Showing posts with label america. Show all posts
Showing posts with label america. Show all posts

Tuesday, October 16, 2012

ಜಗತ್ತನ್ನು ಉಳಿಸಲು ದೇವರು ಅವತರಿಸುತ್ತಾನೆ …….



ದೇವರು  ಆರು ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿದ. ಇದು  ಅಮೇರಿಕ  ಎಂಬ  ದೇಶದ  ಹಲವು  ರಾಜ್ಯಗಳಲ್ಲಿ  ಪುಟ್ಟ   ಮಕ್ಕಳು  ಶಾಲೆಯಲ್ಲಿ    ಓದುವ   ಪಾಠ.    ಅನಂತರ  …  ಕ್ಷಮಿಸಿ ಇಲ್ಲಿ ಸ್ವಲ್ಪ   ಗೊಂದಲವಿದೆ.     ಗಿನಿಸಿಸ್ ಒಂದರ ಪ್ರಕಾರ  ಗಿಡ  ಮರಗಳ ಪ್ರಾಣಿಗಳ  ಅನಂತರ  ಆಡಮ್ ಹಾಗೂ   ಇವ್  ಇವರನ್ನು ಜತೆಯಾಗಿ ಸೃಷ್ಟಿಸಿದ.

  

ಆದರೆ,  ಗಿನಿಸಿಸ್  ಎರಡರ  ಪ್ರಕಾರ  ಮೊದಲು  ಆಡಮ್ ನಂತರ  ಗಿಡಮರಗಳು ಪ್ರಾಣಿಗಳ     ಸೃಷ್ಟಿಯಾದ  ನಂತರ  ಆಡಮನ   ಪಕ್ಕೆಲುಬುವಿನಿಂದ   ಅವನಿಗೊಂದು  ಜತೆಗಾರ್ತಿ ಇವ್ ಳನ್ನು   ಕೊಟ್ಟ.    



ಒಟ್ಟಿನಲ್ಲಿ ದೇವರು   ಆಡಮ್  ಮತ್ತು ಇವ್  ಅವರನ್ನು  ಸೃಷ್ಟಿಸಿದ  ಅನ್ನುವುದಕ್ಕೆ  ಯಾವುದೇ  ಸಂಶಯವಿಲ್ಲ.   ಅಮೇರಿಕದಲ್ಲಿ    ಪುಟ್ಟ  ಮಕ್ಕಳ   ವಿದ್ಯಾಬ್ಯಾಸ  ಈ ರೀತಿ  ಸಾಗಲು   ಅಲ್ಲಿನ  ಪ್ರಮುಖ    ಪಕ್ಷವು  ಡಾರ್ವಿನನ  ವಿಕಾಸವಾದವನ್ನು  ಸಂಪೂರ್ಣ  ಅಲ್ಲಗಳೆದು  ಬೈಬಲ್ ವಾದವನ್ನು  ಪ್ರತಿಪಾದಿಸುತ್ತದೆ.

ಅವರು  ಅಲ್ಲಿನ  ಮಕ್ಕಳಿಗೆ ಏನು ಬೇಕಾದರೂ  ಕಲಿಸಲಿ ಎಂದು ನಾವು  ಪೂರ್ತಿಯಾಗಿ     ಬಿಟ್ಟುಬಿಡುವಂತಿಲ್ಲ. ಯಾಕೆಂದರೆ   ನವೆಂಬರ್   ಮೊದಲ  ವಾರ   ಅಮೇರಿಕದಲ್ಲಿ  ಅಧ್ಯಕ್ಷರ   ಚುನಾವಣೆ  ನಡೆಯಲಿದೆ.  ಈ ಚುನಾವಣೆ ಫಲಿತಾಂಶ   ಮುಂದಿನ ದಿನಗಳಲ್ಲಿ  ಜಾಗತಿಕ   ಪರಿಸರ  ದ್ವಂಸದ    ಬಗೆಗೆ  ನಿರ್ಣಾಯಕ  ತಿರುವು ಕೊಡಲಿದೆ. ಯಾಕೆಂದರೆ  ಅಲ್ಲಿನ    ಒಂದು  ಪಕ್ಷವು  ಮಾನವನ  ಚಟುವಟಿಕೆಗಳಿಂದಾಗಿ    ಭೂಮಿ    ಉಷ್ಣವಾಗುವುದನ್ನೂ  ಅಲ್ಲಗಳೆಯುತ್ತದೆ.   ಮತದಾರರಲ್ಲಿ   ಇನ್ನೇನು  ಅವತರಿಸಲಿರುವ  ಆ  ಸರ್ವಶಕ್ತ  ದೇವನು  ಎಲ್ಲವನ್ನೂ  ಸರಿಪಡಿಸುತ್ತಾನೆ  ಎನ್ನುವ   ಭ್ರಮೆಯನ್ನುಂಟು   ಮಾಡುತ್ತಾರೆ  ಈ  ಪಕ್ಷದವರು.   ನನ್ನ  ತಕರಾರು ಇರುವುದು  ದಾರ್ಮಿಕ   ಕಾರಣವಲ್ಲ,  ನಾವಿರುವ ಈ   ಜಗತ್ತಿನ  ಬಗೆಗೆ   ಪರಿಸರ ಕಾಳಜಿ    ಅಷ್ಟೇ.  ಆದರೆ    ಈಗ   ಒಬಾಮನೇ    ಗೆದ್ದರೂ ಸುಖವಿಲ್ಲ.    ಯಾಕೆಂದರೆ ಶಾಸನ  ಸಭೆಗಳಲ್ಲಿ ಅವನ  ಪಕ್ಷಕ್ಕೆ  ಬಹುಮತವಿಲ್ಲ.  ಹಾಗೆ ಈ  ವಿತಂಡವಾದಿಗಳು  ಅವನ  ಪ್ರತಿ ಹೆಜ್ಜೆಗೂ  ಕಿರಿಕಿರಿ  ಉಂಟುಮಾಡುತ್ತಿದ್ದಾರೆ,  ಮುಂದೆಯೂ  ಮಾಡುತ್ತಾರೆ.    


ಅಮೇರಿಕದಲ್ಲೊಂದು  ಪ್ರಬಲ ಪಕ್ಷ – ಆನೆ ಪಕ್ಷ.  ಇವರೆಲ್ಲ  ದರ್ಮಬೀರುಗಳು.    ಈ  ಆನೆ ಪಕ್ಷದ   ರಾಜಕಾರಣಿಗಳ  ವರ್ತನೆ ಕೆಲವೊಮ್ಮೆ  ಹಾಸ್ಯಾಸ್ಪದವೂ  ಆಗಿರುವ  ಕಾರಣ  ಮೋಜು  ಅನಿಸುವುದಾದರೂ  ಅವರ ಕೈಯಲ್ಲಿ  ಅಧಿಕಾರ  ಅನ್ನುವಾಗ  ಬೀತಿ ಉಂಟಾಗುತ್ತದೆ.  ಡಾರ್ವಿನನ  ವಿಕಾಸವಾದದಿಂದ ಹಿಡಿದು   ಇಂದು  ವಿಜ್ಞಾನಿಗಳು  ಪ್ರಯೋಗದಿಂದ  ಖಚಿತಪಡಿಸುವ  ವಾತಾವರಣ  ಉಷ್ಣವಾಗುವುದರ ವರೆಗೆ ಎಲ್ಲವನ್ನೂ  ಅಲ್ಲಗಳೆಯುತ್ತಾರೆ.   ಮಾನವ ವಿಕಾಸ  ಬಗೆಗೆ    ಬೈಬಲ್‍ವಾದದಲ್ಲಿ   ಪಾಠ  ಮಾಡಬೇಕೆಂದು  ಶಿಕ್ಷಕರ  ಮೇಲೆ  ಒತ್ತಡವಿದೆ.      ನಿರಪರಾಧಿಗಳಿಗೆ      ಅತಿ ಹೆಚ್ಚು  ಮರಣದಂಡನೆ  ವಿದಿಸುವ  ರಾಜ್ಯ    ಸರಕಾರಗಳೆಲ್ಲ    ಈ  ಆನೆ ಪಕ್ಷದವು. ಈ   ಪಕ್ಷದ    ಬುಶ್  ಇತ್ಯಾದಿ    ತೈಲ ದೊರೆಗಳಿಗೆ     ಉತ್ತರ ದ್ರುವದ  ಹಿಮಕವಚ ಕರಗಿದರೆ   ಅಲ್ಲೂ  ತೈಲಬಾವಿ  ಕೊರೆಯುವ  ದೂರಾಲೋಚನೆ. 


ಏರುತ್ತಿರುವ  ಸಮುದ್ರ ಮಟ್ಟದಿಂದಾಗಿ  ಈಗಾಗಲೇ   ಅಮೇರಿಕದ  ಪೂರ್ವ ಕರಾವಳಿಯ  ಇತ್ತೀಚಿನ  ವರೆಗೆ     ೩೫೦ ಜನರ ವಾಸ್ತವ್ಯವಿದ್ದ   ಹಾಲೆಂಡ್ ಹೆಸರಿನ    ದ್ವೀಪವೊಂದು  ಮುಳುಗಿದರೂ  ಇವರು ಕಣ್ಮುಚ್ಚಿ ಕುಳಿತುಕೊಳ್ಳಲು  ತಯಾರು. ಮೇಲಿರುವ  ಚಿತ್ರದಲ್ಲಿರುವ   ಕಟ್ಟಡ  ಆ  ದ್ವೀಪದ  ಕೊನೆಯ  ಕಟ್ಟಡ.    ಈ  ವಿಚಾರದಲ್ಲಿ    ಕಿತಾಪತಿ  ಮಾಡದೆ   ಸುಮ್ಮನಿರಲು  ಮಾದ್ಯಮಗಳಿಗೆ ಹಾಗೂ  ವಿಜ್ಞಾನಿಗಳಿಗೆ  ಒತ್ತಡವಿದೆ.     

 ಅಂದು  ಈ  ಪಕ್ಷದ    ಜಾರ್ಜ್    ಬುಶ್  ಇರಾಕನ್ನು   ದಂಡೆತ್ತಿ  ಹೋದದ್ದು  ತೈಲ ಬಾವಿ  ವಶಪಡಿಸಿಕೊಳ್ಳುವುದಕ್ಕೆ.  ಆಗ  ಜನಬೆಂಬಲ  ದೊರಕಿಸಿಕೊಳ್ಳಲು   ಸದ್ದಾಮನಲ್ಲಿ  ಅಪಾಯಕಾರಿ  ಶಸ್ತ್ರಾಸ್ತ್ರಗಳಿವೆ  ಎಂದು    ಎಷ್ಟು ಅಪಪ್ರಚಾರ ಮಾಡಿದ್ದಾರೆಂದರೆ   ಇಂದಿಗೂ,   ಒಂಬತ್ತು  ವರ್ಷ    ಕಳೆದ  ನಂತರವೂ  ಆನೆ ಪಕ್ಷದ  ಅನುಯಾಯಿಗಳಿಗೆ  ಅದು ಸುಳ್ಳೆಂದು  ಅರಿವಾಗಲೇ  ಇಲ್ಲ.     ಎರಡೇ  ಪಕ್ಷಗಳು  ಅಂದ ನಂತರ  ಸಮಪಾಲು   ಜನ  ಇವರ   ಬೆಂಬಲಿಗರೆಂದು  ಹೇಳಬಹುದು.  ಮುಂದುವರಿಸಿ  ಹೇಳುವುದಾದರೆ   ಅರೆವಾಶಿ  ಅಮೇರಿಕನರು  ಅರೆ ಹುಚ್ಚರು  ಅನ್ನಲೂ  ಬಹುದು.  J


 ಇಷ್ಟರ  ವರೆಗೆ ನಮಗೆ ಇಸ್ಲಾಮಿಕ್  ಮೂಲಬೂತವಾದ  ಮಾತ್ರ  ಪರಿಚಿತವಾಗಿತ್ತು.  ನಿಜಕ್ಕೂ  ನೋಡಿದರೆ  ಈ   ಕ್ರೈಸ್ತ  ಭಯೋತ್ಪಾದನೆ  ಹೆಚ್ಚು  ಅಪಾಯಕಾರಿ.    ಇದರ   ಗಂಬೀರ  ಸಮಸ್ಯೆ  ನಮಗೆ  ಅರಿವಾಗದೆ ಇರುವುದಕ್ಕೆ  ಕಾರಣ  -  ಮಾದ್ಯಮಗಳೆಲ್ಲ  ಅವರ   ನಿಯಂತ್ರಣದಲ್ಲಿ  ಇರುವುದು.  ದೇವರು ಬಂದು  ನಮ್ಮನ್ನೆಲ್ಲ  ಕಾಪಾಡುತ್ತಾನೆ  ಎನ್ನುವ  ಮೂರ್ಖನ  ಕೈಯ್ಯಲ್ಲಿ    ಜಗತ್ತಿನ  ಅತಿ ದೊಡ್ಡ  ಅಣುಬಾಂಬುಗಳ ರಾಶಿಯ  ನಿಯಂತ್ರಣವಿದ್ದರೆ    ??        



eÛeé% …ßÎé @ÈÚƒ¾Úᒀ @ÈæßÂOÚ¥ÚÆÇ«Ú PÃÌ`¾Úß«é VÚßM®Úâ´VÚ×Úß }ÚÈÚß½ ®ÛÃ…ÄÀÈÚ«Úß„ Ôæ_`ÒOæàMsÚÈÚâ´.   eÛ}ÚÀ~Þ}Ú ÑÚÈÚáÛdÈÚ«Úß„ «æÄOÚ_`ÑÚÄß ÑÚÈÚßÁÚ «ÚsæÑÚ†æÞOÚß ÈÚß}Úß¡ @ÈæßÂOÚÈÚ«Úß„ ¥æÞÈÛƒ®Ú}ÚÀ¥Ú ÑÛÈÚáÛÃdÀÈÚ«Û„W ®ÚÂÈÚ~%ÑÚÄß ÑÚMÉ¨Û«Ú¥ÚÆÇ …¥ÚÅÛÈÚzæ }ÚÁÚ†æÞOæM¥Úß …ÕÁÚMVÚÈÛW OÚÁæ ¬ÞsÚÄß @ÈÚâ´ ®ÚÃ…Ä ÈæÞ¦OæVÚ×ÛW¥Ú§ÈÚâ´. 

C Õ«æ„Åæ¾Úᒀ «ÛÈÚâ´ CÈÚÁæVæ @eÛk}ÚÁÛW¥Ú§ Éßmé ÁæàÞÉß„ ÈÚß}Úß¡ B«Úà„ d«Ú¯Ã¾ÚßÁÛW DئÁÚßÈÚ …ÁÛOé J†ÛÈÚß @ÈÚÁÚ «ÚsÚßÈÚy ÔæVÚÅæzæ¾Úß ÑÚ°¨æ%¾Úß«Úß„ VÚÈÚ߬ÑÚ†æÞOÚß. ÁæàÞÉß„ @ÈÚÁÚß ÈæàÞÈÚß%«é ^Ú^é%«Ú @«Úß¾ÚáÛ¿ß. GÄÇ @ÈæßÂOÚ«Ú„ÁÚß C «æÄ¥Ú ¥æÞÈÚÁÚß- @M¥ÚÁæ ¾æßÞÑÚßPÃÑÚ¡«Ú OÛ«Úà«Ú«Úß„ ®ÛÆÑÚ†æÞOÚß GM…ߥÚß ÈæàÞÈÚß%«é ^Ú^é%«Ú ®ÚÃ~®Û¥Ú«æ. ÉßÑæàÓÞ¾Úß eÛÀOÚÓ«é Òn¾Úᒀ ¾æßÞÑÚßPÃÑÚ¡ ÈÚß}æ¡ d¬ÑÚß}Û¡«æ GM…ߥÚß ÈæàÞÈÚß%«Ú„ÁÚ «ÚM¸Oæ. ^Ú^é%Væ Ôæ^Úß` Ôæ^Úß` ÑÚMSæÀ¾Úß ÑÚ¥ÚÑÚÀÁÚß †æÞOÚß. ÔÛVÛW ÈÚߥÚßÈæ¾ÚáÛW d«ÚÑÚMSæÀ¾Úß«Úß„ Ôæ_`ÑÚßÈÚâ´¥Úß @ÈÚÁÚ ÑÚM®ÚÃ¥Û¾Úß. Éßmé ÁæàÞÉß„¾Úß }Û}Ú eÛeé% ÁæàÞÉß„ ÈÚßàÈÚÁÚß ®Ú~„¾ÚßÂM¥Ú 35 ÈÚßOÚQ×Ú«Úß„ ®Ús榥ڧÁÚß! ÈæàÞÈÚß%«Ú„ÁÚ C ¬ÄßɬM¥ÛW @…ÃÔÛM ÆMOÚ«é 1862ÁÚÆÇ …ÔÚß®Ú~„}Ú‡ÈÚ«Úß„ ¬ÎæÞƒÒ¥Úà§ DMlß. 

ÈæàÞÈÚß%«Ú„ÁÚß ÈÚß}Úß¡ eÛeé% …ßÎé @ÈÚÁÚ"†Û«é% @Væç«é BÈÛMeæÆOÚÅéÓ' }ÚÈÚß½¥æÞ A¥Ú ÉËÚ‡ÈæãM¥Ú«Úß„ ÑÚäÏoÑÚßÈÚ OÚ«ÚÑÚß OÚMt¥Ú§ÁÚß. }ÛÈÚâ´ «ÚM¸¥Ú§«æ„Þ GÄÇÁÚà «ÚM…†æÞOÚß GM…ߥÚß @ÈÚÁÚ BÁÛ¥æ¾ÚáÛW}Úß¡. @ÈÚÁÚM}æ¾æßÞ ÑÚIJVÚ×Úß ÈÚß}Úß¡ Ñè¦ @ÁæÞ¸¾ÚáÛ¥Ú ÈÚÔÛ¸VÚ×Úà «Úsæ¥ÚßOæàMt¥Û§Áæ, B}ÚÁÚ ÈÚßßÒÇÈÚßÁÚß }ÚÈÚß½«æ„Þ @«ÚßÑÚÂÑÚ†æÞOÚß GM¥Úß …¾ÚßÑÚß}Û¡Áæ. JM¥æÞ JM¥Úß ÈÚß}Ú- @M¥ÚÁæ }ÚÈÚß½ ÈÚß}ÚÈæãM¥Ú«æ„Þ ÔæàM¦ÁÚßÈÚ ÉËÚ‡¥Ú ÑÚäÏo @ÈÚÁÚ VÚßÂ."PÃÌ`¾Úß«é Áæçmé' ÑÚMYÚl«æ¾Úßß ÔÚ}Úß¡ @MËÚVÚ×Ú ¥æçÈÛ«ÚßËÛÑÚ«ÚÈÚâ´ ÉËÚ‡¥Ú OÛ«Úà«ÛW ®ÚÂÈÚ~%}ÚÈÛVÚ†æÞOÚß GM¥Úß …¾ÚßÑÚß~¡¥Ú§Áæ, ÑÚIJVÚ×Úß ËÚÂÞ¾Úß}é ÉËÚ‡¥Ú OÛ«Úà«Úß AVÚ†æÞOÚß G«Úß„~¡¥Û§Áæ. BM¢Ú «ÛVÚÂOÚ}æVÚ×Ú ÈÚߨæ´À ÑÚMYÚÎÚ%ÈÚ«Úß„ }Ú¯°ÑÚ†æÞOÛ¥ÚÁæ ¥æÞÈÚÁæÞ ®ÚÈÛsÚ }æàÞÁÚ†æÞOÚÎæo. 

ಇವೆಲ್ಲ  ಯೋಚಿಸುವಾಗ ಸಚ್ಚಿದಾನಂದ  ಹೆಗ್ಡೆಯವರ   ಮಾತು  ಇಲ್ಲಿ  ಪ್ರಸ್ತುತವೆನಿಸುತ್ತದೆ.   ಅವರು ಬರೆಯುತ್ತಾರೆ -    ಪ್ರಕೃತಿಯೊಂದಿಗೆ   ಒಂದಾಗುವುದು ಮಾನವ    ದರ್ಮ.   ಪ್ರಕೃತಿಯನ್ನು ತುಳಿಯುವುದು ಅದರ್ಮ.  ಪ್ರಕೃತಿ ಇರುವುದು  ಮಾನವನಿಗಾಗಿ ಎಂಬ  ಸೆಮೆಟಿಕ್ ಸಿದ್ದಾಂತವನ್ನು ನಾವು ಕೈ ಬಿಟ್ಟು  ಭಾರತಿಯ  ಸಂಸ್ಕೃತಿಗೆ  ಮರಳಬೇಕು.  ಈಗ  ಇರುವುದು  ಅದೊಂದೆ  ಪರಿಹಾರ.



ತಡವಾಗಿ   ಸೇರ್ಪಡಿಸಿದ   ಸೂಚನೆ  :    ಅಶೋಕಣ್ಣನವರು ಹೇಳಿದಂತೆ,    ಕನ್ನಡ  ಪ್ರಭದ  ಅಕ್ಷರಗಳು  ಅಳವಡಿಸಿರದ  ಗಣಕಗಳಲ್ಲಿ  ಜೋರ್ಜ  ಅವರ  ಅಂಕಣ  ಓದಲು  ಸಾದ್ಯವಾಗುವುದಿಲ್ಲ.   ಸುಲಭ  ಪರಿಹಾರವೆಂದರೆ  ಫೋಂಟ್  ಹಂಗಿಲ್ಲದೆ  ಓದಲು   ಮೂಲ   ಕನ್ನಡ  ಪ್ರಭ  ಪತ್ರಿಕೆಯ  ಪುಟವನ್ನೇ  ತೆರೆಯಿರಿ    - http://www.kannadaprabha.com/pdf/14102012/10.pdf.   ಆ  ಲೇಖನದ  ಇಂಗ್ಲೀಶ್ ಮೂಲಪ್ರತಿಯನ್ನೇ  ಓದುವ  ಆಸಕ್ತಿ ಇದ್ದರೆ  -   http://tjsgeorge.blogspot.in/2012/10/as-religious-hardliners-gain-ground.html

Wednesday, April 07, 2010

ಹೆಗಲೇರಿದ ನನ್ನ ಸೈಕಲು

ಈ ಚಿತ್ರ ನೋಡುವಾಗ ನೆನಪು ಇಪ್ಪತೈದು ವರ್ಷ ಹಿಂದಕ್ಕೋಡಿತು. ಕಾರಣ ನ್ಯುಯೊರ್ಕ್ ಪಟ್ಟಣದಲ್ಲೊಮ್ಮೆ ನನ್ನ ಸೈಕಲೂ ಹೆಗಲೇರಿತ್ತು.
ತಡ ಸಂಜೆ ಅಮೇರಿಕ ತಲಪಿದ ಕಾರಣ ರಾತ್ರಿ ವಿಮಾನ ನಿಲ್ದಾಣದಲ್ಲೇ ಕಳೆದಿದ್ದೆ. ಅಲ್ಲೊಂದು ಕಂಬಕ್ಕೆ ಸೈಕಲು ಭದ್ರಪಡಿಸಿ ಮಲಗುವ ಚೀಲ ಬಿಡಿಸಿ ನಿದ್ದೆಗೆ ಜಾರಿದ್ದೆ. ಬೆಳಗ್ಗೆ ವಿಮಾನ ನಿಲ್ದಾಣದಿಂದ ಪಟ್ಟಣದ ಹೊರಸಾಗಲು ದಾರಿ ಹುಡುಕುತ್ತಿದ್ದೆ. ನನ್ನಲ್ಲಿ ಭೂಪಟಗಳಿರಲಿಲ್ಲ. ಆದರೆ ಗುರಿ ಮತ್ತು ಸಾಗುವ ದಿಕ್ಕು ಎರಡೂ ಖಚಿತವಾಗಿತ್ತು. ನ್ಯೂ ಯೋರ್ಕ್ ಪಟ್ಟಣದ ವಿಮಾನ ನಿಲ್ದಾಣ ಇರೋದು ಲಾಂಗ್ ಐಲಾಂಡ್ ದ್ವೀಪದಲ್ಲಿ.

ಹಾಗಾಗಿ ಮೇಲು ಸೇತುವೆಯಲ್ಲಿ ಸಾಗುವ ಹೆದ್ದಾರಿ, ನದಿಯಡಿಯಲ್ಲಿ ಸಾಗುವ ರೈಲು ದಾರಿ ಎಲ್ಲವೂ ನನಗೆ ಅಸಾದ್ಯ ಅಥವಾ ದುಬಾರಿಯಾಗಿತ್ತು. ಆದರೂ ಬ್ರೊಂಕ್ಸ್ ಪ್ರದೇಶಕ್ಕೆ ಸಾಗಲು ವೀಟ್ ಸ್ಟೋನ್ ಸೇತುವೆ ಹತ್ತಿರ ಸಾಗಿದೆ. ಅಲ್ಲಿ ಖಚಿತ ಬೋರ್ಡ್ ಇತ್ತು – ಸೈಕಲುಗಳಿಗೆ ಪ್ರವೇಶವಿಲ್ಲ. ಅಲ್ಲಿ ಸಿಕ್ಕವರೆಲ್ಲ ವಿಚಾರಿಸಿದೆ. ಎಲ್ಲರೂ ಗೊತ್ತಿಲ್ಲವೆಂದು ತಲೆಯಾಡಿಸಿದರು. ಕೊನೆಗೊಬ್ಬನಲ್ಲಿ ನೀವು ನದಿಯಾಚೆ ಬ್ರೋಂಕ್ಸ್ ಗೆ ಹೇಗೆ ಹೋಗುವಿರಿ ಎಂದಾಗ ಆ ಪೂರ್ವಾಗ್ರಹ ಪೀಡಿತ ಅಸಾಮಿ ಇಲ್ಲಿಂದ ಯಾರೂ ಬ್ರೋಂಕ್ಸ್ ಗೆ ಹೋಗುವುದಿಲ್ಲ ಎಂದು ಬಿಟ್ಟ. ಅವನಿಗೆ ಅದೊಂದು ಕರಿಯರು ವಾಸವಾಗಿರುವ ಕೊಳಕು ಪ್ರದೇಶ ಅನ್ನುವ ಅನಿಸಿಕೆ.

ಕೊನೆಗೊಂದು ಪೋಲಿಸ್ ಕಾರು ಸಮೀಪಿಸಿ ಅದರಲ್ಲಿದ್ದ ಪೋಲಿಸರ ಹತ್ತಿರ ವಿಚಾರಿಸಿದೆ. ಅವರೂ ತಲೆ ಕೆರೆದು ಕೊಂಡರು. ಕೊನೆಗೆ ಅವರ ವೈರ್ಲೆಸ್ ಉಪಯೋಗಿಸಿ ಮಾಹಿತಿ ಹುಡುಕಿ ಕೊಟ್ಟರು. ನೀನು ಟ್ರೈಬೊರೊ ಸೇತುವೆ ಬಳಿ ಸಾಗು ಎಂದರು. ನನ್ನ ಸವಾರಿ ಟ್ರೈಬೊರೊ ಸೇತುವೆ ಬಳಿ ಸಾಗಿತು. ಅಲ್ಲಿ ಸೇತುವೆ ಮೇಲೆ ಸೈಕಲು ಸಾಗುವ ದಾರಿಯೇನೊ ಇತ್ತು. ಅದು ಮಾತ್ರ ನೂರು ಮೆಟ್ಟಲು ದಾಟಿದ ನಂತರವಿತ್ತು. ಕೆಲಸವಾಗಬೇಕಾದರೆ ಕತ್ತೆ ಕಾಲೂ ......... ನೆನಪಾಯಿತು. ಸರಿ ಸೈಕಲು ನನ್ನ ಹೆಗಲೇರಿತು. ಸೇತುವೆ ಮೇಲೆ ಮತ್ತು ಉತ್ತರದ ಬದಿಯಲ್ಲಿ ಸೈಕಲಿಗೆ ಪಾದಚಾರಿಗಳಿಗೆನ್ನುವ ಅಗಲವಾದ ದಾರಿ ಇತ್ತು.

ವಾಪಾಸು ಬಂದ ನಂತರ ಹೇಳುತ್ತಾ ಇದ್ದೆ. ಹೆಚ್ಚಿನ ಪಾಲು ಸೈಕಲು ನನ್ನ ಹೊತ್ತಿತು. ಕೆಲವೆಡೆ ಜತೆಯಲ್ಲಿ ವಿಮಾನ ಹಡಗು ರೈಲು ಪ್ರಯಾಣ ಮಾಡಿದ್ದೂ ಉಂಟು. ನ್ಯೂ ಯೊರ್ಕಿನಲ್ಲೊಮ್ಮೆ ಮಾತ್ರ ನಾನು ಸೈಕಲು ಹೆಗಲೇರಿಸುವುದು ಅನಿವಾರ್ಯವಾಗಿತ್ತು.

ಒಂದಂತೂ ಸತ್ಯ. ಸೈಕಲು ಸವಾರರೆಂದರೆ ಪ್ರಪಂಚದ ಎಲ್ಲ ಕಡೆಗಳಲ್ಲೂ ತಾತ್ಸಾರ. ಕಾರುಗಳ ಈ ರೀತಿ ಮೆಟ್ಟಲುಗಳ ಮೇಲೆ ಸಾಗಲು ಯಾರೂ ಹೇಳುವುದಿಲ್ಲ.

Monday, January 11, 2010

ಅಮೇರಿಕ ಎಂದರೆ ಇನ್ನೊಂದು ಲೋಕ

ಅಮೇರಿಕಕ್ಕೆ ಹೋಗುವುದೆಂದರೆ ಪುನರ್ಜನ್ಮ ಹೊಂದುವುದೇ ಸರಿ. ಎಲ್ಲರೂ ಬತ್ತಲೆಯಾಗಿಯೇ ಅಮೇರಿಕ  ಪ್ರವೇಶಿಸುತ್ತಾರೆ. ಆಲ್ಲಲ್ಲ,  ಪ್ರವೇಶಿಸುವ ಮೊದಲು ಬತ್ತಲಾಗುತ್ತಾರೆ. ಅಮೇರಿಕ ಎಂದರೆ ಸ್ವರ್ಗ ಸಮಾನ ಎನ್ನುವ ಕಲ್ಪನೆ ನಮ್ಮಲ್ಲಿ ಹಲವರಿಗಿತ್ತು. ಅದು ಈಗ ನಿಜವಾಗಿದೆ.   ಆರು ವರ್ಷ ಹಿಂದೆ ನಮ್ಮ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡೀಸ್ ಅವರನ್ನು ಬತ್ತಲೆ ಮಾಡಿದ ಅಮೇರಿಕದ ರಕ್ಷಣಾಪಡೆ ಇನ್ನು ಎಲ್ಲರನ್ನೂ ಬತ್ತಲಾಗಿಸಲಿದೆ.     ದಯವಿಟ್ಟು ಯಾರೂ ಸ್ಕಾನ್ ಚಿತ್ರ ದರ್ಮಾರ್ಥವಾಗಿ ಕೇಳಬಾರದು. ಅಮೇರಿಕದಲ್ಲಿ ದುಡ್ಡೇ ದೊಡ್ಡಪ್ಪ. ದರ್ಮಾರ್ಥ ಸೇವೆ ಇಲ್ಲ.




ನನ್ನ ಒಂದು ಕಣ್ಣು ಹೋದರೇನಾಯಿತು, ಅವನ ಎರಡೂ ಕಣ್ಣು ಹೋಗಿದೆ ಎನ್ನುವಂತೆ ಇಲ್ಲೂ ನಾವು  ಬಹಳ  ಸಂಬ್ರಮ ಪಡಬಹುದಾದ  ವಿಚಾರ ಒಂದಿದೆ. ಪಾಕಿಸ್ತಾನದವರನ್ನು ಎಲ್ಲರನ್ನೂ ಪೂರ್ತಿ ಬತ್ತಲೆ ಮಾಡುತ್ತಾರಂತೆ.  ಭಾರತ ಆ ಪಟ್ಟಿಯಲ್ಲಿಲ್ಲ.




ಬರಹಗಾರ ಕಾಲ್ವಿನ್ ಟ್ರಿಲ್ಲಿನ್ ಮೂರು ವರ್ಷ ಹಿಂದೆಯೇ ಇದರ ಸಾದ್ಯತೆಯನ್ನು ಟಿವಿ ಎದುರುಗಡೆ ಹೇಳಿ ಬಿಟ್ಟಿದ್ದರು.  ಮೊನ್ನೆ ಸಿಕ್ಕಿಬಿದ್ದ  ನೈಜೀರಿಯದ   ಭಯೋತ್ಪಾದಕ ಚಡ್ಡಿಯೊಳಗೆ ಹುದುಗಿಸಿದ್ದ ಬಾಂಬು ಡಮಾರ್ ಎಂದಿದ್ದರೆ ಸ್ವರ್ಗದಲ್ಲಿ ಅಶ್ವಾಸನೆ ಪ್ರಕಾರ ಸಿಗುವ ಎಪ್ಪತ್ತೆರಡು ಸುಂದರ ಕನ್ಯೆಯರ ಜತೆ ಸಿಕ್ಕರೂ  ಏನೂ   ಪ್ರಯೋಜನವಾಗುತ್ತಿರಲಿಲ್ಲ ಎಂದು ಟ್ರಿಲ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.   ಅವರ  ಪತ್ರಿಕಾ  ಅಂಕಣದ ಕೊಂಡಿ ಇಲ್ಲಿದೆ.  

ಹತ್ತು ವರ್ಷ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯ ಮುಂದೆ ನಿಂತಿದ್ದೆ. ಅವನೊಬ್ಬ ಇಂಗ್ಲೀಷ್ ಅರಿಯದ ಮುಂಬಯಿ ಪೊಲೀಸ್ ಇಲಾಖೆಯ ಕನಿಷ್ಟ ಬಿಲ್ಲೆ. ಸಾಲಿನಲ್ಲಿ ಎಲ್ಲರನ್ನೂ ಸತಾಯಿಸುತ್ತಿದ್ದ ಕಾರಣ ಬುದ್ದಿವಂತರು ಸಾಲು ಬದಲಾಯಿಸಿದರು. ಅಲ್ಲಿ ಪಂಚೆ ಉಟ್ಟವ ನಾನೊಬ್ಬನೇ ಆದ ಕಾರಣ ಸುಲಭವಾಗಿ ಗುರುತಿಸುವಂತಿದ್ದೆ. ನನ್ನನ್ನು ಹೋಗಲು ಬಿಡುವುದಿಲ್ಲ ಎಂದ ಸರಿ. ಪರವಾಗಿಲ್ಲ ಎಂದು ನಿರ್ಲಿಪ್ತವಾಗಿ ಹೇಳಿದೆ. ಏನೂ ಪ್ರಯೋಜನವಿಲ್ಲ ಅನಿಸಿ ಪಾಸ್ ಪೊರ್ಟಿನಲ್ಲಿ ಮುದ್ರೆ ಒತ್ತಿದ. ಇಂತಹ ಜನಗಳನ್ನೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಿಸುವ ನಮ್ಮ ಸರಕಾರದ ಬಗ್ಗೆ   ಜುಗುಪ್ಸೆ  ಮೂಡುತ್ತದೆ.

Thursday, August 20, 2009

ಹರಿಯುವ ನೀರಿನ ಉಪಯೋಗದಲ್ಲಿ ಅಮೇರಿಕದವರಿಂದ ನಾವೇ ಮೇಲು.

ಸುಲಬವಾಗಿ ಲಬ್ಯವಿರುವ ಸಂಪನ್ಮೂಲಗಳನ್ನು ಉದಾಹರಣೆಗೆ ಜಲವಿದ್ಯುತ್ ಅವಕಾಶಗಳನ್ನು ಆರ್ಥಿಕವಾಗಿ ಬಲೀಷ್ಟವಾಗಿರುವ ರಾಷ್ಟ್ರಗಳು ಸಮರ್ಪಕವಾಗಿ ಬಳಸಿಕೊಂಡಿವೆ ಎನ್ನುವುದು ತಪ್ಪು ಕಲ್ಪನೆ. ಅಮೇರಿಕದಲ್ಲಿರುವ ಎಂಬತ್ತು ಸಾವಿರ ಅಣೆಕಟ್ಟುಗಳಲ್ಲಿ ಕೇವಲ ಎರಡು ಸಾವಿರದ ನಾಲ್ಕು ನೂರರಲ್ಲಿ ವಿದ್ಯುತ್ ತಯಾರಾಗುತ್ತದೆ. ಅಂದರೆ ಶೇಕಡ 97 ರಲ್ಲಿ ನೀರು ಅದರಷ್ಟಕೆ ಹರಿದು ಹೋಗುತ್ತದೆ. ಅದರರ್ಥ ಎಲ್ಲದರಲ್ಲೂ ವಿದ್ಯುತ್ ತಯಾರಿ ಸಾದ್ಯವೆಂದಲ್ಲ. ಹಲವರಲ್ಲಿ ಶಕ್ಯತೆ ಇದ್ದು ಇತ್ತೀಚೆಗೆ ಗುರುತಿಸಿದ್ದಾರೆ.  

ಹೆಚ್ಚಿನ ಅಣೆಕಟ್ಟುಗಳು ನೆರೆ ನಿಯಂತ್ರಣ, ನೀರಾವರಿ ಮತ್ತಿತರ ಉಪಯೋಗಗಳಿಗಾಗಿ ನಿರ್ಮಿಸಲ್ಪಟ್ಟಿದೆ. ಹಲವರ ಆಕಾರ ವಿದ್ಯುತ್ ತಯಾರಿಗೆ ಅನುಗುಣವಾಗಿಲ್ಲ. ಅಮೇರಿಕನರ ಜೀವನ ಶೈಲಿಯೇ ಅಗ್ಗದ ಇಂದನ ಅವಲಂಬಿಸಿದೆ. ಆಗ ಜಲವಿದ್ಯುತ್ ಬಗೆಗೆ ಒತ್ತಡವೂ ಇರಲಿಲ್ಲ. ಈಗ ಪರಿಸರವಾದಿಗಳ ವಿರೋಧ ಕಾರಣ ಕಲ್ಲಿದ್ದಲಿಗೆ ಪರ್ಯಾಯ ಹುಡುಕುತ್ತಿದ್ದಾರೆ. ಹಲವು ಅಣೆಕಟ್ಟುಗಳ ವಿದ್ಯುತ್ ಉತ್ಪಾದನೆಗೋಸ್ಕರ ಪರಿವರ್ತನೆಗೊಳಿಸುತ್ತಿದ್ದಾರೆ.

ಅಮೇರಿಕದಲ್ಲಿ ನಲ್ವತ್ತರ ದಶಕದಲ್ಲಿ ಶೇಕಡ ೪೨ರಷ್ಟು ಜಲ ವಿದ್ಯುತ್ ಪೊರೈಕೆಯಾದರೆ ಅನಂತರ ಹೊಸ ಜಲವಿದ್ಯುತ್ ಕೇಂದ್ರಗಳು ಸ್ಥಾಪಿಸಲ್ಪಡಲಿಲ್ಲ. ಅನಂತರ ಅಣು ವಿದ್ಯುತ್ ಮತ್ತು ಕಲ್ಲಿದ್ದಲು ದಹಿಸಲು ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಅದುದರಿಂದ ಇಂದು ಪ್ರಪಂಚದಲ್ಲಿ ಸುಮಾರು ಶೇಕಡಾ ೨೦ರಷ್ಟು ವಿದ್ಯುತ್ ಜಲ ವಿದ್ಯುತ್ ಕೇಂದ್ರಗಳಲ್ಲಿ ತಯಾರಾದರೆ ಅಮೇರಿಕದಲ್ಲಿ ಅದು ಶೇಕಡ ಹತ್ತಕ್ಕೆ ಇಳಿಯುತ್ತದೆ.

ಅವಕಾಶ ಮತ್ತು ಸಾಧನೆಯನ್ನು ಅವಲೋಕಿಸುವಾಗ ನಾವು ಈ ವಿಚಾರದಲ್ಲಿ ಮುಂದಿದ್ದೇವೆ. ನದಿ ಮತ್ತು ಕಾಲುವೆಗಳಲ್ಲಿ ಹರಿಯುವ ನೀರಿನ ತಡೆಗಟ್ಟಿ ವಿದ್ಯು ತ್ ಉತ್ಪಾದನೆ ನಡೆಸಲಾಗುತ್ತಿದೆ. ಈ ವರ್ಷ ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಎರಡು ಕಿರು ವಿದ್ಯುತ್ ಘಟಕಗಳು ಕಾರ್ಯವೆಸಗಲು ಪ್ರಾರಂಬಿಸಿವೆ.

ಪ್ರಿಯ ಜಿ ಯನ್ ಅಶೋಕವರ್ದನರು ಬರೆದು ಕಳಿಸಿದ್ದು ಪ್ರತಿಕ್ರಿಯೆ ಎನಿಸುವ ಬದಲು ತಿದ್ದಿಪಡಿಯಾದುದರಿಂದ ಇಲ್ಲಿಯೇ ಸೇರಿಸುತ್ತಿದ್ದೇನೆ.

ನೀನು ಹೇಳುವ ಅರ್ಥದಲ್ಲಿ ‘ಸದುಪಯೋಗಗೊಳಿಸುವಲ್ಲಿ’ ನಾವು ಮೇಲು. ಆದರೆ ಇಂದಿನ ಉದಾಹರಣೆಯ ಮಟ್ಟಕ್ಕೆ ಇಳಿಯುವಾಗ ವಾಸ್ತವ ಹಾಗಿಲ್ಲ ಎಂದು ವಿಷಾದ ಮೂಡುತ್ತದೆ. ಇಂದಿನ ಮಿನಿ ಜಲವಿದ್ಯುತ್ ಯೋಜನೆಗಳೆಲ್ಲಾ ಸಬ್ಸಿಡಿ, ಟರ್ನ್ ಆಫ್ ಗಳನ್ನು ಮಾತ್ರ ಲಕ್ಷಿಸಿ ಮುಖ್ಯವಾಗಿ ಜನೋಪಯೋಗಿ ಮತ್ತೆ ಪರಿಸರವೆಲ್ಲವನ್ನೂ ಕೆಡಿಸುವ ಯೋಜನೆಗಳಾಗಿಯೇ ಬರುತ್ತಿವೆ ಎನ್ನುವುದನ್ನು ಗಮನಿಸಲೇಬೇಕು. ಜಲಾನಯನ ಪ್ರದೇಶಗಳನ್ನೆಲ್ಲಾ ಕಲಕುತ್ತಿರುವ ಈ ಯೋಜನೆಗಳಿಂದ ನಾವೆಷ್ಟು ‘ಮೇಲಾಗುತ್ತೇವೋ’ ಎಂದು ಹೆದರಿಕೆಯಾಗುತ್ತದೆ.


ಬಿದ್ದರೂ ಮೂಗು ಮೇಲೆ ಎಂಬಂತೆ ಅಮೇರಿಕದವರು ನಮ್ಮಿಂದಲೂ ಬುರ್ನಾಸ್ ಎಂದು ಬರೆಯಲುಹೊರಟೆ. ನಮ್ಮಲ್ಲಿ ಈ ಕಿರು ಜಲಾಶಯಗಳು ಮುಳಗಿಸುವುದರ ಅಲೋಚಿಸುವಾಗ ಹೆದರಿಕೆಯಾಗುತ್ತದೆ. ಹತಾಷೆ ಬಾವನೆ ಉಂಟಾಗುತ್ತದೆ. ಅಸಂಬದ್ದ ಸಬ್ಸಿಡಿ ನೀತಿಯಿಂದಾಗಿಯೇ ಐಶ್ವರ್ಯ ಎಂಬ ನಕ್ಷತ್ರ ಗಿರಿಗಿಟಿ ಒಡತಿಯಾದದ್ದು.  

Monday, August 17, 2009

ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೊರಟಿದ್ದ ಶಾರುಖ್

ಶಾರುಖ್ ಖಾನ್ ಹೆಸರಿನ ಹಿಂದಿ ಚಿತ್ರನಟ ಇನ್ನೆಂದೂ ಅಮೇರಿಕಕ್ಕೆ ಕಾಲು ಇಡಬಾರದು ಅನ್ನಿಸುತ್ತೆ ಎಂದು ನಿನ್ನೆ ಹೇಳಿದ. ಈಗ ಅವನ ಹಿಂದಿನ ವರ್ತನೆ ನೆನಪಿಸಿಕೊಳ್ಳುವ ಕಾಲ. ಬರೇ ಮೂರು ವರ್ಷ ಹಿಂದೆ If Pepsi is banned in India, I would go to the US and drink it ಎಂದು ಈ ನಟ ಟಿವಿ ಎದುರುಗಡೆ ಹೇಳಿ ಕೊಂಡಿದ್ದ.

ಮೂರು ವರ್ಷ ಹಿಂದೆ ನೀರನ್ನು ಸರಿಯಾಗಿ ಶುದ್ದಿಕರಿಸದೆ ತಂಪು ಪಾನಿಯ ತಯಾರಿಸಲಾಗುತ್ತಿದೆ ಎಂದು ಸಾಕ್ಷಿ ಸಮೇತ ಪರಿಸರವಾದಿ ಪತ್ರಕರ್ತೆ ಸುನಿತಾ ನಾರಾಯಣ ಮುಂದಾಳತ್ವದಲ್ಲಿ ಜನಜಾಗೃತಿ ಆಂದೋಲನ ನಡೆಯುತಿತ್ತು. ಈ ಆಂದೋಲನದ ವಿರುದ್ದ ಮಾತನಾಡಿದ ಶಾರುಖ್ ಎಂದೂ ಸಾರ್ವಜನಿಕ ಹಿತಾಸಕ್ತಿ ಕಾರ್ಯದಲ್ಲಿ ತೊಡಗಿಸಿಕೊಂಡವನಲ್ಲ.

ಸತ್ಯಕ್ಕೆ ಸಾಕ್ಷಿ ಬೇಕು, ಸುಳ್ಳು ಹಾಗೆ ಚಲಾವಣೆ ಸಾದ್ಯ ಎನ್ನುವಂತೆ ಕೋಟಿಗಟ್ಟಲೆ ರೂಪಾಯಿ ಪೆಪ್ಸಿ ಕಂಪೇನಿಯಿಂದ ಪಡೆಯುತಿದ್ದ ಈ ನಟನ ಮೂರ್ಖತನದ ಮಾತು ಬಾರತದ ಜನತೆಗೆ ದ್ರೋಹ. ಸಿನೆಮಾ ನಟರು ಕುಡಿಯುತ್ತಾರೆ ಮತ್ತು ಭಾರತದಲ್ಲಿ ಇತರ ಅಹಾರ ಪದಾರ್ಥಗಳು ಮಲೀನಗೊಂಡಿವೆ ಎನ್ನುವ ದಿಕ್ಕು ತಪ್ಪಿಸುವ ಬಣ್ಣದ ನೀರಿನ ಸಂಸ್ಥೆಗಳ ಪ್ರಚಾರದ ಮುಂಚೂಣಿಯಲ್ಲಿ ಇವನಿದ್ದ. ಸದಾ ಹೊಗೆ ಬಿಡುವ ಮತ್ತು ಸಿನೆಮದಲ್ಲಿ ದೂಮಪಾನ ಅವಕಾಶ ಇರಬೇಕು ಎನ್ನುವ ಈ ನಟ ಯುವಜನರಿಗೆ ಕೆಟ್ಟ ಮಾದರಿ.

ನಮ್ಮ ಮೆಚ್ಚಿನ ಮಾಜಿ ಅದ್ಯಕ್ಷ ಡಾ|  ಅಬ್ದುಲ್ ಕಲಾಂ ಅವರಂತೆ ಪ್ರಶ್ನಾತೀತ ವ್ಯಕ್ತಿ ಆಗಿದ್ದರೆ ಬೇರೆ ಮಾತು.   ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೋಗಲು ತಯಾರು ಇರುವಂತಹ ವ್ಯಕ್ತಿ ಅಲ್ಲಿನ ಸರಕಾರ ಕೈಗೊಳ್ಳುವ ಚಿಲ್ಲರೆ ತಪಾಸಣೆಯನ್ನು ಆಕ್ಷೇಪಿಸುವಂತಿಲ್ಲ. ಸರಿಯಾಗಿ ಕಾಸು ಕೊಟ್ಟರೆ ಇಂತವರು ಬಾಂಬು ಕೊಂಡೊಯ್ಯಲೂ ತಯಾರು. ಅತಿ ಹೆಚ್ಚು ಹಣಕ್ಕೆ ನಿಷ್ಟೆಯನ್ನು ಮಾರಲು ಸಿದ್ದನಿರುವ ಇವರ ಬಗೆಗೆ ನಾವು ಅನುಕಂಪ ಸೂಚಿಸುವುದೂ ತಪ್ಪಾಗುತ್ತದೆ.

Wednesday, August 12, 2009

ಪತ್ರಕರ್ತ ಸ್ಕೋಟ್ ಬಾರತದಿಂದ ನಿರ್ಗಮನ

ಚೆನೈಯಲ್ಲಿ ಇದ್ದುಕೊಂಡು ಅಮೇರಿಕದ ಪತ್ರಿಕೆಗಳಿಗೆ ಶೋಧನಾ ಬರಹ ಬರೆಯುತಿದ್ದ ಸ್ಕೋಟ್ ಬಾರತಕ್ಕೆ ವಿದಾಯ ಹೇಳಿದ್ದಾರೆ. ಅಮೇರಿಕದ ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಸ್ಕೋಟ್ ಉತ್ತಮ ಸುದ್ದಿ ಶೋದಕ. ಸಲಿಸಾಗಿ ಹಿಂದಿ ಮಾತನಾಡುವ ಇವರಿಗೆ ಎರಡು ದೇಶಗಳಲ್ಲಿ ಜಾಡು ಹಿಡಿದು ಹಿಂಬಾಲಿಸಿ ಪತ್ತೆದಾರಿ ನಡೆಸುವ ನಿಪುಣತೆ ಸಿದ್ದಿಸಿತ್ತು.  

ಅಮೇರಿಕದ ವೈದ್ಯಕೀಯ ಕಾಲೇಜುಗಳಿಗೆ ಬಾರತದಿಂದ ಗೋರಿಗಳ ಅಗೆದು ಅಸ್ಥಿಪಂಜರ ಪೊರೈಕೆ, ಕೊಳೆಗೇರಿಯ ಬಡ ಮಕ್ಕಳನ್ನು ಕದ್ದು ಅನಾಥರೆಂದು ದಾಖಲೆ ತಯಾರು ಮಾಡಿ ವಿದೇಶಿಯರಿಗೆ ದತ್ತು ಸ್ವೀಕಾರಕ್ಕೆ ಮಾರಾಟ, ಸಾಫ್ಟ್ ವೇರ್ ಕಂಪೆನಿಗಳಿಗೆ ಭೂಮಿ ಪೊರೈಕೆ - ರಿಯಲ್ ಎಸ್ಟೇಟ್ ಅವ್ಯವಹಾರ ಸಂಬಂದಿಸಿ ಬೆಂಗಳೂರಿನ ಹೊರವಲಯದಲ್ಲಿ ಮುತ್ತಪ್ಪ ರೈ ಸಂದರ್ಶನ ಇವೆಲ್ಲ ಇವರ ಗಮನಾರ್ಹ ಸಾಧನೆಗಳು.

ಬಿಹಾರದ ಹಳ್ಳಿಗರೊಬ್ಬರ ಅಸ್ಥಿಪಂಜರ ಅಮೇರಿಕ ತಲಪಿದಾಗ ಲಕ್ಷಾಂತರ ರೂಪಾಯಿ ಬಾಳುತ್ತದೆ ಎಂದು ನನಗೆ ತಿಳಿದದ್ದು ಇವರ ಪತ್ತೆದಾರಿ ಕೆಲಸದಿಂದ. ಅಮೇರಿಕದಲ್ಲಿ ಅಸ್ಥಿಪಂಜರಗಳು ಸಿಗುವುದು ದುರ್ಲಭ. ಅದುದರಿಂದ ಹೊರದೇಶಗಳಿಂದ ಮುಖ್ಯವಾಗಿ ಬಾರತದಿಂದ ಅಮದಿಸುವುದು ಅನಿವಾರ್ಯ. ೧೯೮೫ರಲ್ಲಿ ಅಸ್ಥಿ ಪಂಜರ ರಪ್ತು ಮಾದುವುದು ಬಾರತ ಸರಕಾರದಿಂದ ನಿಷೇದಿಸಲ್ಪಟ್ಟರೂ ಕಳೆದ ಇಪ್ಪತ್ತಎರಡು ವರ್ಷಗಳಲ್ಲಿ ವ್ಯವಹಾರ ಅವ್ಯಾಹಿತವಾಗಿ ನಡೆದು ಬರುತ್ತಿದೆ. ಗೋರಿಗಳ ಅಗೆದು ಹೂಳಲ್ಪಟ್ಟ ಹೆಣವನ್ನು ತೆಗೆದು ಮಾಂಸದಿಂದ ಬೇರ್ಪಡಿಸಿ ಅಂದರೆ ಸಂಸ್ಕರಿಸಿ ಅದನ್ನು ಅಮೇರಿಕ ಮತ್ತಿತರ ದೇಶಗಳ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ರಪ್ತು ಮಾಡುವ ಜಾಲ ಸಕ್ರೀಯವಾಗಿದೆ.

ಅನಾಥಾಲಯದಲ್ಲಿದ್ದ ಮಕ್ಕಳ ನೋಡಲು ಚೆನ್ನಾಗಿರಲಿಲ್ಲವೆಂದು ಚೆನ್ನಾಗಿರುವ ಬಡವರ ಮಕ್ಕಳನ್ನು ಕದ್ದು ಸಾಗಾಟದ ಜಾಲ, ಪರದೇಶಿಗಳು ಬಾರತಕ್ಕೆ ಬಂದು ಕಾನೂನಿಗೆ ವಿರೋದವಾಗಿ ಕಿಡ್ನಿ ಖರೀದಿ ಮಾಡುವುದು ಇವೆಲ್ಲರ ಸುಳಿವು ಸಿಕ್ಕಿ ಜಾಡು ಹಿಡಿದು ಹಿಂಬಾಲಿಸಿದ್ದಾರೆ.  ನಮ್ಮಲ್ಲಿ  ಉಳಿದಿದ್ದರೆ  ಇನ್ನೂ ಸಾಧನೆ  ಮಾಡುತ್ತಿದ್ದರೋ  ಏನೊ.  We miss him.

Wednesday, August 05, 2009

ಹಣದುಬ್ಬರ ಬಾದಿಸದ ಅಮೇರಿಕ.

ಹಣದುಬ್ಬರ ಎನ್ನುವ ವಿಷ ನಮ್ಮ ಜೀವನವನ್ನು ಹಾಳುಮಾಡುತ್ತದೆ. ಹಣವು ಬೆಲೆ ಕಳಕೊಂಡಂತೆ ನಮಗೆ ನ್ಯಾಯವಾದ ಪ್ರತಿಫಲ ದೊರಕಿತೋ ಎನ್ನುವ ಗೊಂದಲ ಉಂಟುಮಾಡುತ್ತದೆ. ಜನರಲ್ಲಿ ಹೆಚ್ಚಿನ ಅಪೇಕ್ಷೆ ಮೂಡುತ್ತದೆ. ಉದ್ಯೋಗಿಗಳು ಮುಷ್ಕರ ಹೂಡುತ್ತಾರೆ. ಈ ರೀತಿ ರೂಪಾಯಿ ಬೆಲೆ ಕಳೆದುಕೊಳ್ಳಲು ನಮ್ಮಲ್ಲಿರುವ ಭ್ರಷ್ಟ ವ್ಯವಸ್ಥೆಯ ಚುಕ್ಕಾಣಿ ಹಿಡಿದ ಗಾಂಧಿ ಟೋಪಿಯ ಅಸಮರ್ಥ ರಾಜಕಾರಣಿಗಳೇ ಕಾರಣ.

ನಾನು ಅಮೇರಿಕದಲ್ಲಿ ಸೈಕಲಿಸುವಾಗ ಮೊದಲ ಹತ್ತು ದಿನಗಳಲ್ಲಿ ನಿರೀಕ್ಷಿತ ವೇಗದಲ್ಲಿಯೇ ಮುಂದುವರಿದಿದ್ದೆ. ಆಗ  ಪೆನ್ಸಿಲ್ವಾನಿಯಾ  ರಾಜ್ಯದಲ್ಲಿ   ಸಿಕ್ಕ ಸಾವಯುವ ಕೃಷಿಕರಾದ ಎರಿಕ್ ಆನ್ ದಂಪತಿಗಳಲ್ಲಿ ಒಂದು ವಾರ ಕಳೆದದ್ದು  ನಾನು ವೇಳಾಪಟ್ಟಿಯಲ್ಲಿ ಹಿಂದೆ ಬೀಳಲು ಕಾರಣವಾಯಿತು. ಅವರು ನೆರೆಯ ಆಮೀಷ   ಜನರೊಂದಿಗೆ ಉತ್ತಮ ಸಂಬಂದ ಹೊಂದಿದ್ದ ಕಾರಣ ದಿನ ಹೋದದ್ದೆ ಅರಿವಾಗಲಿಲ್ಲ.

ನನ್ನ ಅಬ್ಯಾಸ ಎಂದರೆ ಮುಂದಿರುವ ಸಮಸ್ಯೆಯನ್ನು ಮೊದಲು ಬ್ರೆಡ್ ತುಂಡುಮಾಡುವ ಹಾಗೆ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು ಅಂದರೆ ಗುರಿಯನ್ನು ಹಂಚಿಹಾಕುವುದು. ನನ್ನ ಮುಂದಿರುವ ಪಯಣ ನ್ಯೂ ಯೊರ್ಕನಿಂದ ಲಾಸ್ ಎಂಜಲಸ್ ಪಟ್ಟಣಕ್ಕಿರುವ ಮೂರು ಸಾವಿರ ಚಿಲ್ಲರೆ ಮೈಲು ಬಾಗಿಸು ನನಗೆ ಲಭ್ಯವಿರುವ ನೂರು ದಿನ ಅಂದರೆ ಸರಾಸರಿ ದಿನಕ್ಕೆ ನಲುವತ್ತು ಮೈಲು ಕ್ರಮಿಸಲೇ ಬೇಕಾಗಿತ್ತು.

ಅಮೇರಿಕ ಸೇರುವ  ಮೊದಲೇ   ಲಾಸ್ ಎಂಜಲಸ್ ನಿಂದ ಹೊರಡುವ ವಿಮಾನದಲ್ಲಿ ಸ್ಥಳ ಕಾದಿರಿಸಲಾಗಿದ್ದು ನೂರು ದಿನಗಳಲ್ಲಿ ನಾನು ಅಮೇರಿಕ ಬಿಡಲೇ ಬೇಕಾಗಿತ್ತು. ಆಸಕ್ತಿ ಇರುವ ಏನನ್ನೂ ನೋಡದೆ ಬರೇ ಸೈಕಲಿಸುವುದರಲ್ಲಿ ನನಗೆ ಅರ್ಥ ಕಾಣಲಿಲ್ಲ. ಎರಿಕ್ ಸಹಾಯದಿಂದ ಎಲ್ಲ ಪರ್ಯಾಯಗಳ ಆಲೋಚಿಸಿ ಕೊನೆಗೆ ವಿಮಾ ಪಾಲಿಸಿಯಂತೆ ಖರೀದಿಸಿದ್ದು ಚಾಲನೆ ನಮಗೆ ಬಿಡಿ ಎನ್ನುವ ದ್ಯೇಯವಾಕ್ಯ ಹೊಂದಿರುವ ಗ್ರೆಹೌಂಡ್ ಕಂಪೇನಿ ಬಸ್ಸು ಟಿಕೇಟು. ಹಾಗೆ ಹಲವು ಬಾರಿ ಸೈಕಲು ಮತ್ತು ನಾನು ಬಸ್ಸೇರಿದ್ದು ಪರವಾಗಿಲ್ಲ ಇನ್ನು ಸೈಕಲಿಸಬಹುದು ಎಂದು ಅನಿಸಿದ ಕೂಡಲೇ ಬಸ್ಸಿಂದಿಳಿಯುತ್ತಿದ್ದೆ. ಆಗ ಅಂದರೆ 1985ರಲ್ಲಿ ನಾನು ಟಿಕೇಟಿಗೆ ಕೊಟ್ಟ ಒಟ್ಟು ಮೊತ್ತ 119 ಡಾಲರ್ ಗಳು.

ಹನ್ನೆರಡು ವರ್ಷ ಅನಂತರ ಹಳೆಯ ಗೆಳೆಯರ ಕಂಡು ಬರೋಣ ಎಂದು ಅಮೇರಿಕಕ್ಕೆ ಹಾರಿದೆ. ಆಗ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ನಾನು ಕೊಟ್ಟ ಹಣ 132 ಡಾಲರ್. ಈಗ ಪುನಹ ಹನ್ನೆರಡು ವರ್ಷಗಳಾಗಿದ್ದು ಕುತೂಹಲದಿಂದ ಪ್ರಯಾಣದ ದರದಲ್ಲಾಗಿರುವ ಬದಲಾವಣೆಯನ್ನು ಜಾಲದಲ್ಲಿ ನೋಡಿದೆ. ಇಂದು 2009ರಲ್ಲಿ ಅದೇ ಪ್ರಯಾಣಕ್ಕೆ ಗರೀಷ್ಟ ಇನ್ನೂರ ನಲುವತ್ತು ಡಾಲರ್. ಮುಂಗಡವಾಗಿ ಪಡಕೊಂಡ ಟಿಕೇಟಿಗೆ ಬಹಳ   ರಿಯಾಯತಿ ಇದ್ದರೂ ಈ ಬರಹದಲ್ಲಿ ನಾಲ್ಕು ಕಡೆಗಳಲ್ಲಿ ತೋರಿಸುವ ದರಗಳು ಅವುಗಳನ್ನು ಹೊರತು ಪಡಿಸಿದೆ.


ಎಪ್ಪತೈದು ವರ್ಷ ಹಿಂದೆ 1934ರಲ್ಲಿಯೇ ಇದು 32.5 ಡಾಲರ್ ಆಗಿತ್ತೆಂದು ಪತ್ರಿಕಾ ಪ್ರಕಟನೆ ಹೇಳುತ್ತದೆ. ಅಂದರೆ 75 ವರ್ಷದಲ್ಲಿ ಇದು ಬರೇ ಏಳು ಪಾಲು ಹೆಚ್ಚಾಗಿದೆ. ನಮಗೆಲ್ಲ ನಿಜಕ್ಕೂ ಆಶ್ಚರ್ಯಕರವಾದ ವಿಚಾರ.

ಹೋಲಿಸಿ ನೋಡುವಾಗ 1967ರಲ್ಲಿ ನಾನು ಮೈಸೂರಿನ ವಸತಿ ಶಾಲೆಯಲ್ಲಿದ್ದಾಗ ನಮ್ಮೂರಿನಿಂದ ಮೈಸೂರಿಗೆ ದೊಡ್ಡವರಿಗೆ ಐದು ರೂಪಾಯಿ ಇದ್ದ ನೆನಪು. ಈಗ ಅರೆ ಸುಖಾಸಿನ ಬಸ್ಸಿನಲ್ಲಿ ಮೈಸೂರಿಗೆ  ಇನ್ನೂರು  ರೂಪಾಯಿ  ದಾಟಿದೆ. ಅಂದರೆ ನಲುವತ್ತೆರಡು ವರ್ಷದಲ್ಲಿ ನಲುವತ್ತು ಪಾಲು ಹೆಚ್ಚಳ. ದಿಕ್ಕು ತಪ್ಪಿಸುವ ಹೊಲಸು ರಾಜಕೀಯದಲ್ಲಿ ಸಮಾಜಕ್ಕೆ ಸೋಲು.

ಹೋಲಿಕೆಗೆ ಕನಿಷ್ಟ ವೇತನ ಇನ್ನೊಂದು ಉತ್ತಮ ಮಾನದಂಡ. ಅಮೇರಿಕದಲ್ಲಿ ಕಳೆದ ತಿಂಗಳು ಘಂಟೆಗೆ ಏಳು ಕಾಲು ಡಾಲರ್ ತಲಪಿದ ಕನಿಷ್ಟ ವೇತನ ಇಪ್ಪತ್ತ ನಾಲ್ಕು ವರ್ಷ ಹಿಂದೆ ನಾಲ್ಕು ಡಾಲರ್ ಆಗಿತ್ತು. ಅದರಲ್ಲೂ ಒಂದು ಡಾಲರ್ ನಲುವತ್ತು ಸೆಂಟ್ಸ್ ಕಳೆದ ಎರಡು ವರ್ಷಗಳಲ್ಲಿ ಏರಿದ್ದು. ನಮ್ಮಲ್ಲಿ ಇದೇ ಅವದಿಯಲ್ಲಿ ಕೆಲಸಗಾರರ ವೇತನ ಕನಿಷ್ಟ ಹತ್ತು ಪಟ್ಟು ಹೆಚ್ಚಿದೆ.

ಸಮಯ ಹೋದಂತೆ ನಮ್ಮ ರೂಪಾಯಿ ದುರ್ಬಲವಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ.  ನಾನು ಅಂದು  ಪ್ರವಾಸ ಕೈಗೊಂಡಾಗ ನಮಗೆ ವಿದೇಶಿ ವಿನಿಮಯ 520 ಡಾಲರ್ ಸಿಕ್ಕಿತ್ತು. ಐದುನೂರು ಬಾಂಕಿನಲ್ಲಿ ಮತ್ತು ಇಪ್ಪತ್ತು ವಿಮಾನ ನಿಲ್ದಾಣದಲ್ಲಿ. ಆಗ ದರ ಸುಮಾರು ಹನ್ನೆರಡುವರೆ ರೂಪಾಯಿ ಇದ್ದು ಸ್ವಲ್ಪ ಹೆಚ್ಚಿಗೆ ವಿನಿಮಯವನ್ನು ಮುಂಬಯಿಯ ಕಡಲತೀರದ ಕೋಟೆ ಪ್ರದೇಶದ ಗೂಡಂಗಡಿಯಲ್ಲಿ   ಡಾಲರೊಂದಕ್ಕೆ    ಇಪ್ಪತ್ತು  ಪೈಸೆ  ಹೆಚ್ಚು  ಕೊಟ್ಟು    ಖರೀದಿಸಿದ್ದೆ.  ಇಪ್ಪತ್ತ ನಾಲ್ಕು ವರ್ಷ ಅನಂತರ ಇಂದು ಡಾಲರ್ ಎಂದರೆ ನಲವತ್ತೆಂಟು ರೂಪಾಯಿ.

Saturday, August 01, 2009

ದರ್ಮಾರ್ಥ ಕುಡಿಯುವ ನೀರು -ನ್ಯೂಯೋರ್ಕ್ ಪಟ್ಟಣದಲ್ಲಿ ಆಂದೋಲನ

 ಬಾಟಲಿಯಲ್ಲಿ ಕುಡಿಯುವ ನೀರು ಹಾಗೂ ಕೋಲಾದಂತಹ ತಂಪು ಪಾನಿಯಗಳ ಬಳಸುವುದು ನಮ್ಮಲ್ಲಿ ಪ್ರತಿಷ್ಟೆಯ ವಿಷಯವಾಗುತ್ತಿದೆ. ಪತ್ರಿಕೆಗಳಲ್ಲಿ ಟಿವಿಯಲ್ಲಿ ಮೀಟಿಂಗುಗಳ ಚಿತ್ರಗಳಲ್ಲಿ ಮೇಜುಗಳ ಮೇಲೆ ಕಾಣುವುದೇ ಬಿಸ್ಲೇರಿ ಬಾಟಲಿಗಳು. ಮಾದ್ಯಮದಲ್ಲಿ ತುಂಬಾ ಜಾಹಿರಾತು ಇರುವುದರಿಂದ ಇದೊಂದು ಅನಿವಾರ್ಯ ಅಂಶ ಎಂದು ಮನಸ್ಸಿಗೆ ಒತ್ತಡ ಹಾಕುತ್ತದೆ. ಬಾಟಲಿ ನೀರು ಪ್ರಪಂಚದಾದ್ಯಂತ ಕನಿಷ್ಟ ಅಸಲಿನ ಬಹಳ ಲಾಭದಾಯಕ ಉದ್ಯಮ.  

ಐದು ವರ್ಷಗಳ ಹಿಂದೆ ಬರಹಗಾರ್ತಿ ನೇಮಿಚಂದ್ರರು ಉದಯವಾಣಿ ಅಂಕಣದಲ್ಲಿ ಒಂದು ಘಟನೆಯನ್ನು ಪ್ರಸ್ತಾಪಿಸಿದ್ದರು. ಬೆಂಗಳೂರಿನ ಒಂದು ಹೊಸ ತಲೆಮಾರಿನ ಹೋಟೆಲಿಗೆ ಹೋದಾಗ ಅಲ್ಲಿ ಕುಡಿಯಲು ಬಿಸ್ಲೇರಿ ತಂದಿಟ್ಟರಂತೆ. ನೀರು ತಾ ಎಂದಾಗ ಸಾದ್ಯವಿಲ್ಲ ಎನ್ನುವ ಉತ್ತರ ಬಂತಂತೆ. ಆ ಹೋಟೇಲಿನ ಮೇಲ್ವಿಚಾಲಕರಿಂದ ಎಲ್ಲರೂ ಬಿಸ್ಲೇರಿಯನ್ನೇ ಅಪೇಕ್ಷಿಸುತ್ತಾರೆಂಬ ಸಮಜಾಯಿಶಿ.

ನಾನು ಹೋಟೇಲಿಗೆ ಹೋದಾಗ ಕುಡಿಯಲು ನೀರು ತಂದಿಡುವುದರ ಅಪೇಕ್ಷಿಸುವುದು ಗ್ರಾಹಕರ ಹಕ್ಕೆಂದು ಬಾವಿಸಿದ್ದೆ. ಆದರೆ ಈಗ ಪರೀಸ್ಥಿತಿ ಬದಲಾಗುತ್ತಿದೆ ಎನ್ನುವ ವಿಷಾದವನ್ನು ನೇಮಿಚಂದ್ರರು ವ್ಯಕ್ತಪಡಿಸಿದ್ದರು. ಪರದೇಶದಲ್ಲಿ ಅದು ಸಾಮಾನ್ಯ. ಒಪ್ಪುತ್ತೇನೆ. ಆದರೆ ನಮ್ಮಲ್ಲಿ ದರ್ಮಾರ್ಥ ಕುಡಿಯುವ ನೀರು ಹೋಟೇಲುಗಳು ಪೊರೈಸುತ್ತಿದ್ದವಲ್ಲ ಎಂದಿದ್ದರು.  

ನಮ್ಮಲ್ಲಿ ಬಾಯಾರಿದವರಿಗೆ ದಾರಿಹೋಕರಿಗೆ ನೀರು ಕೊಡುವುದು ಒಂದು ಸಮಾಜ ಸೇವೆ ಅನ್ನುವ ಬಾವನೆ ಇತ್ತು. ಮೊದಲು ಅದಕ್ಕಾಗಿ ಜನರನ್ನು ನಿಯಮಿಸಿದ್ದೂ ಉಂಟು. ಹಲವು ಪಟ್ಟಣಗಳ ಜನನಿಬಿಡ ಸ್ಥಳಗಳಲ್ಲಿ ರೈಲು ನಿಲ್ದಾಣದಲ್ಲಿ ಜೈನ ಸಂಘದವರು ನೀರ ಸೇವೆ ಮಾಡುವುದುಂಟು.

ಈಗ ಇದರ ಅನುಕರಣೆ  ದುಡ್ಡೇ  ದೊಡ್ಡಪ್ಪ  ಅನ್ನುವ   ಅಮೇರಿಕದಲ್ಲಿ. ಇದನ್ನು ಬಾಟಲಿ ನೀರಿನ ವಿರುದ್ದ ಅಂದೋಲನದ ಗೆಲುವು ಅನ್ನಬಹುದು. ಅಮೇರಿಕದ ನ್ಯೂಯೋರ್ಕ್ ಪಟ್ಟಣದಲ್ಲಿ ಹಲವು ಹೋಟೇಲುಗಳಲ್ಲಿ ನಿಮ್ಮ ಬಾಟಲಿಗೆ ದರ್ಮಾರ್ಥ ನೀರು ತುಂಬಿಸಿಕೊಳ್ಳ ಬಹುದೆನ್ನುವ ಪ್ರಕಟನೆ ಹೊರಗೆ ಪ್ರದರ್ಶಿಸುತ್ತಾರಂತೆ. ಆ ಹೋಟೇಲುಗಳನ್ನು ಅಂತರ್ಜಾಲದಲ್ಲೂ ಗುರುತಿಸಬಹುದು. ಹೋಟೇಲುಗಳಿಗೆ ಈ ಸೇವೆಗೆ ಬಿಟ್ಟಿ ಪ್ರಚಾರ ದೊರಕುವುದು ಲಾಭ.

ಅವರ ಬ್ಲೋಗ್ ತಾಣದಲ್ಲಿ ಹಲವು ನೀರಿಗೆ ಸಂಬಂದ ಪಟ್ಟ ಲೇಖನಗಳ ಕೊಂಡಿಗಳಿವೆ. ಹಲವು ಜತೆಗಾರ ಅಂಗಡಿಗಳ ಹಾಗೂ ನಾಯಿಗಳಿಗಾಗಿ   ತಯಾರಿಸುವ    ಬಾಟಲಿ ನೀರಿನಂತಹ ಅತಿರೇಕದ ಉತ್ಪನ್ನಗಳ ವಿವರಗಳಿವೆ.

ಇತರ ಗ್ರಹಗಳ ಜೀವಿಗಳು ನಮ್ಮಲ್ಲಿಗೆ ಬಂದರೆ …….. ಮೊದಲು ಒಂದು ಲೋಟ ನೀರು ಕೊಡಿ ಎಂದು ಬಿಸಿಲಿನಲ್ಲಿ ನಡೆದು ಕೊಂಡು ಬಂದ ಅತಿಥಿ ಮೊದಲು ಅಪೇಕ್ಷಿಸುವಂತೆ ನೀರನ್ನೇ ಕೇಳಬಹುದಂತೆ.  

Sunday, June 07, 2009

ಇಂಡಿಯನ್ ಅಂದರೆ ಅಮೇರಿಕದಲ್ಲಿ ಬಾರತೀಯನಲ್ಲ, ಆದರೆ

ಅಮೇರಿಕದ ಮಿಸೂರಿ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಒಮ್ಮೆ ಪರಿಚಿತ ಡೇನಿಯಲ್ ಜಿಮ್ಮರ್ ಮಾನ್ ಅವರ ಜತೆ ಅವರ ಕುದುರೆ ಗಾಡಿಯಲ್ಲಿ ಕುಳಿತು ಓಡಾಡುತ್ತಿದ್ದೆ. ಮೆನೊನೈಟ್ ಎಂಬ ವಿಶಿಷ್ಟ ಪಂಗಡಕ್ಕೆ ಸೇರಿದ ಅವರು ಮೂಲ ಗುಂಪು ಆಮೀಷರಿಂದ ಹೆಚ್ಚು ಉದಾರವಾದಿಗಳು. ಡೇನಿಯಲ್ ಅವರ ಮಗಳು ಅಳಿಯ ಒಂದು ಸೈಕಲ್ ಅಂಗಡಿ ಇಟ್ಟಿದ್ದರಿಂದ ನನಗೆ ಅವರ ಪರಿಚಯವಾಗಿ ಅವರ ಪರಿಸರದಲ್ಲಿ ನಾಲ್ಕು ದಿನ ಉಳಕೊಂಡಿದ್ದೆ.

ಉಳಿದ ಕೃಷಿಕರಿಂದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಈ ಪಂಗಡದ ಬೆಗೆಗೆ ಕೂತೂಹಲ ಬಾರತ ಬಿಡುವ ಮೊದಲೇ ಉಂಟಾಗಿತ್ತು. ನಾನು ಅವರ ಜತೆಯಲ್ಲಿದ್ದ ಅನುಭವ ಕಥೆ   ಅಮಿಷಕ್ಕೆ  ಒಳಗಾಗದ  ಆಮಿಷ್  ಜನಾಂಗ  ಎಂಬ  ತಲೆಬರಹದೊಂದಿಗೆ   ಸುಧಾ ವಾರ ಪತ್ರಿಕೆ ಮುಖಪುಟ ಲೇಖನವಾಗಿ 1987ರಲ್ಲಿ ಪ್ರಕಟಿಸಿತ್ತು.

ಹಾಗೆ ದಾರಿಯಲ್ಲಿ ಸಿಕ್ಕವರಲ್ಲಿ ಡೇನಿಯಲ್ ನನ್ನ ಪರಿಚಯ ಹೇಳಿದರು. ಇವ ಇಂಡಿಯನ್ ಎಂದಾಗ ಆ ಅಮಾಯಕ ವ್ಯಕ್ತಿ ಅಂದರೆ ಯಾವ ಪಂಗಡಕ್ಕೆ ಸೇರಿದವನು ಎಂದಾಗ ನನಗೆ ಗಲಿಬಿಲಿ. ಅವರು ನನ್ನನ್ನು ಅಮೇರಿಕದ ಮೂಲನಿವಾಸಿ ಎಂದುಕೊಂಡಿದ್ದರು. ಅಮೇರಿಕದಲ್ಲಿ ಬಾರತ ಎಂಬ ದೇಶ ಇದೆ ಎನ್ನುವ ಕಲ್ಪನೆ ಇಲ್ಲದವರು ಸಾಕಷ್ಟು ಜನ ಇದ್ದಾರೆ ಅನ್ನುವುದು ಸೋಜಿಗದ ಸಂಗತಿ.


ಇಂದಿನ ಕನ್ನಡ ಪ್ರಭದ ಏಳನೇಯ ಪುಟದಲ್ಲಿ ಪೆರು ಹಿಂಸೆ 25 ಬಾರತಿಯರ ಸಾವು ಎಂದಾಗ ಕುತೂಹಲದಿಂದ ಓದಿದೆ. ಅವರು ಪೆರುವಿನ ಮೂಲನಿವಾಸಿಯರನ್ನು ಇಂಗ್ಲೀಷಿನಲ್ಲಿ ಇಂಡಿಯನ್ ಎಂದು ಬರೆದುದು ಬಾಷಾಂತರವಾಗುವಾಗ ಬಾರತೀಯ ಎಂದಾಗಿದೆ. ಪ್ರಾಯುಷ ಬಾಷಾಂತರಿಸಿದ ಪತ್ರಿಕೆ ಉದ್ಯೋಗಿಗೆ ಇಂಡಿಯನ್ ಎಂದರೆ ಅಲ್ಲಿನ ಮೂಲನಿವಾಸಿ ಎಂದು ಅರ್ಥವಾಗಲಿಲ್ಲ. ಈ ತಪ್ಪು ಕಲ್ಪನೆಯಿಂದಾಗಿ ನನಗೆ ಇದಕ್ಕೆ ಹೋಲುವ ಹಳೆಯ ಅನುಭವ ನೆನಪಾಯಿತು. ಅಂದು ನಾನು  ಅಲ್ಲಿ  ಅಮೇರಿಕದ    ಮೂಲನಿವಾಸಿಯಾಗಿದ್ದೆ.  ಇಂದು  ಅವರು  ಬಾರತೀಯರಾಗಿದ್ದಾರೆ.

Saturday, June 06, 2009

ಅಲ್ಪಸಂಖ್ಯಾತರಿಂದ ಆರಿಸಲ್ಪಟ್ಟ ದೊರೆಗಳು.

 ಮೊನ್ನೆ  ಭಾನುವಾರ   ಪಕ್ಕದ  ಊರು  ವಿಟ್ಲಕ್ಕೆ  ಹೋಗಿದ್ದೆ.   ವಾಪಾಸಾಗುವಾಗ   ಹೊಸ  ಸಂಸದರ  ವಿಜಯಯಾತ್ರೆ.  ಸುಮಾರು  ಮುಕ್ಕಾಲು  ಘಂಟೆ  ರಸ್ತೆ  ನಿಲುಗಡೆಯಾಗಿ  ನನ್ನ  ವಿಳಂಬಿಸಿದ  ಈ  ಯಾತ್ರೆಯ  ಔಚಿತ್ಯವನ್ನು  ಯೋಚಿಸಹತ್ತಿದೆ.   ಜನಸಂಖ್ಯೆಯ  ಶೇಕಡ ಅರುವತ್ತು  ಮಾತ್ರ  ಮತದಾರರು,  ಅದರಲ್ಲಿ  ಶೇಕಡ ಅರುವತ್ತು  ಮತದಾನ  ಮಾಡುವವರು, ಅದರಲ್ಲಿ  ಶೇಕಡ  ನಲುವತ್ತೋ  ನಲುವತ್ತೈದೊ   ಮತ  ಪಡೆದು   ಗೆದ್ದ  ಅಭ್ಯರ್ಥಿ  ವಿಜಯಿ  ಎನಿಸಿಕೊಳ್ಳುತ್ತಾನೆ.    ಅಂದರೆ   ಸುಮಾರು  ಶೇಕಡ  ಹದಿನೈದರಿಂದ  ಇಪ್ಪತ್ತು  ಜನರಿಂದ  ಅನುಮೋದಿಸಲ್ಪಟ್ಟ  ವ್ಯಕ್ತಿಯ ವಿಜಯಯಾತ್ರೆ   ಅವನ  ಬೆಂಬಲಿಸದಿರುವ    ಬಹುಸಂಖ್ಯಾತರಿಗೆ  ತೊಂದರೆ  ಕೊಡುವುದು  ಸರಿಯೋ ?     ಸಂಜೆ  ಅಂದಿನ  ವಿಜಯ ಕರ್ನಾಟಕ    ಓದುವಾಗ  ಕಂಡ  ಚಿತ್ರ   ನನ್ನ  ಚಿಂತನೆಯನ್ನು  ಅನುಮೋದಿಸಿದಂತಾಯಿತು. 
 

ಈಗೀಗ ಚುನಾವಣೆ ಬರೇ ಅರ್ಥಹೀನವಾಗಿದೆ. ಈಗ ಪ್ರತಿಯೊಂದು ಚುನಾವಣೆಯಲ್ಲಿ ಮತಗಟ್ಟೆಗೆ ಬರುವ ಮತದಾರರ ಸಂಖ್ಯೆ ಕುಸಿಯುತ್ತಲೇ ಇದೆ. ನೂರ ನಲುವತ್ತೈದು ಜನಪ್ರತಿನಿಧಿಗಳು ಶೇಖಡ ಇಪ್ಪತ್ತಕ್ಕೂ ಕಡಿಮೆ ಕ್ಷೇತ್ರದ ಮತದಾರರ ಬೆಂಬಲ ಪಡಕೊಂಡು ಲೋಕ ಸಭೆ ಪ್ರವೇಶಿಸಿದ್ದಾರೆ. ಇವರಲ್ಲಿ ವಿಶಿಷ್ಟ ಸ್ಥಾನ ಪಡೆದವರು ಬೀಹಾರದ ಕಮಲ ಪಕ್ಷದ ಸಂಸದ ಭೋಲ ಸಿಂಗ್. ಸುಮಾರು ಇಪ್ಪತ್ತೈದುಲಕ್ಷ ಜನಸಂಖ್ಯೆ ಇರುವ ಬೀಹಾರದ ನಾವಾಡ ಕ್ಷೇತ್ರದಿಂದ ಗೆದ್ದ ಭೋಲ ಸಿಂಗ್ ಪಡಕೊಂಡ ಮತ ಕೇವಲ ಒಂದು ಲಕ್ಷ ಮೂವತ್ತು ಸಾವಿರ. ಯಾಕೆ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುತ್ತಿಲ್ಲವೆನ್ನುವುದು ಎಲ್ಲ ದೇಶಗಳಲ್ಲೂ ಯಕ್ಷ ಪ್ರಶ್ನೆ.

ಅಮೇರಿಕದ ಬಾಗವಾದ ಹೊನೊಲುಲುವಿನಲ್ಲಿ ಕಡೆದ ವಾರ ಸ್ಥಳೀಯ ಸಂಸ್ಥೆ ಮತದಾನ ನಡೆಯಿತು. ಜನರ ಅನುಕೂಲಕ್ಕಾಗಿ ಪೋನ್ ಅಥವಾ ಅಂತರ್ಜಾಲ ಮೂಲಕ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಹೊಸ ಬಗೆಯ ಮತದಾನಕ್ಕೆ ಆರ್ಥಿಕ ಕಾರಣವೂ ಇದ್ದು ಸುಮಾರು ಐವತ್ತು ಲಕ್ಷ ರೂಪಾಯಿ ಉಳಿತಾಯವಾಗಿತ್ತು ಅನ್ನುತ್ತಾರೆ ಅಲ್ಲಿನ ಅಧಿಕಾರಿಗಳು. ಎಲ್ಲ ಮತದಾರರಿಗೂ ಅಂಚೆ ಮೂಲಕ ಮಾಹಿತಿ ಜತೆಗೆ ಅವರ ಗುಪ್ತ ಕ್ರಮಾಂಕವನ್ನು ತಲಪಿಸಲಾಗಿತ್ತು. ಪರಿಣಾಮ ಮಾತ್ರ ನಿರಾಶದಾಯಕ. ಬರೇ ಏಳು ಸಾವಿರ ಜನ ಮತದಾನ ಮಾಡಿದ್ದರು. 

 

ಜನ ಪ್ರತಿನಿಧಿಗಳ ಕೆಲಸ ಸುಲಭ ಎಂದು ನಾನು ಹೇಳುತ್ತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲಲು ಅರ್ಥಹೀನ ಕೊಡುಗೆಗಳನ್ನೆಲ್ಲ ಘೋಷಿಸಿ ಜನರ ಅಪೇಕ್ಷೆಗಳ ಹೆಚ್ಚಿಸಿದ್ದಾರೆ. ಜನರ ಅಪೇಕ್ಷೆ ಅನ್ನುವಾಗ ಗಮನ ಸೆಳೆಯುವ ಸುದ್ದಿ – ಸರಕಾರವೇ ಮಕ್ಕಳನ್ನು ಸಾಕಬೇಕು ಅನ್ನುತ್ತಿದ್ದಾನೆ ಒಬ್ಬ ಅಮೇರಿಕನ್. ಅಲ್ಲೊಬ್ಬ ಹನ್ನೊಂದು ವರ್ಷದಲ್ಲಿ 11 ಹೆಂಗಸರಲ್ಲಿ ಪಡೆದ ತನ್ನ 21 ಮಕ್ಕಳನ್ನು ಸಾಕಲು ಹಣವಿಲ್ಲ ಸರಕಾರ ಸಾಕಬೇಕು. ಅವನಿಗೀಗ ಬರೇ 29 ವರ್ಷವಾಗಿದ್ದು ಮಕ್ಕಳು ಸಾಕು ಎನಿಸಿದೆಯಂತೆ.  

Saturday, May 30, 2009

ಮಳೆ ಕೊಯಿಲಿಗೆ ಪೂರಕ ಚಿಕಾಗೊದ ಹಸಿರು ಓಣಿ

ಮಳೆಗಾಲ ಇನ್ನೇನು ಪ್ರಾರಂಬವಾಗಲಿದೆ. ಹಾಗೆ ಮಳೆನೀರಿನ ಸದುಪಯೋಗದ ಬಗೆಗೆ ಚಿಂತನೆ ಸಾಗಿದೆ. ದಿನ ಕಳೆದಂತೆ ನೀರಿನ ಪರೀಸ್ಥಿತಿ ಗಂಬೀರವಾಗುತ್ತಿದೆ. ಮಳೆ ಸಹಾ ಮುಂಚಿನಂತೆ ಮಳೆಗಾಲದ ಉದ್ದಕ್ಕೂ ಹಂಚಿ ಬೀಳದೆ ಒಮ್ಮೆಲೆ ಉದುರಿಸಿ ಮುಂದಕ್ಕೆ ನಡೆಯುತ್ತದೆ. ನೀರು ಬಿದ್ದಲ್ಲಿ ಇಂಗುವುದರ ಬದಲು ನೇರವಾಗಿ ಹರಿದು ಸಮುದ್ರ ಸೇರುತ್ತದೆ. ನೀರಿನ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದ್ದುದರಿಂದ ನೀರು ಇಂಗಿಸುವುದು ಹೆಚ್ಚೆಚ್ಚು ಅನಿವಾರ್ಯವೆನಿಸುತ್ತದೆ.

ಸುಸ್ಥಿರ ಜನಜೀವನಕ್ಕೆ ಪೂರಕವಾಗುವಂತಹ ಪಟ್ಟಣದಲ್ಲಿ ಮಳೆನೀರು ಕೊಯಿಲಿನ ಸುದ್ದಿ ಅಮೇರಿಕದಿಂದ ಬಂದಿದೆ. ಶಂಖದಿಂದ ಬೀಳುವುದೇ ತೀರ್ಥ ಎಂಬಂತೆ ನಮಗೆ ಹೊಸ ಚಿಂತನೆಗಳು ಅಮೇರಿಕದಿಂದಲೇ ಬರಬೇಕು. ಹೆಚ್ಚಿನ ದೊಡ್ಡ ಪಟ್ಟಣಗಳು ಇಂದು ಅಪಾರ ವಿದ್ಯುತ್ ಖರ್ಚು ಮಾಡಿ ಐವತ್ತರಿಂದ ನೂರು ಕಿಮಿ ದೂರದಿಂದ ನೀರನ್ನು ತರಿಸಿಕೊಳ್ಳುತ್ತಿವೆ. ಅದುದರಿಂದ ಪ್ರತಿಯೊಂದು ಜಲಮಟ್ಟ ಏರುವಂತಹ ಪ್ರಯತ್ನಗಳು ಖಂಡಿತ ಪ್ರಯೋಜನಕಾರಿ.

ಪ್ರಪಂಚದ ಅತಿ ದೊಡ್ಡ ಪಟ್ಟಣಗಳಲ್ಲಿ ಒಂದಾದ ಚಿಕಾಗೋ ಪಟ್ಟಣದ ಹಸಿರು ಓಣಿ ಯೋಜನೆ ಒಂದು ಹೊಸತಾದ ದಿಕ್ಕು ಸೂಚಕ ಎನ್ನಬಹುದು.
.

ಎರಡು ವರ್ಷ ಹಿಂದೆ ಪ್ರಾರಂಬವಾದ ಈ ಯೋಜನೆಯಲ್ಲಿ ಈಗಾಗಲೇ ಎಂಬತ್ತು ಗಲ್ಲಿಗಳು ಅಭಿವೃದ್ದಿ ಹೊದಿವೆಯಂತೆ. ಗಲ್ಲಿ ರಸ್ತೆಗಳಲ್ಲಿ ನೀರು ಇಂಗಿಸುವಂತಾದರೆ ಮಳೆಗಾಲದಲ್ಲಿ ಚರಂಡಿ ಉಕ್ಕಿ ಹರಿದು ನೆರೆ ಬರುವುದನ್ನು ತಡಗಟ್ಟಬಹುದು.

ಇಲ್ಲಿನ ಹಸಿರು ಚಿಂತನೆ ಹಲವು ವಿಚಾರಗಳ ಒಳಗೊಂಡಿದೆ. ಪಟ್ಟಣಗಳಲ್ಲಿ ಕತ್ತಲು ಓಡಿಸುವ ಪ್ರಯತ್ನದಲ್ಲಿ ಮೇಲ್ಮುಖ ಮಾಡಿದ ದೀಪಗಳಿಂದಾಗಿ ಆಕಾಶದಲ್ಲಿನ ನಕ್ಷತ್ರಗಳೇ ಅಗೋಚರ. ಈ ನಿಟ್ಟಿನಲ್ಲಿ ದಾರಿದೀಪದ ಬೆಳಕು ನೆಲಕ್ಕೆ ಸಿಮಿತವಾಗುವಂತೆ ಮೇಲೆ ಸಾಗದಂತೆ ಪ್ರಯತ್ನ ಮಾಡಲಾಗುತ್ತಿದೆ.   ಪಟ್ಟಣದಲ್ಲಿ ಕಾಂಕ್ರೀಟ್ ಹಾಗೂ ಟಾರ್ ಕವಚ ಶಾಖವನ್ನು ಹೀರಿ  ಶಾಖ ದ್ವೀಪಗಳಾಗುತ್ತವೆ.  ಜೀವನ ಹೆಚ್ಚು ಅಸಹನೀಯವಾಗುತ್ತದೆ. ಎಸಿ ಫಾನ್ ಉಪಯೋಗ ಹೆಚ್ಚುತ್ತದೆ. ಬದಲಾಗಿ ಭೂಮಿಯ ಮೇಲ್ಮೈ ಶಾಖ ಪ್ರತಿಫಲಿಸುವಂತಾದರೆ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ.

ಮಳೆಯ ಸ್ವರೂಪ ಬದಲಾಗುತ್ತಲೇ ಇದೆ. ನಮ್ಮಲ್ಲಿ ಮಳೆದಿನಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮುಂಚೆ ಆರು ನೂರು ಘಂಟೆ ಮಳೆ ಬರುತ್ತಿದ್ದರೆ ಈಗ ಮುನ್ನೂರು ಘಂಟೆಗಳಲ್ಲೇ ಲೆಕ್ಕಾಚಾರದ ಮಳೆ ಸುರಿಯುತ್ತಿದೆ. ಮಳೆ ನೀರು ಇಂಗುವ ಸಾದ್ಯತೆಗಳು ಕಡಿಮೆಯಾಗಿ ನೇರವಾಗಿ ತೋಡುಗಳಿಗೆ ಹರಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕುಂಭದ್ರೋಣ ಮಳೆಗಳ ಸುದ್ದಿ ಸಾಮಾನ್ಯ. ಕೆಲವು ಉದಾಹರಣೆಗಳೆಂದರೆ






ಜುಲೈ ೨೦೦೭ ಕೇರಳದಲ್ಲಿ ಸುರಿದ ಕುಂಭದ್ರೋಣ ಮಳೆ ೩೦೦೦೦ ಜನರನ್ನು ಸ್ಥಳಾಂತರಗೊಳಿಸಿತು. ಅದೇ ವರ್ಷ ಹಿಮಾಚಲ ಪ್ರದೇಶದಲ್ಲಿ ೧೫೦ ಕ್ಕೂ ಹೆಚ್ಚು ಜನ ಮಳೆಯಿಂದಾಗಿ ಮೃತ ಪಟ್ಟರು.

ನಮ್ಮ ಪಟ್ಟಣಗಳಲ್ಲಿ ಕಾಲುದಾರಿಗಳಿಗೆ ಸಿಮೆಂಟು ಇಟ್ಟಿಗೆ ಹಾಸುವುದು ಹೆಚ್ಚುತ್ತಲಿರುವಾಗ ಮಳೆನೀರು ಭೂಮಿಗಿಳಿಯುವುದು ಕಡಿಮೆಯಾಗುತ್ತಲಿದೆ. ಹೀಗಿರುವಾಗ   ಚಿಕಾಗೊದಲ್ಲಿಯಲ್ಲಿರುವಂತಹ  ಸುಸ್ಥಿರ   ಚಿಂತನೆ ನಮ್ಮಲ್ಲೂ ಬೇಗನೆ ಬರಲಿ. ಮುಂದಿನ  ದಿನಗಳಲ್ಲಿ ಹಾಸುಗಲ್ಲುಗಳು ಮಳೆನೀರು ಇಳಿಯಲು ಅವಕಾಶ ಮಾಡಿ ಕೊಟ್ಟು ಜಲಮಟ್ಟ ಹೆಚ್ಚಲು ಸಹಾಯಕವಾದರೆ ಚೆನ್ನ. ಕೆಳಗೆ ಕೊಟ್ಟಿರುವ  ಕೊಂಡಿಯಲ್ಲಿ ಲಭ್ಯವಾಗುವ  ಚಿಕಾಗೊ  ಬಗೆಗಿನ   ಕೈಪಿಡಿ  ಚೆನ್ನಾಗಿದೆ.  

http://egov.cityofchicago.org/webportal/COCWebPortal/COC_EDITORIAL/GreenAlleyHandbook.pdf

http://www.downtoearth.org.in/cover.asp?foldername=20090315&filename=news&sid=47&sec_id=9

Thursday, May 21, 2009

ಸ್ತ್ರೀ ಶಕ್ತಿ ಬಿಂಬಿಸುವ ಅಮೇರಿಕದ ಹಳೆಯ ಬಿತ್ತಿ ಚಿತ್ರ ಮತ್ತು ಸರ್ದಾರ್ಜಿ ಜೋಕು


ಇಂದಿನ ಕನ್ನಡ ಪ್ರಭದಲ್ಲೊಂದು ನಗೆಹನಿ   ನೋಡುವಾಗ ಅಮೇರಿಕದ ತೊಂಬತ್ತು ವರ್ಷ ಹಿಂದಿನ ಬಿತ್ತಿ ಚಿತ್ರ ನೆನಪಾಯಿತು.

ನಮ್ಮ ಸ್ತ್ರೀ ಶಕ್ತಿ ಮದ್ಯ ನಿರೋಧ ಅಂದೋಲನಕ್ಕೆ ಇದುವೇ  ಸ್ಪೂರ್ತಿ ಇರಬಹುದೋ ?

ಹಿಂದೊಮ್ಮೆ ಕನ್ನಡ ಲೇಖಕಿ ಸುನಂದಮ್ಮ ಕೃತಿ ಚೌರ್ಯ ಮಾಡಿದ್ದಾರೆ ಎಂದು ಅಪಾದಿಸಿದಾಗ ಅವರು ಪ್ರಪಂಚದಲ್ಲಿ ಇರೋದು ಬರೇ ಸಾವಿರ ಜೋಕುಗಳು. ಉಳಿದವೆಲ್ಲ ಅದರ ಕಾಪಿ ಎಂದಿದ್ದರು.

Saturday, April 25, 2009

ಅಡ್ವಾಣಿಯ ಬಿಲಿಯಕ್ಕೆ ಎಷ್ಟು ಸೊನ್ನೆಗಳು ?

ಈಗ ದಿನ ಬೆಳಗಾದರೆ ಪತ್ರಿಕೆಯಲ್ಲಿ ಬಿಲಿಯಗಟ್ಟಲೆ ಡಾಲರ್ ಸ್ವಿಸ್ ಬಾಂಕಿನಿಂದ ತರುವ ವಿಚಾರ ಕಾಣುವುದು. ಕಮಲ ಪಕ್ಷದ ಅಡ್ವಾಣಿ   ಪ್ರದಾನಿಯಾದರೆ ಹಣ ತರಲು ಮರುದಿನವೇ ವಿಮಾನ ಹತ್ತುತ್ತಾರೆ. ಮುಂದೊಂದು ದಿನ ಕೈ ಪಕ್ಷದ ವತಿಯಿಂದ ಪ್ರದಾನಿ ಆಗಲಿರುವ ರಾಹುಲರೂ ಈಗ ಅಡ್ವಾನಿ ಜತೆ ಈ ಸ್ವಿಸ್ ಹಣದ ಬಗ್ಗೆ ಪ್ರತಿಕ್ರಿಯಿಸುತ್ತಿದಾರೆ. ನನಗಂತೂ ಬಿಲಿಯಕ್ಕೆಷ್ಟು ಸೊನ್ನೆ ಎನ್ನುವುದು ಇತ್ತೀಚಿನ ವರೆಗೂ ಗೊತ್ತಿರಲಿಲ್ಲ. ಜತೆಗೊಂದು ಗೊಂದಲ.


ಒಮ್ಮೆ ಒಬ್ಬ ಅಮೇರಿಕದ ಬಹು ದೊಡ್ಡ ಶ್ರೀಮಂತ ಸ್ವಿಸ್ ಬಾಂಕಿಗೆ ಹೋಗಿ ಒಂದು ಬಿಲಿಯ ಸ್ವಿಸ್ ಫ್ರಾಂಕ್ ಕೊಡಿ ಎಂದನಂತೆ. ದಾಖಲೆಗಳ ಪರಿಶೀಲಿಸಿ ನಿಮ್ಮ ಖಾತೆಯಲ್ಲಿ ಅಷ್ಟು ಹಣವಿಲ್ಲ, ಕ್ಷಮಿಸಿ ಎಂದು ಕಾರಕೂನ ಹೇಳಲು ಅದು ಹೇಗೆ ಸಾದ್ಯ ಕೆಲವು ಬಿಲಿಯ ಉಂಟೆಂದು ನನ್ನ ಖಾತೆ ಪುಸ್ತಕ ಹೇಳುತ್ತದೆ ಎಂದನಂತೆ. ಇಬ್ಬರೂ ಹೇಳಿದ್ದು ಸರಿ. ಕಾರಣ ಈ ಬರಹದ ಕೊನೆಯಲ್ಲಿದೆ.

1400 ಬಿಲಿಯ ಡಾಲರ್ ಹಣ ಸ್ವಿಸ್ ಬಾಂಕಿನಲ್ಲಿರುವ ಕಾರಣ ನಾವು ಇನ್ನು    ಅಡ್ವಾಣಿಯವರ ರಾಮ ರಾಜ್ಯದಲ್ಲಿ ಹೊಸ ತೇರಿಗೆ ಕಟ್ಟಬೇಕಾಗಿಯೇ ಇರುವುದಿಲ್ಲ. 40 ವರ್ಷ ಸರಕಾರ ನಡೆಸುವಷ್ಟು ಹಣ ಅಲ್ಲಿ ಕೊಳೆಯುತ್ತಿದೆಯಂತೆ ಎನ್ನುವಂತಹ ರಂಗು ರಂಗಿನ ಮಾತು ಕೇಳುತ್ತೇವೆ. ಒಂದು ಅವಧಿ ಪೂರ್ತಿ ಉಪ ಪ್ರದಾನಿಯಾಗಿದ್ದ ಅಡ್ವಾಣಿಗೆ ಅರುವತ್ತು ನಾಲ್ಕು ಕೋಟಿ ಬೋಫೋರ್ಸ್ ಲಂಚದ ಹಣದ ಜಾಡು ಹಿಡಿಯುವುದು ಸಾದ್ಯವಾಗಲಿಲ್ಲ ಎನ್ನುವ ವಿಚಾರ ಈಗ ನೆನಪಿಸಿಕೊಳ್ಳಲು ಈಗ ಸಕಾಲ.

ಗೆದ್ದರೂ ಚುನಾವಣೆ ಮುಗಿದ ನಂತರ ಅಡ್ವಾಣಿಗೆ ಆಶ್ವಾಸನೆ ಮರೆಯುವ ಸಾದ್ಯತೆ ಹೆಚ್ಚು.ನೆನಪಾದರೂ ಕೈಗೂಡುವುದು ಸಂಶಯ. ಅದುದರಿಂದ ಚುನಾವಣೆಯ ಅನುಕೂಲಕ್ಕಾಗಿ ಜನರನ್ನು ಉದ್ರೇಕಿಸಲು ಗೊಂದಲಕ್ಕೀಡು ಮಾಡಲು ಈ ವಿಚಾರ ಎತ್ತಬಾರದಿತ್ತು ಎಂದು ನನ್ನ ಅನಿಸಿಕೆ.  ಇವರು  ಹಣ  ತರಲು ಹೊರಟರೆ  ಅಲ್ಲಿನ  ಬಾಂಕ್  ಬಾಗಿಲು ಹಾಕುತ್ತದೆ  ಎನ್ನುತ್ತಾರೆ  ವ್ಯಂಗಚಿತ್ರಕಾರ  ಶ್ರಿ  ಸತೀಷ್  ಆಚಾರ್ಯ


ಅಂದ ಹಾಗೆ ಕಾಂಗ್ರೇಸಿನ ಯುವರಾಜ ರಾಹುಲ್ ಅಮೇರಿಕದ ಬೊಸ್ಟೊನ್ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 2001 ರಲ್ಲಿ ಎರಡು ಲಕ್ಷ ಡಾಲರ್ ನಗದು ಹಣ ತುಂಬಿದ ಸೂಟುಕೇಸು ಜತೆ ಸಿಕ್ಕಬಿದ್ದ ಬಗೆಗೆ ವದಂತಿ ಇರುತ್ತದೆ. ವರ್ಲ್ಡ್ ಟ್ರೇಡ್ ಸೆಂಟರಿಗೆ ವಿಮಾನ ಡಿಕ್ಕಿ ಹೊಡೆದ ನಂತರದ ಅಮೇರಿಕನರು ಕಠೀಣ ತನಿಖೆ ಕೈಗೊಳ್ಳುತ್ತಿದ್ದ ಕಾಲ. ತೆರೆಮರೆಯ ಕೈವಾಡದಿಂದ ಬಿಟ್ಟರೋ ಸುದ್ದಿ ಸುಳ್ಳೋ ಅನ್ನುವುದು ಅಸ್ಪಷ್ಟ.

ಗುಟ್ಟಾಗಿ ಹಣ ಇಡಲು ಸ್ವಿಸ್ ಬಾಂಕ್ ಆಗಬೇಕೆಂದು ಇಲ್ಲ. ಪ್ರಪಂಚದ ಹಲವು ಪುಟ್ಟ ದೇಶಗಳು ಈ ಸೌಕರ್ಯ ಒದಗಿಸುತ್ತದೆ. ಕಾಂಗ್ರೇಸಿನ ಯಜಮಾನತಿ ಸೋನಿಯಾ ಇಟಲಿಯ ವಟಿಕನ್ ಬಾಂಕಿನ ಉಪಯೋಗಿಸುವ ಸಾದ್ಯತೆಗಳೂ ದಾರಾಳ. ರಾಜೀವನ ಕಾಲದಿಂದಲೂ ಕುಟುಂಬಕ್ಕೆ ವಟಿಕನ್ ಹತ್ತಿರ. ಹಣದ ಬಣ್ಣವನ್ನು ನೋಡದ ಈ ಬಾಂಕ್ ಹಲವರು ದುಷ್ಟರ ಹಣ ಇಟ್ಟುಕೊಂಡ ದಾಖಲೆಗಳಿವೆ. ವಟಿಕನ್ ರಾಯಬಾರಿ ಕಛೇರಿಯ ಅಂಗವಾದ ಈ ಬಾಂಕಿನ ಟಪಾಲು ಸಾಗಾಟದಲ್ಲಿ ಬಾರತ ಹಾಗೂ ಇಟಲಿಯ ತನಿಖೆಗೆ ಒಳಪಡುವುದಿಲ್ಲ.

ಬಿಲಿಯ ಅಂದರೆ ಎಷ್ಟು ಎನ್ನುವ ಪ್ರಶ್ನೆ ಯಾರ ಜತೆ ಸಂಬಾಷಣೆ ಅನ್ನುವುದರ ಅವಲಂಬಿಸುತ್ತದೆ. . ಅಮೇರಿಕನರನ್ನು ಕೇಳಿದರೆ ಸಾವಿರ ಮಿಲಿಯ ಅಥವಾ ಒಂದರ ಹಿಂದೆ ಒಂಬತ್ತು ಸೊನ್ನೆಗಳು. ಆದರೆ ಯುರೋಪಿನವರ ಪ್ರಕಾರ ಬಿಲಿಯ ಎಂದರೆ ಒಂದರನ್ನು ಹನ್ನೆರಡು ಸೊನ್ನೆಗಳು ಹಿಂಬಾಲಿಸುತ್ತವೆ.

ಅಮೇರಿಕದ ಶ್ರೀಮಂತ ಪಡಕೊಳ್ಳಲು ಹೊರಟ ಬಿಲಿಯ ಎಂದರೆ 1,000,000,000 ಸ್ವಿಸ್ ಫ್ರಾಂಕ್ ಗಳು. ಆದರೆ ಯುರೋಪಿನ ಬಿಲಿಯ ಎಂದರೆ ಅಮೇರಿಕದವರು ಟ್ರಿಲಿಯನ್ ಎನ್ನುವ 1,000,000,000,000. ಮೂರು ಸೊನ್ನೆಗಳು ಜಾಸ್ತಿ. ಈಗ ರಾಜಕಾರಣಿಗಳು ಅನುಕೂಲಕ್ಕೆ ತಕ್ಕಂತೆ ಈ ಬಿಲಿಯ ಶಬ್ದ ಉಪಯೋಗಿಸುತ್ತಿದ್ದಾರೆ. ಸೊನ್ನೆಗಳ ಸಂಖ್ಯೆ ಯಾರಿಗೂ ಗೊತ್ತಿಲ್ಲ.



http://online.wsj.com/public/article/SB114364857897711253.html?mod=2_1125_1

Friday, April 03, 2009

ಮಳೆ ಕೊಯಿಲು ಅಮೇರಿಕದಲ್ಲಿ ಅಪರಾಧ

ಹೌದು. ಅಮೇರಿಕದಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ನೀರು ಕೊಯಿಲು ಕಾನೂನು ಬಾಹಿರ. ಹೊಳೆ ನೀರಿಗೆ ದೊಣ್ಣೆ ನಾಯಕ ಎನ್ನುವ ಅಮೇರಿಕದ ಕೆಲವು ರಾಜ್ಯಗಳ ಕಾನೂನುಗಳು ಭಲೇ ಮಜವಾಗಿದೆ. ಹಾಗಾಗಿ ಹಂಚಿಕೊಳ್ಳೋಣ ಅನ್ನಿಸಿತು


ಕೊಲರಾಡೊ ರಾಜ್ಯದಲ್ಲಿ ಪ್ರತಿ ಮಳೆಗೂ Kris Holstrom ಅಪರಾಧಿಯಾಗುತ್ತಾರೆ. ಕಾನೂನು ಉಲ್ಲಂಗಿಸಲು ಅವರು 200 ಲೀಟರ್ ಬಾರಲುಗಳನ್ನು ಉಪಯೋಗಿಸುತ್ತಾರೆ. ಈ ಪಾತ್ರೆಗಳಲ್ಲಿ ಹಿಡಿದ ಕರಗುವ ಹಿಮ ಹಾಗೂ ಮಳೆನೀರಿನಿಂದ ಅವರ ಪುಟ್ಟ ತರಕಾರಿ ತೋಟಕ್ಕೆ ನೀರಾವರಿ.

ಕ್ರಿಸ್ ಅವರು ಮಳೆಗೆ ಪಾತ್ರೆ ಹಿಡಿಯುವುದು ಜಗತ್ತಿನ ಹಲವೆಡೆ ಪರಿಸರವಾದಿಗಳು ಅನುಸರಿಸುತ್ತಿರುವ ಪ್ರಾಚೀನ ಸಂಪ್ರದಾಯ. ದೊರೆಯುವ ಮಳೆನೀರು ಮತ್ತು ಹಿಡಿಯುವ ಪಾತ್ರೆ ಅನುಸರಿಸಿ ಅವರವರ ಸಾಮರ್ಥ್ಯ ಅಗತ್ಯಗಳಿಗೆ ಹೊಂದಿಕೊಂಡು ಹಿಡಿಯುತ್ತಾರೆ. ಬಿಸಿಲಿಗೆ ಆವಿಯಾಗುವುವ ಅಡಚಣೆಯೊಂದಿಗೆ ಈ ತರ್ಲೆ ಸರಕಾರಿ ಕಾನೂನುಗಳು ತಡೆಯೊಡ್ಡುತ್ತವೆ.

ರಾಜ್ಯದ ಕಾನೂನು ಪ್ರಕಾರ ಮಳೆ ನೀರು ಅವರದಲ್ಲ. ನೂರು ವರ್ಷಗಳ ಹಿಂದೆ  ಹೊಳೆ ನೀರಿನ ಹಕ್ಕು ಹಂಚುವಾಗ ಪಡಕೊಂಡವರಿಗೆ ಸೇರಿದ್ದು. ಕ್ರಿಸ್ ಅವರಿಗೆ ರಾಜ್ಯದ ಕಾನೂನಿನ ಬಗೆಗೆ ಅವರಿಗೆ ಗುಮಾನಿ ಇತ್ತು. ಕಳೆದ ವರ್ಷ ಮಳೆ ನೀರು ಕೊಯಿಲಿನ ಪಾಠ ಮಾಡುವಾಗ ಸಂಬದ ಪಟ್ಟ ಅಧಿಕಾರಿಗಳ ಸಂಪರ್ಕಿಸಿ ಕೇಳಿದರು. ಮಳೆ ನೀರು ಕೊಯಿಲು ಈ ರಾಜ್ಯದಲ್ಲಿ ಕಾನೂನು ಬಾಹಿರ ಎನ್ನುವ ಉತ್ತರ ಸಿಕ್ಕಿದರೂ ಅವರಿಗೆ ದಂಡ ವಿಧಿಸುವ ಸಾದ್ಯತೆ ಇಲ್ಲವಂತೆ.

ಪ್ರಪಂಚದ ಎಲ್ಲೆಡೆ ಅಧಿಕಾರಿಗಳ ಧಿಮಾಕು ಒಂದೇ ತೆರನಾದುದು. ನೂರು ವರ್ಷ ಹಿಂದಿನ ಕಡತ ತೆಗೆಯುತ್ತಾರೆ. ಎಲ್ಲವೂ ಸಣ್ಣಮಟ್ಟಿನಲ್ಲಿಯೇ . ಪ್ರಾರಂಬ. ಪ್ರತಿ ಹನಿಯೂ ಅಮೂಲ್ಯ ಮತ್ತು ಕಣಿಯಿಂದ ತೋಡಿಗೆ, ತೋಡಿನಿಂದ ನದಿಗೆ ಎಂಬಂತೆ ನದಿಯ ಹರಿವಿಗೆ ಸಹಾಯಕ. ಒಬ್ಬರು ಮಳೆನೀರು ಹಿಡಿಯಲು ಸುರುವಿಟ್ಟರೆ ಇನ್ಯಾರಿಗೋ ಸೇರಿದ ಸೊತ್ತನ್ನು ಅಪಹರಿಸಿದಂತೆ ಅನ್ನುತ್ತಾರೆ ಅಲ್ಲಿನ ಸಂಬಂದ ಪಟ್ಟ ಅಧಿಕಾರಿಗಳು. ಕೊಲರಾಡೋ ರಾಜ್ಯದ ಅಧಿಕಾರಿಗಳ ಮಟ್ಟಿಗೆ ಸಂಗ್ರಹಿಸಿದ ಮಳೆ ನೀರು ಮಲೀನ ನೀರು. ಹುಲ್ಲು ಹಾಸು ಶೌಚಾಲಯದಲ್ಲಿ ಫ್ಲಶ್ ಮಾಡಲಷ್ಟೇ ಒಕೆ ಎನ್ನುವುದು ಅವರ ಹೇಳಿಕೆ.

ಕುಶಿಯ ವಿಚಾರ ಅಂದರೆ ಅಮೇರಿಕದಲ್ಲಿ ದೇವೆ ಗೌಡರಿಗೂ ನಮ್ಮಂತಹ ಜನಸಾಮಾನ್ಯರಿಗೂ ಒಂದೇ ಕಾನೂನು. ಅಲ್ಲಿನ ರಾಜ್ಯ ಮಟ್ಟದ ರಾಜಕಾರಣಿ ಶಾಸಕರಾದ ಕ್ರಿಸ್ ಹೋಮರ್ ಪರಿಸರ ಸ್ನೇಹಿ ಮನೆ ಕಟ್ಟಿದರು. ಪೂರ್ತಿ ಸೌರ ಶಕ್ತಿಯಲ್ಲಿ ನಿರ್ವಹಿಸುವ ಈ ಮನೆಯಲ್ಲಿ ಮಳೆ ನೀರು ಕೊಯಿಲು ಅಳವಡಿಸಲು ಸಾದ್ಯವಾಗಲಿಲ್ಲ. ಬಿದ್ದ ಮಳೆಯಲ್ಲಿ ಶೇಕಡಾ 97 ಇಂಗುತ್ತದೆ ಹೊರತು ಕಾಲುವೆಗೆ ಹರಿಯುವುದಿಲ್ಲ ಎನ್ನುವ ಮಾಹಿತಿಯೊಂದಿಗೆ ಕಳೆದ ವರ್ಷ ಮಳೆ ನೀರು ಕೊಯಿಲು ಕಾನೂನು   ರಾಜ್ಯದ ಶಾಸನ ಸಭೆಯಲ್ಲಿ  ಮಂಡಿಸಿದರೂ ಅನುಮೋಧನೆ ದೊರಕದೆ ಸೋತರು. ಈ ಸರಳ ವ್ಯವಸ್ಥೆ ಕಾನೂನು ಬಾಹಿರ ಎನ್ನಲು ಆಶ್ಚರ್ಯವಾಗುತ್ತದೆ ಎಂದವರು ಹೇಳುತ್ತಾರೆ.

ಅಂದ ಹಾಗೆ ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಒಬ್ಬರು ಮಳೆ ನೀರನ್ನು ಸಂಗ್ರಹಿಸಿ ಮೋಡದ ತಾಜಾ ಪಾನಿಯ ಎಂದು ಮಾರುತ್ತಾರಂತೆ. ಶ್ರೀ ರಿಚರ್ಡ್ ಅಮೇರಿಕದ ಪ್ರಥಮ ಮಳೆ ನೀರು ಬಾಟಲಿಗೆ ತುಂಬಿಸುವ ಮಾರಾಟಗಾರ.

http://www.truthout.org/031909EA

Sunday, November 16, 2008

ಜಿಹಾದಿಗಳ ಕೂಟಕ್ಕೆ ಹೆಂಗಸರು

ನಿನ್ನೆಯ ಕನ್ನಡ ಪ್ರಭ ಏಳನೆಯ ಪುಟದ ಸುದ್ದಿ ಓದುವಾಗ ನಿಜಕ್ಕೂ ಗಾಬರಿಯಾಗುತ್ತದೆ. ಬಯೋತ್ಪಾದನೆ ಎಲ್ಲೆಡೆ ವ್ಯಾಪಿಸಿ ಈಗ ನಮ್ಮ ಹಿತ್ತಿಲಿಗೂ ತಲಪಿದೆ. ಅದೊಂದು ಮೆದುಳನ್ನು ಕಿತ್ತು ಹಾಕಿ ಮನುಷ್ಯರನ್ನು ವಿವೇಚನೆ ಇಲ್ಲದ ಯಂತ್ರಮಾನವರನ್ನಾಗಿ ಮಾಡುವ ಏಕಮುಖ ದಾರಿ.  ಜಿಹಾದಿಗಳಿಗಾಗಿ ನಮ್ಮ ಆಸುಪಾಸಿನಲ್ಲಿ ಈಗಾಗಲೇ ಹುಡುಗರನ್ನು ಸೇರಿಸಿಕೊಂಡು ತರಬೇತಿಗೆ ಕಳುಹಿಸಿದ್ದು ಹಳೇಯ ಸುದ್ದಿ. ಈಗ ಹೆಂಗಸರನ್ನೂ ವಿದ್ವಂಸಕ ಕೃತ್ಯ ನಡೆಸಲು ತರಬೇತಿ ಕೊಡುವುದು ಇನ್ನೂ ಹೆಚ್ಚು ಗಂಬೀರ ವಿಚಾರ.


ಅಮೇರಿಕದಲ್ಲಿ ಎಲ್ಲರೂ ತಮ್ಮ ಸರಹದ್ದಿನಲ್ಲಿ ಕಣ್ಣಿಡುವ ವ್ಯವಸ್ಥೆಯಿರುತ್ತದೆ. ಅಪರಿಚಿತ ವ್ಯಕ್ತಿ ಸಂಶಯಾಸ್ಪದ ವರ್ತನೆ ಕಂಡರೆ ತಕ್ಷಣ ಪೋಲೀಸರ ಗಮನಕ್ಕೆ ತರುತ್ತಾರೆ. ಎಲ್ಲರೂ ತಮ್ಮ ಬಡಾವಣೆ ರಕ್ಷಣಾ ಕಾರ್ಯದಲ್ಲಿ ಪಾಲುದಾರರೇ. ಜತೆಯಲ್ಲಿ ಈ ಬಡಾವಣೆಯಲ್ಲಿ neighborhood watch ಉಂಟೆನ್ನುವ ಫಲಕಗಳ ನೋಡಿದಾಗ ಜನ ತನ್ನ ಗಮನಿಸಿದರೆ ಎಂದು ಅಪರಾದಿಯನ್ನು ಗಲಿಬಿಲಿಗೊಳಿಸುತ್ತವೆ. ಆದರೂ ನಾಳೆ ಬಾಂಬು ಹಾಕುವವನನ್ನು ಇಂದು ಅಪರಾಧಿಯೆಂದು ಪರಿಗಣಿಸುವಂತಿಲ್ಲ . ಯುರೋಪಿನಲ್ಲಿ ಹುಡುಗನೊಬ್ಬ ಅಸ್ತ್ರಗಳೊಂದಿಗೆ ತನ್ನ ಚಿತ್ರ ಅಂತರ್ಜಾಲದಲ್ಲಿ ಹಾಕಿಕೊಂಡ ವಿಚಾರ ಅಕಸ್ಮಾತಾಗಿ ಪೋಲೀಸರ ಗಮನಕ್ಕೆ ಬಂದು ಅವರು ಅವನನ್ನು ಕರೆಸಿ ತನಿಖೆ ಮಾಡಿದರು. ಮರು ದಿನ ಆ ಹುಡುಗ ಹತ್ತು ಸಹಪಾಠಿಗಳ ಕೊಂದು ಆತ್ಮಹತ್ಯೆ ಮಾಡಿಕೊಂಡ.

ಪವಿತ್ರ ಗ್ರಂಥಗಳಲ್ಲಿ ಬರೆದಿರುದಕ್ಕೂ ಅವರ ಆಚರಣೆಗೂ ಯಾವುದೇ ಹೋಲಿಕೆ ಇರುವುದಿಲ್ಲ. ತಾವು ಮಹಾನ್ ಸಾಹಸಿ ಎನ್ನುವ ಭ್ರಮೆಗೆ ಒಳಗಾಗಿರುವ ಇವರ ನಂಬಿಕೆ ಪ್ರಕಾರ ಆತ್ಮಾಹುತಿ ಮಾಡಿಕೊಂಡ ಗಂಡಸರಿಗೆ ಸ್ವರ್ಗದಲ್ಲಿ ದೇವರು ಇವರ ಸೇವೆಗಾಗಿ ಒಬ್ಬೊಬ್ಬರಿಗೂ ಎಪ್ಪತ್ತೆರಡು ಕನ್ಯೆಯರ ಒದಗಿಸುತ್ತಾರೆ ಎನ್ನುವ ನಂಬಿಕೆ. ಈ  ಗಂಡಸರಿಗೆ ಎಪ್ಪತ್ತೆರಡು ಕುಮಾರಿಯರೊಂದಿಗೆ ಶಾಶ್ವತವಾಗಿ ವಿಹರಿಸಲು ಸಿಗುತ್ತಾರೆ ಎನ್ನುವ ಜಿಹಾದಿ ಕರಪತ್ರಗಳ ಓದಿದ ಹೆಣ್ಣು ಮಾನವ ಬಾಂಬರ್ ಮೌಲವಿಯವರಲ್ಲಿ ಕೇಳುತ್ತಾಳೆ - ಆಚೆ ಲೋಕದಲ್ಲಿ ನನ್ನ ಸೇವೆಗೆ ಎಪ್ಪತ್ತೆರಡು  ಕುಮಾರರು ಸಿಗುವರೋ. ಪ್ರಶ್ನೆ ಉಚಿತವಾದುದು. ಅನಿರೀಕ್ಷಿತ ಪ್ರಶ್ನೆಗೆ ಬಿನ್ ಲಾಡನ್ ತತ್ತರಿಸಿದನಂತೆ.


ಮುಸ್ಲಿಂ ಸಮಾಜ ಸ್ವಲ್ಪ ಎಚ್ಚರಗೊಡಿರುವುದು ಸ್ವಾಗತಾರ್ಹ. ಒಮ್ಮೆ ಸೃಷ್ಟಿಯಾದ ದರ್ಮಾಂಧ ತನಗೆ ಕರೆ ಬರುವ ವರೆಗೆ ಮಾಮೂಲಿ ಜೀವನ ನಡೆಸುತ್ತಾನೆ. ಸಮಾಜದವರಿಗಲ್ಲ ಸ್ವಂತ ಮನೆಯವರಿಗೆ ಸಹಾ ಈ ಸ್ಪೋಟಿಸಲು ಸಿದ್ದವಾದ ಬಾಂಬು ಗುರುತಿಸುವುದು  ಅಸಾದ್ಯ. ಸಹಚರರು ಸಿಕ್ಕಿ ಬಿದ್ದಾಗ ಮಾತ್ರ ಸುಳಿವು ಸಮಾಜಕ್ಕೆ ಪೋಲೀಸರಿಗೆ ದೊರಕುವುದು. . ನಮ್ಮ ರಾಜಕಾರಣಿಗಳು ಬುದ್ದಿ ಜೀವಿಗಳು  ಮಾನವ ಹಕ್ಕು ಕಾರ್ಯಕರ್ತರು    ಅ   ಸಮಾಜವನ್ನು    ಸರಿದಾರಿಯಲ್ಲಿ   ಸಾಗಲು ಬಿಡಲಾರರು ಅನ್ನಿಸುತ್ತದೆ.   ಸಮಾಜ ಜಾಗ್ರತಾವಸ್ಥೆಯಲ್ಲಿ ಇದ್ದರೆ ಕೆಲವು ಸಮಸ್ಯೆಗಳ ಪರಿಹಾರ ಸಿಗಬಹುದೇನೊ ?

ನಮ್ಮ   ಬುದ್ದಿಜೀವಿಗಳ ಬಗೆಗೆ   ರವಿಯವರ http://kannadathinktank.blogspot.com/     ದಲ್ಲಿರುವ ಅಣಕ ನೆನಪಾಗುತ್ತಿದೆ. ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

Saturday, September 06, 2008

ಪರದೇಶದಲ್ಲಿ ರೂಪಾಯಿ ಲೆಕ್ಕಾಚಾರ

ವಾರಗಳ   ಹಿಂದೆ  ಓದಿದ   ಆಗಸ್ತು  ೧೪ರ    ವಿಜಯ ಕರ್ನಾಟಕದ ಅಂಕಣದಲ್ಲಿ  ಪ್ರಕಟವಾದ   ವಿಶ್ವೇಶ್ವರ ಭಟ್ಟರ ಲೇಖನದಲ್ಲೊಂದು ವಾಕ್ಯ ಮನಸಿಗೆ ಕಿರಿಕಿರಿ ಉಂಟು ಮಾಡುತ್ತಲೇ  ಇದೆ.  ಈ    ವಾಕ್ಯ ಬಾರತೀಯರ ಮನೋಬಾವವನ್ನು ಮೂದಲಿಸುವಂತಿದೆ.   ಅಲ್ಲಿನ  ವಾತಾವರಣ   ಖರ್ಚಿಗೆ   ಪ್ರರೇಪಿಸುತ್ತದೆ.   ರೂಪಾಯಿ  ಲೆಕ್ಕ  ಬೇಡ  ಎನ್ನುವ  ಈ ಮಾತು ನನಗೆ   ಹೊಸತಲ್ಲ. ಪರದೇಶಗಳಲ್ಲಿ ಹಲವು ಬಾರಿ    ಹೇಳಿಸಿಕೊಂಡಿದ್ದೇನೆ.   ಅದುದರಿಂದ ಇನ್ನೊಂದು ಮುಖ ಪರಿಚಯಿಸಲು ಪ್ರಯತ್ನಿಸುವೆ.


ಇದೊಂದು ಪರಂಪರೆಯ ಮಾತು. ಮೂಲ ಹೀಗಿದ್ದಿರಬಹುದು. ವಿದ್ಯೆಗೋ ಕೆಲಸಕ್ಕೊ ನಂತರ ಹೋದವರಿಗೆ ಮೊದಲಿಗರ ಹಿತವಚನ. ಖರ್ಚಿನ ಮೇಲೆ ಬಹಳ ಯೋಚನೆ ಬೇಡ , ಉಪವಾಸ ಇರಬೇಡ ಎನ್ನುವ ತಾತ್ಪರ್ಯ. ಕ್ರಮೇಣ ಹಿರಿ ಗುರುಗಳ ಕಾಲದಲ್ಲಿ ಪ್ರವಚನ ಸಮಯದಲ್ಲಿ ಬೆಕ್ಕನ್ನು ಪಾತ್ರೆಯಡಿ ಮುಚ್ಚಿಡಲಾಗುತಿತ್ತು ಎನ್ನುವ ಆಚರಣೆಯ ಅನುಕರಣೆ ಎಂಬಂತಾಗಿದೆ. ಈಗಂತೂ ಹೋದ ಪ್ರತಿಯೊಬ್ಬನೂ ಕೇಳುವುದು ಕಡ್ಡಾಯ.

ಗೆಳೆಯರು ಸಂಬಂದಿಕರು  ಅಲ್ಲಿನ  ಅತಿಥೇಯರು    ದೊಡ್ದ ಮನಸ್ಸು ಮಾಡುವುದು ಬೇರೆ ನಮ್ಮ ವೈಯುಕ್ತಿಕ ಖರ್ಚಿಗೆ ನಾವಾಗಿ ಅವರಿವರಲ್ಲಿ ಕೈಯೊಡ್ಡುವುದು ಬೇರೆ. ಬಾರತದ ಹೊರಗೆ ಮುಕ್ಕಾಲು ಆದಾಯ ಇಲ್ಲವಾದಲ್ಲಿ ಪ್ರತಿ ಪೈಸವನ್ನೂ ನಾವು ಲೆಕ್ಕ ಮಾಡುವುದೇ ಸರಿ. ಇದರರ್ಥ ಲೇಖನದಲ್ಲಿ ಕಾಣುವ ನಮ್ಮವರು ಮಾಡಬಹುದಾದ ಚೌಕಾಶಿಯನ್ನು ಒಪ್ಪುತ್ತೇನೆ ಎಂದಲ್ಲ. ವಿದ್ಯೆಗೋ ಕೆಲಸದ ಪ್ರಯುಕ್ತವೋ ಮೊದಲು ಹೋದ ಶ್ರೀಯುತ ಭಟ್ರಿಗೆ ಅಲ್ಲಿ ಹಣ ದಾರಾಳ ಖರ್ಚು ಮಾಡುವ ಅಗತ್ಯ ಅವಕಾಶ ಇದ್ದಿರಬಹುದು. ಅದುದರಿಂದ ಆ ದೋರಣೆ ಸಮಂಜಸ ಎನಿಸುತ್ತದೆ.

ನಾನು ಇಪ್ಪತ್ತೆರಡು ವರ್ಷ ಹಿಂದೆ ಸೈಕಲು ಪ್ರವಾಸದ ಬಾಗವಾಗಿ ರೋಮ್ ಪಟ್ಟಣದಲ್ಲಿ ಯುವ ಹಾಸ್ಟೇಲಿಗೆ ಹೋದೆ. ದಿನಕ್ಕೆ ಹತ್ತು ಸಾವಿರ ಲಿರಾ ಎಂದರು. ನಾನು ಅಂದಿನ ವರೆಗೆ ಸಾವಿರ ಮಿಕ್ಕಿದ ಹಣ ಅಪ್ಪನ ಅನುಮೋದನೆ ಇಲ್ಲದೆ ಖರ್ಚು ಮಾಡಿದ್ದಿರಲಿಲ್ಲ. ಅಲೋಚನೆ ಮಾಡಿದರೆ ಅದು ನೂರು ರೂಪಾಯಿ ಚಿಲ್ಲರೆ. ಆದರೆ ಮೊದಲು ಕೇಳುವಾಗ ನಿಜಕ್ಕೂ ಗಲಿಬಿಲಿ. ಅಂದು ನಮಗೆ  ಕಾನೂನು  ಪ್ರಕಾರ   ಕೊಂಡೊಯ್ಯಲು ಅವಕಾಶ ಇದ್ದುದು ಐದು ನೂರು ಡಾಲರ್ ಗುಣಿಸು ಹನ್ನೆರಡು ಅಂದರೆ ಕೇವಲ ಆರು ಸಾವಿರ ರೂಪಾಯಿ ಮಾತ್ರ. ಇಂದಿನಂತೆ ನಾಲ್ಕು ಲಕ್ಷ ರೂಪಾಯಿ ಮೌಲ್ಯ ಪರದೇಶಕ್ಕೆ ಸಲೀಸಾಗಿ ಕೊಂಡೊಯ್ಯುವಂತಿರಲಿಲ್ಲ. ಸ್ವಾಬಾವಿಕವಾಗಿ ಪೈಸ ಪೈಸವನ್ನೂ ಲೆಕ್ಕಿಸುವ ಅಗತ್ಯ.  ನಾನು  ವಾಪಾಸು  ಬರುವಾಗ  ನನ್ನಲ್ಲಿ  ಉಳಿದುದು  ಚಿಲ್ಲರೆ  ಹಣ.    ದುಂದು ವೆಚ್ಚ  ಮಾಡಿದರೆ  ಊರು  ತಲಪುತ್ತಿರಲಿಲ್ಲ. 

ಈ  ಹಣ   ಪರಿವರ್ತನಾ ವಿಚಾರಕ್ಕೆ   ಇನ್ನೊಂದು  ಮುಖವಿದೆ.     ಇತ್ತೀಚೆಗೆ ಎರಡು ಲಕ್ಷ ಚಿಲ್ಲರೆ ವಿಮಾನಕ್ಕೆ ಸುರಿದು ನಮ್ಮವರು ಬಂದಿದ್ದರು ಅಮೇರಿಕದಿಂದ.   ಸಹೋದರಿಯ ಬೇಟಿಗೆ ಬೆಂಗಳೂರಿಗೆ  ಹೋಗಲು ಕೆಲವು  ಸಾವಿರ ಖರ್ಚು  ಆಗಬಹುದು   ಎಂದು ಮನಬಿಚ್ಚಿ ಗೊಂದಲದಿಂದ ಮಾತಾಡಿದರು ವರ್ಷಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಮಿಕ್ಕಿ ಸಂಪಾದಿಸುವ ಈ ಅಮೇರಿಕದ ಕುಳ.  ಕೊನೆಗೂ ಅಷ್ಟು ಖರ್ಚಿಗೆ ಮನಸೊಪ್ಪಲಿಲ್ಲ.  ಅವರ ಇಲ್ಲಿನ ವರ್ತನೆಯನ್ನು ಶ್ರಿ ಭಟ್ಟರು ಪ್ರಶ್ನಿಸುವುದು  ಹೆಚ್ಚು   ಉಚಿತ   ಹೊರತು ಅಲ್ಲಿ ನಮ್ಮ ವರ್ತನೆಯನ್ನಲ್ಲವೆಂದು ಅನಿಸುತ್ತದೆ.  ಬಾರತದಲ್ಲಿ  ಹೆಚ್ಚೆಂದರೆ  ವರ್ಷಕ್ಕೆ ಒಂದೆರಡು ಲಕ್ಷ ರೂಪಾಯಿ ಸಂಪಾದಿಸುವ ಬೂಪ ಸ್ವಾಬಿಮಾನ ಉಳಿಸಿಕೊಂಡು ಅಮೇರಿಕದಲ್ಲೊ ಯುರೋಪಿನಲ್ಲೊ ದಾರಾಳ ಖರ್ಚು ಮಾಡುವಂತಿಲ್ಲ.

ಅವರು ಲೇಖನದಲ್ಲಿ ಬರೆದಂತಹ ಇಲ್ಲಿಗೆ ಬರುವ ಪ್ರತಿ ಪ್ರವಾಸಿಯೂ ಆ ದೇಶದ ರಾಯಬಾರಿ ಎಂಬ ಪರದೇಶಿಯರ ಮಾತಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ ಎಂದು ನಾನು ದೈರ್ಯವಾಗಿ ಹೇಳಬಲ್ಲೆ. ನನ್ನಂತೆ ನೂರಾರು ಜನ  ಬಾರತೀಯರು  ಎಲ್ಲೂ ಅನುಚಿತವಾಗಿ ನಡೆದುಕೊಂಡಿರಲಿಕಿಲ್ಲ. ಲೇಖನದಲ್ಲೊಂದು ದುಂದು ಖರ್ಚಿಗೆ ಪ್ರೆರಣೆಯೊ ಎನಿಸುವ ಮಾತು ಮಾತ್ರ ನನಗೆ ಸರಿ ಕಾಣಲಿಲ್ಲ.   ಮೊದಲ  ಬಾರಿಗೆ  ಸಮುದ್ರದಾಟುವವರು  ಈ  ಲೇಖನದಲ್ಲಿರುವ     ವಾಕ್ಯಗಳ  ಅಕ್ಷರವನ್ನೂ   ಬಿಡದೆ   ಓದಿ  ಚಿಂತಿತರಾಗುವ    ಸಾದ್ಯತೆ  ಕಂಡು  ಬರೆಯೋಣ  ಅನಿಸಿತು.

Friday, August 22, 2008

ಇಂಗು ತಿಂದು ಮಂಗನಾದ ಜಾರ್ಜ್

ಈಗ ಅದುನಿಕ ತಂತ್ರಜ್ನಾನದಿಂದಾಗಿ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲವನ್ನೂ ಬಲ್ಲೆವು ಅನ್ನುವ ಭ್ರಮೆ ನಮ್ಮದು. ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಯುರೋಪಿನಲ್ಲಿರುವ ಜಾರ್ಜಿಯ ಎಂಬ ಪುಟ್ಟ ರಾಷ್ಟ್ರವನ್ನು ತನ್ನ ನೆರೆಯಲ್ಲಿರುವ ರಷ್ಯಾದ ವಿರುದ್ದ ಗುಟ್ಟಾಗಿ ಅಮೇರಿಕ ಹಾಗೂ   ಇಸ್ರೇಲ್  ಜತೆಗೂಡಿ   ಎತ್ತಿಕಟ್ಟುತ್ತಿದೆ.  ಇವೆರಡು ದೇಶಗಳು ಜಾರ್ಜಿಯಾ ಓಲೈಕೆಗೂ ಕಾರಣ ತೈಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ. ಇವರೊಳಗಿನ  ಗೆಳೆತನ   ಎಲ್ಲಿನ ವರೆಗೆಂದರೆ ಇರಾಕಿನಲ್ಲೂ ಅಮೇರಿಕ ಮತ್ತು ಇಂಗ್ಲೇಡಿನ ನಂತರದ ದೊಡ್ಡ ಗಾತ್ರದ ಸೇನೆ ಈ  ಪುಟ್ಟ    ಜಾರ್ಜಿಯ  ದೇಶದ್ದು.

ಮೊನ್ನೆ ಚೀನಾದಲ್ಲಿ ಒಲಂಪಿಕ್ ಉದ್ಘಾಟನಾ ಸಮಾರಂಬವನ್ನು ಪ್ರಪಂಚವೇ ಮೈಮರೆತು ನೋಡುತ್ತಿದ್ದಾಗ ಜಾರ್ಜಿಯ ಒಂದು ಸೇನಾ ಕಾರ್ಯಾಚರಣೆ ನಡೆಸಿತು. ಬಹುತೇಕ ರಷ್ಯನ್ ಮೂಲದ ಜನರಿರುವ ಪ್ರದೇಶವನ್ನು  ಬಲತ್ಕಾರವಾಗಿ  ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಸಾವಿರಾರು   ಜನರನ್ನು ಕೊಂದಿತು. ಕೆಲವು ಸಾವಿರ ನಾಗರಿಕರು ಜೀವ ಉಳಿಸಿಕೊಳ್ಳಲು ರಷ್ಯಕ್ಕೆ ಓಡಿ ಹೋದರು. ಕೂಡಲೇ ಎಚ್ಚೆತ್ತ ರಷ್ಯ ತಮ್ಮವರ ಸಹಾಯಕ್ಕೆ ಪೂರ್ಣ  ಪ್ರಮಾಣದ  ಸೇನೆ ಕಳುಹಿಸಿತು.

ರಾಜ ಕುಮಾರ್ ಸತ್ತ ದಿನದ ಗಲಬೆಯಲ್ಲಿ ತಮ್ಮ ಕೈವಾಡವಿರಲು ತಾವು ಮನೆ ಹೊರಡಲೇ ಇಲ್ಲ ನಮ್ಮ ಡುಮ್ಮ ಸಿಂಗರು ಅಂದು ಹೇಳಿದರಲ್ಲ, ಹಾಗೆ ಈ ದಿನ ಜಾರ್ಜ್ ಬುಷ್ ನಿರಾತಂಕವಾಗಿ     ಚೀನಾದಲ್ಲಿದ್ದರು.   ಕೆಲವು ದಿನ ಅವರು ಮತ್ತು ಅವರ ಸಹಾಯಕರು ಈ   ಯುದ್ದ   ವಿಚಾರದಲ್ಲಿ ತೆಪ್ಪಗಿದ್ದರು. ಏನೂ ಹೆದರಿಕೊಬೇಡಿ ಜತೆಯಲ್ಲಿ ನಾನಿದ್ದೇನೆ ಎಂದು  ಮೊದಲು   ಅಲ್ಲಿನ  ಅದ್ಯಕ್ಷರಿಗೆ    ಮಿಲಿಟರಿ ಕಾರ್ಯಾಚರಣೆ  ಮಾಡಲು   ಹರಸಿದ ನಮ್ಮ ಜಾರ್ಜ್    ಆ  ವೇಳೆಗೆ


ವಾರ ಕಳೆದಾಗ ಜಾರ್ಜಿಯಾ ದೇಶದ ಅದ್ಯಕ್ಷನ ಪರೀಸ್ಥಿತಿ ಕೈಲಾಗದವ ಮೈ ಪರಚಿಸಿಕೊಂಡ ಎಂಬತಾಯಿತು. ಅಲ್ಲಿನ ಮಿಲಿಟರಿಯು ಪೂರ್ತಿ ಪುಡಿಯಾದ ನಂತರ ಸುಮ್ಮನಿರುವುದು ಸರಿಯಲ್ಲ ಅನ್ನಿಸಿದ ಅಮೇರಿಕದ ಜಾರ್ಜ್ ಅವರಿಂದ ರಷ್ಯದ ಪುಟಿನ್ ಅವರಿಗೆ ಫೋನ್. ಏನಯ್ಯಾ , ಒಂದು ಸ್ವತಂತ್ರ ಗಣರಾಜ್ಯವನ್ನು ಅತಿಕ್ರಮಿಸಿದರೆ ........ ಎನ್ನಲು ಆ ಕಡೆಯಿಂದ  ಹಾ ಹಾ      ಜೋಕ್ ಚೆನ್ನಾಗಿದೆ   ಜಾರ್ಜ್   ಎನ್ನುವ ಉತ್ತರ ಬಂತಂತೆ. ಇತ್ತೀಚೆಗೆ ವರೆಗೆ ಸ್ವತಂತ್ರ ದೇಶಗಳಾಗಿದ್ದ ಇರಾಕ್ ಹಾಗೂ ಅಫ್ಘಾನಿಸ್ಥಾನಿನಲ್ಲಿ ಇನ್ನೂ ಕಾರ್ಯಾಚರಣೆ ನಡೆಸುತ್ತಿರುವ ಆಮೇರಿಕಕ್ಕೆ ಹೇಳುವ ನೈತಿಕ ಹಕ್ಕು ??

ಮಾದ್ಯಮದ ಮೇಲಿನ ನಿಯಂತ್ರಣದಿಂದಾಗಿ ಅಮೇರಿಕದ ಹಲವಾರು ಕಿತಾಪತಿಗಳು ಅರ್ಧ ಸತ್ಯಗಳು ಬೆಳಕು ಕಾಣುವುದೇ ಇಲ್ಲ. ರಷ್ಯಾದ ಪ್ರವ್ಡಾ ಪತ್ರಿಕೆಯ ಈ ಜಾರ್ಜ್  ಬುಷ್ ಸಾಹೇಬನಿಗೆ   ಬರೆದ   ಕುಹಕ ಪತ್ರ ಓದಿ ನೋಡಿ.

Saturday, August 09, 2008

ಕೈದಿಗಳ ಗೂಡಿನಲ್ಲಿ ಕೂಡಿಡುವ ಅಮೇರಿಕದ ಸೇನೆ

ಹಲವಾರು ಡೈರಿ ಪಾರ್ಮ್ ಗಳನ್ನು ಯುರೋಪಿನಲ್ಲಿ ಸಂದರ್ಶಿಸಿದ ನನಗೆ ಗಂಡು ಕರುಗಳ ವಿಧಿ ಬಗ್ಗೆ ಕುತೂಹಲ. ಅವರಲ್ಲಿ ಪ್ರಶ್ನಿಸಲು ಅದನ್ನು ವಾರಕ್ಕೊಮ್ಮೆ ಬರುವ ಗಂಡುಕರು ಸಾಕುವವರಿಗೆ   ಆ  ವಾರ  ಹುಟ್ಟಿದ   ಕೊಡುತ್ತೇವೆ ಎನ್ನುವ ಉತ್ತರ ಸಿಗುತಿತ್ತು. ಕೊನೆಗೆ ನೆದರ್ ಲಾಂಡ್ ನಲ್ಲಿ ಈ ಗಂಡು ಕರುಗಳ ಉಳಿಕೆ ಜೀವನ ಕಣ್ಣಾರೆ ಕಾಣುವ ಅವಕಾಶ ದೊರಕಿತು.

ಅದು ನಿಜಕ್ಕೂ ಘೋರವಾದ ಚಿತ್ರ. ಅವುಗಳನ್ನು ಅಲುಗಾಡಲೂ ಸಾದ್ಯವಿಲ್ಲದ ಪೆಟ್ಟಿಗೆಗಳಲ್ಲಿ ಕೂಡಿಡುತ್ತಾರೆ. ಅನಾವಶ್ಯಕ ಕಾಲಾಡಿಸಿ ಕೊಬ್ಬು ಕರಗಿಸುವುದು ಬೇಡವೆಂದು ಸಾಕುವವರ ಉದ್ದೇಶ. ಕೋಳಿ ಸಾಕಣೆಯಲ್ಲೂ ಇದೇ ಚಿತ್ರ ಕಂಡರೂ ಕೋಳಿಗಳೊಂದಿಗೆ ಬಾವನಾತ್ಮಕ ಸಂಬಂದ ನಮಗೆ ಇರುವುದಿಲ್ಲ. ಕರುಗಳ ಉಳಿಕೆ ಜೀವನ ಇಂತಹ ಗೂಡಿನಲ್ಲಿ ನಿಂತುಕೊಂಡು ತಿನ್ನುವುದು ಸಗಣಿ ಹಾಕುವುದಷ್ಟೇ ಕೆಲಸ.     ಕರುಗಳ  ಕಣ್ಣಲ್ಲಿ  ಕಾಣುವ  ನೋವು, ಕೆಲವು ಕ್ಷಣ ಕೇಳಿದ  ರೋದನೆ ತಿಂಗಳುಗಟ್ಟಲೆ ಮನಸ್ಸಿನಿಂದ ಮಾಸದು.

ಇರಾಕಿನಲ್ಲಿ ಅಮೇರಿಕದ ಸೇನೆಯೂ ಕೈದಿಗಳನ್ನು ಇಂತಹ ಮೂರಡಿ ಉದ್ದ ಮೂರಡಿ ಅಗಲದ  ಹಾಗೂ   ಆರಡಿ  ಎತ್ತರದ    ಅಲುಗಾಡಲೂ ಸಾದ್ಯವಿಲ್ಲದಂತಹ ಚಿಕ್ಕ ಗೂಡಿನಲ್ಲಿ ನಿಲ್ಲಿಸುವ ಕ್ರೂರ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಸುದ್ದಿ ಬೆಳಕಿಗೆ ಬಂದ ನಂತರ ಸಂದರ್ಶನವೊಂದರಲ್ಲಿ ಅಂತಹ ಕ್ರೂರ ಸನ್ನಿವೇಷ ಎನಿಲ್ಲ, ಹೆಚ್ಚೆಂದರೆ ಒಮ್ಮೆಗೆ ಹನ್ನೆರಡು ಘಂಟೆ ನಿಲ್ಲಿಸಲಾಗುತ್ತದೆ ಹಾಗೂ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಈ ಪಂಜರಗಳ ಗಮನಿಸಲಾಗುತ್ತದೆ ಎನ್ನುವ ಸಮರ್ಥನೆ ನೀಡಲಾಗಿದೆ.

ಅಮೇರಿಕದವರೊಬ್ಬರು ಮಾಹಿತಿ ಹಕ್ಕಿನಲ್ಲಿ ಕೋರಿದ ಪ್ರಕಾರ ಸೇನೆ ಅಂತಹ ಆದರೆ ಅದಕ್ಕಿಂತ ದೊಡ್ಡ ಪೆಟ್ಟಿಗೆಗಳ ಕೆಲವು ಅಸ್ಪಷ್ಟ ಬಾವಚಿತ್ರಗಳ ಇತ್ತೀಚೆಗೆ ಕಳುಹಿಸಿಕೊಟ್ಟಿದೆ.  ಅಮೇರಿಕದ  ಈ  ಕೃತ್ಯ  ಖಂಡನೀಯ.  ಆದರೆ  ಈ  ಕೈದಿಗಳ  ಪರೀಸ್ಥಿತಿ  ಪಶ್ಚಿಮದ  ದೇಶದಲ್ಲಿ    ಜನಿಸುವ     ಗಂಡುಕರುಗಳಿಗೆ   ಬಿನ್ನವಲ್ಲ    ಅನ್ನಿಸುತ್ತದೆ.   .

Tuesday, August 05, 2008

ವಿದ್ಯುತ್ ಬಳಕೆಯ ಗಮನಿಸಲು

ನಾವು ವಾಹನಕ್ಕೆ ಮೀಟರ್ ಅಳವಡಿಸುತ್ತೇವೆ. ಪ್ರಯಾಣಿಸುವಾಗ ಆಗಾಗ ಅದರ ಮೇಲೆ ಗಮನಿಸುತ್ತೇವೆ. ವೇಗ ಹೆಚ್ಚಾಯಿತು ಎನ್ನಿಸುವಾಗ ನಿದಾನಿಸುತ್ತೇವೆ. ಪೆಟ್ರೊಲ್ ಮೈಲೇಜಿನ ಬಗೆಗೆ ಕಣ್ಣಿಡುತ್ತೇವೆ.


ಇದೇ ರೀತಿಯ ಕಾಳಜಿ ನಮ್ಮ ವಿದ್ಯುತ್ ಉಪಯೋಗದ ಬಗೆಗೆ ನಾವು ತೋರಿಸುವುದಿಲ್ಲ. ತೋರಿಸಲು ಸಾದ್ಯವಾಗುವುದೂ ಇಲ್ಲ. ವಿದ್ಯುತ್ ಅಳೆಯುವ ಹತ್ಯಾರುಗಳೂ ನಮ್ಮಲ್ಲಿ ಹುಡುಕುವುದೇ ಕಷ್ಟ.   ಬಳಕೆ ಬಗೆಗೆ ನಮಗೆ ಈಗ ಚಿತ್ರಣ ಸಿಗುವುದು ವಿದ್ಯುತ್ ಮಾಪಕ ಓದುವವರು ಬಂದು ಬಿಲ್ ಕೊಡುವಾಗಲೇ. ಬದಲಾಗಿ  ಉಪಯೋಗದ  ಬಗ್ಗೆ  ಕ್ಷಣ ಕ್ಷಣಕ್ಕೂ ಚಿತ್ರಣ ಸಿಕ್ಕರೆ ಖಂಡಿತ ಉಳಿತಾಯ ಸಾದ್ಯ.

ಈ ಮದ್ಯೆ ನಾನು ಅಮೇರಿಕದಲ್ಲಿ ಸಿಗುವ ಒಂದು ಮೀಟರ್ ಬಗ್ಗೆ ಕುಶಿ ಪಟ್ಟು ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಎರಡು ಹಂತದಲ್ಲಿ ಅಬಿವೃದ್ದಿ ಹೊಂದಿದ ಸಲಕರಣೆ ಎನ್ನಬಹುದು. ಮೊದಲಿಗೆ ನೇರವಾಗಿ ಲೈನಿಗೆ ಸಿಕ್ಕಿಸುವ ಒಂದು ಮೀಟರ್ ಬಂತು. ಅದು ಹೆಚ್ಚು ಸುದಾರಣೆಗೊಂಡ ನಮ್ಮಲ್ಲಿರುವ ಅಂಪ್ಸ್-ಮೀಟರಿಗೆ ಹೋಲಿಸಬಹುದು.

ಎರಡನೇಯ ತಲೆಮಾರಿನ ಸುದಾರಣೆಯಲ್ಲಿ  ಮೇಲಿನ ಚಿತ್ರದಲ್ಲಿರುವಂತೆ  ನಿಮ್ಮ ಮೀಟರ್ ಮೇಲೆ    ಒಂದು ಚಿಕ್ಕ ಮಾಹಿತಿ ಸಂಗ್ರಾಹಕ ಮತ್ತು ಮನೆಯಲ್ಲಿ ಅನುಕೂಲವಿರುವಲ್ಲಿ ಅಳವಡಿಸುವ ಕೆಳಗಿನ  ಚಿತ್ರದಲ್ಲಿರುವಂತಹ   ಡಿಸ್ ಪ್ಲೆ.   ಕಾರ್ಡ್ ಲೆಸ್ ಪೋನ್ ಕೆಲಸ ಮಾಡುವಂತೆ ಸಂಗ್ರಾಹಕದಿಂದ ಮಾಹಿತಿ ನಿರಂತರವಾಗಿ ಹರಿದು ಬರುತ್ತದೆ. ಇದನ್ನು ನಮಗೆ ಅನುಕೂಲವಾಗುವ ಗೋಡೆಯಲ್ಲಿ ಅಳವಡಿಸಬಹುದು, ಮೇಜಿನ ಮೇಲೆ ಇಡಬಹುದು.  ಒಮ್ಮೆ ಇದನ್ನು ನೋಡಲು ನಾವು ಆ ಕ್ಷಣ ಉಪಯೋಗಿಸುವ ವಿದ್ಯುತ್ ಘಂಟೆಗೆ ಎಷ್ಟು ಹಣವಾಗುತ್ತದೆ ಎನ್ನುವುದನ್ನೊ ಅದು ಸ್ಪಷ್ಟವಾಗಿ ತೋರಿಸುತ್ತದೆ. ಸ್ವಾಬಾವಿಕವಾಗಿ   ಪೋಲಾಗುವಲ್ಲಿ   ಬ್ರೇಕ್  ಹಾಕಲು  ಅರಿವು ಹಾಗೂ   ಪ್ರೇರಣೆ  ದೊರಕುತ್ತದೆ. 

ಅಮೇರಿಕದಲ್ಲಿ ಇದರ ಬೆಲೆ ಸುಮಾರು ಐದು ಮುಕ್ಕಾಲು ಸಾವಿರ ರೂಪಾಯಿ ಅನ್ನಬಹುದು ( USD 135) ಅಲ್ಲಾದರೆ ಉಳಿತಾಯವೇ ಈ ಹಣವನ್ನು ದುಡಿದುಕೊಡುತ್ತದಂತೆ.  ನಮ್ಮಲ್ಲೂ   ಇದು  ಕೈಗೆಟಕುವ  ಬೆಲೆಗೆ   ಬೇಗನೆ  ಸಿಗುವಂತಾಗಲಿ. 

ವಿವರಗಳಿಗೆ : http://fivepercent.us/2008/07/28/cent-a-meter-centometer-or-power-cost-meter-pays-for-itself/

Tuesday, July 22, 2008

ಪ್ರವಾಸಿಯ ಸಂಪರ್ಕ ಅವಕಾಶ

ಅಂದು ಪ್ರಪಂಚಕ್ಕೊಂದು ಸುತ್ತು ಸೈಕಲಿಸುವಾಗ ನನಗೆ ಸಂಪರ್ಕ ಅವಕಾಶಗಳು ಬಹಳ ಕಡಿಮೆಯಿತ್ತು. ಮನೆಯವರೊಡನೆ ಆಗಾಗ ಪತ್ರಗಳು ವಿನಿಮಯವಾದರೂ ಊರ ಪತ್ರಗಳಲ್ಲಿ ಬರೇ ಹಳೆಯ ಸುದ್ದಿಗಳೇ ತುಂಬಿರುತಿತ್ತು ಎಂದರೂ ಸರಿ. ನಾನು ಹೋಗುವ ದಾರಿ ವೀಸಾ ಸಿಕ್ಕಿ ನಿರ್ದಾರಿತವಾದ ತಕ್ಷಣ ನನ್ನಪ್ಪನಿಗೆ ಪತ್ರಿಸಿ ಆಯಾ ಊರಿನ ವಿಳಾಸ ಮತ್ತು ತಲಪುವ ದಿನ ತಿಳಿಸುತ್ತಿದ್ದೆ. ಅವರು ಮುಂದಾಗಿ ಬರೆದ ಪತ್ರ ಆ ಊರಿನಲ್ಲಿ ನನಗೆ ಕಾಯುತ್ತಿತ್ತು. ಮೊದಲಾಗಿ ಸಂಪರ್ಕಿಸಿದ ಸ್ಥಳೀಯರು ಇದ್ದರೆ ಸುಲಭ. ಇಲ್ಲವಾದರೆ ಗುರುತು ಹಾಜಿರು ಪಡಿಸಿ ಆ ಊರಿನ ನಿರ್ದಿಷ್ಟ ಅಂಚೆ ಕಛೇರಿ ಅಥವಾ ಅಮೇರಿಕನ್ ಎಕ್ಷ್ ಪ್ರೆಸ್ಸ್ ಪ್ರವಾಸಿ ಹಣದ ಕಛೇರಿಗಳನ್ನು ಅವಲಂಬಿಸುತ್ತಿದ್ದೆ. ಅದು ಹಕ್ಕಿಗೆ ಗುಂಡು ಇಡುವಂತೆ ಮುಂದಾಗಿ ತಲಪಿದರೆ ಮಾತ್ರ ನನಗೆ ದೊರಕುವುದು. ಅಂತೂ ಹೆಚ್ಚಿನ ಪತ್ರ ಬರೆದು ಮೂರು ನಾಲ್ಕು ವಾರ ಕಳೆದು ನಾನು ಓದುತ್ತಿದ್ದೆ.

ಹೊರಹೋಗುವಾಗ ಒಂದಷ್ಟು ಹದಿನೈದು ಪೈಸೆಯ ಅಂಚೆ ಕಾಗದ ಒಯ್ದಿದ್ದೆ. ರಾಯಬಾರಿ ಕಛೇರಿಗಳ ಸಿಬಂದಿಗೆ ಒಂದು ಸೌಲಬ್ಯ ಇರುತ್ತದೆ -ಸರಕಾರಿ ಟಪಾಲಿನೊಟ್ಟಿಗೆ ಅವರ ವೈಯುಕ್ತಿಕ ಪತ್ರಗಳ ಬಾರತಕ್ಕೆ ರವಾನೆ. ಇದರ ಸುಳಿವು ಸಿಕ್ಕ ನಾನು ಹಲವು ಸಲ ಊರಿಗೆ ರಾಯಬಾರಿ ಕಛೇರಿಗಳ ಮೂಲಕ ಸರಕಾರಿ ಅದಿಕೃತ ಚೀಲದಲ್ಲಿ ರವಾನಿಸಿದ್ದುಂಟು. ಅದನ್ನು ವಿದೇಶಿ ಸಚಿವಾಲಯದ ಸಿಬ್ಬಂದಿ ದೆಹಲಿಯಲ್ಲಿ ಅಂಚೆಗೆ ಹಾಕುತ್ತಾರೆ. ಆದರೆ ಮಾಮೂಲಿ ಪ್ರವಾಸಿ ಊರುಗಳ ರಾಯಬಾರಿ ಕಛೇರಿಗಳಲ್ಲಿ ಅದಿಕಾರ ದರ್ಪ ತೋರಿಸಿ ಇದಕ್ಕೆ ನಿರಾಕರಿಸುವವರೂ ಇರುತ್ತಾರೆ. .

ಅಮೇರಿಕದ ಗ್ರಾಮೀಣ ಪ್ರದೇಶದಲ್ಲಿ ಪತ್ರವನ್ನು ಅಂಚೆಗೆ ಹಾಕುವುದೊಂದು ಸಾಹಸ. ಅಲ್ಲಿ ಸಾರ್ವಜನಿಕ ಅಂಚೆ ಪೆಟ್ಟಿಗೆಗಳು ಕಡಿಮೆ. ಪ್ರತಿ ಮನೆಯ ಮುಂದೆ ಅವರವರ ವೈಯುಕ್ತಿಕ ಅಂಚೆ ಪೆಟ್ಟಿಗೆಯಿದ್ದು ಅಂಚೆಯಾಳು ಬಂದು ಇವರಿಗಿರುವ ಪತ್ರಗಳ ಹಾಕಿ ಅದರಲ್ಲಿರುವ ಪತ್ರಗಳ ಪಡಕೊಂಡು ಮುಂದೆ ಹೋಗುತ್ತಾರೆ. ನಾನು ಹಾಗೆ ಯಾರದೋ ಪೆಟ್ಟಿಗೆಯಲ್ಲಿ ಹಾಕಿದರೆ ಅಂಚೆಯಾಳಿನ ಬದಲು ಮನೆಯವರ ಕೈಗೆ ಸಿಕ್ಕರೆ ಅದನ್ನು ಎಸೆದು ಬಿಟ್ಟಾರೆಂದು ಅಳುಕು. ಹಾಗೆ ದೂರ ದೂರದಲ್ಲಿರುವ ಅಂಚೆಪೆಟ್ಟಿಗೆಯ ಹುಡುಕಾಟ ಅನಿವಾರ್ಯ.


ಹಲವು ಜನ ನನ್ನ ಅತಿಥೇಯರು ನಾನು ದಾಟಿ ಮುಂದೆಹೋದ ಅನಂತರ ನಮ್ಮ ಮನೆಗೆ ಪತ್ರಿಸಿದ್ದಾರೆ. ನಿಮ್ಮ ಹುಡುಗ ನಮ್ಮಲ್ಲಿದ್ದು ಈಗ ಮುಂದೆ ಹೋಗಿದ್ದಾನೆ. ಅವನ ಅರೋಗ್ಯ ಒಕೆ. ಅಗತ್ಯವಿದ್ದರೆ ನಮ್ಮ ಸಹಾಯ ಲಬ್ಯ ಎಂದು ಅವನಿಗೆ ಗೊತ್ತು. ಆದರೆ ಅವನಿಗೆ ನಮ್ಮ ಸಹಾಯವಿಲ್ಲದೆ ನಿಬಾಯಿಸಲು ಸಾದ್ಯವೆಂದು ನಮಗೆ ವಿಶ್ವಾಸವಿದೆ ಎನ್ನುವ ಪತ್ರ ನಮ್ಮ ಮನೆಯವರಿಗೆ ಕೊಟ್ಟ ದೈರ್ಯ ಅಪಾರ. ಕೆಲವು ಕಡೆ ಅತಿಥೇಯರು ನನ್ನಲ್ಲಿ ಬೇಕಾದರೆ ನಮ್ಮಲ್ಲಿಂದ ನಿನ್ನ ಮನೆಗೆ ಫೋನಿಸು ಎನ್ನುವ ದಾರಾಳತನ ತೋರಿದರೂ ನಿಮ್ಮ ಕೊಡುಗೆಗೆ ದನ್ಯವಾದ ಆದರೆ ನಮ್ಮ ಮನೆಯಲ್ಲಿ ಫೋನಿಲ್ಲ ಎಂದು ನಯವಾಗಿ ತಿರಸ್ಕರಿಸಬೇಕಾಗಿತ್ತು.

ಊರಲ್ಲಿ ಹಲವಾರು ಗೆಳೆಯರು ನನ್ನ ಕಳಿಸಿಕೊಡುವುದಕ್ಕೆ ಸಹಾಯ ಮಾಡಿದ್ದರು. ಅವರಿಗೂ ಆಗಾಗ ಪತ್ರಿಸಲು ಯೋಚಿಸುತ್ತಿದ್ದೆ. ಅಂಚೆ ವೆಚ್ಚ ದುಬಾರಿ ಎನ್ನುವುದು ತಡೆಯಾಗಿತ್ತು. ಆಗ ಒಂದು ಸಾಮೂಹಿಕ ಪತ್ರ ತಯಾರು ಮಾಡಿ ಅದನ್ನು   ಕ್ಷೆರಾಕ್ಷ್   ಮಾಡಿಸಿ      ಎಲ್ಲಕ್ಕೂ ಕೊನೆಗೂ ಮೊದಲಿಗೂ ವೈಯುಕ್ತಿಕವಾಗಿ  ನಾಲ್ಕು  ಮಾತು  ಮತ್ತು   ವಿಳಾಸ   ಗೀಚಿ ಒಟ್ಟಿಗೆ ಊರಿಗೆ ಪಾರ್ಸೆಲ್ ಕಳುಹಿಸುತ್ತಿದ್ದೆ. ನಮ್ಮಪ್ಪ ಅದಕ್ಕೆ ಆಂಚೆ ಚೀಟಿ ಅಂಟಿಸಿ ಅಂಚೆಗೆ ಹಾಕುತ್ತಿದ್ದರು. ಇಂದಾದರೆ ಬ್ಲೋಗ್ ಬರೆದರೆ ಸಾಕಿತ್ತು.   ಪಿಜ್ಜಾ  ತಿಂದದ್ದು    ಜೀರ್ಣವಾಗುವಾಷ್ಟರಲ್ಲಿ  ಸುದ್ದಿ  ಎಲ್ಲರಿಗೂ  ತಿಳಿಯಲು  ಸಾದ್ಯ.    ಇದರಿಂದ ಸಾಕಷ್ಟು ಪ್ರಚಾರ ಹಾಗೂ ಅಗತ್ಯದ ಸಹಾಯ ಲಬಿಸುತಿತ್ತು.


ಇಪ್ಪತ್ತು ವರ್ಷ ಹಿಂದಿನದಕ್ಕೂ ಇಂದಿಗೂ ಹೋಲಿಸಿದರೆ ಸಂಪರ್ಕ ವಿಚಾರದಲ್ಲಿ ಜಗತ್ತು ಬಹಳಷ್ಟು ಮುಂದುವರಿದಿದೆ. ಈಗ ಒಂದು ಕಮೆರಾ, ಲಾಪ್ ಟೋಪ್ ಮತ್ತು ಮೊಬೈಲ್ ಫೋನ್ ಇದ್ದರೆ ಪ್ರಪಂಚದ ಹೆಚ್ಚಿನ ಜಾಗಗಳಿಂದ ನಿರಂತರ ಪತ್ರ ವ್ಯವಹಾರ ಮಾತ್ರವಲ್ಲ ಮಾತನಾಡಲು ಹಾಗೂ ಪೊಟೊ ಕಳಿಸಲು ಸಾದ್ಯ. . ಹೆಚ್ಚಿನ ಎಲ್ಲ ದೇಶಗಳ ಸಿಮ್ ಬಾರತದಲ್ಲೇ ಸಿಗುತ್ತದೆ. ಅದುದರಿಂದ ಸಂಪರ್ಕಕ್ಕೆ ಇಲ್ಲೆಯೇ ಅಡಿಪಾಯ ಹಾಕಬಹುದು. ಆದರೆ ಬಾರತದಲ್ಲಿಯೇ ಉಳಿದೆಡೆಯ ಕೆಲವು ಸಿಮ್ ಕಾಶ್ಮೀರದಲ್ಲಿ ಕೆಲಸ ಮಾಡುವುದಿಲ್ಲ ಎನ್ನುವ ರೀತಿಯ ಪರಿಮಿತಿಯ ಸುಳಿವುಗಳಿಗೆ ನಾವು ಕಣ್ಣಿಡಬೇಕಾಗುತ್ತದೆ.

ಸೈಕಲು ಪ್ರವಾಸಿಗೆ ಪುಟ್ಟದಾದರೂ ಕಂಪ್ಯುಟರ್ ಹೊರುವುದು ಕಷ್ಟ ಮತ್ತು ಅಪಾಯಕಾರಿ. ಆಗ ಸಹಾಯಕ್ಕೆ ಬರುವಂತಹ ಸೈಬರ್ ಕೇಫ್ ಈಗ ಹೆಚ್ಚಿನ ಎಲ್ಲ ದೇಶಗಳಲ್ಲೂ ಕಾಣಸಿಗುತ್ತದಂತೆ. ಚೀನಾದಲ್ಲಿ ಸೈಬರ್ ಕೇಫ್ ಕಿಬೋರ್ಡ ಎಷ್ಟು ಗಲೀಜೆಂದರೆ ಗ್ಲೌಸ್ ಹಾಕ್ಕೊಳ್ಳೋದು ಉತ್ತಮ ಎನ್ನುತ್ತದೆ ಪ್ರವಾಸಿ ಮಾಹಿತಿ. ಆದರೂ ಸೌಲಬ್ಯಗಳು ಸಿಗುತ್ತವೆ ಎನ್ನುವುದು ಬದಲಾವಣೆಯ ಲಕ್ಷಣ. ಸೈಕಲ್ ಪ್ರವಾಸ ಎಂದರೆ ತುಳಿಯುವುದು ಅಗತ್ಯವಾದರೂ ಉಳಿದ ವಿಚಾರಗಳು ಬಹಳ ಮುಂದುರಿದುದು ಸಂತಸದ ವಿಚಾರ.