Wednesday, May 21, 2008

ನಾನೂ ಮತ ಹಾಕಿದೆ

ನಮ್ಮದು ಹೇಳಿ   ಕೇಳಿ  ಪ್ರಪಂಚದ  ಅತಿ  ದೊಡ್ಡ   ಪ್ರಜಾಪ್ರಬುತ್ವ.   
ಆದರೆ   ಈ  ವ್ಯವಸ್ಥೆಯನ್ನು    ನಿಜಕ್ಕೂ ಅರ್ಥಹೀನವಾಗುವ ರೀತಿ   
ನಮ್ಮನ್ನೊ  ಆಳುತ್ತಿರುವ      ಈ ರಾಜಕಾರಣಿಗಳು ಮಾಡಿ    ಬಿಟ್ಟಿದ್ದಾರೆ.   
ಈ ಸಲದ ಮತದಾನಕ್ಕೆ  ಸ್ವಲ್ಪ  ಮೊದಲು       ಯಾರೋ   ಒಬ್ಬರು  
ಅನಾಮಿಕ ಕಾನೂನು  ತಜ್ನರು       ಕ್ರಮ ಸಂಖ್ಯೆ ೪೯ ಓ ಎಂಬ
೧೯೬೧ ಚುನಾವಣಾ ಕಾನೂನಿನ ಅಂಶವನ್ನು   ಕಡತಗಳ  ಮದ್ಯೆಯಿಂದ  
ಅಗೆದು  ಹೊರ ತೆಗೆದರು.   ಇದರ ಪ್ರಕಾರ ನಮಗೆ  ಚುನಾವಣೆಗೆ  ನಿಂತಿರುವ    
ಎಲ್ಲ     ಅಬ್ಯರ್ಥಿಗಳ   
ತಿರಸ್ಕರಿಸುವ    ಹಕ್ಕು
  ಇರುತ್ತದೆ.   
ಹಿಂದೆ  ಯಾವ  ಚಿಹ್ನೆಗೂ ಮತ ಒತ್ತದಿದ್ದರೆ ಅದು  ಕುಲಗೆಟ್ಟ ಮತವೆಂದು
ಪರಿಗಣಿಸಲ್ಪಡುತಿತ್ತು.    ಈ  ವಿಚಾರ  ಜನಸಾಮಾನ್ಯರಿಗೆ  
ತಲಪಲು  ನಲುವತ್ತೈದು  ವರುಷ ಬೇಕಾದವು.    ಆಗ  ಮತದಾರನನ್ನು  
ಚುನಾವಣೆ  ಸಮಯ  ಹೊರತು  ಪಡಿಸಿ    ತೀರಾ  ಸಲೀಸಾಗಿ  ಕಾಣುವ  ನಮ್ಮ    
ರಾಜಕಾರಣಿಗಳಿಗೆ  ಬಿಸಿ  ಮುಟ್ಟಿಸುವ  ಅವಕಾಶ  ದೊರಕುತ್ತದೆ.   ಹೀಗೆ  ನಾನು  
ಈ   ಪ್ರಕಾರ  ಮತದಾನ ಮಾಡದೆಯೇ  ಮತದಾನ  ಮಾಡಿದೆ.  

ಮತದಾರನನ್ನು  ಸಂಪೂರ್ಣ    ಮರೆತು  ಈ  ಜನನಾಯಕರು  ಯಾ  
ಜನಸೇವಕರು    ತಮ್ಮ   ಸ್ವಾರ್ಥ   ಸಾದನೆಯಲ್ಲೇ   ತೊಡಗಿಕೊಂದಿರುತ್ತಾರೆ.  ಗಣಿ ದನಿಗಳಲಾರಿಗಳು  ರಾಜ್ಯದ  ಹೆದ್ದಾರಿಗಳ  ನಾಶಮಾಡುವಾಗಲಿ  ಕುಮಾರಸ್ವಾಮಿ  
ತನ್ನ  ಕ್ಷೇತ್ರಕ್ಕೆ  ಸಾವಿರ  ಕೋಟಿ  ಖರ್ಚು  ಮಾಡುವಾಗಲಿ  ಚಕಾರ  ಎತ್ತದ  
ಈ  ನಮ್ಮ  ಪ್ರತಿನಿಧಿಗಳು  ತಮ್ಮ  ಸಂಬಳಬತ್ತೆ  ಏರಿಸುವಾಗ   
ಕೈ ಎತ್ತುವ   ಸೇವೆ  ಸಲ್ಲಿಸುತ್ತಾರೆ.

 ನನಗೆ  ಮತವಿರುವುದು    ಸಾವಿರದ ಮುನ್ನೂರು  ಚಿಲ್ಲರೆ  ಮತವಿರುವ  ಹಾಗೂ  
ನಮ್ಮ  ಮನೆಯಿಂದ  ಆರು  ಕಿಲೋಮೀಟರ್  ದೂರವಿರುವ    ಒಕ್ಕೆತ್ತೂರು  ಶಾಲೆ  
ಮತದಾನಕೇಂದ್ರದಲ್ಲಿ.     
  ಸಂಜೆ  ನಾಲ್ಕಕ್ಕೆ  ಹೋದರೆ  ಸುಮಾರು  ೪೫ ನಿಮಿಷ  
ಕಾಯಬೇಕಾಯಿತು.  
  ನಾನೊಬ್ಬ  ಮತದಾನ  ಮಾಡಿದರೂ  ಯಂತ್ರದ  ಗುಂಡಿ  ಒತ್ತದೆ  
ಅವರ  ಖಡತದಲ್ಲಿ  ಒಂದರ  ಬದಲು  ಎರಡು  ರುಜು  ಹಾಕಿ  ಬಂದವನು.  ಅಲ್ಲಿದ್ದ     ಮತಕಟ್ಟೆ  ಅದಿಕಾರಿಗಳಿಗೆ  ನನ್ನಂತಹವರು   ಹೊಸತು.    ಅವರಿಗೆ  
ನನ್ನ  ಮಾತಿಗೆ  ಗಲಿಬಿಲಿ  ಉಂಟಾಗಿ  ಬೆರಳಿಗೆ ಗುರುತಿನ  ಶಾಯಿ  
ಲೇಪಿಸಲೇ  ಮರೆತು  ಹೋಯಿತು.

ಪುತ್ತೂರು  ವಿದಾನಸಭಾ  ಕ್ಷೇತ್ರದಲ್ಲಿ  ಒಕ್ಕೆತ್ತೂರು  ಕೇಂದ್ರ  ಕ್ರಮಾಂಕ  ಒಂದು.  
ಈ  ಕಡತದಲ್ಲಿ  ದಾಖಲಾಗಿರುವ  ಮತವನ್ನು  ಮೊತ್ತ  ಮೊದಲು  ಲೆಕ್ಕಕ್ಕೆ  
ತೆಗೆದುಕೊಳ್ಳುವ  ಕಾರಣ  ಪ್ರಾಯುಷ:   ಎಲ್ಲ  ಅಬ್ಯರ್ಥಿಗಳಿಗೆ  ವಿರೋದವಾಗುವ  
ನನ್ನ  ಮತ  ಮೊದಲು  ದಾಖಲಾಗುತ್ತದೆ.  ಎಣಿಕೆ  ಕೇಂದ್ರದಲ್ಲಿ  ಕುಳಿತ     ಎಲ್ಲರೂ  
ಈ  ವ್ಯಕ್ತಿಯನ್ನು     ಅವಲಕ್ಷಣ  ಎಂದು  ಉಗಿಯಲೂ  ಬಹುದು.  

ಈ  ಮತಗಳನ್ನು  ಹೇಗೆ  ಲೆಕ್ಕಕ್ಕೆ  ತೆಗೆದುಕೊಳ್ಳುತ್ತಾರೆ  ಎನ್ನುವುದು  
ಇನ್ನೂ  ಅಸ್ಪಷ್ಟ.  ಶೇಕಡಾ  ೫೦ ಕ್ಕಿಂತ  ಹೆಚ್ಚು  ಬಂದರೆ  ಮರು ಚುನಾವಣೆ  ಅಥವಾ    
ಗೆದ್ದ  ಹಾಗೂ  ಸೋತ  ಅಬ್ಯರ್ಥಿಗಳ  ನಡುವಿನ  ವ್ಯತ್ಯಾಸಕ್ಕಿಂತ  ಹೆಚ್ಚು  
ಬಂದರೆ   ಮರುಚುನಾವಣೆ  ಎನ್ನುವ  ವಿಚಾರ  ಮುಂದೆ     ನ್ಯಾಯಾಲಯದ  
ಕಟ್ಟೆಯಲ್ಲಿ  ತೀರ್ಮಾನ  ಆಗಬೇಕಾಗಬಹುದು.  ಅಂತೂ  ಗೊಂದಲಕ್ಕೆ  ಖಂಡಿತಾ  ಅವಕಾಶ.  

ಈ  ರೀತಿ  ಮತದಾನ  ಮಾಡಿದರೆ    ನಮ್ಮ    ಮತ  ಗುಟ್ಟಾಗಿ  ಉಳಿಯದೆ   
ಸಾರ್ವಜನಿಕ  ತಿಳುವಳಿಕೆಗೆ  ಒಳಪಟ್ಟಿರುವುದು  ಒಂದು  ಋಣಾತ್ಮಕ  ವಿಚಾರ.  
ಇದನ್ನು  ಮತದಾನ  ಯಂತ್ರದಲ್ಲಿ  ಅಳವಡಿಸಬೇಕೆಂಬ  ಕೂಗು  ಸರಕಾರ  ಹಾಗೂ  
ಉನ್ನತ  ಕೋರ್ಟಿಗೆ  ಇನ್ನೂ  ತಲಪಿಲ್ಲ.   ಮುಂದಿನ  ಮತದಾನಕ್ಕೆ  ಅಳವಡಿಸಬಹುದೇನೊ ?






1 comment:

Dr.K.G.Bhat,M.B:B.S said...

at least anyone reading this my exercise this option in future.