Monday, January 11, 2010

ಅಮೇರಿಕ ಎಂದರೆ ಇನ್ನೊಂದು ಲೋಕ

ಅಮೇರಿಕಕ್ಕೆ ಹೋಗುವುದೆಂದರೆ ಪುನರ್ಜನ್ಮ ಹೊಂದುವುದೇ ಸರಿ. ಎಲ್ಲರೂ ಬತ್ತಲೆಯಾಗಿಯೇ ಅಮೇರಿಕ  ಪ್ರವೇಶಿಸುತ್ತಾರೆ. ಆಲ್ಲಲ್ಲ,  ಪ್ರವೇಶಿಸುವ ಮೊದಲು ಬತ್ತಲಾಗುತ್ತಾರೆ. ಅಮೇರಿಕ ಎಂದರೆ ಸ್ವರ್ಗ ಸಮಾನ ಎನ್ನುವ ಕಲ್ಪನೆ ನಮ್ಮಲ್ಲಿ ಹಲವರಿಗಿತ್ತು. ಅದು ಈಗ ನಿಜವಾಗಿದೆ.   ಆರು ವರ್ಷ ಹಿಂದೆ ನಮ್ಮ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡೀಸ್ ಅವರನ್ನು ಬತ್ತಲೆ ಮಾಡಿದ ಅಮೇರಿಕದ ರಕ್ಷಣಾಪಡೆ ಇನ್ನು ಎಲ್ಲರನ್ನೂ ಬತ್ತಲಾಗಿಸಲಿದೆ.     ದಯವಿಟ್ಟು ಯಾರೂ ಸ್ಕಾನ್ ಚಿತ್ರ ದರ್ಮಾರ್ಥವಾಗಿ ಕೇಳಬಾರದು. ಅಮೇರಿಕದಲ್ಲಿ ದುಡ್ಡೇ ದೊಡ್ಡಪ್ಪ. ದರ್ಮಾರ್ಥ ಸೇವೆ ಇಲ್ಲ.




ನನ್ನ ಒಂದು ಕಣ್ಣು ಹೋದರೇನಾಯಿತು, ಅವನ ಎರಡೂ ಕಣ್ಣು ಹೋಗಿದೆ ಎನ್ನುವಂತೆ ಇಲ್ಲೂ ನಾವು  ಬಹಳ  ಸಂಬ್ರಮ ಪಡಬಹುದಾದ  ವಿಚಾರ ಒಂದಿದೆ. ಪಾಕಿಸ್ತಾನದವರನ್ನು ಎಲ್ಲರನ್ನೂ ಪೂರ್ತಿ ಬತ್ತಲೆ ಮಾಡುತ್ತಾರಂತೆ.  ಭಾರತ ಆ ಪಟ್ಟಿಯಲ್ಲಿಲ್ಲ.




ಬರಹಗಾರ ಕಾಲ್ವಿನ್ ಟ್ರಿಲ್ಲಿನ್ ಮೂರು ವರ್ಷ ಹಿಂದೆಯೇ ಇದರ ಸಾದ್ಯತೆಯನ್ನು ಟಿವಿ ಎದುರುಗಡೆ ಹೇಳಿ ಬಿಟ್ಟಿದ್ದರು.  ಮೊನ್ನೆ ಸಿಕ್ಕಿಬಿದ್ದ  ನೈಜೀರಿಯದ   ಭಯೋತ್ಪಾದಕ ಚಡ್ಡಿಯೊಳಗೆ ಹುದುಗಿಸಿದ್ದ ಬಾಂಬು ಡಮಾರ್ ಎಂದಿದ್ದರೆ ಸ್ವರ್ಗದಲ್ಲಿ ಅಶ್ವಾಸನೆ ಪ್ರಕಾರ ಸಿಗುವ ಎಪ್ಪತ್ತೆರಡು ಸುಂದರ ಕನ್ಯೆಯರ ಜತೆ ಸಿಕ್ಕರೂ  ಏನೂ   ಪ್ರಯೋಜನವಾಗುತ್ತಿರಲಿಲ್ಲ ಎಂದು ಟ್ರಿಲ್ಲಿನ್ ಅಭಿಪ್ರಾಯ ಪಟ್ಟಿದ್ದಾರೆ.   ಅವರ  ಪತ್ರಿಕಾ  ಅಂಕಣದ ಕೊಂಡಿ ಇಲ್ಲಿದೆ.  

ಹತ್ತು ವರ್ಷ ಹಿಂದೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಯ ಮುಂದೆ ನಿಂತಿದ್ದೆ. ಅವನೊಬ್ಬ ಇಂಗ್ಲೀಷ್ ಅರಿಯದ ಮುಂಬಯಿ ಪೊಲೀಸ್ ಇಲಾಖೆಯ ಕನಿಷ್ಟ ಬಿಲ್ಲೆ. ಸಾಲಿನಲ್ಲಿ ಎಲ್ಲರನ್ನೂ ಸತಾಯಿಸುತ್ತಿದ್ದ ಕಾರಣ ಬುದ್ದಿವಂತರು ಸಾಲು ಬದಲಾಯಿಸಿದರು. ಅಲ್ಲಿ ಪಂಚೆ ಉಟ್ಟವ ನಾನೊಬ್ಬನೇ ಆದ ಕಾರಣ ಸುಲಭವಾಗಿ ಗುರುತಿಸುವಂತಿದ್ದೆ. ನನ್ನನ್ನು ಹೋಗಲು ಬಿಡುವುದಿಲ್ಲ ಎಂದ ಸರಿ. ಪರವಾಗಿಲ್ಲ ಎಂದು ನಿರ್ಲಿಪ್ತವಾಗಿ ಹೇಳಿದೆ. ಏನೂ ಪ್ರಯೋಜನವಿಲ್ಲ ಅನಿಸಿ ಪಾಸ್ ಪೊರ್ಟಿನಲ್ಲಿ ಮುದ್ರೆ ಒತ್ತಿದ. ಇಂತಹ ಜನಗಳನ್ನೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಯಮಿಸುವ ನಮ್ಮ ಸರಕಾರದ ಬಗ್ಗೆ   ಜುಗುಪ್ಸೆ  ಮೂಡುತ್ತದೆ.

No comments: