Tuesday, October 16, 2012

ಜಗತ್ತನ್ನು ಉಳಿಸಲು ದೇವರು ಅವತರಿಸುತ್ತಾನೆ …….



ದೇವರು  ಆರು ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿದ. ಇದು  ಅಮೇರಿಕ  ಎಂಬ  ದೇಶದ  ಹಲವು  ರಾಜ್ಯಗಳಲ್ಲಿ  ಪುಟ್ಟ   ಮಕ್ಕಳು  ಶಾಲೆಯಲ್ಲಿ    ಓದುವ   ಪಾಠ.    ಅನಂತರ  …  ಕ್ಷಮಿಸಿ ಇಲ್ಲಿ ಸ್ವಲ್ಪ   ಗೊಂದಲವಿದೆ.     ಗಿನಿಸಿಸ್ ಒಂದರ ಪ್ರಕಾರ  ಗಿಡ  ಮರಗಳ ಪ್ರಾಣಿಗಳ  ಅನಂತರ  ಆಡಮ್ ಹಾಗೂ   ಇವ್  ಇವರನ್ನು ಜತೆಯಾಗಿ ಸೃಷ್ಟಿಸಿದ.

  

ಆದರೆ,  ಗಿನಿಸಿಸ್  ಎರಡರ  ಪ್ರಕಾರ  ಮೊದಲು  ಆಡಮ್ ನಂತರ  ಗಿಡಮರಗಳು ಪ್ರಾಣಿಗಳ     ಸೃಷ್ಟಿಯಾದ  ನಂತರ  ಆಡಮನ   ಪಕ್ಕೆಲುಬುವಿನಿಂದ   ಅವನಿಗೊಂದು  ಜತೆಗಾರ್ತಿ ಇವ್ ಳನ್ನು   ಕೊಟ್ಟ.    



ಒಟ್ಟಿನಲ್ಲಿ ದೇವರು   ಆಡಮ್  ಮತ್ತು ಇವ್  ಅವರನ್ನು  ಸೃಷ್ಟಿಸಿದ  ಅನ್ನುವುದಕ್ಕೆ  ಯಾವುದೇ  ಸಂಶಯವಿಲ್ಲ.   ಅಮೇರಿಕದಲ್ಲಿ    ಪುಟ್ಟ  ಮಕ್ಕಳ   ವಿದ್ಯಾಬ್ಯಾಸ  ಈ ರೀತಿ  ಸಾಗಲು   ಅಲ್ಲಿನ  ಪ್ರಮುಖ    ಪಕ್ಷವು  ಡಾರ್ವಿನನ  ವಿಕಾಸವಾದವನ್ನು  ಸಂಪೂರ್ಣ  ಅಲ್ಲಗಳೆದು  ಬೈಬಲ್ ವಾದವನ್ನು  ಪ್ರತಿಪಾದಿಸುತ್ತದೆ.

ಅವರು  ಅಲ್ಲಿನ  ಮಕ್ಕಳಿಗೆ ಏನು ಬೇಕಾದರೂ  ಕಲಿಸಲಿ ಎಂದು ನಾವು  ಪೂರ್ತಿಯಾಗಿ     ಬಿಟ್ಟುಬಿಡುವಂತಿಲ್ಲ. ಯಾಕೆಂದರೆ   ನವೆಂಬರ್   ಮೊದಲ  ವಾರ   ಅಮೇರಿಕದಲ್ಲಿ  ಅಧ್ಯಕ್ಷರ   ಚುನಾವಣೆ  ನಡೆಯಲಿದೆ.  ಈ ಚುನಾವಣೆ ಫಲಿತಾಂಶ   ಮುಂದಿನ ದಿನಗಳಲ್ಲಿ  ಜಾಗತಿಕ   ಪರಿಸರ  ದ್ವಂಸದ    ಬಗೆಗೆ  ನಿರ್ಣಾಯಕ  ತಿರುವು ಕೊಡಲಿದೆ. ಯಾಕೆಂದರೆ  ಅಲ್ಲಿನ    ಒಂದು  ಪಕ್ಷವು  ಮಾನವನ  ಚಟುವಟಿಕೆಗಳಿಂದಾಗಿ    ಭೂಮಿ    ಉಷ್ಣವಾಗುವುದನ್ನೂ  ಅಲ್ಲಗಳೆಯುತ್ತದೆ.   ಮತದಾರರಲ್ಲಿ   ಇನ್ನೇನು  ಅವತರಿಸಲಿರುವ  ಆ  ಸರ್ವಶಕ್ತ  ದೇವನು  ಎಲ್ಲವನ್ನೂ  ಸರಿಪಡಿಸುತ್ತಾನೆ  ಎನ್ನುವ   ಭ್ರಮೆಯನ್ನುಂಟು   ಮಾಡುತ್ತಾರೆ  ಈ  ಪಕ್ಷದವರು.   ನನ್ನ  ತಕರಾರು ಇರುವುದು  ದಾರ್ಮಿಕ   ಕಾರಣವಲ್ಲ,  ನಾವಿರುವ ಈ   ಜಗತ್ತಿನ  ಬಗೆಗೆ   ಪರಿಸರ ಕಾಳಜಿ    ಅಷ್ಟೇ.  ಆದರೆ    ಈಗ   ಒಬಾಮನೇ    ಗೆದ್ದರೂ ಸುಖವಿಲ್ಲ.    ಯಾಕೆಂದರೆ ಶಾಸನ  ಸಭೆಗಳಲ್ಲಿ ಅವನ  ಪಕ್ಷಕ್ಕೆ  ಬಹುಮತವಿಲ್ಲ.  ಹಾಗೆ ಈ  ವಿತಂಡವಾದಿಗಳು  ಅವನ  ಪ್ರತಿ ಹೆಜ್ಜೆಗೂ  ಕಿರಿಕಿರಿ  ಉಂಟುಮಾಡುತ್ತಿದ್ದಾರೆ,  ಮುಂದೆಯೂ  ಮಾಡುತ್ತಾರೆ.    


ಅಮೇರಿಕದಲ್ಲೊಂದು  ಪ್ರಬಲ ಪಕ್ಷ – ಆನೆ ಪಕ್ಷ.  ಇವರೆಲ್ಲ  ದರ್ಮಬೀರುಗಳು.    ಈ  ಆನೆ ಪಕ್ಷದ   ರಾಜಕಾರಣಿಗಳ  ವರ್ತನೆ ಕೆಲವೊಮ್ಮೆ  ಹಾಸ್ಯಾಸ್ಪದವೂ  ಆಗಿರುವ  ಕಾರಣ  ಮೋಜು  ಅನಿಸುವುದಾದರೂ  ಅವರ ಕೈಯಲ್ಲಿ  ಅಧಿಕಾರ  ಅನ್ನುವಾಗ  ಬೀತಿ ಉಂಟಾಗುತ್ತದೆ.  ಡಾರ್ವಿನನ  ವಿಕಾಸವಾದದಿಂದ ಹಿಡಿದು   ಇಂದು  ವಿಜ್ಞಾನಿಗಳು  ಪ್ರಯೋಗದಿಂದ  ಖಚಿತಪಡಿಸುವ  ವಾತಾವರಣ  ಉಷ್ಣವಾಗುವುದರ ವರೆಗೆ ಎಲ್ಲವನ್ನೂ  ಅಲ್ಲಗಳೆಯುತ್ತಾರೆ.   ಮಾನವ ವಿಕಾಸ  ಬಗೆಗೆ    ಬೈಬಲ್‍ವಾದದಲ್ಲಿ   ಪಾಠ  ಮಾಡಬೇಕೆಂದು  ಶಿಕ್ಷಕರ  ಮೇಲೆ  ಒತ್ತಡವಿದೆ.      ನಿರಪರಾಧಿಗಳಿಗೆ      ಅತಿ ಹೆಚ್ಚು  ಮರಣದಂಡನೆ  ವಿದಿಸುವ  ರಾಜ್ಯ    ಸರಕಾರಗಳೆಲ್ಲ    ಈ  ಆನೆ ಪಕ್ಷದವು. ಈ   ಪಕ್ಷದ    ಬುಶ್  ಇತ್ಯಾದಿ    ತೈಲ ದೊರೆಗಳಿಗೆ     ಉತ್ತರ ದ್ರುವದ  ಹಿಮಕವಚ ಕರಗಿದರೆ   ಅಲ್ಲೂ  ತೈಲಬಾವಿ  ಕೊರೆಯುವ  ದೂರಾಲೋಚನೆ. 


ಏರುತ್ತಿರುವ  ಸಮುದ್ರ ಮಟ್ಟದಿಂದಾಗಿ  ಈಗಾಗಲೇ   ಅಮೇರಿಕದ  ಪೂರ್ವ ಕರಾವಳಿಯ  ಇತ್ತೀಚಿನ  ವರೆಗೆ     ೩೫೦ ಜನರ ವಾಸ್ತವ್ಯವಿದ್ದ   ಹಾಲೆಂಡ್ ಹೆಸರಿನ    ದ್ವೀಪವೊಂದು  ಮುಳುಗಿದರೂ  ಇವರು ಕಣ್ಮುಚ್ಚಿ ಕುಳಿತುಕೊಳ್ಳಲು  ತಯಾರು. ಮೇಲಿರುವ  ಚಿತ್ರದಲ್ಲಿರುವ   ಕಟ್ಟಡ  ಆ  ದ್ವೀಪದ  ಕೊನೆಯ  ಕಟ್ಟಡ.    ಈ  ವಿಚಾರದಲ್ಲಿ    ಕಿತಾಪತಿ  ಮಾಡದೆ   ಸುಮ್ಮನಿರಲು  ಮಾದ್ಯಮಗಳಿಗೆ ಹಾಗೂ  ವಿಜ್ಞಾನಿಗಳಿಗೆ  ಒತ್ತಡವಿದೆ.     

 ಅಂದು  ಈ  ಪಕ್ಷದ    ಜಾರ್ಜ್    ಬುಶ್  ಇರಾಕನ್ನು   ದಂಡೆತ್ತಿ  ಹೋದದ್ದು  ತೈಲ ಬಾವಿ  ವಶಪಡಿಸಿಕೊಳ್ಳುವುದಕ್ಕೆ.  ಆಗ  ಜನಬೆಂಬಲ  ದೊರಕಿಸಿಕೊಳ್ಳಲು   ಸದ್ದಾಮನಲ್ಲಿ  ಅಪಾಯಕಾರಿ  ಶಸ್ತ್ರಾಸ್ತ್ರಗಳಿವೆ  ಎಂದು    ಎಷ್ಟು ಅಪಪ್ರಚಾರ ಮಾಡಿದ್ದಾರೆಂದರೆ   ಇಂದಿಗೂ,   ಒಂಬತ್ತು  ವರ್ಷ    ಕಳೆದ  ನಂತರವೂ  ಆನೆ ಪಕ್ಷದ  ಅನುಯಾಯಿಗಳಿಗೆ  ಅದು ಸುಳ್ಳೆಂದು  ಅರಿವಾಗಲೇ  ಇಲ್ಲ.     ಎರಡೇ  ಪಕ್ಷಗಳು  ಅಂದ ನಂತರ  ಸಮಪಾಲು   ಜನ  ಇವರ   ಬೆಂಬಲಿಗರೆಂದು  ಹೇಳಬಹುದು.  ಮುಂದುವರಿಸಿ  ಹೇಳುವುದಾದರೆ   ಅರೆವಾಶಿ  ಅಮೇರಿಕನರು  ಅರೆ ಹುಚ್ಚರು  ಅನ್ನಲೂ  ಬಹುದು.  J


 ಇಷ್ಟರ  ವರೆಗೆ ನಮಗೆ ಇಸ್ಲಾಮಿಕ್  ಮೂಲಬೂತವಾದ  ಮಾತ್ರ  ಪರಿಚಿತವಾಗಿತ್ತು.  ನಿಜಕ್ಕೂ  ನೋಡಿದರೆ  ಈ   ಕ್ರೈಸ್ತ  ಭಯೋತ್ಪಾದನೆ  ಹೆಚ್ಚು  ಅಪಾಯಕಾರಿ.    ಇದರ   ಗಂಬೀರ  ಸಮಸ್ಯೆ  ನಮಗೆ  ಅರಿವಾಗದೆ ಇರುವುದಕ್ಕೆ  ಕಾರಣ  -  ಮಾದ್ಯಮಗಳೆಲ್ಲ  ಅವರ   ನಿಯಂತ್ರಣದಲ್ಲಿ  ಇರುವುದು.  ದೇವರು ಬಂದು  ನಮ್ಮನ್ನೆಲ್ಲ  ಕಾಪಾಡುತ್ತಾನೆ  ಎನ್ನುವ  ಮೂರ್ಖನ  ಕೈಯ್ಯಲ್ಲಿ    ಜಗತ್ತಿನ  ಅತಿ ದೊಡ್ಡ  ಅಣುಬಾಂಬುಗಳ ರಾಶಿಯ  ನಿಯಂತ್ರಣವಿದ್ದರೆ    ??        



eÛeé% …ßÎé @ÈÚƒ¾ÚßÆÇ @ÈæßÂOÚ¥ÚÆÇ«Ú PÃÌ`¾Úß«é VÚßM®Úâ´VÚ×Úß }ÚÈÚß½ ®ÛÃ…ÄÀÈÚ«Úß„ Ôæ_`ÒOæàMsÚÈÚâ´.   eÛ}ÚÀ~Þ}Ú ÑÚÈÚáÛdÈÚ«Úß„ «æÄOÚ_`ÑÚÄß ÑÚÈÚßÁÚ «ÚsæÑÚ†æÞOÚß ÈÚß}Úß¡ @ÈæßÂOÚÈÚ«Úß„ ¥æÞÈÛƒ®Ú}ÚÀ¥Ú ÑÛÈÚáÛÃdÀÈÚ«Û„W ®ÚÂÈÚ~%ÑÚÄß ÑÚMɨ۫ڥÚÆÇ …¥ÚÅÛÈÚzæ }ÚÁÚ†æÞOæM¥Úß …ÕÁÚMVÚÈÛW OÚÁæ ¬ÞsÚÄß @ÈÚâ´ ®ÚÃ…Ä ÈæÞ¦OæVÚ×ÛW¥Ú§ÈÚâ´. 

C Õ«æ„Åæ¾ÚßÆÇ «ÛÈÚâ´ CÈÚÁæVæ @eÛk}ÚÁÛW¥Ú§ Éßmé ÁæàÞÉß„ ÈÚß}Úß¡ B«Úà„ d«Ú¯Ã¾ÚßÁÛW DئÁÚßÈÚ …ÁÛOé J†ÛÈÚß @ÈÚÁÚ «ÚsÚßÈÚy ÔæVÚÅæzæ¾Úß ÑÚ°¨æ%¾Úß«Úß„ VÚÈÚ߬ÑÚ†æÞOÚß. ÁæàÞÉß„ @ÈÚÁÚß ÈæàÞÈÚß%«é ^Ú^é%«Ú @«Úß¾ÚáÛ¿ß. GÄÇ @ÈæßÂOÚ«Ú„ÁÚß C «æÄ¥Ú ¥æÞÈÚÁÚß- @M¥ÚÁæ ¾æßÞÑÚßPÃÑÚ¡«Ú OÛ«Úà«Ú«Úß„ ®ÛÆÑÚ†æÞOÚß GM…ߥÚß ÈæàÞÈÚß%«é ^Ú^é%«Ú ®ÚÃ~®Û¥Ú«æ. ÉßÑæàÓÞ¾Úß eÛÀOÚÓ«é Òn¾ÚßÆÇ ¾æßÞÑÚßPÃÑÚ¡ ÈÚß}æ¡ d¬ÑÚß}Û¡«æ GM…ߥÚß ÈæàÞÈÚß%«Ú„ÁÚ «ÚM¸Oæ. ^Ú^é%Væ Ôæ^Úß` Ôæ^Úß` ÑÚMSæÀ¾Úß ÑÚ¥ÚÑÚÀÁÚß †æÞOÚß. ÔÛVÛW ÈÚߥÚßÈæ¾ÚáÛW d«ÚÑÚMSæÀ¾Úß«Úß„ Ôæ_`ÑÚßÈÚâ´¥Úß @ÈÚÁÚ ÑÚM®ÚÃ¥Û¾Úß. Éßmé ÁæàÞÉß„¾Úß }Û}Ú eÛeé% ÁæàÞÉß„ ÈÚßàÈÚÁÚß ®Ú~„¾ÚßÂM¥Ú 35 ÈÚßOÚQ×Ú«Úß„ ®Ús榥ڧÁÚß! ÈæàÞÈÚß%«Ú„ÁÚ C ¬ÄßɬM¥ÛW @…ÃÔÛM ÆMOÚ«é 1862ÁÚÆÇ …ÔÚß®Ú~„}Ú‡ÈÚ«Úß„ ¬ÎæÞƒÒ¥ÚৠDMlß. 

ÈæàÞÈÚß%«Ú„ÁÚß ÈÚß}Úß¡ eÛeé% …ßÎé @ÈÚÁÚ"†Û«é% @Væç«é BÈÛMeæÆOÚÅéÓ' }ÚÈÚß½¥æÞ A¥Ú ÉËÚ‡ÈæãM¥Ú«Úß„ ÑÚäÏoÑÚßÈÚ OÚ«ÚÑÚß OÚMt¥Ú§ÁÚß. }ÛÈÚâ´ «ÚM¸¥Ú§«æ„Þ GÄÇÁÚà «ÚM…†æÞOÚß GM…ߥÚß @ÈÚÁÚ BÁÛ¥æ¾ÚáÛW}Úß¡. @ÈÚÁÚM}æ¾æßÞ ÑÚIJVÚ×Úß ÈÚß}Úß¡ Ñè¦ @ÁæÞ¸¾ÚáÛ¥Ú ÈÚÔÛ¸VÚ×Úà «Úsæ¥ÚßOæàMt¥Û§Áæ, B}ÚÁÚ ÈÚßßÒÇÈÚßÁÚß }ÚÈÚß½«æ„Þ @«ÚßÑÚÂÑÚ†æÞOÚß GM¥Úß …¾ÚßÑÚß}Û¡Áæ. JM¥æÞ JM¥Úß ÈÚß}Ú- @M¥ÚÁæ }ÚÈÚß½ ÈÚß}ÚÈæãM¥Ú«æ„Þ ÔæàM¦ÁÚßÈÚ ÉËÚ‡¥Ú ÑÚäÏo @ÈÚÁÚ VÚßÂ."PÃÌ`¾Úß«é Áæçmé' ÑÚMYÚl«æ¾Úßß ÔÚ}Úß¡ @MËÚVÚ×Ú ¥æçÈÛ«ÚßËÛÑÚ«ÚÈÚâ´ ÉËÚ‡¥Ú OÛ«Úà«ÛW ®ÚÂÈÚ~%}ÚÈÛVÚ†æÞOÚß GM¥Úß …¾ÚßÑÚß~¡¥Ú§Áæ, ÑÚIJVÚ×Úß ËÚÂÞ¾Úß}é ÉËÚ‡¥Ú OÛ«Úà«Úß AVÚ†æÞOÚß G«Úß„~¡¥Û§Áæ. BM¢Ú «ÛVÚÂOÚ}æVÚ×Ú ÈÚߨæ´À ÑÚMYÚÎÚ%ÈÚ«Úß„ }Ú¯°ÑÚ†æÞOÛ¥ÚÁæ ¥æÞÈÚÁæÞ ®ÚÈÛsÚ }æàÞÁÚ†æÞOÚÎæo. 

ಇವೆಲ್ಲ  ಯೋಚಿಸುವಾಗ ಸಚ್ಚಿದಾನಂದ  ಹೆಗ್ಡೆಯವರ   ಮಾತು  ಇಲ್ಲಿ  ಪ್ರಸ್ತುತವೆನಿಸುತ್ತದೆ.   ಅವರು ಬರೆಯುತ್ತಾರೆ -    ಪ್ರಕೃತಿಯೊಂದಿಗೆ   ಒಂದಾಗುವುದು ಮಾನವ    ದರ್ಮ.   ಪ್ರಕೃತಿಯನ್ನು ತುಳಿಯುವುದು ಅದರ್ಮ.  ಪ್ರಕೃತಿ ಇರುವುದು  ಮಾನವನಿಗಾಗಿ ಎಂಬ  ಸೆಮೆಟಿಕ್ ಸಿದ್ದಾಂತವನ್ನು ನಾವು ಕೈ ಬಿಟ್ಟು  ಭಾರತಿಯ  ಸಂಸ್ಕೃತಿಗೆ  ಮರಳಬೇಕು.  ಈಗ  ಇರುವುದು  ಅದೊಂದೆ  ಪರಿಹಾರ.



ತಡವಾಗಿ   ಸೇರ್ಪಡಿಸಿದ   ಸೂಚನೆ  :    ಅಶೋಕಣ್ಣನವರು ಹೇಳಿದಂತೆ,    ಕನ್ನಡ  ಪ್ರಭದ  ಅಕ್ಷರಗಳು  ಅಳವಡಿಸಿರದ  ಗಣಕಗಳಲ್ಲಿ  ಜೋರ್ಜ  ಅವರ  ಅಂಕಣ  ಓದಲು  ಸಾದ್ಯವಾಗುವುದಿಲ್ಲ.   ಸುಲಭ  ಪರಿಹಾರವೆಂದರೆ  ಫೋಂಟ್  ಹಂಗಿಲ್ಲದೆ  ಓದಲು   ಮೂಲ   ಕನ್ನಡ  ಪ್ರಭ  ಪತ್ರಿಕೆಯ  ಪುಟವನ್ನೇ  ತೆರೆಯಿರಿ    - http://www.kannadaprabha.com/pdf/14102012/10.pdf.   ಆ  ಲೇಖನದ  ಇಂಗ್ಲೀಶ್ ಮೂಲಪ್ರತಿಯನ್ನೇ  ಓದುವ  ಆಸಕ್ತಿ ಇದ್ದರೆ  -   http://tjsgeorge.blogspot.in/2012/10/as-religious-hardliners-gain-ground.html

1 comment:

ಅಶೋಕವರ್ಧನ said...

ಅಮೆರಿಕಾದ ಈ ಮುಖ ನಾನು ಯೋಚಿಸಿರಲೇ ಇಲ್ಲ. ಜಗತ್ತಿನ ಅಣ್ಣಾ ಇತ್ಯಾದಿ ಉಪದ್ವ್ಯಾಪಗಳು ಗೊತ್ತು. ಆದರೆ ಅವರೊಳಗೂ ಇಷ್ಟು ದೊಡ್ಡ ಮೌಢ್ಯವೂ ಉಂಟು, ಅವರು ಬಂದರೆ ಬರಿಯ ಅಣ್ಣಾ ಅಲ್ಲ, ಮಹಾ ಮೂರ್ಖನೂ ದಕ್ಕಿದಂತಾಗುತ್ತದೆ. ಅಲ್ಲೂ ನಮ್ಮ ದೇಶದ (ಅಥವಾ ಇಂದಿನ ಜಗತ್ತಿನಲ್ಲಿ ಎಲ್ಲಾ ಕಡೆಯೂ) ಅನಿವಾರ್ಯತೆ - ಇರುವ ಮೂರ್ಖರಲ್ಲಿ ಅಥವಾ ಅಯೋಗ್ಯರಲ್ಲಿ ಕಡಿಮೆ ಅಯೋಗ್ಯ ಯಾರು ಎಂದು ಆರಿಸುವ ಅನಿವಾರ್ಯತೆ ಬಂದಿರುವುದು ನಿಜಕ್ಕೂ ಜಗತ್ತಿಗೇ ಅಪಾಯದ ಸೂಚನೆ. ಲೇಖನದಲ್ಲಿ ಕನ್ನಡ ಪ್ರಭದ ಉದ್ಧರಣೆ ಓದಲು ದಕ್ಕುವುದಿಲ್ಲ (ಲಿಪಿಯ ತಂತ್ರಾಂಶ ದೋಷ)
-ಅಶೋಕವರ್ಧನ