Saturday, August 02, 2008

ರಾಮರ ಸೇತುವೆಯೋ, ಅಲ್ಲಲ್ಲ

ಚಿತ್ರದಲ್ಲಿ ಕಾಣುವುದು ಶ್ರಿ ರಾಮಚಂದ್ರನೂ ವಾನರ ಸೇನೆಯೂ ಕಟ್ಟಿದ ರಾಮರ ಸೇತುವೆಯೋ ? ದೂರದಲ್ಲಿ ಕಾಣುವುದು ಶ್ರಿ ಲಂಕೆಯೋ ? ಸೇತುವೆ ಮೇಲಿರುವುದು ಪಿರಬಾಕರನ ಅನುಯಾಯಿ ತಮಿಳು ಹುಲಿಗಳೋ ? ಸುಗ್ರೀವನ ವಾನರ ಸೇನೆಯೋ ? ಪ್ರಶ್ನೆಗಳೆಲ್ಲ ನಿಮ್ಮ ಮನಸಿನಲ್ಲಿ ಮೂಡಿರಬಹುದು. ಕಾಂಗ್ರೇಸಿನವರು ಇದು ಸತ್ಯ ಚಿತ್ರವಲ್ಲ, ಹಿಂದುತ್ವದವರ ಪಿತೂರಿ ಅಂಶ ಎನ್ನಬಹುದು.   ಈಗ ರಾಮರ ಸೇತುವೆ ವಿವಾದ ಸುಪ್ರಿಮ್ ಕೋರ್ಟ್ನನಲ್ಲಿದ್ದು ಕೆಂದ್ರ ಸರಕಾರ ದಿನಕ್ಕೊಂದು ನಮೂನೆಯ ವಾದ ಮಂಡಿಸುತ್ತಿದೆ. ಸಂಪೂರ್ಣ ಗೊಂದಲಮಯವಾದ ಈ ವಿವಾದದ ಮದ್ಯೆ ಈ ವಿಷಯಕ್ಕೆ ಹೋಲಿಕೆಯ ನನಗೆ ಕಂಡ  ಒಂದು ನೈಸರ್ಗಿಕ ಉದಾಹರಣೆ.

ಇದು ದಕ್ಷಿಣ ಕೊರಿಯಾದ ಜಿಂಡೊ ಎಂಬಲ್ಲಿ ಕಂಡು ಬರುವ ನೈಸರ್ಗಿಕ ಮರಳ ದಾರಿ.  ಸುಮಾರು ಎರಡು ಮುಕ್ಕಾಲು ಕಿಲೋಮೀಟರ್ ಉದ್ದದ ಈ ಸೇತುವೆ  ದಾರಿ   ವರುಷಕ್ಕೆ ಒಂದೆರಡು ಬಾರಿ ಸಮುದ್ರದಿಂದ ಮೇಲೇಳುತ್ತದೆ.   ಜ್ಯೋತಿಷಿಗಳೂ   ವಿಜ್ನಾನಿಗಳೂ    ಸಮುದ್ರದ  ಇಳಿತವನ್ನು   ಮೊದಲೇ      ನಿರ್ಣಯಿಸುತ್ತಾರಂತೆ.    ಅಲೆಗಳ ಮಟ್ಟ ಕೆಳಗಿರುವ ಸುಮಾರು ಒಂದು ಘಂಟೆ ಸಮಯ ಈ ದಾರಿಯಲ್ಲಿ ನಡೆಯುತ್ತಾ ಆಚೆ ದಡ ತಲಪಬಹುದು.   ಇದೊಂದು ಹಬ್ಬವನ್ನಾಗಿ   ಅವರೀಗ    ಆಚರಿಸುತ್ತಾರೆ.  ಮೊಸೆಸ್ ಪವಾಡ ಎಂದು ಕರೆಯಲ್ಪಡುವ ಈ  ವರ್ಷ   ಎಪ್ರಿಲ್   17 ಕ್ಕೆ  ನಡೆದ   ಈ   ಹಬ್ಬಕ್ಕೆ ಪ್ರಪಂಚದ ಹಲವು ಮೂಲೆಗಳಿಂದ ಜನ ದಾವಿಸಿ ಬರುವರಂತೆ.

ಇಂದು  ಕಾಣಸಿಗುವ  ಕುರುಹುಗಳ    ಗಮನಿಸಿದರೆ ಎರಡು ಮೂರು ಶತಮಾನಗಳ ಹಿಂದೆ ಬಾರತ ಮತ್ತು ಲಂಕೆಯ ಮದ್ಯೆ ಈ  ರೀತಿಯ ದಾರಿ   ಖಂಡಿತ    ಇದ್ದಿರಬಹುದು. ನಮ್ಮ  ಪೂರ್ವಿಕರು  ನಡೆದು  ಶ್ರಿಲಂಕೆಗೆ  ಹೋದರು  ಎಂದು  ಇತಿಹಾಸದ ಪುಟ  ತೆರೆದಿಡುವ  ತಮಿಳರಿದ್ದಾರಂತೆ.     ಕ್ರಮೇಣ    ಪ್ರಕೃತಿಕ ಕಾರಣಗಳಿಗೆ ಈ  ಬಾರತಕ್ಕೆ  ಶ್ರಿಲಂಕವನ್ನು  ಲಿಂಕಿಸುವ  ಈ    ಶ್ರಿ ರಾಮಚಂದ್ರ ರಾಜ ರಸ್ತೆ ಸಮುದ್ರ ಪಾಲಾಗಿರಬಹುದು.    ರಾಜಕೀಯ ಕಾರಣಗಳಿಂದ ವಿಷಯ ಎಷ್ಟು ಗೊಜಲಾಗಿದೆ ಎಂದರೆ  ಎಲ್ಲರೂ  ಒಪ್ಪುವಂತಹ    ಸತ್ಯ ಸಂಗತಿ ಮುಂದಿನ ದಿನಗಳಲ್ಲಿ ಹೊರಬರಲು ಸಾದ್ಯವೇ ಇಲ್ಲ  ಎನ್ನುವುದು  ಖಚಿತ.  .