Sunday, September 14, 2008

ಕೋಲ ಎಂಬ ಬಣ್ಣದ ನೀರು ನಮ್ಮಲ್ಲಿ ಹಾಲಿಗಿಂತಲೂ ಬಲು ದುಬಾರಿ

ಅಂತೂ ಇಂತೂ ಹಾಲಿಗೆ ಖರೀದಿ ದರ ಎರಡು ರೂಪಾಯಿ ಏರಿಕೆ. ನೂರು ದಿನ ಯಶಸ್ವಿ ಆಡಳಿತ ನಡೆಸಿದವರ ಕೊಡುಗೆ.  ಸರಕಾರದ  ಪರವಾಗಿ  ಮಾತನಾಡಲು  ಹಕ್ಕಿರುವ     ಶೋಭಕ್ಕನಿಂದಾದ   ಘೋಷಣೆ ಮೇಲ್ನೋಟಕ್ಕೆ ಅವರು ವೈಯುಕ್ತಿಕವಾಗಿ ಕೊಡುತ್ತಾರೊ ಎನ್ನುವ ಅನುಮಾನ. ಮನೆಯ ಹೆಂಗಸರ ಹೆಸರಿಗೆ ಬಾಂಕ್ ಖಾತೆ ಎನ್ನುವ ವಿನೂತನ ಬಳಸು ದಾರಿಯ ಪರಿಣಾಮ ಹೊಸತಾದ ಮರಕೋತಿ ಅಟದ ಪ್ರಾರಂಬ.  ರೇವಣ್ಣನವರ    ಹಾಲು ಮಹಾಮಂಡಲಿಗೆ ಬೆಲೆ ಏರಿಸುವ ಹಕ್ಕಿಲ್ಲವೆಂದು ಯೆಡ್ಯುರಪ್ಪನ ಗುಟುರು.    ಹೀಗೆಲ್ಲ    ಒಟ್ಟಿನಲ್ಲಿ ಗೊಂದಲಾಮಯವಾಗಿತ್ತು.   
                                                      
ನನ್ನ ಬ್ಲೋಗ್ ಬರಹ   ಅಮೇರಿಕದಲ್ಲಿ ಹಾಲು ಕುಡಿದ್ರಾ ಯೆಡ್ಯುರಪ್ಪ      ಸ್ವಲ್ಪ ಬದಲಾವಣೆ ಮಾಡಿ ಕನ್ನಡ ಪ್ರಭಕ್ಕೆ ಕಳುಹಿಸಿದ್ದೆ.    ಅದು ಗುರುವಾರ ೧೧ ಸೆಪ್ಟೆಂಬರ್ ಸಂಚಿಕೆಯಲ್ಲಿ ಚಿತ್ರ ಸಮೇತ ಪ್ರಕಟವಾಗಿದೆ.  ಅರ್ಥಪೂರ್ಣ  ವ್ಯಂಗ್ಯ ಚಿತ್ರ  ಬರೆದವರಿಗೂ  ಬರಹದ  ತಿರುಳು ಹೆಕ್ಕಿ  ಪ್ರಕಟಿಸಿದ  ಸಂಪಾದಕ ವರ್ಗಕ್ಕೂ  ನಾನು  ಕೃತಜ್ನ.    ಇಲ್ಲಿ  ಅಸ್ಪಷ್ಟವಾದರೆ  ಅದನ್ನು     http://www.kannadaprabha.com/pdf/1192008/6.pdf    ಪುಟದಲ್ಲಿ  ಓದಬಹುದು.   ಹಾಲಿನ  ಕ್ರಯದ  ಬಗೆಗೆ ಸರಿಯಾದ  ಮಾಹಿತಿ  ಸಿಕ್ಕ  ನಂತರ  ಈ   ಎರಡನೇಯ  ಬಾಗ  ಹಾಕುವುದೆಂದು  ವಿಳಂಬಿಸಿದೆ. 

  ಸ್ಥಳೀಯ  ಸಹಕಾರಿ  ಸಂಘದ  ಮೂಲಕವೇ  ಈ  ಎರಡು  ರೂಪಾಯಿ  ತಲಪಿಸುವುದೆಂದು  ಸರಕಾರದ   ತೀರ್ಮಾನವೆಂದು  ಇತ್ತೀಚಿನ  ಪತ್ರಿಕಾ  ವರದಿ.  ಬಾಂಕ್  ಖಾತೆಯ  ಕನಸಿಲ್ಲಿದ್ದ   ಮಹೀಳೆಯರಿಗೆಲ್ಲ   ಅಶಾಭಂಗ.    ಈ  ಕೊಡುಗೆಯ ಹಿಂದೆ  ತಾನಿರುವೆಂದು  ರೇವಣ್ಣ  ಬಿಂಬಿಸಿದರೆ  ಎಂದು  ಯೆಡ್ಯು  ಗುಮಾನಿ.  ಈಗ  ನಮ್ಮ   ಸಮಾಜದಲ್ಲಿ   ಎಲ್ಲವೂ  ರಾಜಕೀಯಮಯ.    ಸಹೋದರಿಯ  ಸಮಸ್ಯೆ  ಪರಿಹಾರದ  ಹೆಗ್ಗಳಿಕೆ  ಸದಾಶಿವನಿಗೆ  ಸಿಕ್ಕರೆ  ಎಂದು  ಹಿರಿಯಣ್ಣ   ಹುಳಿ ಹಿಂಡಿದ  ಉದಾಹರಣೆ ನಮ್ಮೂರಲ್ಲಿದೆ.    


ಪ್ರಜಾವಾಣಿಯ  ಚಿತ್ರಕಾರ  ಮಹಮದ್  ಅವರು  ಈ  ಸಮಸ್ಯೆಯ  ಅರ್ಥಪೂರ್ಣವಾಗಿ  ಚಿತ್ರಿಸಿದ್ದಾರೆ.     ಶಿಕಾರಿಪುರ  ಅಕ್ಕಿ  ಮಿಲ್ಲಿನ  ಅಳಿಯನಾದ  ಯೆಡ್ಯುಗೆ   ಪಶು ಆಹಾರದ  ಒಂದು ಪ್ರಮುಖ ಅಂಶವಾದ    ಅಕ್ಕಿ  ತೌಡಿನ  ಬೆಲೆ ಈಗ ಗೊತ್ತಿಲ್ಲವೋ  ಏನೊ.  ಒಟ್ಟಿನಲ್ಲಿ    ಇವರ ರಾಜಕೀಯ ಆಟದಲ್ಲಿ  ರೈತರು  ಪುಡಿಯಾಗಲಿದ್ದಾರೆ.

No comments: