Sunday, November 16, 2008

ಜಿಹಾದಿಗಳ ಕೂಟಕ್ಕೆ ಹೆಂಗಸರು

ನಿನ್ನೆಯ ಕನ್ನಡ ಪ್ರಭ ಏಳನೆಯ ಪುಟದ ಸುದ್ದಿ ಓದುವಾಗ ನಿಜಕ್ಕೂ ಗಾಬರಿಯಾಗುತ್ತದೆ. ಬಯೋತ್ಪಾದನೆ ಎಲ್ಲೆಡೆ ವ್ಯಾಪಿಸಿ ಈಗ ನಮ್ಮ ಹಿತ್ತಿಲಿಗೂ ತಲಪಿದೆ. ಅದೊಂದು ಮೆದುಳನ್ನು ಕಿತ್ತು ಹಾಕಿ ಮನುಷ್ಯರನ್ನು ವಿವೇಚನೆ ಇಲ್ಲದ ಯಂತ್ರಮಾನವರನ್ನಾಗಿ ಮಾಡುವ ಏಕಮುಖ ದಾರಿ.  ಜಿಹಾದಿಗಳಿಗಾಗಿ ನಮ್ಮ ಆಸುಪಾಸಿನಲ್ಲಿ ಈಗಾಗಲೇ ಹುಡುಗರನ್ನು ಸೇರಿಸಿಕೊಂಡು ತರಬೇತಿಗೆ ಕಳುಹಿಸಿದ್ದು ಹಳೇಯ ಸುದ್ದಿ. ಈಗ ಹೆಂಗಸರನ್ನೂ ವಿದ್ವಂಸಕ ಕೃತ್ಯ ನಡೆಸಲು ತರಬೇತಿ ಕೊಡುವುದು ಇನ್ನೂ ಹೆಚ್ಚು ಗಂಬೀರ ವಿಚಾರ.


ಅಮೇರಿಕದಲ್ಲಿ ಎಲ್ಲರೂ ತಮ್ಮ ಸರಹದ್ದಿನಲ್ಲಿ ಕಣ್ಣಿಡುವ ವ್ಯವಸ್ಥೆಯಿರುತ್ತದೆ. ಅಪರಿಚಿತ ವ್ಯಕ್ತಿ ಸಂಶಯಾಸ್ಪದ ವರ್ತನೆ ಕಂಡರೆ ತಕ್ಷಣ ಪೋಲೀಸರ ಗಮನಕ್ಕೆ ತರುತ್ತಾರೆ. ಎಲ್ಲರೂ ತಮ್ಮ ಬಡಾವಣೆ ರಕ್ಷಣಾ ಕಾರ್ಯದಲ್ಲಿ ಪಾಲುದಾರರೇ. ಜತೆಯಲ್ಲಿ ಈ ಬಡಾವಣೆಯಲ್ಲಿ neighborhood watch ಉಂಟೆನ್ನುವ ಫಲಕಗಳ ನೋಡಿದಾಗ ಜನ ತನ್ನ ಗಮನಿಸಿದರೆ ಎಂದು ಅಪರಾದಿಯನ್ನು ಗಲಿಬಿಲಿಗೊಳಿಸುತ್ತವೆ. ಆದರೂ ನಾಳೆ ಬಾಂಬು ಹಾಕುವವನನ್ನು ಇಂದು ಅಪರಾಧಿಯೆಂದು ಪರಿಗಣಿಸುವಂತಿಲ್ಲ . ಯುರೋಪಿನಲ್ಲಿ ಹುಡುಗನೊಬ್ಬ ಅಸ್ತ್ರಗಳೊಂದಿಗೆ ತನ್ನ ಚಿತ್ರ ಅಂತರ್ಜಾಲದಲ್ಲಿ ಹಾಕಿಕೊಂಡ ವಿಚಾರ ಅಕಸ್ಮಾತಾಗಿ ಪೋಲೀಸರ ಗಮನಕ್ಕೆ ಬಂದು ಅವರು ಅವನನ್ನು ಕರೆಸಿ ತನಿಖೆ ಮಾಡಿದರು. ಮರು ದಿನ ಆ ಹುಡುಗ ಹತ್ತು ಸಹಪಾಠಿಗಳ ಕೊಂದು ಆತ್ಮಹತ್ಯೆ ಮಾಡಿಕೊಂಡ.

ಪವಿತ್ರ ಗ್ರಂಥಗಳಲ್ಲಿ ಬರೆದಿರುದಕ್ಕೂ ಅವರ ಆಚರಣೆಗೂ ಯಾವುದೇ ಹೋಲಿಕೆ ಇರುವುದಿಲ್ಲ. ತಾವು ಮಹಾನ್ ಸಾಹಸಿ ಎನ್ನುವ ಭ್ರಮೆಗೆ ಒಳಗಾಗಿರುವ ಇವರ ನಂಬಿಕೆ ಪ್ರಕಾರ ಆತ್ಮಾಹುತಿ ಮಾಡಿಕೊಂಡ ಗಂಡಸರಿಗೆ ಸ್ವರ್ಗದಲ್ಲಿ ದೇವರು ಇವರ ಸೇವೆಗಾಗಿ ಒಬ್ಬೊಬ್ಬರಿಗೂ ಎಪ್ಪತ್ತೆರಡು ಕನ್ಯೆಯರ ಒದಗಿಸುತ್ತಾರೆ ಎನ್ನುವ ನಂಬಿಕೆ. ಈ  ಗಂಡಸರಿಗೆ ಎಪ್ಪತ್ತೆರಡು ಕುಮಾರಿಯರೊಂದಿಗೆ ಶಾಶ್ವತವಾಗಿ ವಿಹರಿಸಲು ಸಿಗುತ್ತಾರೆ ಎನ್ನುವ ಜಿಹಾದಿ ಕರಪತ್ರಗಳ ಓದಿದ ಹೆಣ್ಣು ಮಾನವ ಬಾಂಬರ್ ಮೌಲವಿಯವರಲ್ಲಿ ಕೇಳುತ್ತಾಳೆ - ಆಚೆ ಲೋಕದಲ್ಲಿ ನನ್ನ ಸೇವೆಗೆ ಎಪ್ಪತ್ತೆರಡು  ಕುಮಾರರು ಸಿಗುವರೋ. ಪ್ರಶ್ನೆ ಉಚಿತವಾದುದು. ಅನಿರೀಕ್ಷಿತ ಪ್ರಶ್ನೆಗೆ ಬಿನ್ ಲಾಡನ್ ತತ್ತರಿಸಿದನಂತೆ.


ಮುಸ್ಲಿಂ ಸಮಾಜ ಸ್ವಲ್ಪ ಎಚ್ಚರಗೊಡಿರುವುದು ಸ್ವಾಗತಾರ್ಹ. ಒಮ್ಮೆ ಸೃಷ್ಟಿಯಾದ ದರ್ಮಾಂಧ ತನಗೆ ಕರೆ ಬರುವ ವರೆಗೆ ಮಾಮೂಲಿ ಜೀವನ ನಡೆಸುತ್ತಾನೆ. ಸಮಾಜದವರಿಗಲ್ಲ ಸ್ವಂತ ಮನೆಯವರಿಗೆ ಸಹಾ ಈ ಸ್ಪೋಟಿಸಲು ಸಿದ್ದವಾದ ಬಾಂಬು ಗುರುತಿಸುವುದು  ಅಸಾದ್ಯ. ಸಹಚರರು ಸಿಕ್ಕಿ ಬಿದ್ದಾಗ ಮಾತ್ರ ಸುಳಿವು ಸಮಾಜಕ್ಕೆ ಪೋಲೀಸರಿಗೆ ದೊರಕುವುದು. . ನಮ್ಮ ರಾಜಕಾರಣಿಗಳು ಬುದ್ದಿ ಜೀವಿಗಳು  ಮಾನವ ಹಕ್ಕು ಕಾರ್ಯಕರ್ತರು    ಅ   ಸಮಾಜವನ್ನು    ಸರಿದಾರಿಯಲ್ಲಿ   ಸಾಗಲು ಬಿಡಲಾರರು ಅನ್ನಿಸುತ್ತದೆ.   ಸಮಾಜ ಜಾಗ್ರತಾವಸ್ಥೆಯಲ್ಲಿ ಇದ್ದರೆ ಕೆಲವು ಸಮಸ್ಯೆಗಳ ಪರಿಹಾರ ಸಿಗಬಹುದೇನೊ ?

ನಮ್ಮ   ಬುದ್ದಿಜೀವಿಗಳ ಬಗೆಗೆ   ರವಿಯವರ http://kannadathinktank.blogspot.com/     ದಲ್ಲಿರುವ ಅಣಕ ನೆನಪಾಗುತ್ತಿದೆ. ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

No comments: