Friday, October 09, 2009

ಬಾರತದಲ್ಲೊಂದು ಹಸಿರು ಪಕ್ಷ




ಬಾರತದ ಪ್ರಮುಖ ಪರಿಸರವಾದಿಯೊಬ್ಬರು ಹಸಿರು ಪಕ್ಷ ಸ್ಥಾಪನೆಯ ಪ್ರಯತ್ನದಲ್ಲಿದ್ದಾರೆ. ಕಲಕತ್ತಾ ರಸ್ತೆಗಳಿಂದ ಲಕ್ಷಾಂತರ ಹಳೆಯ ಗುಜರಿ ವಾಹನಗಳ ಹೊರ ಹಾಕಲು ಸಫಲರಾದ ಸುಬಾಷ ದತ್ತ ದೇಶದ ಪರಿಸರ ಹೋರಾಟಕ್ಕೆ ನ್ಯಾಯ ದೊರಕಿಸಲು ರಾಜಕೀಯ ಪಕ್ಷ ಪ್ರಾರಂಬಿಸಲು ಹೊರಟಿದ್ದಾರೆ.

ಕಲಕತ್ತ ನಗರದಲ್ಲಿ ಹಳೆಯ ವಾಹನ ನಿಷೇದಕ್ಕೊಸ್ಕರ ಉಚ್ಚ ನ್ಯಾಯಲಯದ ವರೆಗೂ ಹೋಗಿದ್ದಾರೆ. ಪರಿಣಾಮ ಹದಿನೈದು ವರುಷಗಿಂತ ಹಳೆಯವಾಹನಕ್ಕೆ ನಿರ್ಬಂದ ವಿದಿಸಲಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟು ಕೊನೆಗೂ ಈ ವರ್ಷದ  ಆಗಸ್ತ್ ಒಂದರಿಂದ ಕಾರ್ಯಗತವಾದ ನಂತರ ಅಲ್ಲಿನ ವಾಯು ಮಲೀನತೆ ಗಣನೀಯವಾಗಿ ಕುಗ್ಗಿದೆಯಂತೆ.

ವೃತ್ತಿಯಲ್ಲಿ ಇವರೊಬ್ಬ ಲೆಕ್ಕ ಪರಿಶೋಧಕರು. ಕಳೆದ ಮೂವತ್ತು ವರ್ಷಗಳಿಂದ ಬಾರತದಲ್ಲಿ ಪರಿಸರ ಮತ್ತು ಪರಂಪರೆ ತಾಣ ಉಳಿಸಿಕೊಳ್ಳಲು ಅತ್ಯಂತ ಹೆಚ್ಚು ಸಲ ನ್ಯಾಯಾಲಯ ಮೊರೆ ಹೊಕ್ಕವರು.

೧೯೭೮ರಲ್ಲಿ ಒಂದು ಮರ ಕಡಿಯುವುದರ ಉಳಿಸಲು ಪ್ರತಿಭಟನೆ ಕೈಗೊಂಡ ದತ್ತರು ತನ್ಮೂಲಕ ಪರಿಸರ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು. ಪ್ರಥಮ ಚುಂಬನದಲ್ಲಿ .. ಅನ್ನುವಂತೆ ಅಂದು ಆ ಮರಕ್ಕಾಗಿ ಜೈಲು ವಾಸವೂ ಅನುಭವವಾಯಿತು. ಅನಂತರ ಎಪ್ಪತ್ತಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಕೇಸುಗಳ ದಾಖಲಿಸಿದ್ದಾರೆ ಮತ್ತು ಅವುಗಳಲ್ಲಿ ಶೇಕಡ ಎಪ್ಪತ್ತರಲ್ಲಿ ಗೆದ್ದಿದ್ದಾರೆ. ವಾಯುನೆಲೆ ಸುತ್ತಲು ವಾಸಿಸುವವರು ಕಿವುಡರಾಗುವುದರಿಂದ ಹಿಡಿದು ಗಂಗಾ ನದಿಗೆ ಹೊಲಸು ಬಿಸಾಕುವ ವಿಚಾರದ ವರೆಗೆ ವಿಬಿನ್ನ ವಿಚಾರಗಳ ಬಗ್ಗೆ ಹೋರಾಟ ನಡೆಸಿದ್ದಾರೆ. ಇವರ ಪ್ರಯತ್ನದಿಂದಾಗಿ ೧೯೯೬ರಲ್ಲಿ   ದೇಶಕ್ಕೆ ಪ್ರಥಮವಾಗಿ ಕಲಕತ್ತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯ ಮಟ್ಟದ ಪರಿಸರ ಬೆಂಚ್ ಪ್ರಾರಂಬಿಸಲ್ಪಟ್ಟಿತು

ಹಸಿರು ಪಕ್ಷದ ಅನಿವಾರ್ಯತೆಯನ್ನು ಬೊಟ್ಟುಮಾಡುವ ದತ್ತರು ಪರಿಸರ ಉಳಿಸುವ ಮಟ್ಟಿಗೆ ರಾಜಕೀಯ ಪಕ್ಷಗಳೆಲ್ಲ ಪಕ್ಕ ಕಳ್ಳರು ಎನ್ನುತ್ತಾರೆ. ಕಡಲತಡಿಯಲ್ಲಿ ರಸಾಯನಿಕ ಕಾರ್ಖಾನೆ ವಿರೋದಿಸುವ ದೀದಿಯವರ ತ್ರಿನಮೂಲ್ ಪಕ್ಷ ಹಳೆಯ ಗುಜರಿ ವಾಹನಗಳ ಬೆಂಬಲಿಸುತ್ತದೆ.

ಅಲ್ಲಿನ ಹಸುರು ಪಕ್ಷದೊಂದಿಗೆ ಸಂವಾದಕ್ಕೆ ಸಮಾನಾಸಕ್ತರೊಂದಿಗೆ ಇತ್ತೀಚೆಗೆ ಇಂಗ್ಲೇಂಡ್, ಜರ್ಮನಿಯ ಪ್ರವಾಸ ಕೈಗೊಂಡ ಶ್ರೀ ದತ್ತರು ಪರಿಸರ ಹೋರಾಟ ಇಂದು ಸ್ಥಳೀಯ ವಿಚಾರವಾಗಿಯೇ ಉಳಿದಿದ್ದು ಸಮುಗ್ರ ಹೋರಾಟಕ್ಕೆ ರಾಷ್ಟ್ರೀಯ ಪಕ್ಷದ ಅಗತ್ಯ ಒತ್ತಿ ಹೇಳುತ್ತಾರೆ. ನಮಗೆ ಅಲ್ಲವಾದರೂ ಕಲಕತ್ತದ ಮತದಾರರಿಗೆ ಮುಂದಿನ ಚುನಾವಣೆಯಲ್ಲಿ ಇವರನ್ನು ಬೆಂಬಲಿಸುವ ಅವಕಾಶ ದೊರಕುವುದು ಖಚಿತ ಎನಿಸುತ್ತದೆ.

No comments: