Wednesday, January 27, 2010

ಕಲೆ ಅರಳುವ ಜಪಾನಿನ ಬತ್ತದಗದ್ದೆ



ಜಪಾನಿನ ಬತ್ತದ ಹೊಲಗಳಲ್ಲಿ ಕಲಾತ್ಮಕ ಚಿತ್ತಾರಗಳು ಕಾಣಿಸಿಕೊಳ್ಳಲು ಪ್ರಾರಂಬವಾಗಿದೆ. ಇವುಗಳು ಯಾವುದೇ ಇತರ ಗ್ರಹದ ಜೀವಿಗಳು ರಾತ್ರೋ ರಾತ್ರಿ ಸೃಷ್ಟಿಸಿದ ಕೈಚಳಕವಲ್ಲ ರೈತರು ಕಂಪ್ಯುಟರ್ ಮೂಲಕ ವಿನ್ಯಾಸಗೊಳಿಸಿದ ಹಾಗೂ ಕರಾರುವಕ್ಕಾದ ಜಾಗದಲ್ಲಿ ನಿಖರವಾಗಿ ನೇಜಿ ನೆಡುವುದರಿಂದಾದ  ಉಂಟಾಗುವ   ಚಿತ್ತಾರ.



ಟೋಕಿಯೊ ಪಟ್ಟಣದಿಂದ ಸಾವಿರ ಕಿಲೋಮಿಟರ್ ಉತ್ತರದಲ್ಲಿರುವ ಇನಕದಾತೆ ಗ್ರಾಮವು ೧೯೯೩ರಲ್ಲಿ ಈ ಸಂಪ್ರದಾಯಕ್ಕೆ ಬುನಾದಿ ಹಾಕಿತು. ಇದು ಅಂದು ಗ್ರಾಮ ಪಂಚಾಯತಿ ಸದಸ್ಯರ ಸಭೆಯಲ್ಲಿ ಪ್ರವಾಸಿಗಳನ್ನು ಆಕರ್ಷಿಸಲು ಹೊರ ಹೊಮ್ಮಿದ ಆಲೋಚನೆ. ಮೊದಲ ಒಂಬತ್ತು ವರ್ಷಗಳಲ್ಲಿ ಪಂಚಾಯತಿ ಕೆಲಸಗಾರರೂ ರೈತರು ಸರಳ ಇವಾಕಿ ಪರ್ವತದ ಚಿತ್ರಣದಲ್ಲಿ ತೃಪ್ತರಾಗಿದ್ದರು. ಕ್ರಮೇಣ ಅವರ ಆಲೋಚನೆಗಳು ವಿಸ್ತರಿಸಲು ಪ್ರಾರಂಬವಾಗಿ ದೊಡ್ಡ ಚಿತ್ರಗಳಿಗೂ ಕೈ ಹಾಕಲು ಪ್ರಾರಂಬಿಸಿದರು.



೨೦೦೫ರಲ್ಲಿ ಅಕ್ಕ ಪಕ್ಕದ ರೈತರು ಕೈ ಜೋಡಿಸಿ ಬೃಹತ್ ಆಕೃತಿಗಳ ರೂಪಿಸಲು ಪ್ರಾರಂಬಿಸಿದರು. ಪ್ರವಾಸಿಗಳಿಂದ ಊರ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು ಈ ಕೃತಿಗಳ ಹಿಂದಿನ ನೂಕು ಶಕ್ತಿ. ಮೆ ತಿಂಗಳಲ್ಲಿ ನಾಟಿ ಮಾಡಿದ ಬೆಳೆಯು ಸೆಪ್ಟಂಬರ್ ತಿಂಗಳಿಗಾಗುವಾಗ ಬೆಳೆದು ನಿಂತು ಆ ಆಕರ್ಷಕ ಚಿತ್ರವನ್ನು ತೋರ್ಪಡಿಸುತ್ತದೆ. ಮೊದಲು ರೈತರು ಕಂಪ್ಯೂಟರಿನಲ್ಲಿ ವಿನ್ಯಾಸ ಮಾಡಿ ಯಾವ ರೀತಿಯಲ್ಲಿ ನೆಡುವುದೆಂದು ತೀರ್ಮಾನಿಸುತ್ತಾರೆ. ನೂರಾರು ಸ್ವಯಂಸೇವಕರು ನಾಲ್ಕು ಬಣ್ಣದ ನೇಜಿ ನೆಡುವುದರಲ್ಲಿ  ಕೈ  ಜೋಡಿಸುತ್ತಾರೆ. ಇದರಿಂದಾಗುವ  ಪ್ರಯೋಜನ  ಗುರುತಿಸಿ  ಈಗ  ಹಲವು  ಹಳ್ಳಿಗಳು  ಈ  ಮೇಲ್ಪಂಕ್ತಿ  ಅನುಸರಿಸುತ್ತಿವೆಯಂತೆ.  



ಸಾವಿರಾರು ನಾಟಿ ತಳಿಗಳು ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ವಿಬಿನ್ನತೆ ಅನಿವಾರ್ಯ ಎನ್ನುವುದೂ ಇದರಿಂದ ನಾವು ಕಲಿಯುವ ಸಂದೇಶ.  ಮೇಲಿನ ಚಿತ್ರದಲ್ಲಿರುವ   ಬೇರೆ ಬೇರೆ ಬಣ್ಣದ   ನಾಲ್ಕು ತಳಿಯ ಬತ್ತದ ಸಸಿಗಳು ಉಪಯೋಗವಾಗುವುದಂತೆ. ಹದಿನೈದು ಸಾವಿರ ಚದರಡಿ ಮೀರುವ ಈ ಚಿತ್ರಗಳು ನೆಲದಲ್ಲಿ ನಿಂತರೆ ಹೆಚ್ಚೇನು ಗುರುತಿಸಲಾಗದ ಕಾರಣ, ಇದರ ಪೂರ್ತಿ ಸ್ವರೂಪ ಅರ್ಥೈಸಲು ಅಲ್ಲೊಂದು ನಿರ್ಮಿಸಲಾದ ಅಟ್ಟಳಿಗೆ ಏರಬೇಕಂತೆ. ವಿಮಾನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಕಣ್ಣಿಗೆ ಹಬ್ಬ.

Monday, January 25, 2010

ಹುಚ್ಚು ನಾಯಿ ಕಡಿತಕ್ಕೆ ನಾಟಿ ಚಿಕಿತ್ಸೆ ಪರಿಣಾಮಕಾರಿಯೇ ?

ನಮ್ಮಲ್ಲಿ ಮೊದಲು ಹುಚ್ಚು ನಾಯಿ ಕಡಿತ ಬಹಳ ಅಪಾಯಕಾರಿಯಾಗಿತ್ತು. ಅಂದು ಎರಡು ರೀತಿಯ ಚಿಕಿತ್ಸಾ ಕ್ರಮ ಚಲಾವಣೆಯಲ್ಲಿತ್ತು. ಮೊದಲನೆಯದು ಊರ ಸರಕಾರಿ ಆಸ್ಪತ್ರೆಯಿಂದ ಟೆಲಿಗ್ರಾಮ್ ಕಳುಹಿಸಿ ಕೂನೂರಿಂದ ತರಿಸಿದ ಹೊಕ್ಕುಳು ಸುತ್ತು ಕೊಡುವ ವಿಪರೀತ ನೋವು ಉಂಟು ಮಾಡುವ ಹದಿನಾಲ್ಕು ಚುಚ್ಚುಮದ್ದುಗಳು. ಅದಕ್ಕೆ ಹಲವು ಅಡ್ಡ ಪರಿಣಾಮಗಳಿದ್ದವು ಮತ್ತು ಚೇತರಿಸಿಕೊಳ್ಳುವ ಬಗ್ಗೆ ಸಂಪೂರ್ಣ ನಂಬಲರ್ಹವಾಗಿರಲಿಲ್ಲ. ಎರಡನೆಯದು ಯಾವುದೇ ದಾಖಲಾತಿಗೂ ಒಳಪಡದ ನಾಟಿ ಪದ್ದತಿಯಿಂದ ಹುಚ್ಚು ಹಿಡಿಸಿ ಗುಣಪಡಿಸುವುದು.

ಈಗ ಸಂಪೂರ್ಣ ಕಾಣೆಯಾಗಿರುವ ಈ ಚಿಕಿತ್ಸೆಯಲ್ಲಿ ಕಡಿತಕ್ಕೊಳಗಾದವನಿಗೆ ನಿರ್ದಿಷ್ಟ ಬೀಜ / ತೊಗಟೆ ತಿನ್ನಿಸಿ ಹುಚ್ಚು ಹಿಡಿಸುವುದು. ಎರಡು ಜನ ದಾಂಡಿಗರು ರೋಗಿಯ ಹಿಡಿದುಕೊಳ್ಳಲು ಮತ್ತು ಹತ್ತಾರು ಕೊಡಪಾನ ನೀರು ಹೊಯ್ಯಲು ತಯಾರಿರಬೇಕಾಗುತ್ತದೆ. ಔಷದ ತಿನ್ನಿಸಿದ ಪರಿಣಾಮ ನಾಯಿ ಕಡಿತಕ್ಕೊಳಗಾದವ ಹುಚ್ಚುಹುಚ್ಚಾಗಿ ವರ್ತಿಸಲು ಆರಂಬಿಸುತ್ತಾನೆ. ಪೂರಾ ಹುಚ್ಚ ಎನಿಸಿಕೊಂಡ ನಂತರ ನೀರು ಹೊಯ್ಯಲು ಪ್ರಾರಂಬವಾಗಿ ಸಾಕು, ಚಳಿಯಾಗುತ್ತದೆ ಎಂದು ಗೋಗೆರೆಯುವ ವರೆಗೂ ಮುಂದುವರಿಯುತ್ತದೆ. ನಾನು ಚಿಕ್ಕವನಾಗಿದ್ದಾಗ ಕೇಳಿದ ಇದು ಹುಚ್ಚು ನಾಯಿ ಕಡಿಸಿಕೊಂಡವನಿಗೆ ಹುಚ್ಚು ಹಿಡಿಸುವ ತೀರಾ ಮೂಡನಂಬಿಕೆ ಚಿಕಿತ್ಸೆ ಅವೈಜ್ನಾನಿಕ ಎನ್ನುವ ಬಾವನೆ ನನಗಿತ್ತು.

ಔಷದಿಯ ಶಾಸ್ತ್ರದ ಇತಿಹಾಸ ನೋಡುವಾಗ ಹೆಚ್ಚಿನ ರೇಬಿಸ್ ಸಾವುಗಳು ತಾತ್ಕಾಲಿಕವಾಗಿ ಮೆದುಳು ನಿರ್ವಹಿಸಲು ವಿಫಲವಾಗಿ ಉಸಿರಾಟ ಸಮಸ್ಯೆ ಉಂಟಾಗಿ ಹೊರತು ಮೆದುಳಿಗೆ ಯಾವುದೇ ಶಾಶ್ವತ ಬದಲಾವಣೆಯೂ ಸಮಸ್ಯೆಯೂ ಆಗಿರುವುದಿಲ್ಲ. ಅಮೇರಿಕದಲ್ಲಿ ಐದು ವರ್ಷ ಹಿಂದೆ ಒಂದು ಬಾವಲಿ ಕಚ್ಚಿದ ಹುಡುಗಿಯ ಚಿಕಿತ್ಸೆಗೆ ಈ ಜಾಡಿನಲ್ಲಿ ಸಾಗಿದ ವೈದ್ಯರು ಈ ಅಘಾತದಿಂದ ಮೆದುಳು ವಿಫಲವಾಗುವುದರ ತಪ್ಪಿಸಲು ಅವಳನ್ನು ಕೊಮ ಸ್ಥಿತಿಯಲ್ಲಿರಿಸಿದರು. ಅಂತೂ ಆ ಹುಡುಗಿ ಬದುಕಿದಳು ಮತ್ತು ಇದು ರೇಬಿಸ್ ರೋಗ ಉಲ್ಬಣಗೊಂಡರೂ ಬದುಕಿ ಉಳಿದ ಪ್ರಥಮ ದಾಖಲೆ. ಒಂದು ರೀತಿಯಲ್ಲಿ ಇದು ನಮ್ಮ ಹುಚ್ಚು ಹಿಡಿಸುವ ಪ್ರಯತ್ನವನ್ನು ಹೋಲುತ್ತದಲ್ಲವೇ ?

ಇದನ್ನು ನೋಡುವಾಗ ಆ ಆಘಾತ ತಡಕೊಳ್ಳುವ ಶಕ್ತಿಯನ್ನು ಈ ಹುಚ್ಚು ಹಿಡಿಸುವ ಪ್ರಯೋಗ ನೀಡುವುದೋ ಎನ್ನುವ ಸಂಶಯ ಬರುತ್ತದೆ. ರೋಗ ಉಲ್ಬಣಗೊಳ್ಳುವುದೂ ಚಿಕಿತ್ಸಾ ಸಮಯವೂ ತುಂಬ ಹಿಂದು ಮುಂದಾದರೆ ಇದು ವಿಫಲವಾಗುವ ಸಾದ್ಯತೆ ಹೆಚ್ಚು. ಆದರೆ ಈ ಜಾಡಿನಲ್ಲಿ ಸಾಗಿದರೆ ಖಂಡಿತ ಚಿಕಿತ್ಸಾ ವಿಧಾನ ರೂಪಿಸಬಹುದು ಅನಿಸುತ್ತದೆ.

ಪ್ರಯತ್ನಿಸುವುದಾದರೆ  ನಮ್ಮ ಕೇಂದ್ರ ಆಸ್ಪತ್ರೆಗಳಲ್ಲಿ   ಈ ಪ್ರಯೋಗಕ್ಕೆ ಬಲಿಪಶು ಆಗಲು ಸಾಯಲು ಸಿದ್ದವಾದ ರೇಬಿಸ್ ರೋಗಿಗಳು ಸಿಗುತ್ತಲೇ ಇರುತ್ತಾರೆ. ಇಂದು   ನಮ್ಮ ಹಲವು ಆಸ್ಪತ್ರೆಗಳು ಪರದೇಶಿ ಕಂಪೇನಿಗಳ ವಿವಿದ ಔಷದಿಗಳ ದೃಡಿಕರಣಕ್ಕಾಗಿ ಚಿಕಿತ್ಸೆ ಒಪ್ಪಂದ ಮಾಡಿಕೊಂಡಿವೆ. ಆ ಕಂಪೇನಿಗಳಿಗೆ ನಮ್ಮವರು ಅಗ್ಗದ ಬಲಿಪಶುಗಳು. ಹಾಗೆಯೇ ಈ ಹುಚ್ಚು ನಾಯಿ ರೋಗದ ಪ್ರಯೋಗಗಳಿಗೆ ಪರದೇಶಿ ಹಣ ಹರಿದು ಬಂದಿತೋ ನಮ್ಮ ವೈದ್ಯರು ಪ್ರಶ್ನಿಸಿಕೊಳ್ಳುತ್ತಾರೆ.  ಆದರೆ  ಅವರಿಗೆ  ಲಾಭವಿಲ್ಲದ ಪ್ರಯೋಗಗಳಿಗೆ   ಔಷದಿ ಕಂಪೇನಿಗಳ ನೆರವು ಇಲ್ಲ ಮಾತ್ರವಲ್ಲದೆ ಸಾದ್ಯವಾದರೆ ಅಡ್ಡಗಾಲನ್ನೂ ಖಂಡಿತಾ ಹಾಕುತ್ತಾರೆ.

ಅಮೇರಿಕದಲ್ಲಿ ಯಶಸ್ವಿಯಾದ ಸಾಕು ನಾಯಿಗಳಿಗೆ ಚುಚ್ಚು ಮದ್ದು ನಮ್ಮಲ್ಲಿ ಗೆಲ್ಲುವುದು ಕಷ್ಟ. ಎರಡು ವರ್ಷ ಹಿಂದೆ ನಮ್ಮ ಗ್ರಾಮದಲ್ಲಿ ದರ್ಮಾರ್ಥ ಚುಚ್ಚುಮದ್ದು ಕೊಡುವ ಕಾರ್ಯಕ್ರಮದಲ್ಲೂ ಕೆಲವರು ನಾಯಿಯನ್ನು ಕೊಂಡುಹೋಗಲೇ ಇಲ್ಲ. ಒಬ್ಬರು ಅಲ್ಲಿ ಹಣ ಕೊಡಬೇಕಂತೆ ಎಂದು ವದಂತಿ ಹಬ್ಬಿಸಿದರು. ಮರುವರ್ಷ ಅವರ ನಾಯಿ ರೇಬಿಸ್ ಸೀಕು ಹಿಡಿದು ಕಟ್ಟಿ ಹಾಕಲು ಹೋದ ಅವರ ಮಗಳನ್ನೇ ಕಚ್ಚಿತು. ಆದರೆ ಇದರಿಂದ ಪಾಠ ಕಲಿಯುವರೇ ? ಪ್ರಪಂಚದಲ್ಲಿಯೇ ಅತಿ ಹೆಚ್ಚು ಹುಚ್ಚು ನಾಯಿ ಕಡಿತ ಹಾಗೂ ಸಾವಿನ ಹೆಗ್ಗಳಿಕೆ ನಮ್ಮ ದೇಶದ್ದು. ಅದುದರಿಂದ ಇದಕ್ಕೆ ಪರಿಹಾರವೂ ನಾವೇ ಹುಡುಕಬೇಕು.

ಸಾವು ಶೇಕಡಾ ೧೦೦ ಖಚಿತವಾದ ರೇಬಿಸ್ ರೋಗದಿಂದ ಚೇತರಿಸಿಕೊಳ್ಳುವ ಅವಕಾಶ ಮೊದಲು ಸೊನ್ನೆಯಿಂದ ಎಂಟಕ್ಕೇರಿದೆಯಂತೆ. ನಂತರದ ಲಕ್ಷಣಗಳು ಇನೂ ಹೆಚ್ಚು ಆಶಾದಾಯಕವಾಗಿವೆ ಅಂದರೆ ಅನಂತರ ಚಿಕಿತ್ಸೆಗೆ ಒಳಪಟ್ಟ ಹತ್ತರಲ್ಲಿ ಎರಡು ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಶೇಕಡಾ ಇಪ್ಪತ್ತು ಅನ್ನಬಹುದು. ಹಾಗೆ ಮೂವತ್ತು ವರ್ಷ ಹಿಂದೆ ಇದೇ ಸ್ಥಾನದಲ್ಲಿದ್ದ ಮಕ್ಕಳ ರಕ್ತ ಕಾನ್ಸರಿನ ರೋಗಿಗಳಲ್ಲಿ ಶೇಕಡಾ ಎಂಬತ್ತು ಇಂದು ಗುಣಮುಖರಾಗುತ್ತಿದ್ದಾರಂತೆ. ಕ್ರಮೇಣ ಸೂಕ್ತ ಚಿಕಿತ್ಸಾ ಕ್ರಮ ಹುಚ್ಚು ನಾಯಿ ಕಡಿತಕ್ಕೂ ಬಂದರೂ ಸ್ವಾಬಾವಿಕ ಅನಿಸುತ್ತದೆ. ಮೆದುಳನ್ನು ರಕ್ಷಿಸುವ ವೈದ್ಯ ವಿಜ್ನಾನಿಗಳು ವೈಜ್ನಾನಿಕವಾಗಿ ಕಂಡ ಗುಟ್ಟು ನಮ್ಮ ಪಾರಂಪರಿಕ ಜ್ನಾನದಲ್ಲಿ ಅಡಗಿದೆಯೋ ಎನ್ನುವ ಗೊಂದಲ ಮೂಡಿದೆ.


ಮೇಲೆ ಸೂಚಿಸಿದ ಎರಡನೆಯ ಮಾಹಿತಿ ಮೂಲಕ್ಕೆ http://en.wikipedia.org/wiki/Milwaukee_protocol ದಾರಿಯಾಗಿ http://www.medscape.com/viewarticle/712839_7 ಗೆ ಸಾಗಬೇಕು.

Monday, January 18, 2010

ಮಾದರಿ ಆಗ ಬಹುದಾದ ಅಮೇರಿಕದ ಯೂರಿಯ ಕಡಿಮೆ ಬಳಸಿ ಚಳುವಳಿ

ಸಾರಜನಕ ಆಹಾರ ಬೆಳೆಯುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಾದ ಪಾಲು ತೊಳೆದು ಹೋಗಿ ನದಿ ಸರೋವರ ಸೇರಿ ಪಾಚಿ ಬೆಳೆಯಲು ಪ್ರೇರಣೆಯಾಗುತ್ತದೆ. ಅಲ್ಲಿ ಆಮ್ಲಜನಕದ ಜಾಗವನ್ನು ಸಾರಜನಕ ಆತಿಕ್ರಮಿಸಿ ಪಾಚಿ ಬೆಳೆಯಲು ಅನುಕೂಲ ಮಾಡಿ ಉಳಿದ ಸಾಗರ ಜೀವಿಗಳ ನಿರ್ನಾಮ ಮಾಡಿದೆ. ಪ್ರಪಂಚದಲ್ಲಿ ನಾಲ್ಕು ನೂರು ಕಡೆ ಸುಮಾರು ಎರಡೂವರೆ ಲಕ್ಷ ಚದರ ಕಿಲೋಮಿಟರ್ ಇಂತಹ ನಿರ್ಜೀವ ಪ್ರದೇಶ ಗುರುತಿಸಲ್ಪಟ್ಟಿದೆ. ಪರಿಸರದಲ್ಲಿ co2 ಹೆಚ್ಚುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ. ನಂತರದ ಸ್ಥಾನ Nox ಗೆ. ಸಾರಜನಕ ಪರಿಸರಕ್ಕೆ ಮಾರಕವಾಗುತ್ತಿದೆ ಎನ್ನುವುದು ಪರಿಸರ ಜಾಗೃತಿ ಹೊಂದಿದವರಿಗೆ ಹಳೆಯ ವಿಚಾರ.

ಸಾರಜನಕ ವಾತಾವರಣದಲ್ಲಿ ಉಳಿದುಕೊಳ್ಳುವುದಿಲ್ಲ. ಅಮೋನಿಯಾ ರೂಪದಲ್ಲಿ ಮಳೆಯ ಜತೆ ಭೂಮಿಗೆ ಬೀಳುತ್ತದೆ. ತಜ್ನರು ವಾತಾವರಣದಲ್ಲಿ ಹೆಚ್ಚಿರುವ ಅಮೋನಿಯಾ ಪ್ರಮಾಣವನ್ನು ಗುರುತಿಸುತಿದ್ದಾರೆ. ವಾಹನದ ಹೊಗೆ, ವಿದ್ಯುತ್ ಕೇಂದ್ರದ ಹೊಗೆ ನಳಿಗೆ ಗಣನೀಯವಾಗಿ ವಾತಾವರಣದ ಸಾರಜನಕವನ್ನು ಮಲೀನಗೊಳಿಸುತ್ತದೆ. ಅಮೇರಿಕದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುವ ಸಾರಜನಕ ಮಲೀನತೆ ತಡೆಗಟ್ಟಲು ಹೆಜ್ಜೆ ಇಡುವ ಲಕ್ಷಣಗಳಿವೆ. ಇದು ಸಾಕಷ್ಟು ಪರಿಣಾಮಕಾರಿಯಾಗಬಹುದು.

ಬದಲಾದ ಸನ್ನಿವೇಶದಲ್ಲಿ ಸಾರಜನಕ ಪ್ರೀತಿಸುವ ಸಸ್ಯಗಳು ಬಲಶಾಲಿಗಳಾಗಿ ಸಮತೋಲನ ವ್ಯತ್ಯಾಸಪಡಿಸುತ್ತದೆ. ಅಲ್ಲಿರುವ ಮೂಲ ಸಸ್ಯಗಳು ಹೊರದೂಡಲ್ಪಟ್ಟು ಸಸ್ಯ ವೈವಿದ್ಯ ಸ್ವರೂಪ ಬದಲಾಗುತ್ತದೆ. ಹಲವು ಕಡೆಗಳಲ್ಲಿ ಹೊಸತಾಗಿ ಬೆಳೆಯಲು ಪ್ರಾರಂಬಿಸಿದ ಹುಲ್ಲು ಕಾಡ್ಕಿಚ್ಚಿಗೆ ಕಾರಣವಾಗಿದೆಯಂತೆ

ಸಾರಜನಕ ಉಪಯೋಗದ ಕ್ಷಮತೆ ಹೆಚ್ಚಿಸಲು ಅಮೇರಿಕದಲ್ಲಿ ರೈತರು ಸಂಘಟಿತರಾಗುವುದು ಸಂತಸದ ವಿಚಾರ. ಎಷ್ಟು ಸಾರಜನಿಕ ಉಪಯೋಗಿಸಲೇ ಬೇಕೆಂದು ನಿಖರವಾಗಿ ಗುರುತಿಸಿ ಅಷ್ಟನ್ನೇ ಉಪಯೋಗಿಸುತ್ತಾರೆ. ದೇಶದಲ್ಲಿಯೇ ಸಾರಜನಕ ಉಪಯೋಗವನ್ನು ಶೇಕಡಾ ಇಪ್ಪತ್ತೈದರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಇಂತಹ ಗೊಬ್ಬರ ಉಪಯೋಗ ಕಡಿತಗೊಳಿಸುವ ನೂರಾರು ರೈತರಲ್ಲಿ ನಾನೂ ಒಬ್ಬ ಎನ್ನುವ ಲಿಂಡ್ಸೆ ಪರಿಸರ ಸ್ವಚ್ಚವಾಗಿರಬೇಕು. ನಾವೂ ಇಲ್ಲಿ ನೀರು ಕುಡಿಯುತ್ತೇವೆ ಎನ್ನುತ್ತಾರೆ. ಹತ್ತು ವರ್ಷ ಹಿಂದೆ ೪೦ ಐಯೊವಾ ರಾಜ್ಯದ ಸೋಯಾ ಬೆಳೆಸುವ ರೈತರು ಪಾಲ್ಗೊಳ್ಳುತ್ತಿದ್ದ ಈ ಚಳುವಳಿಗೆ ಈಗ ಐನೂರು ರೈತರು ಬೆಂಬಲಿಸುತ್ತಿದ್ದಾರೆ.  



ಅಮೇರಿಕದವರು ಹೇಳುತ್ತಿರುವ ಮಾದರಿ ನಮಗೆ ಅನುಕರಣೀಯವಾಗಿದೆ. ಯೂರಿಯಾ ಬಳಕೆ ಮಟ್ಟವನ್ನು ಅನಿವಾರ್ಯ ಮಿತಿಗೆ ಇಳಿಸಿ ಉಳಿದ ಪೋಷಕಾಂಶಗಳ ಬಗೆಗೆ ಗಮನಿಸುವುದು ಉತ್ತಮ. ಎಲ್ಲೆಡೆಯಂತೆ ನಮ್ಮಲ್ಲೂ ಈ ಕೃತಕ ಗೊಬ್ಬರದ ಅವಲಂಬನೆಯಿಂದಾಗಿ ಮಣ್ಣಿನ ಸ್ವರೂಪವೇ ಬದಲಾಗಿದೆ. ಭೂಮಿತಾಯಿ ಎಂದು ಬಾಯಿಮಾತಿನಲ್ಲಿ ಹೇಳುವ ನಾವು ಮಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಜೀವಿಗಳನ್ನೆಲ್ಲ ಕೊಲ್ಲುತ್ತಿದ್ದೇವೆ. ಒಂದು ಕಿಲೊ ಗೊಬ್ಬರದ ಉಪಯೋಗ ಇಪ್ಪತ್ತೈದು ಕಿಲೊ ಆಹಾರ ದಾನ್ಯ ಉತ್ಪತ್ತಿಯಾಗುತಿತ್ತು. ಈಗ ಎಂಟಕ್ಕೆ ಇಳಿದಿದೆ.

ಸಮತೋಲನ ಗೊಬ್ಬರ ಉಪಯೋಗ ನಮ್ಮಲ್ಲಿ ಅನುಸರಿಸಲಾಗುತ್ತಿಲ್ಲ. ಸರಕಾರದಿಂದ ಹೆಚ್ಚು ದರ ಬೆಂಬಲ ಯೂರಿಯಾಕ್ಕೆ. ಪರಿಣಾಮ ಹೆಚ್ಚು ಯೂರಿಯಾ ಉಪಯೋಗ. ಈ ಸರಕಾರಿ ಬೆಂಬಲ ೧೯೭೬- ೭೭ ರಲ್ಲಿ ಅರುವತ್ತು ಕೋಟಿ ರೂಪಾಯಿ ತೇರಿಗೆ ಹಣ ಉಪಯೋಗಿಸಿದ್ದರೆ ಮೂವತ್ತು ವರ್ಷಗಳ  ಅನಂತರ    ಕಳೆದ ವರ್ಷ ೨೦೦೮ -೦೯ ರಲ್ಲಿ ಅದು ತೊಂಬತ್ತಾರು ಸಾವಿರ ಕೋಟಿ ರೂಪಾಯಿ ಮುಟ್ಟಿದೆ. ಇದರಿಂದಾಗಿ ಯುರಿಯಾ ಅತ್ಯಂತ ಅಗ್ಗವಾಗಿ ಉಳಿದ ಗೊಬ್ಬರಗಳ ಉಪಯೋಗ ಕಡಿಮೆಯಾಗಿದೆ. 4:2:1 ಪ್ರಮಾಣದಲ್ಲಿ ವಿವಿದ ಪೋಷಕಾಂಶಗಳ   ಮಿಶ್ರಣ ನಮ್ಮಲ್ಲಿ ಉತ್ತಮ ಎಂದು ತಜ್ನರು ತೀರ್ಮಾನಿಸಿದ್ದರೆ ಇಂದು ಪಂಜಾಬಿನಲ್ಲಿ 35:9:1 ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

ಹಿಂದೆ ಈ ನಮ್ಮ ದೇಶವನ್ನು ರಾಜೀವನೆಂಬ ಮಹಾರಾಜ ಆಳುತ್ತಿದ್ದ. ಅವನು ಆಗ ಯುರಿಯಾ ಉತ್ಪಾದನೆ ಹೆಚ್ಚಿಸಲು ಉತ್ತೇಜನವಿತ್ತಿದ್ದ. ಉದ್ಯಮಿಗಳಿಗೆ ಕನಿಷ್ಟ ಲಾಬದ ಬೆಂಬಲ ಸರಕಾರವೇ ಕೊಡುವ ಕಾರಣ ಸಾಕಷ್ಟು ಯೂರಿಯಾ ಕಾರ್ಖಾನೆಗಳು ಸ್ಥಾಪನೆಗೊಂಡವು. ಆಗ ಎಲ್ಲವೂ ಸೋನಿಯಳ ಗೆಳೆಯ ಕ್ವಾಟ್ರೋಚಿ ಅಣತಿಯಂತೆ ನಡೆಯುತಿತ್ತು. ೧೯೬೭ರಲ್ಲಿ ಮದ್ರಾಸ್ ತೈಲಾಗಾರ ಗುತ್ತಿಗೆಯ ಕೆಲಸದಲ್ಲಿ ಬಾರತಕ್ಕೆ ಬಂದ ಕ್ವಾಟ್ರೋಚಿ ರಾಜೀವನ ಆಡಳಿತದ ಕಾಲದಲ್ಲಿ ಅತ್ಯಂತ ಪ್ರಬಾವಶಾಲಿಯಾಗಿದ್ದ. ೧೫೦೦೦ ಕೋಟಿ ರೂಪಾಯಿಯ ಯುರಿಯಾ ಕಾರ್ಖಾನೆಗಳ ಗುತ್ತಿಗೆ ಇವನ ಪಾಲಾಗಿತ್ತು. ರಾಜೀವನಿಗೆ ಉರುಳಾದ ಬೋಪೋರ್ಸ್ ಫಿರಂಗಿಯ ೬೪ ಕೋಟಿ ರೂಪಾಯಿ ಲಂಚದಿಂದ ಹೆಚ್ಚು ಹಣ ನಮ್ಮ ದೇಶ ಈ ಗುತ್ತಿಗೆಗಳಿಂದ ಕಳಕೊಂಡಿದೆ. ಆದರೆ ರುಜುವಾತು ಸಿಗುವಂತೆ ಇವರುಗಳು ಎಡವಿದ್ದು ಫೀರಂಗಿ ವ್ಯವಹಾರದಲ್ಲಿ.

Monday, January 11, 2010

ಅಮೇರಿಕ ಎಂದರೆ ಇನ್ನೊಂದು ಲೋಕ

ಅಮೇರಿಕಕ್ಕೆ ಹೋಗುವುದೆಂದರೆ ಪುನರ್ಜನ್ಮ ಹೊಂದುವುದೇ ಸರಿ. ಎಲ್ಲರೂ ಬತ್ತಲೆಯಾಗಿಯೇ ಅಮೇರಿಕ  ಪ್ರವೇಶಿಸುತ್ತಾರೆ. ಆಲ್ಲಲ್ಲ,  ಪ್ರವೇಶಿಸುವ ಮೊದಲು ಬತ್ತಲಾಗುತ್ತಾರೆ. ಅಮೇರಿಕ ಎಂದರೆ ಸ್ವರ್ಗ ಸಮಾನ ಎನ್ನುವ ಕಲ್ಪನೆ ನಮ್ಮಲ್ಲಿ ಹಲವರಿಗಿತ್ತು. ಅದು ಈಗ ನಿಜವಾಗಿದೆ.   ಆರು ವರ್ಷ ಹಿಂದೆ ನಮ್ಮ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡೀಸ್ ಅವರನ್ನು ಬತ್ತಲೆ ಮಾಡಿದ ಅಮೇರಿಕದ ರಕ್ಷಣಾಪಡೆ ಇನ್ನು ಎಲ್ಲರನ್ನೂ ಬತ್ತಲಾಗಿಸಲಿದೆ.     ದಯವಿಟ್ಟು ಯಾರೂ ಸ್ಕಾನ್ ಚಿತ್ರ ದರ್ಮಾರ್ಥವಾಗಿ ಕೇಳಬಾರದು. ಅಮೇರಿಕದಲ್ಲಿ ದುಡ್ಡೇ ದೊಡ್ಡಪ್ಪ. ದರ್ಮಾರ್ಥ ಸೇವೆ ಇಲ್ಲ.




ನನ್ನ ಒಂದು ಕಣ್ಣು ಹೋದರೇನಾಯಿತು, ಅವನ ಎರಡೂ ಕಣ್ಣು ಹೋಗಿದೆ ಎನ್ನುವಂತೆ ಇಲ್ಲೂ ನಾವು  ಬಹಳ  ಸಂಬ್ರಮ ಪಡಬಹುದಾದ  ವಿಚಾರ ಒಂದಿದೆ. ಪಾಕಿಸ್ತಾನದವರನ್ನು ಎಲ್ಲರನ್ನೂ ಪೂರ್ತಿ ಬತ್ತಲೆ ಮಾಡುತ್ತಾರಂತೆ.  ಭಾರತ ಆ ಪಟ್ಟಿಯಲ್ಲಿಲ್ಲ.




ಬರಹಗಾರ ಕಾಲ್ವಿನ್ ಟ್ರಿಲ್ಲಿನ್ ಮೂರು ವರ್ಷ ಹಿಂದೆಯೇ ಇದರ ಸಾದ್ಯತೆಯನ್ನು ಟಿವಿ ಎದುರುಗಡೆ ಹೇಳಿ ಬಿಟ್ಟಿದ್ದರು.  ಮೊನ್ನೆ ಸಿಕ್ಕಿಬಿದ್ದ  ನೈಜೀರಿಯದ   ಭಯೋತ್ಪಾದಕ ಚಡ್ಡಿಯೊಳಗೆ ಹುದುಗಿಸಿದ್ದ ಬಾಂಬು ಡಮಾರ್ ಎಂದಿದ್ದರೆ ಸ್ವರ್ಗದಲ್ಲಿ ಅಶ್ವಾಸನೆ ಪ್ರಕಾರ ಸಿಗುವ ಎಪ್ಪತ್ತೆರಡು ಸುಂದರ ಕನ್ಯೆಯರ ಜತೆ ಸಿಕ್ಕರೂ  ಏನೂ   ಪ್ರಯೋಜನವಾಗುತ್ತಿರಲಿಲ್ಲ ಎಂದು ಟ್ರಿಲ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.   ಅವರ  ಪತ್ರಿಕಾ  ಅಂಕಣದ ಕೊಂಡಿ ಇಲ್ಲಿದೆ.  

ಹತ್ತು ವರ್ಷ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯ ಮುಂದೆ ನಿಂತಿದ್ದೆ. ಅವನೊಬ್ಬ ಇಂಗ್ಲೀಷ್ ಅರಿಯದ ಮುಂಬಯಿ ಪೊಲೀಸ್ ಇಲಾಖೆಯ ಕನಿಷ್ಟ ಬಿಲ್ಲೆ. ಸಾಲಿನಲ್ಲಿ ಎಲ್ಲರನ್ನೂ ಸತಾಯಿಸುತ್ತಿದ್ದ ಕಾರಣ ಬುದ್ದಿವಂತರು ಸಾಲು ಬದಲಾಯಿಸಿದರು. ಅಲ್ಲಿ ಪಂಚೆ ಉಟ್ಟವ ನಾನೊಬ್ಬನೇ ಆದ ಕಾರಣ ಸುಲಭವಾಗಿ ಗುರುತಿಸುವಂತಿದ್ದೆ. ನನ್ನನ್ನು ಹೋಗಲು ಬಿಡುವುದಿಲ್ಲ ಎಂದ ಸರಿ. ಪರವಾಗಿಲ್ಲ ಎಂದು ನಿರ್ಲಿಪ್ತವಾಗಿ ಹೇಳಿದೆ. ಏನೂ ಪ್ರಯೋಜನವಿಲ್ಲ ಅನಿಸಿ ಪಾಸ್ ಪೊರ್ಟಿನಲ್ಲಿ ಮುದ್ರೆ ಒತ್ತಿದ. ಇಂತಹ ಜನಗಳನ್ನೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಿಸುವ ನಮ್ಮ ಸರಕಾರದ ಬಗ್ಗೆ   ಜುಗುಪ್ಸೆ  ಮೂಡುತ್ತದೆ.

Wednesday, January 06, 2010

ಶೌಚಾಲಯ ಉಪಯೋಗಿಸುವ ಹಂದಿಗಳು.




ಹುಟ್ಟುವಾಗಲೇ ಹಂದಿಮರಿಗಳು ಶೌಚಾಲಯ ತರಬೇತಿ ಪಡೆದಿರುತ್ತದೆ ಎಂದು ಗೆಳೆಯ ತೋಮಸ್ ಜರ್ಮನಿಯ ಅಶಾಫೆನ್ ಬರ್ಗ್ ಪಕ್ಕದಲ್ಲಿರಿರುವ ವೈಲರ್ ಹೋಫ್ ಎಂಬ ಕೃಷಿ ಕ್ಷೇತ್ರದಲ್ಲಿ ಹೇಳುವಾಗ ನನಗೆ ಆಶ್ಚರ್ಯಕರ ಅನಿಸಿತ್ತು. ನನ್ನ ಸೈಕಲ್   ಪ್ರವಾಸದಲ್ಲಿ ಜರ್ಮನಿಯಲ್ಲಿ   ಹಲವು ಪ್ರಾಣಿಗಳ ಸಾಕಿದ  ಈ  ಬಯೋಡೈನಾಮಿಕ್  ಕೃಷಿ ಕ್ಷೇತ್ರಕ್ಕೆ ಬೇಟಿ ಇತ್ತಿದ್ದೆ. ಅಲ್ಲಿ   ದಾನ್ಯಗಳ   ಹಾಗೂ  ತರಕಾರಿಗಳ  ಬೆಳೆಸುವುದು  ಮಾತ್ರವಲ್ಲ  ಪಶು ಸಂಗೋಪನೆ  ಕೈಗೊಂಡಿದ್ದರು.    ಅಲ್ಲಿನ ಶಿಕ್ಷಣ ಪದ್ದತಿಯಲ್ಲಿ ಒಂದು ವರ್ಷ ಪ್ರಾಯೋಗಿಕ ತರಬೇತಿ ಪಡೆಯುವುದು ಅವಶ್ಯಕವಾಗಿದ್ದ ಕಾರಣ  ಇಂಗ್ಲೀಷ್  ಸಲೀಸಾಗಿ  ಮಾತನಾಡುವ   ಹಲವಾರು ಯುವಕರು ಯುವತಿಯರು   ಅಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲಿ ಕುರಿ, ಕೋಳಿ, ಹಂದಿ, ಕುದುರೆ, ದನ ಇತ್ಯಾದಿ ಹಲವಾರು ಪ್ರಾಣಿಗಳನ್ನೂ ಸಾಕುತ್ತಿದ್ದರು. ಕುರಿ ಕೋಳಿಗಳಂತೆ ಉಳಿದ ಎಲ್ಲಾ ಪ್ರಾಣಿಗಳೂ ಅವಿರುವ ಆವರಣದಲ್ಲಿ ಎಲ್ಲೆಲ್ಲೂ ಗಲೀಜು ಮಾಡಿದರೂ ಹಂದಿಗಳು ಮಾತ್ರ ಒಂದು ಮೂಲೆಯಲ್ಲಿ ಮಾತ್ರ ಮಲಮೂತ್ರ ಮಾಡುವ ಕಾರಣ ಅವನ್ನು ಸ್ವಚ್ಚಗೊಳಿಸುವ ನಿತ್ಯ ಕೆಲಸ ಸುಲಭವಾಗಿತ್ತು. ಹಂದಿಗಳು ಬರೇ ಗಲೀಜು ಪ್ರಾಣಿಗಳು ಎನ್ನುವುದು ತಪ್ಪು ಕಲ್ಪನೆ.




ಟೈವಾನ್ ದೇಶದಲ್ಲಿ ಒಬ್ಬ ರೈತ ಶೌಚಾಲಯ ಬಳಸಲು ಅಂದರೆ ನಿರ್ದಿಷ್ಟ ಸ್ಥಳದಲ್ಲಿ ಮಲಮೂತ್ರ ಮಾಡಲು ಹಂದಿಗಳ ತರಬೇತಿ ಕೊಟ್ಟಿದ್ದಾನೆ ಎನ್ನುವ ಸುದ್ದಿ ಓದುವಾಗ ವಿಚಾರ ಹೊಸತು ಎನಿಸದಿದ್ದರೂ ಆ ಅನುಬವಗಳ ನೆನಪಾಯಿತು. ಟೈವಾನಿನ ರೈತನ ನೆರೆಕರೆಯವರು ಹಂದಿ ಸಾಕಣೆಯಿಂದಾಗಿ ವಾಸನೆ ಎಂದು ಕಿರಿಕಿರಿ ಮಾಡುತ್ತಿದ್ದರಂತೆ. ಹಾಗಾಗಿ   ಅವನು ಅವನ ಹಂದಿಗಳಿಗೆ ನಾಗರಿಕ ವರ್ತನೆ ಕಲಿಸಿದನಂತೆ.  ಹಂದಿಗಳು ತರಬೇತಿ ಕೊಟ್ಟರೆ ಹೇಗೆ ಸಲೀಸಾಗಿ ಪಳಗುತ್ತದೆ ಎನ್ನುವುದು ವಿಡಿಯೊ ಕಂಡಿತು.  ಹಾಗೆ  ಅದನ್ನೂ  ಇಲ್ಲಿಯೇ  ಹಾಕಿದೆ.

ಒಂದು  ಮಾತು.  ಸಿಂಹಾಸನವೇರುವ ಹಂದಿ ಚಿತ್ರಣಕ್ಕೂ    ಟೈವಾನ್  ಫಾರ್ಮಿಗೂ  ಸಂಬಂದವಿಲ್ಲ.   ಅಂತೆಯೇ ಮೇಲೆ  ಹಾಕಿದ   ನನ್ನ ಚಿತ್ರ ಜರ್ಮನಿಯ ಬೇರೊಂದು ಫಾರ್ಮಿನಲ್ಲಿ ತೆಗೆದದ್ದು.  weilerhof ನಲ್ಲಲ್ಲ.   ಈ ಫಾರ್ಮಿನಲ್ಲಿ ಒಳಗೆ ಹೋಗುವ ಮೊದಲು ನನಗೆ ದರಿಸಿಕೊಳ್ಳಲು ಉದ್ದನೆಯ  ಕೋಟು ಕೊಟ್ಟಿದ್ದರು.