Showing posts with label GPS. Show all posts
Showing posts with label GPS. Show all posts

Wednesday, October 27, 2010

ನಾಯಿ ಹೇಲು ವಿಲೆವಾರಿಗೆ ಜಿಪಿಎಸ್ ಬಳಕೆ

ಇತ್ತೀಚಿಗೆ ಹಲವು ವಾರಗಳಿಂದ ಜಿಪಿಎಸ್ ಸಂಬಂದಿಸಿದ ವಿಚಾರಗಳೇ ನನ್ನ ತಲೆಯಲ್ಲಿ ಸುಳಿದಾಡುತ್ತಿದೆ. ಜಿಪಿಎಸ್ ಮಾಪಿನಿಂದ ಸಮಾಜಕ್ಕೆ ಹಲವು ಪ್ರಯೋಜನಗಳಿವೆ., ನಮ್ಮ ದೈನಂದಿನ ಬಳಕೆಗೆ ಮಾತ್ರವಲ್ಲ, ಪೋಲೀಸ್, ಅಗ್ನಿ ಶಾಮಕ ದಳ ಮತ್ತು ತುರ್ತು ವೈದ್ಯಕೀಯ ನೆರವು ದಾವಿಸಲು ಜಿಪಿಎಸ್ ನಕ್ಷೆಗಳು ಸಹಾಯಕವಾಗಬಹುದು ಎನ್ನುವ ವಿಚಾರ ಮನದಲ್ಲಿ ಸುಳಿದಾಡುತಿತ್ತು.     ಆದರೆ -

ಫ್ರಾನ್ಸಿನಲ್ಲಿ ಜಿಪಿಎಸ್ ಬಳಕೆಯಲ್ಲಿ ಹೊಸತನ ತೋರಿದ್ದಾರೆ. ಊರಳಗಿನ ರಸ್ತೆಗಳಿಗೆ ನಾಯಿ ಮಲ ಕೆಟ್ಟ ಹೆಸರು ತರುತಿತ್ತು. ಮುಂದಿನ ೨೦೧೨ರ ಒಲಂಪಿಕ್ ನಡೆಸುವ ಅವಕಾಶ ತಪ್ಪಿದ್ದು ಸಹಾ ನಾಯಿ ಹೇಲಿನಿಂದಾಗಿ ಎನ್ನುವ ಗುಮಾನಿ ದಟ್ಟವಾಗಿದೆ. ನಮ್ಮ ಎರ್ ಬಸ್ ವಿಮಾನ ಗೊತ್ತಲ್ಲ- ಅದು ಜೋಡಣೆಯಾಗುವ ಟೌಲೋಸ್ ಪಟ್ಟಣದಲ್ಲಿ ಇದು ಪ್ರಥಮವಾಗಿ ಜಾರಿಗೆ ಬಂದಿದೆ. ಪೊಲೀಸ್ ಹಾಗೂ ಪಟ್ಟಣದ ಅಧಿಕಾರಿಗಳಿಗೆ ಕೆಮರ ಮತ್ತು ಜಿಪಿಎಸ್ ಕೊಡಲ್ಪಟ್ಟಿತು. ಅವರು ನಾಯಿ ಮಲ ಕಂಡಾಗ ತುರ್ತಾಗಿ ಪೋಟೊ ಕ್ಲಿಕ್ಕಿಸಿ ಪೌರ ಕಾರ್ಮಿಕರಿಗೆ ರವಾನಿಸಬೇಕು. ಪೌರ ಕಾರ್ಮಿಕರು ತಕ್ಷಣ ವಾಹನದಲ್ಲಿ ಬಂದು ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ. ಈಗ ಪರೀಸ್ಥಿತಿ ಉತ್ತಮಗೊಂಡಿದೆ ಎನ್ನುತ್ತಾರೆ ಅಲ್ಲಿನ ವಕ್ತಾರರು.

ಹತ್ತು ದಿನ ಹಿಂದೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಗೆಗೊಂದು ಗೂಗಲ್ ಮಾಪಿನ ತಪ್ಪು ಬೊಟ್ಟುಮಾಡಿದ್ದೆ. ಅದೀಗ ಹೆಚ್ಚಿನಂಶ ಸ್ವಯಂಸೇವಕರೊಬ್ಬರಿಂದ ತಿದ್ದಲ್ಪಟ್ಟಿದೆ. ನನ್ನ ಬ್ಲೋಗ್ ಬರಹದ ಕಾರಣ ಇದ್ದರೂ ಇರಬಹುದು. ಅದರೆ ಗೂಗಲ್ ಸಂಸ್ಥೆಯ ಹಕ್ಕುಗೊಳಪಟ್ಟಿರುವ ಬೂಪಟಕ್ಕೆ ನಮ್ಮ ಸೇವೆ ಸಲ್ಲಿಸುವುದರ ಬದಲಿಗೆ ಸಮಾಜದ ಒಳಿತಿಗಾಗಿ ಸ್ಥಾಪನೆಗೊಂಡಿರುವ ಈ ಒಪನ್ ಸ್ಟ್ರೀಟ್ ಬೂಪಟಕ್ಕೆ ಕೈಜೋಡಿಸಿದರೆ ಉತ್ತಮ ಅನಿಸುತ್ತದೆ. ಗೂಗಲ್ ನಲ್ಲಿ ನಮ್ಮೂರಿನಲ್ಲಿಯೇ ಇನ್ನೂ ಸುಮಾರು ತಪ್ಪುಗಳು ಉಳಿದಿವೆ.

ತಿಂಗಳ ಹಿಂದೆ ಮಂಗಳೂರು ಪುತ್ತೂರು ರಸ್ತೆಗೆ ಸಿಮಿತವಾಗಿದ್ದ ಒಪನ್ ಸ್ಟ್ರೀಟ್ ನಕ್ಷೆಗೆ  ಹಲವಾರು ಉಪಯುಕ್ತ ಒಳರಸ್ತೆಗಳ ಸೇರಿಸಿದ್ದೇನೆ. ಪುತ್ತೂರಿಗೆ ಮಂಗಳೂರು ಹಾಸನ ರಸ್ತೆಯಿಂದ ಬಂದು ಸೇರುವುದು ಒಂದು ಪೆರ್ನೆ ಬನ್ನೂರು ಒಳರಸ್ತೆ. ಉಪ್ಪಿನಂಗಡಿಯಿಂದ ಪುತ್ತೂರು ಇನ್ನೂ ಸಂಪರ್ಕಿಸಿಲ್ಲ. ನಾನು ಎಲ್ಲ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದು ಟ್ರೈಕ್ ಓಡಾಟದಲ್ಲಿಯೇ.


ಜರ್ಮನಿಯ ಸರಕಾರ ಹತ್ತಿರದ ಓಡಾಟಗಳಿಗೆ ಕಾಲ್ನಡುಗೆ ಮತ್ತು ಸೈಕಲ್ ಗಳನ್ನು ಪ್ರೋತ್ಸಾಹಿಸುತ್ತದೆ. ಬಿತ್ತಿಪತ್ರಗಳು ಸಿನೆಮಾ ಕ್ಲಿಪ್ ಗಳು ತಯಾರಾಗಿವೆ. ಸಿನೆಮಾತಾರೆಯರು ಕ್ರಿಡಾಪಟುಗಳು ಕೈಜೋಡಿಸಿದ್ದಾರೆ. ಜರ್ಮನ್ ಬಾಷೆಯಲ್ಲಿರುವ ಅವರ ಘೋಷವಾಕ್ಯ ಸಾಮಾನ್ಯವಾಗಿ Turn on your brain, turn off your motor , For zero CO2 on short trip ಅನ್ನುತ್ತದೆ. ಅದನ್ನು ಅರ್ಥ ಕೆಡದಂತೆ ಕನ್ನಡಕ್ಕೆ ಅನುವಾದಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನನ್ನ ಗಮನಕ್ಕೆ ಬಂದ ಪುಟ್ಟ ಸಿನೆಮಾ ಕ್ಲಿಪ್ ಇಲ್ಲಿ ಅಂಟಿಸಿದ್ದೇನೆ.



ಕಾರಲ್ಲಿ  ಕೂತವನಿಗೆ ......

ಹೆಚ್ಚು  ಅಗಲವಿರುವ  ಮೇಲಿನ ಚಿತ್ರ ನೇರ ವೀಕ್ಷಿಸಲು  http://is.gd/gm4oL  ಕ್ಲಿಕ್ಕಿಸಿ

Saturday, October 16, 2010

ಭೂಪಟಕ್ಕೆ ಮಾಹಿತಿ ಸಂಗ್ರಹ ಟ್ರೈಕ್ ಸವಾರಿಯಲ್ಲಿ

ಇತ್ತೀಚೆಗೆ ಟ್ರೈಕ್ ಪ್ರವಾಸದಿಂದ ವಾಪಾಸಾದ ನಂತರ ಒಮ್ಮೆ http://www.openstreetmap.org/?lat=12.755&lon=75.069&zoom=11&layers=Mಪುಟ ಬಿಡಿಸಿದೆ. ನನಗಾಗ ಕೇರಳದಲ್ಲಿ ಈ ಬಗೆಗೆ ಸಾಕಷ್ಟು ಕೆಲಸ ಆಗಿದೆ ಮತ್ತು ಕರ್ನಾಟಕದ ನಮ್ಮ ಪರೀಸರದಲ್ಲಿ ಶೂನ್ಯ ಸೆರ್ಪಡೆ ಅನ್ನುವಾಗ ಬಹಳ ಬೇಸರವಾಯಿತು. ಚುರುಕಾಗಲು ಪ್ರೇರಣೆ ದೊರಕಿತು.


ಹಾಗೆ ಅನಂತರದ ದಿನಗಳಲ್ಲಿ ನಾನು ಈ ಭೂಪಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭೂಪಟ ಎಂದರೆ ನನಗೆ ಚಿಕ್ಕಂದಿನಲ್ಲಿಯೇ ಬಹಳ ಅಭಿಮಾನ. ಸೈಕಲ್ ಯಾತ್ರೆ ಸಂಬಂದಿಸಿ ದೆಹಲಿಗೆ  ಹೋದಾಗ ನನಗೆ ಪಿಯುಸಿ ಕಲಿಯುವಾಗ ಸಹಪಾಠಿಯಾಗಿದ್ದ ಅಲ್ಲಿ   ಕಾಣ ಸಿಕ್ಕ ಹಾಗೂ ಅತಿಥೇಯನಾಗಿದ್ದ ಸತ್ಯಪ್ರಕಾಶ ಆಗಾಗಲೇ ಹಲವು ಭೂಪಟಗಳ ಒಟ್ಟುಹಾಕಿದ್ದ. ಮಡುಚುವುದು ಮೊದಲಿನಂತೆಯೇ ಆಗಬೇಕು. ಇಲ್ಲವಾದರೆ ಬೇಗ ಹರಿದುಹೋಗುತ್ತದೆ ಎನ್ನುವ ಕಿವಿಮಾತು ಹೇಳಿಕೊಟ್ಟಿದ್ದ.

ಅನಂತರದ ಸೈಕಲು ಪ್ರವಾಸದಲ್ಲಿ ಒಂದು ರಾಶಿ ಭೂಪಟಗಳ ನಾನೂ ಕಲೆಹಾಕಿದ್ದೆ. ಇಂದಿಗೂ ಹಲವು ದೇಶಗಳ ಭೂಪಟ ನನ್ನ ಹತ್ತಿರವಿದೆ. ಅವುಗಳ ತಿರುವಿಹಾಕುವಾಗ ಆ ಪ್ರದೇಶಗಳ ವಿಚಾರ ಮನಸ್ಸು ಅವರಿಸಿಕೊಳ್ಳುತ್ತದೆ. ಈ ಮದ್ಯೆ ಅಂತರ್ಜಾಲದಿಂದಾಗಿ ಕಾಗದ ಬೂಪಟಗಳು ತನ್ನ ಮಹತ್ವ ಕಳಕೊಂಡವು. ಗೂಗಲ್ ಅಂತರ್ಜಾಲದಲ್ಲಿ ಇಡೀ ಪ್ರಪಂಚದ ಉಪಗ್ರಹ ಬೂಪಟ ಹಾಕಿದ ನಂತರವಂತೂ ಸಮಸ್ಯೆ ಎಲ್ಲ ಪರಿಹಾರ ಎಂದು ಅಂದುಕೊಂಡೆವು.

ಆದರೆ ಗೂಗಲ್ ಹಲವು ಅನಾಹುತಗಳನ್ನೂ ತಂದಿಟ್ಟಿದೆ. ಹಲವು ಜನ ವಾಹನಗಳ ದಾರಿ ತಪ್ಪಿಸಿಕೊಂಡಿದ್ದಾರೆ, ಚೌಗು ಪ್ರದೇಶದ ಮದ್ಯಬಾಗಕ್ಕೆ,   ಪರ್ವತದ ತುದಿಗೆ ತಲಪಿದವರಿದ್ದಾರೆ.   ಮಾತ್ರವಲ್ಲ ಗೂಗಲ್ ಬೂಪಟ ಬಳಸಿ ಪರಲೋಕಕ್ಕೆ ಹೋದವರ ಸಂಖ್ಯೆ ನಗಣ್ಯವಲ್ಲ.       ಇದು copyright ಗೆ ಒಳಪಟ್ಟಿರುವುದರಿಂದ ನಮಗೆ ಸಿಮಿತ ಉಪಯೋಗ. ಅಮೇರಿಕದ ಗೂಗಲ್ ಕಂಪೇನಿಯ  ಅತಿಯಾದ ಅವಲಂಬನೆ ಸಮಾಜದ ಮಟ್ಟಿಗೆ  ಅಪಾಯಕಾರಿ ಬೆಳವಣಿಗೆ. ಎದುರಾಳಿಗಳ ನುಂಗುತ್ತಾ ಬಂದ ಈ ಸಂಸ್ಥೆ ಬವಿಷ್ಯದಲ್ಲಿ ಎಲ್ಲ ಮಾಹಿತಿಜಾಲದ ಮೇಲೆ ಬಿಗಿ ಹಿಡಿತ ಸಾಧಿಸುವ ಲಕ್ಷಣಗಳು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಗೂಗಲ್ ಬಳಸಿದ ಉಪಗ್ರಹ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಆದರೆ ಅದನ್ನು ಉಪಯೋಗಿಸಿ ಗೀಟು ಎಳೆದ ಬೂಪಟಗಳಲ್ಲಿ ಬಹಳ ತಪ್ಪುಗಳನ್ನು ಕಾಣಬಹುದು. ಅದನ್ನು ನಂಬಿ ಕಾರು ಓಡಿಸಿದರೆ ನಮ್ಮೂರಲ್ಲಿಯೇ ತೋಡಿಗೆ ಇಳಿಯಬಹುದು, ಗುಡ್ಡ ಬೆಟ್ಟ ಹತ್ತಬಹುದು ಏಕೆಂದರೆ ಅದರಲ್ಲಿ ರಸ್ತೆ ಎಂದು ಸೂಚಿಸಿದಲ್ಲಿ ರಸ್ತೆಗಳಿಲ್ಲ. ಇದಕ್ಕೆ  ಉದಾಹರಣೆ ಮೊನ್ನೆ ನಾನು ಸಾಗಿದ ಮಾಣಿ ಉಪ್ಪಿನಂಗಡಿ ಮದ್ಯೆದ ರಾಷ್ಟ್ರೀಯ ಹೆದ್ದಾರಿಯ ಬಾಗ. http://www.everytrail.com/view_trip.php?trip_id=849082 


ಕೆಂಪು ಗೀಟು ಹೆದ್ದಾರಿಯಲ್ಲಿ ನಾನು ಸಾಗಿದ ದಾರಿ. ಹಳದಿ ಗೀಟು ಅವರನ್ನುವ ರಾಷ್ಟ್ರೀಯ ಹೆದ್ದಾರಿ. ಆದರೆ ಅವರು ತಪ್ಪಿ ಬಿದ್ದಿದ್ದಾರೆ ಎನ್ನಲು ಉಪಗ್ರಹ ಚಿತ್ರದಲ್ಲಿರುವ ರಸ್ತೆಗಳ ಗಮನಿಸಿದರೆ ಸಾಕು. ಇದರಲ್ಲಿ default ಆಗಿರುವ hybrid ಬಿಟ್ಟು map ನ್ನು ಕ್ಲಿಕ್ಕಿಸಿದರೆ ಮೇಲ್ಕಾಣಿಸಿದ ಚಿತ್ರ ಸಿಗುವುದು. ನಾನು ಅದರಲ್ಲಿ ಕಾಣಿಸದ ಗ್ರಾಮೀಣ ರಸ್ತೆಯಲ್ಲಿ ಬಂದು ಹೆದ್ದಾರಿ ಸೇರಿದ್ದೆ.


ಜನರೆಲ್ಲ ಕೈ ಜೋಡಿಸಿ ತಯಾರಿಸುವ ಈ ಹಕ್ಕು ಮುಕ್ತ ಬೂಪಟಗಳು ಖಂಡಿತ ನಮ್ಮ    ಸಮಾಜಕ್ಕೆ ಉತ್ತಮ. ನಾವು ತಿದ್ದುಪಡಿ ಮಾಡಬಹುದು ಮಾತ್ರವಲ್ಲ ಇಷ್ಟಬಂದಂತೆ ಬಳಸಿಕೊಳ್ಳಬಹುದು.   http://tools.geofabrik.de/mc/?mt0=mapnik&mt1=googlemap&lon=-0.13434&lat=51.51805&zoom=18 ವನ್ನು ಗಮನಿಸಿದರೆ ಊರವರು ಕೈಜೋಡಿಸಿ ತಯಾರಿಸಿದ ನಕ್ಷೆ ಗೂಗಲಿನಿಂದ ಮಿಗಿಲು ಎನ್ನುವ ವಿಚಾರ ಕಾಣಬಹುದು. ಅದುದರಿಂದ ಸಾರ್ವಜನಿಕರೇ ಸೇರಿ ರೂಪಿಸುವ ಈ ಭೂಪಟದ ಬಗೆಗೆ ಹೆಚ್ಚು ಆಸಕ್ತಿ ಉಂಟಾಯಿತು. ಮುಂದಿನ ದಿನಗಳಲ್ಲಿ ನಮಗೆ ಇದನ್ನು ಮೊಬೈಲ್ ಪೋನಿಗೂ ಇಳಿಸಿಕೊಳ್ಳಲು ಸಾದ್ಯ. ಸ್ವಲ್ಪ ಸಮಯ ಹಿಂದೆ  ವಿಟ್ಲದ  ಬೂಪಟದಲ್ಲಿ  ನಾನು ಸೆರ್ಪಡೆಗೊಳಿಸಿದ  ಮಾಹಿತಿ ಇಲ್ಲಿ  ಕಾಣಬಹುದು.    ಇನ್ನೂ ಅಪಾರ ಕೆಲಸ ಬಾಕಿ ಇರುತ್ತದೆ.  ಗಂಟೆಗಟ್ಟಲೆ  ಒರ್ಕುಟ್ ಮುಂತಾದ  ತಾಣಗಳಲ್ಲಿ  ಕಳೆಯುವ  ಯುವ  ಜನ  ಇಂತಹ  ಕಾರ್ಯದಲ್ಲಿ  ಮಗ್ನರಾದರೆ   ಭೂಗೋಳಶಾಸ್ತ್ರ, ರಚನಾತ್ಮಕ  ಕಂಪ್ಯುಟರ್ ಬಳಕೆ  ಮುಂತಾದ  ಉಪಯುಕ್ತ ವಿಚಾರ  ಅರಿಯಲು  ಸಾದ್ಯ.

ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಎಂಬಂತೆ ಜಿಪಿಎಸ್ ಟ್ರಾಕ್ ಸಂಗ್ರಹ ನನ್ನ ಟ್ರೈಕ್ ಒಡಾಟವನ್ನು ಸದುಪಯೋಗಗೊಳಿಸುವ ದಾರಿ. ಹಾಗೆ ಈ ವಾರ ಗುರುವಾರ ೫೫ ಕಿಮಿ http://is.gd/g3e9i ಮತ್ತು ಶುಕ್ರವಾರ ೬೭ ಕಿಮಿ http://is.gd/g3dWN ಟ್ರೈಕ್ ಸವಾರಿ ಮಾಡಿ ಆ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದೇನೆ. ಅವುಗಳ ಭೂಪಟಕ್ಕೆ ಸೇರಿಸುವುದು   ಇನ್ನೂ ಬಾಕಿ ಇರುತ್ತದೆ. ಅಂತೂ  ಕೆಲಸ  ಪ್ರಾರಂಬವಾಗಿದೆ. ಹೆಚ್ಚು ಜನ  ಕೈಜೋಡಿಸಿದರೆ  ಹೆಚ್ಚು  ಅರ್ಥಪೂರ್ಣವಾಗಿ  ಈ ಭೂಪಟ   ರೂಪಿಸಬಹುದು  

Friday, December 05, 2008

ರಕ್ಷಣೆಯ ನೆಪದಲ್ಲೊಂದು ದುಬಾರಿ ಯೋಜನೆ

ನಿನ್ನೆಯ ಪತ್ರಿಕೆಯಲ್ಲಿ ಒಂದು ಸುದ್ದಿ ಅಂದರೆ ಸರಕಾರಿ ಪ್ರಕಟನೆ ನನ್ನ ಗಮನ ಸೆಳೆಯಿತು. ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ೩೦೦೦ ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಸರಕಾರಕ್ಕೆ ಅಹವಾಲು. ಪಾಕಿಸ್ತಾನದ ಬಯೋತ್ಪಾದಕರಿಗೆ   ಸಮುದ್ರದಲ್ಲಿ  ಮುಂಬಯಿಗೆ    ದಾರಿ ತೋರಲು ಉಪಯೋಗಿಸಿದ ಕಾರಣ ಜಿಪಿಎಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.



ನಮ್ಮ ಮೊಬೈಲ್ ಪೋನ್ ಗಾತ್ರದ ಈ ಉಪಕರಣ ನಿಜಕ್ಕೂ ಅದ್ಬುತ ಸಾದನ. ಅಮೇರಿಕ ಇದಕ್ಕಾಗಿ ಹಾರಿಸಿರುವ ೨೪ ಉಪಗ್ರಹಗಳಲ್ಲಿ ಅಲ್ಲಿಗೆ ಕಾಣುವ ಎರಡು ಯಾ ಮೂರು ಉಪಗ್ರಹಗಳಿಂದ ಬರುವ ಸಂಕೇತವನ್ನು ಉಪಯೋಗಿಸಿ ಇದು ನಾವಿರುವ ಸ್ಥಳದ ಅಕ್ಷಾಂಶ ರೆಖಾಂಶವನ್ನು ನಿಖರವಾಗಿ ಹೇಳುತ್ತದೆ. ಇಪ್ಪತ್ತು ಅಡಿ ವ್ಯತ್ಯಾಸವ ಸಹಾ ಇದರಲ್ಲಿ ಲೆಕ್ಕಕ್ಕೆ ಸಿಗುವುದು. ನಾವಿಕರಿಗೆ ಪೋಲಿಸರಿಗೆ ಕಾಡು ಉಳಿಸಲು ಅಗ್ನಿ ನಿಯಂತ್ರಣಕ್ಕೆ ಎಲ್ಲಕ್ಕೂ ಸಹಾಯವಾಗಬಲ್ಲ ಸಾದನ.

ವರ್ಷದ ಹಿಂದೆ ಸಕಲೇಶಪುರ ಹತ್ತಿರ ಕಾಡು ನುಗ್ಗಿದ ಸಾಫ್ಟ್ ವೇರ್ ತಂತ್ರಜ್ನರು ಅನಿರೀಕ್ಷಿತವಾಗಿ ಮಳೆಗಾಲ ಪ್ರಾರಂಬವಾಗಿ ದಿಕ್ಕಿನ ಪ್ರಜ್ನೆ ತಪ್ಪಿ ವಾಪಾಸು ಬರಲು ಸಾದ್ಯವಾಗದೆ ಮೃತ ಪಟ್ಟಿದ್ದರು. ಗೋವಾ ಕರ್ನಾಟಕ ಗಡಿಯಲ್ಲಿ ಉದುರಿದ ನೌಕಾದಳದ ಹೆಲಿಕಾಫ್ಟರಿನಲ್ಲಿ ಬದುಕುಳಿದ ವ್ಯಕ್ತಿ ಮೊಬೈಲ್ ಪೋನ್ ಮೂಲಕ ಸುದ್ದಿ ಹೇಳಿದರೂ ಕಾಡಿನ ಮದ್ಯೆ ಇದ್ದ ಅವರನ್ನು ಹುಡುಕಲು ಸಾದ್ಯವಾಗಿರಲಿಲ್ಲ. ಎರಡೂ ಸನ್ನಿವೇಶದಲ್ಲಿ ಸರಳ ಜಿಪಿಎಸ್ ಸಾದನ ಜೀವ ಉಳಿಸುತಿತ್ತು.

ಕಳೆದ ವರ್ಷ ನಾನು ವಿಚಾರಿಸುವಾಗ ಸುಮಾರು ನಾಲ್ಕು ಸಾವಿರ ರೂಪಾಯಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಬ್ಯವಿರುವ ಇದು ನಮ್ಮೂರು ತಲಪುವಾಗ ಒಂಬತ್ತು ಸಾವಿರವಾಗುತ್ತದೆ ಎಂದು ತಿಳಿದು ಬಂತು. ವಿಪರೀತ ಸುಂಕ (basic 30 % + ) ಮತ್ತು ಸ್ಪರ್ದಾತ್ಮಕವಲ್ಲದ ಸಣ್ಣ ಮಾರುಕಟ್ಟೆಯಿಂದಾಗಿ ಹೆಚ್ಚು ದುಬಾರಿಯೆನಿಸುತ್ತದೆ. ಸರಕಾರ   ಅಮದು   ಸುಂಕ  ಕಡಿಮೆ ಮಾಡಿ   ಈ  ಉಪಕರಣ   ಜನರ  ಕೈಗೆಟಕುವಂತೆ  ಮಾಡಿದರೆ   ತುಂಬಾ  ಉಪಕಾರವಿದೆ. 

ಈ ಸರಳ ಸಾದನ ದೊಡ್ಡ ಸಂಖ್ಯೆಯಲ್ಲಿ ತರಿಸಿದರೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿ ಖರ್ಚಾಗಬಹುದು. ಅಂದರೆ ಕೋಟಿ ರೂಪಾಯಿಗೆ ಸಾವಿರ ಉಪಕರಣಗಳು ಸಿಗುತ್ತವೆ. ಮೂರು ಸಾವಿರ ಉಪಕರಣಗಳಿಗೆ ಮೂರು ಕೋಟಿ ರೂಪಾಯಿ ಸಾಕು. ದೋಣಿ ಎಲ್ಲಿದೆಯೆಂದು ಗುರುತಿಸಲು ಅಳವಡಿಸುವಂತಹದಕ್ಕೂ ಅಷ್ಟು ಖರ್ಚಿಲ್ಲ. ಒಂದಕ್ಕೆ ಹದಿನೈದು ಸಾವಿರ ಮಿಗದು. ಇವರ ಇಪ್ಪತ್ತು ಕೋಟಿ ಲೆಕ್ಕಾಚಾರದಲ್ಲಿ ಜೇಬಿಗಿಳಿಸುವ ಮೊತ್ತವೇ ಹೆಚ್ಚಿನ ಪಾಲು ಎನಿಸುತ್ತದೆ.

ಒಮ್ಮೆ ಇತಿಹಾಸದ ಕ್ಲಾಸಿನಲ್ಲಿ ಮೇಡಂ ಕೇಳಿದರಂತೆ. ನಾನು ಎಲ್ಲಿದ್ದೆ ಅಂದರೆ ಎಲ್ಲಿಯವರೆಗೆ ಪಾಠ ತಲಪಿದೆಯೆಂದು. ಕೊನೆ ಬೆಂಚಿನ ಯಜಮಾನರ ಉತ್ತರ ಬಂತು ಅಕ್ಬರನ ಶಯನ ಕೋಣೆಯಲ್ಲಿ, ಮೇಡಂ.

ಅಂದ  ಹಾಗೆ    ಯಾರಾದರೂ ನಮಗೆ ಎಲ್ಲಿದ್ದಿಯ ? ಎಂದು ಮೊಬೈಲಿಗೆ ಫೋನಿಸಿದರೆ ನಾವು ಮುಖ್ಯ ರಸ್ತೆ ಅದ್ರಾಮ ಬ್ಯಾರಿಯ ತರಕಾರಿ ಅಂಗಡಿಯ ……..ಅನ್ನಬೇಕಾಗಿಲ್ಲ.      ಉತ್ತರ 13.210320 ಪೂರ್ವ 73.45213 ಅಂದರಾಯಿತು.