Monday, December 08, 2008

ಪಾಕಿಸ್ತಾನದ ಅಂಕಣಕಾರ ಕೋವಸ್ ಜೀ


ಈಗ ಸುಮಾರು ಎರಡು ವರ್ಷಗಳಿಂದ ನಾನು ಭಾನುವಾರ ಬೆಳಗ್ಗೆ ಇ ಅಂಚೆ ಜತೆಗೆ ಮೊದಲು ಕ್ಲಿಕ್ಕಿಸುವ ಕೊಂಡಿ ಕರಾಚಿಯ ಡಾನ್ ಪತ್ರಿಕೆಯ ಕೋವಸ್ ಜೀ ಅವರ ಅಂಕಣ. ಇಳಿ ವಯಸ್ಸಿನಲ್ಲೂ ಅವರು ಕರಾಚಿಯ ಭೂಗಳ್ಳರ, ಅಧಿಕಾರಿಗಳ ಹಾಗೂ ಮುಲ್ಲಾಗಳ ಜತೆಗಿನ ಹೋರಾಟವನ್ನು ಅಂಕಣದಲ್ಲಿ ರಂಗುರಂಗಾಗಿ ವಿವರಿಸುತ್ತಾರೆ. ರಾಜಕಾರಣ, ವಾಣಿಜ್ಯ ಕಾನೂನು ವಿಚಾರಗಳ ಚೆನ್ನಾಗಿ ಮಂಡಿಸುತ್ತಾರೆ. ಆಂಗ್ಲ ಬಾಷಾ ಪ್ರಬುತ್ವ ಚೆನ್ನಾಗಿದೆ. ಪ್ರಾಯುಷ: ಪಾಕಿಸ್ತಾನದಲ್ಲೇ ಹೆಚ್ಚು ನಿರ್ಭೀತ ಅಂಕಣಕಾರ ಎಂದರೂ ಸರಿ

http://www.dawn.com/weekly/cowas/cowas.htm


ಈ ವಾರದ ಅಂಕಣದಲ್ಲಿ ಮುಂಬಯಿಯಲ್ಲಿ ಭಯೋತ್ಪಾದಕರು ಕಾರ್ಯನಿರತರಾಗಿದ್ದಾಗ ಯಾರೋ ಪೋಕರಿಗಳು ಪಾಕಿಸ್ಥಾನದ ಅದ್ಯಕ್ಷರಿಗೆ ಬಾರತದ ವಿದೇಶ ಮಂತ್ರಿ ಪ್ರಣವ್ ಮುಖರ್ಜಿ ಹೆಸರಿನಲ್ಲಿ ಪಾಕಿಸ್ಥಾನವನ್ನು ನೋಡಿಕೊಳ್ಳುತ್ತೇವೆ ಎಂದು ಫೋನಿಸಿದ್ದು ವಿವರಿಸಿದ್ದಾರೆ. ಜರ್ದಾರಿ ಬೆಸ್ತು ಬಿದ್ದು ಮಂತ್ರಿಗಳ ಮಿಲಿಟರಿ ಅದಿಕಾರಿಗಳನ್ನೆಲ್ಲ ಒಟ್ಟು ಸೇರಿಸಿ ಸೇನೆಯನ್ನು ಬಾರತದ ಗಡಿಗೆ ರವಾನಿಸುವ ಬಗೆಗೆ ಮಾತನಾಡಿದ್ದು ಎಲ್ಲವನ್ನೂ ಚೆನ್ನಾಗಿ ಬರೆದಿದ್ದಾರೆ.

ಕೊನೆಗೆ ಅಮೇರಿಕದ ರೈಸಮ್ಮ ಮಧ್ಯರಾತ್ರಿಯಲ್ಲಿ ಕಾಲ್ ಮಾಡಿ ಮಲಗಿದ್ದ ನಮ್ಮ ಮಂತ್ರಿ ಪ್ರಣವ್ ಮುಖರ್ಜಿಯವರನ್ನು ವಿಚಾರಿಸಿದಾಗ ಅವರು ಆ ರೀತಿ ಬೆದರಿಸಿಲ್ಲವಷ್ಟೆ ಅಲ್ಲ, ಅವರು ಜರ್ದಾರಿಗೆ ಫೋನ್ ಸಹ ಮಾಡಿಲ್ಲ ಎನ್ನುವುದು ತಿಳಿದುಬಂತು. ವಾರ ಕಳೆಯುವ ವರೆಗೆ ನಮ್ಮ ಮಾದ್ಯಮದವರಿಗೂ ಇದು ಯಾರದೋ ಕಿತಾಪತಿ ಎಂದು ಅರಿವು ಆಗಿರಲಿಲ್ಲ. ಅಂತೂ ಕೊನೆಗೆ ಎಲ್ಲರಿಗೂ ನಿರಾಳ.

ಕಳೆದ ಬಾರಿ ನಾಲ್ಕು ವರ್ಷ ಹಿಂದೆ ಮುಶಾರಫ್ ಬಂದಾಗ ಅವರ ತಂಡದಲ್ಲಿ ಒಬ್ಬ ವಯೋವೃದ್ದ ಪತ್ರಿಕಾ ಅಂಕಣಕಾರರಿದ್ದರು. ನಮ್ಮ ಪತ್ರಿಕೆಯಲ್ಲಿ ಕಾಣ ಸಿಕ್ಕಿದ ಅವರ ಸಂದರ್ಶನದಲ್ಲಿ ಅವರಾಡಿದ ಮಾತು ನನ್ನ ಗಮನ ಸೆಳೆದಿದ್ದವು. ಕೋವಸ್ ಜೀ  ಪಾರ್ಸಿ ಜನಾಂಗಕ್ಕೆ ಸೇರಿದ್ದು ಭುಟ್ಟೊ ರಾಷ್ಟ್ರೀಕರಣಗೊಳಿಸಿದ ಹಡಗು ಸಂಸ್ಥೆಯ ಯಜಮಾನರಾಗಿದ್ದರಂತೆ.  ಕೊನೆಗೆ ಗೂಗ್ಲಿಂಗ್ ಮಾಡಿ ಅವರ ಅಂಕಣ ಹುಡುಕಿ ಓದಲಾರಾಂಬಿಸಿದೆ.

ಒಂದು ಅಂಕಣದಲ್ಲಿ  ಇತಿಹಾಸದ  ಪುಟ  ತೆರೆದಿಟ್ಟಿದ್ದಾರೆ. .   ಮಾಜಿ ಮಿಲಿಟರಿ ಮುಖ್ಯಸ್ತನಾಗಿದ್ದ ಅಂದಿನ ಅಧ್ಯಕ್ಷರಿಗೆ ಇಡೀ ದೇಶದಲ್ಲಿ ಒಂದೇ ದಿನ ಹಬ್ಬಗಳ ಆಚರಿಸುವ ಆಲೋಚನೆ ಬಂತು. ಆದರೆ ಕೆಲವು ಮುಲ್ಲಾಗಳಿಗೆ ಅದು ಸಮ್ಮತಿ ಇರಲಿಲ್ಲ. ಚಂದ್ರ ಕಾಣಬೇಕಲ್ಲ ??. ಈ ಹಕ್ಕು ಬಿಟ್ಟು ಕೊಡಲು ಅವರು ತಯಾರಿರಲಿಲ್ಲ. ಹಾಗೆ ಒಂದು ಮುಖ್ಯ ಪಟ್ಟಣ, ಪೇಶಾವರ ಅಂತ ನನ್ನ ನೆನಪು – ಅಲ್ಲಿನ ಧರ್ಮ ಗುರುಗಳಿಗೆ ಚಂದ್ರನನ್ನು ತೋರಿಸುವ ಜವಾಬ್ದಾರಿಯನ್ನು ಅಲ್ಲಿನ ಮಿಲಿಟರಿ ಕಮಾಂಡರಿಗೆ ಅಧ್ಯಕ್ಷರು ವಹಿಸಿದರು. ಸೇನಾ ಶಿಬಿರದ  ಹೊರಗಿನ  ಮೈದಾನಿನಲ್ಲಿ  ನಡೆದ    ಅವರ ಸಂಬಾಷಣೆ ಈ ರೀತಿಯಾಗಿತ್ತಂತೆ.

ಚಾಂದ್ ದೇಖಾ ?
ನಹೀ ದೇಖಾ

ಅಗ ಮಿಲಿಟರಿ ಅಧಿಕಾರಿ ಬಲತ್ಕಾರವಾಗಿ ಈ ಮುಲ್ಲಾನ ಅರ್ಧ ಸುತ್ತು ತಿರುಗಿಸಿ ಕೇಳಿದರಂತೆ.

ಕಂಟೋನ್ಮೆಟ್ ದೇಖಾ ?
ಹಾಂ ದೇಖಾ

ಪುನಹ ರಭಸವಾಗಿ ಚಂದ್ರನೆಡೆಗೆ ತಿರುಗಿಸಿ ಕೇಳಿದರಂತೆ.

ಚಾಂದ್ ದೇಖಾ ?
ಹಾಂ ದೇಖಾ

ಅ ವರುಷ ಮೊದಲ ಬಾರಿಗೆ ಇಡೀ ಪಾಕಿಸ್ಥಾನದಲ್ಲಿ ಹಬ್ಬ ಒಂದೇ ದಿನ ಆಚರಿಸಲ್ಪಟ್ಟಿತು. ಆ ಅದ್ಯಕ್ಷರ   ಅಧಿಕಾರ ಮುಗಿದ ನಂತರ ನಾಯಿ ಬಾಲ ಡೊಂಕು ಎನ್ನುವಂತೆ ವಿವಿದ ಊರುಗಳ ಮುಲ್ಲಾಗಳಿಗೆ ಬೇರೆ ಬೇರೆ ದಿನ ಚಂದ್ರ ಗೋಚರಿಸಲು ಪ್ರಾರಂಬವಾಯಿತಂತೆ.  ಕ್ಷಮಿಸಿ. ಆ ಸಂಪರ್ಕ ಕೊಂಡಿ ತಕ್ಷಣ ಲಬ್ಯವಾಗುತ್ತಿಲ್ಲ.

ಅವರು ಅಮೇರಿಕದ ಸುಪ್ರೀಂ ಕೋರ್ಟನ್ನು ಸಂದರ್ಶಿಸಿದ ಅದರ ಕಾರ್ಯವೆಸಗುವುದರ ಬಗೆಗೆ ಬರೆದಿದ್ದಾರೆ. ಆ ಕೋಂಡಿ ಇಲ್ಲಿದೆ.

http://www.dawn.com/weekly/cowas/20070411.htm

3 comments:

Unknown said...

tumbaha chennagittu chand dhekha....

purna barediddare innastu khushi iruttittu

thanks bhatre

Govinda Nelyaru said...

ಪ್ರಿಯ ರಾಘವೇಂದ್ರ

ನನ್ನ ಅಂತರ್ಜಾಲ ಸಂಪರ್ಕ ಚೆನ್ನಾಗಿಲ್ಲ. ಆಗಾಗ ಕೈಕೊಟ್ಟು ನನ್ನ ತಾಳ್ಮೆ ಪರೀಕ್ಷಿಸುತ್ತದೆ. bsnl- wll connection. ಅದುದರಿಂದ ಗಡಿಬಿಡಿಯಲ್ಲಿ ಅದನ್ನು ಹುಡುಕಲಾಗಲಿಲ್ಲ. ಅವರ ಬರವಣೆಗೆ ಚೆನ್ನಾಗಿದೆ.

ಪ್ರತಿಕ್ರಿಯೆಗೆ ದನ್ಯವಾದಗಳು

Govinda Nelyaru said...

http://www.dawn.com/news/1072809

ಇದರಲ್ಲಿ ಮೇಲ್ಕಂಡ ವಿಚಾರದೊಂದಿಗೆ ಅಲಿಘರ್ ವಿಶ್ವವಿದ್ಯಾಲಯ ಜಿನ್ನಾ ಅವರಿಗೆ ಗೌರವ ಪ್ರಶಸ್ತಿ ಕೊಡಲು ಹೊರಟಾಗ ಜಿನ್ನಾ ಅವರು ನಿರಾಕರಿಸಿದ ವಿಚಾರವೂ ಉಂಟು.