದಲಾವಣೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ವಾಪಾಸು ಬರುವಾಗ ನನ್ನಲ್ಲಿ ಆರೇಳು ದೇಶಗಳ ನೋಟುಗಳಿದ್ದವು. ನಾವು ಕೊಡುವ ದರಕ್ಕೂ ಪಡಕೊಳ್ಳುವ ದರಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಮತ್ತು ಬಾಂಕಿನ ಶುಲ್ಕ ಪ್ರತ್ಯೇಕ. ಹೀಗೆ ಆಯಾ ದೇಶದಲ್ಲಿ ಬೇಕಾದಷ್ಟು ಮಾತ್ರ ಹೊರತು ಅನಗತ್ಯವಾಗಿ ಹಣವನ್ನು ಬದಲಾವಣೆ ಮಾಡಬಾರದು ಎಂದು ಹೇಳಿದೆ.

ಉದಾಹರಣೆ ಕೊಡುವುದು ನನ್ನದೊಂದು ಕೆಟ್ಟ ಚಾಳಿ. ಇದಕ್ಕೆ ಉದಾಹರಣೆಯಾಗಿ ಆಚಾರಿ ಹತ್ತಿರ ಚಿನ್ನ ಕೊಟ್ಟ ಹಾಗೆ ಎಂದುಬಿಟ್ಟೆ. ಪ್ರತಿ ಸಲವೂ ಶೇಕಡ ಐದರಷ್ಟು ನಮ್ಮ ಸಂಪತ್ತು ಕರಗುತ್ತದೆ ಎನ್ನುವ ವಿಚಾರ ಅರ್ಥಮಾಡಿಸುವುದು ನನ್ನ ಉದ್ದೇಶವಾಗಿತ್ತು.   ಆಗ  ಅಶೋಕವರ್ಧನರು ಮದ್ಯೆ ಬಾಯಿ ಹಾಕಿ ಕೇಳಿದರು. ಅವರು ಏನು ಮಾಡುತ್ತಾರೆ ಗೊತ್ತಾ ? ಇಲ್ಲವೆಂದು ಉತ್ತರಿಸಿದೆ. ಆಗ ಅಶೋಕವರ್ಧನರು ಹೇಳಿದರು ಆಚಾರರು ಮಂಗಳೂರಿನಲ್ಲಿ ಚಿನ್ನದ ಅಂಗಡಿ ಇಟ್ಟಿದ್ದಾರೆ. ನನ್ನ ಪರೀಸ್ಥಿತಿ ………..