Showing posts with label cartoon. Show all posts
Showing posts with label cartoon. Show all posts

Thursday, May 21, 2009

ಸ್ತ್ರೀ ಶಕ್ತಿ ಬಿಂಬಿಸುವ ಅಮೇರಿಕದ ಹಳೆಯ ಬಿತ್ತಿ ಚಿತ್ರ ಮತ್ತು ಸರ್ದಾರ್ಜಿ ಜೋಕು


ಇಂದಿನ ಕನ್ನಡ ಪ್ರಭದಲ್ಲೊಂದು ನಗೆಹನಿ   ನೋಡುವಾಗ ಅಮೇರಿಕದ ತೊಂಬತ್ತು ವರ್ಷ ಹಿಂದಿನ ಬಿತ್ತಿ ಚಿತ್ರ ನೆನಪಾಯಿತು.

ನಮ್ಮ ಸ್ತ್ರೀ ಶಕ್ತಿ ಮದ್ಯ ನಿರೋಧ ಅಂದೋಲನಕ್ಕೆ ಇದುವೇ  ಸ್ಪೂರ್ತಿ ಇರಬಹುದೋ ?

ಹಿಂದೊಮ್ಮೆ ಕನ್ನಡ ಲೇಖಕಿ ಸುನಂದಮ್ಮ ಕೃತಿ ಚೌರ್ಯ ಮಾಡಿದ್ದಾರೆ ಎಂದು ಅಪಾದಿಸಿದಾಗ ಅವರು ಪ್ರಪಂಚದಲ್ಲಿ ಇರೋದು ಬರೇ ಸಾವಿರ ಜೋಕುಗಳು. ಉಳಿದವೆಲ್ಲ ಅದರ ಕಾಪಿ ಎಂದಿದ್ದರು.

Sunday, October 12, 2008

ಪವಾಡ ನಿರತ ಕ್ರೈಸ್ತ ಸಂತರೂ ದರ್ಮಗುರುಗಳೂ

ಅಲ್ಫಾನ್ಸೊಮ್ಮ ಅವರು ಅಂತೂ ಸಂತರಾಗಲಿದ್ದಾರೆ. ಸದ್ಯದಲ್ಲಿ ಲೋಕ ಸಭೆ ಚುನಾವಣೆ.  ಆಡಳಿತ  ನಡೆಸುತ್ತಿರುವ  ಕಾಂಗ್ರೇಸ್  ಪಕ್ಷದಿಂದ     ಕ್ರೈಸ್ತರ ಓಲೈಕೆ ವೇಗವರ್ದಿಸಲು    ಪ್ರಾರಂಬ.  ನಮ್ಮ ಜಾತ್ಯಾತೀತ ಸರಕಾರ ಅವರ ಹೆಸರಿನಲ್ಲೊಂದು ನಾಣ್ಯ ಬಿಡುಗಡೆ ಮಾಡುವ ಆಶ್ವಾಸನೆ. ಲೋಕಸಭೆ ಚುನಾವಣೆ ಅನಂತರದ ಬಿಡುಗಡೆ ನಿರ್ದಾರಿತ ದಿನ ಆಶ್ವಾಸನೆ   ಕೊಟ್ಟ   ಚಿದಂಬರಂ ಅದಿಕಾರದಲ್ಲಿರುವುದು ಸಂಶಯ.  ಅದೇನು  ಮುಖ್ಯ  ಅಲ್ಲ, ಬಿಡಿ. 

ಈಗ ಪತ್ರಿಕೆ ಬಿಡಿಸಿದರೆ ಅರುವತ್ತು ವರ್ಷ ಹಿಂದೆ ಸತ್ತ ಅಲ್ಫಾನ್ಸೊಮ್ಮನ ಸಂತ ಪದವಿಯದೇ ಕಥೆ. ಸಂತರೆನಿಸಬೇಕಾದರೆ ಪವಾಡ ನಡೆದಿರಬೇಕು. ಅದಕ್ಕೆ   ಪ್ರಾರ್ಥನೆ ಅನಂತರ ಅಂಗವಿಕಲ ಮಗು ನಡೆದಾಡಲು ಪ್ರಾರಂಬಿಸಿದ  ಘಟನೆ  ಮೂವತ್ತೈದು ವರ್ಷ ಹಿಂದೆ ನಡೆದಿದೆ ಎನ್ನಲಾದ ಒಂದು ಕಟ್ಟು ಕಥೆ ತಯಾರು. ಈ ಅಲ್ಫಾನ್ಸೊಮ್ಮ ಸತ್ತು ಇಪ್ಪತೈದು ವರ್ಷ ಕಳೆದ ನಂತರ ನಡೆಸಿದ ಪವಾಡ. ನಿಜಕ್ಕೂ ಅದ್ಬುತ.

ಈ   ಓಟದಲ್ಲಿ ಅಲ್ಫಾನ್ಸೊಮ್ಮ ಮೊದಲಿಗಳಾಗಿ ಇನ್ನೂ ಹಲವಾರು ಜನ  ಬಾರತದ  ಮೂಲದವರು   ಸಾಲಿನಲ್ಲಿದ್ದಾರಂತೆ.  ಪವಾಡಗಳ ಪಟ್ಟಿ ಭಲೇ ಮಜವಾಗಿದೆ. ಪಾದ್ರಿಯ ಗೋರಿಯಲ್ಲಿ ಪ್ರಾರ್ಥಿಸಿದ  ವ್ಯಕ್ತಿಯೊಬ್ಬನ   ಗಿಡ್ಡವಾಗಿದ್ದ ಎಡ ಕಾಲು ಬಲ ಕಾಲಿಗೆ ಸಮಾನವಾಗಿ ಬೆಳೆಯಿತಂತೆ. ತೆರೆಸಮ್ಮ ಒಂದು ರೋಗಿಯ ಕಾನ್ಸರ್ ನಿವಾರಿಸಿದ ಪ್ರತೀತಿ. ಆದರೆ ಒಮ್ಮೆ ತೆರೆಸಮ್ಮ ಇದ್ದ ವಿಮಾನ ಟಾಂಜಾನಿಯದಲ್ಲಿ    ಅಪಘಾತವಾಗಿ  ಸಹ ಪ್ರಯಾಣಿಕರಲ್ಲಿ   ಆರು ಜನ ಸತ್ತಿರುವುದು ಅವರು ಸಂತರಾಗುವುದಕ್ಕೆ ಬಾಧಕವಲ್ಲ.

ಮಂಗಳೂರಿನ ಹೆಸರಾಂತ ಕ್ರೈಸ್ತ ಅಸ್ಪತ್ರೆಯ ವೈದ್ಯರು ಇನ್ನು ಚಿಕಿತ್ಸೆ ನಿಶ್ಪ್ರಯೋಜಕವೆಂದು ಕಾನ್ಸರ್ ಪೀಡಿತ ಕ್ರೈಸ್ತ ಹೆಂಗಸನ್ನು ಸಾವನ್ನು ಕಾಯಲೆಂದು ಮನೆಗೆ ಕಳುಹಿಸಿದ್ದರು. ಕಾಸರಗೋಡಿನ  ತಜ್ನ   ವೈದ್ಯ ಡಾ. ಸತ್ಯಶಂಕರ್ ಅವರು ಕೊನೆ ಪ್ರಯತ್ನವೆಂದು ಗೋಮೂತ್ರ ಅರ್ಕ ಕೊಟ್ಟು ಕಾಯಿಲೆ ಗುಣಪಡಿಸಿದ ಸ್ಪಷ್ಟ ದಾಖಲೆಗಳಿವೆ. ಕ್ಷಮಿಸಿ. ಕ್ರೈಸ್ತರೇತರ ಪವಾಡ ಕ್ರೈಸ್ತ ಮತ ಒಪ್ಪುವುದಿಲ್ಲ.

ಇವೆಲ್ಲ ಬರೆಯಲು ಕಾರಣ ಇತ್ತೀಚೆಗೆ ಮಂಗಳೂರಿನ ಸುತ್ತ ಮುತ್ತ ಕೋಮು ಗಲಭೆ. ಯಾರು ಯಾರೋ ಬಂದರು.  ಬೆಂಗಳೂರಿನಿಂದ  ಬಂದರು,  ದೆಹಲಿಯಿಂದಲೂ ಬಂದರು.    ಛೇ ಛೇ ಎಂದರು. ಪತ್ರಿಕಾಗೋಷ್ಟಿ ನಡೆಸಿದರು. ಟಿವಿ ಕೆಮರಕ್ಕೂ ಮುಖ ಒಡ್ಡಿದರು. ಕ್ರಿಯೆಯನ್ನು  ಸಂಪೂರ್ಣ  ನಿರ್ಲಕ್ಷಿಸಿ ಪ್ರತಿಕ್ರಿಯೆ ಮೇಲೆ ಹೆಚ್ಚಿನ ಗಮನ ಹರಿಸಲಾಯಿತು.  ರೋಮಿನಲ್ಲೂ,   ಅಮೇರಿಕದಲ್ಲೂ  ಪ್ರತಿದ್ವನಿ  ಕೇಳಿಸಿತು. 


ತೆರೆಮರೆ ಅವಲೋಕಿಸುವುದಾದರೆ ಕ್ರೈಸ್ತ ದರ್ಮಗುರುಗಳ ನಿಷ್ಕ್ರೀಯತೆಯಿಂದಾಗಿ   ಪರೀಸ್ಥಿತಿ ಅಷ್ಟು ಗಂಬೀರವಾಯಿತು. ಅನಾವಶ್ಯಕ ಹುಲಿ ಬಂತು ಹುಲಿ ಎಂದು ಘಂಟೆ ಬಾರಿಸಿದರು.  ಜನ ಸೇರಿಸಿದ ಸಂದರ್ಬದಲ್ಲಿ  ಇವರು   ಹೊಣೆಗಾರಿಕೆಯಿಂದ ವರ್ತಿಸಲಿಲ್ಲ.   ಸಮಾಜಬಾಂದವರಿಗೆ ಸತ್ಯಸಂಗತಿ ತಿಳಿಯಪಡಿಸಿ ಜವಾಬ್ದಾರಿಯಿಂದ ವರ್ತಿಸುತ್ತಿದ್ದರೆ   ಮಂಗಳೂರಿನಲ್ಲಿ ಗಲಭೆ ನಡೆಯುತ್ತಲೇ ಇರಲಿಲ್ಲ. ಇದೊಂದು ಕ್ರೈಸ್ತ ರಾಜಕಾರಣ ಪ್ರಾಯೋಜಿತ ನಾಟಕ ಎಂದರೂ ಸೈ.

ನ್ಯೂ ಯೋರ್ಕ್ ನಲ್ಲಿ ಎರಡು ಕಟ್ಟಡಗಳಿಗೆ ವಿಮಾನ ಡಿಕ್ಕಿ ಹೊಡೆದ ನಂತರವೂ   ಅಲ್ಲಿನ  ದೊರೆ   ಬುಷ್ ಬಾಲವಾಡಿ ಮಕ್ಕಳಿಗೆ ಹೇಳುತ್ತಿದ್ದ ಕಥೆಯನ್ನು ಮುಂದುವರಿಸಿದಂತಿತ್ತು ಇವರ ವರ್ತನೆ.

ಹಿಂದೆ ನಮ್ಮ ಪುಡಿ ಕಾಂಗ್ರೇಸಿಗರು ಚುನಾವಣೆ ಗೆಲ್ಲಲು ಪ್ರತಿ ಸಲವೂ ಕೋಮು ಗಲಭೆಯಾಗಿ ಕೆಲವು ಬ್ಯಾರಿಗಳಾದರೂ ಸಾಯಬೇಕು  ಪೆಟ್ಟು   ತಿನ್ನಬೇಕು   ಎನ್ನುತ್ತಿದ್ದರು.   ಈಗ  ಅವರ  ವರ್ತನೆ   ಪೊರ್ಬುಗಳ     ಎತ್ತಿಕಟ್ಟುವಂತಿದೆ. ಈ  ರಾಜಕೀಯ   ಆಟವನ್ನು  ಕ್ರೈಸ್ತ ಸಮುದಾಯ  ಪ್ರತಿಭಟಿಸುವ ಬದಲು ಜತೆಯಲ್ಲಿ ಹೆಜ್ಜೆ ಹಾಕಿದೆ.   ಇದು  ಈ   ಪರಿಸರದಲ್ಲಿಯೇ  ವಾಸಿಸುವ   ಸಾಮಾನ್ಯ ಹಿಂದುಗಳಿಗೆ ನೋವು  ಮುಜುಗರ    ಉಂಟುಮಾಡುವುದೆಂದು ಅವರು ಅರಿಯಬೇಕಾಗಿತ್ತು.  .

ಭಾರತವು     ಕ್ರೈಸ್ತ     ಸಂತರು ನಡೆದಂತಹ ಪುಣ್ಯ ಬೂಮಿ.   ಮೇರಾ ಭಾರತ್ ಮಹಾನ್

Sunday, September 14, 2008

ಕೋಲ ಎಂಬ ಬಣ್ಣದ ನೀರು ನಮ್ಮಲ್ಲಿ ಹಾಲಿಗಿಂತಲೂ ಬಲು ದುಬಾರಿ

ಅಂತೂ ಇಂತೂ ಹಾಲಿಗೆ ಖರೀದಿ ದರ ಎರಡು ರೂಪಾಯಿ ಏರಿಕೆ. ನೂರು ದಿನ ಯಶಸ್ವಿ ಆಡಳಿತ ನಡೆಸಿದವರ ಕೊಡುಗೆ.  ಸರಕಾರದ  ಪರವಾಗಿ  ಮಾತನಾಡಲು  ಹಕ್ಕಿರುವ     ಶೋಭಕ್ಕನಿಂದಾದ   ಘೋಷಣೆ ಮೇಲ್ನೋಟಕ್ಕೆ ಅವರು ವೈಯುಕ್ತಿಕವಾಗಿ ಕೊಡುತ್ತಾರೊ ಎನ್ನುವ ಅನುಮಾನ. ಮನೆಯ ಹೆಂಗಸರ ಹೆಸರಿಗೆ ಬಾಂಕ್ ಖಾತೆ ಎನ್ನುವ ವಿನೂತನ ಬಳಸು ದಾರಿಯ ಪರಿಣಾಮ ಹೊಸತಾದ ಮರಕೋತಿ ಅಟದ ಪ್ರಾರಂಬ.  ರೇವಣ್ಣನವರ    ಹಾಲು ಮಹಾಮಂಡಲಿಗೆ ಬೆಲೆ ಏರಿಸುವ ಹಕ್ಕಿಲ್ಲವೆಂದು ಯೆಡ್ಯುರಪ್ಪನ ಗುಟುರು.    ಹೀಗೆಲ್ಲ    ಒಟ್ಟಿನಲ್ಲಿ ಗೊಂದಲಾಮಯವಾಗಿತ್ತು.   
                                                      
ನನ್ನ ಬ್ಲೋಗ್ ಬರಹ   ಅಮೇರಿಕದಲ್ಲಿ ಹಾಲು ಕುಡಿದ್ರಾ ಯೆಡ್ಯುರಪ್ಪ      ಸ್ವಲ್ಪ ಬದಲಾವಣೆ ಮಾಡಿ ಕನ್ನಡ ಪ್ರಭಕ್ಕೆ ಕಳುಹಿಸಿದ್ದೆ.    ಅದು ಗುರುವಾರ ೧೧ ಸೆಪ್ಟೆಂಬರ್ ಸಂಚಿಕೆಯಲ್ಲಿ ಚಿತ್ರ ಸಮೇತ ಪ್ರಕಟವಾಗಿದೆ.  ಅರ್ಥಪೂರ್ಣ  ವ್ಯಂಗ್ಯ ಚಿತ್ರ  ಬರೆದವರಿಗೂ  ಬರಹದ  ತಿರುಳು ಹೆಕ್ಕಿ  ಪ್ರಕಟಿಸಿದ  ಸಂಪಾದಕ ವರ್ಗಕ್ಕೂ  ನಾನು  ಕೃತಜ್ನ.    ಇಲ್ಲಿ  ಅಸ್ಪಷ್ಟವಾದರೆ  ಅದನ್ನು     http://www.kannadaprabha.com/pdf/1192008/6.pdf    ಪುಟದಲ್ಲಿ  ಓದಬಹುದು.   ಹಾಲಿನ  ಕ್ರಯದ  ಬಗೆಗೆ ಸರಿಯಾದ  ಮಾಹಿತಿ  ಸಿಕ್ಕ  ನಂತರ  ಈ   ಎರಡನೇಯ  ಬಾಗ  ಹಾಕುವುದೆಂದು  ವಿಳಂಬಿಸಿದೆ. 

  ಸ್ಥಳೀಯ  ಸಹಕಾರಿ  ಸಂಘದ  ಮೂಲಕವೇ  ಈ  ಎರಡು  ರೂಪಾಯಿ  ತಲಪಿಸುವುದೆಂದು  ಸರಕಾರದ   ತೀರ್ಮಾನವೆಂದು  ಇತ್ತೀಚಿನ  ಪತ್ರಿಕಾ  ವರದಿ.  ಬಾಂಕ್  ಖಾತೆಯ  ಕನಸಿಲ್ಲಿದ್ದ   ಮಹೀಳೆಯರಿಗೆಲ್ಲ   ಅಶಾಭಂಗ.    ಈ  ಕೊಡುಗೆಯ ಹಿಂದೆ  ತಾನಿರುವೆಂದು  ರೇವಣ್ಣ  ಬಿಂಬಿಸಿದರೆ  ಎಂದು  ಯೆಡ್ಯು  ಗುಮಾನಿ.  ಈಗ  ನಮ್ಮ   ಸಮಾಜದಲ್ಲಿ   ಎಲ್ಲವೂ  ರಾಜಕೀಯಮಯ.    ಸಹೋದರಿಯ  ಸಮಸ್ಯೆ  ಪರಿಹಾರದ  ಹೆಗ್ಗಳಿಕೆ  ಸದಾಶಿವನಿಗೆ  ಸಿಕ್ಕರೆ  ಎಂದು  ಹಿರಿಯಣ್ಣ   ಹುಳಿ ಹಿಂಡಿದ  ಉದಾಹರಣೆ ನಮ್ಮೂರಲ್ಲಿದೆ.    


ಪ್ರಜಾವಾಣಿಯ  ಚಿತ್ರಕಾರ  ಮಹಮದ್  ಅವರು  ಈ  ಸಮಸ್ಯೆಯ  ಅರ್ಥಪೂರ್ಣವಾಗಿ  ಚಿತ್ರಿಸಿದ್ದಾರೆ.     ಶಿಕಾರಿಪುರ  ಅಕ್ಕಿ  ಮಿಲ್ಲಿನ  ಅಳಿಯನಾದ  ಯೆಡ್ಯುಗೆ   ಪಶು ಆಹಾರದ  ಒಂದು ಪ್ರಮುಖ ಅಂಶವಾದ    ಅಕ್ಕಿ  ತೌಡಿನ  ಬೆಲೆ ಈಗ ಗೊತ್ತಿಲ್ಲವೋ  ಏನೊ.  ಒಟ್ಟಿನಲ್ಲಿ    ಇವರ ರಾಜಕೀಯ ಆಟದಲ್ಲಿ  ರೈತರು  ಪುಡಿಯಾಗಲಿದ್ದಾರೆ.

Friday, August 22, 2008

ಇಂಗು ತಿಂದು ಮಂಗನಾದ ಜಾರ್ಜ್

ಈಗ ಅದುನಿಕ ತಂತ್ರಜ್ನಾನದಿಂದಾಗಿ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲವನ್ನೂ ಬಲ್ಲೆವು ಅನ್ನುವ ಭ್ರಮೆ ನಮ್ಮದು. ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಯುರೋಪಿನಲ್ಲಿರುವ ಜಾರ್ಜಿಯ ಎಂಬ ಪುಟ್ಟ ರಾಷ್ಟ್ರವನ್ನು ತನ್ನ ನೆರೆಯಲ್ಲಿರುವ ರಷ್ಯಾದ ವಿರುದ್ದ ಗುಟ್ಟಾಗಿ ಅಮೇರಿಕ ಹಾಗೂ   ಇಸ್ರೇಲ್  ಜತೆಗೂಡಿ   ಎತ್ತಿಕಟ್ಟುತ್ತಿದೆ.  ಇವೆರಡು ದೇಶಗಳು ಜಾರ್ಜಿಯಾ ಓಲೈಕೆಗೂ ಕಾರಣ ತೈಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ. ಇವರೊಳಗಿನ  ಗೆಳೆತನ   ಎಲ್ಲಿನ ವರೆಗೆಂದರೆ ಇರಾಕಿನಲ್ಲೂ ಅಮೇರಿಕ ಮತ್ತು ಇಂಗ್ಲೇಡಿನ ನಂತರದ ದೊಡ್ಡ ಗಾತ್ರದ ಸೇನೆ ಈ  ಪುಟ್ಟ    ಜಾರ್ಜಿಯ  ದೇಶದ್ದು.

ಮೊನ್ನೆ ಚೀನಾದಲ್ಲಿ ಒಲಂಪಿಕ್ ಉದ್ಘಾಟನಾ ಸಮಾರಂಬವನ್ನು ಪ್ರಪಂಚವೇ ಮೈಮರೆತು ನೋಡುತ್ತಿದ್ದಾಗ ಜಾರ್ಜಿಯ ಒಂದು ಸೇನಾ ಕಾರ್ಯಾಚರಣೆ ನಡೆಸಿತು. ಬಹುತೇಕ ರಷ್ಯನ್ ಮೂಲದ ಜನರಿರುವ ಪ್ರದೇಶವನ್ನು  ಬಲತ್ಕಾರವಾಗಿ  ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಸಾವಿರಾರು   ಜನರನ್ನು ಕೊಂದಿತು. ಕೆಲವು ಸಾವಿರ ನಾಗರಿಕರು ಜೀವ ಉಳಿಸಿಕೊಳ್ಳಲು ರಷ್ಯಕ್ಕೆ ಓಡಿ ಹೋದರು. ಕೂಡಲೇ ಎಚ್ಚೆತ್ತ ರಷ್ಯ ತಮ್ಮವರ ಸಹಾಯಕ್ಕೆ ಪೂರ್ಣ  ಪ್ರಮಾಣದ  ಸೇನೆ ಕಳುಹಿಸಿತು.

ರಾಜ ಕುಮಾರ್ ಸತ್ತ ದಿನದ ಗಲಬೆಯಲ್ಲಿ ತಮ್ಮ ಕೈವಾಡವಿರಲು ತಾವು ಮನೆ ಹೊರಡಲೇ ಇಲ್ಲ ನಮ್ಮ ಡುಮ್ಮ ಸಿಂಗರು ಅಂದು ಹೇಳಿದರಲ್ಲ, ಹಾಗೆ ಈ ದಿನ ಜಾರ್ಜ್ ಬುಷ್ ನಿರಾತಂಕವಾಗಿ     ಚೀನಾದಲ್ಲಿದ್ದರು.   ಕೆಲವು ದಿನ ಅವರು ಮತ್ತು ಅವರ ಸಹಾಯಕರು ಈ   ಯುದ್ದ   ವಿಚಾರದಲ್ಲಿ ತೆಪ್ಪಗಿದ್ದರು. ಏನೂ ಹೆದರಿಕೊಬೇಡಿ ಜತೆಯಲ್ಲಿ ನಾನಿದ್ದೇನೆ ಎಂದು  ಮೊದಲು   ಅಲ್ಲಿನ  ಅದ್ಯಕ್ಷರಿಗೆ    ಮಿಲಿಟರಿ ಕಾರ್ಯಾಚರಣೆ  ಮಾಡಲು   ಹರಸಿದ ನಮ್ಮ ಜಾರ್ಜ್    ಆ  ವೇಳೆಗೆ


ವಾರ ಕಳೆದಾಗ ಜಾರ್ಜಿಯಾ ದೇಶದ ಅದ್ಯಕ್ಷನ ಪರೀಸ್ಥಿತಿ ಕೈಲಾಗದವ ಮೈ ಪರಚಿಸಿಕೊಂಡ ಎಂಬತಾಯಿತು. ಅಲ್ಲಿನ ಮಿಲಿಟರಿಯು ಪೂರ್ತಿ ಪುಡಿಯಾದ ನಂತರ ಸುಮ್ಮನಿರುವುದು ಸರಿಯಲ್ಲ ಅನ್ನಿಸಿದ ಅಮೇರಿಕದ ಜಾರ್ಜ್ ಅವರಿಂದ ರಷ್ಯದ ಪುಟಿನ್ ಅವರಿಗೆ ಫೋನ್. ಏನಯ್ಯಾ , ಒಂದು ಸ್ವತಂತ್ರ ಗಣರಾಜ್ಯವನ್ನು ಅತಿಕ್ರಮಿಸಿದರೆ ........ ಎನ್ನಲು ಆ ಕಡೆಯಿಂದ  ಹಾ ಹಾ      ಜೋಕ್ ಚೆನ್ನಾಗಿದೆ   ಜಾರ್ಜ್   ಎನ್ನುವ ಉತ್ತರ ಬಂತಂತೆ. ಇತ್ತೀಚೆಗೆ ವರೆಗೆ ಸ್ವತಂತ್ರ ದೇಶಗಳಾಗಿದ್ದ ಇರಾಕ್ ಹಾಗೂ ಅಫ್ಘಾನಿಸ್ಥಾನಿನಲ್ಲಿ ಇನ್ನೂ ಕಾರ್ಯಾಚರಣೆ ನಡೆಸುತ್ತಿರುವ ಆಮೇರಿಕಕ್ಕೆ ಹೇಳುವ ನೈತಿಕ ಹಕ್ಕು ??

ಮಾದ್ಯಮದ ಮೇಲಿನ ನಿಯಂತ್ರಣದಿಂದಾಗಿ ಅಮೇರಿಕದ ಹಲವಾರು ಕಿತಾಪತಿಗಳು ಅರ್ಧ ಸತ್ಯಗಳು ಬೆಳಕು ಕಾಣುವುದೇ ಇಲ್ಲ. ರಷ್ಯಾದ ಪ್ರವ್ಡಾ ಪತ್ರಿಕೆಯ ಈ ಜಾರ್ಜ್  ಬುಷ್ ಸಾಹೇಬನಿಗೆ   ಬರೆದ   ಕುಹಕ ಪತ್ರ ಓದಿ ನೋಡಿ.

Wednesday, July 09, 2008

ಸದಾಸಂ ಮಾರಾಟ

ನನಗೆ ಉಪಯೋಗಿಸಲು ಬೇಕಾದದ್ದು ಒಂದು ಸದಾಸಂ. ಇನ್ನೇನು ತರಿಸಲು ಹಣ ಕಳುಹಿಸುವುದು ಎನ್ನುವ ಕೊನೆ ಹಂತದ ಸನ್ನಿವೇಶದಲ್ಲಿ ಅವರು ಹಾಕಿದ ಬಾಂಬು ನಮ್ಮಲ್ಲಿ ಚಿಲ್ಲರೆ ವ್ಯಾಪಾರ ಇಲ್ಲ. ಇವರಿಂದ ಬೇಡ ಎಂದು ನಾನು ಕಾಲು ಹಿಂದೆ ಇಟ್ಟರೆ ನನಗೆ ಅದೇ ವರ್ಷದ ಮಳೆಗಾಲದಲ್ಲಿ ಸದಾಸಂ ಉಪಯೋಗ ಮಾಡಿನೋಡಲು ಅಸಾದ್ಯ.

ಸೋಲುತ್ತಿರುವ ದೇಹದಿಂದಾಗಿ ಮಳೆಗಾಲದಲ್ಲಿ ತೋಟಕ್ಕೆ ಹೋಗುವುದು ಕೃಷಿಕನಾಗಿ ಉಳಿಯುವುದರ ಪ್ರಶ್ನೆಯಾಗುತ್ತಲಿತ್ತು. ಗುಣ ದೋಷಗಳನ್ನೆಲ್ಲ ಅವಲೋಕಿಸಿ ಅವರಿಗೆ ಹಣ ಕಳುಹಿಸಿದೆ. ಐದು ಯಂತ್ರಗಳು ನಮ್ಮ ಅಂಗಳದಲ್ಲಿ ಬಂದಿಳಿದವು. ನನಗೆ ಒಂದು ಉಪಯೋಗಕ್ಕೂ ಮತ್ತೊಂದು ಅಗತ್ಯವಾದರೆ ಬಿಡಿ ಬಾಗಗಳಿಗೂ ಇಟ್ಟುಕೊಳ್ಳುವ ಆಲೋಚನೆ ಮಾಡಿದೆ. ಉಳಿದವುಗಳ ಅವುಗಳ ಬಗ್ಗೆ ಅರಿವಿದ್ದ ಹಾಗೂ ಅಗತ್ಯವಿದ್ದವರು ಸಿಕ್ಕರೆ ಕೊಡುವುದೆಂದು ತೀರ್ಮಾನಿಸಿದೆ.

ಚೀನಾ ಮಾಲು. ಹೇಗುಂಟೋ ? ಪ್ರಶ್ನೆಗಳು ನಮ್ಮ ಎದುರಾಗುತ್ತವೆ. ಇದರ ಬಗೆಗೆ ಯಾರೂ ನನ್ನನ್ನು ದೂರುವುದು ನನಗೆ ಬೇಕಿರಲಿಲ್ಲ. ಹಾಗಾಗಿ ಗುಣಮಟ್ಟ ಬಗ್ಗೆ ನನಗೆ ಖಾತರಿಯಾದ ನಂತರವೇ ಮಾರಾಟ ಎಂದು ನಾನು ತೀರ್ಮಾನಿಸಿದ್ದೆ. ಈಗ ಹನ್ನೊಂದು ತಿಂಗಳ ಉಪಯೋಗ ನನಗೆ ಇದರ ಗುಣಮಟ್ಟದ ಬಗ್ಗೆ ದೈರ್ಯ ಕೊಟ್ಟಿದೆ. ಸಾಮಾನ್ಯ ಬದಲಿಸುವಂತಹ ಎಲ್ಲ ಸಾಮಾನುಗಳು ನಮ್ಮ ದ್ವಿ-ಚಕ್ರ ವಾಹನಗಳ ಬಿಡಿ ಬಾಗಗಳು ಹೊಂದುತ್ತವೆ.

ಬಾಯಾರಿದವನಿಗೆ ನೀರಿನ ರುಚಿ ಎಂಬಂತೆ ನನ್ನಂತಹ ವ್ಯಕ್ತಿಗಳಿಗೆ ನನ್ನ ಮೊದಲ ಅಧ್ಯತೆ. ಇವು ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ. ವ್ಯಾಪಾರಿಗಳು ಹೇಳಿದ್ದೇ ಕ್ರಯ. ಒಂದೆರಡು ವಾಹನಗಳ ಪರದೇಶದಿಂದ ತರಿಸುವುದು ನಿಜಕ್ಕೂ ತಲೆಹರಟೆ ಕೆಲಸ. ನನಗೆ ಹೃದಯ ಚಿಕಿತ್ಸೆ ಆಗಿದೆ, ತೋಟಕ್ಕೆ ಹೋಗಲು ಸಾದ್ಯವಾಗುತ್ತಿಲ್ಲ ಎಂದೊಬ್ಬರು ಪರರಾಜ್ಯದಿಂದ ಪತ್ರಿಸಿದ್ದರು. ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತೆ. ಅದುದರಿಂದ ನನ್ನಂತವರು ಸಂಪರ್ಕಿಸಿದರೆ ಅವರಿಗಾಗಿ ಉಳಿಯಲಿ ಎನ್ನುವ ನೆಲೆಯಲ್ಲಿ ಮಾರಾಟಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.

ಹಾಗೆಂದು ಇವುಗಳಿಗೆ ಇರಬಹುದಾದ ಮಾರುಕಟ್ಟೆ ಬಹಳ ಸಿಮಿತವಾದುದು. ತಿಂಗಳಿಗೆ ಹತ್ತಾರು ಮಾರುವಂತಹ ವಾಹನ ಇದಲ್ಲ. ಪರಿಸರಕ್ಕೆ ಹಾನಿ ಮಾಡುವ ವಾಹನಗಳು ಸಾಮಾನ್ಯವಾಗಿ ನನಗೆ ಸಮ್ಮತವಲ್ಲವಾದರೂ ಇವು ಅಂಗವಿಲಕರ ಗಾಲಿ ಕುರ್ಚಿಯ ತರಗತಿಗೆ ಸೇರುವಂತಹದ್ದು ಎನ್ನುವ ಸಮದಾನ.


ವಾರಂಟಿ, ಕಸ್ಟಮರ್ ಸಪೋರ್ಟ್ ಎಂದು ತಲೆಕೆಡಿಸಿಕೊಳ್ಳಲು ನನಗೆ ಅಸಕ್ತಿಯಾಗಲಿ ಸಮಯವಾಗಲಿ ಇಲ್ಲ. ನಮ್ಮ ತೋಟಕ್ಕೆ ಹೋಗಲು ಕಷ್ಟ ಪಡುವವ ಇದನೆಲ್ಲ ಎಳೆದಾಕಿಕೊಳ್ಳುವ ಉಸಾಬರಿ ನನಗೇತಕೆ ?













ನನ್ನ ದೋರಣೆ ಅನಿಸಿಕೆಗಳ ರೀತಿಯಲ್ಲಿಯೇ ಈ ವ್ಯಂಗ್ಯ ಚಿತ್ರ ಕಂಡು ಅನಿಸಿಕೆ ಹಾಗೂ ಚಿತ್ರ ಎರಡನ್ನೂ ಹಂಚಿಕೊಳ್ಳುತ್ತಿದ್ದೇನೆ.

ಕೊನೆ ಮಾತು : ತಲೆಬರಹವೇ ಒಗಟಿನಂತಿದೆ ಎಂದು ಹೇಳಿಸಿಕೊಂಡ ನಂತರ ಈ ವಿವರಣೆ. ಇಂಗ್ಲೀಷಿನಲ್ಲಿ ATV ಯೆಂದು ಕರೆಸಿಕೊಳ್ಳುವ ವಾಹನಕ್ಕೆ ಹೆಸರು ಸದಾಸಂ ಸಕಲ ದಾರಿ ಸಂಚಾರಿ ಎಂಬ ಕನ್ನಡದ ನಾಮಕರಣ ಶ್ರೀಪಡ್ರೆಯವರು ಟಂಕಿಸಿದ್ದು.

ಅಲ್ಲೂ  ಉಂಟು:  ಸದಾಸಂ