Tuesday, November 06, 2012

ವಾಸಿಸುವ ಊರನ್ನೇ ಬೈಯ್ಯುವ ಬುದ್ದಿಜೀವಿ ಕಾರ್ನಾಡ






ಇಂದಿನ   ಕನ್ನಡ ಪ್ರಭ  ಓದುವಾಗ  ಆರು ತಿಂಗಳು  ಹಿಂದೆ  ಇವರೇ  ಬರೆದ  ಎರಡು  ಲೇಖನಗಳು  ನೆನಪಾದವು.  


ಕನ್ನಡದ  ಉದಯವಾಣಿಯಲ್ಲೂ  ಇಂಗ್ಲೀಶಿನಲ್ಲಿ  ನ್ಯೂಸ್ ವೀಕ್     ಬಳಗದ  ಜಾಲ  ಪತ್ರಿಕೆಯಲ್ಲೂ  ಬೆಂಗಳೂರು  ಬಗೆಗಿನ   ಲೇಖನ  ಪ್ರಕಟವಾಗಿತ್ತು.    ಅಮೇರಿಕದಿಂದ  ಪ್ರಕಟವಾಗುವ  ಪತ್ರಿಕೆಯಲ್ಲೂ  ಬೆಂಗಳೂರಿನ  ಬಗ್ಗೆ  ಕೆಟ್ಟದಾಗಿ ಬರೆಯುವ  ಈ ಕಾರ್ನಾಡ್  ಬಗೆಗೆ  ಯೋಚಿಸಲೂ  ಹೇಸಿಗೆ  ಅನಿಸುತ್ತದೆ  -   ಹಲವಾರು ವರ್ಷಗಳಿಂದ  ಇಲ್ಲಿಯೇ  ಬದುಕಿರಿರುವುದಾದರೂ    ನೆಲೆ ನಿಂತ  ಊರಿಗೆ  ಸಮಾಜಕ್ಕೆ    ಈತನ  ಕೊಡುಗೆ  ಸೊನ್ನೆ.  ಬೆಂಗಳೂರಿನ  ಕಸದ  ರಾಶಿಗೆ    ಯುರೋಪಿನಂತಿತ್ತು  ಬೆಂಗಳೂರು  ಎನ್ನುವ   ಈ  ಕಾರ್ನಾಡನ  ಕೊಡುಗೆ  ಇಲ್ಲವೇ ?  ಉಂಟು.  ತಮ್ಮ  ಪಾಲಿನ    ಕಸ.  

ನಾ  ಮೊದಲು ನೋಡಿದ  ಬೆಂಗಳೂರು  ಇದಲ್ಲವಲ್ಲ ಎಂದು ಗಿರೀಷ    ಕಾರ್ನಾಡ      ಉದಯವಾಣಿಯಲ್ಲಿ ಹಪಹಪಿಸಿದ್ದಾರೆ.  ಆದರೆ  ದಾರಿ ಅಗಲಗೊಳಿಸಲು    ಅವರ ಮನೆ ಗೋಡೆ  ಕೆಡವುದರ  ವರೆಗೆ ಅವರೂ  ಸುಮ್ಮನಿದ್ದರು.  ಮುಂಬಯಿಯಲ್ಲಿ   ಪದ್ಯ  ಹೇಳುವವಳಿಗಾಗಿ     ಬಹಳ   ಅಗತ್ಯವಿದ್ದ     ಮೇಲ್ಸೇತುವೆ   ನಿರ್ಮಾಣ  ಸ್ಥಗಿತಗೊಳಿಸಲಾಗಿತ್ತು. ವಿಳಂಬವಾದಂತೆ   ಯೋಜನಾ ಖರ್ಚು ಏರುತ್ತಾ  ಹೋಗುತ್ತದೆ.  

ಪ್ರತಿ ದಿನ  ನಾಲ್ಕು ನೂರು  ಕಾರುಗಳು  ಸಾವಿರದ ಇನ್ನೂರು  ಬೈಕುಗಳು  ರಸ್ತೆಗಿಳಿಯುತ್ತದೆ  ಎನ್ನುವ   ಈ ಕಾರ್ನಾಡರು  ಸ್ವತಹಾ  ಕಾರು  ಉಪಯೋಗಿಸುವವರೇ  ಆಗಿದ್ದಾರಲ್ಲ  !   ರಸ್ತೆ  ಅಗಲವಾದರೆ  ಇವರಿಗೂ  ಅನುಕೂಲವಲ್ಲವೇ ?   ರಾಚ್ಗನ್  ತಮಿಳು ಸಿನೆಮದಲ್ಲಿ  ಕಾರು ತಯಾರಿ ಕಂಪೇನಿ ಯಜಮಾನನಾಗಿ  ನಟಿಸಿದ    ಈ  ಕಾರ್ನಾಡರಿಗೆ   ಕಾರು  ತಯಾರಿ ಹಾಗೂ   ಉಪಯೋಗದ  ಸಮಸ್ಯೆಗಳ    ಬಗೆಗೆ   ಅರಿವು  ಇರಬಹುದಲ್ಲ ??   

ಕೊನೆಗೆ    ಇಂಗ್ಲೀಷ್  ಕನ್ನಡದಲ್ಲೆರಡರಲ್ಲೂ  ತಮ್ಮ  ಗೋಳು  ಬರೆಯುವ  ಅವರು  ಮೊದಲು  
ವೈಯುಕ್ತಿಕ   ವಾಹನದ ಬದಲಾಗಿ ವೈಯುಕ್ತಿಕ  ಶ್ರಮ  ಉಪಯೋಗಿಸಿ  ನಡೆಯೋಣ,  ಸೈಕಲ್ ಉಪಯೋಗಿಸೋಣ  ಅಥವಾ  ಬಸ್ಸಿನ ವ್ಯವಸ್ಥೆ ಹೆಚ್ಚು  ಬಲಿಷ್ಟಗೊಳಿಸೋಣ  ಎನ್ನಬಹುದಾಗಿತ್ತು.    ಅವರ  ನಾಟಕಗಳಲ್ಲಿ  ಈ   ಸಂದೇಶ    ಕೊಡುತ್ತಿದ್ದರೆ   ಪರಿಣಾಮಕಾರಿಯಾಗುತಿತ್ತು.   

ಕಾರು ನಾಡರ  ಬಗೆಗೆ  ಇನ್ನಷ್ಟು  ಉತ್ತಮ  ಪ್ರತಿಕ್ರಿಯೆ ಓದಲು
http://www.kannadaprabha.com/pdf/7112012/9.pdf

Tuesday, October 16, 2012

ಜಗತ್ತನ್ನು ಉಳಿಸಲು ದೇವರು ಅವತರಿಸುತ್ತಾನೆ …….



ದೇವರು  ಆರು ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿದ. ಇದು  ಅಮೇರಿಕ  ಎಂಬ  ದೇಶದ  ಹಲವು  ರಾಜ್ಯಗಳಲ್ಲಿ  ಪುಟ್ಟ   ಮಕ್ಕಳು  ಶಾಲೆಯಲ್ಲಿ    ಓದುವ   ಪಾಠ.    ಅನಂತರ  …  ಕ್ಷಮಿಸಿ ಇಲ್ಲಿ ಸ್ವಲ್ಪ   ಗೊಂದಲವಿದೆ.     ಗಿನಿಸಿಸ್ ಒಂದರ ಪ್ರಕಾರ  ಗಿಡ  ಮರಗಳ ಪ್ರಾಣಿಗಳ  ಅನಂತರ  ಆಡಮ್ ಹಾಗೂ   ಇವ್  ಇವರನ್ನು ಜತೆಯಾಗಿ ಸೃಷ್ಟಿಸಿದ.

  

ಆದರೆ,  ಗಿನಿಸಿಸ್  ಎರಡರ  ಪ್ರಕಾರ  ಮೊದಲು  ಆಡಮ್ ನಂತರ  ಗಿಡಮರಗಳು ಪ್ರಾಣಿಗಳ     ಸೃಷ್ಟಿಯಾದ  ನಂತರ  ಆಡಮನ   ಪಕ್ಕೆಲುಬುವಿನಿಂದ   ಅವನಿಗೊಂದು  ಜತೆಗಾರ್ತಿ ಇವ್ ಳನ್ನು   ಕೊಟ್ಟ.    



ಒಟ್ಟಿನಲ್ಲಿ ದೇವರು   ಆಡಮ್  ಮತ್ತು ಇವ್  ಅವರನ್ನು  ಸೃಷ್ಟಿಸಿದ  ಅನ್ನುವುದಕ್ಕೆ  ಯಾವುದೇ  ಸಂಶಯವಿಲ್ಲ.   ಅಮೇರಿಕದಲ್ಲಿ    ಪುಟ್ಟ  ಮಕ್ಕಳ   ವಿದ್ಯಾಬ್ಯಾಸ  ಈ ರೀತಿ  ಸಾಗಲು   ಅಲ್ಲಿನ  ಪ್ರಮುಖ    ಪಕ್ಷವು  ಡಾರ್ವಿನನ  ವಿಕಾಸವಾದವನ್ನು  ಸಂಪೂರ್ಣ  ಅಲ್ಲಗಳೆದು  ಬೈಬಲ್ ವಾದವನ್ನು  ಪ್ರತಿಪಾದಿಸುತ್ತದೆ.

ಅವರು  ಅಲ್ಲಿನ  ಮಕ್ಕಳಿಗೆ ಏನು ಬೇಕಾದರೂ  ಕಲಿಸಲಿ ಎಂದು ನಾವು  ಪೂರ್ತಿಯಾಗಿ     ಬಿಟ್ಟುಬಿಡುವಂತಿಲ್ಲ. ಯಾಕೆಂದರೆ   ನವೆಂಬರ್   ಮೊದಲ  ವಾರ   ಅಮೇರಿಕದಲ್ಲಿ  ಅಧ್ಯಕ್ಷರ   ಚುನಾವಣೆ  ನಡೆಯಲಿದೆ.  ಈ ಚುನಾವಣೆ ಫಲಿತಾಂಶ   ಮುಂದಿನ ದಿನಗಳಲ್ಲಿ  ಜಾಗತಿಕ   ಪರಿಸರ  ದ್ವಂಸದ    ಬಗೆಗೆ  ನಿರ್ಣಾಯಕ  ತಿರುವು ಕೊಡಲಿದೆ. ಯಾಕೆಂದರೆ  ಅಲ್ಲಿನ    ಒಂದು  ಪಕ್ಷವು  ಮಾನವನ  ಚಟುವಟಿಕೆಗಳಿಂದಾಗಿ    ಭೂಮಿ    ಉಷ್ಣವಾಗುವುದನ್ನೂ  ಅಲ್ಲಗಳೆಯುತ್ತದೆ.   ಮತದಾರರಲ್ಲಿ   ಇನ್ನೇನು  ಅವತರಿಸಲಿರುವ  ಆ  ಸರ್ವಶಕ್ತ  ದೇವನು  ಎಲ್ಲವನ್ನೂ  ಸರಿಪಡಿಸುತ್ತಾನೆ  ಎನ್ನುವ   ಭ್ರಮೆಯನ್ನುಂಟು   ಮಾಡುತ್ತಾರೆ  ಈ  ಪಕ್ಷದವರು.   ನನ್ನ  ತಕರಾರು ಇರುವುದು  ದಾರ್ಮಿಕ   ಕಾರಣವಲ್ಲ,  ನಾವಿರುವ ಈ   ಜಗತ್ತಿನ  ಬಗೆಗೆ   ಪರಿಸರ ಕಾಳಜಿ    ಅಷ್ಟೇ.  ಆದರೆ    ಈಗ   ಒಬಾಮನೇ    ಗೆದ್ದರೂ ಸುಖವಿಲ್ಲ.    ಯಾಕೆಂದರೆ ಶಾಸನ  ಸಭೆಗಳಲ್ಲಿ ಅವನ  ಪಕ್ಷಕ್ಕೆ  ಬಹುಮತವಿಲ್ಲ.  ಹಾಗೆ ಈ  ವಿತಂಡವಾದಿಗಳು  ಅವನ  ಪ್ರತಿ ಹೆಜ್ಜೆಗೂ  ಕಿರಿಕಿರಿ  ಉಂಟುಮಾಡುತ್ತಿದ್ದಾರೆ,  ಮುಂದೆಯೂ  ಮಾಡುತ್ತಾರೆ.    


ಅಮೇರಿಕದಲ್ಲೊಂದು  ಪ್ರಬಲ ಪಕ್ಷ – ಆನೆ ಪಕ್ಷ.  ಇವರೆಲ್ಲ  ದರ್ಮಬೀರುಗಳು.    ಈ  ಆನೆ ಪಕ್ಷದ   ರಾಜಕಾರಣಿಗಳ  ವರ್ತನೆ ಕೆಲವೊಮ್ಮೆ  ಹಾಸ್ಯಾಸ್ಪದವೂ  ಆಗಿರುವ  ಕಾರಣ  ಮೋಜು  ಅನಿಸುವುದಾದರೂ  ಅವರ ಕೈಯಲ್ಲಿ  ಅಧಿಕಾರ  ಅನ್ನುವಾಗ  ಬೀತಿ ಉಂಟಾಗುತ್ತದೆ.  ಡಾರ್ವಿನನ  ವಿಕಾಸವಾದದಿಂದ ಹಿಡಿದು   ಇಂದು  ವಿಜ್ಞಾನಿಗಳು  ಪ್ರಯೋಗದಿಂದ  ಖಚಿತಪಡಿಸುವ  ವಾತಾವರಣ  ಉಷ್ಣವಾಗುವುದರ ವರೆಗೆ ಎಲ್ಲವನ್ನೂ  ಅಲ್ಲಗಳೆಯುತ್ತಾರೆ.   ಮಾನವ ವಿಕಾಸ  ಬಗೆಗೆ    ಬೈಬಲ್‍ವಾದದಲ್ಲಿ   ಪಾಠ  ಮಾಡಬೇಕೆಂದು  ಶಿಕ್ಷಕರ  ಮೇಲೆ  ಒತ್ತಡವಿದೆ.      ನಿರಪರಾಧಿಗಳಿಗೆ      ಅತಿ ಹೆಚ್ಚು  ಮರಣದಂಡನೆ  ವಿದಿಸುವ  ರಾಜ್ಯ    ಸರಕಾರಗಳೆಲ್ಲ    ಈ  ಆನೆ ಪಕ್ಷದವು. ಈ   ಪಕ್ಷದ    ಬುಶ್  ಇತ್ಯಾದಿ    ತೈಲ ದೊರೆಗಳಿಗೆ     ಉತ್ತರ ದ್ರುವದ  ಹಿಮಕವಚ ಕರಗಿದರೆ   ಅಲ್ಲೂ  ತೈಲಬಾವಿ  ಕೊರೆಯುವ  ದೂರಾಲೋಚನೆ. 


ಏರುತ್ತಿರುವ  ಸಮುದ್ರ ಮಟ್ಟದಿಂದಾಗಿ  ಈಗಾಗಲೇ   ಅಮೇರಿಕದ  ಪೂರ್ವ ಕರಾವಳಿಯ  ಇತ್ತೀಚಿನ  ವರೆಗೆ     ೩೫೦ ಜನರ ವಾಸ್ತವ್ಯವಿದ್ದ   ಹಾಲೆಂಡ್ ಹೆಸರಿನ    ದ್ವೀಪವೊಂದು  ಮುಳುಗಿದರೂ  ಇವರು ಕಣ್ಮುಚ್ಚಿ ಕುಳಿತುಕೊಳ್ಳಲು  ತಯಾರು. ಮೇಲಿರುವ  ಚಿತ್ರದಲ್ಲಿರುವ   ಕಟ್ಟಡ  ಆ  ದ್ವೀಪದ  ಕೊನೆಯ  ಕಟ್ಟಡ.    ಈ  ವಿಚಾರದಲ್ಲಿ    ಕಿತಾಪತಿ  ಮಾಡದೆ   ಸುಮ್ಮನಿರಲು  ಮಾದ್ಯಮಗಳಿಗೆ ಹಾಗೂ  ವಿಜ್ಞಾನಿಗಳಿಗೆ  ಒತ್ತಡವಿದೆ.     

 ಅಂದು  ಈ  ಪಕ್ಷದ    ಜಾರ್ಜ್    ಬುಶ್  ಇರಾಕನ್ನು   ದಂಡೆತ್ತಿ  ಹೋದದ್ದು  ತೈಲ ಬಾವಿ  ವಶಪಡಿಸಿಕೊಳ್ಳುವುದಕ್ಕೆ.  ಆಗ  ಜನಬೆಂಬಲ  ದೊರಕಿಸಿಕೊಳ್ಳಲು   ಸದ್ದಾಮನಲ್ಲಿ  ಅಪಾಯಕಾರಿ  ಶಸ್ತ್ರಾಸ್ತ್ರಗಳಿವೆ  ಎಂದು    ಎಷ್ಟು ಅಪಪ್ರಚಾರ ಮಾಡಿದ್ದಾರೆಂದರೆ   ಇಂದಿಗೂ,   ಒಂಬತ್ತು  ವರ್ಷ    ಕಳೆದ  ನಂತರವೂ  ಆನೆ ಪಕ್ಷದ  ಅನುಯಾಯಿಗಳಿಗೆ  ಅದು ಸುಳ್ಳೆಂದು  ಅರಿವಾಗಲೇ  ಇಲ್ಲ.     ಎರಡೇ  ಪಕ್ಷಗಳು  ಅಂದ ನಂತರ  ಸಮಪಾಲು   ಜನ  ಇವರ   ಬೆಂಬಲಿಗರೆಂದು  ಹೇಳಬಹುದು.  ಮುಂದುವರಿಸಿ  ಹೇಳುವುದಾದರೆ   ಅರೆವಾಶಿ  ಅಮೇರಿಕನರು  ಅರೆ ಹುಚ್ಚರು  ಅನ್ನಲೂ  ಬಹುದು.  J


 ಇಷ್ಟರ  ವರೆಗೆ ನಮಗೆ ಇಸ್ಲಾಮಿಕ್  ಮೂಲಬೂತವಾದ  ಮಾತ್ರ  ಪರಿಚಿತವಾಗಿತ್ತು.  ನಿಜಕ್ಕೂ  ನೋಡಿದರೆ  ಈ   ಕ್ರೈಸ್ತ  ಭಯೋತ್ಪಾದನೆ  ಹೆಚ್ಚು  ಅಪಾಯಕಾರಿ.    ಇದರ   ಗಂಬೀರ  ಸಮಸ್ಯೆ  ನಮಗೆ  ಅರಿವಾಗದೆ ಇರುವುದಕ್ಕೆ  ಕಾರಣ  -  ಮಾದ್ಯಮಗಳೆಲ್ಲ  ಅವರ   ನಿಯಂತ್ರಣದಲ್ಲಿ  ಇರುವುದು.  ದೇವರು ಬಂದು  ನಮ್ಮನ್ನೆಲ್ಲ  ಕಾಪಾಡುತ್ತಾನೆ  ಎನ್ನುವ  ಮೂರ್ಖನ  ಕೈಯ್ಯಲ್ಲಿ    ಜಗತ್ತಿನ  ಅತಿ ದೊಡ್ಡ  ಅಣುಬಾಂಬುಗಳ ರಾಶಿಯ  ನಿಯಂತ್ರಣವಿದ್ದರೆ    ??        



eÛeé% …ßÎé @ÈÚƒ¾Úᒀ @ÈæßÂOÚ¥ÚÆÇ«Ú PÃÌ`¾Úß«é VÚßM®Úâ´VÚ×Úß }ÚÈÚß½ ®ÛÃ…ÄÀÈÚ«Úß„ Ôæ_`ÒOæàMsÚÈÚâ´.   eÛ}ÚÀ~Þ}Ú ÑÚÈÚáÛdÈÚ«Úß„ «æÄOÚ_`ÑÚÄß ÑÚÈÚßÁÚ «ÚsæÑÚ†æÞOÚß ÈÚß}Úß¡ @ÈæßÂOÚÈÚ«Úß„ ¥æÞÈÛƒ®Ú}ÚÀ¥Ú ÑÛÈÚáÛÃdÀÈÚ«Û„W ®ÚÂÈÚ~%ÑÚÄß ÑÚMÉ¨Û«Ú¥ÚÆÇ …¥ÚÅÛÈÚzæ }ÚÁÚ†æÞOæM¥Úß …ÕÁÚMVÚÈÛW OÚÁæ ¬ÞsÚÄß @ÈÚâ´ ®ÚÃ…Ä ÈæÞ¦OæVÚ×ÛW¥Ú§ÈÚâ´. 

C Õ«æ„Åæ¾Úᒀ «ÛÈÚâ´ CÈÚÁæVæ @eÛk}ÚÁÛW¥Ú§ Éßmé ÁæàÞÉß„ ÈÚß}Úß¡ B«Úà„ d«Ú¯Ã¾ÚßÁÛW DئÁÚßÈÚ …ÁÛOé J†ÛÈÚß @ÈÚÁÚ «ÚsÚßÈÚy ÔæVÚÅæzæ¾Úß ÑÚ°¨æ%¾Úß«Úß„ VÚÈÚ߬ÑÚ†æÞOÚß. ÁæàÞÉß„ @ÈÚÁÚß ÈæàÞÈÚß%«é ^Ú^é%«Ú @«Úß¾ÚáÛ¿ß. GÄÇ @ÈæßÂOÚ«Ú„ÁÚß C «æÄ¥Ú ¥æÞÈÚÁÚß- @M¥ÚÁæ ¾æßÞÑÚßPÃÑÚ¡«Ú OÛ«Úà«Ú«Úß„ ®ÛÆÑÚ†æÞOÚß GM…ߥÚß ÈæàÞÈÚß%«é ^Ú^é%«Ú ®ÚÃ~®Û¥Ú«æ. ÉßÑæàÓÞ¾Úß eÛÀOÚÓ«é Òn¾Úᒀ ¾æßÞÑÚßPÃÑÚ¡ ÈÚß}æ¡ d¬ÑÚß}Û¡«æ GM…ߥÚß ÈæàÞÈÚß%«Ú„ÁÚ «ÚM¸Oæ. ^Ú^é%Væ Ôæ^Úß` Ôæ^Úß` ÑÚMSæÀ¾Úß ÑÚ¥ÚÑÚÀÁÚß †æÞOÚß. ÔÛVÛW ÈÚߥÚßÈæ¾ÚáÛW d«ÚÑÚMSæÀ¾Úß«Úß„ Ôæ_`ÑÚßÈÚâ´¥Úß @ÈÚÁÚ ÑÚM®ÚÃ¥Û¾Úß. Éßmé ÁæàÞÉß„¾Úß }Û}Ú eÛeé% ÁæàÞÉß„ ÈÚßàÈÚÁÚß ®Ú~„¾ÚßÂM¥Ú 35 ÈÚßOÚQ×Ú«Úß„ ®Ús榥ڧÁÚß! ÈæàÞÈÚß%«Ú„ÁÚ C ¬ÄßɬM¥ÛW @…ÃÔÛM ÆMOÚ«é 1862ÁÚÆÇ …ÔÚß®Ú~„}Ú‡ÈÚ«Úß„ ¬ÎæÞƒÒ¥Úà§ DMlß. 

ÈæàÞÈÚß%«Ú„ÁÚß ÈÚß}Úß¡ eÛeé% …ßÎé @ÈÚÁÚ"†Û«é% @Væç«é BÈÛMeæÆOÚÅéÓ' }ÚÈÚß½¥æÞ A¥Ú ÉËÚ‡ÈæãM¥Ú«Úß„ ÑÚäÏoÑÚßÈÚ OÚ«ÚÑÚß OÚMt¥Ú§ÁÚß. }ÛÈÚâ´ «ÚM¸¥Ú§«æ„Þ GÄÇÁÚà «ÚM…†æÞOÚß GM…ߥÚß @ÈÚÁÚ BÁÛ¥æ¾ÚáÛW}Úß¡. @ÈÚÁÚM}æ¾æßÞ ÑÚIJVÚ×Úß ÈÚß}Úß¡ Ñè¦ @ÁæÞ¸¾ÚáÛ¥Ú ÈÚÔÛ¸VÚ×Úà «Úsæ¥ÚßOæàMt¥Û§Áæ, B}ÚÁÚ ÈÚßßÒÇÈÚßÁÚß }ÚÈÚß½«æ„Þ @«ÚßÑÚÂÑÚ†æÞOÚß GM¥Úß …¾ÚßÑÚß}Û¡Áæ. JM¥æÞ JM¥Úß ÈÚß}Ú- @M¥ÚÁæ }ÚÈÚß½ ÈÚß}ÚÈæãM¥Ú«æ„Þ ÔæàM¦ÁÚßÈÚ ÉËÚ‡¥Ú ÑÚäÏo @ÈÚÁÚ VÚßÂ."PÃÌ`¾Úß«é Áæçmé' ÑÚMYÚl«æ¾Úßß ÔÚ}Úß¡ @MËÚVÚ×Ú ¥æçÈÛ«ÚßËÛÑÚ«ÚÈÚâ´ ÉËÚ‡¥Ú OÛ«Úà«ÛW ®ÚÂÈÚ~%}ÚÈÛVÚ†æÞOÚß GM¥Úß …¾ÚßÑÚß~¡¥Ú§Áæ, ÑÚIJVÚ×Úß ËÚÂÞ¾Úß}é ÉËÚ‡¥Ú OÛ«Úà«Úß AVÚ†æÞOÚß G«Úß„~¡¥Û§Áæ. BM¢Ú «ÛVÚÂOÚ}æVÚ×Ú ÈÚߨæ´À ÑÚMYÚÎÚ%ÈÚ«Úß„ }Ú¯°ÑÚ†æÞOÛ¥ÚÁæ ¥æÞÈÚÁæÞ ®ÚÈÛsÚ }æàÞÁÚ†æÞOÚÎæo. 

ಇವೆಲ್ಲ  ಯೋಚಿಸುವಾಗ ಸಚ್ಚಿದಾನಂದ  ಹೆಗ್ಡೆಯವರ   ಮಾತು  ಇಲ್ಲಿ  ಪ್ರಸ್ತುತವೆನಿಸುತ್ತದೆ.   ಅವರು ಬರೆಯುತ್ತಾರೆ -    ಪ್ರಕೃತಿಯೊಂದಿಗೆ   ಒಂದಾಗುವುದು ಮಾನವ    ದರ್ಮ.   ಪ್ರಕೃತಿಯನ್ನು ತುಳಿಯುವುದು ಅದರ್ಮ.  ಪ್ರಕೃತಿ ಇರುವುದು  ಮಾನವನಿಗಾಗಿ ಎಂಬ  ಸೆಮೆಟಿಕ್ ಸಿದ್ದಾಂತವನ್ನು ನಾವು ಕೈ ಬಿಟ್ಟು  ಭಾರತಿಯ  ಸಂಸ್ಕೃತಿಗೆ  ಮರಳಬೇಕು.  ಈಗ  ಇರುವುದು  ಅದೊಂದೆ  ಪರಿಹಾರ.



ತಡವಾಗಿ   ಸೇರ್ಪಡಿಸಿದ   ಸೂಚನೆ  :    ಅಶೋಕಣ್ಣನವರು ಹೇಳಿದಂತೆ,    ಕನ್ನಡ  ಪ್ರಭದ  ಅಕ್ಷರಗಳು  ಅಳವಡಿಸಿರದ  ಗಣಕಗಳಲ್ಲಿ  ಜೋರ್ಜ  ಅವರ  ಅಂಕಣ  ಓದಲು  ಸಾದ್ಯವಾಗುವುದಿಲ್ಲ.   ಸುಲಭ  ಪರಿಹಾರವೆಂದರೆ  ಫೋಂಟ್  ಹಂಗಿಲ್ಲದೆ  ಓದಲು   ಮೂಲ   ಕನ್ನಡ  ಪ್ರಭ  ಪತ್ರಿಕೆಯ  ಪುಟವನ್ನೇ  ತೆರೆಯಿರಿ    - http://www.kannadaprabha.com/pdf/14102012/10.pdf.   ಆ  ಲೇಖನದ  ಇಂಗ್ಲೀಶ್ ಮೂಲಪ್ರತಿಯನ್ನೇ  ಓದುವ  ಆಸಕ್ತಿ ಇದ್ದರೆ  -   http://tjsgeorge.blogspot.in/2012/10/as-religious-hardliners-gain-ground.html

Saturday, October 06, 2012

ರಸ್ತೆಗಳ ಕಾರುಗಳಿಂದ ಮುಕ್ತಗೊಳಿಸೋಣ !!

ನಮ್ಮ  ಸಮಾಜ  ಇಂದು ಭ್ರಮಾಲೋಕದಲ್ಲಿದೆ.   ಕಾರುಗಳ   ಗುಲಾಮಗಿರಿಗೆ  ಎಲ್ಲರೂ   ಒಳಪಟ್ಟಿದ್ದೇವೆ.    ಪರದೇಶಗಳ  ಸಹಾಯದಿಂದ  ತಯಾರುವ ಕಾರುಗಳನ್ನು   ಪರದೇಶಿ ಇಂದನ  ಬಳಸಿ  ಕಾರುಗಳ    ಓಡಿಸುವುದು  ಹೆಮ್ಮೆಯ  ಸಂಕೇತ  ಅನ್ನುವುದೇ ಯೋಚಿಸಿ ನೋಡಿದರೆ    ಮುಜುಗರದ  ವಿಚಾರ.  ಇಂದು   ಸಾರ್ವಜನಿಕ  ಸೊತ್ತಾದ  ರಸ್ತೆಯನ್ನು   ಕಾರು  ಎಂಬ   ವೈಯುಕ್ತಿಕ  ಸೊತ್ತು   ಸಮಾಜಕ್ಕೆ  ಅರಿವೇ  ಆಗದಂತೆ    ಆತಿಕ್ರಮಿಸುತ್ತಿದೆ.   ಪರಿಣಾಮವಾಗಿ   ರಸ್ತೆ ಇರುವುದೇ  ಕಾರುಗಳಿಗಾಗಿ  ಎನ್ನುವ  ಬಾವನೆ ಸಮಾಜ  ಹೊಂದಿರುವುದು ಬೇಸರದ  ವಿಚಾರ.  

ಕೊಳ್ಳುಬಾಕ  ಸಂಸ್ಕೃತಿಯ  ಪ್ರಮುಖ  ಬಾಗಗಳಾದ  ಟಿವಿ  ಮೊಸೈಕಲು ಮೊಬೈಲುಗಳು  ಸಮಾಜವನ್ನು  ಪ್ರಜ್ನೆರಹಿತವಾಗಿ   ಭ್ರಮಾಲೋಕದತ್ತ ದೂಡುತ್ತಿವೆ.  ಜನ    ಕಾರು ಕೊಳ್ಳಲು,  ನಡೆಸಲು   ತಮ್ಮ ದುಡಿಮೆಯ  ಬಹು ಪಾಲು  ಹಣವನ್ನು  ವಿನಿಯೋಗಿಸುತ್ತಿದ್ದಾರೆ.   ಸರಕಾರಗಳು ಕಾರು ಓಡಾಟ  ಸುಗಮಗೊಳಿಸಲು  ಎನ್ನುವ  ನೆಪದಲ್ಲಿ   ರಸ್ತೆಗಾಗಿ  ಬಹುಪಾಲು ಹಣವನ್ನು  ಪೋಲು ಮಾಡಿತ್ತಿದೆ.   ಕಾರು  ದಟ್ಟಣೆಯಿಂದಾಗಿ    ಪರಿಸರ ಮಾಲಿನ್ಯ,  ರಸ್ತೆಯಲ್ಲಿ ತಡೆಯಿಂದಾಗಿ  ಸಮಯ ಪೋಲು ಇತ್ಯಾದಿ ಹಲವಾರು    ಸಮಸ್ಯೆಗಳು.   ವರ್ಷದಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ  ಹೆಚ್ಚು  ಜನ  ರಸ್ತೆ ಅಪಘಾತದಲ್ಲಿ  ಸತ್ತು  ಪ್ರಪಂಚದಲ್ಲಿಯೇ  ಅತಿ ಹೆಚ್ಚು  ರಸ್ತೆ ಅಪಘಾತದಲ್ಲಿ  ಸಾಯುವ  ದೇಶವೆನ್ನುವ ಕುಖ್ಯಾತಿ   ನಮ್ಮದು.     ಅರ್ಥಾತ್  ಒಂದು  ರೀತಿಯಲ್ಲಿ  ಕಾರಿಗಾಗಿ ನಾವು ಎನ್ನುವ  ಸ್ಥಿತಿ  ತಲಪಿದ್ದೇವೆ. 




ರಸ್ತೆಗಳ  ಮುಕ್ತಗೊಳಿಸೋಣ  ಹೋರಾಟ    ಇಂದು ನಿನ್ನೆಯದಲ್ಲ.  ಬಹಳ ಹಿಂದೆಯೇ  ಅದರ    ಕಿಡಿ ಹತ್ತಿದೆ.  ಆದರೆ  ಲಾಭದೆಡೆ  ಮುಖ ಮಾಡಿ ಕೂತ     ಸರಕಾರ  ಹಾಗೂ ಮಾದ್ಯಮಗಳು  ಸದಾ  ಕಾರು ಕಂಪೇನಿಗಳ  ಬೆಂಬಲಕ್ಕಿದ್ದು  ತಕ್ಷಣ  ಅವರ ನಿಯಂತ್ರಣದಲ್ಲಿರುವ     ಅಗ್ನಿಶಾಮಕದಳದ ಉಪಯೋಗ  ಪಡಕೊಳ್ಳುತ್ತಾರೆ.   ಅದುದರಿಂದ   ಈ  ಚಳುವಳಿಯೂ   ಅಣ್ಣಾ  ಹಜಾರೆ  ಸತ್ಯಾಗ್ರಹದಂತಾಗಿ   ಜಯ  ಸಾದಿಸಲಿಲ್ಲ. 

ಜಿ ಎಸ್ ಜಯದೇವರು  ತಮ್ಮ ಪುಸ್ತಕ    ಹಳ್ಳಿಹಾದಿಯಲ್ಲಿ   ಭ್ರಷ್ಟಾಚಾರ    ಜನರು ಒಪ್ಪಿಕೊಳ್ಳುವ    ವಿಚಾರ   ಹೇಳುತ್ತಾರೆ  - ಪ್ರತಿಯೊಬ್ಬರ  ಮನಸ್ಸಿನಲ್ಲೂ  ತಾವೂ  ಸಹ  ಇಂತಹ ಲಾಭದಾಯಕ  ಸ್ಥಾನಕ್ಕೆ  ಏರಿಕೊಂಡು  ಅಧಿಕಾರ ಅಂತಸ್ತು ಹಣ  ಎಲ್ಲವನ್ನೂ  ಗಳಿಸಬೇಕೆಂದು  ಭಾವಿಸುತ್ತಾರೆ. ಇದು ಬಹುಸಂಖ್ಯಾತ  ಬಾರತಿಯರ  ಕನಸು.  ಇಂತಹ ಕನಸನ್ನು ಕಾಣುತ್ತ  ಇದು ಸಾದ್ಯವಾಗದೆ ತಮಗೆ    ಇರುವುದರಿಂದ ವಿಫಲತೆಯ ಅತೃಪ್ತಿಯಲ್ಲಿ  ಯಾರೊ  ಒಬ್ಬ  ಮಾನ  ಮರ್ಯಾದೆ  ಮೈಚಳಿ ಬಿಟ್ಟು  ಮೆಲೇರಿದರೆ  ಅಬಿಮಾನದ  ಮಹಾಪೂರವನ್ನೇ  ಹರಿಸುತ್ತಾರೆ.  ತಮ್ಮ  ’ಕನಸನ್ನು   ಅವನು ನನಸು ಮಾಡಿದ ’   ಎಂದು ಅಂತರಂಗದಲ್ಲಿ ಅವನನ್ನು ಮೆಚ್ಚುತ್ತಾರೆ.  ಹಾಗಾಗಿ    ರಾಜಕೀಯದ  ಹೊಲಸಿನ ಬಗ್ಗೆ  ಅಸಹ್ಯವಾಗಲಿ, ಪ್ರತಿರೋದವಾಗಲಿ  ಇಂದು ಕಂಡು ಬರುತ್ತಿಲ್ಲ.    

 ಬಹುಕಾಲದಿಂದ  ಸಮಾಜಕ್ಕೆ  ಕಾರುಗಳ  ಬಗೆಗೆ  ಈ  ರೀತಿ  ಅಭಿಮಾನ  ಉಂಟೆಂಬ   ಬಾವನೆ  ನಾನು ಹೊಂದಿದ್ದೇನೆ.  ಎಲ್ಲರೂ   ಮುಂದೊಂದು ದಿನ  ಮಾರುತಿ ಸಾಂಟ್ರೊ  ಯಜಮಾನರಾಗುವವರೇ.  ನನಗೆ   ಜ್ಞಾನೋದಯವಾಗಲು     ಪ್ರಮುಖ  ಕಾರಣ - ಸ್ವಾವಲಂಬನೆ ಸಂಕೇತವಾದ  ಸೈಕಲಿನ ಬಗೆಗೆ  ಕೊರೆಯುವ  ಹುಚ್ಚು. :-)          ಕಾರುಗಳು  ಹೇಗೆ  ಸಮಾಜವನ್ನು  ಇಷ್ಟೊಂದು ಗುಲಾಮಗಿರಿಗೆ    ಒಳಪಡಿಸಿತೆಂದು  ವಿವರಿಸಲು  ಮುಖ್ಯ  ಮೈಲುಗಲ್ಲುಗಳಾದ  ವ್ಯಕ್ತಿಗಳ ಸನ್ನಿವೇಶಗಳ   ಸ್ಥೂಲ  ಚಿತ್ರಣ  ಮುಂದೆ   ಕೊಡುತ್ತೇನೆ.  

ಕಾರುಗಳು   ಇಷ್ಟೊಂದು  ಜನಪ್ರಿಯವಾಗಲು  ಅಮೇರಿಕದ   Miller McClintock  ಎಂಬವನ    ಕೊಡುಗೆ ಅಪಾರ.  ಮೂಲತ  ಸ್ಟಾನ್ಪೋರ್ಡಿನಲ್ಲಿ  ಇಂಗ್ಲೀಷು  ಮೇಸ್ಟ್ರಾದ  ಈ  ಬುದ್ದಿಜೀವಿ    ಸುಮಾರು  ವಾಹನ ಸಂಚಾರ   ಮಾಹಿತಿ  ಸಂಗ್ರಹಿಸಿ    ಹಾವರ್ಡ್ ನಲ್ಲಿ  ಈ  ವಿಷಯದಲ್ಲಿ  ಪ್ರಥಮ  ಪಿಚ್ಚಡಿ  ಎನಿಸಿಕೊಂಡವ.  ಮುಂದೆ  ಟ್ರಾಫಿಕ್  ಇಂಜಿನಿಯರುಗಳ  ಪಿತಾಮಹ.  

ಕಳೆದ  ಶತಮಾನದ   ದ್ವಿತೀಯ   ದಶಕದ  ಪ್ರಥಮಾರ್ಧದಲ್ಲಿ       ವಾಹನಗಳೆಂದರೆ ಅತಿ ಹೆಚ್ಚು  ಮಾನವ  ಜೀವನಕ್ಕೆ ಹಾನಿ ಉಂಟು ಮಾಡುವ ವಸ್ತು  ಎಂದು  ಫ್ರೌಡ  ಲೇಖನ  ಬರೆದಾತ.   ಲಾಸ್ ಎಂಜಲಸ್ ಸೇರಿದಂತೆ ಹಲವು ಪಟ್ಟಣಗಳು  ಇವನನ್ನು  ಸಲಹೆಗಾರನಾಗಿ   ಬಳಸಿಕೊಂಡವು.    ರಸ್ತೆ ಅಗಲ  ಮಾಡುವುದರಿಂದ  ಹೆಚ್ಚು ಹೆಚ್ಚು  ವಾಹನಗಳ  ಆಕರ್ಶಿಸಿ  ಚಾಲನೆ  ಮೊದಲಿನಷ್ಟೇ  ಗೊಜಲಾಗಿರುತ್ತದೆ.   ರಸ್ತೆಗಳಲ್ಲಿ  ಕಾರುಗಳ  ಬದಲು  ಟ್ರಾಮುಗಳ     ಚಾಲನೆಗೆ ಅನಿರ್ಬಂದಿತ ಓಡಾಟಕ್ಕೆ    ಹೆಚ್ಚು   ಪ್ರಾಶಸ್ತ್ಯ  ಕೊಡಬೇಕು  ಎಂದಲ್ಲ   ಬರೆದಾತ   ಇವನು.   ಆ  ಕಾಲದಲ್ಲಿಯೇ   ತುಂಬಾ ಮಕ್ಕಳ  ಬಲಿ ತೆಗೆದುಕೊಂಡ  ಕಾರುಗಳ    ಬಗೆಗೆ    ಜನರ ಮನಸ್ಸಿನಲ್ಲೂ  ಒಲುಮೆಯಿರಲಿಲ್ಲ.     ಆದರೆ     ಕಾರು ತಯಾರಕರು  ತುಂಬಾ  ಕಾರುಗಳ ತಯಾರಿಸುತ್ತಿದ್ದಾರಲ್ಲಾ  !!!

ಆಗ    ಈ  ಮಿಲ್ಲರ್     ಮಹಾತ್ಮ  ಸ್ಟೂಡ್ ಬೇಕರ್    ಕಂಪೇನಿಯ   ಸಂಪರ್ಕಕ್ಕೆ  ಬಂದ.    ಅವನ ವರ್ತನೆ   ಇಂದಿನ  ಪರೀಸ್ಥಿತಿಗೆ    ಹೋಲಿಸುವುದಾದರೆ   ಬಿಜೆಪಿಯಿಂದ  ಕಾಂಗ್ರೇಸಿಗೆ   ನೆಗೆದು  ಸೊನಿಯಾ  ಜಪ  ಪ್ರಾರಂಬಿಸಿದಂತಾಯಿತು.      ತಕ್ಷಣ  ಅವನ  ವಾದಸರಣಿಯೆಲ್ಲ  ಬದಲಾವಣೆ ಹೊಂದಿತು.  ಪಟ್ಟಣಗಳ  ರಚನೆ  ಕಾರು ಬಳಕೆಗೆ ಅನುಗುಣವಾಗಿರಬೇಕು.  ಆಗ  ಕಾರಿನ ಯಜಮಾನ  ಬಹಳ  ಸಮಯ ಉಳಿಸಲು    ಹಾಗೂ  ಕಾರ್ಯವೆಸಗಲು ಅನುಕೂಲವಾಗುತ್ತದೆ  ಎಂದ.     ಕಾಲೇಜುಗಳಲ್ಲಿ    ಸ್ಟುಡ್ ಬೇಕರ್  ಕಂಪೇನಿ  ಸಹಾಯದಿಂದ  ಐನೂರಕ್ಕೂ  ಹೆಚ್ಚು  ಮರಿ ಇಂಜೀನಿಯರುಗಳು  ತಯಾರಾದವು.  ಇದೊಂದು    ಕೈಗಾರಿಕೆಗಳು  ಬುದ್ದಿಜೀವಿಗಳ  ತಮ್ಮ  ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ  ಪಾಠ  ಕಲಿತ  ನಿರ್ಣಾಯಕ  ತಿರುವು. 





೧೯೧೯ರಲ್ಲಿ  ಅಮೇರಿಕದ  ರಾಜದಾನಿಯಿಂದ  ಸುಮಾರು ಎಂಬತ್ತು ಮಿಲಿಟರಿ  ಲಾರಿಗಳು ೪೮೦೦    ಕಿಮಿ  ದೂರದಲ್ಲಿರುವ   ಪಶ್ಚಿಮ  ಕರಾವಳಿಯತ್ತ  ಹೊರಡುತ್ತವೆ.  ಏಳುತ್ತಾ  ಬೀಳುತ್ತಾ  ದಾರಿಗಡ್ಡವಾದ ಸೇತುವೆಗಳ  ರಿಪೇರಿ ಮಾಡುತ್ತಾ  ಈ ಪಟಲಾಂ  ೬೨   ದಿನಗಳ  ತರುವಾಯ  ಗುರಿಮುಟ್ಟುತ್ತದೆ.    ಆಗ  ಅದರಲ್ಲಿ ಪುಡಿ ಅಧಿಕಾರಿಯಾಗಿದ್ದ ಐಸೆನ್ ಹೂವರ್ ಮುಂದೆ ಅಮೇರಿಕದ  ಅದ್ಯಕ್ಷನಾಗುತ್ತಾನೆ.   ಈ  ಮದ್ಯೆ  ಈತನಿಗೆ  ಎರಡನೇ   ಮಹಾಯುದ್ದದಲ್ಲಿ   ಹೀಟ್ಲರ್  ಮಹರಾಯ   ರಾಜರಸ್ತೆಗಳ   ಉಪಯುಕ್ತತೆ  ಪಾಠ ಮಾಡಿದ್ದ.   ಹಾಗೆ   ಐಸೆನ್ ಹೂವರ್  ಅಮೇರಿಕ  ದೇಶದಾದ್ಯಂತ   ಸಾಗಾಣಿಕೆಗೆ  ಅನಿವಾರ್ಯವಾದ  ಉತ್ತಮ  ರಸ್ತೆಗೆ  ಅಡಿಪಾಯ ಹಾಕುತ್ತಾನೆ.   




ಈ  ಕಾರು  ಗುಲಾಮಗಿರಿಗೆ  ಕಟ್ಟಡ ವಿನ್ಯಾಸಗಾರರೂ  ತಮ್ಮ  ಕೊಡುಗೆ ಇತ್ತಿದ್ದಾರೆ.  Walter Gropius  /   Le Corbusier   ಮುಂತಾದ   ಹಲವಾರು ಪ್ರಖ್ಯಾತ   ವಿನ್ಯಾಸಗಾರರು  ತಮ್ಮ  ಪಟ್ಟಣಗಳ   ಹಾಗೂ   ಕಟ್ಟಡಗಳ  ಕಾರುಗಳಲ್ಲಿ  ಅಗಮಿಸುವರಿಗೆ  ಅನುಕೂಲವಾಗಲೆಂದು  ನಿರ್ಮಿಸಿದರು.  ಇವರನ್ನು ಮಾದರಿಯೆಂದು  ಒಪ್ಪಿದ  ಉಳಿದ  ವಿನ್ಯಾಸಗಾರರೂ   ಮನೆಯಲ್ಲೊಂದು ಕಾರು ಉಂಟೆಂದು  ಪರಿಗಣಿಸಿ  ಕಾರು ಖರೀದಿಗೆ  ಹಾಗೂ  ಅದರಲ್ಲೇ  ತಿರುಗಾಟಕ್ಕೂ   ಪರೋಕ್ಷ   ಒತ್ತಡ  ಹಾಕಿದರು.    



   
ಹೆಚ್ಚು ಕಾರುಗಳ  ತಯಾರಿಕೆಗೆ ಹೆಚ್ಚು ಜನರಿಗೆ  ಕೆಲಸ ಕೊಡುವುದು   ಹಾಗೂ   ಅದು   ಅಭಿವೃದ್ದಿಗೆ  ಪೂರಕ   ಎಂದು  ಇತರ  ದೇಶಗಳ  ಪುಡಾರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದು  ಹೀಟ್ಲರ್  ಮಹಾಶಯ. ಜರ್ಮನಿಯಲ್ಲಿ ೧೯೩೨ರಲ್ಲಿ     ೩೩೦೦೦ ಜನ ೧ ಲಕ್ಷ  ನಾಲ್ಕು  ಸಾವಿರ  ಕಾರು ತಯಾರಿಸಿದರೆ  ಮೂರು ವರ್ಷ  ಅನಂತರ  ಒಂದು ಲಕ್ಷ  ಜನ  ಕೆಲಸ ಮಾಡಿ  ಮುರೂವರೆ  ಲಕ್ಷ  ಕಾರುಗಳ  ತಯಾರಿಸಿದರು.   ವೈಯುಕ್ತಿಕವಾಗಿ    ಅವನನ್ನು ಉಗಿದರೂ  ಅವನ  ಅಪಾರ   ಬುದ್ದಿವಂತಿಕೆ   ಎಲ್ಲ ದೇಶಗಳೂ ಇಂದು   ಅನುಬವಿಸುತ್ತಿದೆ,  ಅನುಸರಿಸುತ್ತಿದೆ.  ಅವನದೊಂದು   ಅರ್ಥಪೂರ್ಣ  ಹೇಳಿಕೆ  ಹೀಗಿದೆ.  “Through clever and constant application of propaganda, people can be made to see paradise as hell, and also the other way round, to consider the most wretched sort of life as paradise.” Adolf Hitler

ವಾಹನಗಳ  ಗೂಂಡಾಗಿರಿ  ಅರಿವಿರುವ    ನನಗೆ  ರಸ್ತೆಗಳಿರುವುದು  ಯಾರಿಗಾಗಿ ಎನ್ನುವ    ಗೊಂದಲ  ಹೊಸತಲ್ಲ.  ಆದರೆ   ಆರು ತಿಂಗಳು ಹಿಂದೆ ಒಂದು ಅಪಘಾತಕ್ಕೆ ಸಿಲುಕಿದ ನಂತರ  ನನ್ನೂರಿನ   ಜನರ  ವರ್ತನೆ  ಅಘಾತ ಉಂಟು ಮಾಡಿತು.  ಸೇರಿದ  ಗೂಂಡಾ  ಜನರ  ವರ್ತನೆ   ದಾರಿ ತಪ್ಪಿ ಬಂದ ಮೊಸೈಕಲಿಗನ    ಸಮರ್ತಿಸುವಂತಿತ್ತು.  ನೀವು  ಸೈಕಲಿಗಾಗಿ  ಲಕ್ಷ  ರೂಪಾಯಿ ಖರ್ಚು ಮಾಡಿರಬಹುದು, ಅದನ್ನು ತಪ್ಪು  ದಾರಿಯಲ್ಲಿ ಬಂದು   ಪುಡಿ ಮಾಡಿದ್ದಕ್ಕೆ   ಅವನು   ಒಂದೆರಡು ಸಾವಿರ  ಕೊಡುತ್ತಾನೆ  ಎನ್ನುತ್ತಾರೆ    ಸೇರಿದ  ಗೂಂಡಾಗಳು.   

ನಿಜಕ್ಕೂ  ನೋಡಿದರೆ  ಒಬ್ಬ  ಸೈಕಲು ಸವಾರನನ್ನು  ನೀನಾದರೂ  ಸೈಕಲಿನಲ್ಲಿ ಪ್ರಯಾಣ  ಮಾಡಿ  ವಾಹನದಟ್ಟನೆ, ಮಲೀನತೆ  ಕಡಿಮೆ ಮಾಡಿದೆಯಲ್ಲ  ಎನ್ನುವ  ಬಾವನೆಯಲ್ಲಿ  ವಾಹನ ಚಾಲಕ ನಗುಮುಖದಿಂದ ಸ್ವಾಗತಿಸಬೇಕು.  ಆದರೆ  ಇವನೆಲ್ಲಿಂದ ಬಂದ ಶನಿ  ಎನ್ನುವ   ಬಾವನೆ  ಹೆಚ್ಚು  ಫಾಶನ್  ಆಗಿರುವುದು  ಮಾನವ  ಜನಾಂಗದದ  ದುರದೃಷ್ಟ. 



ಕಾರುಗಳ  ಗುಲಾಮಗಿರಿಯಿಂದ  ಹೊರಬರಲು ಪ್ರಯತ್ನಿಸೋಣ.  ರಸ್ತೆಗಳಿರುವುದು  ನಾಗರಿಕರಿಗೆ ಹೊರತು  ವಾಹನಗಳಿಗಲ್ಲ  ಎನ್ನುವ   ಮಾತು ನ್ಯೂಯೊರ್ಕ್  ಮೆಯರ್  ಬ್ಲೂಮ್ ಬೆರ್ಗ್  ಇತ್ತೀಚೆಗೆ   ಘೋಷಿಸಿದ್ದರು.    ನಮ್ಮ  ಸೌಜನ್ಯರಹಿತ  ವರ್ತನೆಗೆ  ಕಾರಣ  ನಮ್ಮಲ್ಲಿನ     ಶೀಘ್ರ  ಬೆಳವಣಿಕೆಯೂ  ಹೌದು.  ಮೊಬೈಲ್  ಆಗಲಿ  ವಾಹನಗಳಾಗಲಿ ದೊರಕುವ ಮೊದಲು ಅರಿವು ಮೂಡಬೇಕಾಗಿತ್ತು.   ಇನ್ನಾದರೂ  ಎಚ್ಚೆತ್ತುಕೊಳ್ಳುವರೆಂದು  ಹಾರೈಕೆ. 

ಕೊನೆ ಮಾತು :  ಈಗ  ಹತ್ತು ತಿಂಗಳಿಂದ  ನಾನು ಕಾರು ಚಾಲನೆಯಿಂದ  ದೂರವಿದ್ದೇನೆ.  ನಡೆಯುವುದು, ಸೈಕಲು ಹಾಗೂ  ಸಾರ್ವಜನಿಕ  ಸಾರಿಗೆ ಉಪಯೋಗದಲ್ಲಿ  ಹಳ್ಳಿಯಲ್ಲಿದ್ದರೂ     ಸುದಾರಿಸಬಹುದೆಂಬ  ದೈರ್ಯ  ಬಂದಿದೆ.  ರಾತ್ರಿ ತಿರುಗಾಟ  ಇತ್ಯಾದಿ  ಸಾದ್ಯವಾಗದಿದ್ದರೂ  ಅನಿವಾರ್ಯ  ಓಡಾಟಕ್ಕೆ  ತೊಂದರೆಯಾಗಿಲ್ಲ.  ಈ ಪರ್ಯಾಯಗಳ  ಬಗೆಗೆ   ಮುಂದೆ ಬರೆಯುತ್ತೇನೆ.     

Friday, September 28, 2012

ಸವಾರನ ಅಳತೆಗೆ ಸರಿಹೊಂದುವ ಸೈಕಲು

ಅತ್ಮೀಯ  ಹಿರಿಯರಾದ   ಮೀಸೆ  ಅಶೋಕಣ್ಣನವರು   ಕಳೆದ   ವಾರ   ಟಾಂಡೆಮ್  ಸೈಕಲೊಂದನ್ನು   ಕೊಂಡುಕೊಂಡರು.  ಚಕ್ರವರ್ತಿಗಳಿಗೆ    ಪತ್ನಿಯೊಂದಿಗೆ  ನಗರ ಸಂಚಾರ  ಹಂಬಲ.    ಖರೀದಿ  ವಿಚಾರ  ಸಂತಸ   ಪಟ್ಟರೂ   ನನಗೆ   ಅವರಿಬ್ಬರಿಗೂ     ಸವಾರಿ  ಆರಾಮ  ಎನಿಸುವುದೋ    ಅನ್ನುವ  ಬಗೆಗೆ     ಸಂಶಯಗಳಿದ್ದವು.    

ಟಾಂಡೆಮ್  ಸೈಕಲು ಸವಾರಿ ಎಂದರೆ ಇಬ್ಬರಿಗೂ  ಕೂರಲು  ತುಳಿಯಲು ಆರಾಮವಾಗಿರಬೇಕು. ಕೈಕಾಲುಗಳು  ಪೆಡಲಿಗೂ  ನೆಲಕ್ಕೂ  ಎಟಕುವುದು ಬಹು ಮುಖ್ಯ.  ತುಳಿಯುವಾಗ  ಕಾಲುಗಳು ನೇರವಾಗಲು  ಅವಕಾಶವಿರಬೇಕು.  ಹಿಂದಿನವರು  ಸುಸ್ತಾದರೆ   ಮುಂದಿನ  ಹಾದಿ  ದುರ್ಗಮವಾಗುತ್ತದೆ.    ಟಾಂಡೆಮ್  ಸೈಕಲ  ವಿಚಾರದಲ್ಲಿ    MAKE SURE BOTH RIDERS FIT THE BIKE  ಎನ್ನುತ್ತದೆ  ಒಂದು  ಸಹಾಯಕ  ಜಾಲತಾಣ.  ಆದರೆ     ನಮ್ಮ    ಮುಂದೆ ಆಯ್ಕೆಗಳಿಲ್ಲ.   ಸಿದ್ದ ವಸ್ತುಗಳ  ಬೇಕಾದರೆ  ತಗೊಳೋದು   ಇಲ್ಲಾಂದ್ರೆ   ಅಂಗಡಿಯಿಂದ   ಹೊರನಡೆಯೋದು   ಮಾತ್ರ  ನಮಗಿರುವ    ಅವಕಾಶ.   ಯಾವ  ರೀತಿ  ಅಂದರೆ     ಹೆನ್ರಿ  ಫೋರ್ಡ್  ಕಾರು ತಯಾರಿಸಿದ ನಂತರ  ಯಾವೆಲ್ಲ  ಬಣ್ಣಗಳಲ್ಲಿ  ದೊರಕುತ್ತದೆ  ಎಂದಾಗ  ಎಂದಿದ್ದನಂತೆ – you can have in any colour  as long as it is black. 

ನಮ್ಮೂರಲ್ಲಿ  ಅಪರೂಪವಾಗಿರುವ   ಟಾಂಡಮ್  ರಸ್ತೆಯಲ್ಲಿ ಚಲಾವಣೆಯಲ್ಲೂ  ಹೆಚ್ಚು  ಜಾಗ್ರತೆ  ಅಗತ್ಯ.   ಈ  ಸೈಕಲು ಉದ್ದವಿರುವ  ಕಾರಣ  ಎದುರಿಂದ  ಬರುವ  ಬಲಕ್ಕೆ    ತಿರುಗುವ  ಚಾಲಕರ  ಬಗೆಗೆ ತುಂಬಾ  ಎಚ್ಚರವಿರಬೇಕಾಗುತ್ತದೆ.  ಉದ್ದ  ಸೈಕಲಿನ ಬಗೆಗೆ  ಅವರು  ಯೋಚಿಸಿರುವುದಿಲ್ಲ.  ಈಗ  ಸಾಮಾನ್ಯವೆನಿಸುವ   ಉದ್ದ ಲಾರಿಗಳು  ಮೊದಲಿಗೆ  ನಮ್ಮೂರಿಗೆ   ಬಂದಾಗ   ಮುಂದಿನ  ಇಂಜಿನ್  ಬಾಗ   ದಾಟಿದ   ತಕ್ಷಣ    ಪೂರ್ತಿ  ದಾಟಿತೆನ್ನುವ  ಭ್ರಮೆಯಲ್ಲಿ ಸಾಗಿದ     ದ್ವಿಚಕ್ರ   ಸವಾರರು  ಅವುಗಳ   ಮದ್ಯೆ  ಸಿಲುಕಿ   ಅಪಘಾತಗಳಾಗಿವೆ.      

ನಾ ಕಂಡ  ಅತ್ಯುತ್ತಮ  ಟಾಂಡೆಮ್  ಅಂದರೆ   ಜರ್ಮನಿಯ   Hase  Pino.   ಕಳೆದ ವರ್ಷ  ಬೆಲ್ಜಿಯಂ ದೇಶದ    ಇಂತಹ  ಸೈಕಲೊಂದು  ನಮ್ಮೂರು  ದಾಟಿ    ಹೋಗಿತ್ತು.    http://halliyimda.blogspot.in/2011/12/blog-post_19.html


ಸೈಕಲು  ಖರೀದಿ  ಎಂದರೆ  ಪರದೇಶಗಳಲ್ಲಿ  ಉದಾಹರಣೆಗೆ  ಅಮೇರಿಕದಲ್ಲಿ     ಸರಳ ವ್ಯವಹಾರವಲ್ಲ.   ಅಂಗಡಿಗೆ  ಹೋದರೆ   ನಮ್ಮ  ಆಕಾರಕ್ಕೆ  ಹಾಗೂ  ಉಪಯೋಗಕ್ಕೆ  ಅನುಕೂಲವೆನಿಸುವ  ವಿಬಿನ್ನ  ಮಾದರಿಗಳು  ಅಲ್ಲಿರುತ್ತವೆ.  ಹೆಚ್ಚಿನ   ಜನ  ಸಿದ್ದ  ಸೈಕಲುಗಳನ್ನೇ   ಕೊಳ್ಳುತ್ತಾರೆ.  ಅಮೇರಿಕದಲ್ಲಿ ತಯಾರಾದ ಹೆಚ್ಚು ದುಬಾರಿ  ಸೈಕಲುಗಳು ಹಾಗೂ  ಅಮದಾದ  ಅಗ್ಗದ ಮಾಲುಗಳೂ  ಅಲ್ಲಿರುತ್ತವೆ.    


ಅಮೇರಿಕದಲ್ಲಿ   ಮುನ್ನೂರಕ್ಕೂ ಹೆಚ್ಚು  ಚಿಕ್ಕ  ಪುಟ್ಟ ಸೈಕಲು ತಯಾರಕರು ಇದ್ದಾರೆ.   ಹೆಚ್ಚಿನವು  ಏಕ  ವ್ಯಕ್ತಿ  ಉದ್ಯಮ.   ಅವರೆಲ್ಲ  ನಮ್ಮಲ್ಲಿ  ದರ್ಜಿ ಅಳತೆ ತೆಗೆಯುವಂತೆ    ಅಳತೆ  ತೆಗೆದು    ನಮ್ಮ   ಆಕಾರಕ್ಕೆ ಅನುಗುಣವಾಗಿ   ಸೈಕಲು ತಯಾರಿಸುತ್ತಾರೆ.  ಅಂದರೆ  ದೇಹ  ರಚನೆಗೆ  ಅನುಗುಣವಾಗಿ ಸೈಕಲು  ವಿನ್ಯಾಸ.    ಈ   ಸೈಕಲುಗಳು  ಅಲ್ಲಿನ   ಜೀವನಮಟ್ಟ  ಆಲೋಚಿಸುವಾಗ    ಹೆಚ್ಚೇನು  ದುಬಾರಿಯಲ್ಲ.   ಫ್ರೇಮಿಗೆ   ಸುಮಾರು  ಒಂದು ಮುಕ್ಕಾಲು ಎರಡು ಸಾವಿರ  ಡಾಲರ್  ಇರುತ್ತವೆ. ರೂಪಾಯಿ  ಲೆಕ್ಕದಲ್ಲಿ ಸುಮಾರು ಒಂದು ಲಕ್ಷ .    ಅನಂತರ  ಇತರ  ಬಿಡಿಬಾಗಗಳ  ಆಯ್ದು   ಜೋಡಿಸುವ  ಕೆಲಸ ಉಳಿದಿರುತ್ತದೆ. 



ಒರೆಗೊನ್  ರಾಜ್ಯದ  ಪೊರ್ಟ್ ಲಾಂಡಿನಲ್ಲಿಯೇ      ನಲುವತ್ತಕ್ಕೂ  ಹೆಚ್ಚು  ತಯಾರಕರು   ನೆಲೆನಿಂತಿದ್ದರೆ ಉಳಿದವರು  ದೇಶದಾದ್ಯಂತ  ಹಂಚಿಹೋಗಿದ್ದಾರೆ.     ಈ  ವ್ಯವಹಾರದಲ್ಲಿ   ಇರುವವರು ಎಲ್ಲರೂ  ಗಂಡಸರಲ್ಲ.    ಮಹಿಳೆಯರ  ಅಪೇಕ್ಷೆ   ಸ್ವಾಬಾವಿಕ    ಬಿನ್ನವಾಗಿರುತ್ತದೆ.   ಮಹಿಳೆಯರಿಗಾಗಿ  ಅವರ   ಅಳತೆ  ಮಾಡಿ  ಕೊಳವೆಗಳ  ಕತ್ತರಿಸಿ   ಜೋಡಿಸಿ   ಸೈಕಲು  ತಯಾರಿಯಲ್ಲಿ  ಮಹಿಳೆಯರೂ  ತೊಡಗಿಸಿಕೊಂಡಿದ್ದಾರೆ.   http://www.sweetpeabicycles.com

ಈ  ಉದ್ಯೋಗ  ಕಲಿಯಲು   ಸೈಕಲ್  ತಯಾರಿಸಲು    ಆಸಕ್ತಿ ಇದೆಯಾ  ? ಸರಿ. ಬನ್ನಿ.      ಹಲವಾರು ಅನುಭವಸ್ಥ  ತಯಾರಕರು  ತರಬೇತಿ  ಕೊಡುತ್ತರೆ.  ತರಬೇತಿ  ಮುಗಿಯುವಾಗ  ನೀವು  ಜೋಡಿಸಿದ  ಒಂದು   ಸೈಕಲು  ನಿಮ್ಮದಾಗಿರುತ್ತದೆ.   

ಅಳತೆ ತೆಗೆದ ನಂತರ  ಕೊಳವೆಗಳ  ಕತ್ತರಿಸುವುದರ  ಕರಾರುವಕ್ಕಾಗಿ   ಲೆಕ್ಕಾಚಾರ  ಹೇಳಲು  ಬೈಕ್ ಕಾಡ್ ಎನ್ನುವ   ಸೊಫ್ಟ್ ವೇರ್   ಸಹಾಯ  ಮಾಡುತ್ತದೆ.  ಹೆಚ್ಚಿನ  ತಯಾರಕರು  ಅದನ್ನು ಬಳಸುತ್ತಾರೆ.  ಇದರ  ಸರಳ  ಅವೃತ್ತಿ ಮುಕ್ತವಾಗಿ  ಬಳಸಲು  ಲಭ್ಯ.   ಒಂಟಿ  ಸೈಕಲಿಗೂ  ಜಂಟಿ   ಸೈಕಲು  ವಿನ್ಯಾಸ    ದಾರಿ ಬೇರೆ ಬೇರೆ.   


ವರುಷಕ್ಕೊಮ್ಮೆ  ಈ  ಸೈಕಲು  ತಯಾರಕರ ಸಮಾವೇಶವೂ ನಡೆಯುತ್ತದೆ.   ಹಲವಾರು  ಪ್ರಮುಖ ತಯಾರಕರು ತಮ್ಮ  ಕೈಚಳಕ  ಪ್ರದರ್ಶಿಸಿಲು  ಉತ್ಸಾಹ  ತೋರಿದರೆ    ಉಳಿದವರೆಲ್ಲ  ಸ್ಪೂರ್ತಿ  ತುಂಬಿಕೊಳ್ಳಲು  ನೆರೆಯುತ್ತಾರೆ.  ಅಂತೂ  ಸಮಾವೇಶ  ಬರ್ಜರಿಯಾಗಿಯೇ  ನಡೆಯುತ್ತದೆ.  ಆರು ತಿಂಗಳು ಹಿಂದೆ ನಡೆದ ಈ ವರ್ಷದ ಸಮಾವೇಶದ  ಚಿತ್ರಗಳ ನೋಡಲು ಇಲ್ಲಿ ಕ್ಲಿಕ್ಕಿಸಿ. 


ನಮಗೆ  ಅಳತೆಗೆ  ತಕ್ಕ   ಸೈಕಲು    ಅಪರೂಪವಾದರೆ    ನಾವು  ಮಾಮೂಲು ದರಿಸುವಂತಹ   ಊರ  ದರ್ಜಿ  ಹೊಲಿದ  ಅಂಗಿ  ಅಮೇರಿಕನರಿಗೆ   ಬಹಳ  ಅಪರೂಪ.  ಅಮೇರಿಕದಲ್ಲಿ ಗೆಳೆಯ  ಎರಿಕ್  ನನ್ನದು  ಅಳತೆ  ತೆಗೆದು  ಕೈಮಗ್ಗದ  ಬಟ್ಟೆಯಿಂದ   ಹೊಲಿದ   ಅಂಗಿ  ಎಂದಾಗ  ತುಂಬಾ  ಆಶ್ಚರ್ಯ  ಪಟ್ಟ.   ಕಾರಣ  ಅಲ್ಲಿ ಹೊಲಿಗೆ ಮಜೂರಿ  ದುಬಾರಿ.     ಅಮೇರಿಕದಲ್ಲಿ ಹೊಲಿಸಿದ  ಅಂಗಿ  ದರಿಸುವವನು  ಬಾರಿ     ಶ್ರೀಮಂತ.    J      ಉಳಿದವರೆಲ್ಲ   ಮೆಕ್ಸಿಕೊ,   ಕೊಸ್ಟಾರಿಕಾ,    ಥೈಲಾಂಡಿನಲ್ಲೊ    ತಯಾರಾಗುವ   ರೆಡಿಮೇಡ್  ಅಂಗಿಗಳಲ್ಲೇ  ತೃಪ್ತರು. 

ಹಲವಾರು  ತಿಂಗಳಿಂದ  ವೈಯುಕ್ತಿಕ  ಸಮಸ್ಯೆಗಳಿಂದಾಗಿ    ನನ್ನ  ಬರವಣಿಗೆ  ನಾನು ಅಪೇಕ್ಷಿಸಿದ  ಗುಣಮಟ್ಟದಲ್ಲಿರಲಿಲ್ಲ.  ಏನು ?  ಸುದ್ದಿ ಇಲ್ಲ  ಎಂದು   ವಟಗುಟ್ಟಿದ   ನನ್ನ   ಚುರುಕುಗೊಳಿಸಿದ       ಶ್ರೀಮಾನ್    ಬೋರಯ್ಯನೋರಿಗೆ    ಕೃತಜ್ನತೆಗಳು

Saturday, April 07, 2012

An Accident


Yes. I have been hit  by a motorcycle coming from opposite  direction   last week  and  have fractured my left leg  ankle.  My long experience on the road says it is  a  very freak accident  and something like one  that  can happen  in billion crossings.  One reason  the people  go for car  because they  consider it safer  being inside a  box. I still  feel   the  cycling  should be  encouraged  and  more  awareness  about  its advantages   so that it becomes more safer.     

I was taken to my  family Doc, Dr KGBhat  who summoned a  108 ambulance  and  sent to Yenapoya Hospital  Deralakatte. Dr Aravind  who  examined  me  decided  to put the  left   leg in cast for  45 days.  So I will   confined  to my room for next  one and  half months  with minimal walking around the room with help  of   a walker. 

Till  the  very  last moment the motorcyclist was  in his  side & suddenly  took a turn  for simply  unexplainable reason.  He had crossed almost entire width of road before hitting me and  in my absence, would have ended up in the ditch.  There was no traffic on wide  tarroad  about  2.5 km from my home.   

My left  leg   locked  in   and  pedals  took  major  impact.    The  pedals  have been split open and  trike  cross beam is broken.  One chainring also seem to have been bent.  I have  not examined  properly  and trike frame  will need  both  straitening and  welding. Hope I can get it repaired.

I have spent  considerable  part of my savings in getting  this trike  and  this is a  major loss to me.  Past four  months I was going everywhere  in trike or bus and have stopped driving totally.  It  was not insured  as insurance people  normally  play by books.  I hoped I can get  part of repairing expenses  from that guy  but  most  of  the  gathered  people  were  not  supporting me. I was  not in mood for long fight  and  decided  not to file  FIR  also.   

I was  confined  to bed for  four  months   after  crashing  hangglider  and just twenty days to go  for  20th  (re)birthday. Then I used walker to learn walking again and now is using walker for  minimum walks within my  room.  

I am  sad  that it   happens  when    I  relieved of  farm and family  commitments  and   had decided to put more effort  for  cycling cause.  It is good  for health, saves  us  from  pollution  and spending  foreign exchange on  buying oil.   When it comes  to manufacturing it is still as if   India manufactures   only Ambassador and Fiat.    This  year  finance  minister imposes heavy taxation on cycles and if I get  my trike today  it will cost Rupees   80,000 extra as USD has become expensive and  taxes doubled.