Sunday, October 12, 2008

ಪವಾಡ ನಿರತ ಕ್ರೈಸ್ತ ಸಂತರೂ ದರ್ಮಗುರುಗಳೂ

ಅಲ್ಫಾನ್ಸೊಮ್ಮ ಅವರು ಅಂತೂ ಸಂತರಾಗಲಿದ್ದಾರೆ. ಸದ್ಯದಲ್ಲಿ ಲೋಕ ಸಭೆ ಚುನಾವಣೆ.  ಆಡಳಿತ  ನಡೆಸುತ್ತಿರುವ  ಕಾಂಗ್ರೇಸ್  ಪಕ್ಷದಿಂದ     ಕ್ರೈಸ್ತರ ಓಲೈಕೆ ವೇಗವರ್ದಿಸಲು    ಪ್ರಾರಂಬ.  ನಮ್ಮ ಜಾತ್ಯಾತೀತ ಸರಕಾರ ಅವರ ಹೆಸರಿನಲ್ಲೊಂದು ನಾಣ್ಯ ಬಿಡುಗಡೆ ಮಾಡುವ ಆಶ್ವಾಸನೆ. ಲೋಕಸಭೆ ಚುನಾವಣೆ ಅನಂತರದ ಬಿಡುಗಡೆ ನಿರ್ದಾರಿತ ದಿನ ಆಶ್ವಾಸನೆ   ಕೊಟ್ಟ   ಚಿದಂಬರಂ ಅದಿಕಾರದಲ್ಲಿರುವುದು ಸಂಶಯ.  ಅದೇನು  ಮುಖ್ಯ  ಅಲ್ಲ, ಬಿಡಿ. 

ಈಗ ಪತ್ರಿಕೆ ಬಿಡಿಸಿದರೆ ಅರುವತ್ತು ವರ್ಷ ಹಿಂದೆ ಸತ್ತ ಅಲ್ಫಾನ್ಸೊಮ್ಮನ ಸಂತ ಪದವಿಯದೇ ಕಥೆ. ಸಂತರೆನಿಸಬೇಕಾದರೆ ಪವಾಡ ನಡೆದಿರಬೇಕು. ಅದಕ್ಕೆ   ಪ್ರಾರ್ಥನೆ ಅನಂತರ ಅಂಗವಿಕಲ ಮಗು ನಡೆದಾಡಲು ಪ್ರಾರಂಬಿಸಿದ  ಘಟನೆ  ಮೂವತ್ತೈದು ವರ್ಷ ಹಿಂದೆ ನಡೆದಿದೆ ಎನ್ನಲಾದ ಒಂದು ಕಟ್ಟು ಕಥೆ ತಯಾರು. ಈ ಅಲ್ಫಾನ್ಸೊಮ್ಮ ಸತ್ತು ಇಪ್ಪತೈದು ವರ್ಷ ಕಳೆದ ನಂತರ ನಡೆಸಿದ ಪವಾಡ. ನಿಜಕ್ಕೂ ಅದ್ಬುತ.

ಈ   ಓಟದಲ್ಲಿ ಅಲ್ಫಾನ್ಸೊಮ್ಮ ಮೊದಲಿಗಳಾಗಿ ಇನ್ನೂ ಹಲವಾರು ಜನ  ಬಾರತದ  ಮೂಲದವರು   ಸಾಲಿನಲ್ಲಿದ್ದಾರಂತೆ.  ಪವಾಡಗಳ ಪಟ್ಟಿ ಭಲೇ ಮಜವಾಗಿದೆ. ಪಾದ್ರಿಯ ಗೋರಿಯಲ್ಲಿ ಪ್ರಾರ್ಥಿಸಿದ  ವ್ಯಕ್ತಿಯೊಬ್ಬನ   ಗಿಡ್ಡವಾಗಿದ್ದ ಎಡ ಕಾಲು ಬಲ ಕಾಲಿಗೆ ಸಮಾನವಾಗಿ ಬೆಳೆಯಿತಂತೆ. ತೆರೆಸಮ್ಮ ಒಂದು ರೋಗಿಯ ಕಾನ್ಸರ್ ನಿವಾರಿಸಿದ ಪ್ರತೀತಿ. ಆದರೆ ಒಮ್ಮೆ ತೆರೆಸಮ್ಮ ಇದ್ದ ವಿಮಾನ ಟಾಂಜಾನಿಯದಲ್ಲಿ    ಅಪಘಾತವಾಗಿ  ಸಹ ಪ್ರಯಾಣಿಕರಲ್ಲಿ   ಆರು ಜನ ಸತ್ತಿರುವುದು ಅವರು ಸಂತರಾಗುವುದಕ್ಕೆ ಬಾಧಕವಲ್ಲ.

ಮಂಗಳೂರಿನ ಹೆಸರಾಂತ ಕ್ರೈಸ್ತ ಅಸ್ಪತ್ರೆಯ ವೈದ್ಯರು ಇನ್ನು ಚಿಕಿತ್ಸೆ ನಿಶ್ಪ್ರಯೋಜಕವೆಂದು ಕಾನ್ಸರ್ ಪೀಡಿತ ಕ್ರೈಸ್ತ ಹೆಂಗಸನ್ನು ಸಾವನ್ನು ಕಾಯಲೆಂದು ಮನೆಗೆ ಕಳುಹಿಸಿದ್ದರು. ಕಾಸರಗೋಡಿನ  ತಜ್ನ   ವೈದ್ಯ ಡಾ. ಸತ್ಯಶಂಕರ್ ಅವರು ಕೊನೆ ಪ್ರಯತ್ನವೆಂದು ಗೋಮೂತ್ರ ಅರ್ಕ ಕೊಟ್ಟು ಕಾಯಿಲೆ ಗುಣಪಡಿಸಿದ ಸ್ಪಷ್ಟ ದಾಖಲೆಗಳಿವೆ. ಕ್ಷಮಿಸಿ. ಕ್ರೈಸ್ತರೇತರ ಪವಾಡ ಕ್ರೈಸ್ತ ಮತ ಒಪ್ಪುವುದಿಲ್ಲ.

ಇವೆಲ್ಲ ಬರೆಯಲು ಕಾರಣ ಇತ್ತೀಚೆಗೆ ಮಂಗಳೂರಿನ ಸುತ್ತ ಮುತ್ತ ಕೋಮು ಗಲಭೆ. ಯಾರು ಯಾರೋ ಬಂದರು.  ಬೆಂಗಳೂರಿನಿಂದ  ಬಂದರು,  ದೆಹಲಿಯಿಂದಲೂ ಬಂದರು.    ಛೇ ಛೇ ಎಂದರು. ಪತ್ರಿಕಾಗೋಷ್ಟಿ ನಡೆಸಿದರು. ಟಿವಿ ಕೆಮರಕ್ಕೂ ಮುಖ ಒಡ್ಡಿದರು. ಕ್ರಿಯೆಯನ್ನು  ಸಂಪೂರ್ಣ  ನಿರ್ಲಕ್ಷಿಸಿ ಪ್ರತಿಕ್ರಿಯೆ ಮೇಲೆ ಹೆಚ್ಚಿನ ಗಮನ ಹರಿಸಲಾಯಿತು.  ರೋಮಿನಲ್ಲೂ,   ಅಮೇರಿಕದಲ್ಲೂ  ಪ್ರತಿದ್ವನಿ  ಕೇಳಿಸಿತು. 


ತೆರೆಮರೆ ಅವಲೋಕಿಸುವುದಾದರೆ ಕ್ರೈಸ್ತ ದರ್ಮಗುರುಗಳ ನಿಷ್ಕ್ರೀಯತೆಯಿಂದಾಗಿ   ಪರೀಸ್ಥಿತಿ ಅಷ್ಟು ಗಂಬೀರವಾಯಿತು. ಅನಾವಶ್ಯಕ ಹುಲಿ ಬಂತು ಹುಲಿ ಎಂದು ಘಂಟೆ ಬಾರಿಸಿದರು.  ಜನ ಸೇರಿಸಿದ ಸಂದರ್ಬದಲ್ಲಿ  ಇವರು   ಹೊಣೆಗಾರಿಕೆಯಿಂದ ವರ್ತಿಸಲಿಲ್ಲ.   ಸಮಾಜಬಾಂದವರಿಗೆ ಸತ್ಯಸಂಗತಿ ತಿಳಿಯಪಡಿಸಿ ಜವಾಬ್ದಾರಿಯಿಂದ ವರ್ತಿಸುತ್ತಿದ್ದರೆ   ಮಂಗಳೂರಿನಲ್ಲಿ ಗಲಭೆ ನಡೆಯುತ್ತಲೇ ಇರಲಿಲ್ಲ. ಇದೊಂದು ಕ್ರೈಸ್ತ ರಾಜಕಾರಣ ಪ್ರಾಯೋಜಿತ ನಾಟಕ ಎಂದರೂ ಸೈ.

ನ್ಯೂ ಯೋರ್ಕ್ ನಲ್ಲಿ ಎರಡು ಕಟ್ಟಡಗಳಿಗೆ ವಿಮಾನ ಡಿಕ್ಕಿ ಹೊಡೆದ ನಂತರವೂ   ಅಲ್ಲಿನ  ದೊರೆ   ಬುಷ್ ಬಾಲವಾಡಿ ಮಕ್ಕಳಿಗೆ ಹೇಳುತ್ತಿದ್ದ ಕಥೆಯನ್ನು ಮುಂದುವರಿಸಿದಂತಿತ್ತು ಇವರ ವರ್ತನೆ.

ಹಿಂದೆ ನಮ್ಮ ಪುಡಿ ಕಾಂಗ್ರೇಸಿಗರು ಚುನಾವಣೆ ಗೆಲ್ಲಲು ಪ್ರತಿ ಸಲವೂ ಕೋಮು ಗಲಭೆಯಾಗಿ ಕೆಲವು ಬ್ಯಾರಿಗಳಾದರೂ ಸಾಯಬೇಕು  ಪೆಟ್ಟು   ತಿನ್ನಬೇಕು   ಎನ್ನುತ್ತಿದ್ದರು.   ಈಗ  ಅವರ  ವರ್ತನೆ   ಪೊರ್ಬುಗಳ     ಎತ್ತಿಕಟ್ಟುವಂತಿದೆ. ಈ  ರಾಜಕೀಯ   ಆಟವನ್ನು  ಕ್ರೈಸ್ತ ಸಮುದಾಯ  ಪ್ರತಿಭಟಿಸುವ ಬದಲು ಜತೆಯಲ್ಲಿ ಹೆಜ್ಜೆ ಹಾಕಿದೆ.   ಇದು  ಈ   ಪರಿಸರದಲ್ಲಿಯೇ  ವಾಸಿಸುವ   ಸಾಮಾನ್ಯ ಹಿಂದುಗಳಿಗೆ ನೋವು  ಮುಜುಗರ    ಉಂಟುಮಾಡುವುದೆಂದು ಅವರು ಅರಿಯಬೇಕಾಗಿತ್ತು.  .

ಭಾರತವು     ಕ್ರೈಸ್ತ     ಸಂತರು ನಡೆದಂತಹ ಪುಣ್ಯ ಬೂಮಿ.   ಮೇರಾ ಭಾರತ್ ಮಹಾನ್

1 comment:

Unknown said...

ಭಟ್ರೆ,

ಸತ್ಯದ ತಲೆಯಮೇಲೆ ಹೊಡೆದಂತಹ ಲೇಖನ. ಹಿಂದೂ ದೇಶದಲ್ಲಿ ಹಿಂದೂಗಳ ಭಾವನೆಗೆ ಬೆಲೆ ಇಲ್ಲದಂತಾಗಿದೆ. ಸೋನಿಯಾ ಮೇಡಂ ಅಳ್ತಾಳೆ ಅಂತ ಮನಮೋಹನ ಸಿಂಗೂ ಕ್ರೈಸ್ತರ ಬಗ್ಗೆ ಕಣ್ಣೀರು ಇಡಲು ಶುರು ಮಾಡಿದ್ದಾನೆ.
'ಆ ದೇವರ ಕೈಯಲ್ಲೂ ಆಗದು ನಮ್ಮನ್ನು ಬೆಂಬಲಿಸಲು"