Sunday, November 15, 2009

ಕುರಾಮನ ರಾಮನಗರದಲ್ಲಿ ಕೈ ಸಾಲ ವಿರುದ್ದ ಫತ್ವಾ

ಸರಕಾರ ಜನರಿಗೆ ಹೆಚ್ಚೆಚ್ಚು ಸಾಲ ಲಬ್ಯವಾಗಲು ಪ್ರಯತ್ನಿಸುತ್ತಿದೆ. ಸಾಚಾರ ಕಮಿಟಿ ಮುಸ್ಲೀಮರಿಗೆ ಸಿಗುತ್ತಿರುವ ಬಾಂಕ್ ಸಾಲದ ಪ್ರಮಾಣ  ಬಹಳ ಕಡಿಮೆ   ಎಂದು ಅಬಿಪ್ರಾಯ ಪಟ್ಟಿದೆ. ಸಾಲ ಸಿಗುವುದು ಕಷ್ಟ ಎಂದು ಹೇಳುತ್ತಿರುವ ಮುಸ್ಲಿಂ ಸಮಾಜದ ಸಂಸ್ಥೆಯೊಂದು ಬಸ್ಮಾಸುರನಾಗಲು ಹೊರಟಿದೆ. ಕುರಾಮಸ್ವಾಮಿಯ ರಾಮನಗರದಲ್ಲಿ ಅಂಜುಮಾನ್ ಮುಸ್ಲೀಮರ ಸಾಲಪಡಕೊಳ್ಳುವ ಸಾದ್ಯತೆಗೆ ಅಡ್ಡಕಾಲು ಹಾಕುತ್ತಿದೆ.

ಅಂಜುಮಾನಿಗೆ ಬಡ್ಡಿ ವ್ಯವಹಾರ ಇಸ್ಲಾಂ ತತ್ವಗಳಿಗೆ ವಿರೋಧ ಎನ್ನುವುದು ಎಚ್ಚರವಾದುದು ಇತ್ತೀಚೆಗೆ. ಎಂಟು ವರ್ಷಗಳಿಂದ ರಾಮನಗರದಲ್ಲಿ ಕಾರ್ಯಾಚಿಸುತ್ತಿಎರುವ ಬಿಎಸ್ಎಸ್ ಕಿರುಸಾಲ ಸಂಸ್ಥೆಗೆ ಈಗ ಹಣದ ಒಳಹರಿವು ನಿಂತಿದೆ. ಈ ಅಂಜುಮಾನ್ ಪದಾದಿಕಾರಿಗಳೆಲ್ಲ ಗಂಡಸರಾಗಿದ್ದು ಕಿರುಸಾಲ ಪಡಕೊಳ್ಳುವವರು ಹೆಚ್ಚಿನವರು ಹೆಂಗಸರು. ಸ್ವಾಬಾವಿಕವಾಗಿ ಹೆಂಗಸರ ಸ್ವಾವಲಂಬನೆ ಚಿಂತನೆ ಗಂಡಸರಿಗೆ ರುಚಿಸುತ್ತಿಲ್ಲ. ಅದುದರಿಂದ ಸಾಲ ಮರುಪಾವತಿ ಮಾಡಬೇಡಿ ಎಂದು ಒತ್ತಡ ಹಾಕುತ್ತಿದೆ. ಗುಂಡಾಗಿರಿಯೂ ನಡೆಯುತ್ತಿದೆ.

ಈ ಕಿರುಸಾಲದ ಕಲ್ಪನೆ ಹುಟ್ಟು ಹಾಕಿದ್ದು ಬಾಂಗ್ಲ ದೇಶದ ಮಹಮದ್ ಯುನುಸ್ ಎನ್ನುವ ಕಾಲೇಜು ಮೇಷ್ಟ್ರು. ಕಳೆದ ವರ್ಷ ಸರಕಾರದ ಸಾಲ ಮುನ್ನಾ ಸುದ್ದಿ ಕೇಳಿದ ಮಹಮದ್ ಯುನುಸ್ ಬಡವರಿಗೆ ಸಾಲ ಹಿಂತಿರುಗಿಸಲು ಹಣವಿಲ್ಲವಾದರೆ   ಸರಕಾರ  ಹಣ ಕೊಡಲಿ. ಸಾಲ ಮುನ್ನಾ ಕೆಟ್ಟ ಸಂಪ್ರದಾಯವಾಗುತ್ತದೆ ಎಂದು ಯುನುಸ್ ಹೇಳಿದ್ದರು.

ಈ ಸಾಲ ಮರುಪಾವತಿ ನಿಲ್ಲಲು ಆರ್ಥಿಕ ಹಿನ್ನೆಡೆ ಕಾರಣವಲ್ಲ. ಕ್ರೈಸ್ತ ಹಾಗೂ ಹಿಂದು ಸಮಾಜದವರು ಮರುಪಾವತಿ ಮಾಡುತ್ತಿದ್ದಾರೆ.  ಜಾತ್ಯಾತೀತ ರಾಜಕಾರಣಿಗಳೂ ಬುದ್ದಿಜೀವಿಗಳೂ ಈಗ ಸುಮ್ಮನಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಸಮಾಜದ ಬಡ ಜನರ ಹಿತರಕ್ಷಣೆ ಮಾಡುತ್ತದೆ ಎನ್ನುವ ಅಂಜುಮಾನಿನ ಬೋಗಸ್ ನಿಲುವಿನ   ವಿರುದ್ದ   ಶಾಬನ  ಅಜ್ಮಿಯಂತಹವರಾದರೂ  ಸ್ವರ ಎತ್ತಬೇಕಾಗಿತ್ತು. ಮತ ಬಾಂಕ್ ಎನಿಸಿಕೊಂಡ ಮುಸ್ಲಿಮರಿಗೆ ಬೇಸರವಾದರೆ ? ಎಂದು ಎಲ್ಲರೂ ಸುಮ್ಮನಿರುವಂತಿದೆ.

ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಈ ಬಗೆಗೆ ಕಳೆದ ವಾರ ಬರೆದಾಗ ಸಂಬಂದ ಪಟ್ಟವರು ಎಚ್ಚೆತ್ತುಕೊಂಡಾರು ಎಂದು ಬಾವಿಸಿದ್ದೆ. ಆದರೆ ಈ ಮರುಪಾವತಿ ಮಾಡದ ಸೀಕು ರಾಜ್ಯಾದ್ಯಂತ ದೇಶಾದ್ಯಂತ ಹಬ್ಬುವ ಲಕ್ಷಣವೇ ದಟ್ಟವಾಗಿದ್ದು ಕಿರುಸಾಲಕ್ಕೆ ಮುಸ್ಲಿಂ ಮಹಿಳೆಯರು ಅನರ್ಹರಾಗುವಂತೆ ಕಾಣುತ್ತದೆ.

1 comment:

Dr.K.G.Bhat,M.B:B.S said...

it is true in case of employment too.Sachar said Muslims were not proportionately represented in govt.jobs.true indeed,you know why?where are educated Muslims to take up Govt. jobs?As soon as a boy completes his education he is packed off to Gulf(even if one is uneducated for that matter)Where are qualified candidates?