Thursday, March 05, 2009

ಎಲ್ಲರಿಗೂ ಕೃತಜ್ನತೆಗಳು

ಕೃಷಿಕ ಪರ  ಮಾಸಿಕವಾದ      ಅಡಿಕೆ ಪತ್ರಿಕೆ ೨೦೦೯ ಮಾರ್ಚ್ ತಿಂಗಳ ಸಂಚಿಕೆಯಲ್ಲಿ ಬ್ಲೋಗ್ ಬಗ್ಗೆ ಒಂದು ಮಾಹಿತಿ ಲೇಖನ ಪ್ರಕಟಿಸಿ ಬ್ಲೋಗಿಗರ ಅಬಿಪ್ರಾಯ ಕೇಳಿತು. ಈ ಐದು ಜನ ಕಹಳೆ ಊದುವವರ ಪಟ್ಟಿಯಲ್ಲಿ ನಾನು ಒಬ್ಬನಾಗಿದ್ದೆ. ಹೀಗೆ ಪ್ರಕಟಿಸಿದ್ದಕ್ಕೆ ವಂದನಾರ್ಪಣೆ ಸಮಂಜಸ ಎನಿಸಿತಾದರೂ ನಾನು ಹಿಂದೆ ಕಾರಣಾಂತರದಿಂದ ಹಲವರಿಗೆ ಕೃತಜ್ನತೆ ಸಮರ್ಪಿಸದೆ ಇದ್ದುದೂ ನೆನಪಾಯಿತು.


ಅಡಿಕೆ ಪತ್ರಿಕೆಯಿಂದ ಎರಡು ಪ್ರಶ್ನೆಗಳು ಕೇಳಲ್ಪಟ್ಟಿತ್ತು. *ಬ್ಲೋಗಿನಲ್ಲಿ ನೀವು ಕಂಡ ಅನುಕೂಲತೆ/ಪ್ರಯೋಜನಗಳು * ನಿಮ್ಮ ಅಭಿಪ್ರಾಯದಂತೆ ಕೃಷಿ /ಗ್ರಾಮೀಣ ಸಮುದಾಯಗಳಿಗೆ ಬ್ಲೋಗ್ ಗಳು ಹೇಗೆಲ್ಲ ಪ್ರಯೋಜನವಾಗಬಹುದು


ನಾನು ಬ್ಲೋಗ್ ಬರೆಯಲು ಆರಂಬಿಸಿದುದೂ ಅಕಸ್ಮಿಕ. ಆತ್ಮೀಯವಾಗಿರುತ್ತದೆಂದು ಕನ್ನಡದಲ್ಲಿ ಇ- ಪತ್ರಿಸಿದರೆ ಜತೆಯಲ್ಲಿಯೇ fonts ಕಳುಹಿಸಬೇಕಾಯಿತು.  ನಂತರ ಹೆಚ್ಚಿನವರಿಗೆ Unicode ನಲ್ಲಿಯೇ ಬರೆಯಲು ಆರಂಬಿಸಿದೆ. ಮುಂದಿನ ಹೆಜ್ಜೆಯಾಗಿ   ಬ್ಲೋಗ್ ಉಗಮವಾಯಿತು. ಇದೆಲ್ಲ  ಕಳೆದ   ಒಂದು  ವರ್ಷದ    ಬೆಳವಣಿಗೆ. 

ನನ್ನ   ಈ ತಾಣಕ್ಕೆ ನಿರ್ಣಾಯಕ ತಿರುವು ಸಿಕ್ಕಿದ್ದು ಫುಕೋಕ ಅವರು ತೀರಿಹೋದ ಸಂದರ್ಬದಲ್ಲಿ. ಫುಕೋಕರ   ಬಗೆಗಿನ ಶ್ರೀಶಂ ಬ್ಲೋಗ್ ಬರಹ ಬಗ್ಗೆ ಅವರಿಗೆ ಬರೆದ ಸಮಜಾಯಿಷಿಯನ್ನು ಸ್ವಲ್ಪ ಮಾಹಿತಿ ಸೇರಿಸಿ ಇಲ್ಲೂ ಪ್ರಕಟಿಸಿದೆ. ಅದು ಅನಿರೀಕ್ಷಿತವಾಗಿ ಹಲವರ ಗಮನ ಸೆಳೆಯಿತು. ಅವಧಿ  ನನ್ನ   ಫುಕೋಕ   ಪುಟವನ್ನು ಪ್ರಕಟಿಸಿತು. ಹಾಗೆ ಸಾಕಷ್ಟು ಪ್ರತಿಕ್ರಿಯೆ ಬರಲು ಪ್ರಾರಂಬವಾಯಿತು.  ನಾನು  ಗಂಬೀರವಾಗಿ  ಪರಿಗಣಿಸದ   ಈ ಬ್ಲೋಗ್  ಬರವಣಿಕೆ ತ್ಯಜಿಸುವ ಆಲೋಚನೆ ಮುಂದೂಡಲ್ಪಟ್ಟಿತು.

ಕನ್ನಡ ಪ್ರಭ ಹಾಗೂ ಕೆಂಡಸಂಪಿಗೆ ನನ್ನ ಬ್ಲೋಗ್ ಬಗ್ಗೆ ಬೊಟ್ಟುಮಾಡಿದವು. ಹಲವಾರು ಗೆಳೆಯರು ಪ್ರತಿಕ್ರಿಯೆ ರವಾನಿಸಿದರು. ಕೆಲವು ಬ್ಲೋಗಿಗರು ತಮ್ಮ ಪುಟದಲ್ಲಿ ನನ್ನ ಸಂಪರ್ಕ ಕೊಂಡಿಯ ಕಾಣಿಸಿದರು.  ಹೀಗೆ  ಓದುಗರ ಸಂಖ್ಯೆ  ಏರಿತು. 

thanks ಎನ್ನಲು ಮನಸಿರಲಿಲ್ಲವೆಂದಲ್ಲ. ನಿಧಾನವೇ ಪ್ರಧಾನ ಎನ್ನುವ ತಂತಿರಹಿತ ದೂರವಾಣಿ ಸಂಪರ್ಕ, ಆಗಾಗ ಮುಷ್ಕರ ಹೂಡುವ ಮುದಿಯಾದ ಕಂಪ್ಯುಟರ್ ಹಾಗೂ ಏರುಪೇರಾಗುತ್ತಲೇ ಇರುವ ಆರೋಗ್ಯ ಎಲ್ಲವೂ ಸವಾಲಾಗಿ ಅಡ್ಡಬರುತಿತ್ತು.

ಏಳನೇಯ ತರಗತಿಯ ನಂತರ ಕನ್ನಡವನ್ನು    ಕಲಿಯದ ನನಗೆ ಬಾಷೆಯ ಬಗೆಗೆ ಅಳುಕು. ಸಾದ್ಯವಾದಷ್ಟು ಮಾಹಿತಿ ನಿಖರ ಬಾಷೆ ಸ್ವಚ್ಚವಾಗಿರಬೇಕೆಂಬ ಸ್ವ-ನಿರ್ಬಂದವೂ ನಿದಾನಿಸಲು ಕಾರಣ.  ಹೀಗೆ   ಬರಹ ಅಂತಿಮಗೊಳ್ಳುವುದೇ ಇಲ್ಲ. ಹಳತಾದ ಕಾರಣ ಬರಹಗಳ ಬಿಸಾಕುವುದೂ ಉಂಟು.

ನನಗೆ ಪತ್ರಿಸಿದವರು, ಪ್ರತಿಕ್ರಿಯೆ ಇಲ್ಲಿಯೇ ವ್ಯಕ್ತ ಪಡಿಸಿದವರು ಪುಟ ತಿರುವಿ ಕ್ರಮಾಂಕ ಮುಂದಕ್ಕೆ ತಳ್ಳಿದವರು ಎಲ್ಲರಿಗೂ ನಾನು ಅಭಾರಿ.

No comments: