Showing posts with label fun. Show all posts
Showing posts with label fun. Show all posts

Monday, March 21, 2011

ಹೀಗೊಂದು ತ್ರಿ ಚಕ್ರ ಸೈಕಲುಗಳ ಸ್ಪರ್ದೆ



ನಾವು  ವಿದೇಶಿಯರಿಂದ  ಕಲಿಯುವಂತದ್ದು  ಬಹಳ  ಇದೆ.  ಅದರಲ್ಲೊಂದು  ವಿವಿದ  ಜೀವನಾನುಭವಕ್ಕೆ   ಮುಜುಗರವಿಲ್ಲದೆ  ತಮ್ಮನ್ನು ಒಡ್ಡಿಕೊಳ್ಳುವುದು.   ಅಲ್ಲಿ ಯಾವುದೂ  ನಿಂತ ನೀರಲ್ಲ.  ನಮ್ಮಿಂದ  ಹೆಚ್ಚು    ಕಲೆಯ  ಹೊಸಮುಖಗಳ  ಅನ್ವೇಶಣೆ  ನಡೆಯುತ್ತಲೇ  ಇರುತ್ತದೆ.    ಹಾಗೆ   ಅಮೇರಿಕಲ್ಲೊಂದು   ಸಿಂಹಾಸನದ  ಸೈಕಲುಗಳ   ಸ್ಪರ್ದೆ.   ಅಲ್ಲಲ್ಲ, ಕಲಾ ಸ್ಪರ್ದೆಯಲ್ಲಿ   ಶೌಚಾಲಯ  ಆಸನದ   ಹಲವಾರು  ಸೈಕಲುಗಳು ಬಾಗವಹಿಸಿದ್ದು.  ಇದು   ಇಬ್ಬರು  ಪ್ರತಿಬಾವಂತ   ಕಲಾವಿದ    ಸೋದರರ   ಕೊಡುಗೆ.   ಉಳಿದ  ಸ್ಪರ್ಧೀಗಳು  ಸುಲಭವಾಗಿ  ಸೋಲೊಪ್ಪಿಕೊಂಡರಂತೆ. 



 


ನನ್ನ  ಮುಂದಿನ  ದೀರ್ಘ ಪ್ರವಾಸ  ಸಾದ್ಯವಾದರೆ   ಇಂತಹ  ಟ್ರೈಸಿಕಲ್ಲಿನಲ್ಲಿ  ಎಂದು ತೀರ್ಮಾನ ಮಾಡಿದ್ದೇನೆ.    ಮಲಮೂತ್ರ  ವಿಚಾರ ಬಂದಾಗ  ನಮಗೆ  ಹೇಸಿಕೆಯಾಗುತ್ತದೆ.  ಪರಿಣಾಮ  ನನ್ನಂತಹ  ಮೂತ್ರ ನಿಯಂತ್ರಣ  ಸಮಸ್ಯೆ ಬಾದಿಸುವವರ  ಬದುಕು ಅಸಹನೀಯವಾಗುತ್ತದೆ.  ನಮ್ಮಲ್ಲಿ  ಇಂತಹ   ಸಮಸ್ಯೆಗಳನ್ನು   ಸಮಾಜ  ಅರ್ಥಮಾಡಿಕೊಳ್ಳುವುದೂ  ಇಲ್ಲ,  ಸಹನೀಯವಾದ ವಾತಾವರಣ  ಕಲ್ಪಿಸುವುದೂ  ಇಲ್ಲ.  ಅಮೇರಿಕದ   ಎಲ್ಲ ಅಂಗಡಿಗಳಲ್ಲಿ ದೊರಕುವ  inconsistency napkins  ಇಲ್ಲಿ  ತರಿಸಿಕೊಳ್ಳುವುದೇ  ದೊಡ್ಡ  ಸಾಹಸ.    ಮಂಗಳೂರಿನಲ್ಲೂ  ಸಿಗದ  ಕಾರಣ   ಇತ್ತೀಚೆಗೆ  ಬೆಂಗಳೂರಿನಿಂದ    ತರಿಸಿಕೊಳ್ಳುತ್ತಿದ್ದೇನೆ.   ಪ್ರಯಾಣಕ್ಕೆ  ಕೂರುವುದೇ  ಸಿಂಹಾಸನದಲ್ಲಾದರೆ  ?

ತೆನಾಲಿ ರಾಮಕೃಷ್ಣನ  ಕಥೆಯೊಂದು ನೆನಪಾಗುತ್ತದೆ. ಅತ್ಯಂತ  ಸಂತಸದ  ವಿಚಾರ ಏನೆಂದು ಅರಸ ಕೇಳಿದಾಗ  ಶೌಚಾಲಯ ಬೇಟಿ ಎಂದ ರಾಮಕೃಷ್ಣ.  ಅದನ್ನು   ಖಚಿತಪಡಿಸು  ಎಂದು ಅರಸ  ಹೇಳಿದರೆ ಶೌಚಾಲಯಕ್ಕೆ ಹೋಗದೆ ವಾರವೊಂದು  ಕೂರು  ಎಂದು ರಾಮಕೃಷ್ಣನ ಸವಾಲು.  ನಿಯಂತ್ರಣ  ಸಮಸ್ಯೆ ಇರುವ  ನನಗೆ  ಸವಾಲು ಸ್ವೀಕಾರ ಸಾದ್ಯವಿಲ್ಲ, ಬಿಡಿ.   ನಾಲ್ಕು ದಿನ ಹೇಗೊ ಸುದಾರಿಸಿ  ಕೊನೆಗೆ   ಶ್ರಿಕೃಷ್ಣದೇವರಾಯ  ಸೋಲೊಪ್ಪಿಕೊಂಡನಂತೆ.   

Sunday, March 13, 2011

ದುರ್ದಿನ ಕರೆ ಕೊಟ್ಟ ಡಾ ದೇವಿ ಶೆಟ್ರು

ಕಳೆದ  ವಾರ  ಬೆಂಗಳೂರಿನ ಆಸ್ಪತ್ರೆಯೊಂದರ  ಯಜಮಾನ   ಡಾ ದೇವಿ   ಶೆಟ್ಟಿ ಅವರು ಬಹಿರಂಗ ಪತ್ರ ಬರೆದರು.   ಆತ್ಮೀಯ  ಸಹಪಾಠಿ  ಗೆಳೆಯ ವೆಂಕಟೇಶ್  ಅವರು ಈ ಪತ್ರದ ಪ್ರತಿಯನ್ನು ನನಗೆ ರವಾನಿಸಿದರು.   ಪತ್ರದಲ್ಲಿ  ಹೃದಯವಂತ  ವೈದ್ಯರು    ಸರಕಾರಿ ತೇರಿಗೆ ಹೆಚ್ಚು ಮಾಡಿದರೆ   ತಮ್ಮಲ್ಲಿ ಬಂದ  ರೋಗಿಗಳಿಂದ  ಹೆಚ್ಚು ಹಣ   ಪಡಕೊಳ್ಳಬೇಕಾಗುತ್ತದೆ  ಎಂದು ಅಲವತ್ತು ಪಟ್ಟುಕೊಂಡರು.  ಹಾಗೆ  ಮಾರ್ಚು ೧೨ ರಂದು ರಾಜ್ ಭವನ್  ಚಲೋ  ಕರೆ ಕೊಟ್ಟರು.   ಆ  ದಿನವನ್ನು    ದುರವಸ್ಥೆ ದಿನ /ಬೇಗುದಿ ದಿನವೆಂದು  ಆಚರಿಸಲು  ಹೇಳಿದರು.      ರೋಗಿಗಳ ಬಗೆಗಿನ ಕಾಳಜಿ ಕಂಡು  ನನಗೆ ಕುಶಿಯಾಯಿತು  ಮತ್ತು ಮುನ್ನೂರ  ಐವತ್ತು ಕಿಮಿ ದೂರವಲ್ಲವಾದರೆ  ಖಂಡಿತ ಪಾಲ್ಗೊಳ್ಳುವ   ಅವರ  ಕೈ  ಬಲ ಪಡಿಸುವ   ಹುಮ್ಮಸ್ಸು  ಬಂತು.   ಡಾ. ಶೆಟ್ರು   ಪತ್ರಿಕೆಗಳಿಗೂ  ಈ ಪತ್ರ ರವಾನಿಸಿ  ಓದುಗರ  ಪತ್ರಗಳು  ಅಂಕಣದಲ್ಲಿ   ಪ್ರಕಟವಾಗುವಂತೆ ನೋಡಿಕೊಂಡರು.    ಆಮೇಲೆ  ?


 ಮರುದಿನ   ಅವರು ದೆಹಲಿಯಲ್ಲಿ    ವಿತ್ತ ಮಂತ್ರಿ ಪ್ರಣಬ್ ಮುಖರ್ಜಿಯನ್ನು ಬೇಟಿಯಾದದ್ದು   ಪತ್ರಿಕೆಗಳು  ಸುದ್ದಿಮಾಡಿವೆ.  ಆದರೆ   ಮಾತುಕತೆಯ  ಪರಿಣಾಮ ಮಾತ್ರ  ಹೊರಹಾಕಿಲ್ಲ.  ಇಂದು ಪತ್ರಿಕೆಗಳಲ್ಲಿ  ನಿನ್ನೆ ನಡೆದಿರಬಹುದಾದ   ಈ ರಾಜ್ ಭವನ್  ಚಲೋ ಕಾರ್ಯಕ್ರಮ  ಏನಾಯಿತು  ಎಂದು ಹುಡುಕಲು  ಏನೂ  ಸುಳಿವು ದೊರಕುತ್ತಿಲ್ಲ.  ಆಸ್ಪತ್ರೆ ಜಾಲತಾಣದ  ಮೊದಲ ಪುಟದಲ್ಲಿದ್ದ    ಅವರ   ಬಹಿರಂಗ ಪತ್ರವೂ    ಈಗ ನಾಪತ್ತೆ.    ಅಂತೂ  ಪ್ರತಿಭಟನೆ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು   ಹೊರಡದೆ ಇದ್ದುದು  ಒಳ್ಳೆದಾಯಿತು ಅನ್ನಿಸಿತು. 

ನಮಗೀಗ  ಮಾದ್ಯಮಗಳ ಹಾಗೂ  ಅಂತರ್ಜಾಲದ ಮೂಲಕ  ವರುಷದಲ್ಲಿ ನೂರಾರು    ಆಚರಣೆ ಪ್ರತಿಭಟನೆ  ಕರೆಗಳು  ಬರುತ್ತವೆ.  ಅಪ್ಪನ  ದಿನ, ಅಮ್ಮನ ದಿನ,. ಕೆಲಸಗಾರರ ದಿನ,  ದೇವರ  ಜನ್ಮ  ದಿನ, ಸ್ವಾತಂತ್ರ ದಿನ,  ದೀಪವಾರಿಸುವ ದಿನ, ಏನೂ  ಖರೀದಿಸದಿರುವುದು, ಪರಸ್ಪರ ಅಪ್ಪಿಕೊಳ್ಳುವುದು ........ ಇತ್ಯಾದಿ  ಇತ್ಯಾದಿ.  ಮೊನ್ನೆ  ಫೆಬ್ರವರಿ  ೧೪ ರಂದು  ಪೆಟ್ರೋಲ್ ಖರೀದಿ  ಮಾಡದಿರುವ ಕರೆ ಇತ್ತು.   ಇಂತಹ  ಆಚರಣೆಗಳಿಂದ     ಯಾವ  ಪ್ರಯೋಜನವೂ  ಇಲ್ಲ.  ಎಲ್ಲರೂ  ಹಿಂದಿನ ದಿನವೇ  ಬೇಕಾದಷ್ಟು  ದಾಸ್ತಾನು ಮಾಡಿಕೊಂಡಿರಬಹುದು.   ಅಂದು ಖಾಸಗಿ ವಾಹನ  ಉಪಯೋಗಿಸುವುದಿಲ್ಲ ಎಂದಿದ್ದರೂ  ಅರ್ಥವಿರುತಿತ್ತು.  ಅಂದ ಹಾಗೆ   ಬರುವ ತಿಂಗಳು ಎಪ್ರಿಲ್ ೨೨  ಭೂಮಿ ದಿನವಾಗಿ  ಆಚರಿಸಲಾಗುತ್ತದೆ.    ಅದಕ್ಕೀಗ  ದೇವಿ ಶೆಟ್ರ   ದುರ್ದಿನವೂ  ಸೆರ್ಪಡೆಯಾಗಿ ಕ್ರಮೇಣ  ಇನ್ಯಾವುದೋ   ಕಾರಣಕ್ಕೆ   ಮುಂದೆ  ಜನಪ್ರಿಯವಾಗಬಹುದು.  


ಕೆಲವು ಕರೆಗಳು ಮಜವಾಗಿಯೂ  ಇರುತ್ತದೆ.  ಅಂತಹದರಲ್ಲೊಂದು ಪಾಂಟ್ ದರಿಸದಿರುವ ಕರೆ. ಪ್ರಪಂಚದ ವಿವಿದ ಕಡೆಗಳಲ್ಲಿ ಸಾರ್ವಜನಿಕ  ಸ್ಥಳಗಳಲ್ಲಿ ಮತ್ತು   ಮೆಟ್ರೊ ರೈಲುಗಳಲ್ಲಿ  ಪಾಂಟ್ ದರಿಸದಿರುವ  ದಿನ   ಬೇರೆ ಬೇರೆಯಾಗಿಯೇ ಆಚರಿಸಲಾಗುತ್ತದೆ. ಉಳಿದೆಡೆ ಮೆ ತಿಂಗಳ ಮೊದಲ ಶುಕ್ರವಾರ ಪಾಂಟ್ ಹಾಕದಿರುವ ದಿನವಾದರೆ   ರೈಲುಗಳಲ್ಲಿ ಜನವರಿ  ೧೧  ರಂದು  ಆಚರಿಸಲಾಗುತ್ತದೆ.




ಮಾರ್ಚು ೧೨ ರಂದು  ದುರ್ದಿನ  ಆಚರಣೆ  ಬಗೆಗೆ   ಕರೆ ಕೊಟ್ಟ  ಡಾ|  ಶೆಟ್ರು  ಆಮೇಲೆ ಮರೆತು ಬಿಟ್ಟರೋ ಅನ್ನುವ    ಕಾರಣ  ಇದೆಲ್ಲ  ಬರೆಯೋಣ ಅನ್ನಿಸಿತು. 

Saturday, July 04, 2009

ಕ್ಷಮಿಸಿ, ಎತ್ತಿನ ಗಾಡಿಗೆ ಪ್ರವೇಶವಿಲ್ಲ



ಎತ್ತಿನ ಗಾಡಿಗೆ ಪ್ರವೇಶವಿಲ್ಲ ಎಂದು ಘೋಷಿಸುವ ಪ್ರಪಂಚದ ಏಕಮಾತ್ರ ಸಮುದ್ರ ಸೇತುವೆ ನಮ್ಮ ಮುಂಬಯಿಯಲ್ಲಿದೆ ಎನ್ನುವುದು ನಮಗೆಲ್ಲ ಬಹಳ ಹೆಮ್ಮೆಯ ವಿಚಾರ. ಪ್ರಜೆಗಳ ತೇರಿಗೆ ಹಣದಿಂದ ಕಟ್ಟಲ್ಪಟ್ಟ ಇದು ಮೊನ್ನೆ ಸೋನಿಯಾ ಗಾಂಧಿ ಎಂಬವರಿಂದ ದೇಶಕ್ಕೆ ಸಮರ್ಪಿಸಲ್ಪಟ್ಟಿತು.

ಸಮುದ್ರ ಸೇತುವೆ ಮೇಲಿರುವ digital signboard ಉದ್ಗಾಟನೆಯಾಗಿ ದಿನ ಕಳೆದರೂ ಸೋನಿಯಾಜಿ ನಿನಗೆ ಸ್ವಾಗತ ಎನ್ನುತ್ತಿವೆಯಂತೆ. ಕ್ಷಣಮಾತ್ರದಲ್ಲಿ ಸಂದೇಶ ಬದಲಿಸಲು ಸಾದ್ಯವಾಗುವಂತಹ ಈ ಸೂಚನಾ   ಫಲಕಗಳು
ಇನ್ನೂ ಮಹಾರಾಣಿಯ ಗುಂಗಿನಲ್ಲಿದ್ದು   ಇದರ ಸಂದೇಶ ಬದಲಿಸಲು ಇನ್ನೂ ಹುಕುಂ ಆಗಲಿಲ್ಲ.   ಮೇಲು ನೋಟಕ್ಕೆ ಕಾಣುವ ಮಟ್ಟಿಗೆ ಈ ಸೇತುವೆ ನಿಷ್ಪ್ರಯೊಜಕ.

ಅತಿ ದಟ್ಟಣೆ ಇರುವ Worli-Nariman Point ಸಂಪರ್ಕ ಸಮುದ್ರ ಸೇತುವೆ ಇದ್ದರೆ ಮಾತ್ರ ಈ ಸಮುದ್ರ ಸೇತುವೆ ಉಪಯುಕ್ತ ಎಂದು ಮಾಜಿ ಮುನ್ಸಿಪಲ್ ಕಮಿಷನರ್ Jamsheed Kanga ಹೇಳುತ್ತಾರೆ. ಇಲ್ಲವಾದರೆ ಪಾಂಟಿನ ಒಂದು ಕಾಲಿಗೆ ಮಾತ್ರ ಹೊಲಿಗೆ ಹಾಕಿದಂತೆ. ಎರಡನೇಯ ಕಾಲಿಗೆ ಹೊಲಿಗೆ ಇಲ್ಲವಾದರೆ ……………….[ ನಿರುಪಯುಕ್ತ ತಿಡಿಗೇಡಿ ವ್ಯವಹಾರ.]

ಮುಂಬಯಿಯ ಅಧಿಕಾರಿಗಳು ಹೇಳುವಂತೆ ಇನ್ನೊಂದು ಸೇತುವೆ ಅನಿವಾರ್ಯ. ಇದಕ್ಕೆ ರಾಜೀವನ ಹೆಸರಿಟ್ಟರೆ ಅದಕ್ಕೆ ಸೋನಿಯಾಳ ಹೆಸರೇ ಇಡಬಹುದು.

ಸಮೀಪಿಸುವ ದಾರಿಗಳ ಅವ್ಯವಸ್ಥೆಯಿಂದಾಗಿ ಈ ರಸ್ತೆ ಉಪಯೋಗಿಸಿದವರು ಹತ್ತು ನಿಮಿಷ ಉಳಿದರೆ ವಿಶೇಷ. ನಿನ್ನೆ ರಾತ್ರಿ ಹನ್ನೊಂದು ಘಂಟೆಗೆ ಸಹಾ ಕಾರಿನಲ್ಲಿ ಈ ಸೇತುವೆಯ ಮೇಲಿರುವ 4.7 ಕಿಮಿ ದೂರದ ರಸ್ತೆ ದಾಟಲು  ಯೋಜನೆ  ಪ್ರಕಾರದ  ಏಳು   ನಿಮಿಷಕ್ಕೆ  ಬದಲಾಗಿ  ಇಪ್ಪತ್ತೈದು ನಿಮಿಷ ಬೇಕಾದರೆ ಇದರೆ ಉಪಯುಕ್ತತೆ ಸಂಶಯಾಸ್ಪದವಾಗುತ್ತಲಿದೆ.


ಎಂಟು ಪಥಗಳು ಎನ್ನಲಾದ    ಈ ಸೇತುವೆಯಲ್ಲಿ ನಮಗೆ ಕಾಣುವುದು ನಾಲ್ಕೇ  ದಾರಿಗಳು.   ದ್ವಿಚಕ್ರ ವಾಹನ ಮತ್ತು ಬಸ್ಸುಗಳಿಗೂ ಪ್ರವೇಶವಿಲ್ಲ. ಶೇಕಡ ಎಂಬತ್ತ ಎಂಟು ಮುಂಬಯಿ ನಾಗರಿಕರು  ಬಸ್    ಮತ್ತು  ರೈಲು ಉಪಯೋಗಿಸುವರಂತೆ.     ಸ್ವಂತ  ವಾಹನ  ಉಪಯೋಗಿಸುವ  ಶೇಕಡಾ ಹನ್ನೆರಡು  ನಾಗರಿಕರಲ್ಲಿ   ದ್ವಿ ಚಕ್ರಿಗಳೂ  ಸೇರಿದ್ದಾರೆ.  ಅದುದರಿಂದ  ಬಹು  ಸಣ್ಣ  ಸಂಖ್ಯೆ ಕಾರು  ಉಪಯೋಗಿಸುವವರಿಗಾಗಿ  ಇದೊಂದು  ದುಬಾರಿ  ಯೋಜನೆ.

 ನಮ್ಮವರೂ   ಸಾಮಾನ್ಯರಲ್ಲ.  ಮೇಲು ಸೇತುವೆ ವಿನ್ಯಾಸದಲ್ಲಿ ಎಡವಟ್ಟಾಗಿ ಅದರ ಮೇಲೆ ಪೋಲಿಸಪ್ಪನನ್ನು ನಿಲ್ಲಿಸುವ ಹೆಗ್ಗಳಿಕೆ ನಮ್ಮ ಬೆಂಗಳೂರಿನದಂತೆ.  

Monday, June 22, 2009

ಪಾಕಿಸ್ಥಾನದವರಿಗೆ ಈಗ ಜರ್ದಾರಿಯವರನ್ನು ಉಗಿಯೋದು ದುಬಾರಿ

ಪಾಕಿಸ್ತಾನದಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ - ಈಗ ಜರ್ದಾರಿನ ಉಗಿಯೊದು ಸಹಾ ದುಬಾರಿಯಾಗಿಬಿಟ್ಟಿದೆ. ವಿಷಯ ಏನು ಎಂದರೆ ಜರ್ದಾರಿ ಜೋಕುಗಳ ನಿಯಂತ್ರಿಸಲು ಇಪ್ಪತ್ತು ಪೈಸೆ ಪ್ರತಿ ಸಂಚಾರವಾಣಿ ಸಂದೇಶಕ್ಕೆ ತೇರಿಗೆ ವಿದಿಸಲ್ಪಟ್ಟಿದೆ.

ನಮ್ಮಲ್ಲಿರುವ ಸರ್ದಾಜಿ ಜೋಕುಗಳೆಲ್ಲ ಪಾಕಿಸ್ಥಾನದಲ್ಲಿ ಜರ್ದಾರಿ ಜೋಕುಗಳಾಗಿ ಪರಿವರ್ತನೆ ಹೊಂದಿವೆ. ಸರ್ವಾದಿಕಾರಿಗಳ ಮೇಲೆ ಜೋಕು ಪ್ರಯೋಗ ಎಲ್ಲ ಕಮುನಿಸ್ಟ್ ದೇಶಗಳಲ್ಲೂ ಮಾಮೂಲು. ಪರೋಕ್ಷವಾಗಿ ಕುಟುಕುವುದರಿಂದ ಶಿಕ್ಷೆಗೆ ಒಳಪಡುವುದಿಲ್ಲ.

ಸಂಚಾರವಾಣಿ ಉಪಯೋಗದ ಮಟ್ಟಿಗೆ ಜಗತ್ತಿನಲ್ಲಿ ಐದನೇಯ ಸ್ಥಾನದಲ್ಲಿರುವ ಪಾಕಿಸ್ಥಾನದಲ್ಲಿ
ಸರಕಾರ ಬಹಳ ಸಮಯದಿಂದ ಈ ಜರ್ದಾರಿ ಜೋಕುಗಳ ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಜೈಲಿಗೆ ಹಾಕುತ್ತೇವೆ ಎಂದು ಬೆದರಿಸುತ್ತಲೂ ಇದೆ.
ಯಾವ ರೀತಿಯಲ್ಲಿ ಹಿಡಿಯಲು ಸಾದ್ಯವಾಗಬಹುದೆಂಬ ಸುಳಿವು ಮಾತ್ರ ಅವರಿಗೆ ಇನ್ನೂ ಸಿಕ್ಕಿಲ್ಲ.

ಅದುದರಿಂದ SMSಗಳಿಗೆ ತೇರಿಗೆ ಹಾಕಿದರೆ ಅನ್ನುವ ಆಲೋಚನೆ ಬಂದು ಈಗ ಪ್ರತಿ SMSಗಳಿಗೆ 20 ಪೈಸೆ ತೇರಿಗೆ ವಿದಿಸಲ್ಪಡುತ್ತಿದೆ. ಅದರೆ ಬರೇ ಜರ್ದಾರಿ ಜೋಕುಗಳು ಮಾತ್ರವಲ್ಲ ಎಲ್ಲ ಸಂದೇಶಗಳಿಗೂ ಈ ತೇರಿಗೆ ವಿದಿಸಲ್ಪಡುವುದು ಬಡಜನತೆಗೆ ನಂಗಲಾರದ ತುತ್ತು ಅನ್ನುತ್ತದೆ ಅಲ್ಲಿನ ಪತ್ರಿಕೆಗಳು.

ಕಳೆದ ವರ್ಷ ಅಮೇರಿಕದ ಚುನಾವಣೆ ಸಮಯದಲ್ಲಿ ಸಾರ ಪಾಲಿನ್ ಳನ್ನು ಜರ್ದಾರಿ ಅಪ್ಪಿಕೊಂಡಾಗ ಈ ಜೋಕ್ ಗಳ ಸಂಚಾರ  ಜೋರಾಗಿತ್ತಂತೆ.   ಅಲ್ಲಿಂದ ಹೆಕ್ಕಿದ ಒಂದು ನಗೆಹನಿ

Just imagine Sarah Palin divorces her current husband and marries Asif Zardari.
Then Palin becomes Vice President of USA.
Then Zardari kills Palin, changes the Will which henceforth says, ‘Zardari will become the President of USA if I die.’
And eventually Zardari becomes President of USA six months after Palin’s death.
And Bilawal changes his name to Bilawal Palin-Zardari

ನಂತರದ   ಸೆರ್ಪಡೆ : ಜುಲೈ ೨೦ರ  ಕನ್ನಡ  ಪ್ರಭ

Tuesday, April 07, 2009

ವಿರೂಪಗೊಂಡ ಲೆನಿನ್ ಹಾಗೂ ಮಹಿಷಾಸುರ ವಿಗ್ರಹಗಳು

ಎಪ್ರಿಲ್ ಒಂದರ ಆಚರಣೆ ಎಂದರೆ ಅವರಿವರ ಮೂರ್ಖನನ್ನಾಗಿಸುವ ದಿನ. ಕೆಲವೊಮ್ಮೆ ತಮಾಷೆ ಮಾತ್ರವಲ್ಲ ಅತಿರೇಖಕ್ಕೂ ಹೋಗುವುದುಂಟು. ಮೊನ್ನೆ ರಶ್ಯದಲ್ಲಿ ನಡೆದ ಕಿತಾಪತಿ ನನ್ನ ಗಮನ ಸೆಳೆಯಿತು. ಇಂತಹ ಪೋಕರಿ ಕಿತಾಪತಿಗಳು ಅಲ್ಲಿ ಮಾಮೂಲಿಯಂತೆ. ನಮ್ಮಲ್ಲಿ ಹಳ್ಳಿಗಳಲ್ಲಿ ಇಂತಹ ಕಾರುಬಾರು ಶಿವರಾತ್ರಿಯಂದು ನಡೆಯುವುದು ಸಾಮಾನ್ಯ.


ಸೈಂಟ್ ಪೀಟರ್ಸ್ ಬರ್ಗ್ ಪಟ್ಟಣದ ಪುಂಡು ಹುಡುಗರು ಮುನ್ನೂರು ಗ್ರಾಂ ಸ್ಪೋಟಕವನ್ನು ಎಲ್ಲಿಂದಲೋ ಸಂಪಾದಿಸಿದರು. ಮುಖ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಉಕ್ಕಿನ ಲೆನಿನ್ ಪ್ರತಿಮೆಗೆ ಇದನ್ನು ಅಳವಡಿಸಿ ಬೆಳಗಿನ ಜಾವ ನಾಲ್ಕು ಘಂಟೆಗೆ ಸ್ಪೋಟಿಸಿ ಎಪ್ರಿಲ್ ಒಂದರ ಸ್ವಾಗತ ಕೋರಿದರು. ಅಂದು ಬೆಳಗ್ಗೆ ರೈಲು ನಿಲ್ದಾಣದ ಪ್ರಯಾಣಿಕರೆಲ್ಲ ಈ ತೂತಾದ ಹೊಸ ರೂಪದ ಲೆನಿನ್ ಪ್ರತಿಮೆಯನ್ನು ಕಂಡರು.

ಇದನ್ನು ಓದಿದಾಗ ಮನಸ್ಸು ನಲುವತ್ತು ವರ್ಷ ಹಿಂದಕ್ಕೋಡಿತು. ಇದಕ್ಕೆ ಹೋಲುವಂತಹ ಕಿತಾಪತಿ ನನ್ನನ್ನು ಅತಿಯಾದ ಮುಜುಗರಕ್ಕೆ ಒಳಮಾಡಿತ್ತು. .
                                                                
ನಾನಾಗ ಮೈಸೂರಿನ ವಸತಿ ಶಾಲೆಯೊಂದರಲ್ಲಿ ಐದನೇಯ ತರಗತಿಯ ವಿಧ್ಯಾರ್ಥಿ. ನಮ್ಮನ್ನು ಸುತ್ತು ಮುತ್ತಲಿನ ಪ್ರವಾಸಕ್ಕೆ ಕರೆದೊಯ್ದಿದ್ದರು. ಚಾಮುಂಡಿ ಬೆಟ್ಟದಲ್ಲಿ ನಮ್ಮ ಬಸ್ಸು ಮಹಿಷಾಸುರ ವಿಗ್ರಹದ ಪಕ್ಕದಲ್ಲಿ ನಿಂತಿತ್ತು. ಆಗ ವಿಗ್ರಹದ ಸುತ್ತು ಆವರಣ ಬೇಲಿ ಇರಲಿಲ್ಲ. ಬಸ್ಸಿನ ಒಳಗಿನಿಂದ ವಿಗ್ರಹ ನಮ್ಮ ಕೈ ಎಟಕಿನಲ್ಲಿತ್ತು. ನಮ್ಮ ಪುಟ್ಟ ಹುಡುಗರು ಏನೋ ಸ್ವಲ್ಪ ಕೈಚಳಕ ತೋರಿಸಿದ್ದರು. ಉಳಿ ಸುತ್ತಿಗೆಯೇನೂ ನಮ್ಮಲ್ಲಿರಲಿಲ್ಲವಾದ ಕಾರಣ ಪರಮಾವದಿ ಎಂದರೆ ಬಣ್ಣ ಮಾಸಿರಬಹುದು ಹೊರತು ಶಾಶ್ವತ ಹಾನಿಯಾಗಲು ಸಾದ್ಯವಿಲ್ಲ.

ರಜೆಯಲ್ಲಿ ಊರಿಗೆ ಬಂದಾಗ ಸಂಬದಿಕರ ಮನೆಯಲ್ಲಿ ಸಮಪ್ರಾಯದ ಹುಡುಗನಲ್ಲಿ ಈ ಕಥೆ ಹೇಳಿದೆ. ಕಥೆ ದೂರದಲ್ಲಿದ್ದು ಕೇಳಿಸಿಕೊಂಡ ಹಿರಿಯ ಸಂಬಂದಿ दस नंबरि ಗೆ ಸ್ವಲ್ಪ sadism ಮನೋಭಾವ. ನನ್ನಿಂದ ತಲೆಯೇ ಕಡಿದಿದ್ದಾರೆ ಅನ್ನುವಂತಹ ಉತ್ರೇಷ್ಟೆಯ ಮಾತು ಹೊರಡಿಸಿದರು. ತಿಳಿವಳಿಕೆಯಿಲ್ಲದ ಹತ್ತು ವರ್ಷದ ನಾನು ಹಳ್ಳಕ್ಕೆ ಬಿದ್ದೆ. ನಂತರ ಎಲ್ಲರೂ ಸೇರಿ ಅವಮಾನಕರವಾಗಿ ಗೇಲಿ ಮಾಡಿದ್ದು ಮುಖಭಂಗ ಮಾಡಿದ್ದೂ ನನಗೆ ಎಂದೂ ಮರೆಯದ ಕೆಟ್ಟ ಅನುಭವ.

ಕೆಲವು ವರುಷಗಳ ನಂತರ ನಾನಾಗ ದ್ವಿ ಚಕ್ರ ಚಲಾವಣೆ ಸುರು ಮಾಡಿದ್ದೆ. ಅವರು ನನ್ನಲ್ಲಿ ಪಟ್ಟಣದಿಂದ ಬರುವಾಗ ಸಿಗರೇಟು ತರಲು ಹೇಳಿದ್ದರು. ಎರಡು ಮೂರು ಅಂಗಡಿಯಲ್ಲಿ ವಿಚಾರಿಸಿದರೂ ಅವರಿಗೆ ಬೇಕಾದ್ದು ಸಿಕ್ಕಿರಲಿಲ್ಲ. ಬಂದಾಕ್ಷಣ ನಿಮ್ಮ ಸಿಗರೇಟು ಸಿಗಲಿಲ್ಲವೆಂದು ಹೇಳಿ ಚೆನ್ನಾಗಿ ಉಗಿಸಿಕೊಂಡೆ. ಅವರ ಚಟಕ್ಕಾಗಿ ಮಕ್ಕಳಲ್ಲಿ ಸಿಗರೇಟು ತರಿಸುವುದು ತಪ್ಪೆಂದು ಅವರಿಗೆ ಅನಿಸಬೇಕಾಗಿತ್ತು. ಆಗ ಜತೆಯಲ್ಲಿದ್ದ ಪಶು ವೈದ್ಯರು ನನ್ನ ಸಹಾಯಕ್ಕೆ ದಾವಿಸಿ ಅವನು ಸಿಗರೇಟು ಸೇದುವುದಿಲ್ಲ ಎಂದಾಗ दस नंबरि ಮುಖ ಹುಳಿ ಹಿಂಡಿದಂತಾಗಿತ್ತು.

ನಾನು  ಹಲವು  ವರ್ಷಗಳಿಂದ  ಬೇಟಿ ಮಾಡದ   दस नंबरि ಈಗ ಸಿಗರೇಟು ಸೇದುವುದೂ ಇಲ್ಲವಂತೆ  ಮತ್ತು Number Ten ಗುರುತಿನ ಸಿಗರೇಟು ಮಾರುಕಟ್ಟೆಯಲ್ಲಿ ಸಿಗುವುದೂ ಇಲ್ಲ.

Thursday, February 26, 2009

ನೂಡಲ್ ತಿನ್ನುವ ಪಾಠ


ಇಟಲಿಯಲ್ಲಿ ನಾನು ತಲಪುವಾಗ ಇನ್ನೂ ಚಳಿಗಾಲ. ಹವೆಗೆ ಹೊಂದಿಕೊಳ್ಳಲು ಹಾಗೂ ಮುಂದಿನ ದೇಶಗಳ ವೀಸಾ ಪಡಕೊಳ್ಳಲು  ನಾಲ್ಕು ದಿನ  ರೋಮಿನಲ್ಲಿದ್ದೆ. ಅಲ್ಲಿನ ರೋಟರಾಕ್ಟ ಕ್ಲಬ್ ಸದಸ್ಯರ ಸಂಪರ್ಕವಾಯಿತು. ಅವರು ನನಗೆ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಮಾಡಿಕೊಟ್ಟರು. ಅವರ ರಾತ್ರಿಯೂಟದ ಒಂದು ಸಭೆಗೂ ಕರಕೊಂಡು ಹೋಗಿದ್ದರು. ಅಲ್ಲಿ ಒಂದು ಪ್ರದಾನ ಖಾದ್ಯ - ನಮ್ಮಲ್ಲಿ ಈಗ ಜನಪ್ರಿಯವೆನಿಸಿರುವ ನೂಡಲ್ಸ್. ಮೊದಲು ಎಂದೂ ನೋಡದ ಈ ಸೇವಿಗೆಯನ್ನು ಚಾಕು ಚಮಚಗಳಲ್ಲಿ ತಿನ್ನುವುದು ನನಗೆ ಸವಾಲಾಯಿತು.

ಪಕ್ಕದಲ್ಲಿದ್ದ    ಅಪ್ತ  ಗೆಳೆಯ  ಸ್ಟೆಫೇನೊ ನೋಡು ಮಾರಾಯ ಫೋರ್ಕು ಹೀಗೆ ಹಿಡಿದು ಹೀಗೆ ತಿರುವಿ ತಿರುವಿ ಅದು ಸುತ್ತಿಕೊಳ್ಳುವಂತೆ ಮಾಡಿ ………. ನನಗೆ ಮೊದಲೇ ಗಲಿಬಿಲಿ.  ಅಲ್ಲಿ   ಸೇರಿದ ಸುಮಾರು ಹದಿನೈದು ಜನ ವಾರೆ ಕಣ್ಣಲ್ಲಿ ನನ್ನನ್ನು ಗಮನಿಸುತ್ತಿದ್ದ   ಅನುಭವವಾಗುತ್ತಿದ್ದು   ಮತ್ತೂ  ಗಡಿಬಿಡಿಗೆ  ಕಾರಣ.   ನಾನು ನೀನು ನಿನ್ನ ತಟ್ಟೆ ನೋಡು ಸ್ಟೆಫೇನೊ, ನಾನು ನನ್ನ ತಟ್ಟೆ ನಿಬಾಯಿಸುವೆ ಎಂದು  ಹೇಳಿದ ತಕ್ಷಣ ಮಾತು ಅತಿಯಾಯಿತೆನಿಸಿ ಮುಜುಗರದಿಂದ ಬಾಯಿ ಕಚ್ಚಿಕೊಂಡೆ.  ತಕ್ಷಣ  ನೆನಪಿಗೆ  ಬಂದ  ನಮ್ಮೂರ ರಾಜನ ಕಥೆ ಹೇಳಿದೆ.

ಒಬ್ಬ ಅಕ್ಕಿ ಕಾಳಲ್ಲಿ ರಾಜನ ಹೆಸರು ನೂರು ಸರ್ತಿ ಬರೆದು ತಂದು ರಾಜನಿಗೆ ಅರ್ಪಿಸಿದ. ಬಹು ದೊಡ್ಡ ಬಹುಮಾನ ಅಪೇಕ್ಷಿಸಿದ. ರಾಜ ವ್ಯವಹಾರಿಕ ಮನುಷ್ಯ. ಅಕ್ಕಿಯಲ್ಲಿ ಬರೆಯುವ ಕೆಲಸ ಬದುಕಿನ ದೃಷ್ಟಿಯಲ್ಲಿ ಪ್ರಯೋಜನಕಾರಿಯಲ್ಲ. ಬಹುಮಾನವಾಗಿ ಅವನಿಗೊಂದು ಕಿಲೊ ಅಕ್ಕಿ ಕೊಟ್ಟ. ಹಾಗೆಯೇ ಇಲ್ಲಿ ಕಷ್ಟ ಪಟ್ಟು ತಿನ್ನುವ ನೂಡಲ್ ನನ್ನ ಊರಲ್ಲಿ ತಿನ್ನುವ ಸಂಭವ ತೀರಾ ಕಡಿಮೆ ಎಂದು ಹೇಳಿ ಪರೀಸ್ಥಿತಿಯನ್ನು ತಿಳಿಯಾಗಿಸಿದೆ.

ಈ ಚಿತ್ರ ನೋಡುವಾಗ  ಅಂದು   ನಾನು ಪಟ್ಟ ಪಚೀತಿ ನೆನಪಾಯಿತು.  ಈಗ  ನಮ್ಮನೆಗೂ  ನೂಡಲ್ಸ್  ತಲಪಿದೆ.

Monday, December 08, 2008

ಪಾಕಿಸ್ತಾನದ ಅಂಕಣಕಾರ ಕೋವಸ್ ಜೀ


ಈಗ ಸುಮಾರು ಎರಡು ವರ್ಷಗಳಿಂದ ನಾನು ಭಾನುವಾರ ಬೆಳಗ್ಗೆ ಇ ಅಂಚೆ ಜತೆಗೆ ಮೊದಲು ಕ್ಲಿಕ್ಕಿಸುವ ಕೊಂಡಿ ಕರಾಚಿಯ ಡಾನ್ ಪತ್ರಿಕೆಯ ಕೋವಸ್ ಜೀ ಅವರ ಅಂಕಣ. ಇಳಿ ವಯಸ್ಸಿನಲ್ಲೂ ಅವರು ಕರಾಚಿಯ ಭೂಗಳ್ಳರ, ಅಧಿಕಾರಿಗಳ ಹಾಗೂ ಮುಲ್ಲಾಗಳ ಜತೆಗಿನ ಹೋರಾಟವನ್ನು ಅಂಕಣದಲ್ಲಿ ರಂಗುರಂಗಾಗಿ ವಿವರಿಸುತ್ತಾರೆ. ರಾಜಕಾರಣ, ವಾಣಿಜ್ಯ ಕಾನೂನು ವಿಚಾರಗಳ ಚೆನ್ನಾಗಿ ಮಂಡಿಸುತ್ತಾರೆ. ಆಂಗ್ಲ ಬಾಷಾ ಪ್ರಬುತ್ವ ಚೆನ್ನಾಗಿದೆ. ಪ್ರಾಯುಷ: ಪಾಕಿಸ್ತಾನದಲ್ಲೇ ಹೆಚ್ಚು ನಿರ್ಭೀತ ಅಂಕಣಕಾರ ಎಂದರೂ ಸರಿ

http://www.dawn.com/weekly/cowas/cowas.htm


ಈ ವಾರದ ಅಂಕಣದಲ್ಲಿ ಮುಂಬಯಿಯಲ್ಲಿ ಭಯೋತ್ಪಾದಕರು ಕಾರ್ಯನಿರತರಾಗಿದ್ದಾಗ ಯಾರೋ ಪೋಕರಿಗಳು ಪಾಕಿಸ್ಥಾನದ ಅದ್ಯಕ್ಷರಿಗೆ ಬಾರತದ ವಿದೇಶ ಮಂತ್ರಿ ಪ್ರಣವ್ ಮುಖರ್ಜಿ ಹೆಸರಿನಲ್ಲಿ ಪಾಕಿಸ್ಥಾನವನ್ನು ನೋಡಿಕೊಳ್ಳುತ್ತೇವೆ ಎಂದು ಫೋನಿಸಿದ್ದು ವಿವರಿಸಿದ್ದಾರೆ. ಜರ್ದಾರಿ ಬೆಸ್ತು ಬಿದ್ದು ಮಂತ್ರಿಗಳ ಮಿಲಿಟರಿ ಅದಿಕಾರಿಗಳನ್ನೆಲ್ಲ ಒಟ್ಟು ಸೇರಿಸಿ ಸೇನೆಯನ್ನು ಬಾರತದ ಗಡಿಗೆ ರವಾನಿಸುವ ಬಗೆಗೆ ಮಾತನಾಡಿದ್ದು ಎಲ್ಲವನ್ನೂ ಚೆನ್ನಾಗಿ ಬರೆದಿದ್ದಾರೆ.

ಕೊನೆಗೆ ಅಮೇರಿಕದ ರೈಸಮ್ಮ ಮಧ್ಯರಾತ್ರಿಯಲ್ಲಿ ಕಾಲ್ ಮಾಡಿ ಮಲಗಿದ್ದ ನಮ್ಮ ಮಂತ್ರಿ ಪ್ರಣವ್ ಮುಖರ್ಜಿಯವರನ್ನು ವಿಚಾರಿಸಿದಾಗ ಅವರು ಆ ರೀತಿ ಬೆದರಿಸಿಲ್ಲವಷ್ಟೆ ಅಲ್ಲ, ಅವರು ಜರ್ದಾರಿಗೆ ಫೋನ್ ಸಹ ಮಾಡಿಲ್ಲ ಎನ್ನುವುದು ತಿಳಿದುಬಂತು. ವಾರ ಕಳೆಯುವ ವರೆಗೆ ನಮ್ಮ ಮಾದ್ಯಮದವರಿಗೂ ಇದು ಯಾರದೋ ಕಿತಾಪತಿ ಎಂದು ಅರಿವು ಆಗಿರಲಿಲ್ಲ. ಅಂತೂ ಕೊನೆಗೆ ಎಲ್ಲರಿಗೂ ನಿರಾಳ.

ಕಳೆದ ಬಾರಿ ನಾಲ್ಕು ವರ್ಷ ಹಿಂದೆ ಮುಶಾರಫ್ ಬಂದಾಗ ಅವರ ತಂಡದಲ್ಲಿ ಒಬ್ಬ ವಯೋವೃದ್ದ ಪತ್ರಿಕಾ ಅಂಕಣಕಾರರಿದ್ದರು. ನಮ್ಮ ಪತ್ರಿಕೆಯಲ್ಲಿ ಕಾಣ ಸಿಕ್ಕಿದ ಅವರ ಸಂದರ್ಶನದಲ್ಲಿ ಅವರಾಡಿದ ಮಾತು ನನ್ನ ಗಮನ ಸೆಳೆದಿದ್ದವು. ಕೋವಸ್ ಜೀ  ಪಾರ್ಸಿ ಜನಾಂಗಕ್ಕೆ ಸೇರಿದ್ದು ಭುಟ್ಟೊ ರಾಷ್ಟ್ರೀಕರಣಗೊಳಿಸಿದ ಹಡಗು ಸಂಸ್ಥೆಯ ಯಜಮಾನರಾಗಿದ್ದರಂತೆ.  ಕೊನೆಗೆ ಗೂಗ್ಲಿಂಗ್ ಮಾಡಿ ಅವರ ಅಂಕಣ ಹುಡುಕಿ ಓದಲಾರಾಂಬಿಸಿದೆ.

ಒಂದು ಅಂಕಣದಲ್ಲಿ  ಇತಿಹಾಸದ  ಪುಟ  ತೆರೆದಿಟ್ಟಿದ್ದಾರೆ. .   ಮಾಜಿ ಮಿಲಿಟರಿ ಮುಖ್ಯಸ್ತನಾಗಿದ್ದ ಅಂದಿನ ಅಧ್ಯಕ್ಷರಿಗೆ ಇಡೀ ದೇಶದಲ್ಲಿ ಒಂದೇ ದಿನ ಹಬ್ಬಗಳ ಆಚರಿಸುವ ಆಲೋಚನೆ ಬಂತು. ಆದರೆ ಕೆಲವು ಮುಲ್ಲಾಗಳಿಗೆ ಅದು ಸಮ್ಮತಿ ಇರಲಿಲ್ಲ. ಚಂದ್ರ ಕಾಣಬೇಕಲ್ಲ ??. ಈ ಹಕ್ಕು ಬಿಟ್ಟು ಕೊಡಲು ಅವರು ತಯಾರಿರಲಿಲ್ಲ. ಹಾಗೆ ಒಂದು ಮುಖ್ಯ ಪಟ್ಟಣ, ಪೇಶಾವರ ಅಂತ ನನ್ನ ನೆನಪು – ಅಲ್ಲಿನ ಧರ್ಮ ಗುರುಗಳಿಗೆ ಚಂದ್ರನನ್ನು ತೋರಿಸುವ ಜವಾಬ್ದಾರಿಯನ್ನು ಅಲ್ಲಿನ ಮಿಲಿಟರಿ ಕಮಾಂಡರಿಗೆ ಅಧ್ಯಕ್ಷರು ವಹಿಸಿದರು. ಸೇನಾ ಶಿಬಿರದ  ಹೊರಗಿನ  ಮೈದಾನಿನಲ್ಲಿ  ನಡೆದ    ಅವರ ಸಂಬಾಷಣೆ ಈ ರೀತಿಯಾಗಿತ್ತಂತೆ.

ಚಾಂದ್ ದೇಖಾ ?
ನಹೀ ದೇಖಾ

ಅಗ ಮಿಲಿಟರಿ ಅಧಿಕಾರಿ ಬಲತ್ಕಾರವಾಗಿ ಈ ಮುಲ್ಲಾನ ಅರ್ಧ ಸುತ್ತು ತಿರುಗಿಸಿ ಕೇಳಿದರಂತೆ.

ಕಂಟೋನ್ಮೆಟ್ ದೇಖಾ ?
ಹಾಂ ದೇಖಾ

ಪುನಹ ರಭಸವಾಗಿ ಚಂದ್ರನೆಡೆಗೆ ತಿರುಗಿಸಿ ಕೇಳಿದರಂತೆ.

ಚಾಂದ್ ದೇಖಾ ?
ಹಾಂ ದೇಖಾ

ಅ ವರುಷ ಮೊದಲ ಬಾರಿಗೆ ಇಡೀ ಪಾಕಿಸ್ಥಾನದಲ್ಲಿ ಹಬ್ಬ ಒಂದೇ ದಿನ ಆಚರಿಸಲ್ಪಟ್ಟಿತು. ಆ ಅದ್ಯಕ್ಷರ   ಅಧಿಕಾರ ಮುಗಿದ ನಂತರ ನಾಯಿ ಬಾಲ ಡೊಂಕು ಎನ್ನುವಂತೆ ವಿವಿದ ಊರುಗಳ ಮುಲ್ಲಾಗಳಿಗೆ ಬೇರೆ ಬೇರೆ ದಿನ ಚಂದ್ರ ಗೋಚರಿಸಲು ಪ್ರಾರಂಬವಾಯಿತಂತೆ.  ಕ್ಷಮಿಸಿ. ಆ ಸಂಪರ್ಕ ಕೊಂಡಿ ತಕ್ಷಣ ಲಬ್ಯವಾಗುತ್ತಿಲ್ಲ.

ಅವರು ಅಮೇರಿಕದ ಸುಪ್ರೀಂ ಕೋರ್ಟನ್ನು ಸಂದರ್ಶಿಸಿದ ಅದರ ಕಾರ್ಯವೆಸಗುವುದರ ಬಗೆಗೆ ಬರೆದಿದ್ದಾರೆ. ಆ ಕೋಂಡಿ ಇಲ್ಲಿದೆ.

http://www.dawn.com/weekly/cowas/20070411.htm

Tuesday, December 02, 2008

ಹೀಗೊಂದು ಸಂಪ್ರದಾಯ

ಕೆಲವೊಂದು ಸಂಪ್ರದಾಯಗಳು ಬಲೇ ಮಜವಾಗಿರುತ್ತದೆ. ತಿಥಿ ಮಾಡುವಾಗ ಬೆಕ್ಕನ್ನು ಕಟ್ಟಿ ಹಾಕುವ ಹಾಗೆ. ಹಲವಾರು ದೇಶ ಸುತ್ತಾಡಿದ ನನಗೆ ಇವುಗಳ ಬಗೆಗೆ ಕುತೂಹಲ ಆಸಕ್ತಿ. ನಮ್ಮನ್ನು ನಾವು ಸೂಚಿಸಲು ಎದೆ ತೋರಿಸಿದರೆ ಜಪಾನಿನಲ್ಲಿ ಮೂಗಿಗೆ ಬೊಟ್ಟು ಮಾಡುವರೆಂದು ಅಸ್ಪಷ್ಟವಾದ ನೆನಪು. ಒಂದು ಸಮಾಜದಲ್ಲಿ ಸಹಜ ಎನ್ನಿಸುವ ವಿಚಾರ ಇನ್ನೊಂದೆಡೆ ಮನನೋಯಿಸುವ ಅಶ್ಲೀಲ ನಡುವಳಿಕೆ ಆಗಲೂಬಹುದು. ಸಂಪ್ರದಾಯಗಳ ಬಗೆಗೆ ಕುತೂಹಲಕ್ಕೆ ಅದೂ ಒಂದು ಕಾರಣ.


ರಷ್ಯದಲ್ಲಿ ಗಗನಯಾತ್ರಿಗಳು ಅವರ ಗಗನ ನೌಕೆ ಏರುವ ಮೊದಲು ಅವರನ್ನು ಅಲ್ಲಿಗೆ ಕರೆತಂದ ಬಸ್ಸಿನ ಗಾಲಿಗೆ ಮೂತ್ರ ಮಾಡುವುದು ಕಳೆದ ನಲುವತ್ತು ವರ್ಷಗಳಿಂದ ಆಚರಣೆಯಲ್ಲಿರುವ ಸಂಪ್ರದಾಯವಂತೆ. ಇತ್ತೀಚೆಗೆ ಆಕಾಶಕ್ಕೆ ಹಾರಿದ ಯಾತ್ರಿಗಳ ಅಪರೂಪದ ಚಿತ್ರ ಇಲ್ಲಿದೆ.

ಹಲವು ದಶಕಗಳ ಹಿಂದೆ ಸ್ನೇಹಿತರಲ್ಲಿನ    ಮದುವೆಯಲ್ಲಿ    ನಮ್ಮ ಪೋಕರಿ ಪಟಲಾಂ ಮದುವೆ ಚಿತ್ರಣಕ್ಕೆ ನೇಮಿಸಲಾಗಿತ್ತು. ಇವರು  ಸಿಕ್ಕ  ಅವಕಾಶ  ಚೆನ್ನಾಗಿ   ಉಪಯೋಗಿಸಿಕೊಂಡರು.  ಈ ಗೆಳೆಯರು ಅಂಟಿಸಿ ಕೊಟ್ಟ ಅಲ್ಬಂನಲ್ಲಿ ಮೊದಲ ಚಿತ್ರ ಗಂಡಿನ ಕಡೆ ಗಂಡಸರು ಛತ್ರದ ಬಳಿ ಬಸ್ಸಿನಿಂದಿಳಿದು ಸಾಲಾಗಿ ನಿಂತು  ಆವರಣ  ಗೋಡೆಗೆ   ಮೂತ್ರ ಮಾಡುವ ಚಿತ್ರವಾಗಿತ್ತು.  ಮುಜುಗರದಿಂದ ಹೆಣ್ಣಿನ ಮನೆಯವರೆಲ್ಲರೂ ನಮ್ಮ ಹುಡುಗರಿಗೆ ಚೆನ್ನಾಗಿ ಉಗಿದರು.

Friday, August 22, 2008

ಇಂಗು ತಿಂದು ಮಂಗನಾದ ಜಾರ್ಜ್

ಈಗ ಅದುನಿಕ ತಂತ್ರಜ್ನಾನದಿಂದಾಗಿ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲವನ್ನೂ ಬಲ್ಲೆವು ಅನ್ನುವ ಭ್ರಮೆ ನಮ್ಮದು. ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಯುರೋಪಿನಲ್ಲಿರುವ ಜಾರ್ಜಿಯ ಎಂಬ ಪುಟ್ಟ ರಾಷ್ಟ್ರವನ್ನು ತನ್ನ ನೆರೆಯಲ್ಲಿರುವ ರಷ್ಯಾದ ವಿರುದ್ದ ಗುಟ್ಟಾಗಿ ಅಮೇರಿಕ ಹಾಗೂ   ಇಸ್ರೇಲ್  ಜತೆಗೂಡಿ   ಎತ್ತಿಕಟ್ಟುತ್ತಿದೆ.  ಇವೆರಡು ದೇಶಗಳು ಜಾರ್ಜಿಯಾ ಓಲೈಕೆಗೂ ಕಾರಣ ತೈಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ. ಇವರೊಳಗಿನ  ಗೆಳೆತನ   ಎಲ್ಲಿನ ವರೆಗೆಂದರೆ ಇರಾಕಿನಲ್ಲೂ ಅಮೇರಿಕ ಮತ್ತು ಇಂಗ್ಲೇಡಿನ ನಂತರದ ದೊಡ್ಡ ಗಾತ್ರದ ಸೇನೆ ಈ  ಪುಟ್ಟ    ಜಾರ್ಜಿಯ  ದೇಶದ್ದು.

ಮೊನ್ನೆ ಚೀನಾದಲ್ಲಿ ಒಲಂಪಿಕ್ ಉದ್ಘಾಟನಾ ಸಮಾರಂಬವನ್ನು ಪ್ರಪಂಚವೇ ಮೈಮರೆತು ನೋಡುತ್ತಿದ್ದಾಗ ಜಾರ್ಜಿಯ ಒಂದು ಸೇನಾ ಕಾರ್ಯಾಚರಣೆ ನಡೆಸಿತು. ಬಹುತೇಕ ರಷ್ಯನ್ ಮೂಲದ ಜನರಿರುವ ಪ್ರದೇಶವನ್ನು  ಬಲತ್ಕಾರವಾಗಿ  ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಸಾವಿರಾರು   ಜನರನ್ನು ಕೊಂದಿತು. ಕೆಲವು ಸಾವಿರ ನಾಗರಿಕರು ಜೀವ ಉಳಿಸಿಕೊಳ್ಳಲು ರಷ್ಯಕ್ಕೆ ಓಡಿ ಹೋದರು. ಕೂಡಲೇ ಎಚ್ಚೆತ್ತ ರಷ್ಯ ತಮ್ಮವರ ಸಹಾಯಕ್ಕೆ ಪೂರ್ಣ  ಪ್ರಮಾಣದ  ಸೇನೆ ಕಳುಹಿಸಿತು.

ರಾಜ ಕುಮಾರ್ ಸತ್ತ ದಿನದ ಗಲಬೆಯಲ್ಲಿ ತಮ್ಮ ಕೈವಾಡವಿರಲು ತಾವು ಮನೆ ಹೊರಡಲೇ ಇಲ್ಲ ನಮ್ಮ ಡುಮ್ಮ ಸಿಂಗರು ಅಂದು ಹೇಳಿದರಲ್ಲ, ಹಾಗೆ ಈ ದಿನ ಜಾರ್ಜ್ ಬುಷ್ ನಿರಾತಂಕವಾಗಿ     ಚೀನಾದಲ್ಲಿದ್ದರು.   ಕೆಲವು ದಿನ ಅವರು ಮತ್ತು ಅವರ ಸಹಾಯಕರು ಈ   ಯುದ್ದ   ವಿಚಾರದಲ್ಲಿ ತೆಪ್ಪಗಿದ್ದರು. ಏನೂ ಹೆದರಿಕೊಬೇಡಿ ಜತೆಯಲ್ಲಿ ನಾನಿದ್ದೇನೆ ಎಂದು  ಮೊದಲು   ಅಲ್ಲಿನ  ಅದ್ಯಕ್ಷರಿಗೆ    ಮಿಲಿಟರಿ ಕಾರ್ಯಾಚರಣೆ  ಮಾಡಲು   ಹರಸಿದ ನಮ್ಮ ಜಾರ್ಜ್    ಆ  ವೇಳೆಗೆ


ವಾರ ಕಳೆದಾಗ ಜಾರ್ಜಿಯಾ ದೇಶದ ಅದ್ಯಕ್ಷನ ಪರೀಸ್ಥಿತಿ ಕೈಲಾಗದವ ಮೈ ಪರಚಿಸಿಕೊಂಡ ಎಂಬತಾಯಿತು. ಅಲ್ಲಿನ ಮಿಲಿಟರಿಯು ಪೂರ್ತಿ ಪುಡಿಯಾದ ನಂತರ ಸುಮ್ಮನಿರುವುದು ಸರಿಯಲ್ಲ ಅನ್ನಿಸಿದ ಅಮೇರಿಕದ ಜಾರ್ಜ್ ಅವರಿಂದ ರಷ್ಯದ ಪುಟಿನ್ ಅವರಿಗೆ ಫೋನ್. ಏನಯ್ಯಾ , ಒಂದು ಸ್ವತಂತ್ರ ಗಣರಾಜ್ಯವನ್ನು ಅತಿಕ್ರಮಿಸಿದರೆ ........ ಎನ್ನಲು ಆ ಕಡೆಯಿಂದ  ಹಾ ಹಾ      ಜೋಕ್ ಚೆನ್ನಾಗಿದೆ   ಜಾರ್ಜ್   ಎನ್ನುವ ಉತ್ತರ ಬಂತಂತೆ. ಇತ್ತೀಚೆಗೆ ವರೆಗೆ ಸ್ವತಂತ್ರ ದೇಶಗಳಾಗಿದ್ದ ಇರಾಕ್ ಹಾಗೂ ಅಫ್ಘಾನಿಸ್ಥಾನಿನಲ್ಲಿ ಇನ್ನೂ ಕಾರ್ಯಾಚರಣೆ ನಡೆಸುತ್ತಿರುವ ಆಮೇರಿಕಕ್ಕೆ ಹೇಳುವ ನೈತಿಕ ಹಕ್ಕು ??

ಮಾದ್ಯಮದ ಮೇಲಿನ ನಿಯಂತ್ರಣದಿಂದಾಗಿ ಅಮೇರಿಕದ ಹಲವಾರು ಕಿತಾಪತಿಗಳು ಅರ್ಧ ಸತ್ಯಗಳು ಬೆಳಕು ಕಾಣುವುದೇ ಇಲ್ಲ. ರಷ್ಯಾದ ಪ್ರವ್ಡಾ ಪತ್ರಿಕೆಯ ಈ ಜಾರ್ಜ್  ಬುಷ್ ಸಾಹೇಬನಿಗೆ   ಬರೆದ   ಕುಹಕ ಪತ್ರ ಓದಿ ನೋಡಿ.