Showing posts with label products. Show all posts
Showing posts with label products. Show all posts

Monday, August 17, 2009

ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೊರಟಿದ್ದ ಶಾರುಖ್

ಶಾರುಖ್ ಖಾನ್ ಹೆಸರಿನ ಹಿಂದಿ ಚಿತ್ರನಟ ಇನ್ನೆಂದೂ ಅಮೇರಿಕಕ್ಕೆ ಕಾಲು ಇಡಬಾರದು ಅನ್ನಿಸುತ್ತೆ ಎಂದು ನಿನ್ನೆ ಹೇಳಿದ. ಈಗ ಅವನ ಹಿಂದಿನ ವರ್ತನೆ ನೆನಪಿಸಿಕೊಳ್ಳುವ ಕಾಲ. ಬರೇ ಮೂರು ವರ್ಷ ಹಿಂದೆ If Pepsi is banned in India, I would go to the US and drink it ಎಂದು ಈ ನಟ ಟಿವಿ ಎದುರುಗಡೆ ಹೇಳಿ ಕೊಂಡಿದ್ದ.

ಮೂರು ವರ್ಷ ಹಿಂದೆ ನೀರನ್ನು ಸರಿಯಾಗಿ ಶುದ್ದಿಕರಿಸದೆ ತಂಪು ಪಾನಿಯ ತಯಾರಿಸಲಾಗುತ್ತಿದೆ ಎಂದು ಸಾಕ್ಷಿ ಸಮೇತ ಪರಿಸರವಾದಿ ಪತ್ರಕರ್ತೆ ಸುನಿತಾ ನಾರಾಯಣ ಮುಂದಾಳತ್ವದಲ್ಲಿ ಜನಜಾಗೃತಿ ಆಂದೋಲನ ನಡೆಯುತಿತ್ತು. ಈ ಆಂದೋಲನದ ವಿರುದ್ದ ಮಾತನಾಡಿದ ಶಾರುಖ್ ಎಂದೂ ಸಾರ್ವಜನಿಕ ಹಿತಾಸಕ್ತಿ ಕಾರ್ಯದಲ್ಲಿ ತೊಡಗಿಸಿಕೊಂಡವನಲ್ಲ.

ಸತ್ಯಕ್ಕೆ ಸಾಕ್ಷಿ ಬೇಕು, ಸುಳ್ಳು ಹಾಗೆ ಚಲಾವಣೆ ಸಾದ್ಯ ಎನ್ನುವಂತೆ ಕೋಟಿಗಟ್ಟಲೆ ರೂಪಾಯಿ ಪೆಪ್ಸಿ ಕಂಪೇನಿಯಿಂದ ಪಡೆಯುತಿದ್ದ ಈ ನಟನ ಮೂರ್ಖತನದ ಮಾತು ಬಾರತದ ಜನತೆಗೆ ದ್ರೋಹ. ಸಿನೆಮಾ ನಟರು ಕುಡಿಯುತ್ತಾರೆ ಮತ್ತು ಭಾರತದಲ್ಲಿ ಇತರ ಅಹಾರ ಪದಾರ್ಥಗಳು ಮಲೀನಗೊಂಡಿವೆ ಎನ್ನುವ ದಿಕ್ಕು ತಪ್ಪಿಸುವ ಬಣ್ಣದ ನೀರಿನ ಸಂಸ್ಥೆಗಳ ಪ್ರಚಾರದ ಮುಂಚೂಣಿಯಲ್ಲಿ ಇವನಿದ್ದ. ಸದಾ ಹೊಗೆ ಬಿಡುವ ಮತ್ತು ಸಿನೆಮದಲ್ಲಿ ದೂಮಪಾನ ಅವಕಾಶ ಇರಬೇಕು ಎನ್ನುವ ಈ ನಟ ಯುವಜನರಿಗೆ ಕೆಟ್ಟ ಮಾದರಿ.

ನಮ್ಮ ಮೆಚ್ಚಿನ ಮಾಜಿ ಅದ್ಯಕ್ಷ ಡಾ|  ಅಬ್ದುಲ್ ಕಲಾಂ ಅವರಂತೆ ಪ್ರಶ್ನಾತೀತ ವ್ಯಕ್ತಿ ಆಗಿದ್ದರೆ ಬೇರೆ ಮಾತು.   ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೋಗಲು ತಯಾರು ಇರುವಂತಹ ವ್ಯಕ್ತಿ ಅಲ್ಲಿನ ಸರಕಾರ ಕೈಗೊಳ್ಳುವ ಚಿಲ್ಲರೆ ತಪಾಸಣೆಯನ್ನು ಆಕ್ಷೇಪಿಸುವಂತಿಲ್ಲ. ಸರಿಯಾಗಿ ಕಾಸು ಕೊಟ್ಟರೆ ಇಂತವರು ಬಾಂಬು ಕೊಂಡೊಯ್ಯಲೂ ತಯಾರು. ಅತಿ ಹೆಚ್ಚು ಹಣಕ್ಕೆ ನಿಷ್ಟೆಯನ್ನು ಮಾರಲು ಸಿದ್ದನಿರುವ ಇವರ ಬಗೆಗೆ ನಾವು ಅನುಕಂಪ ಸೂಚಿಸುವುದೂ ತಪ್ಪಾಗುತ್ತದೆ.

Friday, July 10, 2009

ಗೂಗಲ್, ಕೂಗಲ್ ಮತ್ತು ಹಲಾಗಲ್

ಮದ್ಯಪೂರ್ವದ  ಮರಳುಕಾಡಿನಲ್ಲಿ ಹುಟ್ಟಿದ ಜನಾಂಗಗಳು ಮೂರು. ಅವರೊಳಗೆ ಹೆಚ್ಚಿನ ವಿಚಾರದಲ್ಲಿ ಸ್ಪರ್ಧಾತ್ಮಕ ಮನೋಭಾವ. ಇಸ್ರೇಲಿನಲ್ಲಿ ದರ್ಮಶಾಸ್ತ್ರ ಸಮ್ಮತಿಸುವಂತಹ ಅಂತರ್ಜಾಲ ಹುಡುಕಾಟಕ್ಕೆ ಕೂಗಲ್ ಎನ್ನುವ ಗೂಗ್ಲ್ ಪರ್ಯಾಯವನ್ನು ಯಹೂದಿಯರು ಹುಟ್ಟುಹಾಕಿದ್ದಾರೆ. ಈಗ ಯಹೂದಿಯರು ನಮ್ಮನ್ನು ಸೋಲಿಸಿಯೇ ಬಿಟ್ಟರಲ್ಲ ಎನ್ನುವ ಬಾವನೆ ಮೂಲಭೂತವಾದಿ ಮುಸ್ಲೀಮರಲ್ಲಿ ಆವರಿಸಿದೆ.



ಯಹೂದಿಯರ ದರ್ಮ ಒಪ್ಪುವ ಆಚರಣೆಗಳ ಆಹಾರಗಳ ಕೋಷರ್ ಎನ್ನುತ್ತಾರೆ. ಎಲ್ಲವೂ ಅಂತರ್ಜಾಲಮಯ ಎನ್ನುವ ಈ ದಿನಗಳಲ್ಲಿ ಅವರ ದಾರ್ಮಿಕ ಮುಖಂಡರು ಒಪ್ಪುವಂತಹ ತಾಣಗಳ ಮಾತ್ರ ಹುಡುಕಿ ಪ್ರದರ್ಶಿಸುವ ತಾಣ ಕೂಗಲ್  . ಕೊಶರ್ ಮತ್ತು ಗೂಗ್ಲ್ ಪದಗಳ ಜತೆ ಸೇರಿಸಿರುವ ಹಣೆಬರಹ ಹೊತ್ತಿರುವ ಈ ತಾಣದಲ್ಲಿ ದೇವರಿಗೆಂದು ಮೀಸಲಾದ ಶುಕ್ರವಾರ ಸೂರ್ಯಾಸ್ಥದಿಂದ ಶನಿವಾರ ಸೂರ್ಯೋದಯ ವರೆಗೆ ವ್ಯವಹಾರ ನಡೆಯುವುದಿಲ್ಲ



ಯಹೂದಿಯರಿಗೆ ಜಾತಿ ವಿರೋದಿ ನಡುವಳಿಕೆಯ ಅಂದರೆ ಅರೆ ಬತ್ತಲೆ ಹೆಂಗಸರ ಚಿತ್ರಗಳಂತಹ ವಸ್ತುಗಳು ಮತ್ತು ಸಂಪರ್ಕ ಕೊಂಡಿಗಳ ನೀವು ಆ ತಾಣದಲ್ಲಿ ಕಾಣಲು ಸಾದ್ಯವಿಲ್ಲ. ಟೆಲಿವಿಶನ್ ತರಹ ನಿರ್ಬಂದಿತ ವಸ್ತುಗಳಿಂದ ದೂರವಿರಲು ಪ್ರಯತ್ನಿಸಲಾಗುತ್ತದೆ. ಈಗಾಗಲೇ ತಿಂಗಳಿಗೆ ಲಕ್ಷ ಜನ ಬೇಟಿ ನೀಡುವರೆನ್ನುವುದು ಕಳೆದ ತಿಂಗಳ ವರದಿ.


ಕೋಶರ್ ಎಂದರೆ ನಮಗೆ ಪರಿಚಿತ ಮುಸ್ಲಿಮರ ಹಲಾಲ್ ಪದದ ಯಹೂದಿ ರೂಪ. ಹಲವು ಸಮಾನ ಆಚರಣೆಗಳು. ಮುಸ್ಲೀಮರು ಬಹು ಮಟ್ಟಿಗೆ ಕೋಷರ್ ಆಹಾರ ಹಲಾಲಿಗೆ ಸಮಾನವೆಂದು ಸಮ್ಮತಿಸುವುದಾದರೂ ಯಹೂದಿಯರಿಗೆ ಹಲಾಲ್ ಆಹಾರ ಅವರ ರಾಬ್ಬಿಗಳು ಅಂದರೆ ದರ್ಮ ಪಂಡಿತರು ಸಮ್ಮತಿಸುವುದಿಲ್ಲ. ಅವರ ಮಾನದಂಡಗಳು ಇನ್ನೂ ಕ್ಲಿಷ್ಟ.


ಈಗ ಯೋಜಿತ ಹಂತದಲ್ಲಿರುವ  ಹಲಾಗಲ್  ಹಲಾಲ್ + ಗೂಗಲ್   ಬಗೆಗೆ ಗಮನ ಹರಿಸೋಣ. ಹಲಾಲ್ ತಂತ್ರಜ್ನರ ಸಮಸ್ಯೆ ಅಷ್ಟು ಸರಳವಲ್ಲ. ಮುಸ್ಲಿಂ ಜನ ಹಲವಾರು ಪಂಗಡಗಳು ಹಾಗೂ ಆಚರಣೆಯೊಂದಿಗೆ ಪ್ರಪಂಚದಲ್ಲಿ ಹಂಚಿಹೋಗಿದ್ದಾರೆ. ಹೋಲಿಸಿದರೆ ಯುಹೂದಿಯರ ಸಂಖ್ಯೆ ಮತ್ತು ಪಂಗಡಗಳು ಎರಡೂ ಕಡಿಮೆ. ಅದುದರಿಂದ ನಿರ್ಬಂದಗಳು ಸಿಮಿತ. ಹೀಗೆ ಕೋಶರ್ ತಂತ್ರಜ್ನರು ಸುಲಭವಾಗಿ ಗೆದ್ದರು.

ಹೊಸ ಜಾಲದಲ್ಲಿ ಕಾಣುವ ಮಾಲುಗಳು ಸೇವೆಗಳು ಎಷ್ಟರ ಮಟ್ಟಿಗೆ ಹಲಾಲ್ ಎನ್ನುವ ಸುಳಿವು ತೋರಿಸುವ   ಪ್ರಯತ್ನ ಇದೆಯಂತೆ. ಹಸಿರು ಸೂಚನೆ ಪಕ್ಕಾ ಹಲಾಲ್,  ಕೇಸರಿ ಪರವಾಗಿಲ್ಲ ಕೆಂಪು ಮಾರ್ಕಿದ್ದರೆ ಹೆಚ್ಚು ಕಮ್ಮಿ ಹರಾಮ್ ಮಾಲು. ದೂರವಿಡಿ ಎನ್ನುವ ಎಚ್ಚರಿಕೆ.   ಮತ್ತೆ ನಿಮ್ಮಿಷ್ಟ ಎನ್ನುವ ಕೊನೆಯ ಮಾತು. ಹಲಾಲ್ ಮಾಂಸ, ಹಲಾಲ್ ತಿಂಡಿಗಳು, ಹಲಾಲ್ ಬಾಂಕು ಉಮ್ರಾ ಪ್ರವಾಸ ಇವುಗಳ ಜಾಹಿರಾತುಗಳು ಮಾತ್ರ ಪುಟಿದೇಳುವುದಂತೆ. ಮೆಕ್ಕಾಗೆ ಮುಖ ಮಾಡಿ ಪ್ರಾರ್ಥನೆ ಮಾಡುವ ಸಮಯದಲ್ಲಿ ಇದು ಸ್ಥಬ್ದ.

ಇನ್ನು ನಮ್ಮ ಬಜರಂಗಿಗಳು ಸುಮ್ಮನಿರುವುದಾದರು ಹೇಗೆ ? ಹಿಂದೂ ರಾಷ್ಟ್ರಕ್ಕೆ ಅನುಗುಣವಾಗಿ ಒಂದು ಜಾಲ ಸ್ಥಾಪಿಸುತ್ತಿದ್ದರು. ನಸೀಬು ಚೆನ್ನಾಗಿಲ್ಲದೆ ಇದನ್ನು ಬೆಂಬಲಿಸಬಹುದಾದ ಪಕ್ಷದವರು ಸೋತಿದ್ದಾರೆ.

Friday, June 12, 2009

ತೆಂಗಿನೆಣ್ಣೆ ಹಿಂಡಲು ಮಾಂಸಹಾರಿ ವಿಧಾನ

ಸೇವಾಗ್ರಾಮದ ಗಾಂಧಿ ಆಶ್ರಮ science for villages ಎನ್ನುವ ಪಾಕ್ಷಿಕ ಪ್ರಕಟಿಸುತಿತ್ತು. ನಾನು ಅದರ ಖಾಯಂ ಓದುಗನಾಗಿದ್ದೆ. ಹಲವು ಕೂತೂಹಲಕರ ಪ್ರಯೋಗಗಳು  ಅದರಲ್ಲಿ  ಇದ್ದವು.   ಇಪ್ಪತ್ತೋಂದು ವರ್ಷ ಹಿಂದೆ ಎಪ್ರಿಲ್ 1988 ರ ಸಂಚಿಕೆಯಲ್ಲಿ ಇಂಡೋನೇಶ್ಯದಲ್ಲಿ ಚಲಾವಣೆ ಇರುವ ತೆಂಗಿನ ಕಾಯಿಯಿಂದ ಎಣ್ಣೆ ಬೇರ್ಪಡಿಸುವ ವಿಧಾನ ಪ್ರಕಟವಾಗಿತ್ತು. ಪತ್ರಿಕೆ  ರದ್ದಿಗೆ ಸೇರುವಾಗ ಒಂದು ಪ್ರತಿ ಇರಲೆಂದು ಇಟ್ಟುಕೊಂಡೆ. ಜಗತ್ತಿನಲ್ಲಿ  ಒಂದೆಡೆ  ತೆಂಗಿನಕಾಯಿ  ಬೆಳೆಯುವಲ್ಲಿ   ಇಂತಹ ವಿಧಾನ ಚಾಲ್ತಿಯಲ್ಲಿತ್ತು ಎನ್ನುವ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಹೊರತು ಇದು ಪ್ರಾಯೋಗಿಕ ಎಂದಲ್ಲ.



ಸರಳವಾಗಿ  ಹೇಳುವುದಾದರೆ   ನದಿಯಲ್ಲಿರುವ ಏಡಿಯನ್ನು ಹಿಡಿದು ಅದರ ಚಿಪ್ಪನ್ನು ಬೇರ್ಪಡಿಸಿ ಪುಡಿಮಾಡಬೇಕಂತೆ. ಅನಂತರ ಅದನ್ನು ತೆಂಗಿನ ತುರಿಯೊಂದಿಗೆ ಮಿಶ್ರ ಮಾಡಿ ಒಂದು ರಾತ್ರಿ ಬಿಡಬೇಕು. ಮರುದಿನ ಬೆಳಗಾಗುವಾಗ ಅ ಮಿಶ್ರಣ ಕೆಂಬಣ್ಣದ ತೈಲಮಯವಾಗಿರುತ್ತದೆ. ಪ್ಲಾಸ್ಟೀಕ್ ಹಾಳೆಯಲ್ಲಿ ಮೂರುನಾಲ್ಕು ಘಂಟೆ ಒಣಗಿಸಿ ಎಣ್ಣೆ ಹಿಂಡಬೇಕು ಅನ್ನುತ್ತದೆ ಲೇಖನ. ವಿವರಕ್ಕೆ ಮೂಲ ಲೇಖನವನ್ನು ಜತೆಗಿರಿಸಿದ್ದೇನೆ. ಈಗ virgin coconut oil ಎನ್ನುವ ಹೊಸ ಸ್ವರೂಪವೂ ನಮ್ಮ ಮುಂದಿದೆ. ಈ ಎಣ್ಣೆ ಯಾವ ವರ್ಗಕ್ಕೆ ಸೇರಿದ್ದೆಂದು ದಯವಿಟ್ಟು ಪ್ರಶ್ನಿಸಬೇಡಿ. ನನಗೂ ಗೊತ್ತಿಲ್ಲ.ಇದು  ಸೇರುವುದು   ಸಸ್ಯಹಾರಕ್ಕೋ   ಮಾಂಸಹಾರಕ್ಕೋ   ಅನ್ನುವುದು  ಸಹಾ  ಗೊತ್ತಿಲ್ಲ.

Monday, May 18, 2009

ರೇವ ಎಂಬ ಗಗನಕುಸುಮ


 ಇತ್ತೀಚೆಗೆ ಲಂಡನಿನ ಮೇಯರ್ ವಿದ್ಯುತ್ ವಾಹನಗಳ ಬಗೆಗೆ ೩೦ ಮಿಲಿಯ ಡಾಲರ್ ಯೋಜನೆಯನ್ನು ಅನಾವರಣಗೊಳಿಸಿದರು. ಆ ಪಟ್ಟಣದಲ್ಲಿ ಒಂದು ಲಕ್ಷ ವಿದ್ಯುತ್ ಕಾರುಗಳು ಮತ್ತು ೨೫೦೦೦ ಕಾರುಗಳ ಚಾರ್ಜ್ ಮಾಡುವ ವ್ಯವಸ್ಥೆಯನ್ನು ೨೦೧೫ರ ಮೊದಲು ಅನುಷ್ಟಾನಗೊಳಿಸುವ ಗುರಿ ಹೊಂದಿದ್ದಾರೆ. ನಂತರದ ವಾರದಲ್ಲಿ ಅಲ್ಲಿನ ಕೆಂದ್ರ ಸರಕಾರ ವಿದ್ಯುತ್ ಚಾಲನೆ ವಾಹನಗಳಿಗೆ ಮೂರುವರೆ ಲಕ್ಷ ರೂಪಾಯಿವರೆಗಿನ ಸಹಾಯದನವನ್ನು ಘೋಷಿಸಿತು. ಅದನ್ನು ಕಂಡ ನನಗೆ ತುಂಬಾ ಕುಶಿಯ ಜತೆ ನಮ್ಮ ಸರಕಾರಗಳ ನಿರ್ಲಕ್ಷತೆ ಬಗೆಗೆ ಬೇಸರ ಮೂಡಿತು.

ಹೆಚ್ಚಿನ ಗ್ರಾಹಕರು ವಾಹನ ಖರೀದಿ ಮಾಡುವಾಗ ಇಂದನದ ವೆಚ್ಚದ ಬಗೆಗೆ ಚಿಂತಿಸುತ್ತಾರೆ ಹೊರತು ಅದರಿಂದಾಗ ಬಹುದಾದ ಪರಿಸರ ಮಲೀನತೆ ಅಲ್ಲ ಎನ್ನುವುದು ನಮಗೆ ಅರಿವಿದೆ ಎನ್ನುತ್ತಾರೆ ಅಲ್ಲಿನ ಸಾರಿಗೆ ಮಂತ್ರಿ ಹೂನ್. ಈಗ ಸಮಯ ಹೋದಂತೆ ಹೆಚ್ಚು ಹೆಚ್ಚು ಗ್ರಾಹಕರು ಈ ಬಗೆಗೆ ಜಾಗ್ರತಿ ತೋರ್ಪಡಿಸುತ್ತಿದ್ದು ಅವರಿಗೆ ಸಹಾಯ ಹಸ್ತ ಚಾಚುವುದು ಸರಕಾರದ ಕರ್ತವ್ಯವೂ ಆಗಿರುತ್ತದೆ. ಆವು ಉಪಯೋಗಿಸುವ ವಿದ್ಯುತ್ ಸಹಾ ಪರಿಸರ ಸ್ನೇಹಿಯಾಗಿದ್ದರೆ ಉತ್ತಮ ಎಂದೂ  ಹೇಳುತ್ತಾರೆ.

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬರೇ ವಿದ್ಯುತ್ ಕಾರೆಂದರೆ ಪ್ರಯೋಜನವಿಲ್ಲ. ಆ ವಿದ್ಯುತ್ ಎಲ್ಲಿಂದ ಬರುತ್ತದೆ ಅನ್ನುವುದೂ ಮುಖ್ಯ. ಕಲ್ಲಿದ್ದಲು ಹೊತ್ತಿಸಿ ವಿದ್ಯುತ್ ತಯಾರಿಸಿ ಆ ವಿದ್ಯುತ್ ಉಪಯೋಗಿಸಿ ಕಾರು ಓಡಿಸಿದರೆ ಯಾವ ಪ್ರಯೋಜನವೂ ಇಲ್ಲ. ಬೆಂಗಳೂರಿನಲ್ಲಿ ಕಾರಿನ ಹೊಗೆ ನಳಿಗೆ ಉಗುಳುವ ಹೊಗೆಯನ್ನು ರಾಯಚೂರಿನಲ್ಲಿ ಉಗುಳಲಾಗುತ್ತದೆ ಅಷ್ಟೇ. ಈ  ಲೆಕ್ಕಾಚಾರ  ಒಟ್ಟಾರೆ  ಪರಿಸರಕ್ಕೆ  ಪೂರಕವಲ್ಲ.  ಅಲ್ಲದೆ ವಿದ್ಯುತ್ ಕೋಶಗಳ ತಯಾರಿ ಬಹಳ ಮಲೀನತೆಗೆ ಕಾರಣವಾಗಿರುತ್ತದೆ.

ವಿದ್ಯುತ್ ವಾಹನದ ಇತಿಹಾಸ ದೀರ್ಘವಾಗಿದ್ದರೂ ಅವಿಷ್ಕಾರ ನಿದಾನವಾಗಲು ಮುಖ್ಯ ಕಾರಣಗಳು ಮೂರು. ಅನುಕೂಲಕರವಾದ ಅಗ್ಗವಾಗಿರುವ ಇಂದನ ಪೆಟ್ರೋಲ್, ತಕ್ಕುದಾದ ವಿದ್ಯುತ್ ಕೋಶಗಳ ಕೊರತೆ ಮತ್ತು ಅಸಮರ್ಪಕ ಬಾಟರಿ ಚಾರ್ಜಿಂಗ್ ಜಾಲದಿಂದಾಗಿ ಬಾಟರಿ ವಾಹನಗಳು ಹೆಚ್ಚು ಜನಪ್ರಿಯವೆನಿಸಲು ತಡೆಯೊಡ್ಡಿದವು. ಈಗ ಪರಿಸರ ಕಾಳಜಿ ಎನ್ನುವ ಹೊಸ ವಿಚಾರ ಚಲಾವಣೆಗೆ ಬಂದಿದೆ.  ಹೊಸ  ಆಸಕ್ತಿ ಸುರುವಾಗಿದೆ.

ಅರುಣಾಚಲ ಪ್ರದೇಶದ ರಾಜ್ಯಪಾಲರು ರಾಜಭವನದಲ್ಲಿ ಬೆಂಗಳೂರಿನಲ್ಲಿ ತಯಾರಾಗುವ ಎರಡು ರೇವ ವಿದ್ಯುತ್ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ ತಿಂಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಲ್ಲಿಗೆ ಬೇಟಿ ಇತ್ತಾಗ ಅದರಲ್ಲಿ ಸಂಚರಿಸಿದ್ದರು.   ಅವರು  ಎಪ್ರಿಲ್ ತಿಂಗಳಲ್ಲಿ  ಬೆಂಗಳೂರಿಗೆ  ಬೇಟಿ  ಇತ್ತಾಗ  ಇದೇ  ಸಂಸ್ಥೆ  ತಯಾರಿಸುವ  ವಿದ್ಯುತ್   ಗಾಲ್ಫ್ ಗಾಡಿಯಲ್ಲಿ  ಇಂಫೋಸಿಸ್  ಸಂಸ್ಥೆಯಲ್ಲಿ  ಸುತ್ತಾಡಿದ್ದರು.  ಇದೀಗ  ಇಂತಹ  ಗಾಲ್ಫ್  ಗಾಡಿಗಳು  ಮಂತ್ರಿಗಳಿಗೆ  ವಿದಾನ ಸೌದದ  ಸುತ್ತಲಿರುವ  ಕಛೇರಿಗಳ  ನಡುವೆ  ಓಡಾಡಲು  ಉಪಯೋಗಿಸುವ  ಸುದ್ದಿ  ಇರುತ್ತದೆ.  

ಸರಕಾರಕ್ಕೆ ವಿದ್ಯುತ್ ಕಾರುಗಳ ಬಗೆಗೆ ಅರಿವಿಲ್ಲ ಎನ್ನುವಂತಿಲ್ಲ. ಕೇಂದ್ರ ತಂತ್ರ ಜ್ನಾನ ಮಂತ್ರಿ ಕಪಿಲ್ ಸಿಬಾಲ್ ದೆಹಲಿಯ ಮುಖ್ಯ ಮಂತ್ರಿಣಿ ಶೀಲಾ ದೀಕ್ಷಿತ್ ಇವರೆಲ್ಲ ರೇವ ಕಾರು ಬಳಸುವವರೇ. ಸರಕಾರಿ ಖರೀದಿಗೆ ಕೇಂದ್ರದ ಅಸಂಪ್ರದಾಯಿಕ ಇಂದನ ಖಾತೆ ಸಹಾಯ ಮಾಡುತ್ತದೆ. ಕೆಲವು ರಾಜ್ಯ ಸರಕಾರಗಳು ಚಿಲ್ಲರೆ ರಿಯಾಯತಿ ತೋರಿಸುತ್ತವೆ. ಸರಕಾರ ಮಾರುತಿ ಕಾರಿಗೆ,  ಟಾಟ ನ್ಯಾನೊವಿಗೆ ಕೊಟ್ಟ ಬೆಂಬಲದ ಸಣ್ಣ ಪಾಲು ಈ ವಾಹನಕ್ಕೆ ಕೊಟ್ಟರೆ ನಮ್ಮಲ್ಲಿ ಸಾವಿರಾರು   ವಾಹನಗಳು    ಮಾರಾಟವಾಗುತಿತ್ತು. ಇಂದಿಗೂ ಬೆಂಗಳೂರಿನಲ್ಲಿ ತಯಾರಾಗುವ ರೇವ ಕಾರಿಗೆ ಅತ್ಯದಿಕ ಬೆಂಬಲ ದೊರಕುತ್ತಿವುದು   ಯುರೋಪಿನಲ್ಲಿ. ಅಲ್ಲಿ   ಈ  ಬೆಂಬಲ ವಾರದಿಂದ ವಾರಕ್ಕೆ ಎಂಬಂತೆ ಹೆಚ್ಚುತ್ತಿದಯಂತೆ. ಮೇಲಿನ  ಎರಡೂ ಚಿತ್ರಗಳಲ್ಲಿ  ಕಾಣಿಸುವ  ಕಾರು  ಬೆಂಗಳೂರಿನಲ್ಲಿ ತಯಾರಾಗುವ ರೇವ.  ಇಂಗ್ಲೇಂಡಿನಲ್ಲಿ  G-Wiz ಅನ್ನುವ  ಹೆಸರಿನಲ್ಲಿ  ಮಾರುತ್ತಾರೆ. 

ಹತ್ತು ವರ್ಷ ಹಿಂದೆ ವರುಷಕ್ಕೆ ನಲುವತ್ತು ಸಾವಿರ ವಿದ್ಯುತ್ ಸ್ಕೂಟರ್ ಮಾರಿದ ಚೀನದಲ್ಲಿ ಕಳೆದ ವರ್ಷ ಮಾರಾಟವಾದ ಸ್ಕೂಟರ್ ಗಳ ಸಂಖ್ಯೆ ಒಂದೂವರೆ ಕೋಟಿ ಮೀರಿತ್ತು. ನಮ್ಮಲ್ಲೂ ಈಗ ಹೆಚ್ಚೇನು ಸರಕಾರದ ಬೆಂಬಲವಿಲ್ಲದೆಯೇ ವಿದ್ಯುತ್ ಸ್ಕೂಟರುಗಳು        ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ.  ದೈಹಿಕ  ಸಮಸ್ಯೆಯಿಂದಾಗಿ  ನನಗೆ ದ್ವಿಚಕ್ರ ಚಲಾಯಿಸಲು  ಸಾದ್ಯವಾಗುವುದಿಲ್ಲ.

ವರ್ಷಕ್ಕೆ ಸುಮಾರು ಹನ್ನೆರಡು ಸಾವಿರ ಕಿಮಿ ವಾಹನ ಚಲಾಯಿಸುವ ನಾನು ಬಹಳ ಸಮಯದಿಂದ ಈ ಬಗೆಗೆ ಚಿಂತಿಸುತ್ತಿದ್ದೇನೆ. ಪ್ರಯಾಣದ    ಅರ್ಧದಷ್ಟು    ದೂರ  ವಾಹನದಲ್ಲಿ   ಒಬ್ಬನೇ ಇರುತ್ತೇನೆ. ಮಕ್ಕಳಿಬ್ಬರನ್ನು ಒಮ್ಮೊಮ್ಮೆ ಶಾಲೆಗೆ ಬಿಡುವ ಕಾರಣ ಸುಮಾರು   ನಾಲ್ಕು ಸಾವಿರ ಕಿಮಿ ಮಕ್ಕಳೂ ಸೇರಿದಂತೆ ಮೂವರ ಪ್ರಯಾಣ. ಅಂತೂ ದಿನಕ್ಕೆ ನಲುವತ್ತು   ಮೀರುವುದು   ಅಪರೂಪ. ದಿನವಿಡೀ ಮನೆಯಲ್ಲಿರುವ ಕಾರಣ ಸೌರ ವಿದ್ಯುತ್ ತುಂಬಿಸಲು ಪೂರಕವಾಗಿರುತ್ತದೆ. ಅವಶ್ಯಕತೆಗಿಂತ ಹೆಚ್ಚು ಸೌರ ವಿದ್ಯುತ್ ಕೋಶಗಳು ನನ್ನಲ್ಲಿದ್ದು ಮಲೀನತೆ ಉಂಟಾಗದೆ ಪ್ರಯಾಣ ಸಾದ್ಯವಾಗುತಿತ್ತು. ಈ ಬಗೆಗೆ  ಉತ್ತಮ ಪ್ರಯೋಗವಾಗುತಿತ್ತು.

ನಾನ್ನೊಬ್ಬ ಕೃಷಿಕ. ಆದಾಯ ತೇರಿಗೆ ಪಟ್ಟಿಯಲ್ಲಿರುವವರಿಗೆ ಸವಕಳಿ ಎಂಬ ತೇರಿಗೆ ರಿಯಾಯತಿ ಅಂಶ ಖರೀದಿಗೆ ಸಹಾಯ ಮಾಡುತ್ತದೆ. ಕೊನೆಗೂ ಲೆಕ್ಕ ಮಾಡಿದರೆ ನಾನು ಉಳಿಸುವುದು ಪರಮಾವಧಿ ಒಂದೂವರೆ ಸಾವಿರ ಯುನಿಟ್ ಅಂದರೆ ಏಳೆಂಟು ಸಾವಿರ ರೂಪಾಯಿ. ಅದಕ್ಕಾಗಿ ನಾಲ್ಕು ಲಕ್ಷ ಚಿಲ್ಲರೆ ಖರ್ಚು ಮಾಡುವುದು ಬುದ್ದಿವಂತಿಕೆ ಅನಿಸದು. ಜತೆಯಲ್ಲಿ ನಾಲ್ಕನೇಯ ವರ್ಷ ಕಾರಿನಲ್ಲಿರುವ ವಿದ್ಯುತ್ ಕೋಶ ಬದಲಾಯಿಸಬೇಕಾಗ ಬಹುದು. ನನ್ನ ಇ ಪತ್ರಕ್ಕೆ ದೂರವಾಣಿ ಸಂಬಾಷಣೆಗೆ ಈ ಕಂಪೇನಿಯಿಂದ ಸಕಾರಾತ್ಮಕವಾದ ಉತ್ತರವೂ ನನಗೆ ಲಬಿಸಿರಲಿಲ್ಲ.

ಸೌರ ವಿದ್ಯುತ್ ಲಾಭ ಎನ್ನುವಂತಿಲ್ಲ.   ಇಲ್ಲೊಂದು  ಸ್ವಂತ   ಅನುಭವ. ನಾನು ಮೂರು ವರ್ಷ ಹಿಂದೆ ಮನೆಯ ಉಪಯೋಗಕ್ಕಾಗಿ ವಿದ್ಯುತ್ ಕೋಶಗಳು ಹಾಗೂ ವ್ಯವಸ್ಥೆಗಾಗಿ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿದೆ. ಈಗ ವಿದ್ಯುತ್ ಬಿಲ್ಲಿನಲ್ಲಿ ತಿಂಗಳಿಗೆ ನಾಲ್ಕು ನೂರರಿಂದ ಐನೂರು ರೂಪಾಯಿ ವರೆಗೆ ಉಳಿತಾಯ. ದಿನವಿಡೀ ವಿದ್ಯುತ್  ಇಲ್ಲವಾದರೂ  ನಮಗೆ  ಸಮಸ್ಯೆಯಾಗುವುದಿಲ್ಲ  ಎನ್ನುವುದು  ಗುಣಾತ್ಮಕ ವಿಚಾರ. ಈ  ವಾಕ್ಯ  ಕುಟ್ಟುವಾಗಲೂ  ವಿದ್ಯುತ್ ಕಡಿತವಿರುವ  ಕಾರಣ ಸೂರ್ಯದೇವನಿಗೆ  ನಮೋ ನಮಹ.  ಈ ಮೂವತ್ತು ಸಾವಿರ ತುಂಬಲು ಐದು ವರ್ಷ ಬೇಕು. ಅಷ್ಟರೊಳಗೆ ನನ್ನ ವಿದ್ಯುತ್ ಕೋಶಗಳ ಹೆಚ್ಚಿನ ಆಯುಷ್ಯ ಮುಗಿದಿರುತ್ತದೆ.  ಪುನಹ ಮೂವತ್ತು ಸಾವಿರ.......

ಯಾರಲ್ಲೂ  ಸೌರ  ಫಲಕಗಳೂಗಳೂ  ವಿದ್ಯುತ್ ಕಾರು  ಎರಡೂ  ಇದ್ದಂತಿಲ್ಲ.  ಇರುವುದಾದರೆ  ಈ ಪರ್ಯಾಯದ  ಮೌಲ್ಯಮಾಪನೆ  ಸಾದ್ಯವಾಗುತಿತ್ತು.  ಹೊಸ ರೇವಾ  ಕಾರು  ಖರೀದಿಸುವ  ಚೈತನ್ಯ  ನನಗಿಲ್ಲವಾದುದರಿಂದ  ಸದ್ಯಕ್ಕೆ ವಿದ್ಯುತ್ ಕಾರಿನ ಬಗೆಗೆ ಕನಸು ಕಾಣುವುದೊಂದೇ ನನಗಿರುವ ದಾರಿ.

Sunday, March 22, 2009

ಅಡಿಕೆ ಹಾಳೆಯ ಬಗೆಗೆ

ಮಾನ್ಯ  ಶ್ರೀವತ್ಸ ಜೋಷಿಯವರು  ಈ ವಾರದ ವಿಜಯ ಕರ್ನಾಟಕದ ಅಂಕಣವನ್ನು    ಅಡಿಕೆ ಹಾಳೆಯಲ್ಲೇ ಉಣಬಡಿಸಿದ್ದಾರೆ. ಒಂದಷ್ಟು ಕಡೆ ಅಡಿಕೆ ಹಾಳೆ ಹಿಡಿದುಕೊಂಡು ಓಡಾಡಿದ ನನ್ನನ್ನೂ ಉಲ್ಲೇಖಿಸಿದ್ದಾರೆ. Thank you, Mr Srivathsa Joshi.

http://www.vijaykarnatakaepaper.com/epaper/pdf/2009/03/22/20090322a_008101001.jpg

ಅಡಿಕೆ ಹಾಳೆಗೆ ವಿಶ್ವ ಮಟ್ಟದ ಪ್ರಚಾರ ಸಿಗುವುದು ಸ್ವಾಗತಾರ್ಹ. ಆದರೆ ಈಗ ಹೆಚ್ಚಿನ ಕೃಷಿಕರಿಗೆ ಇಂದಿನ ಕೂಲಿಯಾಳುಗಳ ಕೊರತೆಯಿಂದಾಗಿ ಹಾಳೆಯನ್ನು ಬಿಡಿ ಅಡಿಕೆಯನ್ನು ತೋಟದಿಂದ ಮನೆಗೆ ತರುವುದೇ ಸಾಹಸ.


ಅಡಿಕೆ ಕೊಯಿಲಾದ ನಂತರ ಕನಿಷ್ಟ ಮೂವತ್ತು ಬಿಸಿಲು ತೋರಿಸಿ ಒಳ ಹಾಕಿದರೆ ನಾವು ಗೆದ್ದಂತೆ. ಒಂದೆಡೆ ವಿಪರೀತ ಸೆಕೆಯೊಂದಿಗೆ ವಿದ್ಯುತ್ ಕಣ್ಣುಮುಚ್ಚಾಲೆ, ನೀರಿನ ಪರದಾಟ. ಈಗೆಲ್ಲ   ಸಂಜೆಗಾಗುವಾಗ ದೂರದಲ್ಲಿ ಗುಡುಗು ಕೇಳಿದರೆ ಅಂಗಳದಲ್ಲಿರುವ ಅಡಿಕೆ ನೆನಪಿಸಿಕೊಂಡ ನಮ್ಮ ಎದೆ ಬಡಿತ ಪಕ್ಕದಲ್ಲಿರುವವರಿಗೂ ಕೇಳಿಸುತ್ತದೆ. ನಮ್ಮಲ್ಲಂತೂ ಬಾಕಿಯಾದ ಕೆಲಸದ ರಾಶಿ ನೋಡುವಾಗ ಮೂರ್ಛೆ  ಹೋಗುವುದು ಮಾತ್ರ ಬಾಕಿ. Paralysis by analysis ಅಂತಾರಲ್ಲ ಹಾಗೆ.   ಹಾಳೆಯನ್ನೂ  ಸಹಾ   ಇದೇ  ಸಮಯದಲ್ಲಿ  ಶೇಖರಿಸಬೇಕು.  

ವ್ಯಾಪಾರ ವ್ಯವಹಾರದಲ್ಲಾದರೆ ಇಂತಹ ಸಮಸ್ಯೆಗೆ Queuing theory ಪರಿಹಾರ ಬೊಟ್ಟುಮಾಡುತ್ತದೆ. ಸರಳವಾದ ಉದಾಹರಣೆ ಎಂದರೆ ಒಂದು ಸರ್ವಸರಕು ಮಳಿಗೆಯಲ್ಲಿ ಪಟ್ಟಿ ಮಾಡಿಸಿ ಹಣಕೊಡುವಲ್ಲಿ ಸರತಿಯ ಸಾಲು. ಪ್ರತಿ ನಿಮಿಷಕ್ಕೆ ಎಷ್ಟು ಗಿರಾಕಿ ವ್ಯಾಪಾರ ಮುಗಿಸುತ್ತಾರೆ ಮತ್ತು ಒಬ್ಬ ಕಾರಕೂನ ಎಷ್ಟು ಗಿರಾಕಿಗಳ ನಿಬಾಯಿಸಬಲ್ಲ ಎನ್ನುವ ವಿಚಾರದಲ್ಲಿ ಉತ್ತರ ದೊರಕಿಸಿಕೊಂಡು ಬೇಕಾದಷ್ಟು ಕಾರಕೂನರ ನೇಮಿಸಿ ಅನಗತ್ಯ ಸರತಿಯ ಸಾಲು ಉದ್ದವಾಗುವುದನ್ನು ತಪ್ಪಿಸಲು ಸಹಕರಿಸುತ್ತದೆ. ಆದರೆ ನಮ್ಮಲ್ಲಿ ಉತ್ತರವಿದ್ದರೂ ಕೂಲಿಯಾಳುಗಳೇ ಕಾಣಿಸದಿದ್ದರೆ ………..

ಇಂದು ಅಡಿಕೆ ಹಾಳೆಗೆ ರೈತರಿಗೆ ಸಿಗುವ ಐವತ್ತು ಪೈಸೆ  ಪರಿಗಣಿಸಿದರೆ    ಸಿಮಿತ  ಸಂಖ್ಯೆಯಲ್ಲಿ    ಸಿಗುವ   ದುಬಾರಿ ಕೃಷಿ   ಕಾರ್ಮಿಕರಿಂದಾಗಿ ಹಾಗೂ ಹಾಳೆಯೊಂದಿಗೆ   ಜಮೀನಿನಿಂದ ಹೊರ ಕಳುಹಿಸುವ ಪೋಷಕಾಂಶಗಳಿಂದಾಗಿ  ಲಾಭದಾಯಕವಲ್ಲ. ರೈತರು ನಷ್ಟವಾದರೂ ದನ ಸಾಕುತ್ತಾರೆ ಟೊಮೆಟೊ ಬೆಳೆಯುತ್ತಾರೆ. ಹಾಗೆಯೇ ಇದೊಂದು ನಗದು ಹಣದ ಮೂಲ.

ಕೃಷಿಕನ  ಮಟ್ಟಿಗೆ    ಅಡಿಕೆ ಮರದ ಹಾಳೆಯೂ ತ್ಯಾಜ್ಯವಲ್ಲ. ಅಡಿಕೆ ಮರಕ್ಕೆ  ಅಗತ್ಯವಿರುವ   ಸಾಕಷ್ಟು ಪೋಶಕಾಂಶವನ್ನು  ಹೊಂದಿದೆ.   ಉಪಯೋಗದ ಬಗೆಗೆ ಶ್ರೀ ಜೋಷಿಯವರೂ ಬೆಳಕು ಚೆಲ್ಲಿದ್ದಾರೆ. ಯಾವ ತ್ಯಾಜ್ಯವನ್ನೂ ನಾವು ತೋಟದಿಂದ ಹೊರಗೆ ಸಾಗಿಸದಿದ್ದರೆ ಅಡಿಕೆ ಮರಕ್ಕೆ ಬೇರೆ ಗೊಬ್ಬರ ಉಣಿಸುವುದು ಬೇಡ. ನಮಗೆ ಪೂರ್ತಿ ತ್ಯಾಜ್ಯವನ್ನು ಬುಡಕ್ಕೆ ಹಾಕಲು ಸಾದ್ಯವಾಗುತ್ತಿಲ್ಲ. ಅದುದರಿಂದ ಗೊಬ್ಬರ ಅವಲಂಬನೆ ಅನಿವಾರ್ಯವಾಗುತ್ತದೆ.
ಶ್ರೀ ಜೋಷಿಯವರು   ಹಾರೈಸಿದಂತೆ  ಬರಾಕ್  ಒಬಾಮರ  ಮಕ್ಕಳು  ಜಾರುಬಂಡಿಯಲ್ಲಿ  ಆಡಲು  ನೂಡಲ್ಸ್  ತಿನ್ನಲು  ನಮ್ಮೂರಿನಿಂದ   ಹೋದ   ಅಡಿಕೆಹಾಳೆ ತಟ್ಟೆಯನ್ನೇ  ಉಪಯೋಗಿಸಲೆಂದು   ಆಶಿಸೋಣ.

Tuesday, December 16, 2008

ಗ್ರಾಮೀಣ ಪ್ರದೇಶಗಳಿಗೆ ಸೌರ ವಿದ್ಯುತ್ ಉತ್ಪಾದನಾ ಅವಕಾಶ

ಮೊನ್ನೆ ಇಂದನ ಉಳಿತಾಯ ದಿನಾಚರಣೆ ಅಂಗವಾಗಿ ವಿದ್ಯುತ್ ಮಂತ್ರಿಗಳು ಸೌರ ವಿದ್ಯುತ್ ಗೆ ಬೆಂಬಲ ಎಂದು ಬರೆದು ಕೊಟ್ಟಿರುವುದನ್ನು ಓದಿದರು. ನಮ್ಮಲ್ಲಿ ಮುಂದಿನ ಹತ್ತು ವರುಷಗಳ  ಮಟ್ಟಿಗೆ   ಸೌರ ವಿದ್ಯುತ್ ಖರೀದಿ ಕ್ರಯ ಹದಿನೈದು ರೂಪಾಯಿ ಎಂದು ವಿದ್ಯುತ್ ಪ್ರಾಧಿಕಾರ ಹಾಗೂ ಸರಕಾರ ನಿರ್ಣಯಿಸಿದೆ ಎನ್ನುವುದು ಕೇಂದ್ರ ಸರಕಾರದ  ಹಳೆಯ   ಸುದ್ದಿ. ಈ ಹಿನ್ನೆಲೆಯಲ್ಲಿ ಕಿರು (?) ವಿದ್ಯುತ್ ಉತ್ಪಾದಕನಾಗಿ ನಾನು ನನ್ನ ನಾಲ್ಕು ಅನಿಸಿಕೆಗಳ ಇಲ್ಲಿ ಹಂಚಿಕೊಳ್ಳುತ್ತೇನೆ.

ನಮ್ಮಲ್ಲಿ  ಹಿಂದೆ ಪಂಪಿನೊಡನೆ ಪಡಕೊಂಡ ಸೌರ ಫಲಕಗಳಿಂದ ಸಿಗುವ ವಿದ್ಯುತ್ ಪೂರ್ತಿ ಬಳಕೆಯಾಗುತ್ತಿಲ್ಲ. ಹೆಚ್ಚುವರಿ ಸುಮಾರು ಹತ್ತು ಯುನಿಟ್ ಗಳನ್ನು ನಾನು ಮಾರಬಹುದು. ಅವರ ಹೇಳಿಕೆಯಂತೆ ದಿನಕ್ಕೆ ಸುಮಾರು ನೂರ ಐವತ್ತು ರೂಪಾಯಿ ಮೌಲ್ಯ ಸಿಗಬಹುದು. ಆದರೆ ನಾನು ಹಿಂದೊಮ್ಮೆ ಬರೆದಂತೆ ನಾವು ಜಾಲಕ್ಕೆ ಹಾಯಿಸ ಬೇಕಾದರೆ ಅದರಲ್ಲಿ ವಿದ್ಯುತ್ ಇರಲೇಬೇಕು. ಸಮೀಪದ ಅವರ ಉಪಕೇಂದ್ರಕ್ಕೆ ಪ್ರತ್ಯೇಕ ತಂತಿ ಎಳೆಯುವಷ್ಟು ನಮ್ಮಲ್ಲಿ ಉತ್ಪಾದನೆಯಾಗುವುದಿಲ್ಲ. ಬರುವ ವರ್ಷದಿಂದ 24 ಘಂಟೆ ವಿದ್ಯುತ್ ಎನ್ನುವ ಆಶ್ವಾಸನೆಯ ಹಿನ್ನೆಲೆಯಲ್ಲಿ ಈ ಬಗೆಗೊಂದು ಚರ್ಚೆ.

ಜಾಲಕ್ಕೆ ಹರಿವಿನ ಬಗೆಗೆ ಎರಡು ವಿಧಗಳು ಪ್ರಪಂಚದ ವಿವಿದೆಡೆ ಚಾಲ್ತಿಯಲ್ಲಿದೆ. ಒಂದು ನಮ್ಮ ಮನೆಯ ಮಾಪಕ  ನಾವು ವಿದ್ಯುತ್ ಹರಿಸುವಾಗ ಹಿಂದಕ್ಕೆ ತಿರುಗುವಂತೆ ಮಾಡುವುದು. ಆಗ ನಮ್ಮ ವಿದ್ಯುತ್ ಖರೀದಿ ಹಾಗೂ ಮಾರಾಟ ಕ್ರಯ ಒಂದೇ ಆಗುತ್ತದೆ. ಹಾಗಾದರೆ ಆ ಸಂದರ್ಬದಲ್ಲಿ ನಮ್ಮ ಬಂಡವಾಳಕ್ಕೆ ಶ್ರಮಕ್ಕೆ ಯೋಗ್ಯ ಪ್ರತಿಫಲ ಸಿಗದು. ವಿದ್ಯುತ್ತಿನ ದರ ನಮ್ಮಿಂದ ತುಂಬ ಹೆಚ್ಚಿರುವ ಮುಂದುವರಿದ ದೇಶಗಳಲ್ಲಿ ಇದು ಪ್ರಾಯೋಗಿಕ ಎನಿಸಬಹುದು.

ಎರಡನೇಯದು ಪ್ರತ್ಯೇಕ ಮಾಪಕ  ಹಾಕಿ ನಮ್ಮ ಹೊರಹರಿವಿನ ಲೆಕ್ಕಾಚಾರ ಮಾಡುವುದು. ಆಗ ಯುನಿಟ್ ಒಂದಕ್ಕೆ ಹದಿನೈದು ರೂಪಾಯಿ ಕೊಡುವುದಾದರೆ ನಮ್ಮ ಬಂಡವಾಳಕ್ಕೆ ಶೇಕಡಾ ಏಳರಿಂದ ಒಂಬತ್ತರ ವರೆಗೆ ಪ್ರತಿಫಲ ದೊರಕಬಹುದು. ಕಡಿಮೆ ದರದ ಬಡ್ಡಿ ಹಾಗೂ ಹೂಡಿಕೆಗೆ ಸಹಾಯದನ ಇದ್ದರೆ ಮಾತ್ರ ಇದು ಆಕರ್ಷಕವಾಗಬಹುದು.

ಜರ್ಮನಿಯಲ್ಲಿ ಕಳೆದ ವರ್ಷ ಎಂದರೆ 2007ರಲ್ಲಿಯೇ ಅಳವಡಿಸಲ್ಪಟ್ಟ   ಸೌರ  ಫಲಕಗಳ   ಮೊತ್ತ 1135 MW. ಇದರೊಂದಿಗೆ ಹೋಲಿಸಲು ನಮ್ಮ ದೇಶದಲ್ಲಿ ಈ ವರೆಗೆ ಒಟ್ಟು 120 MW ಗಳಷ್ಟು ಸೌರ ಫಲಕಗಳಿದ್ದರೆ ಅದರಲ್ಲಿ ಜಾಲಕ್ಕೆ ಸಂಪರ್ಕಿಸಿರುವುದು ಕೇವಲ 2.5 MW ಮಾತ್ರ. ಇದಕ್ಕೆ ಮುಖ್ಯ ಕಾರಣವೆಂದರೆ ಜರ್ಮನಿಯಲ್ಲಿ ಮನೆ ಮೇಲೆ ಅಳವಡಿಸಿದ ಫಲಕಗಳ ವಿದ್ಯುತ್ ಜಾಲಕ್ಕೆ ಸೇರಲು ಯುನಿಟ್ ಒಂದಕ್ಕೆ ಅಂದಾಜು ಮೂವತ್ತು ರೂಪಾಯಿ ಕೊಡುತ್ತಾರೆ. ಅಲ್ಲಿ ಸೂರ್ಯ ದರ್ಶನ ಅಪರೂಪ ಎನಿಸಿದರೂ ದರ ಸ್ಪರ್ದಾತ್ಮಕವಾಗಿರುತ್ತದೆ ಎನ್ನುವ ಕಾರಣದಿಂದ ಜನರು ಅಳವಡಿಸಲು ಆಸಕ್ತಿ ಹೊಂದುತ್ತಾರೆ. ಅದೇ ಫಲಕಗಳ ಇಲ್ಲಿ ಅಳವಡಿಸಿದರೆ ಅದರ ಎರಡು ಪಟ್ಟು ಶಕ್ತಿ ಉತ್ಪಾದಿಸಬಹುದು. ಉದಾಹರಣೆಗೆ ಒಂದು ಕಿಲೋ ಪೀಕ್ ವಾಟ್ ಫಲಕಗಳು ಉತ್ತರ ಜರ್ಮನಿಯಲ್ಲಿ ವರ್ಷಕ್ಕೆ 850 ಯುನಿಟ್ ಉತ್ಪಾದಿಸಿದರೆ ನಮ್ಮಲ್ಲಿ 1800 ಯುನಿಟ್ ಉತ್ಪಾದಿಸಬಹುದು.

ಜಾಲಕ್ಕೂ ನಮ್ಮ ಸೌರ ಫಲಕಗಳಿಗೆ ಮದ್ಯೆಯ ಪ್ರಮುಖ ಕೊಂಡಿ- ವಿಧ್ಯುತ್ ಜಾಲ ಸಂಪರ್ಕ ಇನ್ವೆರ್ಟರ್. ಪರದೇಶಗಳಲ್ಲಿ ತಯಾರಾಗುವ ಈ ಉಪಕರಣದ ಸಹಾಯದಿಂದ ನಮ್ಮಲ್ಲಿ ತಯಾರಾಗುವ ವಿದ್ಯುತ ಶಕ್ತಿಯನ್ನು ಜಾಲದೊಂದಿಗೆ ಹೊಂದಾಣಿಕೆ ಮಾಡಲು ಅವಕಾಶವಿರುತ್ತದೆ.

ಇದು ಸೌರ ವಿದ್ಯುತ್ ಫಲಕದಿಂದ ಬರುವ ಶಕ್ತಿಯ ವಿದ್ಯುದ್ಬಲ Voltage ಮತ್ತು ಪ್ರಮಾಣ Amps ಸಮತೋಲನ ಕಾಯ್ದುಕೊಂಡು ಗರೀಷ್ಟ ಉತ್ಪಾದನೆಗೆ ಪೂರಕವಾಗಿರುತ್ತದೆ. ಅನಂತರ ಅದನ್ನು ಜಾಲದಲ್ಲಿರುವಂತೆ ಉತ್ತಮ ತರಗತಿಯ sine wave ಅಲ್ಟರ್ನೇಟಿಂಗ್ ಕರೆಂಟಾಗಿ ಮಾರ್ಪಾಡಿಸುತ್ತದೆ ಹಾಗೂ ಜಾಲದ ವಿದ್ಯುತ್ ಪರೀಸ್ಥಿತಿ ಗಮನಿಸಿ ಅದಕ್ಕೆ ಅನುಗುಣವಾಗಿ ಹೆಜ್ಜೆ ಹಾಕುತ್ತದೆ. ಅಂದರೆ ಜಾಲದಲ್ಲಿ ಇರುವಿಕೆ ಖಚಿತಪಡಿಸಿಯೇ ಸಂಪರ್ಕ ಮತ್ತು ವಿದ್ಯುತ್ ಇಲ್ಲವಾದರೆ ಹರಿವು ಇಲ್ಲ ಹಾಗೂ ಜಾಲದ ಆವರ್ತನ ಚಕ್ರಕ್ಕೆ ಹೊಂದಾಣಿಕೆಯಾಗುವಂತೆ ನಿಯಂತ್ರಣ. ಜಾಲದಲ್ಲಿರುವುದಕ್ಕಿಂತ ನಮ್ಮ ತಯಾರಿ ವಿದ್ಯುತ್ತಿನ voltage ತುಸು ಹೆಚ್ಚಿರುವ ಕಾರಣ ಸಲೀಸಾಗಿ ಜಾಲಕ್ಕೆ ಹರಿಯುತ್ತದೆ.

ಇವು ದುಬಾರಿ. ನನ್ನ ಸೌರ ಫಲಕಗಳ ವಿದ್ಯುತ್ತನ್ನು ಜಾಲಕ್ಕೆ ಹಾಯಿಸಲು  1500 watts grid- tie inverter ಗೆ ಅಂದಾಜು ನಮ್ಮ ದೇಶದಲ್ಲಿ ಒಂದು ಕಾಲು ಲಕ್ಷ ರೂಪಾಯಿ ಬೆಲೆಯುಂಟು. ಬೆಲೆ ಕೇಳಿ ಹುಬ್ಬೇರಿಸಬೇಡಿ. ಮಾಮೂಲಿ ಇನ್ವರ್ಟರ್ ಗಳಲ್ಲಿ ತಯಾರಾಗುವ ವಿಧ್ಯುತ್ ಗುಣ ಮಟ್ಟದ ಪ್ರಶ್ನೆಯಾಗಲಿ ಜಾಲದ ಆವರ್ತನಕ್ಕೆ ಹೊಂದಾಣಿಕೆಯಾಗುವ ಪ್ರಶ್ನೆಯಾಗಲಿ ಇರುವುದಿಲ್ಲ.

ಪ್ರಥಮವಾಗಿ ನಮ್ಮ ಉಪಯೋಗಕ್ಕೆ ಉಳಿದದ್ದು ಸಮಾಜಕ್ಕೆ ಎನ್ನುವ ನೆಲೆಯಲ್ಲಿ ಸೌರ ಫಲಕಗಳ ಅಳವಡಿಸಿಕೊಂಡು ಹಳ್ಳಿಗರು ಸೌರ ಶಕ್ತಿಯನ್ನು ಕೊಯಿಲು ಮಾಡಬಹುದು. ಮಳೆನೀರ ಕೊಯಿಲಿನಂತೆ. ದಿನದ ನಡುಬಾಗದಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವಾಗ ಗರಿಷ್ಟ ಉತ್ಪಾದನೆ. ಕೃಷಿಕರಿಗೆ ಸರಿಯಾದ ಅವಕಾಶ ಕಲ್ಪಿಸಿದರೆ ಇದೊಂದು ಉತ್ತಮ ವ್ಯವಹಾರವೂ ಆಗಬಹುದು.

ಹಳ್ಳಿಗಳಲ್ಲಾದರೆ ಹೆಚ್ಚು ಬೆಳಕು ಸಂಗ್ರಹಿಸುವ ಅವಕಾಶ. ಜತೆಯಲ್ಲಿ ಬೇಕಾದಷ್ಟು ಜಾಗ ಇರುತ್ತದೆ. ಪಟ್ಟಣಗಳಲ್ಲಿ ಎಲ್ಲೆಲ್ಲೂ ನೆರಳು. ಅವು ಚೆನ್ನಾಗಿ ಕೆಲಸ ಮಾಡಲು ಫಲಕಗಳನ್ನು ಸೂರ್ಯನೆಡೆಗೆ ತಿರುಗಿಸಲೂ ಸಮಯಾವಕಾಶ ಹಳ್ಳಿಗರಿಗೆ ಇರುತ್ತದೆ. ಸೂರ್ಯ ದೇವನ ಚಲನೆ ಅನುಸರಿಸುತ್ತಾ ಹೋದರೆ ಶೇಕಡಾ 25 ರಷ್ಟು ಅಧಿಕ ಶಕ್ತಿಯನ್ನು ಬಾಚಿಕೊಳ್ಳಬಹುದಾಗಿದ್ದು ಇದಕ್ಕಾಗಿ ಫಲಕಗಳ ಕೈಯಿಂದಲೇ ತಿರುಗಿಸಲು ಸಾದ್ಯ. ಈ ಕೆಲಸಕ್ಕೆ ಹೆಚ್ಚು ಕುಶಲತೆಯ ಅಗತ್ಯವೂ ಇರುವುದಿಲ್ಲ.

ಕಲ್ಲಿದ್ದಲು ದಹಿಸಿ ಉತ್ಪಾದಿಸುವ ವಿದ್ಯುತ್ ಹೋಲಿಸಿದರೆ ಸೌರ ವಿದ್ಯುತ್ ನಿಂದ ಗಾಳಿ ಹಾಗೂ ನೀರಿನ ಮಲೀನತೆ ಇಲ್ಲ. ಈಗ ನಾನು ಕೊಡ ಬಹುದಾದ ಕನಿಷ್ಟ ವರ್ಷಕ್ಕೆ 2500 ಯುನಿಟ್ ಲೆಕ್ಕಕ್ಕೆ ತೆಗೆದುಕೊಂಡರೂ ತುಂಗಭದ್ರಾ ನದಿಯ 6500 ಲೀಟರ್ ನೀರ ಬಳಕೆಯನ್ನು ತಪ್ಪಿಸುತ್ತದೆ.   ನನ್ನ ಕೃಷಿ ಮತ್ತು ಮನೆ ಉಪಯೋಗದ ಒಟ್ಟು  ವಿದ್ಯುತ್   ಬಳಕೆಯೂ ವರ್ಷಕ್ಕೆ ಎರಡೂವರೆ ಸಾವಿರದಿಂದ ಮೂರು ಸಾವಿರ ಯುನಿಟ್.   

ನನ್ನಲಿರುವ  ಸೌರ ಫಲಕಗಳ  ಮೌಲ್ಯ  ಸುಮಾರು  ನಾಲ್ಕುವರೆ  ಲಕ್ಷ  ರೂಪಾಯಿ.    ಸೌರ ಫಲಕಗಳಿಗೆ 25 ವರ್ಷ ಆಶ್ವಾಸನೆ ಕೊಡಬಹುದು. ಪರದೇಶಿ ನಿರ್ಮಿತ ಈ inverter ಗಳಿಗೆ ಏಳರಿಂದ ಹತ್ತು ವರ್ಷ ಆಶ್ವಾಸನೆ ತಯಾರಕರು ಕೊಡುತ್ತಾರೆ. ಸರಕಾರ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ ಕೊಟ್ಟರೆ ಖಂಡಿತ ಇವುಗಳು ಜನಪ್ರಿಯವಾಗಬಹುದು.  ಆಗ  ಶ್ರೀ ನಾಗೇಶ  ಹೆಗಡೆಯವರು  ಹೇಳಿದಂತೆ  ವಿದ್ಯುತ್  ಹಿಮ್ಮೊಗ  ಹರಿಯುವುದು. 

ಇದು ಲೆಕ್ಕಾಚಾರ ಬರೇ ಸಾದ್ಯತೆಗಳ ಬಗೆಗೆ ಚರ್ಚೆ ಹೊರತು ವ್ಯವಹಾರಿಕ ಅಲ್ಲ. ಸರಕಾರ ಸದ್ಯಕ್ಕೆ ಕೆಂಪು ಚಾಪೆ ಹಾಸಿದ್ದು ಕೋಟ್ಯಾದಿಪತಿಗಳಿಗೆ ಮಾತ್ರ.   ಸಣ್ಣ ಉತ್ಪಾದಕರನ್ನು ಅವರು   ಪರಿಗಣಿಸುವುದಿಲ್ಲ. ಖಜಾನೆಯಲ್ಲಿ ಕಾಸೂ ಇಲ್ಲ.

Friday, December 05, 2008

ರಕ್ಷಣೆಯ ನೆಪದಲ್ಲೊಂದು ದುಬಾರಿ ಯೋಜನೆ

ನಿನ್ನೆಯ ಪತ್ರಿಕೆಯಲ್ಲಿ ಒಂದು ಸುದ್ದಿ ಅಂದರೆ ಸರಕಾರಿ ಪ್ರಕಟನೆ ನನ್ನ ಗಮನ ಸೆಳೆಯಿತು. ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ೩೦೦೦ ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಸರಕಾರಕ್ಕೆ ಅಹವಾಲು. ಪಾಕಿಸ್ತಾನದ ಬಯೋತ್ಪಾದಕರಿಗೆ   ಸಮುದ್ರದಲ್ಲಿ  ಮುಂಬಯಿಗೆ    ದಾರಿ ತೋರಲು ಉಪಯೋಗಿಸಿದ ಕಾರಣ ಜಿಪಿಎಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.



ನಮ್ಮ ಮೊಬೈಲ್ ಪೋನ್ ಗಾತ್ರದ ಈ ಉಪಕರಣ ನಿಜಕ್ಕೂ ಅದ್ಬುತ ಸಾದನ. ಅಮೇರಿಕ ಇದಕ್ಕಾಗಿ ಹಾರಿಸಿರುವ ೨೪ ಉಪಗ್ರಹಗಳಲ್ಲಿ ಅಲ್ಲಿಗೆ ಕಾಣುವ ಎರಡು ಯಾ ಮೂರು ಉಪಗ್ರಹಗಳಿಂದ ಬರುವ ಸಂಕೇತವನ್ನು ಉಪಯೋಗಿಸಿ ಇದು ನಾವಿರುವ ಸ್ಥಳದ ಅಕ್ಷಾಂಶ ರೆಖಾಂಶವನ್ನು ನಿಖರವಾಗಿ ಹೇಳುತ್ತದೆ. ಇಪ್ಪತ್ತು ಅಡಿ ವ್ಯತ್ಯಾಸವ ಸಹಾ ಇದರಲ್ಲಿ ಲೆಕ್ಕಕ್ಕೆ ಸಿಗುವುದು. ನಾವಿಕರಿಗೆ ಪೋಲಿಸರಿಗೆ ಕಾಡು ಉಳಿಸಲು ಅಗ್ನಿ ನಿಯಂತ್ರಣಕ್ಕೆ ಎಲ್ಲಕ್ಕೂ ಸಹಾಯವಾಗಬಲ್ಲ ಸಾದನ.

ವರ್ಷದ ಹಿಂದೆ ಸಕಲೇಶಪುರ ಹತ್ತಿರ ಕಾಡು ನುಗ್ಗಿದ ಸಾಫ್ಟ್ ವೇರ್ ತಂತ್ರಜ್ನರು ಅನಿರೀಕ್ಷಿತವಾಗಿ ಮಳೆಗಾಲ ಪ್ರಾರಂಬವಾಗಿ ದಿಕ್ಕಿನ ಪ್ರಜ್ನೆ ತಪ್ಪಿ ವಾಪಾಸು ಬರಲು ಸಾದ್ಯವಾಗದೆ ಮೃತ ಪಟ್ಟಿದ್ದರು. ಗೋವಾ ಕರ್ನಾಟಕ ಗಡಿಯಲ್ಲಿ ಉದುರಿದ ನೌಕಾದಳದ ಹೆಲಿಕಾಫ್ಟರಿನಲ್ಲಿ ಬದುಕುಳಿದ ವ್ಯಕ್ತಿ ಮೊಬೈಲ್ ಪೋನ್ ಮೂಲಕ ಸುದ್ದಿ ಹೇಳಿದರೂ ಕಾಡಿನ ಮದ್ಯೆ ಇದ್ದ ಅವರನ್ನು ಹುಡುಕಲು ಸಾದ್ಯವಾಗಿರಲಿಲ್ಲ. ಎರಡೂ ಸನ್ನಿವೇಶದಲ್ಲಿ ಸರಳ ಜಿಪಿಎಸ್ ಸಾದನ ಜೀವ ಉಳಿಸುತಿತ್ತು.

ಕಳೆದ ವರ್ಷ ನಾನು ವಿಚಾರಿಸುವಾಗ ಸುಮಾರು ನಾಲ್ಕು ಸಾವಿರ ರೂಪಾಯಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಬ್ಯವಿರುವ ಇದು ನಮ್ಮೂರು ತಲಪುವಾಗ ಒಂಬತ್ತು ಸಾವಿರವಾಗುತ್ತದೆ ಎಂದು ತಿಳಿದು ಬಂತು. ವಿಪರೀತ ಸುಂಕ (basic 30 % + ) ಮತ್ತು ಸ್ಪರ್ದಾತ್ಮಕವಲ್ಲದ ಸಣ್ಣ ಮಾರುಕಟ್ಟೆಯಿಂದಾಗಿ ಹೆಚ್ಚು ದುಬಾರಿಯೆನಿಸುತ್ತದೆ. ಸರಕಾರ   ಅಮದು   ಸುಂಕ  ಕಡಿಮೆ ಮಾಡಿ   ಈ  ಉಪಕರಣ   ಜನರ  ಕೈಗೆಟಕುವಂತೆ  ಮಾಡಿದರೆ   ತುಂಬಾ  ಉಪಕಾರವಿದೆ. 

ಈ ಸರಳ ಸಾದನ ದೊಡ್ಡ ಸಂಖ್ಯೆಯಲ್ಲಿ ತರಿಸಿದರೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿ ಖರ್ಚಾಗಬಹುದು. ಅಂದರೆ ಕೋಟಿ ರೂಪಾಯಿಗೆ ಸಾವಿರ ಉಪಕರಣಗಳು ಸಿಗುತ್ತವೆ. ಮೂರು ಸಾವಿರ ಉಪಕರಣಗಳಿಗೆ ಮೂರು ಕೋಟಿ ರೂಪಾಯಿ ಸಾಕು. ದೋಣಿ ಎಲ್ಲಿದೆಯೆಂದು ಗುರುತಿಸಲು ಅಳವಡಿಸುವಂತಹದಕ್ಕೂ ಅಷ್ಟು ಖರ್ಚಿಲ್ಲ. ಒಂದಕ್ಕೆ ಹದಿನೈದು ಸಾವಿರ ಮಿಗದು. ಇವರ ಇಪ್ಪತ್ತು ಕೋಟಿ ಲೆಕ್ಕಾಚಾರದಲ್ಲಿ ಜೇಬಿಗಿಳಿಸುವ ಮೊತ್ತವೇ ಹೆಚ್ಚಿನ ಪಾಲು ಎನಿಸುತ್ತದೆ.

ಒಮ್ಮೆ ಇತಿಹಾಸದ ಕ್ಲಾಸಿನಲ್ಲಿ ಮೇಡಂ ಕೇಳಿದರಂತೆ. ನಾನು ಎಲ್ಲಿದ್ದೆ ಅಂದರೆ ಎಲ್ಲಿಯವರೆಗೆ ಪಾಠ ತಲಪಿದೆಯೆಂದು. ಕೊನೆ ಬೆಂಚಿನ ಯಜಮಾನರ ಉತ್ತರ ಬಂತು ಅಕ್ಬರನ ಶಯನ ಕೋಣೆಯಲ್ಲಿ, ಮೇಡಂ.

ಅಂದ  ಹಾಗೆ    ಯಾರಾದರೂ ನಮಗೆ ಎಲ್ಲಿದ್ದಿಯ ? ಎಂದು ಮೊಬೈಲಿಗೆ ಫೋನಿಸಿದರೆ ನಾವು ಮುಖ್ಯ ರಸ್ತೆ ಅದ್ರಾಮ ಬ್ಯಾರಿಯ ತರಕಾರಿ ಅಂಗಡಿಯ ……..ಅನ್ನಬೇಕಾಗಿಲ್ಲ.      ಉತ್ತರ 13.210320 ಪೂರ್ವ 73.45213 ಅಂದರಾಯಿತು.

Wednesday, September 24, 2008

ಹೀಗೊಂದು ಸೌರ ಶಕ್ತಿ ಚಾಲಿತ ಶೀತಕ



 ಸೌರಶಾಖವನ್ನೇಕೆ   ನಮ್ಮ   ಶೀತಕ   ಅನುಸರಿಸ ಬಾರದೆನ್ನುವ ಯೋಚನೆ ನನಗೆ ಮೊದಲು ಬಂದಿತ್ತು.  ಸೀಮೆ ಎಣ್ಣೆ ದೀಪ ಉರಿಸಿ ತಂಪಾಗಿಸುವ ಪುರಾತನ ಕಾಲದ ಫ್ರಿಡ್ಜ್ ಗಳು ಬಹಳ ಹಿಂದೆ ನೋಡಿದ್ದೆ. ಸುಮಾರು ನಲುವತ್ತು ವರ್ಷ ಹಿಂದೆ ಯಂತ್ರ ಚಾಲಿತ ಫ್ರಿಡ್ಜ್ ಗಳು ಬರುವ ವರೆಗೆ ಅವುಗಳು ಜನಪ್ರಿಯವಾಗಿದ್ದವು. ಕ್ರಮೇಣ ಅವುಗಳ ತಯಾರಿ ನಿಂತು ಅವುಗಳೆಲ್ಲ ಮೂಲೆ ಪಾಲಾದವು.

ಇದರ  ತಂತ್ರಜ್ನಾನ   ಹೊಸತಲ್ಲ.  ಇಂದಿನ    ಫ್ರಿಡ್ಜುಗಳು  ತುಂಬಾ  ವಿದ್ಯುತ್  ಅಪೇಕ್ಷಿಸುವ  ಯಂತ್ರಾವಲಂಬಿಯಾಗಿದೆ.  ಯಂತ್ರದ  ಮೂಲಕ  ಒತ್ತಡ  ಹೆಚ್ಚಿಸುವ  ಬದಲಿಗೆ  ಶಾಖ ಮೂಲಕ  ಹೆಚ್ಚಿಸುವ  ಕ್ರಿಯೆ  ಸರಳ.   ನೂರು  ವರ್ಷ ಹಿಂದೆ  ಅಗ್ಗದ  ಪೆಟ್ರೋಲ್   ವಿದ್ಯುತ್  ವಾಹನ  ಅವಿಶ್ಕಾರ  ತಡೆಗಟ್ಟಿದಂತೆ  ನಲುವತ್ತು  ವರ್ಷ    ಹಿಂದೆ  ಅಗ್ಗದ  ವಿದ್ಯುತ್  ಈ  ಸರಳ  ಶೀತಕಗಳನ್ನು  ಮಾರುಕಟ್ಟೆಯಿಂದ  ಓಡಿಸಿತು  ಅನ್ನಬಹುದು. 

ಇತ್ತೀಚೆಗೆ    ಅಮೇರಿಕದ ಸಾನ್ ಜೋಸ್ ವಿಶ್ವವಿದ್ಯಾಲಯದ ಚುರುಕು ಮೆದುಳುಗಳೆಲ್ಲ ಸೇರಿ ಇಂತಹ ಸೂರ್ಯನ ಶಾಖ ಬಳಸಿ ಮಂಜುಗಡ್ಡೆ ತಯಾರಿಸುವ ಯಂತ್ರ ರೂಪಿಸುವುದರಲ್ಲಿ ಸಫಲರಾಗಿದ್ದಾರೆ. ಯಾವುದೇ ಚಲಿಸುವ ಬಾಗಗಳಿಲ್ಲದ ಅದು ಬರೇ ಒಂದು ರಸಾಯನಿಕ ಕ್ರಿಯೆಯಲ್ಲಿ ಮಂಜುಗಡ್ಡೆ ಉತ್ಪಾದನೆ ಮಾಡುತ್ತದೆ.

ಉಬ್ಬಿನ ಪ್ರತಿಫಲಿಸುವ ಹಲಗೆಯನ್ನು ಉಪಯೋಗಿಸಿ ಬೆಳಕು ಮತ್ತು ಶಾಖವನ್ನು ಕೊಳವೆ ಮೇಲೆ ಕೇಂದ್ರೀಕರಿಸುವುದರಿಂದ ಇದರಲ್ಲಿ ತುಂಬಿಸಿರುವ ದ್ರಾವಣ ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ. ಸೂರ್ಯ ಮುಳುಗಿದ ನಂತರ ಒತ್ತಡದ ವ್ಯತ್ಯಾಸದಿಂದಾಗಿ ಈ ಅನಿಲ ರೂಪ ವಿಪರೀತ ಶಾಖವನ್ನು ಕಳಕೊಳ್ಳುವ ಮೂಲಕ ತಣ್ಣಗಾಗಿಸಿ ಇದರಲ್ಲಿ ಸುಮಾರು ಆರು  ಕಿಲೊ ಐಸ್ ತಯಾರಾಗುತ್ತದೆ. ಈ ದ್ರವ  ತಣ್ಣಗಾಗುವಾಗ   ೧೦೪  ಡಿಗ್ರಿ ಫಾರಿನ್ ಹೀಟ್ ಅಂದರೆ ಸುಮಾರು ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿದ ನಂತರ  ವೇಗವಾಗಿ ಶಾಖವನ್ನು ಕಳಕೊಳ್ಳುವ ಕಾರಣ ಇದು ಉಷ್ಣವಲಯದಲ್ಲೂ ಕೆಲಸ ಮಾಡಲು ಸಾದ್ಯ. ಯಾವುದೇ ಚಲಿಸುವ ಬಾಗಗಳಿಲ್ಲದ ಕಾರಣ ಹಾಳಾಗುವ ಸಾದ್ಯತೆಗಳು ಅತ್ಯಲ್ಪ.   ಪೈಪು ತೂತಾಗದಂತೆ ನೋಡಿಕೊಂಡರೆ ಸೈ.


ಮನೆಯಲ್ಲಿ ಆಹಾರ ಪದಾರ್ಥಗಳ ಮತ್ತು ವೈದ್ಯಕೀಯ ಲಸಿಕೆಗಳ ಮದ್ದುಗಳ ಬಹುಕಾಲ ಇಟ್ಟುಕೊಳ್ಳಲು ಇದು ಸಹಾಯ ಆಗಬಹುದು. ವಿದ್ಯುತ್ ಶಕ್ತಿ ಲಬ್ಯವಾಗದ ಸ್ಥಳಗಳಲ್ಲೂ ಇದು ಚೆನ್ನಾಗಿ ಕೆಲಸ ಮಾಡಬಲ್ಲದು. ನಮ್ಮಲ್ಲಿರುವಂತೆ ದಿನಕ್ಕೆ ಎಂಟು ಘಂಟೆ ವಿದ್ಯುತ್ ಕಡಿತ ಇರುವಲ್ಲಿಗೂ   ಬಹಳ   ಉಪಯುಕ್ತ.    ವಿಪರ್ಯಾಸ ಎಂದರೆ ನಮ್ಮಂತೆ ಹಳ್ಳಿಗರ ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವುದು ಶೀತಕವೇ.   ಇದಿಲ್ಲವಾದರೆ  ನಾವು  ಮನೆ ಬಳಕೆ    ವಿದ್ಯುತ್  ಮಟ್ಟಿಗೆ   ಸ್ವಾವಲಂಬಿಗಳು.

Saturday, September 20, 2008

ಸಾಗಾಣಿಕೆ ಅನುಕೂಲ ಸೈಕಲುಗಳು


ನಮ್ಮಲ್ಲಿ  ಯಾಕಿಲ್ಲ  ಎನ್ನುವ   ಪಟ್ಟಿಗೆ  ಸೇರಿಸುವಂತಹ   ವಸ್ತು   ಸಾಗಾಣಿಕೆ  ಸೈಕಲುಗಳು.      ಬಾರತದಲ್ಲಿ    ಇಂದು ಕೆಲವು ಕೋಟಿ ರೂಪಾಯಿ ಕ್ರಯದ  ವಿಲಾಸಿ   ಕಾರುಗಳು  ಮತ್ತು   ನೂರಾರು ಬಗೆಯ    ದ್ವಿಚಕ್ರ ವಾಹನಗಳು ನಮ್ಮ ಮಾರುಕಟ್ಟೆಯಲ್ಲಿಸಿಗುತ್ತದೆ.      ಆದರೆ ಹಲವಾರು ಉಪಯುಕ್ತ    ಸರಳ   ಮಾದರಿಗಳು ನಮ್ಮಲ್ಲಿ ಮುಖತೋರಿಸಲೇ ಇಲ್ಲ.    ಗ್ರಾಮೀಣ ಪ್ರದೇಶದಲ್ಲಿ ಉಪಯುಕ್ತ ಎನಿಸಬಹುದಾದ ಸಕಲ ದಾರಿ ಸಂಚಾರಿ ಸದಾಸಂ ಮತ್ತು   ಈ  ಹಿಂಬಾಗ  ಉದ್ದವಾದ  ಸೈಕಲುಗಳು   ಉತ್ತಮ  ಉದಾಹರಣೆ. 

ಸೈಕಲು    ತಯಾರಿ    ಬಗೆಗಿನ ವಿಚಾರಗಳೆಲ್ಲ ನಮ್ಮ ದೇಶದಲ್ಲಿ ನಿಂತ ನೀರಾಗಿದೆ. ಲುದಿಯಾನದಲ್ಲೂ ಮದ್ರಾಸಿನಲ್ಲೂ ಇರುವ ನಮ್ಮ ಸೈಕಲ್ ತಯಾರಕರು ಬ್ರಿಟೀಷರು ಬಿಟ್ಟು ಹೋದ ಅಚ್ಚಿನಲ್ಲೇ ಇಂದಿಗೂ   ಸೈಕಲುಗಳ ತಯಾರಿಸಿ ಮಾರುತ್ತಿದ್ದಾರೆ.    ಗಾತ್ರದಲ್ಲಿ ವಿವಿದತೆ ಕಂಡುಬಂದರೂ    ವಿನ್ಯಾಸದಲ್ಲಿ ಇಲ್ಲವೇ ಇಲ್ಲ.  ಇಷ್ಟೊಂದು  ಸರಳ ಬದಲಾವಣೆ  ನಮ್ಮ  ತಯಾರಕರು  ಅಳವಡಿಸಿಲ್ಲ  ಎನ್ನುವಾಗ   ಅಸಹಾಯಕ     ಹತಾಶೆ  ಬಾವನೆ  ಮೂಡುತ್ತದೆ. 

ಒಂದಷ್ಟು ತಂತ್ರಾಂಶದಲ್ಲಿ ಕೆಲಸ ಮಾಡುವ ಆಸಕ್ತ ಹುಡುಗರು ಪರದೇಶಗಳಿಂದ ಹಗುರವಾದ ಅತ್ಯಾದುನಿಕ ಸೈಕಲ್ ತರಿಸಿ ಮಾರಾಟ ಮಾಡಿ ಹೊಸ ನೀರ ಹರಿವಿಗೆ ಪ್ರಯತ್ನಿಸುತ್ತಿದ್ದಾರೆ ಆಂದರೂ ಸಹಾ ಅವರ ಪ್ರಬಾವ ಪಟ್ಟಣಗಳಿಗೆ ಸಿಮಿತ. ಆ ದುಬಾರಿ ಸೈಕಲುಗಳು ಹಳ್ಳಿಗರ ಜನಸಾಮಾನ್ಯರ ಕೈಗೆಟಕುವಂತೆಯೂ ಇಲ್ಲ.


ನಮಗೆ    ಉಪಯೋಗವಾಗಬಹುದಾದ   ಸೈಕಲುಗಳು  ಎಲ್ಲೋ  ತಯಾರಾಗುತ್ತದೆ  ಎನ್ನುವುದು  ಸಂತಸದ  ಸುದ್ದಿ.    ಪರದೇಶಗಳಲ್ಲಿ ಅಮೇರಿಕದಿಂದ ಹಿಡಿದು   ಅಫ್ರಿಕದ  ವರೆಗೆ ಹೊಸ ತರದ ಸಾಗಾಣಿಕೆ ಸೈಕಲುಗಳ ಅವಿಷ್ಕರಣೆ ಹಾಗೂ ಉಪಯೋಗ ಸಾಗಿದೆ.   ಈ ಸೈಕಲುಗಳು  ಆಸನದ  ಹಿಂದಿನ  ಬಾಗ    ಸ್ವಲ್ಪ   ಉದ್ದವಾಗಿದ್ದು ಹೆಚ್ಚು ಸಾಮಾನು ಹಾಕಲು ಉಪಯುಕ್ತ.     ಕಬ್ಬಿಣದ ಕೊಳವೆಗಳ ಬದಲಿಗೆ ಬಿದುರಿನ ಕೋಲುಗಳ ಉಪಯೋಗಿಸುವುದರಲ್ಲೂ    ಆಫ್ರಿಕದಲ್ಲಿ     ಸಫಲರಾಗಿದ್ದಾರೆ.  


ಈ  ಮಾದರಿ  ಹೊಸ    ಸೈಕಲುಗಳು ತಯಾರಿಗೆ  ಹೆಚ್ಚು  ಕಬ್ಬಿಣದ  ಕೊಳವೆಗಳ  ಉಪಯೋಗದಿಂದ   ಇನ್ನೂರು ರೂಪಾಯಿ ದುಬಾರಿ    ಆಗಬಹುದು.    ನಮ್ಮಲ್ಲಿ     ಸಂಪ್ರದಾಯಿಕ  ಸೈಕಲು  ಮಾರುಕಟ್ಟೆ   ದೊಡ್ಡ  ತಯಾರಕರ  ಹಿಡಿತದಲ್ಲಿದೆ.  ಇದು  ಅಂತರ್ಜಾಲದಲ್ಲಿ  ಮಾರಾಟ  ಆಗುವ  ಸಾಮಾನು  ಅಲ್ಲ.    ಇವುಗಳಲ್ಲಿ ಹೆಚ್ಚು ಸಾಮಾನು ಕೊಂಡೊಯ್ಯಬಹುದು.   ಇನ್ನೂರು  ಕಿಲೊ  ಸಾಮಾನು  ಅಥವಾ  ಮೊರು  ಜನ  ಹೊರುವ  ಮಾದರಿಗಳಿವೆಯಂತೆ.     ಸೈಕಲುಗಳ ಉಪಯೋಗಿಸುವ ಸಣ್ಣ ವ್ಯಾಪಾರಿಗಳು ವಿತರಕರು ನಿತ್ಯವೂ ಉಪಯೋಗಿಸುವವರು  ಹಲವರು   ಪುಟ್ಟ ದ್ವಿಚಕ್ರಕ್ಕೆ ಬಡತಿ ಹೊಂದಿದ್ದರಾದರೂ ಇನ್ನೂ ಸಾಕಷ್ಟು ಜನ ಸೈಕಲಿಗೆ ಅಂಟಿಕೊಂಡಿದ್ದಾರೆ.     ಅವರಿಗೆಲ್ಲ ಈ ಸೈಕಲುಗಳು ನಮ್ಮಲ್ಲೂ     ಜೋಡಣೆಯಾದರೆ ಬಹಳ ಉಪಯೋಗವಾಗಬಹುದು.

Tuesday, August 05, 2008

ವಿದ್ಯುತ್ ಬಳಕೆಯ ಗಮನಿಸಲು

ನಾವು ವಾಹನಕ್ಕೆ ಮೀಟರ್ ಅಳವಡಿಸುತ್ತೇವೆ. ಪ್ರಯಾಣಿಸುವಾಗ ಆಗಾಗ ಅದರ ಮೇಲೆ ಗಮನಿಸುತ್ತೇವೆ. ವೇಗ ಹೆಚ್ಚಾಯಿತು ಎನ್ನಿಸುವಾಗ ನಿದಾನಿಸುತ್ತೇವೆ. ಪೆಟ್ರೊಲ್ ಮೈಲೇಜಿನ ಬಗೆಗೆ ಕಣ್ಣಿಡುತ್ತೇವೆ.


ಇದೇ ರೀತಿಯ ಕಾಳಜಿ ನಮ್ಮ ವಿದ್ಯುತ್ ಉಪಯೋಗದ ಬಗೆಗೆ ನಾವು ತೋರಿಸುವುದಿಲ್ಲ. ತೋರಿಸಲು ಸಾದ್ಯವಾಗುವುದೂ ಇಲ್ಲ. ವಿದ್ಯುತ್ ಅಳೆಯುವ ಹತ್ಯಾರುಗಳೂ ನಮ್ಮಲ್ಲಿ ಹುಡುಕುವುದೇ ಕಷ್ಟ.   ಬಳಕೆ ಬಗೆಗೆ ನಮಗೆ ಈಗ ಚಿತ್ರಣ ಸಿಗುವುದು ವಿದ್ಯುತ್ ಮಾಪಕ ಓದುವವರು ಬಂದು ಬಿಲ್ ಕೊಡುವಾಗಲೇ. ಬದಲಾಗಿ  ಉಪಯೋಗದ  ಬಗ್ಗೆ  ಕ್ಷಣ ಕ್ಷಣಕ್ಕೂ ಚಿತ್ರಣ ಸಿಕ್ಕರೆ ಖಂಡಿತ ಉಳಿತಾಯ ಸಾದ್ಯ.

ಈ ಮದ್ಯೆ ನಾನು ಅಮೇರಿಕದಲ್ಲಿ ಸಿಗುವ ಒಂದು ಮೀಟರ್ ಬಗ್ಗೆ ಕುಶಿ ಪಟ್ಟು ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಎರಡು ಹಂತದಲ್ಲಿ ಅಬಿವೃದ್ದಿ ಹೊಂದಿದ ಸಲಕರಣೆ ಎನ್ನಬಹುದು. ಮೊದಲಿಗೆ ನೇರವಾಗಿ ಲೈನಿಗೆ ಸಿಕ್ಕಿಸುವ ಒಂದು ಮೀಟರ್ ಬಂತು. ಅದು ಹೆಚ್ಚು ಸುದಾರಣೆಗೊಂಡ ನಮ್ಮಲ್ಲಿರುವ ಅಂಪ್ಸ್-ಮೀಟರಿಗೆ ಹೋಲಿಸಬಹುದು.

ಎರಡನೇಯ ತಲೆಮಾರಿನ ಸುದಾರಣೆಯಲ್ಲಿ  ಮೇಲಿನ ಚಿತ್ರದಲ್ಲಿರುವಂತೆ  ನಿಮ್ಮ ಮೀಟರ್ ಮೇಲೆ    ಒಂದು ಚಿಕ್ಕ ಮಾಹಿತಿ ಸಂಗ್ರಾಹಕ ಮತ್ತು ಮನೆಯಲ್ಲಿ ಅನುಕೂಲವಿರುವಲ್ಲಿ ಅಳವಡಿಸುವ ಕೆಳಗಿನ  ಚಿತ್ರದಲ್ಲಿರುವಂತಹ   ಡಿಸ್ ಪ್ಲೆ.   ಕಾರ್ಡ್ ಲೆಸ್ ಪೋನ್ ಕೆಲಸ ಮಾಡುವಂತೆ ಸಂಗ್ರಾಹಕದಿಂದ ಮಾಹಿತಿ ನಿರಂತರವಾಗಿ ಹರಿದು ಬರುತ್ತದೆ. ಇದನ್ನು ನಮಗೆ ಅನುಕೂಲವಾಗುವ ಗೋಡೆಯಲ್ಲಿ ಅಳವಡಿಸಬಹುದು, ಮೇಜಿನ ಮೇಲೆ ಇಡಬಹುದು.  ಒಮ್ಮೆ ಇದನ್ನು ನೋಡಲು ನಾವು ಆ ಕ್ಷಣ ಉಪಯೋಗಿಸುವ ವಿದ್ಯುತ್ ಘಂಟೆಗೆ ಎಷ್ಟು ಹಣವಾಗುತ್ತದೆ ಎನ್ನುವುದನ್ನೊ ಅದು ಸ್ಪಷ್ಟವಾಗಿ ತೋರಿಸುತ್ತದೆ. ಸ್ವಾಬಾವಿಕವಾಗಿ   ಪೋಲಾಗುವಲ್ಲಿ   ಬ್ರೇಕ್  ಹಾಕಲು  ಅರಿವು ಹಾಗೂ   ಪ್ರೇರಣೆ  ದೊರಕುತ್ತದೆ. 

ಅಮೇರಿಕದಲ್ಲಿ ಇದರ ಬೆಲೆ ಸುಮಾರು ಐದು ಮುಕ್ಕಾಲು ಸಾವಿರ ರೂಪಾಯಿ ಅನ್ನಬಹುದು ( USD 135) ಅಲ್ಲಾದರೆ ಉಳಿತಾಯವೇ ಈ ಹಣವನ್ನು ದುಡಿದುಕೊಡುತ್ತದಂತೆ.  ನಮ್ಮಲ್ಲೂ   ಇದು  ಕೈಗೆಟಕುವ  ಬೆಲೆಗೆ   ಬೇಗನೆ  ಸಿಗುವಂತಾಗಲಿ. 

ವಿವರಗಳಿಗೆ : http://fivepercent.us/2008/07/28/cent-a-meter-centometer-or-power-cost-meter-pays-for-itself/

Friday, July 11, 2008

ಮಾನವ ಚಾಲಿತ ಎಲ್ಲೆಡೆ ಸಾಗುವ ಗಾಡಿ

ಸ್ವಾವಲಂಬನೆ  ನೆಲೆಯಲ್ಲಿ  ನಾನು  ಸೈಕಲನ್ನು   ಪ್ರೀತಿಸಿದರೂ  ಇಂದಿನ  ದೈಹಿಕ  ದುರ್ಬಲತೆಯಿಂದ    ಸೈಕಲಿನಲ್ಲಿ  ಕೂರುವಂತಿಲ್ಲ.   ಹಾಗೆಯೇ  ಪೆಟ್ರೋಲ್  ಬಳಸುವ  ಸದಾಸಂ ನಿತ್ಯವೂ  ಉಪಯೋಗಿಸುವುದು  ಅನಿವಾರ್ಯವಾಗಿದೆ. ಇವೆರಡನ್ನೂ    ಜತೆಗೂಡಿಸಿದಂತಹ   ಒಂದು ಕುತೂಹಲಕರವಾದ  ವಾಹನ  ಜರ್ಮನಿಯಲ್ಲಿ  ಅನ್ವೇಷಣೆ  ಮಾಡಿದ್ದಾರೆ.

ಇದೊಂದು ಜರ್ಮನಿಯಲ್ಲಿ ತಯಾರಾದ ನಾಲ್ಕು ಚಕ್ರಕ್ಕೂ ಚಾಲನೆ ಇರುವ ಎಲ್ಲೆಡೆ ಸಾಗಲು ಸಾದ್ಯವಾಗುವಂತಹ ಗಾಡಿ. ಒಂದು ದೊಡ್ಡ ವಸ್ತು ಪ್ರದರ್ಶನದಲ್ಲಿ ಇದರನ್ನು ತೋರಿಸಿದರೂ ದೊಡ್ದ ಮಟ್ಟದ ತಯಾರಿ ದೂರ ಇರುವಂತಿದೆ. ಅಲ್ಲಿ ಒಬ್ಬ ವೃತ್ತಿಪರ ಸೈಕಲಿಗ ಓಡಿಸಿದ ಕಾರಣ ಜನಸಾಮಾನ್ಯರಿಗೆ ಇದನ್ನು ತುಳಿಯಲು ಸಾದ್ಯವೋ ಅನ್ನುವುದು ಇನ್ನೂ ನಿಗೂಡ. ಅವರ ಸಾದನೆ ಮಾತ್ರ ಖಂಡಿತ ಮೆಚ್ಚುವಂತದ್ದು.

ಖಾಯಂ ಆಗಿ ನಾಲ್ಕು ಚಕ್ರಕ್ಕೂ ಚಾಲನೆ, ಹೈಡ್ರಾಲಿಕ್ ಬ್ರೇಕು ಮತ್ತು ಅತ್ಯುತ್ತಮ ಮಟ್ಟದ ಸೈಕಲ್ ಗೇರುಗಳ ಒಳಗೊಂಡ ಈ ವಾಹನದ ಬೆಲೆ ಬಹಳ ದುಬಾರಿಯಾಗಿರುವ ಎಲ್ಲ ಲಕ್ಷಣಗಳಿರುವ ಕಾರಣ ನಾವು   ಕನಸು ಕಾಣಬಹುದಾಷ್ಟೇ.


ನಾನು ಚೀನಾದಿಂದ ಸದಾಸಂ ತರಿಸುವ ಮೊದಲು ಇದಕ್ಕೆ ಹೋಲಿಕೆಯುಳ್ಳ ಆದರೆ ಪುಟ್ಟ ಇಂಜಿನ್ ಅಳವಡಿಸಿದ ಒಂದು ಸರಳ Go-kart ಇಲ್ಲಿ ತಯಾರಿಸುವ ಬಗ್ಗೆ ಬಹಳ ಯೋಚಿಸಿದ್ದೆ. ಆದರೆ ಯಾರೂ ನನ್ನಷ್ಟು ಆಸಕ್ತಿ ತೋರಿಸದ ಕಾರಣ ಆಲೋಚನೆ ಬಿಡಬೇಕಾಯಿತು. ಈಗ ಗಾಡಿಯ ಬಗೆಗೆ ಪ್ರಾಯೋಜಿಕ ಪರೀಕ್ಷೆಗಳೂ ನಡೆದಿಲ್ಲ. ಉಪಯುಕ್ತ ಎನಿಸುವುದಾದರೆ ಇದೇ ಮಾದರಿಯ ಸರಳ ವಾಹನ ನಮ್ಮಲ್ಲಿ ತಯಾರಿಸಲು ಖಂಡಿತ ಸಾದ್ಯ.


ವಿವರಗಳಿಗೆ

http://www.treehugger.com/files/2008/06/four-wheel-drive-bicycle.php

ಅಲ್ಲೂ  ಉಂಟು   ಸದಾಸಂ 

Wednesday, June 25, 2008

ಅಮೇರಿಕದಲ್ಲಿಂದು ಅಡಿಕೆ ಹಾಳೆ ತಟ್ಟೆ

ಅಮೇರಿಕದ ಒಂದು MBA ವಿದ್ಯಾರ್ಥಿ ತನ್ನ project work ಗೆಂದು ಕೊಳೆತು ಗೊಬ್ಬರವಾಗಬಲ್ಲ ಪರಿಸರಕ್ಕೆ ಕನಿಷ್ಟ ಹಾನಿ ಉಂಟುಮಾಡುವ ಪರಿಸರ ಸ್ನೇಹಿ ತಟ್ಟೆಯ ಹುಡುಕಾಟದಲ್ಲಿ ಕೊನೆಗೆ ತಲಪಿದ್ದು ದಕ್ಷಿಣ ಬಾರತಕ್ಕೆ. ವಿದ್ಯಾರ್ಥಿಗಳು ಕಾಟಾಚಾರಕ್ಕೆ ಎನ್ನುವ ಬದಲು ಕಷ್ಟ ಪಟ್ಟು project work ಮಾಡಿದರೆ ಮುಂದಿನ ಜೀವನಕ್ಕೆ ಪೂರಕ ಎನ್ನುವುದಕ್ಕೆ ಇನ್ನೊಂದು ಉದಾಹರಣೆ. ಅಡಿಕೆ ಹಾಳೆ ತಟ್ಟೆ ಬಗೆಗೆ ಮಂಡಿಸಿರುವ ಅವನ ಪ್ರಬಂದಕ್ಕೆ ಲಕ್ಷಾಂತರ ಡಾಲರ್ ಹರಿದು ಬಂತು. ಎಂಬತ್ತು ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಹಾಗೂ ಸಹಾಯದನ ಲಬಿಸಿದ ಈ ವಿದ್ಯಾರ್ಥಿ ಹಾಳೆ ತಟ್ಟೆಯನ್ನು ಬಾರತದಿಂದ ತರಿಸಿ ಮಾರಾಟ ಮಾಡಲೂ ಪ್ರಾರಂಬಿಸಿದ.



ಇಂದು ಅಮೇರಿಕದಲ್ಲಿ ಒಂಬತ್ತಿಂಚು ಚೌಕದ ಹಾಳೆ ತಟ್ಟೆಯ ಚಿಲ್ಲರೆ ಮಾರಾಟ ಬೆಲೆ ಕೇವಲ ನಲುವತ್ತು ರೂಪಾಯಿ. ನಮ್ಮಲ್ಲಿ ಒಂದೂವರೆ ರೂಪಾಯಿಗೆ ಚಿಕ್ಕ ಪುಟ್ಟ ಹಾಳೆ ತಟ್ಟೆ ತಯಾರಕರು ಮಾರಾಟ ಮಾಡುವ ಈ ತಟ್ಟೆ ಅಮೇರಿಕ ತಲಪುವಾಗ ಡಾಲರ್ ಲೆಕ್ಕದ ಬೆಲೆಗೆ ಮಾರಾಟವಾಗುತ್ತದೆಯಂತೆ. ಪ್ರಕಟಣೆಯಲ್ಲಿ ಮಾಲು ಬಾರತದ್ದು ಎನ್ನುವ ವಿಚಾರ ಸಾದ್ಯವಾದಷ್ಟು ಅಡಗಿಸಿದ್ದಾರೆ. ಬದಲಾಗಿ South East Asia ಎನ್ನುತ್ತಾರೆ. ಇದೊಂದು ಉತ್ತಮ ವ್ಯವಹಾರ ಸಾದ್ಯತೆಯೆಂದು ಅನಿಸುತ್ತದೆ.


ಅಮೇರಿಕದ ಪೂರ್ವ ಕರಾವಳಿಯಲ್ಲಿ ಸಾವಯುವ ಕೃಷಿ ಸಾಮುಗ್ರಿ ಹಂಚುವುದರಲ್ಲಿ Paul Keene ಎಂಬವರು ಸ್ಥಾಪಿಸಿದ walnut acres ಬಹಳ ಪ್ರಸಿದ್ದವಾಗಿತ್ತು. ಬಾರತದಲ್ಲಿ ಕೆಲವು ಕಾಲ ಕಳೆದ ಇವರನ್ನು ಆಮೇರಿಕದಲ್ಲಿ ಸೈಕಲಿಸುವಾಗ ಗೆಳೆಯರೊಂದಿಗೆ ಇವರಲ್ಲಿಗೆ ಹೋಗುವ ಅವಕಾಶ ಸಿಕ್ಕಿ ಮಾತನಾಡಿಸಿದ್ದೆ. 1998 ರಲ್ಲಿ ನಾನು ಅಮೇರಿಕಕ್ಕೆ ಹೋಗುವಾಗ ಇವರಿಗೆ ತೋರಿಸಲು ಒಂದಷ್ಟು ಹಾಳೆ ತಟ್ಟೆಗಳ ತಗೊಂಡು ಹೋಗಿದ್ದೆ. ಆದರೆ Paul ಅವರು ವ್ಯವಹಾರದಿಂದ ಆಗ ನಿವೃತ್ತರಾದ ಕಾರಣ ತೋರಿಸಲು ಸಾದ್ಯವಾಗಿರಲಿಲ್ಲ. ಜಾಗತೀಕರಣದ ಪ್ರಬಾವವೋ ಎಂಬಂತೆ Walnut Acres ಇಂದು ಇತಿಹಾಸಕ್ಕೆ ಸೇರಿದೆ. ಇತರ ಸಾವಯುವ ಗೆಳೆಯರಿಗೆ ತೋರಿಸಲು ನನ್ನ ಆರೋಗ್ಯ ಸಮಸ್ಯೆಗಳು ಅಡ್ಡವಾದವು.ಇಪ್ಪತೈದು ವರ್ಷಗಳಿಂದ ನಮ್ಮಲ್ಲಿ ತಯಾರಾಗುತ್ತಿರುವ ಅಡಿಕೆ ಹಾಳೆ ತಟ್ಟೆ ಅಮೇರಿಕದಲ್ಲಿನ್ನೂ ಅಪರಿಚಿತ ಎನ್ನುವಾಗ ಆಶ್ಚರ್ಯವಾಗುತ್ತದೆ.
ಹೆಚ್ಚಿನ ಮಾಹಿತಿ: