Saturday, October 24, 2009

ಹಿಮಾಲಯದಲ್ಲೊಂದು ಯಶಸ್ವಿ ಮಳೆ ನೀರು ಕೊಯಿಲು.



ಚೆವಾಂಗ್ ನೋರ್ಫೆಲ್ ಅವರು ಕೃತಕ ನೀರ್ಗಲ್ಲನ್ನು ರೂಪಿಸುತ್ತಾರೆ. ಹಲವು ತಿಂಗಳು ಹರಿದು ಹೋಗುವ ನೀರು ಕಾಪಿಡುವ ಇದು ನಮ್ಮ ಮಳೆನೀರಿನ ಕೊಯಿಲಿನ ಇನ್ನೊಂದು ಸ್ವರೂಪ. ಇತ್ತೀಚೆಗೆ ನೈಜ ನಿರ್ಗಲ್ಲುಗಳು ಪರ್ವತದ ಮೇಲ್ಬಾಗಕ್ಕೆ ಹೆಚ್ಚು ಸಿಮಿತವಾಗುತ್ತಿವೆ ಮತ್ತು ತಡವಾಗಿ ನೀರಾಗುತ್ತವೆ. ಕೆಳಬಾಗದಲ್ಲಿದ್ದು ಆರಂಬದಲ್ಲಿ ನೀರಾಗುತ್ತಿದ್ದ ನೀರ್ಗಲ್ಲುಗಳು ಈಗ ರೂಪುಗೊಳ್ಳುವುದೇ ಇಲ್ಲ 

ಸರಳವಾದ ಅವರ ಪ್ರಯೋಗ ಸದ್ಯಕ್ಕೆ ಪರ್ಯಾಯಗಳಿಲ್ಲ. ಆದರೆ ಇದಕ್ಕೆ ಸಹಾ ನೀರು ಬೇಕು. ಹಿಮಗಾಲದಲ್ಲಿ ದೊರಕುವ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಲ್ಲಿನಿಂದ ನಿರ್ಮಿಸಲಾದ ದೊಡ್ಡ ಕೆರೆಗಳಲ್ಲಿ ಉಳಿಸಿಕೊಳ್ಳುವುದು. ಇದರ ಆಕಾರ ನಮ್ಮ ಕರಾವಳಿಯಲ್ಲಿ ತೋಡುಗಳಿಗೆ ಅಡ್ಡವಾಗಿ ಕಟ್ಟುವ ಕಟ್ಟದಂತಿರುತ್ತದೆ ಅನಿಸುತ್ತದೆ. ಚಳಿ ಹೆಚ್ಚಾದಂತೆ ಈ ಕೆರೆಗಳಲ್ಲಿರುವ ನೀರು ಹಿಮಗಡ್ಡೆಗಳಾಗುತ್ತವೆ.

ನೋರ್ಫಲ್ ಅವರ ಕೃತಕ ನೀರ್ಗಲ್ಲುಗಳು ಎಪ್ರಿಲ್ ಅಥವಾ ಮೆ ತಿಂಗಳಲ್ಲಿ ನೀರಾಗುತ್ತವೆ ಎನ್ನುತ್ತಾರೆ.
ನಾವು ಜೂನ್ ಇಪ್ಪತ್ತೊಂದರ ನಂತರ ಬಿತ್ತನೆ ಮಾಡಿದರೆ ಬೆಳೆ ಬೆಳೆಯಲು ಸಾದ್ಯವೇ ಇಲ್ಲ ಎನ್ನುವ ಗಾದೆ ಮಾತಿದೆ. ಈ ವರ್ಷ ನೀರಿನ ಆಗಮನ ವಿಳಂಬವಾಗಿ ಜೂನ್ ಇಪ್ಪತ್ತೆಂಟಕ್ಕೆ ಬಿತ್ತನೆ ಮಾಡಿದೆವು ಎನ್ನುತ್ತಾರೆ ಅಲ್ಲಿನ ರೈತರೊಬ್ಬರು.

ಮೊದಲು ಹೊಲದಲ್ಲಿ ತುಂಬಾ ಹಿಮ ಇರುತಿತ್ತು. ಈಗ ಇಲ್ಲವೇ ಇಲ್ಲ ಎನ್ನುತ್ತಾರೆ ಹಳ್ಳಿಯ ಜನ. ಶೇಕಡ ಎಂಬತ್ತರಷ್ಟು ರೈತರು ನೀರ್ಗಲ್ಲು ನೀರಾಗುವುದರನ್ನೇ ಅವಲಂಬಿಸುತ್ತಾರೆ. ಈ ಕೃತಕ ನೀರ್ಗಲ್ಲು ಬೇಗ ನೀರಾಗುವ ಕಾರಣ ರೈತರು ಬೇಗ ಬಿತ್ತನೆ ಮಾಡಬಹುದು. ಈಗ ಎತ್ತರದಲ್ಲಿ ಮಾತ್ರ ಉಳಿದಿರುವ ನೀರ್ಗಲ್ಲುಗಳು ತಡವಾಗಿ ನೀರಾಗುವ ಕಾರಣ ಬಿತ್ತನೆಯನ್ನು ವಿಳಂಬಿಸಬೇಕಾಗುತ್ತದೆ.

ನೋರ್ಫಲ್ ಹತ್ತು ನೀರ್ಗಲ್ಲು ನಿರ್ಮಿಸಿದ್ದಾರೆ. ಅತಿ ದೊಡ್ಡದು ಒಂದು ಮೈಲು ಉದ್ದವಾಗಿತ್ತು. ೨೦೦೬ರಲ್ಲಿ ಬಂದ ಅಪರೂಪದ ಮಳೆ ಈ ಕೃತಕ ತಡೆಯನ್ನು ಕೊಚ್ಚಿಕೊಂಡು ಹೋಯಿತು. ಉತ್ತಮ ಕೃತಕ ನೀರ್ಗಲ್ಲು ನೀರ್ಮಾಣಕ್ಕೆ ಸುಮಾರು ಇಪ್ಪತೈದು ಲಕ್ಷ ರೂಪಾಯಿ ಅಗತ್ಯ. ಆದರೆ ಅವರಿಗೆ ಸರಕಾರದಿಂದ ಐದು ವರ್ಷದಲ್ಲಿ ಹತ್ತು ಲಕ್ಷ ದೊರಕುತ್ತದೆ. ಪತ್ರಕರ್ತರು ಬಂದು ನೋಡಿದ್ದಾರೆ ಹಾಗೂ ಬರೆದಿದ್ದಾರೆ. ಈ ವರೆಗೆ ಯಾವ ವಿಜ್ನಾನಿಯೂ ಈ ಕಡೆ ತಲೆ ಹಾಕಲಿಲ್ಲ. ಅದರ ಬಗೆಗೆ ಅವರಿಗೆ ಗೊಡವೆ ಇಲ್ಲ. ಪಂಡಿತ ಸಭೆಗೆ ಈ ಜ್ನಾನ ತಿಳಿಸುವ ಬದಲು ತಾನು ಹಳ್ಳಿಗರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆಸಕ್ತ ಎನ್ನುತ್ತಾರೆ ನೋರ್ಫೆಲ್.

ರಾಜದಾನಿ ಲೇಹ್ ನಲ್ಲಿ ಹೆಚ್ಚು ಪ್ರವಾಸಿಗಳು ಬರುವುದೂ ಸಮಸ್ಯೆ ಬಿಗಡಾಯಿಸಲು ಕಾರಣ. ಕಳೆದ ಎಂಟು ವರ್ಷಗಳಲ್ಲಿ ವಾರ್ಷಿಕ ಪ್ರವಾಸಿಗಳ ಸಂಖ್ಯೆ ಹದಿನೆಂಟು ಸಾವಿರದಿಂದ ಎಪ್ಪತ್ತನಾಲ್ಕು ಸಾವಿರಕ್ಕೆ ಏರಿದೆ. ದಿನಾ ಸ್ನಾನ ಶೌಚಾಲಯದಲ್ಲಿ ಫ್ಲಶ್ ಇತ್ಯಾದಿ ನೀರಿನ ಖರ್ಚು ಹೆಚ್ಚಿಸುವ ಅಬ್ಯಾಸಗಳು ಹೆಚ್ಚು ವ್ಯಾಪಕವಾಗುತ್ತಿವೆ. ಈಗ ದಿನಂಪ್ರತಿ ಏಳು ಲಕ್ಷ ಗಾಲನ್ ಪೊರೈಸುವ ಇಂಡಸ್ ನದಿಯಿಂದ ಹದಿನಾರು ಲಕ್ಷ ಗಾಲನ್ ನೀರು ಎತ್ತುವ ಯೋಜನೆ ಕಾರ್ಯಗತವಾಗುವ ಹಂತದಲ್ಲಿದೆ. ಇಂಡಸ್ ನದಿಯಿಂದ ಪಡಕೊಳ್ಳುವ ಪ್ರತಿ ಹನಿ ನೀರು ಪಾಕಿಸ್ತಾನದ ಕೃಷಿಗೆ ಅಷ್ಟರ ಮಟ್ಟಿಗೆ ಕೊರತೆ ಉಂಟು ಮಾಡುತ್ತದೆ. ಅವರಿಗೆ ಕಡಿಮೆಯಾದರೆ ನಮಗೇನು ಎನ್ನುವ ಮಾತು ಕೇಳಿಬರುತ್ತದೆ

 ಕಳೆದ ತಿಂಗಳು ಲಡಾಕಿನಲ್ಲಿ ನಡೆದ ಹವಾಮಾನ ಸಮಾವೇಶದಲ್ಲಿ ನೋರ್ಫೆಲ್ ದೃಶ್ಯ ವಿವರಣೆ ಕಾರ್ಯಕ್ರಮ ಕೊಟ್ಟಿದ್ದರು. ಹಮಾಮಾನ ಬದಲಾವಣೆಯಲ್ಲಿ ಲಡಾಖ್ ಮೊದಲು ಸಮಸ್ಯೆ ಅನುಭವಿಸುತ್ತದೆ. ಅದುದರಿಂದ ನಾವು ನ್ಯಾಯ ಬಯಸುತ್ತೇವೆ ಎಂದು ಸರಕಾರೇತರ ಸಂಸ್ಥೆ ನಡೆಸುವ ಪದ್ಮ ತಾಶಿ ಹೇಳುತ್ತಾರೆ. ಹವಾಮಾನ ನ್ಯಾಯ ಎಂದರೆ ಈ ಸಮಸ್ಯೆಗೆ ಮುಖ್ಯ ಕಾರಣವಾದ ಮುಂದುವರಿದ ದೇಶಗಳು ಪರಿಹಾರ ಹಣ ಕೊಟ್ಟರೆ ನೋರ್ಫೆಲ್ ಅವರ ಕಟ್ಟಗಳನ್ನು ಮತ್ತು ೨೦೦೬ ರ ನೆರೆಯಲ್ಲಿ ನಷ್ಟ ಅನುಭವಿಸಿದ ಹಳ್ಳಿಗಳನ್ನು ಪುನರ್ ನೀರ್ಮಾಣ ಮಾಡ ಬಹುದು.

ಪರೀಸ್ಥಿತಿ ಮುಂದುವರಿದರೆ ನಾವು ಮುಂದಿನ ತಲೆಮಾರಿಗೆ ಈ ಭೂಮಿಯನ್ನು ವರ್ಗಾಯಿಸುವುದಿಲ್ಲ. ನೀರು ಇಲ್ಲವೆನ್ನುವ ಸನ್ನಿವೇಶದಲ್ಲಿ ಲಡಾಖಿನ ಜನ ಗಂಟು ಮೂಟೆ ಕಟ್ಟಿ ಹೊರಡಬೇಕಾಗುತ್ತದೆ ಎನ್ನುವ ಚಿಂತನೆ ಅಲ್ಲಿನ ಹಿರಿಯರಲ್ಲಿದೆ.

ಕಾಶ್ಮೀರದಲ್ಲಿರುವ ಸಾವಿರಾರು ಜನರಿಗೆ ನೀರು ಪೊರೈಸುವ ಹಾಗೂ ಬಾರತದ ಅತಿ ದೊಡ್ಡ ನೀರ್ಗಲ್ಲು ಇತರ ಹಿಮಾಲಯದ ನೀರ್ಗಲ್ಲುಗಳಿಂದ ವೇಗವಾಗಿ ಚಿಕ್ಕದಾಗುತ್ತಿರುವುದು ಕಳವಳಕಾರಿ ವಿಚಾರ. ಕಳೆದ ನೂರು ವರ್ಷದಲ್ಲಿ ೧.೧ ಡಿಗ್ರಿ ತಾಪಾಮಾನ ಹೆಚ್ಚಿದೆ. ಕಾಶ್ಮೀರದ ಅತಿ ದೊಡ್ಡದಾದ ಜೇಲಂ ನದಿಗೆ ನೀರು ಪೊರೈಸುವ ಕಲಹೊಯಿ ನೀರ್ಗಲ್ಲು ಕಳೆದ ಮೂವತ್ತು ವರ್ಷಗಳಲ್ಲಿ ೧೧ ಚದರ ಕಿಮಿಗಳಲ್ಲಿ ೨.೬ ಚದರ ಕಿಮಿ ಕುಗ್ಗಿದೆ. ಕಾಶ್ಮೀರದ ಜನ ಈ ನೀರ್ಗಲ್ಲುಗಳನ್ನೇ ನೀರಿಗೆ ಅವಲಂಬಿಸುವ ಕಾರಣ ತಜ್ನರ ಪ್ರಕಾರ ಇದು ಬಹಳ ಗಂಬೀರ ವಿಚಾರ

ಈ ಬಗ್ಗೆ ನಮ್ಮ ಪರಿಸರ ಸಚಿವ ಜೈರಾಮ ರಮೇಶರು ಏನು ಮಾಡುತ್ತಿದ್ದಾರೆ ?? ಅವರು ಹವಾಮಾನ ಬದಲಾವಣೆ ಮತ್ತು ನಿರ್ಗಲ್ಲುಗಳ ಕುಗ್ಗುವುದಕ್ಕೆ ಇರುವ ಸಂಬಂದ ಇನ್ನೂ ಖಚಿತವಾಗಿಲ್ಲ. ಇನ್ನೂ ಹೆಚ್ಚು ಆ ಬಗ್ಗೆ ಸಂಶೋದನೆಗಳು ನಡೆಯಬೇಕು ಎಂದು ಆಗಸ್ತ್ ತಿಂಗಳಲ್ಲಿ ಅಪ್ಪಣೆ ಕೊಡಿಸಿದ್ದಾರೆ.

No comments: