Saturday, July 09, 2011

ದಕ್ಷಿಣ ಸುಡಾನ್ ಇಂದು ಸ್ವತಂತ್ರ

ಸೈಕಲು ಪ್ರವಾಸದಲ್ಲಿ ನಾನು ಕೆನ್ಯಾ ರಾಜದಾನಿ ನೈರೋಬಿಗೆ ಹಾರುವುದು. ಅನಂತರ ಉಗಂಡಾ, ಸುಡಾನ್ ದಾರಿಯಾಗಿ ಈಜಿಪ್ಟ್ ತಲಪುವುದು ನನ್ನ ಗುರಿಯಾಗಿತ್ತು. ಬಹು ಪಾಲು ರಸ್ತೆ ಇಲ್ಲದ ಕಾರಣ ಜುಬಾ ಪಟ್ಟಣದಿಂದ ನೈಲ್ ನದಿಯ ದೋಣಿಯಲ್ಲಿ ಉತ್ತರಕ್ಕೆ ಸಾಗುವುದು ನನ್ನ ಆಲೋಚನೆಯಾಗಿತ್ತು. ನನ್ನ ಉದ್ದೇಶಿತ ಹಾದಿಯಲ್ಲಿ ಬಹು ಕಾಲದಿಂದ ಅಂದರೆ ಅಂದಿಗೆ ಮೂವತ್ತು ವರ್ಷದಿಂದ ಜನಾಂಗಿಯ ಕಲಹ ನಡೆಯುತ್ತಿದ್ದರೂ ಹಲವು ಪ್ರವಾಸಿಗರು ದೋಣಿಯಲ್ಲಿ ದಾಟುವುದರಲ್ಲಿ ಸಫಲರಾಗಿದ್ದರು. ಅಲ್ಲಿನ ಒಂದು ದೋಣಿಯ ಚಿತ್ರ ಇಲ್ಲಿದೆ. http://is.gd/yuNje2 ನನ್ನ ಜರ್ಮನಿಯ ಸೈಕಲು ಗೆಳೆಯ ಫ್ರೆಡ್ ಪೋಲ್ ೧೯೬೪ ರಲ್ಲಿ ಇಲ್ಲೆ ದಾಟಿದ್ದರು. ಅದಕ್ಕೆ ನಾನು ಸಾಕಷ್ಟು ತಯಾರಿ ನಡೆಸಿದ್ದೆ.

ಆದರೆ ಕೆನ್ಯಾ ತಲಪುವಾಗ ಪರೀಸ್ಥಿತಿ ಕಠೀಣವಾಗಿರುವುದು ಅರಿವಾಯಿತು. ನನ್ನ ದಾರಿಯಲ್ಲಿದ್ದ ಉಗಂಡಾ ಹಾಗೂ ಸುಡಾನ್ ಅಂತರ್ಯುದ್ದ ಬರ್ಜರಿಯಾಗಿ ನಡೆಯುತ್ತಿದ್ದರೆ ಉತ್ತರದ ಇತಿಯೋಪಿಯ ಸಹಾ ದಾರಿ ಬಿಡುತ್ತಿರಲಿಲ್ಲ. ಹಾಗಾಗಿ ನನ್ನ ಯೋಜನೆಗಳೆಲ್ಲ ತಲೆಕೆಳಗಾಗಿ ಯುರೋಪಿನಿಂದ ಹಿಂತಿರುಗುವ ಬದಲು ಅಮೇರಿಕವನ್ನು ಹಾದು ಜಗತ್ತು ಪೂರ್ತಿ ಸುತ್ತು ಬರಲು ತೀರ್ಮಾನಿಸಿದೆ.

ಸುಡಾನ್ ದೇಶದಲ್ಲಿ ಉತ್ತರದಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯ. ಅದಿಕಾರವೆಲ್ಲ ಅವರ ಕೈಯಲ್ಲಿ ಕೇಂದ್ರಿತ. ದಕ್ಷಿಣದಲ್ಲಿ ವಾಸ್ತವ್ಯ ಇರುವುದು ಕರಿಯ ಕ್ರೈಸ್ತ ಅನುಯಾಯಿಗಳು. ಬ್ರೀಟಿಶರು ಸ್ವಾತಂತ್ರ ಕೊಡುವಾಗ ಈಜಿಪ್ಟ್ ಜತೆ ಒಪ್ಪಂದ ಮಾಡಿ ಒಂದು ಕಿತಾಪತಿ ಮಾಡಿದ್ದರು. ಕರಿ ಜನರೇ ಜೀವಿಸುವ ದಕ್ಷಿಣ ಸುಡಾನ್ ಪ್ರಾಂತ್ಯವನ್ನು ಪಕ್ಕದ ಕರಿಯ ಜನರಿರುವ ಕೆನ್ಯಾ ಉಗಂಡಾದಿಂದ ಬೇರ್ಪಡಿಸಿ ಬಹು ಕಾಲ ಈಜಿಪ್ಟ್ ವಶವಾಗಿದ್ದ ಉತ್ತರ ಸುಡಾನ್ ಜತೆ ಸೇರಿಸಿಬಿಟ್ಟರು. ಚಿತ್ರದಲ್ಲಿ ಕಾಣುವಂತೆ ಉತ್ತರಬಾಗ ಮರುಭೂಮಿಯಾದರೆ ದಕ್ಷಿಣಬಾಗದಲ್ಲಿ ಹುಲ್ಲುಗಾವಲು ಹಾಗೂ ಕುರುಚಲು ಕಾಡು. ಉತ್ತರದವರಿಂದ ಸತತವಾಗಿ ದಬ್ಬಾಳಿಕೆ, ಅನ್ಯಾಯ. ಶ್ರೀಲಂಕದಲ್ಲಿ ಇದ್ದಂತಹ ಪರೀಸ್ಥಿತಿ.

ಸ್ವಾತಂತ್ರ ಸಿಕ್ಕರೂ ಶಾಂತಿ ನೆಲೆಸುವುದು ??? ನಲುವತ್ತು ಬಿಲಿಯ ಡಾಲರ್ ಸಾಲವನ್ನು ಹೇಗೆ ಪಾಲು ಮಾಡುವುದು – ಈ ಸಾಲ ಕರಿಯರ ದಮನಕ್ಕೆ ವಿಮಾನ ಹಾಗೂ ಮದ್ದುಗುಂಡು ಖರೀದಿಗೆ ಈ ಸಾಲದ ಹಣ ಉಪಯೋಗವಾದದ್ದು ಹೊರತು ಅನ್ನ ಬಟ್ಟೆಗಾಗಿ ಅಲ್ಲ. ಕರಿಯರಿಗಂತೂ ಬಡಿಗೆ ಕೊಟ್ಟು ಬಡಿಸಿಕೊಂಡ ಅನುಭವ. ಅಪಾರ ಜೀವಹಾನಿಯಾಗಿದೆ. ಉದ್ದೇಶಿತ ಗಡಿ ಪ್ರದೇಶದ ನೆಲದಡಿಯಲ್ಲಿ ತೈಲಸಂಪತ್ತಿದೆ. ಸತತ ದಬ್ಬಾಳಿಕೆ ಅನುಭವಿಸಿದ ದಕ್ಷಿಣದಲ್ಲೀಗ ಬೆಡಿ ಹಿಡಿದ ಹಲವಾರು ಬಣಗಳಿವೆ. ಅವುಗಳ ಒಟ್ಟುಗೂಡಿಸುವುದು ಸುಲಭಸಾದ್ಯವಲ್ಲ. ಇವೆಲ್ಲ ಲೆಕ್ಕಾಚಾರ ಗೊಂದಲಾಮಯ. ಅದರೂ ಇನ್ನಾದರೂ ಶಾಂತಿ ನೆಲಸುವುದೋ ?

Friday, July 08, 2011

ಕೆನಡಾದ ವಿಕಲಾಂಗ ಮಹಿಳೆ ಕೈ ಚಾಲನೆ ತ್ರಿ ಚಕ್ರದಲ್ಲಿ ಬಾರತ ಅಳೆದದ್ದು


ಕಳೆದ ವಾರ ನನ್ನ ಪ್ರೀತಿಯ ನಾಯಿ ರಾಜುವನ್ನು ಪಶುವೈದ್ಯರಲ್ಲಿ ಕರಕೊಂಡು ಹೋದಾಗ ಹಿಂದಿನ ಬ್ರಿಯಾನ್ ಬಗೆಗಿನ ಪುಟದ ಬಗ್ಗೆ ಎರಡು ಮಾತುಗಳ ಹೇಳಿದ್ದೆ. ಮಾತಾಡುತ್ತಿರುವಾಗ ಡಾ ಪ್ರಸನ್ನಕುಮಾರ್ ಅವರು ಬ್ರಿಯಾನ್ ವಿಲ್ಸನ್ ಅವರಿಗೆ ವಿದ್ಯುತ್ ಅಳವಡಿಕೆ ಗೊತ್ತಿಲ್ಲವೇನೊ ಅನ್ನುವ ಸಂಶಯ ವ್ಯಕ್ತ ಪಡಿಸಿದ್ದರು. ಅಂದಿನ ಹುಡುಕಾಟದಲ್ಲಿಯೇ ಸ್ಲೊವೆನಿಯ ದೇಶದ ಸೈಕಲು ತಾಣವೊಂದರಲ್ಲಿ ಬಾರತಕ್ಕೆ ಸಂಬಂದಿಸಿದ ಈ ಕೆಳಗಿನ ಸುಳಿವು ಸಿಕ್ಕಿತು. http://www.udobnoposvetu.si/

ಇದೊಂದು ಕೆನಡ ದೇಶದ ಅಪಘಾತಕ್ಕೊಳಗಾದ ಕಾರಣ ದೇಹ ಸೋತ ೩೨ ವರ್ಷದ ಮಹಿಳೆ ಮೊರ್ಗನ್ ಬ್ರೇಡಾ ಅವರು ವಿದ್ಯುತ್ ಸಹಾಯಕ ಅಳವಡಿಸಿದ ಕೈ ಸೈಕಲಿನಲ್ಲಿ ಬಾರತವನ್ನು ಅಳೆದ ಕಥೆ. ಇದು ಹಲವು ಕಾರಣಗಳಿಗೆ ಹೆಚ್ಚು ಬೆಳಕು ಚೆಲ್ಲಬೇಕಾಗಿತ್ತು. ಅಂಗವಿಕಲತೆ ಮೀರಿ ನಡೆವ ಹಾಗೂ ವಿದ್ಯುತ್ ಸಹಾಯ ಸಮರ್ಥವಾಗಿ ಬಳಸುವ ಅತ್ಯುತ್ತಮ ಮಾರ್ಗದರ್ಶಿ ನಮಗಾಗಬಲ್ಲದು. ಸೊಂಟದ ಕೆಳಗೆ ವಶವಿಲ್ಲದ ಮಹಿಳೆ ಗಂಟೆಗಟ್ಟಲೆ ಕುಳಿತು ಸೈಕಲು ಚಾಲನೆ ಮಾಡುವುದು ಅದ್ಬುತವೇ ಸರಿ.http://theableproject.com/blog/


ನಾನು ಈ ಗುಂಪು ಪ್ರವಾಸದ ಬಗೆಗೆ ಮೊದಲು ಓದಿದರೂ ಈ ತ್ರಿಚಕ್ರ ಚಾಲಕಿ ಬಗೆಗೆ ಆಗ ಸುಳಿವು ಗೋಚರಿಸಿರಲಿಲ್ಲ. ಏಳು ವಾರಗಳಲ್ಲಿ ಅಗ್ರಾದಿಂದ ಕನ್ಯಾಕುಮಾರಿ ತನಕ ಸುಮಾರು ನಾಲ್ಕು ಸಾವಿರ ಕಿಮಿ ಇವರು ತ್ರಿ ಚಕ್ರ ತಿರುಗಿಸಿದ್ದರು. ಅದರ ಬಾಗವಾಗಿ ನಾನು ಕಳೆದ ವರ್ಷ ಹೋದ ಹೊಸಪೇಟೆಯಿಂದ ಮೈಸೂರು ವರೆಗಿನ ರಸ್ತೆಯಲ್ಲಿಯೇ ಆದರೆ ವಿರುದ್ದ ದಿಕ್ಕಿನಲ್ಲಿ ಅವರು ಸಾಗಿದ್ದರು. ಗುಂಪು ಪ್ರವಾಸದ ಬಾಗಿಯಾದರೂ ಇವರಿಗೆ ವಿಶೇಷ ವ್ಯವಸ್ಥೆಗಳ ಮಾಡಲಾಗಿತ್ತಂತೆ. ವೈಯುಕ್ತಿಕ ಬೆಂಗಾವಲು ವಾಹನ ಮೋರ್ಗನ್ ಬ್ರೇಡಾ ಅವರನ್ನು ಅನುಸರಿಸುತ್ತಿತ್ತು. ಮುಂಬಯಿಯಲ್ಲಿ ೪೨ ತ್ರಿಚಕ್ರ ಸೈಕಲುಗಳ ಅಂಗವಿಕಲರಿಗೆ ದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇಂತಹ ನಿಯೊಜಿತ ಪ್ರವಾಸಗಳು ನಮ್ಮಲ್ಲಿ ಅಪರೂಪ. ಮುಂಚಿನ ಸಂಜೆಯೇ ಯಾತ್ರಿಗಳಿಗೆ ಮರುದಿನದ ದಾರಿ ಬಗೆಗೆ ಸ್ಪಷ್ಟ ಮಾಹಿತಿ ಕೊಡಲಾಗುತ್ತದೆ. ನಿರ್ಣಾಯಕ ತಿರುವುಗಳ ಬಗೆಗೆ ವಿವರಗಳು ಕೊಡುವುದು ಮಾತ್ರವಲ್ಲ, ರಸ್ತೆ ಬದಿಯ ಯಾವುದಾದರೂ ಮರಕ್ಕೋ ಕಂಬಕ್ಕೋ ಹಳದಿ ರಿಬ್ಬನ್ ಕಟ್ಟಿರುತ್ತಾರೆ. ಪ್ರವಾಸಿಗಳು ಏಕಾಂಗಿಯಾಗಿ ಅಥವ ಜತೆಗೂಡಿ ಸಾಗಬಹುದು. ನಡುದಿನಕ್ಕಾಗುವಾಗ ದಾರಿಯಲ್ಲಿ ಊಟದ ವಾಹನ ಇವರಿಗೆ ಕಾದಿರುತ್ತದೆ. ಹಾಗೆ ದಾರಿಯಲ್ಲಿ ಊರವರ ದೋಸ್ತಿ ಮಾಡಲು, ಡಬ್ಬಾ ಹೋಟೆಲ್ ನುಗ್ಗಲು ಎಲ್ಲಕ್ಕೂ ಈ ಸೈಕಲು ಸವಾರರು ಸ್ವತಂತ್ರರು.

ದಿನಕ್ಕೆ ಸುಮಾರು ೮೦ – ೧೦೦ ಕಿಮಿ ಪ್ರಯಾಣ. ಒಮ್ಮೆ ಅದು ೧೮೦ ಆದದ್ದೂ ಉಂಟಂತೆ. ನಾಲ್ಕು ಐದು ದಿನಗಳಿಗೊಮ್ಮೆ ಒಂದು ದಿನ ವಿಶ್ರಾಂತಿ. ಅಪಾಯಕರ ದಾರಿ ದಾಟಿಸಲು ವಾಹನ ವ್ಯವಸ್ಥೆ ಇದ್ದರೂ ಇವರ ಪ್ರವಾಸ ಯೋಜಿಸಿದವರೇ ಬಂಡಿಪುರದಲ್ಲಿ ಆನೆಯಲ್ಲಿ ತುಳಿಸಿಕೊಂಡು ಕೆಲವು ದಿನ ಆಸ್ಪತ್ರೆ ವಾಸ ಮಾಡಿದ್ದಾರೆ. ವೇಗವಾಗಿ ಸಾಗುವ ಕಾರಿನ ಹಾರ್ನ್ ಕೇಳಿ ಕೆರಳಿದ ಗಂಡಾನೆ ಇವರನ್ನು ಬಂದು ತುಳಿಯಿತಂತೆ. ಒಬ್ಬ ಕೆಟ್ಟ ಕಾರು ಚಾಲಕ ದೇಶದ ಮರ್ಯಾದೆಯನ್ನೇ ತೆಗೆದ ಅನ್ನೋಣ. http://is.gd/X6HSX8 ಮತ್ತು http://is.gd/pi3iDc ರಲ್ಲಿ ಈ ಘಟನೆ ವಿವರಗಳಿವೆ.

ಮೋರ್ಗನ್ ಬ್ರೇಡಾ ಅವರು ಬಾರತಕ್ಕೆ ಬಂದಿರುವುದು ಬರೇ ಪ್ರವಾಸಕ್ಕಲ್ಲ. ದೆಹಲಿಯ ವೈದ್ಯರೊಬ್ಬರ ಹತ್ತಿರ ಹೊಸ ಬಗೆಯ ಬೆನ್ನೆಲುಬು ಚಿಕಿತ್ಸೆಯನ್ನು ಪಡಕೊಳ್ಳಲು ಸಹಾ. ಈಗ ಬಹಳ ದುಬಾರಿಯಾದ ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಖರ್ಚಾಗುವ ಚಿಕಿತ್ಸೆ ಯಶಸ್ವಿಯಾಗಿ ತನ್ನ ಕಾಲ ಮೇಲೆ ನಿಲ್ಲುವ ಅವರ ಗುರಿ ತಲಪಲು ಸಹಾಯಕವಾಗಲೆಂದು ಹಾರೈಸುತ್ತೇನೆ.

http://www.spinalcordinjuryzone.com/news/10431/riding-a-bike-with-her-hands